Saturday, June 23, 2018

ಚೀನಾದ ಡ್ರಾಗನ್ ಗೆ ಕೊಡಬೇಕು ಭಾರತದ ಪಾಂಜಾ ಏಟು

ಪ್ರಸ್ತುತ ಜಗತ್ತಿನಲ್ಲಿ ಭಾರತಕ್ಕೆ ಚೀನಾ ಎಲ್ಲ ರಂಗಗಳಲ್ಲಿಯೂ ಎದುರಾಳಿ. ವ್ಯಾಪಾರ, ವೃತ್ತಿ, ಕೌಶಲ್ಯ, ರಾಜತಾಂತ್ರಿಕ, ಸೈನಿಕ ಹೀಗೆ ಎಲ್ಲ ರಂಗಗಳಲ್ಲಿಯೂ ಭಾರತಕ್ಕೆ ಅಡ್ಡಗಾಲು ಹಾಕುತ್ತಿರುವ ರಾಷ್ಟ್ರ ಚೀನಾ. ಭಾರತ ಯಾವುದೇ ಕಾರ್ಯಗಳನ್ನು ಕೈಗೊಳ್ಳಲಿ, ಅದಕ್ಕೆ ಚೀನಾದ ಅಡ್ಡಗಾಲು ಇದ್ದದ್ದೇ. ಇಂತಹ ಚೀನಾಕ್ಕೆ ಅದರದೇ ಹಾದಿಯಲ್ಲಿ ಉತ್ತರ ನೀಡುವ ಅಗತ್ಯವಿದೆ. ಚೀನಾ ಅನುಸರಿಸುತ್ತಿರುವ ನೀತಿಗಳನ್ನೇ ಅದರ ವಿರುದ್ಧವೇ ಬಳಕೆ ಮಾಡುವ ಮೂಲಕ ಚೀನಾದ ಮಗ್ಗಲು ಮುರಿಯಬೇಕಿದೆ. ಡ್ರ್ಯಾಗನ್ಗೆ ಭಾರತದ ಚಾಣಕ್ಯ ವಿದೇಶಾಂಗ ನೀತಿಯ ಪರಿಚಯ ಮಾಡಿಕೊಡಬೇಕಿದೆ. ಇಲ್ಲವಾದಲ್ಲಿ ಚೀನಾ ಇಂಚಿಂಚಾಗಿ ಭಾರತವನ್ನು ನುಂಗುವುದರಲ್ಲಿ ಸಂಶಯವಿಲ್ಲ.
ಭಾರತ ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವಕ್ಕೆ ಪ್ರಯತ್ನಿಸುತ್ತಿದೆ. ಇದಕ್ಕೆ ಕುತಂತ್ರಿ ಚೀನಾ ಅಡ್ಡಗಾಲು ಹಾಕುತ್ತಿರುವುದು ಗುಟ್ಟಾಗೇನೂ ಇಲ್ಲ. ಅಷ್ಟಲ್ಲದೇ ಎನ್ಎಸ್ಜಿಗೂ ಕೂಡ ಚೀನಾದ ವಿರೋಧ ಇದ್ದೇ ಇದೆ. ಭಾರತದ ಪ್ರಭಾವವನ್ನು ಜಾಗತಿಕವಾಗಿ ತಗ್ಗಿಸಬೇಕೆಂಬ ಕಾರಣಕ್ಕಾಗಿ ಚೀನಾ ಕೈಗೊಳ್ಳುತ್ತಿರುವ ಕಾರ್ಯಗಳಲ್ಲಿ ಇದೂ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ. ಇಷ್ಟೇ ಅಲ್ಲ, ಭಾರತದ ವಿರುದ್ಧ ಸದಾ ಭಯೋತ್ಪಾದನೆಯ ಮೂಲಕ ಕಿತ್ತಾಡುತ್ತಿರುವ ಪಾಕಿಸ್ತಾನದ ಬೆನ್ನಿಗೆ ನಿಂತಿರುವುದೂ ಚೀನಾವೇ. ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರರ ಯಾದಿಯಲ್ಲಿ ಹಫೀಜ್ ಸಯಿದ್ ಹೆಸರು ಸೇರಿಸಬೇಕೆಂಬ ನಿಟ್ಟಿನಲ್ಲಿ ಭಾರತ ವಿಶ್ವಸಂಸ್ಥೆಯಲ್ಲಿ ಪ್ರಯತ್ನ ಕೈಗೊಂಡಾಗ ಅದಕ್ಕೆ ಅಡ್ಡಗಾಲಾಗಿದ್ದು ಇದೇ ಚೀನಾ.
ಅರುಣಾಚಲ ಪ್ರದೇಶ ತನ್ನದು ಎಂದು ಆಗಾಗ ಗುಟುರು ಹಾಕುವ, ಅಕ್ಸಾಯ್ ಚೀನ್ ನ್ನು ವಶಪಡಿಸಿಕೊಂಡು, ಅಕ್ರಮವಾಗಿ ತನ್ನಲ್ಲಿ ಇಟ್ಟುಕೊಂಡಿರುವ, ಡೋಕ್ಲಾಂ ವಿವಾದವನ್ನು ಸದಾ ಜೀವಂತ ಇಟ್ಟು, ಭಾರತವನ್ನು ಬೆದರಿಸಲು ನೋಡುತ್ತಿರುವ ರಾಷ್ಟ್ರವೂ ಚೀನಾವೇ. ಇಂತಹ ಚೀನಾಕ್ಕೆ ಅದರದ್ದೇ ಆದ ರೀತಿಯಲ್ಲಿ ಉತ್ತರ ನೀಡುವುದು ಅಗತ್ಯ ಕ್ರಮಗಳಲ್ಲಿ ಒಂದೆನ್ನಿಸಿದೆ. ಚೀನಾ ಏನೇನು ಮಾರ್ಗ ಅನುಸರಿಸುತ್ತಿದೆಯೋ, ಆ ಮಾರ್ಗಗಳ ಮೂಲಕವೇ ಚೀನಾಕ್ಕೆ ಪಾಠ ಕಲಿಸಬಹುದು, ಮಣ್ಣು ಮುಕ್ಕಿಸಬಹುದು.
ಯಾವುದೋ ಶತಮಾನದಲ್ಲಿ ಚೀನಾವನ್ನು ಆಳಿದ ರಾಜ ಯಾವ್ಯಾವ ಪ್ರದೇಶವನ್ನು ಗೆದ್ದು, ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡಿದ್ದನೋ, ಆ ಪ್ರದೇಶಗಳನ್ನೆಲ್ಲ ಇಂದಿಗೂ ತನ್ನದು ಎಂದು ವಾದ ಮಾಡುತ್ತಿರುವ ಚೀನಾ ಅದೇ ಕಾರಣಕ್ಕೆ ಇಂದಿಗೂ ಭಾರತದ ಅರುಣಾಚಲ ಪ್ರದೇಶ ತನ್ನದು ಎಂದು ವಾದ ಮಾಡುತ್ತಿದೆ. ಒಂದಾನೊಂದು ಕಾಲದಲ್ಲಿ ಸಿಕ್ಕೀಂ ಕುರಿತೂ ಹೀಗೆಯೇ ವಾದ ಮಾಡಿತ್ತು ಚೀನಾ. ಅಷ್ಟೇ ಅಲ್ಲದೇ ಅಕ್ಸಾಯ್ ಚೀನ್ನ್ನು ತನ್ನ ವಶದಲ್ಲಿ ಇಟ್ಟುಕೊಂಡಿರಲು ಪ್ರಮುಖ ಕಾರಣವೂ ಇದೆ. ಅಷ್ಟೇ ಏಕೆ ಬ್ರಿಟೀಷರು ಭಾರತವನ್ನು ಬಿಟ್ಟು ಹೋಗುವಾಗ ಭಾರತ-ಚೀನಾ ನಡುವಿನ ಮ್ಯಾಕ್ಮೋಹನ್ ರೇಖೆಯನ್ನು ಒಪ್ಪದೇ ಇರಲೂ ಇದೇ ಕಾರಣ. ಇಷ್ಟೇ ಅಲ್ಲ, ದಲಾಯಿ ಲಾಮಾರ ಟಿಬೆಟನ್ನು ಆಪೋಶನ ತೆಗೆದುಕೊಂಡಿರುವುದಕ್ಕೂ ಇದೇ ಕಾರಣ. ಭೂತಾನ್ನ ಕೆಲ ಪ್ರದೇಶ, ಮ್ಯಾನ್ಮಾರ್, ಲಾವೋಸ್, ವಿಯೆಟ್ನಾಂಗಳ ಜತೆಗೂ ಇದೇ ಕಾರಣಕ್ಕಾಗಿ ವಿವಾದವನ್ನು ಮಾಡಿಕೊಂಡು, ಜಗಳವಾಡುತ್ತಿರುವ ಧೂರ್ತ ರಾಷ್ಟ್ರವೂ ಚೀನಾವೇ. ಇಂತಹ ಚೀನಾಕ್ಕೆ ಚೀನಾದ ಮಾರ್ಗದಲ್ಲಿಯೇ ಉತ್ತರ ನೀಡಿದಾಗ ಮಾತ್ರ ಆ ದೇಶವನ್ನು ಮಟ್ಟ ಹಾಕಲು ಸಾಧ್ಯ.
ಚೀನಾದ ಕ್ವಾಂಗ್ಜು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಸ್ಲೀಮರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಮುಸ್ಲೀಮರು ಚೀನಾದಲ್ಲಿ ತಮ್ಮದೇ ಆದ ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದಾರೆ. ಮುಸ್ಲೀಮರಿಗೆ ಪ್ರತ್ಯೇಕ ಸ್ಮಶಾನಕ್ಕೆ ಅವಕಾಶ ಪಡೆಯುವುದು, ಹಲಾಲ್ ಆಹಾರ ಪದ್ಧತಿಯನ್ನು ಅನುಸರಿಸುವುದೂ ಸೇರಿದಂತೆ ಸಾಕಷ್ಟು ಬೇಡಿಕೆಗಳನ್ನು ಚೀನಾಅ ಸಕರ್ಾರದ ಮುಂದೆ ಮುಸ್ಲೀಮರು ಇಡುತ್ತಲೇ ಬಂದಿದ್ದಾರೆ. ಆದರೆ ಚೀನಾ ಇವುಗಳನ್ನೆಲ್ಲ ಮಿಲಿಟರಿ ಬಲದ ಮೂಲಕ ದಮನ ಮಾಡುತ್ತಿದೆ. ಚೀನಾಅದ ವಿರುದ್ಧ ಆಗಾಗ ಮುಸ್ಲೀಮರು ಸೊಲ್ಲೆತ್ತುತ್ತಿದ್ದರೂ ಅವನ್ನೆಲ್ಲ ನಿದರ್ಾಕ್ಷಿಣ್ಯವಾಗಿ ದಮನ ಮಾಡುವ ಕಾರ್ಯದಲ್ಲಿ ಅಲ್ಲಿನ ಸಕರ್ಾರ ನಿರತವಾಗಿದೆ. ಭಾರತದ ವಿಷಯಕ್ಕೆ ಬಂದರೆ ಹೇಗೆ ಪಾಕಿಸ್ತಾನದ ಬೆನ್ನಿಗೆ ನಿಂತು ಭಾರತದ ವಿರುದ್ಧ ಪಾಕ್ನ್ನು ಚೀನಾ ಎತ್ತಿಕಟ್ಟುತ್ತಿದೆಯೋ, ಅದೇ ರೀತಿ, ಕ್ವಾಂಗ್ಜು ಮುಸ್ಲೀಮರ ಬೆನ್ನಿಗೆ ಭಾರತ ನಿಲ್ಲುವ ಅಗತ್ಯವಿದೆ. ಶತ್ರುವಿನ ಶತ್ರು ಮಿತ್ರನಾಗುತ್ತಾನೆ ಎನ್ನುವ ಪಂಚತಂತ್ರದ ಉಕ್ತಿಯಂತೆ ಕ್ವಾಂಗ್ಜು ಮುಸ್ಲೀಮರ ಬೆನ್ನಿಗೆ ನಿಂತು, ಚೀನಾಕ್ಕೆ ಪಾಠ ಕಲಿಸಬಹುದಾಗಿದೆ.
ಭಾರತದ ತೆಕ್ಕೆಯಲ್ಲಿಯೇ ಇದ್ದಂತಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್ ಭಾರತದ ಜತೆಗೆ ಇದುವರೆಗೂ ವ್ಯಾಪಾರ-ವ್ಯವಹಾರ, ಸೈನಿಕ ನೆರವು ಹೊಂದಿತ್ತು. ಆದರೆ ಅಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಚೀನಾ ಹಸ್ತ ಕ್ಷೇಪ ಮಾಡಿ, ಮಾಲ್ಡೀವ್ಸ್ ಭಾರತದ ವಿರುದ್ಧ ತಿರುಗಿ ಬೀಳುವಂತೆ ಮಾಡಿತು. ಚೀನಾದೊಂದಿಗೆ ಸದಾ ಕಾಲ ಮುನಿಸನ್ನು ಹೊಂದಿರುವ ರಾಷ್ಟ್ರ ತೈವಾನ್. ಈ ತೈವಾನ್ ದ್ವೀಪ ತನ್ನದು ಎಂದು ಚೀನಾ ವಾದಿಸುತ್ತಲೇ ಬಂದಿದೆ. ಆದರೆ ತೈವಾನಿಗರು ಇದನ್ನು ಒಪ್ಪದೇ, ತಮ್ಮದು ಸ್ವತಂತ್ರ ದೇಶ ಎನ್ನುತ್ತಿದ್ದಾರೆ. ಇದೀಗ ಚೀನಾ ತೈವಾನ್ ವಿರುದ್ಧ ಬಲ ಪ್ರದರ್ಶನ ಮಾಡುತ್ತಿದೆ. ಭಾರತ ತೈವಾನ್ ಪರ ನಿಲ್ಲುವ ಅಗತ್ಯವಿದೆ. ಭಾರತದ ವಿರುದ್ಧ ಮಾಲ್ಡೀವ್ಸ್ನ್ನು ಚೀನಾ ಹೇಗೆ ಎತ್ತಿಕಟ್ಟಿ, ತನ್ನ ಬೆಂಬಲ ನೀಡಿತೋ, ಅದೇ ರೀತಿ ಭಾರತ ತೈವಾನ್ಗೆ ಸಂಪೂರ್ಣ ಬೆಂಬಲವನ್ನು ನೀಡುವ ಅಗತ್ಯವೂ ಇದೆ. ತೈವಾನ್ ನೊಂದಿಗೆ ವ್ಯಾಪಾರ ವ್ಯವಹಾರವನ್ನು ಭಾರತ ವೃದ್ಧಿಸಿ, ತೈವಾನ್ಗೆ ಅಗತ್ಯವಿರುವ ಎಲ್ಲ ರೀತಿಯ ಬೆಂಬಲ ಹಾಗೂ ಬಲವನ್ನು ಒದಗಿಸಿದಾಗ ಚೀನಾ ಹೈರಾಣಾಗುತ್ತದೆ.
ಭಾರತದ ಅರುಣಾಚಲ ಪ್ರದೇಶ ತನ್ನದು ಎಂದು ಚೀನಾ ವಾದಿಸುತ್ತಿದೆ. ಹಿಮದೆ ಚೀನಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ತನ್ನ ಪ್ರವಾಸಿಗರಿಗೆ ಸ್ಟ್ಯಾಪಲ್ಡ್ ವಿಸಾವನ್ನು ನೀಡುವ ಮೂಲಕ ಅಹಂಕಾರವನ್ನು ಮೆರೆದಿತ್ತು. ಭಾರತವೂ ಚೀನಾದ ವಿರುದ್ಧ ಇಂತದ್ದೇ ಕ್ರಮವನ್ನು ಕೈಗೊಳ್ಳಬಹುದು. ಭಾರತದ ಪುರಾಣಗಳಲ್ಲಿ ಟಿಬೆಟ್ಗೆ ವಿಶೇಷವಾದ ಸ್ಥಾನವಿದೆ. ತ್ರಿವಿಷ್ಠಪ ಎಂದು ಕರೆಯಲ್ಪಡುತ್ತಿದ್ದ ಟಿಬೆಟ್ ಭಾರತೀಯರ ಪಾಲಿಗೆ ಕೈಲಾಸ ಎಂದೇ ನಂಬಿಕೆ. ಅಷ್ಟೇ ಅಲ್ಲದೇ ಪವಿತ್ರ ಸ್ಥಳಗಳಾದ ಕೈಲಾಸ ಪರ್ವತ ಹಾಗೂ ಮಾನಸ ಸರೋವರಗಳು ಟಿಬೆಟ್ನಲ್ಲಿಯೇ ಇದೆ. ಇಂತಹ ಟಿಬೆಟ್ನ್ನು 1950ರ ದಶಕದಲ್ಲಿ ಚೀನಾ ಅತಿಕ್ರಮಿಸಿಕೊಂಡಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಭಾರತದ ಪುರಾಣಗಳಲ್ಲೂ ಉಲ್ಲೇಖವಾಗಿರುವ ಟಿಬೆಟ್ ಒಂದಾನೊಂದು ಕಾಲದಲ್ಲಿ ಭಾರತದ್ದೇ ಆಗಿತ್ತು. ಚೀನಾ ಹೇಗೆ ತನ್ನ ಸಾಮ್ರಾಜ್ಯದಲ್ಲಿದ್ದ ಪ್ರದೇಶಗಳು ತನ್ನದು ಎಂದು ವಾದಿಸುತ್ತದೋ ಭಾರತ ಕೂಡ ಟಿಬೆಟನ್ನು ತನ್ನದು ಎಂದು ವಾದಿಸಬಹುದು. ಪುರಾಣಗಳು, ವೇದಗಳ ಸಾಕ್ಷ್ಯಗಳನ್ನು ಚೀನಾದ ಮುಂದೆ ಇಡಬಹುದು. ಅಷ್ಟೇ ಅಲ್ಲದೇ ಟಿಬೆಟಿಯನ್ನರಿಗೆ ಆಶ್ರಯ ನೀಡಿದಂತೆಎ ಟಿವೆಟಿಯನ್ನರಿಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೆಂಬಲವನ್ನೂ ನೀಡಬಹುದು. ಟಿಬೆಟ್ಗೆ, ಟಿಬೆಟಿನಲ್ಲಿರುವ ಮಾನಸ ಸರೋವರ ಹಾಗೂ ಕೈಲಾಸ ಪರ್ವತಕ್ಕೆ ತೆರಳುವವರಿಗೆ ಭಾರತ ಕೂಡ ಸ್ಟ್ಯಾಪಲ್ಡ್ ವೀಸಾವನ್ನು ನೀಡಿದಾಗ ಚೀನಾಕ್ಕೆ ಅದರದ್ದೇ ಆದ ರೀತಿಯಲ್ಲಿ ಉತ್ತರವನ್ನು ನೀಡಿದ ಹಾಗೆ ಆಗುತ್ತದೆ. ಆಗ ಚೀನಾ ಬಗ್ಗಿ ಬರುತ್ತದೆ.
ಡೋಕ್ಲಾಂನಲ್ಲಿ ಚೀನಾ ಕ್ಯಾತೆ ತೆಗೆದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಡೋಕ್ಲಾಂ ವಿಷಯದಲ್ಲಿ ಭಾರತ ಬಹಳ ದಿಟ್ಟ ನಡೆಯನ್ನೇ ಇಟ್ಟಿದೆ. ಡೋಕ್ಲಾಂ ಅಲ್ಲದೇ ಚೀನಾ ಭೂತಾನ್ ಜತೆ, ಮ್ಯಾನ್ಮಾರ್ ಜತೆ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಉತ್ತರ ಕೋರಿಯಾ, ರಷ್ಯಾ ಸರಿ ಹಲವು ರಾಷ್ಟ್ರಗಳ ಜತೆ ಗಡಿ ಹಂಚಿಕೊಂಡಿದೆ. ಈ ಎಲ್ಲ ರಾಷ್ಟ್ರಗಳ ಜತೆಯೂ ಒಂದಲ್ಲ ಒಂದು ಪ್ರದೇಶಗಳಿಗೆ ಸಂಬಂಧಿಸಿದಂತೆ ಚೀನಾ ವಿವಾದವನ್ನು ಸದಾ ಹಸಿಯಾಗಿ ಇಟ್ಟುಕೊಂಡಿದೆ. ಈ ಎಲ್ಲ ರಾಷ್ಟ್ರಗಳೂ ಒಗ್ಗಟ್ಟಾಗಿ ಚೀನಾ ವಿರುದ್ಧ ನಿಂತಾಗ ಚೀನಾವನ್ನು ತಣ್ಣಗೆ ಮಾಡಲು ಸಾಧ್ಯ. ಎಲ್ಲ ರಾಷ್ಟ್ರಗಳ ಒಕ್ಕೂಟವನ್ನು ಮಾಡಿ, ಚೀನಾವನ್ನು ಹಣಿಯಬಹುದು. ಯಾವುದೇ ಒಂದು ರಾಷ್ಟ್ರದ ಗಡಿಯ ಕುರಿತು ಚೀನಾ ಕಾಲು ಕೆರೆದು ನಿಂತಾಗಲೂ ಉಳಿದ ಎಲ್ಲ ಗಡಿ ರಾಷ್ಟ್ರಗಳೂ ಒಗ್ಗಟ್ಟಾಗಿ ಚೀನಾ ವಿರುದ್ಧ ನಿಂತು, ಅದನ್ನು ಬಗ್ಗುಬಡಿಯಬಹುದು.
ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಫೈನ್ಸ್ ಸಮುದ್ರ ವಲಯದಲ್ಲಿ ಚಿನಾ ಕೃತಕ ದ್ವೀಪವನ್ನು ನಿಮರ್ಿಸಿ, ಅಲ್ಲಿ ತನ್ನ ಮಿಲಿಟರಿ ಬಲವನ್ನು ನೆಲೆಗೊಳಿಸುವ ಚಿಂತನೆ ನಡೆಸುತ್ತಿದೆ. ಈ ಕೃತಕ ದ್ವೀಪದ ಕರಿತು ಈಗಾಗಲೇ ಫಿಲಿಫೈನ್ಸ್, ಜಪಾನ್ ಹಾಗೂ ಅಮೆರಿಕಗಳು ವಿರೋಧವನ್ನು ವ್ಯಕ್ತಪಡಿಸಿವೆ. ಅಲ್ಲದೇ ಆಗಾಗ ಈ ವಲಯದಲ್ಲಿ ಏರ್ಕ್ರಾಫ್ಟ್ ಕ್ಯಾರಿಯರ್ ನೌಕೆಗಳನ್ನು ಕಳುಹಿಸುವ ಮೂಲಕ ವಾತಾವರಣದಲ್ಲೂ ಬಿಸಿಯೇರಿಸಿವೆ. ಈ ಕೃತಕ ದ್ವೀಪಕ್ಕೆ ಸಂಬಂಧಿಸಿದಂತೆ ಭಾರತ ಫಿಲಿಫೈನ್ಸ್ನಂತಹ ರಾಷ್ಟ್ರಗಳ ಬೆನ್ನಿಗೆ ನಿಲ್ಲುವ ಅಗತ್ಯವಿದೆ. ಏಷ್ಯಾದಲ್ಲಿ ಚೀನಾಕ್ಕೆ ಸರಿಸಮಾನವಾಗಿ ನಿಲ್ಲುವ ಸಾಮಥ್ರ್ಯ ಹೊಮದಿರುವ ರಾಷ್ಟ್ರ ಭಾರತ ಫಿಲಿಫೈನ್ಸ್ ಬೆನ್ನಿಗೆ ನಿಂತರೆ ಸಹಜವಾಗಿಯೇ ಚೀನಾದ ಅಹಂಕಾಆರ ತಗ್ಗುತ್ತದೆ. ಮೊದಲಿನಷ್ಟು ಆಕ್ರಮಣಕಾರಿಯಾಗಿ ಮುಂದುವರಿಯುವುದನ್ನು ಕಡಿಮೆ ಮಾಡುತ್ತದೆ.
1890ರ ವೇಳೆಗೆ ಇಂಗ್ಲೆಂಡಿಗೂ-ಚೀನಾ ರಾಜರಿಗೂ ನಡೆದ ಯುದ್ಧದಲ್ಲಿ ಚೀನಾ ಸೋಲನ್ನು ಅನುಭವಿಸಿದ ಸಂದರ್ಭದಲ್ಲಿ ಹಾಂಗ್ ಕಾಂಗ್ನ್ನು 100 ವರ್ಷಗಳ ಅವಧಿಗೆ ಇಂಗ್ಲೆಂಡಿಗೆ ಬಿಟ್ಟುಕೊಡಬೇಕು ಎನ್ನುವ ಕರಾರಿನೊಂದಿಗೆ ಚೀನಾ ಆ ಪ್ರದೇಶವನ್ನು ಬ್ರಿಟನ್ ಆಡಳಿತಕ್ಕೊಳಪಡಿಸುತ್ತದೆ. ನಂತರ ಹಾಂಗ್ ಕಾಂಗ್ ಪ್ರಮುಖ ವ್ಯಾಪಾರಿ ಕೇಂದ್ರವಾಗಿ ಕಂಡು-ಕೇಳರಿಯದಷ್ಟು ಅಭಿವೃದ್ಧಿ ಸಾಧಿಸುತ್ತದೆ. 1990ರ ದಶಕದಲ್ಲಿ ಈ ಹಾಂಗ್ ಕಾಂಗ್ನ್ನು ಬ್ರಿಟನ್ ಮರಳಿ ಚೀನಾಕ್ಕೆ ಒಪ್ಪಿಸಿದ ಸಂದರ್ಭದಲ್ಲಿ ಹಾಂಗ್ಕಾಂಗ್ ನಿವಾಸಿಗಳಲ್ಲಿ ಹುಟ್ಟಿರುವ ಅಸಮಧಾನದ ಬಗ್ಗೆ ಯಾರೂ ಗಮನವನ್ನೇ ಹರಿಸಿಲ್ಲ. ಬ್ರಿಟನ್ ಆಡಳಿತದಲ್ಲಿದ್ದವರಿಗೆ ಚೀನಾ ಆಡಳಿತಕ್ಕೆ ಸೇರುವುದು ಇಷ್ಟವೇ ಇರಲಿಲ್ಲ. ಈಗಲೂ ಆಗೊಮ್ಮೆ, ಈಗೊಮ್ಮೆ ಹಾಂಗ್ ಕಾಂಗ್ನಲ್ಲಿ ಈ ಮುನಿಸು ಕಾಣಿಸಿಕೊಳ್ಳುತ್ತದೆ. ಪ್ರತಿಧ್ವನಿಸುತ್ತದೆ. ಚೀನಾಅ ಅವನ್ನು ದಮನ ಮಾಡುವವ ಕಾರ್ಯದಲ್ಲೂ ನಿರತವಾಗಿದೆ. ಭಾರತ ಹಾಂಗ್ಕಾಂಗ್ ನಿವಾಸಿಗಳ ಜತೆಗೆ ನಿಲ್ಲುವ ಅಗತ್ಯವೂ ಇದೆ.
ಭಾರತದಲ್ಲಿ ನಕ್ಸಲೀಯರಿಗೆ ಚೀನಾದ ನೆರವು ಗುಟ್ಟಾಗೇನೂ ಉಳಿದಿಲ್ಲ. ಪರೋಕ್ಷವಾಗಿ ಬಂದೂಕು, ಹಣ ಸಹಾಯ ಮಾಡುತ್ತಿರುವುದು ಚೀನಾವೇ. ಭಾರತದಲ್ಲಿ ನಕ್ಸಲಿಸಂ ಬೆಳೆಸಿ, ಆಂತರಿಕವಾಗಿ ಭಾರತವನ್ನು ಅಧೀರ ಮಾಡುವುದು ಚೀನಾಆದ ಆಲೋಚನೆ. ಇದಕ್ಕೆ ಭಾರತ ಪ್ರತ್ಯುತ್ತರವನ್ನೂ ನೀಡುವ ಅಗತ್ಯವಿದೆ. ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ವಿರೋಧವಾಗಿ ಸಾಕಷ್ಟು ಜನರಿದ್ದಾರೆ. ಅದೆಷ್ಟೋ ಲಕ್ಷಗಟ್ಟಲೆ ಜನರು ಪೀಪಲ್ಸ್ ಲಿಬರೇಷನ್ ಆರ್ಮಿ ವಿರುದ್ಧ, ಅಧ್ಯಕ್ಷ ಕ್ಸಿ ಜೀನ್ ಪಿಂಗ್ ವಿರುದ್ಧ ಇದ್ದಾರೆ. ಅವರನ್ನೆಲ್ಲ ಬಲಪ್ರಯೋಗಿಸಿ ದಮನ ಮಾಡುವ ಕಾರ್ಯದಲ್ಲಿ ಚೀನಾ ನಿರತವಾಗಿದೆ. ಈ ಜನರಿಗೆ ಭಾರತ ಸಹಾಯ ಮಾಡಿದಾಗ ಚೀನಾಕ್ಕೆ ಭಾರತದಲ್ಲಿ ತಾನು ಮಾಡುತ್ತಿರುವ ಧೂರ್ತ ಕಾರ್ಯ ಅರಿವಿಗೆ ಬರಲು ಸಾಧ್ಯವಿದೆ. ಹೀಗೆ ಮಾಡಿದಲ್ಲಿ ಖಂಡಿತವಾಗಿಯೂ ಚೀನಾ ಹಣ್ಣಾಗುತ್ತದೆ. ತನ್ನೊಳಗಿನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಲ್ಳಲಾಗದಷ್ಟು ಅಧೀರಗೊಳ್ಳುತ್ತದೆ. ಅಲ್ಲದೇ ತನ್ನ ಸಮಸ್ಯೆ ಪರಿಹಾರ ಮಾಡಿಕೊಂಡು, ಉಳಿದ ಕಡೆಗೆ ಗಮನ ಹರಿಸೋಣ ಎಂದುಕೊಳ್ಳುತ್ತದೆ.
ಚೀನಾಕ್ಕೆ ಚೀನಾದ ರೀತಿಯಲ್ಲಿ ಪಾಠ ಕಲಿಸದೇ ಹೋದರೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯನ್ನು ತರುತ್ತದೆ. ಓಬಿಓಆರ್ ಮೂಲಕ, ತನ್ನ ವಸ್ತುಗಳನ್ನು ಮಾರಾಟ ಮಾಡುವ ಮೂಲಕ, ಭಯೋತ್ಪಾದನೆ ಹೆಚ್ಚಿಸುವ ಮೂಲಕ ಹೀಗೆ ಹಲವಾರು ಮಾರ್ಗಗಳನ್ನು ಚೀನಾ ಅನುಸರಿಸುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಅದರದೇ ಆದ ಮಾರ್ಗದ ಮೂಲಕ ಉತ್ತರ ಕೊಟ್ಟಾಗಲಷ್ಟೇ ಚೀನಾ ಬಗ್ಗಿ ಬರುತ್ತದೆ. ಭಾರತದ ವಿಷಯದಲ್ಲಿ ತಲೆ ಹಾಕದೇ ಸುಮ್ಮನಾಗುತ್ತದೆ.

Wednesday, June 20, 2018

ಪ್ರಯಾಸ ತರದಿರಲಿ ಪ್ರವಾಸ

ದೇಶಾದ್ಯಂತ ಮಳೆ ಸುರಿದು ಭೂತಾಯಿ ಹಸಿರ ಸೀರೆ ತೊಟ್ಟಂತೆ ಕಂಗೊಳಿಸುತ್ತಿದ್ದಾಾಳೆ. ಬೆಟ್ಟಗಳು ಕೈ ಬೀಸಿ ಕರೆಯುತ್ತವೆ, ಜಲಪಾತ ಸ್ವಾಗತಿಸುತ್ತಿವೆ. ಎಲ್ಲ ಪ್ರವಾಸಿ ತಾಣಗಳೂ ಮನಸೆಳೆಯುತ್ತಿವೆ. ಮತ್ಯಾಕೆ ತಡ, ಬ್ಯಾಗ್ ಹೊತ್ತು ಹೊರಡಿ ಪ್ರವಾಸಕ್ಕೆ. ಹಾಗೆ ಹೊರಡುವ ಮುನ್ನ ಮುಂಜಾಗ್ರತೆಗಾಗಿ ಈ ಲೇಖನ ಓದಿ...


------------

ಆಗಸದಲ್ಲಿ ಕರಿ ಮೋಡಗಳ ಹಿಂಡು ಸಾಲುಗಟ್ಟಿ ದೂರ ತೀರದ ಪಯಣ ಹಮ್ಮಿಕೊಂಡಿವೆ. ಸಾಗುವ ಹಾದಿಯಲ್ಲಿ ಮಳೆ ಸುರಿಸಿ ಭೂಮಿಯನ್ನು ತಂಪಾಗಿಸಿ ನೀರ ಸೆಲೆ ಚಿಮ್ಮಿಸುತ್ತಿವೆ. ವಾತಾವರಣ ಹಿತವಾಗಿದ್ದು, ಎಂತಹ ವ್ಯಕ್ತಿಯ ಮನಸ್ಸಿನಲ್ಲಿಯೂ ದೂರದ ಪ್ರಯಾಣ ಮಾಡಬೇಕೆನ್ನುವ, ಚಾರಣಕ್ಕೆ ಹೊರಡಬೇಕೆಂಬ ಆಶಯ ಬಲವಾಗಿ ಚಿಮ್ಮಿಸುತ್ತಿವೆ. ಅದೆಷ್ಟೋ ಜನ ಇಂತಹ ಹಿತ ವಾತಾವರಣದಲ್ಲೇ, ವಾರಾಂತ್ಯಕ್ಕೊೊಂದು ಬೈಕ್ ಟ್ರಿಪ್ಪನ್ನೋ, ಕಾರುಗಳ ಮೂಲಕ ತಿರುಗಾಟವನ್ನೋ ಹೊರಡುತ್ತಾರೆ. ಇನ್ನೂ ಹಲವರು ಗುಂಪು ಗುಂಪಾಗಿ ಟ್ರೆಕ್ಕಿಿಂಗ್‌ಗಾಗಿ ನಗರವನ್ನು ಬಿಟ್ಟು ಕಾಡಿಗೋ, ಬೆಟ್ಟಕ್ಕೋ, ಜಲಪಾತಗಳಿಗೋ ಹೊರಡುತ್ತಾಾರೆ. ಖುಷಿಯಿಂದ ಕಾಲ ಕಳೆಯುವ ಯೋಜನೆಗಳನ್ನು ಮನಸ್ಸಿನಲ್ಲಿ ಹಾಕಿಕೊಂಡಿರುತ್ತಾರೆ.
ಪ್ರವಾಸ ಯಾರಿಗೆ ತಾನೇ ಇಷ್ಟವಿರೋದಿಲ್ಲ ಹೇಳಿ. ಒತ್ತಡದ, ಧಾವಂತದ ಬದುಕಿನ ನಡುವೆ ಒಂದೋ, ಎರಡೋ ದಿನಗಳ ಕಾಲ ಆರಾಮವಾಗಿ, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ತಳ್ಳಿ ಪ್ರಕೃತಿಯ ಮಧ್ಯವೋ, ಇಷ್ಟಪಟ್ಟ ತಾಣಗಳ ನಡುವೆಯೋ ಖುಷ್ ಖುಷಿಯಾಗಿ ಕಳೆಯುವುದು ಪ್ರತಿಯೊಬ್ಬರಿಗೂ ಇಷ್ಟವೇ. ಹಾಗಾದರೆ ಪ್ರವಾಸಕ್ಕೆ ಹೋಗುವುದು ಸುಲಭವೇ? ಏನೂ ತಯಾರಿ ಇಲ್ಲದೆಯೇ ಪ್ರವಾಸ ಮಾಡಿಬಿಡಬಹುದೆ? ಹೂಂ ಹೂಂ. ಪ್ರವಾಸವಿರಲಿ, ಚಾರಣವೇ ಇರಲಿ, ಅಗತ್ಯವಾದ ಕೆಲವು ತಯಾರಿಗಳಂತೂ ಬೇಕೇ ಬೇಕಾಗುತ್ತದೆ. ಹಾಗಾದರೆ ಪ್ರವಾಸಕ್ಕೆ ಹೊರಡುವ ಮುನ್ನ ಏನು ತಯಾರಿಬೇಕು? ಅವುಗಳ ಕಡೆಗೆ ಕಣ್ಣಾಡಿಸೋಣ ಬನ್ನಿ.

ಇವುಗಳ ಮರೆಯದಿರಿ...
ಉತ್ತಮ ಚಿತ್ರಗಳಿಗೊಂದು ಕ್ಯಾಮೆರಾ
ಸೆಲ್ಫೀ ತೆಗೆಯಲೊಂದು ಸ್ಟಿಕ್
ಹಗುರದ ಪವರ್ ಬ್ಯಾಾಂಕ್
ಮೊಬೈಲ್, ಕ್ಯಾಮೆರಾ ಬ್ಯಾಟರಿ ಪೂರ್ತಿ ಜಾರ್ಜ್ ಆಗಿರಲಿ
ಕೊಡೆ, ರೇನ್ ಕೋಟ್, ಮೆಡಿಕಲ್ ಕಿಟ್

ಬ್ಯಾಗ್ ಹಗುರವಾಗಿರಲಿ
ಕೆಲವರು ಪ್ರವಾಸಕ್ಕೆ ಹೊರಡುವ ಸಂದರ್ಭದಲ್ಲಿ ಇದ್ದ ಬಿದದ್ದ ವಸ್ತುಗಳನ್ನೆಲ್ಲ ಬ್ಯಾಾಗಿಗೆ ತುಂಬಿಕೊಳ್ಳತ್ತಾರೆ. ಬಟ್ಟೆಗಳು, ಶೂಗಳು ಅದೂ ಇದೂ ಎಂದುಕೊಂಡು ಹತ್ತಾರು ಬಗೆಯ ವಸ್ತುಗಳನ್ನು ಬ್ಯಾಗಿನೊಳಕ್ಕೆ ತುರುಕಿಕೊಳ್ಳುತ್ತಾರೆ. ಅನವಶ್ಯಕ ವಸ್ತುಗಳನ್ನು ಬ್ಯಾಗಿನೊಳಕ್ಕೆ ಹಾಕಿಕೊಂಡು ಭಾರ ಮಾಡಿಕೊಳ್ಳುತ್ತಾರೆ. ಇದರಿಂದ ಪ್ರವಾಸ ಪ್ರಯಾಸವಾಗುವ ಸಂದರ್ಭವೇ ಜಾಸ್ತಿ. ಖುಷಿಯಾಗಿ ಕಳೆಯ ಬೇಕೆಂಬ ಪ್ರವಾಸ ನಿಮ್ಮ ಬ್ಯಾಗಿನ ಭಾರದಿಂದಲೇ ಬೇಸರಕ್ಕೂ ಕಾರಣವಾಗಬಹುದು. ಟ್ರೆೆಕ್ಕಿಿಂಗ್‌ನಂತಹ ಸಮಯದಲ್ಲಿ ಅನಾವಶ್ಯಕ ವಸ್ತುಗಳಿಂದ ಸುಮ್ಮನೇ ತೊಂದರೆಗೆ ಒಳಗಾಗುತ್ತಾಾರೆ. ನಿಮ್ಮ ಪ್ರಯಾಣಕ್ಕೆ ಮುನ್ನ ಅನಗತ್ಯ ವಸ್ತುಗಳಿಂದ ದೂರವಿರಿ. ದೂರದ ಪ್ರವಾಸದ ಸಂದರ್ಭದಲ್ಲಿ ಅನಗತ್ಯದ ಭಾರಕ್ಕೆ ಕಾರಣವಾಗುವ ವಸ್ತುಗಳನ್ನು ಬಿಟ್ಟು ಅದರ ಬದಲು ಭಾರ ಕಡಿಮೆ ಇರುವ ವಸ್ತುಗಳಿಗೆ ಆದ್ಯತೆ ನೀಡಿ. ಹಲವಾರು ಜತೆ ಬಟ್ಟೆಗಳನ್ನು ಒಯ್ಯುವುದರ ಬದಲು 2 ಅಥವಾ 3 ಜತೆ ಬಟ್ಟೆಗಳಿಗೆ ಆದ್ಯತೆ ನೀಡಿ.


ವಾಹನಗಳ ಕಡೆಗೆ ಮುನ್ನೆಚ್ಚರಿಕೆ ಅಗತ್ಯ
ಪ್ರವಾಸಕ್ಕೆ ನಿಮ್ಮದೇ ಸ್ವಂತ ವಾಹನ ಒಯ್ಯುವುದಿದ್ದರೆ ಅದರ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದ ಅಗತ್ಯ. ವಾಹನಗಳ ಆಯ್ಕೆಯೂ ಕೂಡ ಅಷ್ಟೇ ಮುಖ್ಯ. ದ್ವಿಚಕ್ರ ಅಥವಾ ಚತುಷ್ಚಕ್ರ ವಾಹನಗಳನ್ನು ಆದ್ಯತೆಯ ಮೇರೆಗೆ ಬಳಕೆ ಮಾಡಿಕೊಳ್ಳಿ. ಪ್ರಯಾಣ ಆರಂಬಿಸುವ ಮೊದಲು ವಾಹನಗಳನ್ನು ಪರೀಕ್ಷೆ ಮಾಡಿಸಿಕೊಳ್ಳಿ. ಪ್ರಯಾಣಕ್ಕೆ ಮೊದಲು ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಿ. ಸರ್ವೀಸ್ ಮಾಡಿಸಿಕೊಳ್ಳಿ. ವಾಹನದ ಚಕ್ರಗಳಲ್ಲಿ ಗಾಳಿ ಇದೆಯೇ ಎಂದು ಪರೀಕ್ಷೆ ಮಾಡಿಕೊಳ್ಳಿ. ಪ್ರಯಾಣದ ಮಧ್ಯದಲ್ಲಿ ವಾಹನ ಕೈಕೊಟ್ಟರೆ ಉಪಯೋಗಕ್ಕೆ ಬರಲಿ ಎನ್ನುವ ಕಾರಣಕ್ಕಾಗಿ ಕೆಲವು ರಿಪೇರಿ ಸಾಧನಗಳು ಜತೆಯಲ್ಲಿರಲಿ. ಎಲ್ಲಕ್ಕಿಿಂತ ಮುಖ್ಯವಾಗಿ ಗಾಡಿಯಲ್ಲಿ ಸಾಕಷ್ಟು ಇಂಧನ ಇರಲಿ. ಪ್ರಯಾಣದ ಸಂದರ್ಭದಲ್ಲಿ ಅತಿಯಾದ ವೇಗಕ್ಕೆ ಕಡಿವಾಣ ಹಾಕಿ.

ಮಳೆ ಬಗ್ಗೆ ಇರಲಿ ಎಚ್ಚರ
ಇದು ಮಳೆಗಾಲದ ಸೀಸನ್. ಮಳೆ ಜಾಸ್ತಿ ಬಂತೆಂದು, ಜಲಪಾತಗಳಿಗೋ ಅಥವಾ ಇನ್ಯಾವುದೋ ಹಿನ್ನೀರಿನ ಪ್ರದೇಶಗಳಿಗೋ, ನದಿ ತೀರಕ್ಕೋ ಪ್ರವಾಸ ಹೋಗುವ ಸಂದರ್ಭದಲ್ಲಿ ಮಳೆಯ ಬಗ್ಗೆ ಎಚ್ಚರ ವಹಿಸುವುದು ಕಡ್ಡಾಯ. ಯಾವುದೇ ಕ್ಷಣದಲ್ಲಿ ಮಳೆ ತೀವ್ರವಾಗಿ ಅನಾಹುತವಾದೀತು ಎಚ್ಚರ. ಜಲಪಾತಗಳಲ್ಲಿ, ನದಿಗಳಲ್ಲಿ ಈಜುವಾಗಲೂ ಎಚ್ಚರ ವಹಿಸಲೇಬೇಕು. ದಿಢೀರನೆ ನದಿಗಳಲ್ಲಿ ಪ್ರವಾಹ ಬಂದೀತು. ಈ ಕುರಿತು ಜಾಗರೂಕರಾಗಿರುವುದೂ ಕೂಡ ಅಷ್ಟೇ ಮುಖ್ಯ. ಈಜು ಬರದೇ ನದಿಗೆ ಇಳಿಯಲೇಬೇಡಿ. ಅಪರಿಚಿತ ಸ್ಥಳದ ನದಿಗಳು, ಕೆರೆಗಳು, ಜಲಪಾತಗಳು ಅತ್ಯಂತ ಅಪಾಯಕಾರಿ. ಹೀಗಾಗಿ ಅವುಗಳಲ್ಲಿ ಈಜುವ, ನೀರಾಟ ಮಾಡುವ ಉಸಾಬರಿಗೆ ಹೋಗಲೇಬೇಡಿ. ಭಾರಿ ಮಳೆ ಬೀಳುತ್ತಿರುವ ಸಂದರ್ಭದಲ್ಲಿ ಪ್ರಯಾಣ ಮಾಡಲೇಬೇಡಿ.

ಕಾಡಿನಲ್ಲಿ ಹುಷಾರಾಗಿರಿ
ಕಾಡಿಗೆ ಪ್ರವಾಸ ಹೋದರೆ, ಟ್ರೆೆಕ್ಕಿಿಂಗ್ ಕೈಗೊಂಡರೆ ಇನ್ನೂ ಜಾಗರೂಕವಾಗಿರುವುದು ಅಗತ್ಯ. ಕಾಡಲ್ಲಿ ಬೆಂಕಿ ಹಾಕಬೇಡಿ. ಇದರಿಂದ ಕಾಡು ಪ್ರಾಣಿಗಳು ಹಾಗೂ ಅಮೂಲ್ಯ ವೃಕ್ಷ ಸಂಪತ್ತಿಗೆ ಹಾನಿಯಾದೀತು. ಕಾಡಿನ ಪ್ರಾಣಿಗಳನ್ನು ಕೆಣಕಲು ಹೋಗಬೇಡಿ. ಕಾಡು ಪ್ರಾಣಿಗಳ ನೆಮ್ಮದಿಗೆ ಭಂಗ ತರಲೇಬೇಡಿ. ಕಾಡಿನ ನಿರ್ಮಲ ಪರಿಸರವನ್ನು ಕಲ್ಮಶಗೊಳಿಸಲು ಮುಂದಾಗಬೇಡಿ.

ಚಾರಣಿಗರಿಗೆ ಕಿವಿಮಾತು
ಸಾಮಾನ್ಯವಾಗಿ ಚಾರಣ ಮಾಡುವ ಹುಮ್ಮಸ್ಸು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಪೂರ್ವಸಿದ್ಧತೆಯ ಕೊರತೆ ಅವರನ್ನು ಕಾಡುತ್ತದೆ. ಚಾರಣವನ್ನು ಆರಂಭಿಸಿದವರು, ಯಾವುದೋ ತಾಣದಲ್ಲಿ ಸಿಲುಕಿದ್ದಾಗ ಆ ವಸ್ತು ತಂದರೆ ಚನ್ನಾಗಿತ್ತು, ಈ ವಸ್ತುವನ್ನು ತಂದಿದ್ದರೆ ಚನ್ನಾಾಗಿತ್ತು, ಇದನ್ನು ತರಬಾರದಿತ್ತು, ಅದನ್ನು ತರಬಾರದಿತ್ತು ಎಂದುಕೊಳ್ಳುತ್ತಾರೆ. ಈ ಕಾರಣದಿಂದಾಗಿ ಚಾರಣ ಕೈಗೊಳ್ಳುವವರು ಸಮರ್ಪಕವಾಗಿ ಯೋಜನೆಯನ್ನು ಕೈಗೊಳ್ಳುವ ಅಗತ್ಯವಿದೆ. ಚಾರಣ ಮಾಡುವವರು ತಮ್ಮ ಬ್ಯಾಗಿನಲ್ಲಿ ಒಂದು ಹಗ್ಗ, ಅಗತ್ಯದ ಹಾಗೂ ಅನಿವಾರ್ಯದ ಸಂದರ್ಭದಲ್ಲಿ ಬಳಕೆಯಾಗಲು ಕತ್ತಿ ಅಥವಾ ಚಾಕುವಿನಂತಹ ಒಂದು ಆಯುಧ, ರಾತ್ರಿಯಾದರೆ ನಿಂತ ಜಾಗದಲ್ಲಿಯೇ ಉಳಿದುಕೊಳ್ಳಲು ಅನುಕೂಲವಾಗುವಂತಹ ಭಾರರಹಿತ ಟೆಂಟ್ ಇತ್ಯಾದಿಗಳು ಜತೆಯಲ್ಲಿರಲಿ.

ಮೆಡಿಕಲ್ ಕಿಟ್ ಜತೆಯಲ್ಲಿರಲಿ
ಪ್ರವಾಸ ಹೋಗುವವರು ಪ್ರಮುಖವಾಗಿ ಕೈಗೊಳ್ಳುವ ಮುನ್ನೆಚ್ಚರಿಕಾ ಕಾರ್ಯಗಳಲ್ಲಿ ಇದೂ ಒಂದು. ಮೆಡಿಕಲ್ ಕಿಟ್ ಇಟ್ಟುಕೊಳ್ಳಲೇಬೇಕು. ಬ್ಯಾಾಂಡೇಜ್ ವಸ್ತುಗಳು, ನೋವು ನಿವಾರಕಗಳು, ಥಂಡಿ, ಜ್ವರ ಸೇರಿದಂತೆ ಹಲವು ಸೂಕ್ಷ್ಮ ಖಾಯಿಲೆಗಳಿಗೆ ಅಗತ್ಯವಾದಂತಹ ಔಷಧಿಗಳು ಮೆಡಿಕಲ್ ಕಿಟ್‌ನಲ್ಲಿ ಇರಲಿ.

ಆಹಾರ ಕಟ್ಟಿಕೊಳ್ಳಿ
ಒಂದು ದಿನದ ಪ್ರವಾಸವಿದ್ದರೆ, ತೀರಾ ಕಾಡು, ಜಲಪಾತಗಳು, ಜನವಸತಿ ರಹಿತ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವುದಿದ್ದರೆ ಆಹಾರವನ್ನು ಕಟ್ಟಿಕೊಂಡು ಹೋಗಿ. ಬುತ್ತಿಯೋ, ಊಟವೋ, ಅಥವಾ ಇನ್ಯಾವುದೋ ಹೊಟ್ಟೆ ತುಂಬುವಂತಹ ತಿಂಡಿಗಳನ್ನು ತೆಗೆದುಕೊಂಡು ಹೋಗಿ. ತರಹೇವಾರಿ ಸ್ನ್ಯಾಕ್‌ಸ್‌‌ಗಳ ಬದಲು ಹಸಿವು ಕಡಿಮೆ ಮಾಡುವ ಆಹಾರಗಳಿಗೆ ಆದ್ಯತೆ ನೀಡಿ. ಸಾಕಷ್ಟು ನೀರನ್ನೂ ಇಟ್ಟುಕೊಳ್ಳಿ. ದೈಹಿಕ ಶ್ರಮ ಬಯಸುವಂತಹ ತಾಣಗಳಲ್ಲಿ ಕುಡಿಯುವ ನೀರಿನ ಬಳಕೆ ತೀವ್ರವಾಗುತ್ತದೆ. ಆದ್ದರಿಂದ ನೀರನ್ನು ಹೆಚ್ಚು ತೆಗೆದುಕೊಂಡು ಹೋದಷ್ಟೂ ಒಳ್ಳೆಯದು.
ಇಂತಹ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪ್ರವಾಸ ಮಾಡಿದಾಗ ಪ್ರವಾಸ ಸಂತೋಷದಾಯಕವಾಗಿರುತ್ತದೆ. ಇಲ್ಲವಾದಲ್ಲಿ ಪ್ರವಾಸ ಎನ್ನುವುದು ಪ್ರಯಾಸವೇ ಆಗಿ, ಯಾಕಾದರೂ ಪ್ರವಾಸ ಕೈಗೊಂಡೆವೋ ಎನ್ನುವಂತಾಗಬಹುದು. ಸ್ಪಷ್ಟ ಯೋಜನೆಯಿದ್ದರೆ ಪ್ರವಾಸವನ್ನು ಅತ್ಯಂತ ಖುಷಿಯಿಂದ ಸವಿಯಬಹುದು. ಇಲ್ಲವಾದರೆ ಪ್ರವಾಸದ ಮಜಾವೇ ಹಾಳಾಗಿ ಬಿಡಬಹುದು.

ಪ್ರವಾಸ ಪರಿಸರಸ್ನೇಹಿಯಾಗಿರಲಿ
ನೀವು ಮಾಡುವ ಪ್ರವಾಸ ಪರಿಸಕ್ಕೆ ಪೂರಕವಾಗಿರಲಿ. ಪರಿಸರವನ್ನು ಹಾಳುಮಾಡುವಂತಹ ಸಂಗತಿಗಳಿಗೆ ಕಟ್ಟುನಿಟ್ಟಾಗಿ ತಡೆ ಹಾಕಿಕೊಳ್ಳಿ. ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ತ್ಯಜಿಸಿ. ಪರಿಸರ ನಮಗೆ ಪರಿಶುದ್ಧವಾಗಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಬದುಕು ಕಟ್ಟಿಕೊಡಬಲ್ಲದು. ನೀವು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಎಲ್ಲೆೆಂದರಲ್ಲಿ ಪ್ಲಾಸ್ಟಿಕ್ ಎಸೆಯುವ ಕಾರ್ಯವನ್ನು ಮಾಡಬೇಡಿ. ಒಂದು ವೇಳೆ ಅನಿವಾರ್ಯವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ಹೋದರೂ ಪ್ರವಾಸಿ ತಾಣಗಳಲ್ಲಿ ಅದನ್ನು ಎಸೆಯದೇ ಮರಳಿ ಬರುವಾಗ ತೆಗೆದುಕೊಂಡು ಬನ್ನಿ. ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡಿ. ಪ್ರವಾಸಿ ತಾಣದಲ್ಲಿ ಮದ್ಯ ಸೇವನೆಯಿಂದ ದೂರವಿರಿ. ಕೂಗಾಟ, ಅಬ್ಬರ ಇತ್ಯಾಾದಿಗಳಿಗೆ ಕಡಿವಾಣ ಹಾಕಿ.



Sunday, June 17, 2018

ಒಂದಲ್ಲ ಒಂದಿನ ನಾವೂ ಗೆಲ್ಲುತ್ತೇವೆ - ಸುನೀಲ್ ಛೇಟ್ರಿ (ವಿಶೇಷ ಸಂದರ್ಶನ)


ಪ್ರಸ್ತುತ ಜಗತ್ತಿನಲ್ಲಿ ಫುಟ್ಬಾಲ್ನಲ್ಲಿ ಅತ್ಯಂತ ಹೆಚ್ಚು ಗೋಲುಗಳನ್ನು ಗಳಿಸಿರುವವರ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವಾತ ಭಾರತದ ಸುನೀಲ್ ಛೇಟ್ರಿ. ಭಾರತ ಫುಟ್ಬಾಲ್ ತಂಡದ ನಾಯಕ. ಇತ್ತೀಚೆಗಷ್ಟೇ ಇಂಟರ್ಕಾಂಟಿನೆಂಟಲ್ ಕಪ್ ಗೆದ್ದ ಸಂಭ್ರಮದಲ್ಲಿರುವ ಛೆಟ್ರಿ ಮುಂಬರುವ ಏಷ್ಯನ್ ಕಪ್ಗಾಗಿ ಸಿದ್ಧತೆಯನ್ನು ಕೈಗೊಳ್ಳುತ್ತಿದ್ದಾರೆ. ಸದಾ ಕ್ರಿಯಾಶೀಲವಾಗಿರುವ, ಜೊತಗಾರರನ್ನು, ಎದುರಿನಲ್ಲಿರುವವರನ್ನು ಹುರಿದುಂಬಿಸುತ್ತ ಉತ್ಸಾಹವನ್ನು ಹೆಚ್ಚಿಸುವ ಸುನೀಲ್ ಛೇಟ್ರಿ ಮನಬಿಚ್ಚಿ ಮಾತನಾಡಿದರು.

ಪ್ರಶ್ನೆ : ನೀವೀಗ ವಿಶ್ವದಲ್ಲೇ ಎರಡನೇ ಅತ್ಯಂತ ಹೆಚ್ಚು ಗೋಲ್ ಗಳಿಸಿದ ಆಟಗಾರ. ಮುಂದೆ ನಂ.1 ಗುರಿ ಇದೆಯಾ?
ಛೆಟ್ರೀ : ಪ್ರಸ್ತುತ ಆಡುತ್ತಿರುವ ಆಟಗಾರರ ಪೈಕಿ ಗೋಲ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇನೆ. ಲಿಯೋನಲ್ ಮೆಸ್ಸಿ ಗೋಲ್ ಗಳಿಕೆಯನ್ನು ಸರಿದೂಗಿಸಿದ್ದೇನೆ. ನಿಜ. ನಾನು ಯಾವತ್ತೂ ಸ್ಥಾನಗಳ ಬಗ್ಗೆ ಚಿಂತನೆ ನಡೆಸಿಲ್ಲ. ಮೆಸ್ಸಿನ ನನ್ನ ಅತ್ಯಂತ ಪ್ರೀತಿಯ ಆಟಗಾರ. ಮೆಸ್ಸಿಯ ಆಟವನ್ನು ನಾನು ಬಹಳ ಎಂಜಾಯ್ ಮಾಡುತ್ತೇನೆ. ರೋನಾಲ್ಡೋ ಆಟವನ್ನೂ ಕೂಡ ಅಷ್ಟೇ ಇಷ್ಟಪಡುತ್ತೇನೆ. ಮೊದಲನೇ ಸ್ಥಾನದ ಗುರಿಯ ಕಡೆಗೆ ಗಮನ ಇಟ್ಟಿಲ್ಲ. ನಾನು ನನ್ನ ಆಟವನ್ನು ಆಡುತ್ತೇನೆ. ಆಡುತ್ತಿದ್ದೇನೆ. ನನಗೆ ನಾನು ಗಳಿಸಿದ ಗೋಲುಗಳಿಂದ ಭಾರತ ಗೆಲ್ಲುವುದು ಮುಖ್ಯ.
ಪ್ರಶ್ನೆ : ಭಾರತ ಇಂಟರ್ಕಾಂಟಿನೆಂಟಲ್ ಕಪ್ ಗೆದ್ದಿದೆ. ಇದರ ಬಗ್ಗೆ ಏನನ್ನುತ್ತೀರಿ?
ಛೆಟ್ರಿ : ಇಂಟರ್ಕಾಂಟಿನೆಂಟಲ್ ಕಪ್ ಗೆದ್ದಿರುವುದು ಬಹಳ ಸಂತಸ ತಂದಿದೆ. ವಿವಿಧ ರಾಷ್ಟ್ರಗಳ ಎದುರು ಪರಿಣಾಮಕಾರಿ ಆಟವನ್ನು ಆಡುವ ಮೂಲಕ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದು, ಇಂಟರ್ಕಾಂಟಿನೆಂಟಲ್ ಕಪ್ಗಿಂತ ದೊಡ್ಡ ಪ್ರಶಸ್ತಿಗಳನ್ನು ಜಯಿಸುವುದು ನಮ್ಮೆದುರು ಇರುವ ಗುರಿ.
ಪ್ರಶ್ನೆ : ಪ್ರಸ್ತುತ ಭಾರತ 97ನೇ ರ್ಯಾಂಕಿನಲ್ಲಿದೆ. ಭಾರತದ ಮುಂದಿನ ಗುರಿ?
ಛೆಟ್ರೀ : ಭಾರತೀಯ ಫುಟ್ಬಾಲ್ ದಿನದಿಂದ ದಿನಕ್ಕೆ ಗುಣಮಟ್ಟವನ್ನು ವೃದ್ಧಿಸಿಕೊಳ್ಳುತ್ತಿದೆ. ಉನ್ನತ ರ್ಯಾಂಕಿನ ದೇಶಗಳ ಜತೆ ಆಡುತ್ತ ಆಡುತ್ತ ಕೌಶಲ್ಯವನ್ನು ವೃದ್ಧಿಸಿಕೊಳ್ಳುತ್ತಿದೆ. ಈ ಮೊದಲು ಭಾರತ 100ಕ್ಕಿಂತ ಹೆಚ್ಚಿನ ರ್ಯಾಂಕಲ್ಲಿತ್ತು. ಆದರೆ ಉತ್ತಮ ಆಟವನ್ನು ಪ್ರದಶರ್ಿಸುವ ಮೂಲಕ 100 ರ್ಯಾಂಕುಗಳ ಒಳಗೆ ಬಂದು ತಲುಪಿದೆ.ಪ್ರಸ್ತುತ 97ನೇ ರ್ಯಾಂಕಿನಲ್ಲಿರಬಹುದು. ಮುಂದಿನ ದಿನಗಳಲ್ಲಿ 50ನೇ ರ್ಯಾಂಕಿನ ಸನಿಹ ಬರಬೇಕೆನ್ನುವ ಕನಸು ಎಲ್ಲರಲ್ಲಿಯೂ ಇದೆ. ತಂಡದ ಪ್ರತಿಯೊಬ್ಬರೂ ಉತ್ತಮ ಆಟವನ್ನು ಆಡುವ ಮೂಲಕ ಭಾರತದ ಫುಟ್ಬಾಲ್ ರ್ಯಾಂಕಿಂಗ್ ಹಾಗೂ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದೇವೆ.
ಪ್ರಶ್ನೆ : ಈಗಾಗಲೇ ವಿಶ್ವಕಪ್ ಆರಂಭವಾಗಿದೆ. ವಿಶ್ವಕಪ್ ಜ್ವರ ಏರಲಾರಂಬಿಸಿದೆ..
ಛೇಟ್ರಿ : ಹೌದು. ರಷ್ಯಾದಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಪ್ರತಿಯೊಬ್ಬರನ್ನೂ ಮೋಡಿ ಮಾಡಲು ಆರಂಭಿಸಿದೆ. ನಾನು ಮುಂದಿನ ಏಷ್ಯನ್ಕಪ್ಗೆ ತಯಾರಿ ನಡೆಸುವುದರ ಜತೆಗೆ ವಿಶ್ವಕಪ್ನ್ನು ಸವಿಯುತ್ತೇನೆ. ಪಂದ್ಯವಿರುವ ಸಮಯದಲ್ಲಿ ಟಿವಿಯ ಮುಂದಿನಿಂದ ಏಳುವುದೇ ಇಲ್ಲ. ಖಂಡಿತವಾಗಿಯೂ ಎಲ್ಲರ ಜತೆ, ಎಲ್ಲರಂತೆ ಪಂದ್ಯಗಳನ್ನು ಎಂಜಾಯ್ ಮಾಡುತ್ತ ನೋಡುತ್ತೇನೆ.
ಪ್ರಶ್ನೆ : ವಿಶ್ವಕಪ್ಪನ್ನು ಯಾರು ಗೆಲ್ಲಬಹುದು?
ಛೆಟ್ರಿ : ಖಂಡಿತವಾಗಿಯೂ ಬ್ರೆಝಿಲ್ ವಿಶ್ವಕಪ್ನ ಫೆವರೆಟ್. ಇದಲ್ಲದೇ ಇಂಗ್ಲೆಂಡ್ ಅಥವಾ ಅಜರ್ೆಂಟಿನಾಗಳೂ ಕಪ್ ಗೆಲ್ಲಬಹುದು. ಇನ್ನು ಕಳೆದ ಸಾರಿಯ ಚಾಂಪಿಯನ್ ಜರ್ಮನಿಯನ್ನು ಕಡೆಗಣಿಸುವ ಹಾಗಿಲ್ಲ. ವಿಶ್ವಕಪ್ನಲ್ಲಿ ಎಲ್ಲವೂ ಗುಣಮಟ್ಟದ ಆಟವನ್ನೇ ಆಡುತ್ತವೆ. ಅಚ್ಚರಿಯ ಫಲಿತಾಂಶಗಳು ಬಂದರೂ ಬರಬಹುದು. ಏಷ್ಯಾದ ತಂಡಗಳು ಪರಿಣಾಮಕಾರಿಯಾದ ಆಟವನ್ನು ಆಡಬಹುದು. ಆಫ್ರಿಕಾದ ತಂಡಗಳಿಂದ ಅಚ್ಚರಿಯ ಫಲಿತಾಂಶ ನಿರೀಕ್ಷೆ ಮಾಡಬಹುದು.
ಪ್ರಶ್ನೆ : ಯಾರು ನಿಮ್ಮ ಫೆವರೆಟ್ ಆಟಗಾರ? ಈ ವಿಶ್ವಕಪ್ನಲ್ಲಿ ಯಾರ ಕಾಲ್ಚಳಕ ನಡೆಯಬಹುದು?
ಛೆಟ್ರೀ: ಅಜರ್ೆಂಟಿನಾದ ಲಿಯೋನಲ್ ಮೆಸ್ಸಿ ಹಾಗೂ ಪೋಚರ್ುಗಲ್ನ ಕ್ರಿಶ್ಚಿಯಾನೋ ರೋನಾಲ್ಡೋ ಈ ವಿಶ್ವಕಪ್ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಖಂಡಿತವಾಗಿಯೂ ನನಗೆ ಈ ಇಬ್ಬರೂ ಆಟಗಾರರು ಫೆವರೇಟ್. ಇನ್ನು ಈ ವಿಶ್ವಕಪ್ನಲ್ಲಿ ಬ್ರೆಜಿಲ್ನ ನೇಯ್ಮರ್, ಬೆಲ್ಜಿಯಮ್ನ ಕೆವಿನ್ ಡಿ ಬ್ರ್ಯೂನ್ ತಮ್ಮ ಕಾಲ್ಚಳಕವನ್ನು ತೋರುತ್ತಾರೆ.
ಪ್ರಶ್ನೆ ; ಮೆಸ್ಸಿ-ರೋನಾಲ್ಡೋ ಇವರಲ್ಲಿ ಯಾರು ಗ್ರೇಟ್?
ಛೆಟ್ರಿ : ಇಬ್ಬರೂ ಬೇರೆ ಬೇರೆ ರೀತಿಯ ಕೌಶಲ್ಯವನ್ನು ಹೊಂದಿರುವ ಆಟಗಾರರು. ಇಬ್ಬರ ತಂತ್ರಗಳೂ ಭಿನ್ನ. ಈ ಇಬ್ಬರ ನಡುವೆ ಹೋಲಿಕೆ ಬೇಡ. ಇಬ್ಬರ ಆಟವನ್ನೂ ನಾವು ಎಂಜಾಯ್ ಮಾಡೋಣ. ಗಳಿಸುವ ಗೋಲುಗಳಿಗೆ ಖುಷಿ ಪಡೋಣ.
ಪ್ರಶ್ನೆ : ಭಾರತ ವಿಶ್ವಕಪ್ನಲ್ಲಿ ಭಾಗವಹಿಸುವುದು ಯಾವಾಗ?
ಛೆಟ್ರಿ ; ಭಾರತ ವಿಶ್ವಕಪ್ನಲ್ಲಿ ಭಾಗವಹಿಸಬೇಕು ಎನ್ನುವುದು ಕೋಟ್ಯಂತರ ಅಭಿಮಾನಗಳ ಕನಸು. ಭಾರತ ಏಷ್ಯಾದ ವಲಯದಲ್ಲಿ ಕೆಳ ಹಂತದಲ್ಲಿದೆ. ಆದರೆ ದಿನದಿಂದ ದಿನಕ್ಕೆ ಭಾರತದ ಫುಟ್ಬಾಲ್ ಗುಣಮಟ್ಟವನ್ನು ವೃದ್ಧಿಸಿಕೊಳ್ಳುತ್ತಿದೆ. ಏಷ್ಯಾದ ಅಗ್ರ 10 ರಾಷ್ಟ್ರಗಳ ಯಾದಿಯಲ್ಲಿ ಸ್ಥಾನ ಗಳಿಸಿಕೊಳ್ಳುವುದು ಭಾರತ ತಂಡದ ಎದುರಿಗೆ ಇರುವ ಮೊದಲ ಗುರಿ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಏಷ್ಯಾದ ಪ್ರಬಲ ಫುಟ್ ಬಾಲ್ ರಾಷ್ಟ್ರಗಳಾದ ಇರಾನ್, ಜಪಾನ್, ಸೌದಿ ಅರೆಬಿಯಾ, ಕೋರಿಯಾಗಳಂತಹ ರಾಷ್ಟ್ರಗಳ ಜತೆ ಭಾರತ ಹೆಚ್ಚು ಹೆಚ್ಚು ಪಂದ್ಯಗಳನ್ನು ಆಡುವ ಕಡೆಗೆ ಗಮನ ಹರಿಸಿದೆ. ಬೇರೆ ಬೇರೆ ದೇಶಗಳ ಜತೆ ಹೆಚ್ಚು ಹೆಚ್ಚು ಆಟವಾಡಿದಂತೆಲ್ಲ ಭಾರತೀಯ ಆಟಗಾರರ ಗುಣಮಟ್ಟ ಹಾಗೂ ಸಾಮಥ್ರ್ಯ ವೃದ್ಧಿಯಾಗುತ್ತದೆ.
ಪ್ರಶ್ನೆ : ಏಷ್ಯನ್ ಕಪ್ಗೆ ನಿಮ್ಮ ತಯಾರಿ ಹೇಗಿದೆ?
ಛೇಟ್ರಿ : ನಮ್ಮ ಮುಂದೆ ಏಷ್ಯನ್ ಕಪ್ ಇದೆ. ಈ ಪಂದ್ಯಾವಳಿಯಲ್ಲಿ ಏಷ್ಯಾದ ಪ್ರಬಲ ತಂಡಗಳು ಭಾಗವಹಿಸುತ್ತಿವೆ. ಅವುಗಳ ಮುಂದೆ ನಮ್ಮ ಸಾಮಥ್ರ್ಯವನ್ನು ಪ್ರದರ್ಶನ ಮಾಡುವುದು ನಮ್ಮ ಗುರಿ. ಇದಕ್ಕಾಗಿ ಕಠಿಣ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದೇವೆ. ಪ್ರಬಲ ರಾಷ್ಟ್ರಗಳ ವಿರುದ್ಧ ಗುಣಮಟ್ಟದ ಪ್ರದರ್ಶನಕ್ಕೆ ನಾವು ಪ್ರಯತ್ನಿಸಲಿದ್ದೇವೆ.
ಪ್ರಶ್ನೆ : ಹೊಸ ಹಾಗೂ ಮುಂದಿನ ಪೀಳಿಗೆಯ ಆಟಗಾರರಿಗೆ ನೀವೇನು ಹೇಳಬಯಸುತ್ತೀರಿ?
ಛೇಟ್ರಿ : ಉತ್ತಮವಾಗಿ ಆಡಿ. ಒಲ್ಳೆಯ ತರಬೇತಿ ಪಡೆಯಿರಿ. ಹೆಚ್ಚಿನ ಶ್ರಮ ವಹಿಸಿ. ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಅಷ್ಟಾದರೆ ಫುಟ್ಬಾಲ್ ನಿಮ್ಮನ್ನು ಕೈಹಿಡಿಯಬಲ್ಲದು.
ಪ್ರಶ್ನೆ ; ಫುಟ್ಬಾಲ್ ಪ್ರೇಮಿಗಳಿಗೆ ಏನು ಹೇಳ ಬಯಸುವಿರಿ?
ಛೇಟ್ರಿ ; ಇಂಟರ್ಕಾಂಟಿನೆಂಟಲ್ ಕಪ್ ಸಂದರ್ಭದಲ್ಲಿ ಪಂದ್ಯಗಳಿಗೆ ಅಭಿಮಾನಿಗಳ ಕೊರತೆಯಿತ್ತು. ಕೊನೆಗೆ ನಾನು ಪಂದ್ಯವನ್ನು ನೋಡಲು, ಬೆಂಬಲಿಸಲು ಬನ್ನಿ ಎಂದು ಮನವಿ ಮಾಡಿಕೊಳ್ಳಬೇಕಾಯಿತು. ಭಾರತದಲ್ಲಿ ಫುಟ್ಬಾಲ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ನಮ್ಮ ಬೆನ್ನಿಗೆ ನಿಂತರೆ ನಮ್ಮಿಂದ ಇನ್ನಷ್ಟು ಉತ್ತಮ ಆಟವನ್ನು ಪ್ರದಶರ್ಿಸಲು ಸಾಧ್ಯವಿದೆ.

Friday, June 8, 2018

ಜ್ವರ ಬರಬೇಕು

ಜ್ವರ ಬರಬೇಕು
ಆಗೊಮ್ಮೆ, ಈಗೊಮ್ಮೆ

ಎರಡೋ ಮೂರೋ ಕಂಬಳಿಯ
ಹೊದ್ದು ಮಲಗಬೇಕು
ಕಟಕಟಿಸುವ ಚಳಿಯ ನಡುವೆಯೂ
ನಿನ್ನ ಜಪ ಮಾಡಬೇಕು|

ತಲೆಗೆ ಹತ್ತಿದ ಜ್ವರದ
ಬಾಧೆಯ ನಡುವೆ
ನಿನ್ನ ನೆನಪಾಗಬೇಕು
ನಿನ್ನ ಹೆಸರ ಹಲುಬಬೇಕು|

ತಲೆಗೆ ಹಾಕಿದ ತಣ್ಣೀರು
ಪಟ್ಟಿಯ ಬಿಸಿಯೆಲ್ಲವೂ ನಿನ್ನ
ತಬ್ಬುಗೆಯ ನೆನಪು ಮಾಡಬೇಕು
ಹಿತವೆನ್ನಿಸಬೇಕು|

ಪ್ಯಾರಾಸೆಟಮಾಲ್, ಸಿಪಿಎಮ್ಮಿನ
ಕಹಿಯ ನಡುವೆಯೂ
ನಿನ್ನ ಚುಂಬನದ ಅಮಲೇ
ನಾಲಗೆಯ ಆವರಿಸಬೇಕು |

ಜ್ವರ ಬರಬೇಕು
ನಿನ್ನ ನೆನಪಿನ ನೆಪಕ್ಕಾದರೂ|

Thursday, June 7, 2018

ಸಪ್ತಸಾಗರಾಚೆ ಇದ್ದರೂ ಭಾರತದ ಖ್ಯಾತಿ ಹೆಚ್ಚಿಸಿದ ಕನ್ನಡಿಗ ವಿಕಾಸ

ವಿಕಾಸ್ ಗೆದ್ದ ಚಿನ್ನದ ಪದಕಗಳು 3
ಬೆಳ್ಳಿಿ ಪದಕಗಳು 4
ಕಂಚಿನ ಪದಕಗಳು 3
ಡಿಸ್ಕಸ್ ಎಸೆತದಲ್ಲಿ ರಾಷ್ಟ್ರೀಯ ದಾಖಲೆ : ದೂರ - 66.28 ಮೀಟರ್


56 ವರ್ಷಗಳ ನಂತರ ಭಾರತಕ್ಕೆ ಕಾಮನ್ವೆಲ್ತ್  ಗೇಮ್‌ಸ್‌‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದ ಡಿಸ್ಕಸ್ ಥ್ರೋ, ಗುಂಡು ಎಸೆತಗಾರ ವಿಕಾಸ್ ಗೌಡ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾಾರೆ. ಮಿಲ್ಖಾ ಸಿಂಗ್‌ರ ನಂತರ ಭಾರತಕ್ಕೆ  ಅಥ್ಲೆಟಿಕ್ಸ್ ವಿಭಾಗದಲ್ಲಿ ವಿಕಾಸ್ ಗೌಡ ಚಿನ್ನವನ್ನು ಗೆದ್ದುಕೊಟ್ಟಿದ್ದರು.
ಅಮೆರಿಕ, ಚೀನಾ, ಆಸ್ಟ್ರೇಲಿಯಾ, ಇಂಗ್ಲೆಂಡ್  ಮುಂತಾದ ದೇಶಗಳ ಭಲಾಢ್ಯ ದೇಶಗಳ ಕ್ರೀಡಾಪಟುಗಳೇ ಅಥ್ಲೆಟಿಕ್ಸ್ ನ  ಡಿಸ್ಕಸ್ ಥ್ರೋ ಹಾಗೂ ಶಾಟ್‌ಪುಟ್ ಎಸೆತ ವಿಭಾಗಗಳಲ್ಲಿ ಗೆಲುವು ಸಾಧಿಸಿ ಏಕಸ್ವಾಮ್ಯ ಹೊಂದಿದ್ದ ಸಂದರ್ಭದಲ್ಲಿ ಭಾರತದ ವಿಕಾಸ್ ಗೌಡ ಅವರ್ಯಾರಿಗಿಂತಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟವರು.
34 ವರ್ಷದ ವಿಕಾಸ್ ಜನಿಸಿದ್ದು ಮೈಸೂರಿನಲ್ಲಿ. ಬರೋಬ್ಬರಿ 6 ಅಡಿ 9 ಇಂಚು ಎತ್ತರವಿದ್ದ ವಿಕಾಸ್ ಗೌಡ ಭಾರತದ ಪಾಲಿಗೆ ಭಲಭೀಮರೇ ಆಗಿದ್ದರು. ಅಮೆರಿಕದ ಮೆರಿಲ್ಯಾಂಡ್  ಫ್ರೆಡ್ರಿಕ್ಸ್ ನಲ್ಲಿ  ಬೆಳೆದವರು ವಿಕಾಸ್.  ಎಂಬಿಎ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ವಿಕಾಸ್ ಕ್ರೀಡಾಪಟುವಾಗಿ ಭಾರತವನ್ನು ಪ್ರತಿನಿಸುವ ನಿರ್ಧರಕ್ಕೆ ಬಂದರು. ಅಂದಹಾಗೇ ಇವರ ತೂಕ ಬರೋಬ್ಬರಿ 140 ಕೆಜಿ.
ವಿದೇಶದಲ್ಲಿ ವಾಸ ಮಾಡುತ್ತಿದ್ದರೂ ಭಾರತದ ಕಡೆಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದ ವಿಕಾಸ್ ಜಗತ್ತಿನ ವಿವಿಧ  ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಸುತ್ತಿದ್ದರು. ಇವರ ತಂದೆ ಶಿವೇ ಗೌಡರೇ ವಿಕಾಸ್‌ರ ಮೊದಲ ಗುರು. ಶಿವೇ ಗೌಡ ಅವರೂ ಕೂಡ ಮಾಜಿ ಅಥ್ಲಿಟ್ ಎನ್ನುವುದು ವಿಶೇಷ. ಏಷ್ಯನ್ ಗೇಮ್ಸ್ , ಕಾಮನ್ವೆಲ್‌ತ್‌ ಗೇಮ್‌ಸ್‌‌, ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದುಕೊಟ್ಟವರು ಇವರು.
ಸಾಧನೆ-ಪ್ರಶಸ್ತಿಗರಿ
ಡಿಸ್ಕಸ್ ಎಸೆತದಲ್ಲಿ ರಾಷ್ಟ್ರೀಯ ದಾಖಲೆಯನ್ನು ಸೃಷ್ಟಿಸಿರುವ ವಿಕಾಸ್ ಗೌಡ 66.28 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ವಯಕ್ತಿಕ ದಾಖಲೆಯನ್ನೂ ಮಾಡಿದ್ದಾರೆ. 2004ರಲ್ಲಿ ಅಥೆನ್‌ಸ್‌‌ನಲ್ಲಿ ನಡೆದಿದ್ದ ಓಲಿಂಪಿಕ್‌ನಲ್ಲಿ ಇವರು ಮೊಟ್ಟಮೊದಲು ಪಾಲ್ಗೊೊಂಡಿದ್ದರು. ತದನಂತರದಲ್ಲಿ 2008, 2012 ಹಾಗೂ 2016ರಲ್ಲಿ ಭಾರತವನ್ನು ಪ್ರತಿನಿಸಿದ್ದರು.
2014ರ ಗ್ಲಾಾಸ್ಗೋ ಕಾಮನ್ವೆೆಲ್‌ತ್‌ ಕ್ರೀಡಾಕೂಟದ ಡಿಸ್ಕಸ್ ಎಸೆತದಲ್ಲಿ 63.64 ಮೀಟರ್ ದೂರ ಎಸೆಯುವ ಮೂಲಕ 5 ದಶಕಗಳ ನಂತರ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟರು. ಅಲ್ಲದೇ ಚಿನ್ನ ಗೆದ್ದ ಭಾರತದ ಎರಡನೇ ಅಥ್ಲಿಟ್ ಎನ್ನುವ ಖ್ಯಾತಿಗೂ ಪಾತ್ರರಾದರು.
2005ರ ಏಷ್ಯನ್ ಚಾಂಪಿಯನ್‌ಷಿಪ್ ಡಿಸ್ಕಸ್ ಎಸೆತದಲ್ಲಿ ಬೆಳ್ಳಿಿಘಿ, 2010ರ ಗುವಾಂಗ್‌ಜೂ ಏಷ್ಯನ್ ಗೇಮ್‌ಸ್‌‌ನಲ್ಲಿ ಬೆಳ್ಳಿಿಘಿ, ಅದೇ ವರ್ಷ ಹೊಸದಿಲ್ಲಿಯಲ್ಲಿ ನಡೆದ ಕಾಮನ್ವೆೆಲ್‌ತ್‌ ಕ್ರೀಡಾಕೂಟದಲ್ಲಿ ಬೆಳ್ಳಿಿಘಿ, ಜಪಾನ್‌ನ ಕೋಬೆಯಲ್ಲಿ 2011ರಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್ ಡಿಸ್ಕಸ್ ಥ್ರೋೋದಲ್ಲಿ ಬೆಳ್ಳಿಿ, 2013ರಲ್ಲಿ ಪುಣೆಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ 2015ರಲ್ಲಿ ವೂಹಾನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಗೆದ್ದುಕೊಂಡರು. 2014ರಲ್ಲಿ ದ. ಕೋರಿಯಾದ ಇಂಚೋನ್‌ನಲ್ಲಿ ನಡೆದ ಏಶ್ಯನ್ ಗೇಮ್‌ಸ್‌‌ನಲ್ಲಿ ಬೆಳ್ಳಿಿಘಿ, 2017ರಲ್ಲಿ ‘ುವನೇಶ್ವರದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದು ವಿಕಾಸ್ ಸಾ‘ನೆ ಮಾಡಿದ್ದಾಾರೆ.
ವಿಕಾಸ್ ಸಾ‘ನೆಗೆ ‘ಾರತ ಸರ್ಕಾರ 2017ರಲ್ಲಿ ಪದ್ಮಶ್ರೀ ಪ್ರಶಸ್ತಿಿಯನ್ನು ನೀಡಿ ಗೌರವಿಸಿದೆ. ವಿಕಾಸ್ ಗೌಡರ ನಿವೃತ್ತಿಿಯನ್ನು ‘ಾರತೀಯ ಅಥ್ಲೆೆಟಿಕ್‌ಸ್‌ ೆಡರೇಶನ್ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದೆ. ನಿವೃತ್ತಿಿಯ ನಂತರದಲ್ಲಿ ವಿಕಾಸ್ ಎಂಬಿಎಯನ್ನು ಪೂರ್ಣಗೊಳೀಸಿ, ಉದ್ದಿಮೆಯಲ್ಲಿ ತೊಡಗಿಕೊಳ್ಳುವ ನಿರ್‘ಾರಕ್ಕೆೆ ಬಂದಿದ್ದಾಾರೆ ಎನ್ನುವುದು ಕುಟುಂಬದ ಸದಸ್ಯರ ಮಾಹಿತಿ. ಸಪ್ತ ಸಾಗರದ ಆಚೆ ವಾಸವಿದ್ದರೂ ‘ಾರತವನ್ನು ಪ್ರತಿನಿಸಿ, ಜನ್ಮ‘ೂಮಿಯ ಖ್ಯಾಾತಿಯನ್ನು ಎಲ್ಲೆೆಡೆ ಪಸರಿಸಿದ ವಿಕಾಸ್ ಸಾ‘ನೆಗೆ ಹ್ಯಾಾಟ್ಸಾ್ಾ.

Wednesday, June 6, 2018

ಇದೇ ಅಲ್ಲವೇ ಅಚ್ಛೇದಿನ್ ?


(ಸಹ ಬರಹಗಾರ : ಗುರುಪ್ರಸಾದ ಕಲ್ಲಾರೆ)

ಆ ಊರಿನಲ್ಲಿ ಇದುವರೆಗೂ ಜನಸಾಮಾನ್ಯರ ಪಾಲಿಗೆ ಬೆಳಕಾಗಿದ್ದುದು ಲಾಟಿನು, ಸೀಮೆ ಎಣ್ಣೆಯ ಬುಡ್ಡಿ ದೀಪಗಳು ಮಾತ್ರ. ಆಧುನಿಕ ಸಲಕರಣೆಗಳಾದ ಮಿಕ್ಸರ್, ಗ್ರೈಂಡರ್, ಇಸ್ತ್ರಿ, ಟಿವಿ ಇವ್ಯಾವುವೂ ಆ ಊರಿನಲ್ಲಿರಲಿಲ್ಲ. ಅಷ್ಟೇ ಏಕೆ ಮೊಬೈಲುಗಳು ಒಂದಿಬ್ಬರ ಬಳಿ ಇದ್ದರೂ ಅದಕ್ಕೆ ಚಾರ್ಜೇ ಇರುತ್ತಿರಲಿಲ್ಲ. ಈ ಎಲ್ಲ ಆಧುನಿಕ ಯಂತ್ರಗಳಿಗೆ ಅಗತ್ಯವಾದ ವಿದ್ಯುತ್ ಎಂಬುದೇ ಈ ಊರಿನಲ್ಲಿರಲಿಲ್ಲ. ವಿದ್ಯುತ್ ಗಾಗಿ ಈ ಊರಿನ ಗ್ರಾಮಸ್ಥರು ಏಳು ದಶಕಗಳಿಂದ ಕಾದು ಕುಳಿತಿದ್ದರು. ಕೊನೆಗೂ ಅವರ ಕಾಯುವಿಕೆಗೆ ಫಲ ಸಿಕ್ಕಿದೆ. ಹೆಬ್ಬಾರಗುಡ್ಡದ ಪಾಲಿಗೆ ಅಚ್ಛೇದಿನ್ ವಿದ್ಯುತ್ತಿನ ರೂಪದಲ್ಲಿ ಬಂದು ತಲುಪಿದೆ. ಮನೆ ಮನೆಯನ್ನು ಬೆಳಗಿಸಿದೆ.

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಂಕೋಲಾ ನೀಡಿದ ಕೊಡುಗೆ ಅವಿಸ್ಮರಣೀಯ. ಮಹಾತ್ಮಾ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಕಹಳೆ ಕರ್ನಾಟಕದಲ್ಲಿ ಪ್ರತಿಧ್ವನಿಸಿದ್ದು ಅಂಕೋಲಾದಲ್ಲಿ. ಇಂತಹ ಅಂಕೋಲಾ ತಾಲೂಕನ ಡೋಂಗ್ರಿ ಗ್ರಾಮ ಪಂಚಾಯತದ ವ್ಯಾಪ್ತಿಯಲ್ಲೇ ಇರುವ ಕುಗ್ರಾಮ ಹೆಬ್ಬಾರ ಗುಡ್ಡ. ಹೆಬ್ಬಾರಗುಡ್ಡ ಗ್ರಾಮ ಎಲ್ಲ ಇಲ್ಲಗಳ ನಡುವೆ ಕಳೆದು ಹೋಗಿರುವ ಊರು. ಈ ಊರು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣವಾದರೂ, ಊರಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಎನ್ನುವುದು ಮರೀಚಿಕೆಯೇ ಆಗಿತ್ತು. ವಿದ್ಯುತ್, ಸರ್ವ ಋತು ರಸ್ತೆ, ಶಾಲೆ, ಆಸ್ಪತ್ರೆ ಇವ್ಯಾವುದೂ ಇರಲಿಲ್ಲ. ಬಸ್ಸಿಗೋ, ರೇಷನ್ ಗೋ ಹೋಗೋಣ ಎಂದರೆ ಕಡಿದಾದ ಬೆಟ್ಟವನ್ನು ಇಳಿದು ಅಜಮಾಸು ೧೦ ಕಿಲೋಮೀಟರ್ ನಡೆದು ಹೋಗಬೇಕಾದ ದಾರುಣ ಸ್ಥಿತಿ. ಇಂತಹ ಊರಿಗೆ ವಿದ್ಯುತ್ ಕೊಡಿ ಎನ್ನುವುದು ಆ ಗ್ರಾಮದ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿತ್ತು. ಅದೀಗ ನನಸಾಗಿದೆ.

ವಿದ್ಯುತ್ತಿಗಾಗಿ ನಡೆದ ಹೋರಾಟ

ಅಂಕೋಲಾ ಮತ್ತು ಶಿರಸಿ ತಾಲೂಕಿನ ಗಡಿ ಭಾಗದ ಗ್ರಾಮದಲ್ಲಿರುವ ಈ ಹೆಬ್ಬಾರಗುಡ್ಡ ಸಮುದ್ರಮಟ್ಟದಿಂದ ಸುಮಾರು 2000 ಅಡಿ ಎತ್ತರದಲ್ಲಿದೆ. ತಾಲೂಕಾ ಕೇಂದ್ರದಿಂದ ಸುಮಾರು 58 ಕಿಲೋಮೀಟರ್ ದೂರದಲ್ಲಿದೆ ಇರುವ ಈ ಗ್ರಾಮದಲ್ಲಿ21 ಮನೆಗಳಿದ್ದು 125 ಜನರು ವಾಸಿಸುತ್ತಾರೆ. ಸಿದ್ದಿಗಳು ಹಾಗೂ ಹವ್ಯಕರು ಈ ಗ್ರಾಮದ ನಿವಾಸಿಗಳು. ದಟ್ಟ ಕಾಡಿನ ನಡುವೆ, ಕೊರಕಲು-ಮುರುಕಲು ರಸ್ತೆಯಲ್ಲಿ ಏರಿಳಿಯುತ್ತ ಹೋದರೆ ಈ ಗ್ರಾಮದ ದರ್ಶನ ಸಾಧ್ಯ. ವಿದ್ಯುತ್ತಿಗಾಗಿ ನಡೆಸಿದ ಹೋರಾಟಕ್ಕೆ ಮಿತಿಯೇ ಇಲ್ಲ. ಎರಡು ದಶಕಗಳಿಂದ ಜನಪ್ರತಿನಿಧಿಗಳಿಗೆ ಅರ್ಜಿಗಳ ಮೇಲೆ ಅರ್ಜಿ, ಮನವಿಗಳ ಮೇಲೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರದ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಗ್ರಾಮದ ದುಸ್ಥಿತಿಯನ್ನೂ ವಿವರಿಸಲಾಗಿತ್ತು. ತದ ನಂತರದಲ್ಲಿ ಕೆಲವು ಯುವಕರು ಹೆಬ್ಬಾರಗುಡ್ಡದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಬರಹಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನೂ ಕೈಗೊಂಡರು. ವಾಟ್ಸಾಪ್, ಟ್ವೀಟರ್, ಫೇಸ್ಬುಕ್ ಗಳ ಮೂಲಕ ದೇಶದ ಮೂಲೆ ಮೂಲೆಗೆ ಹೆಬ್ಬಾರಗುಡ್ಡದ ದುಸ್ಥಿತಿ ತಿಳಿಯುವಂತೆ ಮಾಡಿದರು. ಆದರೆ ಅವರ ಹೋರಾಟಕ್ಕೂ ಈಗ ಬೆಲೆ ಸಿಕ್ಕಿದೆ.

ರಾಜ್ಯ ಸರ್ಕಾರದ ನಿರಾಸಕ್ತಿ

ಊರಿಗೆ ವಿದ್ಯುತ್ ಕೊಡಿ ಎಂದು ಹೇಳುತ್ತಿದ್ದರೂ, ರಾಜ್ಯ ಸರ್ಕಾರ ವಿದ್ಯುತ್ ಸಂಪರ್ಕಕ್ಕಾಗಿ ರಾಜೀವ ಗಾಂಧಿ ಯೋಜನೆ, ಭಾಗ್ಯಜ್ಯೋತಿ ಯೋಜನೆಯನ್ನು ಘೋಷಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂದು ಕೊಡುತ್ತೇವೆ, ನಾಳೆ ವಿದ್ಯುತ್ ಕೊಡುತ್ತೇವೆ ಎನ್ನುವ ಭರವಸೆಗಳಲ್ಲಿಯೆ ಹೆಬ್ಬಾರ ಗುಡ್ಡದ ಜನರನ್ನು ಸಾಗಹಾಕಲಾಗುತ್ತಿತ್ತು. ವಿವಿಧ ಪತ್ರಿಕೆಗಳು ಹೆಬ್ಬಾರಗುಡ್ಡದ ದುಸ್ಥಿತಿಯ ಕುರಿತು, ಬುದ್ಧಿವಂತರ ಜಿಲ್ಲೆಯಲ್ಲಿರುವ ಕತ್ತಲ ಗ್ರಾಮದ ಕುರಿತು ಪದೇ ಪದೆ ಎಚ್ಚರಿಸುತ್ತಿದ್ದರೂ, ಈ ವರದಿಗಳಿಂದ ಪ್ರೇರೇಪಿತವಾದ ರಾಜ್ಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದ್ದರೂ ಹಿಂದಿನ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ. ಸದಾ ನಿದ್ದೆಯಲ್ಲಿದ್ದ ಸರ್ಕಾರದ ಪ್ರತಿನಿಧಿಗಳು ಭರವಸೆಯಲ್ಲಿಯೇ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಕಳೆದ ವಿಧಾನಸಭಾ ಚುನಾವಣೆಯನ್ನು ಭಹಿಷ್ಕಾರ ಮಾಡುವ ನಿರ್ಧಾರವನ್ನೂ ಮಾಡಿದ್ದರು.

ಹದಿನೈದೇ ದಿನದಲ್ಲಿ ಕಾರ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೀನದಯಾಳ ಉಪಾಧ್ಯಾಯ ಕುಟೀರಜ್ಯೋತಿ ಯೋಜನೆಯಡಿಯಲ್ಲಿ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಕಾರ್ಯದಲ್ಲಿ ಫಲಾನುಭವಿಯಾದದ್ದು ಹೆಬ್ಬಾರಗುಡ್ಡ. ದೇಶದ ಕೊಟ್ಟಕೊನೆಯ ಗ್ರಾಮ, ಕಟ್ಟ ಕಡೆಯ ಮನೆಯಲ್ಲಿಯೂ ವಿದ್ಯುತ್ ಬೆಳಕು ಮಿನುಗಬೇಕೆಂಬುದು ಪ್ರಧಾನಿ ಮೋದಿಯವರ ಕನಸು. ಹೆಬ್ಬಾರಗುಡ್ಡದಲ್ಲಿ ಈ ಕನಸು ನನಸಾಗಿದೆ. ರಾಜ್ಯದ ವಿಧಾನಸಭಾ ಚುನಾವಣೆ ಮುಗಿದು ೧೫ ದಿನಗಳು ಕಳೆಯುವಷ್ಟರಲ್ಲಿಯೇ ಹೆಬ್ಬಾರ ಗುಡ್ಡಕ್ಕೆ ವಿದ್ಯುತ್ ತಂತಿ ಎಳೆಯುವ, ಟಿಸಿ ಕೂರಿಸುವ ಸೇರಿದಂತೆ ವಿದ್ಯುತ್ ಸಂಪರ್ಕ ನೀಡುವ ಎಲ್ಲ ಕಾರ್ಯಗಳೂ ನಡೆದಿರುವುದು ವಿಶೇಷ.

ಪರಿಸರ ದಿನಾಚರಣೆಗೂ ಒಂದು ದಿನ ಮೊದಲು ಅಂದರೆ ಜೂ.೪ರಂದು ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರು ಉದ್ಘಾಟಿಸುವುದರೊಂದಿಗೆ ಹೆಬ್ಬಾರಗುಡ್ಡದ ಏಳು ದಶಕಗಳ ಕತ್ತಲಿಗೆ ಪೂರ್ಣವಿರಾಮ ಬಿದ್ದಿದೆ. ಆ ಗ್ರಾಮದಲ್ಲಿ ಇನ್ನು ಬೆಳಕು ರಾರಾಜಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ನೀಡಿದ್ದೇವೆ, ನೀಡುತ್ತೇವೆ ಎಂದು ಹೇಳಿದಾಗ ಅದನ್ನು ಆಡಿಕೊಂಡವರು, ನಕ್ಕವರು ಅದೆಷ್ಟೋ ಜನ. ಎಲ್ಲಿದೆ ಅಚ್ಛೇದಿನ್ ಎಂದು ಕೇಳಿದವರಿಗಂತೂ ಲೆಕ್ಖವೇ ಇಲ್ಲ ಬಿಡಿ. ಹೀಗೆ ಕೇಳಿದವರಿಗೆಲ್ಲ ಇದೀಗ ಹೆಬ್ಬಾರಗುಡ್ಡದ ಜನರು ಇಲ್ಲಿದೆ ಅಚ್ಛೇದಿನ್ ಎಂದು ಹೇಳುತ್ತಿರುವುದು ಮೋದಿ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಿಕ್ಕಿಲ್ಲ. ಅಚ್ಛೇದಿನ್ ಕುರಿತು ಕ್ಯಾತೆ ತೆಗೆಯುವವರಿಗೆ ನಮ್ಮೂರಿಗೆ ಬರುವಂತೆ ಹೇಳುತ್ತೇವೆ ಎನ್ನುತ್ತಾರೆ ಹೆಬ್ಬಾರಗುಡ್ಡದ ಗ್ರಾಮಸ್ಥರು. ಇದೇ ಅಲ್ಲವೇ ಪುಣ್ಯಕಾರ್ಯ. ಇದೇ ಅಲ್ಲವೇ ಸರ್ಕಾರದ ಯಶಸ್ಸು?


ಪತ್ರಕರ್ತರ ಗ್ರಾಮವಾಸ್ತವ್ಯದ ಪ್ರತಿಫಲ

ಜನಪ್ರತಿನಿಧಿಗಳಿಗೆ ಮನವಿ ನೀಡಿ ಬೇಸತ್ತ ಗ್ರಾಮಸ್ಥರು ಕೊನೆಗೊಮ್ಮೆ ಪತ್ರಕರ್ತರಿಗೆ ಗ್ರಾಮ ವಾಸ್ತವ್ಯ ಮಾಡಿಸುವ ನಿರ್ಧಾರವನ್ನು ಕೈಗೊಂಡರು. ಶಿರಸಿ, ಯಲ್ಲಾಪುರ, ಅಂಕೋಲಾ ಹಾಗೂ ಕಾರವಾರಗಳ ಕೆಲವು ಪತ್ರಕರ್ತರನ್ನು ಹೆಬ್ಬಾರಗುಡ್ಡಕ್ಕೆ ಕರೆದೊಯ್ದು, ಅಲ್ಲಿ ಒಂದು ರಾತ್ರಿ ಕಳೆಯುವಂತೆ ಮಾಡಿದರು. ಅಲ್ಲಿಗೆ ತೆರಳಿದ ಪತ್ರಕರ್ತರು ಆ ಊರಿನ ದುಸ್ಥಿತಿಯನ್ನು ಅರಿತು ರಾಜ್ಯಮಟ್ಟದಲ್ಲಿ ವರದಿ ಮಾಡಿದರು. ಈ ವರದಿಗಳಿಗೆ ತ್ವರಿತವಾಗಿ ಸ್ಪಂದಿಸಿದ ಜನಪ್ರತಿನಿಧಿಗಳು ಕ್ರಮ ಕೈಗೊಂಡಿದ್ದು ಉಲ್ಲೇಖನೀಯ.