Wednesday, June 4, 2014

ಏಳು ಹನಿಗವಿತೆಗಳು

ಪ್ರೀತಿ

ಬತ್ತಲಾರದ ಚಿಲುಮೆ
ಧಾವಂತದೊಲುಮೆ |
ಮರೆಯದ ಮಧುರಾನುಭೂತಿ
ಪರಸ್ಪರರ ಅರಿವೆ ||

ಭಗ್ನ

ಕೆಲವರು ಎಷ್ಟು
ಪ್ರಯತ್ನಿಸಿದರೂ
ಬಯಸಿದುದು
ಸಿಗಲಾರದು |
ರಾಧೆ, ಭಾಮೆಗಿಂತ
ಹೆಚ್ಚಾಗಿ
ಕೃಷ್ಣನನ್ನು
ಪ್ರೀತಿಸಿದ್ದಳು ||

ಆವರಣ

ನನ್ನೆದೆಯೊಳಗೆ ಒಂದೇ ತಾಳ, ಬಡಿತ |
ಅದೇ ಆವೇಗ, ಅದೇ ನಿನಾದ ||
ಯಾಕಂದ್ರೆ ಅಲ್ಲಿದ್ದುದು
ನೀ ಕುಣಿದು ಬಿಟ್ಟುಹೋದ
ನಿನ್ನ ಕಾಲುಗೆಜ್ಜೆ ||

ಸೂರ್ಯನ ಪ್ರೀತಿ

ಆ ಒಬ್ಬಂಟಿ ಸೂರ್ಯನಿಗೆ
ಪ್ರೀತಿ ಎಂದರೇನು ಗೊತ್ತು?
ಸುಕೋಮಲೆ ಭೂಮಿಯ
ಸುಡತೊಡಗಿದ, ಆಕೆ ಎದ್ದು
ದೂರ ಓಡಿಬಂದಳು |
ಈಗ ಪರಿತಾಪಿ ಸೂರ್ಯ
ಅವಳನ್ನೇ ಸುತ್ತುತ್ತಾ
ಪ್ರೇಮ ಯಾಚಿಸುತ್ತಿದ್ದಾನೆ ||

ಸೋಲು-ಗೆಲುವು

ಒಬ್ಬ ವ್ಯಕ್ತಿ ಗೆದ್ದರೆ
ಅವನ ಕಡೆಗೆ ಎಲ್ಲರೂ |
ಸುತ್ತ ಮುತ್ತ ಹಾರ-ಜೈಕಾರ
ಕೂಗುತ್ತಾರೆ ಜನರು |
ಆದರೆ ಸೋತವನೆಡೆಗೆ ಮಾತ್ರ
ತಿರುಗಿ ನೋಡುವುದಿಲ್ಲ ಯಾರೂ ||

ಪದ

ಕವಿತೆಯ ಬಲಭುಜ
ಸುಮಧುರ ಹಾಡು |
ಹಾಡಿದರೆ ಕವಿತೆ
ಆಗುವುದು ಜನಪದ,
ಇಲ್ಲವಾದಲ್ಲಿ ಅದು ಬರಿ
ಪುಸ್ತಕದೊಳಗಿನ ಪದ ||

ಅರ್ಜುನ

ತನ್ನ ಕಾರ್ಯಸಾಧನೆಗಾಗಿ
ಸ್ತ್ರೀವೇಷವನ್ನೂ ಕೂಡ
ಹಾಕಿದರೂ, ಎಲ್ಲರಿಗೆ ಮೋಸ
ಮಾಡಿದರೂ, ಭಬ್ರುವಾಹನನನ್ನು
ಜಾರಿಣಿಯ ಮಗನೆಂದು ಜರಿದಾತ ||

No comments:

Post a Comment