Saturday, June 29, 2019

ರಾಜ್ಯದ ಜನತೆಗೆ ಮಂಕುಬೂದಿ ಎರಚುವ ಯತ್ನ ಏಕೆ? 1980ರ ಯೋಜನೆ 2019ಕ್ಕೆ ಸಾಧುವೇ?

ಮಾನ್ಯ ಜಯಚಂದ್ರ ಅವರೇ,

ಅಘನಾಶಿನಿ ನದಿಯಿಂದ ತುಮಕೂರಿಗೆ ಹಾಗೂ ಬೆಂಗಳೂರಿಗೆ ನೀರು ಹರಿಸಬೇಕೆಂಬ ನಿಮ್ಮ ಮನವಿ ಸಂಪೂರ್ಣ ಹಾಸ್ಯಾಸ್ಪದ ಎನ್ನಿಸುತ್ತಿದೆ. ಗುರುತ್ವಾಕರ್ಷಣ ಬಲಕ್ಕೆ ಸೆಡ್ಡು ಹೊಡೆಯುವಂತಹ ನಿಮ್ಮ ಚಿಂತನೆ ವಿಜ್ಞಾನಿಗಳನ್ನೂ ದಂಗು ಪಡಿಸಿದರೆ ಅಚ್ಚರಿ ಪಡಬೇಕಿಲ್ಲಘಿ.
ಎತ್ತಣ ಅಘನಾಶಿನಿ, ಎತ್ತಣ ತುಮಕೂರು, ಎತ್ತಣಂದೆತ್ತಣ ಸಂಬಂ‘ವಯ್ಯಾ? ಬಹುತೇಕ 420 ಕಿಲೋಮೀಟರ್ ದೂರದಲ್ಲಿನ ನದಿಯನ್ನು ಮೂರು ಸಾರಿ ಪಂಪ್ ಮೂಲಕ ಎತ್ತಿ, ಅದನ್ನು ಪೈಪ್ ಮೂಲಕ ತುಮಕೂರಿಗೆ ಹರಿಸುವಂತಹ ವಿಫಲ ಯೋಜನೆಯನ್ನು ಜಯಚಂದ್ರರೇ ಅದ್ಯಾವ ವೈಜ್ಞಾನಿಕ ಆಧಾರದ ಮೇಲೆ ಬೆಂಬಲಿಸಿದಿರಿ ಎನ್ನುವುದು ಅರ್ಥವಾಗುತ್ತಿಲ್ಲ.
ನಿಮ್ಮ ಮನವಿಯಲ್ಲಿ, 1980ರ ಜಲಸಂಬಂ ದೂರಗಾಮಿ ಯೋಜನೆ ಅನ್ವಯ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ನೀಡಿದ ನದಿ ಜೋಡಣಾ ವಿವರಗಳನ್ನು ನೀಡಿದ್ದೀರಿ. ಆದರೆ ನದಿ ಜೋಡಣೆಗೆ ಆದ್ಯತೆ ನೀಡುವ ನೀವು ಅಘನಾಶಿನಿ ನದಿ ಪಾತ್ರದ ವಾಸ್ತವಾಂಶಗಳನ್ನು ಮರೆಮಾಚಿದ್ದೀರಿ. ಅಘನಾಶಿನಿ ನದಿಯಲ್ಲಿ ಮಳೆಗಾಲದಲ್ಲಿ 100 ರಿಂದ 120 ಟಿಎಂಸಿಯಷ್ಟು ನೀರಿನ ಲಭ್ಯತೆ  ಇದೆ ಎಂದು ನಿಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದೀರಿ. ಆದರೆ ಅದೇ ನದಿಯ ಇನ್ನೊಂದು ಮುಖವನ್ನು ಗಮನಿಸಿದ್ದೀರಾ?
ಕಳೆದ ನಾಲ್ಕು ವರ್ಷಗಳಲ್ಲಿ ಅಘನಾಶಿನಿ ನದಿ ಎರಡು ಸಾರಿ ಸಂಪೂಣ ಬತ್ತಿ ಹೋಗಿದೆ. ಅಷ್ಟೇ ಏಕೆ ಅಘನಾಶಿನಿ ನದಿ ಕಣಿವೆಯ ಪಾತ್ರದಲ್ಲಿ ಕಳೆದ 10 ವರ್ಷಗಳಿಂದ ಅಸಮರ್ಪಕವಾಗಿ ಮಳೆಯಾಗುತ್ತಿದೆ. ವಾರ್ಷಿಕವಾಗಿ ಬೀಳುತ್ತಿದ್ದ ಮಳೆಯಲ್ಲಿ ಶೆ.20ಕ್ಕೂ ಅಕ ಕೊರತೆ ಕಂಡು ಬಂದಿದೆ. ಅಘನಾಶಿನಿ ನದಿಯಲ್ಲೇ ನೀರಿಲ್ಲ. ಇಲ್ಲದ ನೀರನ್ನು ಬೆಂಗಳೂರಿಗೆ, ತುಮಕೂರಿಗೆ ಹರಿಸುತ್ತೇವೆ ಎನ್ನುತ್ತೀರಲ್ಲ. ನಿಮ್ಮ ತಲೆಯಲ್ಲಿ ಏನಿದೆ ಎನ್ನುವುದೇ ಅರ್ಥವಾಗುತ್ತಿಲ್ಲ.
ನೀವೇ ಹೇಳಿದಂತೆ ಅಘನಾಶಿನಿ ನದಿ 1895 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. 117 ಕಿಲೋಮೀಟರ್ ದೂರ ಹರಿದು ಸಮುದ್ರವನ್ನು ಸೇರುತ್ತದೆ. ಈ ಅಘನಾಶಿನಿ ನದಿಯ ನೀರನ್ನೇ ಶಿರಸಿ, ಕುಮಟಾ ಹಾಗೂ ಹೊನ್ನಾವರ ಪ್ರದೇಶಗಳ ಜನಸಾಮಾನ್ಯರು ನೆಚ್ಚಿಕೊಂಡಿದ್ದಾರೆ. ಸಿದ್ದಾಪುರ ತಾಲೂಕಿನ ಅದೆಷ್ಟೋ ಸಹಸ್ರ ಸಹಸ್ರ ಕುಟುಂಬಗಳು ಕುಡಿಯುವ ನೀರಿಗೆ, ಜಮೀನುಗಳಿಗೆ, ಬೆಳೆ ಬೆಳೆಯಲು ಬಳಸುತ್ತಿದ್ದಾರೆ. ಅಘನಾಶಿನಿ ನದಿಯನ್ನು ತಿರುವು ಮಾಡಿದರೆ ಈ ಪ್ರದೇಶದಲ್ಲಿ ಉಂಟಾಗುವ ಕ್ಷೋಭೆಗೆ ಏನು ಪರಿಹಾರ ಹುಡುಕುತ್ತೀರಿ?
ಭೌಗೋಳಿಕವಾಗಿ ಅಘನಾಶಿನಿ ನದಿ ಹರಿಯುವ ಸ್ಥಳ ಬೆಂಗಳೂರಿಗಿಂತ 450 ಮೀಟರ್‌ಗಳಷ್ಟು ಕೆಳಗಿದೆ. ಇಷ್ಟು ಮೇಲೆ ನೀರನ್ನೆತ್ತುವುದು ಸುಲಭದ ಮಾತಲ್ಲ. ಹೀಗೆ ನೀರು ಹರಿಸುವ ಮಾರ್ಗ ಮಧ್ಯದಲ್ಲಿ  ಅಘನಾಶಿನಿ ಸಂರಕ್ಷಿತ ಅರಣ್ಯ ಪ್ರದೇಶ, ಶರಾವತಿ ಸಂರಕ್ಷಿತ ಅರಣ್ಯ ಪ್ರದೇಶಗಳು ಬರುತ್ತವೆ. ಅದಲ್ಲದೇ ಸಾಲು ಸಾಲು ಹೊಲಗಳು, ಅರಣ್ಯ ಪ್ರದೇಶಗಳಿವೆ. ಅದೆಲ್ಲದರ ಮಾರಣಹೋಮ ನಿಶ್ಚಿತ.
ಜಯಚಂದ್ರರೇ,

ನೀವು ತುಮಕೂರಿನ ಶಿರಾ ಕ್ಷೇತ್ರದಲ್ಲಿ 6 ಅವಗೆ ಶಾಸಕರಾಗಿ ಆಯ್ಕೆಯಾಗಿದ್ದೀರಿ, ಮಂತ್ರಿಗಳಾಗಿಯೂ ಕಾರ್ಯ ನಿರ್ವಹಿಸಿದ್ದೀರಿ. ಆ ಸಂದರ್ಭದಲ್ಲಿ  ತುಮಕೂರು ಜಿಲ್ಲೆಗಳಲ್ಲಿ ಕೆರೆಗಳನ್ನು ಹೂಳೆತ್ತಬಹುದಿತ್ತು. ಜಲ ಮೂಲಗಳ ಪುನಶ್ಚೇತನ ಮಾಡಬಹುದಿತ್ತು. ಆ ಸಂದರ್ಭದಲ್ಲಿ ಕುಂಭಕರ್ಣನ ನಿದ್ದೆ ಮಾಡಿದ್ದ ನಿಮಗೆ ಈಗ ಥಟ್ಟನೆ ಎಚ್ಚರವಾಯಿತೇ? ಮಲೆನಾಡಿನ ದಿನಗಳ ನೀರನ್ನು ತಿರುಗಿಸಿ ತಂದಾಗ ಮಾತ್ರ ಅನುಕೂಲ ಎಂದುಕೊಂಡಿರೇ? ನಿಮ್ಮಲ್ಲಿಯೇ ಇರುವ ಜಲಮೂಲಗಳ ಸಂರಕ್ಷಣೆಯ ಮಾರ್ಗಗಳನ್ನು ಬಿಟ್ಟು ದೂರದ ನದಿಯ ಮೇಲೇಕೆ ನಿಮ್ಮ ಕಣ್ಣು? ಅದ್ಯಾವ ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡಬೇಕೆಂದು ಅಘನಾಶಿನಿ ನದಿ ತಿರುವನ್ನು ಬೆಂಬಲಿಸುತ್ತೀರಿ?
ಅಘನಾಶಿನಿ ಇರಲಿ, ಶರಾವತಿ ಇರಲಿ, ಅಲ್ಲಿನ ಪರಿಸ್ಥಿತಿ ಯಾರಿಗೂ ಬೇಡ ಎನ್ನುವಂತಾಗಿದೆ. ಶರಾವತಿ ನದಿಗೆ ನಿರ್ಮಿಸಿರುವ ಲಿಂಗನಮಕ್ಕಿಯಲ್ಲಿ ಪ್ರತಿ ವರ್ಷ ನೀರಿನ ಸ್ಟೋರೇಜ್ ಪ್ರಮಾಣ ಇಳಿಕೆಯಾಗುತ್ತಲೇ ಇದೆ. ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಪ್ರಮಾಣದಲ್ಲಿ ಬಹುಪಾಲನ್ನು ಉತ್ಪಾದಿಸುವ ಲಿಂಗನಮಕ್ಕಿಯ ಅಣೆಕಟ್ಟೆಯಿಂದ ನೀರು ತಂದರೆ ರಾಜ್ಯದಲ್ಲಿ ವಿದ್ಯುತ್ ಅಭಾವ ಹೆಚ್ಚಾಗುವುದಿಲ್ಲವೇ?
ಪ್ರವಾಸೋದ್ಯಮಕ್ಕೂ ಹೊಡೆತ
ಅಘನಾಶಿನಿ ನದಿ ಉಂಚಳ್ಳಿ ಜಲಪಾತಕ್ಕೆ ಕಾರಣವಾಗಿದೆ. ಈ ಉಂಚಳ್ಳಿ ಜಲಪಾತಕ್ಕೆ ಪ್ರತಿವರ್ಷ ಲಕ್ಷಾಂತರ ಜನರು ‘ೇಟಿ ನೀಡುತ್ತಾರೆ. ಲೂಷಿಂಗ್ಟನ್ ಫಾಲ್ಸ್ ವಿದೇಶಗಳ ಮಟ್ಟದಲ್ಲಿಯೂ ಹೆಸರಾಗಿರುವ ಪ್ರಮುಖ ಜಲಪಾತಗಳಲ್ಲಿ ಒಂದು. ಅಘನಾಶಿನಿ ನದಿ ತಿರುವು ಮಾಡದರೆ ಉಂಚಳ್ಳಿ ಜಲಪಾತಕ್ಕೆ ನೀರಿನ ಬರ ಉಂಟಾಗಲಿದೆ. ಇದರಿಂದ ರಾಜ್ಯ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದು ಟಿ. ಬಿ. ಜಯಚಂದ್ರರ ತಲೆಗೆ ಹೋಗಿಲ್ಲವೇ?
ಅಘನಾಶಿನಿ ನದಿ ತಿರುವು ಯೋಜನೆ ಸಮರ್ಪಕ ಎನ್ನುವಂತಹ ಉದ್ಯಮಿ ಸ್ನೇಹಿ ಆಲೋಚನೆಗಳನ್ನು ಬಿಟ್ಟುಘಿ, ತುಮಕೂರಿಗೆ ಹಾಗೂ ಬೆಂಗಳೂರಿಗೆ ನೀರು ಒದಗಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳುವ ಕಡೆಗೆ ಚಿಂತನೆ ಮಾಡುವುದು ಅಗತ್ಯವಿದೆ. ಜಲಮೂಲಗಳಾದ ಕೆರೆ, ಕುಂಟೆಗಳ ಹೂಳೆತ್ತುವುದರ ಜತೆಗೆ ಕೆರೆಗಳನ್ನು ಅತಿಕ್ರಮಣ ಮಾಡಿ, ಬಿಲ್ಡಿಂಗ್‌ಗಳನ್ನು ಎಬ್ಬಿಸುವವರನ್ನು ತಡೆದು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಜರೂರತ್ತಿದೆ. ನೀರು ಇಂಗಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಹೊಣೆಗಾರಿಕೆ ಇದೆ. ಅರಣ್ಯೀಕರಣಕ್ಕೆ ಆದ್ಯತೆ ನೀಡಬೇಕಾಗಿದೆ. ಟಿ. ಬಿ. ಜಯಚಂದ್ರರು ಇಂತಹ ನೀರಿಂಗಿಸುವ ಯೋಜನೆಗಳ ಕುರಿತು ಆಲೋಚನೆ ಮಾಡಬೇಕೇ ಹೊರತು ಪರಿಸರದ ಕತ್ತು ಹಿಸುಕುವಂತಹ ಯೋಜನೆಗಳ ಕುರಿತಲ್ಲಘಿ.

ಇಂತಿ
ಯೋಜನೆಗಳ ಭಾರದಲ್ಲಿ ನಲುಗಿರುವ ಮಲೆನಾಡಿಗ




Saturday, June 22, 2019

ಗೋವಾ ಹತ್ಯಾಕಾಂಡಕ್ಕೆ ಚರ್ಚ್ ಕ್ಷಮೆ ಕೋರುವುದು ಯಾವಾಗ?


ಭಾರತದ ಇತಿಹಾಸದಲ್ಲಿ ಅದೆಷ್ಟೋ ನರಮೇಧಗಳು ಜರುಗಿದೆ. ಮುಸ್ಲೀಮರ ಧಾಳಿಗೆ ಲಕ್ಷ ಲಕ್ಷ ಜನರು ಬಲಿಯಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕ್ರೈಸ್ತ ಮಿಷನರಿಗಳ ದಾಳಿಗೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಿಂದೂಗಳು ಜೀವ ತೆತ್ತಿರುವುದು ಬಹುತೇಕರಿಗೆ ತಿಳಿದಿಲ್ಲ. ಹಿಂದೂಗಳ ಸಾವಿಗೆ ಸಾಕ್ಷಿಯಾಗಿರುವುದೇ ನಮ್ಮದೇ ಪಕ್ಕದ ರಾಜ್ಯ ಗೋವಾ.
ಗೋವಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಮ್ಮದೇ ರಾಜ್ಯಕ್ಕೆ ಅಂಟಿಕೊಂಡಿರುವ ಭಾರತದ ಅತ್ಯಂತ ಚಿಕ್ಕ ರಾಜ್ಯ ಗೋವಾ. ಸಮುದ್ರ ತೀರಗಳು, ಅಗ್ಗದ ಮದ್ಯ, ಢಾಳವಾಗಿರುವ ಪೋರ್ಚುಗೀಸ್ ಸಂಸ್ಕೃತಿ ಹೀಗೆ ಹಲವು ಕಾರಣಗಳು ಗೋವಾದ ವೈಶಿಷ್ಟ್ಯತೆಗೆ ಸಾಕ್ಷಿ. ದೇಶ-ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಜನರು ಗೋವಾಕ್ಕೆ ಭೇಟಿ ನೀಡುತ್ತಾರೆ. ಇಂತಹ ಗೋವಾ ಕರಾಳ ಇತಿಹಾಸವನ್ನು ಹೊಂದಿರುವುದು ಹೆಚ್ಚಿನವರಿಗೆ ಗೊತ್ತಿಲ್ಲ.
450 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ವಸಾಹತು ವ್ಯವಸ್ಥೆಯಲ್ಲಿ ನಲುಗಿದ ಗೋವಾ ಭಾರತದೊಳಕ್ಕೆ ಸೇರುವವರೆಗೂ ಅಲ್ಲಿ ನಡೆದ ಕರಾಳ ಘಟನೆಗಳು ಹೆಚ್ಚಿನವರಿಗೆ ತಿಳಿಯದಿರುವುದು ದುರಂತ. ಪೋರ್ಚುಗೀಸರ ಆಡಳಿತದ ಅವಧಿಯಲ್ಲಿ ಗೋವಾದಲ್ಲಿ ನಡೆದ ಭಯಾನಕ ಘಟನೆಗಳು ಎಂತವರನ್ನೂ ಬೆಚ್ಚಿ ಬೀಳಿಸುತ್ತವೆ.
1510ರಲ್ಲಿ ಆಲ್ಫೋನ್ಸ್ ಡಿ ಅಲ್ಬುಕರ್ಕ್ ಗೋವಾಕ್ಕೆ ಬಂದಾಗಿನಿಂದ ಅಲ್ಲಿ ದುರಂತದ ಪುಟಗಳು ತೆರೆದುಕೊಳ್ಳುತ್ತವೆ. ಅಲ್ಬುಕರ್ಕ್ ಗೋವಾಕ್ಕೆ ಬರುವುದಕ್ಕೂ ಮೊದಲು ಆ ಪ್ರದೇಶವೆಲ್ಲ ಬಿಜಾಪುರದ ಆದಿಲ್ ಖಾನ್ ಆಡಳಿತಕ್ಕೊಳಪಟ್ಟಿತ್ತು. ಗೋವಾದ ಜನರು ಆದಿಲ್ ಖಾನ್ ಎಂಬ ಮುಸ್ಲೀಂ ಆಡಳಿತಗಾರನ ಅಡಿಯಲ್ಲಿ ಕೆಲಸ ಮಾಡಲು ವಿರೋಧ ವ್ಯಕ್ತಪಡಿಸುತ್ತಿರುತ್ತಾರೆ. ಅದಕ್ಕಾಗಿ ಹೊನ್ನಾವರದ ದಂಡನಾಯಕ ತಿಮ್ಮಯ್ಯನ ಸಹಾಯವನ್ನೂ ಪಡದುಕೊಂಡು ಆದಿಲ್ ಖಾನ್‌ನ ವಿರುದ್ಧ ಹೋರಾಟ ನಡೆಸುತ್ತಿರುತ್ತಾರೆ.
ಏಕಾಂಗಿ ತಿಮ್ಮಯ್ಯ ತಾನೊಬ್ಬನೇ ಆದಿಲ್‌ಖಾನ್‌ನನ್ನು ಎದುರಿಸಲು ಕಷ್ಟಪಡುತ್ತಿರುತ್ತಾನೆ. ಈ ವೇಳೆ ಆತ ಆದಿಲ್ ಖಾನ್ ವಿರುದ್ಧ ಯುದ್ಧಕ್ಕೆ ಅಲ್ಬುಕರ್ಕ್ ಬಳಿ ಸಹಾಯ ಯಾಚಿಸುತ್ತಾನೆ. ಬಲಿಷ್ಠ ನೌಕಾಪಡೆ ಹೊಂದಿದ್ದ ಅಲ್ಬುಕರ್ಕ್ ಸಹಾಯದಿಂದ ಆದಿಲ್ ಖಾನ್‌ನನ್ನು ತಿಮ್ಮಯ್ಯ ಸೋಲಿಸುತ್ತಾನೆ. ಆ ನಂತರ ಅಲ್ಬುಕರ್ಕ್‌ನಿಗೆ ತಿಮ್ಮಯ್ಯ ಸಾಕಷ್ಟು ಕೊಡುಗೆಗಳನ್ನು ನೀಡಿ ಕಳಿಸುತ್ತಾನೆ. ಈ ವೇಳೆಗೆ ಗೋವಾದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರು. ಬೆರಳೆಣಿಕೆಷ್ಟು ಮುಸ್ಲೀಮರಿದ್ದರು.
ನಂತರ ಅಲ್ಬುಕರ್ಕ್‌ಗೆ ಗೋವಾದ ಮೇಲೆ ಕಣ್ಣು ಬಿತ್ತು. ಆತ ಅದನ್ನು ತನ್ನ ಕೈವಶ ಮಾಡಿಕೊಳ್ಳಲು ಯತ್ನಿಸಿದ. ಹೊನ್ನಾವರದ ದಂಡನಾಯಕ ತಿಮ್ಮಯ್ಯನನ್ನು ಬೆದರಿಸಿ ಗೋವಾವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದರೊಂದಿಗೆ ಗೋವಾದ 450 ವರ್ಷಗಳ ದುರಂತ ಅಧ್ಯಾಯ ಆರಂಭಗೊಳ್ಳುತ್ತದೆ. ಈ ದುರಂತದ ವಿವರಗಳನ್ನು ಗೋವಾದ ದುರಂತ ಅಧ್ಯಾಯವನ್ನು ಅಂಕಣಕಾರ್ತಿ ಶೆಫಾಲಿ ವೈದ್ಯ ವಿವರವಾಗಿ ಬಿಚ್ಚಿಟ್ಟಿದ್ದಾರೆ.
ಶೆಫಾಲಿ ವೈದ್ಯ ನೀಡಿದ ವಿವಿರಗಳ ಪ್ರಕಾರ, ತಿಮ್ಮಯ್ಯ ಪೋರ್ಚುಗೀಸರ ಬೆದರಿಕೆಗೆ ಮಣಿದ ನಂತರ ಗೋವಾದಲ್ಲಿ ಕರಾಳ ದಿನಗಳು ಆರಂಭಗೊಂಡವು. ಸಾಮೂಹಿಕ ಮತಾಂತರ, ವಿನಾಕಾರಣ ಶಿಕ್ಷೆಯನ್ನು ನೀಡುವ, ಕ್ರಿಶ್ಚಿಯನ್ ಮಿಷನರಿಗಳನ್ನು ವಿರೋಧಿಸುವವರನ್ನು ನೇಣಿಗೆ ಹಾಕುವಂತಹ ಕಠಿಣ ಕ್ರಮಗಳನ್ನು ಕೈಗೊಂಡಿರುವುದು ಹಲವರಿಗೆ ತಿಳಿದಿಲ್ಲ.
ಪೋರ್ಚುಗೀಸ್ ಆಡಳಿತ ಆರಂಭವಾದ ನಂತರ ಗೋವಾದಲ್ಲಿ ವ್ಯವಸ್ಥಿತಯವಾಗಿ ಮತಾಂತರಗಳು ಆರಂಭಗೊಂಡವು. ದೇವಸ್ಥಾನಗಳನ್ನು ನೆಲಸಮ ಮಾಡಲಾಯಿತು. ಅಂತಹ ಜಾಗಗಳಲ್ಲಿ ಚರ್ಚುಗಳು ನಿರ್ಮಾಣಗೊಂಡವು. ಬೆದರಿಸುವ ಮುಖಾಂತರ, ಆಮಿಷಗಳನ್ನು ಒಡ್ಡುವ ಮೂಲಕ ಹಾಗೂ ಇತರ ಹಲವು ಮಾರ್ಗಗಳ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಕಾರ್ಯಗಳು ನಡೆದವು.
16ನೇ ಶತಮಾನದಲ್ಲಿಯೇ ಯಾರು ಕ್ರಿಶ್ಚಿಯನ್‌ರನ್ನು ವಿರೋಧಿಸುತ್ತಾರೋ, ಕ್ರಿಶ್ಚಿಯನ್ ಆಚರಣೆಗಳನ್ನು ಕೈಗೊಳ್ಳುವುದಿಲ್ಲವೋ ಅಂತವರನ್ನು ಗೋವಾದಿಂದ ಹೊರಕ್ಕೆ ಓಡಿಸಲಾಯಿತು. ಗೋವಾದಲ್ಲಿ ಹಿಂದೂಗಳನ್ನು ಓಡಿಸಿದ ನಂತರ ಅಲ್ಲಿ ಪೋರ್ಚುಗೀಸರ ಹಿಡಿತ ಇನ್ನಷ್ಟು ಬಲಗೊಂಡಿತು. ಗೋವಾದ ಕೆಲವು ದ್ವೀಪಗಳಿಗೆ ಮಾತ್ರ ಮೊದ ಮೊದಲು ಸೀಮಿತರಾಗಿದ್ದ ಪೋರ್ಚುಗೀಸರು ನಂತರದಲ್ಲಿ ಆ ದ್ವೀಪಗಳಿಂದ ಮುಂದಡಿ ಇಟ್ಟರು. ಪ್ರಮುಖ ಸ್ಥಳಗಳಲ್ಲಿ ತಮ್ಮ ವಸಾಹತು ಸ್ಥಾಪಿಸಿದರು. ವಸಾಹತು ಸ್ಥಳದಲ್ಲಿ ಮತಾಂತರಗಳು ಅವ್ಯಾಹತವಾಗಿ ನಡೆದವು.
ಗೋವಾದಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಹಲವರು ಬಹುತೇಕ ಸಂದರ್ಭಗಳಲ್ಲಿ ಹಿಂದೂ ಆಚರಣೆಗಳನ್ನು ಮುಂದುವರಿಸಿದ್ದರು. ಮೂರ್ತಿಗೆ ಹೂವುಗಳನ್ನು ಇಡುವುದು, ಹಿಂದೂಗಳಂತೆ ಬಟ್ಟೆಗಳನ್ನು ತೊಡುವುದು, ದೀಪಗಳನ್ನು ಬೆಳಗುವುದು ಹೀಗೆ ಹಲವು ಸಂಪ್ರದಾಯಗಳನ್ನು ಮುಂದುವರಿಸಿದ್ದರು. ಅಲ್ಲದೇ ಕೆಲವರು ಮರಳಿ ಹಿಂದೂ ಧರ್ಮಕ್ಕೆ ಬರುವ ಯತ್ನವನ್ನೂ ಕೈಗೊಂಡರು. ಇದು ಪೋರ್ಚುಗೀಸರಿಗೆ ಸರಿ ಕಾಣಲಿಲ್ಲ.
ವಿಶೇಷವಾಗಿ ಆಗ ಅಲ್ಲಿ ಕ್ರೈಸ್ತ ಮಿಷನರಿಗಳ ಮುಂದಾಳತ್ವ ವಹಿಸಿದ್ದ  ಫ್ರಾನ್ಸಿಸ್  ಕ್ಸೇವಿಯರ್‌ಗೆ ಇದು ಸರಿ ಕಾಣಿಸಲಿಲ್ಲ. ಆತ ಹಿಂದೂಗಳನ್ನು ನಂಬಬಾರದು, ಹಿಂದುಗಳು ಎಂದಿಗೂ ನಂಬಿಕೆಗೆ ಅರ್ಹರಲ್ಲ  ಎಂದು ಹೇಳಿದ್ದಲ್ಲದೇ, ವ್ಯಾಟಿಕನ್‌ನಲ್ಲಿದ್ದ ಪೋಪ್‌ಗೆ ಒಂದು ಪತ್ರವನ್ನು ಬರೆಯುತ್ತಾನೆ. ಈ ಪತ್ರದಲ್ಲಿ ಧರ್ಮಾಚರಣೆಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ವಿಚಾರಣಾ ನ್ಯಾಯಾಲಯವನ್ನು ಆರಂಭಿಸಬೇಕು ಎಂದು ಆಗ್ರಹಿಸುತ್ತಾನೆ.
ಕ್ಯಾಥೋಲಿಕ್ ಆಚರಣೆಗಳನ್ನು ವಿರೋಧಿಸುವವರ ವಿರುದ್ಧ ಕ್ರಮ ಕೈಗೊಳ್ಳಲೆಂದೇ ಆರಂಭಗೊಂಡ ವಿಚಾರಣಾ ನ್ಯಾಯಾಲಯ (ಕೋರ್ಟ್ ಆಫ್  ಇನ್ಕ್ವಿಸಿಷನ್) ಹಲವು ಕರಾಳ ಅದ್ಯಾಯಗಳನ್ನು ಹೊಂದಿದೆ.
ಫ್ರಾನ್ಸಿಸ್ ಕ್ಸೇವಿಯರ್ ಪತ್ರಕ್ಕೆ ಮನ್ನಣೆ ನೀಡಿದ ಪೋರ್ಚುಗೀಸ್ ಸರ್ಕಾರ ಗೋವಾದಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್ ಆರಂಭಕ್ಕೆ ಒಪ್ಪಿಗೆ ನೀಡಿತು. ಹಳೆಯ ಗೋವಾದಲ್ಲಿದ್ದ ಆದಿಲ್ ಖಾನ್ ಅರಮನೆಯಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್ ಆರಂಬಿಸಲಾಯಿತು. ಈ ಅರಮನೆ ಆವರಣದಲ್ಲಿಯೇ ಬಹುದೊಡ್ಡ ಸೆರೆಮನೆಯನ್ನೂ ತೆರೆಯಲಾಯಿತು. ಈ ಅರಮನೆಯಲ್ಲಿ ನೆಲ ಮಾಳಿಗೆಗಳೂ ಇದ್ದವು. ಯಾರು ಪೋರ್ಚುಗೀಸರ ಹಾಗೂ ಕ್ರಿಶ್ಚಿಯನ್ನರ ವಿರುದ್ಧ ಧ್ವನಿ ಎತ್ತಿದರೋ ಅಂತವರನ್ನೆಲ್ಲ ಸರಣಿ ಸರಣಿಯಾಗಿ ಬಂಧಿಸಲಾಯಿತು. ಮೊದಲ ಹಂತದಲ್ಲಿ  ವಿರೋಧಿಗಳ ಆಸ್ತಿಯನ್ನು, ಸಂಪತ್ತುಗಳನ್ನು ವಶಪಡಿಸಿಕೊಂಡರೆ, ಎರಡನೇ ಹಂತದಲ್ಲಿ  ಕ್ರೂರ ಶಿಕ್ಷೆಯನ್ನು ನೀಡಿ ದಂಡಿಸಲಾಗುತ್ತಿತ್ತು. ವ್ಯಕ್ತಿಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತಿತ್ತು. ಬಿಸಿ ನೀರು ಸುರಿಯುವುದು, ಮೈಗೆ ಸೂಜಿಯಿಂದ ಚುಚ್ಚುವುದು, ಗುಪ್ತಾಂಗಗಳಿಗೆ ಸೂಜಿಯಿಂದ ಚುಚ್ಚುವುದು, ಹಗ್ಗದಿಂದ ನೇತುಹಾಕುವುದು ಹೀಗೆ ಹಲವು ಅಮಾನವೀಯ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಯಾರು ಈ ಶಿಕ್ಷೆಗಳಿಗೆ ಹೆದರಿ ಕ್ರಿಶ್ಚಿಯನ್ ಮತಕ್ಕೆ ಸೇರಿಕೊಳ್ಳಲು ಒಪ್ಪುತ್ತಾರೋ ಅಂತವರಿಗೆ ಶಿಕ್ಷೆ ನೀಡುವುದನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಇಂತಹ ಶಿಕ್ಷೆಗೂ ಹೆದರದವರನ್ನು ಸಾರ್ವಜನಿಕ ಸ್ಥಳದಲ್ಲಿ ಜೀವಂತವಾಗಿ ಸುಟ್ಟು ಹಾಕಲಾಗುತ್ತಿತ್ತುಘಿ.
ಫ್ರೆಂಚ್  ಪ್ರವಾಸಿ ಚಾರ್ಲ್ಸ್ ಧಿಲ್ಲೋನ್ ಗೋವಾದಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್‌ನಲ್ಲಿ ಒಂದೂವರೆ ವರ್ಷಗಳ ಕಾಲ ಶಿಕ್ಷೆಗೆ ಒಳಗಾಗಿದ್ದಘಿ. ಆದರೆ ಫ್ರೆಂಚ್  ಸರ್ಕಾರದ ಒತ್ತಡಕ್ಕೆ ಮಣಿದ ಪೋರ್ಚುಗೀಸ್ ಸರ್ಕಾರ ಆತನನ್ನು ಬಿಡುಗಡೆ ಮಾಡಿತ್ತು. ಈತ ಪ್ಯಾರಿಸ್‌ಗೆ ಮರಳಿದ ನಂತರ ಕೋರ್ಟ್ ಆಫ್  ಇನ್ಕ್ವಿಸಿಷನ್‌ನ ಕ್ರೂರ ಮುಖವನ್ನು ಪುಸ್ತಕವೊಂದರಲ್ಲಿ ಬರೆಯುವ ಮೂಲಕ ಅನಾವರಣಗೊಳಿಸಿದ್ದಾನೆ. ಕೋರ್ಟ್ ಆಫ್  ಇನ್ಕ್ವಿಸಿಷನ್ ನ ಕ್ರೂರ ಮುಖವನ್ನು ಅನಾವರಣಗೊಳಿಸಲು ಇರುವ ಪ್ರಮುಖ ಸಾಕ್ಷ್ಯಗಳಲ್ಲಿ ಚಾರ್ಲ್ಸ್ ಧಿಲ್ಲೋನ್ ಬರೆದ ಪುಸ್ತಕ ಪ್ರಮುಖ ಸಾಕ್ಷಿ ಎನ್ನಿಸಿಕೊಂಡಿದೆ.
ಗೋವಾದ ಹಿಂದೂಗಳ ದೌರ್ಭಾಗ್ಯ ಇಷ್ಟಕ್ಕೆ ಕೊನೆಗೊಳ್ಳುವುದಿಲ್ಲ. ಅವರು ಗೋವಾದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಪದೋನ್ನತಿ ಇರುತ್ತಿರಲಿಲ್ಲ, ಒಳ್ಳೆಯ ಸಂಬಳವಂತೂ ಇಲ್ಲವೇ ಇಲ್ಲ ಎನ್ನಬಹುದು. ಹಿಂದೂಗಳು ಗ್ರಾಮಸಭೆಗಳನ್ನು ನಡೆಸುವಂತಿರಲಿಲ್ಲಘಿ. ಧಾರ್ಮಿಕವಾಗಿ ಯಾವುದೇ ಕಾರ್ಯಕ್ರಮಗಳನ್ನು ಮಾಡುವಂತಿರಲಿಲ್ಲಘಿ. ಅಷ್ಟೇ ಏಕೆ ಭಕ್ತಿಗೀತೆಗಳನ್ನೂ ಸಹ ಹಾಡುವಂತಿರಲಿಲ್ಲಘಿ. ಈ ರೀತಿ ಯಾರಾದರೂ ಮಾಡಿದ್ದ ಪಕ್ಷದಲ್ಲಿ ಅಂತವರನ್ನು ಕೋರ್ಟ್ ಆಫ್  ಇನ್ಕ್ವಿಸಿಷನ್ ಹೆಸರಿನಲ್ಲಿ ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಲಾಗುತ್ತಿತ್ತು.
ಇಂತಹ ಮಾರಣಹೋಮಗಳ ಕಾರಣದಿಂದಲೇ ಕೋರ್ಟ್ ಆಫ್  ಇನ್ಕ್ವಿಸಿಷನ್ ಅತ್ಯಂತ ಹೀನಾಯ ಕಾನೂನು ಎಂದೇ ಕರೆಸಿಕೊಂಡಿದೆ. ಬಹುತೇಕ 252 ವರ್ಷಗಳ ಕಾಲ ಗೋವಾದಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್ ಜಾರಿಯಲ್ಲಿತ್ತು. ಪೋರ್ಚುಗೀಸರು ಗೋವಾವನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್‌ನ ದಾಖಲೆಗಳನ್ನೆಲ್ಲ ಬೆಂಕಿ ಹಾಕಿ ಸುಟ್ಟು ಹಾಕಿದ ಕಾರಣ ಈ ಕುರಿತು ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲಘಿ. ಆದರೆ ಇರುವ ದಾಖಲೆಗಳ ಪ್ರಕಾರ, ಗೋವಾದಲ್ಲಿ 65 ವರ್ಷಗಳ ಅವಧಿಯಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್ ಹೆಸರಿನಲ್ಲಿ ಬಂಧಿಸಿದವರ ಸಂಖ್ಯೆ 16 ಸಾವಿರಕ್ಕೂ ಅಧಿಕ. ಆ ದಿನಗಳ ಸಂದರ್ಭದಲ್ಲಿ ಗೋವಾದ ಜನಸಂಖ್ಯೆಯನ್ನು ಲೆಕ್ಖ ಹಾಕಿದರೆ ಇದು ಬಹುದೊಡ್ಡ ಸಂಖ್ಯೆಯಾದೀತು.
16ನೇ ಶತಮಾನದಿಂದ ಇಂದಿನವರೆಗೂ ಗೋವಾ ಅದೆಷ್ಟೋ ಬದಲಾಗಿದೆ. ಆದರೆ ಗೋವಾದಲ್ಲಿನ ಮಾರಣಹೋಮದ ಕಲೆಗಳು ಮಾತ್ರ ಈಗಲೂ ಕಾಣಿಸಿಕೊಳ್ಳುತ್ತಿವೆ. ಗೋವಾದಲ್ಲಿ ನಡೆದಂತಹ ಹಿಂದೂಗಳ ಮಾರಣಹೋಮಗಳು ಭಾರತದ ನೆಲದಲ್ಲಿ ಆಗಾಗ ನಡೆಯುತ್ತಲೇ ಇದೆ. ಕಾಶ್ಮೀರದಲ್ಲಿಘಿ, ಕೇರಳದಲ್ಲಿ, ಪಶ್ಚಿಮ ಬಂಗಾಳದಲ್ಲಿ, ಅಸ್ಸಾಂನಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಲೇ ಇದೆ. ಹಿಂದೂಗಳ ಹತ್ಯೆ ಮತ್ತೆ ಮತ್ತೆ ನಡೆಯುತ್ತಲೇ ಇದೆ. ಪ್ರಸ್ತುತ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ಮಾತನಾಡುವವರು ನಮ್ಮದೇ ಪಕ್ಕದ ಪುಟ್ಟ ರಾಜ್ಯ ಗೋವಾದ ನರಮೇಧಗಳನ್ನು ನೆನಪು ಮಾಡಿಕೊಳ್ಳಲೇಬೇಕಾಗುತ್ತದೆ. ಗೋವಾದ ರಕ್ತ ಸಿಕ್ತ ಇತಿಹಾಸಗಳ ಕುರಿತು ಕಣ್ಣಾಡಿಸುವ ಜರೂರತ್ತಿದೆ. ಶಾಂತಿ ಮಂತ್ರ ಜಪಿಸುವ ಚರ್ಚ್ ಕೋರ್ಟ್ ಆಫ್  ಇನ್ಕ್ವಿಸಿಷನ್ ಹೆಸರಿನಲ್ಲಿ ನಡೆಸಿದ ಸಹಸ್ರಾರು ಹಿಂದೂಗಳ ಹತ್ಯೆಯ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಿದೆ.
ಕೋರ್ಟ್ ಆಫ್  ಇನ್ಕ್ವಿಸಿಷನ್ ಆರಂಭಿಸಿ ಅದೆಷ್ಟೋ ಸಾವಿರ ಹಿಂದೂಗಳ ಹತ್ಯೆಗೆ ಕಾರಣವಾದ ್ರಾನ್ಸಿಸ್ ಕ್ಸೇವಿಯರ್‌ನ ದೇಹವನ್ನು ಗೋವಾದಲ್ಲಿ ಇಂದಿಗೂ ಸಂರಕ್ಷಿಸಿ ಇಡಲಾಗಿದೆ. ಬಹಳ ಪವಿತ್ರ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಹಿಂದೂಗಳ ಮಾರಣಹೋಮ ಮಾಡಿದ ಇಂತಹ ವ್ಯಕ್ತಿಯನ್ನು ಸಂತ ಪದವಿಗೂ ಏರಿಸಿರುವುದು ದುರಂತವಲ್ಲವೇ?
ಚರ್ಚ್ ಈ ಹಿಂದೆ ರವಾಂಡಾದಲ್ಲಿ  ನಡೆಸಿದ ನರಮೇಧಕ್ಕಾಗಿ ಕ್ಷಮೆಯನ್ನು ಕೇಳಿದೆ. ಯೆಹೂದಿಗಳ ಸರಣಿ ಹತ್ಯೆಗೂ ಕೂಡ ಚರ್ಚ್ ಕ್ಷಮೆಯನ್ನು ಯಾಚಿಸಿದೆ. ಆದರೆ ಗೋವಾದಲ್ಲಿ ಚರ್ಚ್ ಕೋರ್ಟ್ ಆಫ್  ಇನ್ಕ್ವಿಸಿಷನ್ ಹೆಸರಿನಲ್ಲಿ ನಡೆಸಿದ ಹಿಂದೂಗಳ ಹತ್ಯೆಯ ಕುರಿತು ಯಾವತ್ತೂ ಮಾತನಾಡಿಲ್ಲ. ಗೋವಾದಲ್ಲಿ 450 ವರ್ಷಗಳ ಕಾಲ ಹಿಂದೂಗಳಿಗೆ ಶಿಕ್ಷೆ ನೀಡಿ ಅವರನ್ನು ಕ್ರೂರವಾಗಿ ಹಿಂಸಿಸಿ, ಸಾಯಿಸಿದ್ದಕ್ಕೆ ಸಂಬಂಧಿಸಿದಂತೆ ಇದುವರೆಗೂ ಚಕಾರವೆತ್ತಿಲ್ಲಘಿ. ಚರ್ಚ್ ತನ್ನ ಮಾರಣಹೋಮಕ್ಕಾಗಿ ಗೋವಾದ ಜನತೆಯ ಕ್ಷಮೆ ಕೇಳುವುದು ಯಾವಾಗ? ಗೋವಾದ ಜನತೆಯನ್ನು ಹಿಂಸಿಸಿದ್ದಕ್ಕಾಗಿ ಪಾಪ ಪ್ರಾಯಶ್ಚಿತ್ತ, ಪಾಪ ನಿವೇದನೆ ಮಾಡಿಕೊಳ್ಳುವುದು ಯಾವಾಗ? ಚರ್ಚ್ ಗೋವನ್ನರ ಬಳಿ ಕ್ಷಮೆ ಕೇಳಿದಾಗ ಮಾತ್ರ ಅಲ್ಲಿ ನರಳಿ, ಕ್ರೂರವಾಗಿ ಸತ್ತ ಹಿಂದೂಗಳ ಆತ್ಮಕ್ಕೆ ಕೊಂಚ ನೆಮ್ಮದಿ ಸಿಗಲು ಸಾಧ್ಯ.

Sunday, June 16, 2019

ಯೋಜನೆ ರೂಪಿಸುವವರ ಅರೆಬೆಂದ ಚಿಂತನೆಗೆ ರಾಜ್ಯದ ನದಿಗಳು ಬಲಿ

ರಾಜ್ಯದ ಇನ್ನಷ್ಟು ನದಿಗಳ ಮೇಲೆ ಜನಪ್ರತಿನಿಧಿಗಳ ಹಾಗೂ ಉದ್ಯಮಿಗಳ ಕಣ್ಣು ಬಿದ್ದಿದೆ. ಎತ್ತಿನಹೊಳೆ ತಿರುವು ಎಂಬ ವಿಲ ಯೋಜನೆ ಕಣ್ಣ ಮುಂದಿದೆ. ಹೀಗಿದ್ದಾಗಲೇ ಇನ್ನೆರಡು ನದಿಗಳನ್ನು ತಿರುಗಿಸುವ ಕುರಿತು ಧ್ವನಿ ಎದ್ದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರನ್ನು ನೀಡುತ್ತೇವೆ ಎಂದು ಹೇಳುವ ಮೂಲಕ ಕೆಲವು ವರ್ಷಗಳ ಹಿಂದೆ ಎತ್ತಿನ ಹೊಳೆ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿತು. ಪ್ರತಿ ವರ್ಷ ಈ ಯೋಜನೆಗೆ ಕೋಟಿ ಕೋಟಿ ರೂಪಾಯಿಗಳನ್ನು ನೀಡುತ್ತಲೇ ಹೋಗುತ್ತಿದೆ. ಆದರೆ ಯೋಜನೆ ಮಾತ್ರ ಆಮೆ ಗತಿಯಲ್ಲಿ ಸಾಗುತ್ತಿದೆ. ಈ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿ ನದಿ ಪಾತ್ರ ಸಂಪೂರ್ಣ ಬಯಲಾಗಿ ಮತ್ತೆ ಕುಡಿಯುವ ನೀರಿಗೆ ತತ್ವಾರ ಎನ್ನಿಸುವ ಹಂತ ಬಂದರೂ ಅಚ್ಚರಿ ಪಡಬೇಕಿಲ್ಲಘಿ. ಈ ಯೋಜನೆ ವಿಲತೆಯ ಹಾದಿಯಲ್ಲಿ ಮುಖ ಮಾಡುತ್ತಿರುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಇನ್ನಷ್ಟು ನದಿಗಳನ್ನು ತಿರುಗಿಸುವ ಮಾತನಾಡುತ್ತಿರುವುದು ಮಾತ್ರ ದುರಂತದ ಸಂಗತಿ.

ರಾಜ್ಯ ಸರ್ಕಾರ ಇದೀಗ ಪ್ರಮುಖವಾಗಿ ಮೂರು ಯೋಜನೆಗಳ ಅನುಷ್ಟಾನಕ್ಕೆ ಚಿಂತನೆ ನಡೆಸುತ್ತಿದೆ. ಅಘನಾಶಿನಿ ಹಾಗೂ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತರುವುದು ಒಂದು ಯೋಜನೆಯಾದರೆ, ತುಂಗಭದ್ರಾ ನದಿ ನೀರನ್ನು ರಾಜ್ಯ ರಾಜಧಾನಿ ತರುವುದು ಇನ್ನೊಂದು ಯೋಜನೆ. ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ನೀರನ್ನು ಘಟಪ್ರಭಾ ಹಾಗೂ ಮಲಪ್ರಭಾ ನದಿಗೆ ಜೋಡಿಸುವುದು ರಾಜ್ಯ ಸರ್ಕಾರದ ಮುಂದಿರುವ ಇನ್ನೊಂದು ಯೋಜನೆ. ಈ ಮೂರು ಯೋಜನೆಗಳ ಮೂಲಕ ಮತ್ತೊಮ್ಮೆ ಪರಿಸರದ ಮಾರಣಹೋಮ ನಡೆಸುವ ಹುನ್ನಾರ ಉದ್ಯಮಿಗಳು ಹಾಗೂ ರಾಜಕಾರಣಿಗಳದ್ದು.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಯಾಗಿರುವ ಅಘನಾಶಿನಿಯ ಮೇಲೆ ಈಗಾಗಲೇ ರಾಜ್ಯ ನಾಯಕರ ಕಣ್ಣು ಬಿದ್ದಿದೆ. ಈ ನದಿಗೆ ಯಾವುದೂ ಯೋಜನೆಗಳಿಲ್ಲವಲ್ಲ ಎನ್ನುವ ಚಿಂತನೆ ಯಾರದ್ದೋ ತಲೆಯಲ್ಲಿ ಹೊಳೆದಿದ್ದೇ ತಡ, ಈ ನದಿಯನ್ನು ತಿರುಗಿಸುವ ಆಲೋಚನೆಗೆ ರಾಜ್ಯ ಸರ್ಕಾರ ಮುಂದಿಟ್ಟುಕೊಂಡಿದೆ. ಅಘನಾಶಿನಿ ನದಿಗೆ ಅಣೆಕಟ್ಟನ್ನು ಕಟ್ಟಿಘಿ, ಅಲ್ಲಿಂದ ಸುರಂಗ ಮಾರ್ಗದ ಮೂಲಕ 30 ಕಿಲೋಮೀಟರ್ ದೂರದ ಶರಾವತಿ ನದಿಗೆ ನಿರ್ಮಿಸಲಾಗಿರುವ ಲಿಂಗನಮಕ್ಕಿ ಅಣೆಕಟ್ಟಿಗೆ ಆ ನೀರನ್ನು ಸರಬರಾಜು ಮಾಡುವುದು ಯೋಜನೆಯ ಮೊದಲ ಹಂತ. ನಂತರ ಲಿಂಗನಮಕ್ಕಿಯಲ್ಲಿನ ನೀರನ್ನು ಪಂಪ್ ಮಾಡಿ ಎತ್ತಿ ಅದನ್ನು 400 ಕಿಲೋಮೀಟರ್ ದೂರದ ಬೆಂಗಳೂರು ನಗರಿಗೆ ತರುವುದು ಹಲವರ ಹುನ್ನಾರ. ಈ ಕುರಿತು ಹಲವು ತಜ್ಞರು ಯೋಜನಾ ವರದಿಯನ್ನು ಮಂಡಿಸಿದ್ದಾರೆ. ತನ್ಮೂಲಕ ಎರಡು ನದಿಗಳ ಹತ್ಯೆಗೆ ಅಂಕಿತವನ್ನೂ ಹಾಕಲಾಗಿದೆ.

ಭೌಗೋಳಿಕವಾಗಿ ನೋಡಿದಾಗ ಈ ಯೋಜನೆ ಅತ್ಯಂತ ಕಷ್ಟಕರವಾದುದು. ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿ ಇರುವ ಭೌಗೋಳಿಕ ಪ್ರದೇಶಕ್ಕಿಂತ ಶರಾವತಿ ನದಿಯ ಲಿಂಗನಮಕ್ಕಿ ಪ್ರದೇಶ ಎತ್ತರದಲ್ಲಿದೆ. ಈ ಲಿಂಗನಮಕ್ಕಿ ಅಣೆಕಟ್ಟಿಗಿಂತಲೂ ಕನಿಷ್ಟ 500ಮೀಟರ್‌ನಷ್ಟು ಎತ್ತರದಲ್ಲಿ ಬೆಂಗಳೂರು ನಗರಿಯಿದೆ. ಹೀಗಿದ್ದಾಗ ಕೆಳಗಿನ ಪ್ರದೇಶದಿಂದ ಮೇಲ್ಮಟ್ಟದಲ್ಲಿರುವ ಪ್ರದೇಶಕ್ಕೆ ನೀರನ್ನು ಹರಿಸುವುದು ಹೇಗೆ ಸಾಧ್ಯ ಎನ್ನುವುದು ಪರಿಸರವಾದಿಗಳ ಪ್ರಶ್ನೆ. ಇದಕ್ಕೆ ಪಂಪ್ ಮೂಲಕ, ಏತ ವ್ಯವಸ್ಥೆ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದು ಯೋಜನೆಯನ್ನು ರೂಪಿಸಿದವರ ಉತ್ತರ. 420 ಕಿಲೋಮೀಟರ್ ದೂರದಿಂದ, ಭೌಗೋಳಿಕ ಸವಾಲುಗಳನ್ನು ಎದುರಿಸಿ ನೀರು ತರುವ ಯೋಜನೆಗೆ ಏನಿಲ್ಲವೆಂದರೂ ಕನಿಷ್ಟ 1000-1500 ಕೋಟಿ ರೂಪಾಯಿಗಳು ಬೇಕೇ ಬೇಕು.

 ನೀರು ಹರಿಸಲು ಹಾಕುವ ಪೈಪ್‌ಗಳ ಬಳಕೆ, ಅದಕ್ಕಾಗಿ ದೊಡ್ಡ ದೊಡ್ಡ ಯಂತ್ರಗಳ ಅವಲಂಬನೆ, ನೀರು ಪೈಪ್ ಮಾರ್ಗ ಮಧ್ಯದಲ್ಲಿನ ಅರಣ್ಯಗಳ ನಾಶ, ರೈತರ ಜಮೀನು ವಶಪಡಿಸಿಕೊಳ್ಳುವಿಕೆ ಹೀಗೆ ಹಲವು ಸವಾಲುಗಳನ್ನು ಎದುರಿಸುವುದು ಅನಿವಾರ್ಯ. ಇದೆಲ್ಲವನ್ನೂ ಮೀರಿ ಬೆಂಗಳೂರಿಗೆ ನೀರು ತರುತ್ತೇನೆ ಎಂದು ನಿಂತರೆ ಅದರಿಂದ ಲಾಭವಾಗುವುದು ಯೋಜನೆಯ ಗುತ್ತಿಗೆ ಹಿಡಿದ ಉದ್ಯಮಿಗೆ ಮಾತ್ರ.

ಮಲೆನಾಡು ಬರಗಾಲದಿಂದ ತತ್ತರಿಸುತ್ತಿದೆ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಅಘನಾಶಿನಿ ಹಾಗೂ ಶರಾವತಿ ನದಿಗಳಲ್ಲಿ ನೀರು ತೀರಾ ಕಡಿಮೆಯಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಘನಾಶಿನಿ ನದಿ ಎರಡು ಸಾರಿ ಹರಿವು ನಿಲ್ಲಿಸಿದೆ. ಶರಾವತಿ ನದಿಗೆ ನಿರ್ಮಿಸಲಾಗಿರುವ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿಯೂ ನೀರು ಸಾಕಷ್ಟಿಲ್ಲ ಎನ್ನುವ ಮಾತುಗಳು ಆಗೀಗ ಕೇಳಿ ಬಂದಿದೆ. ಸಾವಿರಾರು ಕೋಟಿ ಖರ್ಚು ಮಾಡಿದ ನಂತರವಾದರೂ ಬತ್ತಿದ ನದಿಗಳಿಂದ ಬೆಂಗಳೂರಿಗೆ ನೀರು ತಲುಪುತ್ತದೆ ಎನ್ನುವುದಕ್ಕೆ ಯಾವ ಗ್ಯಾರಂಟಿ?

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತುಂಗಭದ್ರಾ ನದಿಯ ನೀರನ್ನು ಬೆಂಗಳೂರಿಗೆ ತರುವುದಾಗಿ ಹೇಳಿದ್ದಾರೆ. ತುಂಗಭದ್ರಾ ನದಿಯ ನೀರನ್ನು ಬೆಂಗಳೂರಿಗೆ ತಂದರೆ, ಸಿಲಿಕಾನ್ ಸಿಟಿಯ ಜಲದಾಹ ತೀರಲಿದೆ ಎಂದು ಹೇಳಿದ್ದಾರೆ. ಎತ್ತಣ ತುಂಗಭದ್ರಾ ನದಿ, ಎತ್ತಣ ಬೆಂಗಳೂರು? ಬಕಾಸುರ ನಗರಿ ಬೆಂಗಳೂರಿನ ಜಲದಾಹ ತೀರಿಸಲು 400-500 ಕಿಲೋಮೀಟರ್ ದೂರದ ತುಂಗಭದ್ರಾ ನದಿಯಿಂದ ನೀರು ತರುವ ಯೋಜನೆ ಸಾಧ್ಯವೇ? ಜನಸಾಮಾನ್ಯನೂ ಕೂಡ ಈ ಕುರಿತು ನಕ್ಕುಬಿಡಬಹುದು. ಆದರೆ ರಾಜ್ಯ ಸರ್ಕಾರದ ಕಿವಿಗೆ ಇಂತಹ ಯೋಜನೆಯನ್ನು ತುಂಬುವ, ತನ್ಮೂಲಕ ಉದ್ಯಮಿಗಳ ಕಿಸೆ ಭರ್ತಿ ಮಾಡುವಂತಹ ಕಾರ್ಯಗಳಿಗೆ ಸಲಹೆ ನೀಡುವ ಯೋಜನಾಧಿಕಾರಿಗಳು ಇಂತಹ ಯೋಜನೆಗಳು ಸಾಧ್ಯ ಎನ್ನುತ್ತಾರೆ.

ಅಘನಾಶಿನಿ-ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತರುವಲ್ಲಿ ಎದುರಾಗುವಂತಹ ಭೌಗೋಳಿಕ ಸಮಸ್ಯೆಗಳೇ, ತುಂಗಭದ್ರಾ ನದಿಯಿಂದ ಬೆಂಗಳೂರಿಗೆ ನೀರು ತರುವಂತಹ ಯೋಜನೆಗೂ ಎದುರಾಗುತ್ತವೆ. ಅಲ್ಲದೇ ಮಾರ್ಗ ಮಧ್ಯದಲ್ಲಿ ಲವತ್ತಾದ ಗದ್ದೆಗಳು, ತೋಟಗಳು ಈ ಯೋಜನೆಗೆ ತಲೆಗೊಡಬೇಕಾಗುತ್ತದೆ. ಈ ಯೋಜನೆ ಕೂಡ ಭೌಗೋಳಿಕ ಕಾರಣಗಳಿಂದ ವಿಲವಾಗುವ ಸಾಧ್ಯತೆಗಳೇ ಹೆಚ್ಚು.

ಉತ್ತರ ಕನ್ನಡ ಜಿಲ್ಲೆಯ ಇನ್ನೊಂದು ಪ್ರಮುಖ ನದಿ ಕಾಳಿ. ಜೋಯಿಡಾದಲ್ಲಿ ಹುಟ್ಟಿ ಕಾರವಾರದ ಬಳಿ ಸಮುದ್ರ ಸೇರುವ ಪ್ರಮುಖ ನದಿ. ಐದಕ್ಕೂ ಅಧಿಕ ಅಣೆಕಟ್ಟುಗಳನ್ನು ಹೊಂದಿರುವ, ಕೈಗಾ ಅಣುಸ್ಥಾವರಕ್ಕೆ ಪ್ರತಿ ಕ್ಷಣ ನೀರು ಉಣ್ಣಿಸುತ್ತಿರುವ ನದಿ. ಈ ನದಿಯ ನೀರನ್ನು ಅಮೃತಧಾರಾ ಎಂಬ ಯೋಜನೆಯ ಹೆಸರಿನಲ್ಲಿ ಘಟಪ್ರಭಾ-ಮಲ್ರಭಾ ನದಿಗೆ ಜೋಡಿಸುವುದು ಸರ್ಕಾರದ ಇನ್ನೊಂದು ಯೋಜನೆ.

ಬೆಳಗಾವಿ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ 5400 ಕೋಟಿ ರೂಪಾಯಿಗಳ ವೆಚ್ಚದ ಯೋಜನೆ ಇದು. ಕಾಳಿ ನದಿಯಲ್ಲಿ ಹರಿಯುವ 10-20 ಟಿಎಂಸಿ ನೀರನ್ನು ಬಳಸಿಕೊಳ್ಳುವ ಚಿಂತನೆ ಈ ಯೋಜನೆಯದ್ದುಘಿ. ಅಂದಹಾಗೆ ಈ ಯೋಜನೆಗೆ ವರದಿ ಸಲ್ಲಿಸುತ್ತಿರುವುದು ಉದ್ಯಮಿ ಸಂಗಮೇಶ ನಿರಾಣಿಯವರು.

ಬಯಲು ಸೀಮೆಯ ಈ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಲು 10-20 ಟಿಎಂಸಿ ನೀರು ಬಳಸುವುದರಿಂದ ಕಾಳಿ ನದಿ ಬರಿದಾಗುವುದಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಕರ್ನಾಟಕದಲ್ಲಿ ಪ್ರತಿ ವರ್ಷ ಬೀಳುವ ಮಳೆಯಿಂದ ವಾರ್ಷಿಕ 3,600 ಟಿಎಂಸಿ ನೀರು ದೊರೆಯುತ್ತದೆ. ಅದರಲ್ಲಿ 1,600 ಟಿಎಂಸಿ ನೀರನ್ನು ಮಾತ್ರ ಕೃಷಿ ಕುಡಿವ ನೀರು, ಕೆಗಾರಿಕೆ ನೀರಾವರಿ ಯೋಜನೆ ಗಳಿಗೆ ಬಳಸಿ 2,000 ಟಿಎಂಸಿ ನೀರು ಸಮುದ್ರ ಸೇರುತ್ತದೆ ಎನ್ನುವುದು ನಿರಾಣಿಯವರು ನೀಡುವ ಉತ್ತರ. ಆದರೆ, ನದಿ ತಿರುವಿನಿಂದ ಆಗುವ ಅಡ್ಡ ಪರಿಣಾಮಗಳ ಕುರಿತು ಅವರು ಎಂದಿಗೂ ಮಾತನಾಡುವುದಿಲ್ಲಘಿ.

ಕಾಳಿ ನದಿಯಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ನದಿಯನ್ನು ತಿರುಗಿಸುವುದರಿಂದ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಎದುರಾಗುತ್ತದೆ. ಕಾಳಿ ನದಿಯ ನೀರನ್ನೇ ಬಳಸುವ ದಾಂಡೇಲಿಯ ಕಾಗದ ಕಾರ್ಖಾನೆಗೆ ಸಮಸ್ಯೆ ಆಗಬಹುದು. ಹಳಿಯಾಳ, ದಾಂಡೇಲಿ ನಗರಗಳ ಕುಡಿಯುವ ನೀರಿಗೆ ಸಮಸ್ಯೆ ಆಗಬಹುದು. ಅಷ್ಟೇ ಏಕೆ, ಕೈಗಾ ಅಣುಸ್ಥಾವರಕ್ಕೆ ನೀರಿನ ಕೊರತೆಯೂ ಆಗಬಹುದು. ಕೈಗಾ ಅಣುಸ್ಥಾವರಕ್ಕೆ ನೀರಿನ ಸರಬರಾಜು ನಿಂತರೆ ಆಗುವ ಪರಿಣಾಮವನ್ನು ಸಂಗಮೇಶ ನಿರಾಣಿಯವರು ಊಹಿಸಿದ್ದಾರೆಯೇ ಎನ್ನುವುದು ಪರಿಸರವಾದಿಗಳ ಪ್ರಶ್ನೆ.

ಭೌಗೋಳಿಕವಾಗಿ ನೋಡಿದಾಗ ಕಾಳಿ ನದಿಗಿಂತ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಮೇಲ್ಮಟ್ಟದಲ್ಲಿದೆ. ಕಾಳಿ ನದಿಯಿಂದ ಏತ ನೀರಾವರಿಯೋ ಅಥವಾ ಇನ್ಯಾವುದೇ ತಾಂತ್ರಿಕ ವಿಧಾನಗಳ ಮೂಲಕ ನೀರನ್ನು ಎತ್ತುವುದು ಅನಿವಾರ್ಯ. ನಿರಾಣಿಯವರು ಹೇಳಿರುವುದನ್ನೇ ಗಣನೆಗೆ ತೆಗೆದುಕೊಂಡರೆ, ಹೀಗೆ ನೀರೆತ್ತುವ ಪ್ರದೇಶ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಸಂರಕ್ಷಿತ ಅರಣ್ಯ ವಲಯದಲ್ಲಿ ಇಂತಹದ್ದೊಂದು ಯೋಜನೆಯನ್ನು ಅನುಷ್ಠಾನಕ್ಕೆ ತಂದರೆ ಅದರಿಂದ ಉಂಟಾಗುವ ಘೋರ ಪರಿಣಾಮವನ್ನು ಅವರು ಆಲೋಚಿಸಿದ್ದಾರೆಯೇ? ಹೀಗಿದ್ದೂ ಇಂತಹ ಯೋಜನೆಗಳನ್ನು ರೂಪಿಸುತ್ತಿರುವುದು ಏಕೆ ಎನ್ನುವುದು ಪರಿಸರವಾದಿಗಳ ಪ್ರಶ್ನೆಘಿ.

ಯೋಜನೆ ರೂಪಿಸುವವರ ತಲೆಯಲ್ಲಿ ಅದ್ಯಾವ ಭೂತ ಹೊಕ್ಕಿದೆಯೋ? ಅಥವಾ ಅವರ ತಲೆಯಲ್ಲಿ ಮೆದುಳು ಇದೆಯೋ ಅಥವಾ ಬೇರೆ ಇನ್ನೇನೋ ಎನ್ನುವ ಅನುಮಾನ ಮೂಡದೇ ಇರುತ್ತದೆಯೇ? ಗುರುತ್ವಾಕರ್ಷಣ ಶಕ್ತಿಗೆ ಸೆಡ್ಡು ಹೊಡೆಯುವಂತಹ ಚಿಂತನೆಗಳು ಇಂತಹ ಅರೆಬೆಂದ ಯೋಜನಾಧಿಕಾರಿಗಳಿಂದ ಮಾತ್ರ ಸಾಧ್ಯಘಿ.

ಉದ್ಯಮಿಗಳಿಗೆ ಲಾಭ ಮಾಡಿಕೊಡುವಂತಹ ಇಂತಹ ಯೋಜನೆಗಳ ಅಗತ್ಯ ರಾಜ್ಯಕ್ಕಿದೆಯೇ? ಕುಡಿಯುವ ನೀರಿನ ಹೆಸರಿನಲ್ಲಿ ಉದ್ಯಮಿಗಳ ಕಿಸೆಯನ್ನೇಕೆ ಭರ್ತಿ ಮಾಡಬೇಕು? ಅದರ ಬದಲು ಜಲ ಮೂಲಗಳಾದ ಕೆರೆ, ಕುಂಟೆಗಳನ್ನು ಹೂಳೆತ್ತಬಹುದಲ್ಲಘಿ? ನೀರಿಂಗಿಸುವ ಯೋಜನೆಗಳನ್ನು ಕೈಗೊಳ್ಳಬಹುದಲ್ಲ. ಕೆರೆ ಒತ್ತುವರಿಯನ್ನು ತೆರವುಗೊಳಿಸಬಹುದಲ್ಲವಾ? ಇಂತಹ ಪರಿಣಾಮಕಾರಿ ಯೋಜನೆಗಳೇಕೆ ಸರ್ಕಾರಕ್ಕೆ ಕಾಣಿಸುತ್ತಿಲ್ಲ? ಇಂತಹ ಯೋಜನೆಗಳ ಮೂಲಕ ಸರ್ಕಾರ ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಆಗುವುದು ಯಾವಾಗ? ದೊಡ್ಡ ದೊಡ್ಡ ಯೋಜನೆಗಳ ಹೆಸರಿನಲ್ಲಿ ಜನಸಾಮಾನ್ಯರ ಕಣ್ಣುಕಟ್ಟುವ ಮೂಲಕ ಹಣವನ್ನು ಉದ್ಯಮಿಗಳ ಕಿಸೆಗೆ ಸುರಿಯುವುದನ್ನು ಸರ್ಕಾರ ನಿಲ್ಲಿಸಲಿ ಎನ್ನುವುದು ಜನಸಾಮಾನ್ಯರ ಆಶಯ. 

Friday, June 14, 2019

ಅಘನಾಶಿನಿ ಕಣಿವೆಯಲ್ಲಿ -34



ಮರುದಿನ ಬಾಬುವಿನ ಮನೆಯ ಬಳಿ ಹೋದವರಿಗೆ ಬಹುದೊಡ್ಡ ಆಘಾತವಾಗಿತ್ತು. ಬಾಬುನನ್ನು ಕರೆದುಕೊಂಡು ಹೋಗಿ ಗಂಧ ಚೋರರು ಹಾಗೂ ಅಕ್ರಮ ದಂಧೆ ಮಾಡುವವರನ್ನು ಹುಡಕಬೇಕು ಎಂದುಕೊಂಡಿದ್ದ ಪ್ರದೀಪ, ವಿಕ್ರಮ ಹಾಗೂ ವಿನಾಯಕರು ತಬ್ಬಿಬ್ಬಾಗಿದ್ದರು.
ಬಾಬುವಿನ ಮನೆಯ ಮುಂದೆ ಬಹಳಷ್ಟು ಜನರು ಸೇರಿದ್ದರು. ಯಾರೋ ಒಬ್ಬರು ಮುಂಜಾನೆ ಬಾಬುವಿನ ಮನೆಗೆ ಬಂದು ಬಾಗಿಲು ಬಡಿದಿದ್ದರೆಂತೆ. ಎಷ್ಟು ಹೊತ್ತಾದರೂ ಬಾಗಿಲು ತೆಗೆಯದೇ ಇದ್ದಿದ್ದನ್ನು ನೋಡಿ ಅನುಮಾನಗೊಂಡು, ಅವರೇ ಮನೆಯ ಬಾಗಿಲು ಒಡೆದು ಒಳಹೋಗಿ ನೋಡಿದ್ದರಂತೆ. ಮನೆಯಲ್ಲಿ ಬಾಬು ಹಾಗೂ ಆತನ ಕುಟುಂಬ ನೇಣು ಹಾಕಿದ ಸ್ಥಿತಿಯಲ್ಲಿ ಕಾಣಿಸಿತ್ತು. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎನ್ನಿಸಿತ್ತು.
ಪೊಲೀಸರು ಆಗಲೇ ಬಂದು ಮಹಜರು ಮಾಡಲು ಆರಂಭಿಸಿದ್ದರು. ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಹೇಳಿ, ಸಾಲಬಾಧೆ ಇರಬೇಕೆಂಬ ಶಂಕೆಯನ್ನೂ ವ್ಯಕ್ತಪಡಿಸಿ ಅದೇ ರೀತಿಯಲ್ಲಿ ವರದಿ ತಯಾರಿಸಲೂ ಮುಂದಾಗಿತ್ತು. ಆದರೆ ಪ್ರದೀಪ ಹಾಗೂ ಆತನ ಬಳಗಕ್ಕೆ ಖಂಡಿತವಾಗಿಯೂ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ ಮೂಡಿತ್ತು. ಹಿಂದಿನ ದಿನ ತಾವು ಬಾಬುವನ್ನು ಬಡಿದು ವಿಚಾರಣೆ ನಡೆಸಿದ್ದ ಕಾರಣಕ್ಕೇ ಬಾಬುವನ್ನು ಹತ್ಯೆ ಮಾಡಿ, ನೇಣು ಹಾಕಲಾಗಿದೆ ಎಂದು ಪ್ರದೀಪ ಹಾಗೂ ಬಳಗ ತರ್ಕಿಸಿದ್ದರು. ಅದು ನಿಜವಾಗಿತ್ತೂ ಕೂಡ.
ಯಾವುದೋ ಒಂದು ಕೊಂಡಿಯನ್ನು ಹಿಡಿದು ನಿಘೂಡ ಜಗತ್ತಿನ ಬಾಗಿಲನ್ನು ತೆರೆದು ಹೋಗುತ್ತಿದ್ದೇವೆ ಎಂದುಕೊಳ್ಳುವಷ್ಟರಲ್ಲಿ ಕಾಣದ ಕೈ ಆ ಬಾಗಿಲನ್ನು ಮುಚ್ಚಿ ಹಾಕುತ್ತಿತ್ತು. ಎಷ್ಟೇ ಪ್ರಯತ್ನ ಪಟ್ಟೂ ನಿಘೂಡ ಜಗತ್ತಿನ ಒಳಗೆ ಹೋಗಲು ಸಾಧ್ಯವೇ ಆಗುತ್ತಿಲ್ಲವಲ್ಲ ಎಂಬ ಹತಾಶೆ ವಿಕ್ರಮ ಹಾಗೂ ಪ್ರದೀಪನಿಗಾಯಿತು. ಇದಕ್ಕೆ ಏನಾದರೂ ಮಾಡಲೇಬೇಕಲ್ಲ ಎಂದು ಅವರು ಅಲವತ್ತುಕೊಂಡರು. ಬೇಗ ಬೇಗನೆ ಇದಕ್ಕೊಂದು ಅಂತ್ಯ ಕಾಣಿಸದೇ ಇದ್ದಲ್ಲಿ ಇನ್ನೆಷ್ಟು ತಿರುವುಗಳು ಎದುರಾಗಲಿದೆಯೋ ಎಂದುಕೊಂಡರು ಅವರು.
ಬಾಬುವಿನ ಕೊಲೆಯನ್ನು ತಾವು ಹುಡುಕ ಹೊರಟಿರುವ ತಂಡವೇ ಮಾಡಿರುವುದು ಖಚಿತವಾಗಿತ್ತು. ಆ ಗುಂಪನ್ನು ಹುಡುಕಬಹುದಾಗಿದ್ದ ದೊಡ್ಡ ಬಾಗಿಲು ಮುಚ್ಚಿ ಹೋಗಿತ್ತು. ಮತ್ತೆ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಲ್ಲ ಎಂಬ ಹತಾಶೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅಸಹನೆಯಿಂದ ಅವರು ತಲೆ ಕೊಡವಿಕೊಳ್ಳುತ್ತಿದ್ದರು.

----
ಇತ್ತ ಆ ನಿಘೂಡ ಮನೆಯಲ್ಲಿ ಆ ಯಜಮಾನ ತನ್ನ ಕೆಳಗಿನ ಆಳುಗಳ ಬಳಿ ಮಾತನಾಡುತ್ತಿದ್ದ. ಎಲ್ಲ ಕೆಲಸ ಸರಿಯಾಗಿದೆ ತಾನೇ.. ಎಂದು ಆತ ಕೇಳುತ್ತಿದ್ದಂತೆಯೇ ಉಳಿದವರು ನಡೆದ ಘಟನೆಯನ್ನೆಲ್ಲ ತಿಳಿಸಿ ಹೇಳಿದರು.
ಬಾಬುವನ್ನು ಹತ್ಯೆ ಮಾಡಿದ್ದು ಒಳ್ಳೇದೇ ಆಯ್ತು. ನಾವೇ ಮಾಡಿದ್ದೇವೆ ಎನ್ನುವ ಬಗ್ಗೆ ಯಾವುದಾದರೂ ಅಂಶ ಬಿಟ್ಟು ಬಂದಿದ್ದೀರಾ? ಗಡುಸಾಗಿ ಕೇಳಿದ್ದ.
ಇಲ್ಲ ಬಾಸ್ ಎಂದು ಮಾರುತ್ತರ ನೀಡಿದ್ದರು ಉಳಿದವರು.
ನಿಮ್ಮನ್ನು ಯಾರಾದರೂ ನೋಡಿದರಾ? ಅದರಲ್ಲೂ ವಿಶೇಷವಾಗಿ ಆ ಹೊಸ ಹುಡುಗರು ನೋಡಿದ್ದಾರಾ ಹೇಗೆ? ಮತ್ತೆ ಕೇಳಿದ್ದ ಆತ.
ಇಲ್ಲ. ಸದ್ದಿಲ್ಲದೇ ಕೆಲಸ ಮಾಡಿ ಬಂದಿದ್ದೇವೆ. ಪೊಲೀಸರೂ ಕೂಡ ಇದನ್ನು ಆತ್ಮಹತ್ಯೆ ಎಂದೇ ವರದಿಯಲ್ಲಿ ಬರೆದಿದ್ದಾರೆ. ಯಾವುದೇ ಆತಂಕ ಬೇಡ..’ ಎಂದು ಮರು ಉತ್ತರ ನೀಡಿದರು ಕೈಕೆಳಗಿನ ವ್ಯಕ್ತಿಗಳು.
ಸರಿ ಹಾಗಾದರೆ, ಒಳ್ಳೆಯದೇ ಆಯ್ತು. ನೀವೆಲ್ಲ ಅತ್ತ ತಲೆ ಹಾಕಬೇಡಿ.. ಯಾವುದೇ ರೀತಿಯ ಅನುಮಾನಕ್ಕೂ ಎಡೆ ಮಾಡಿಕೊಡಬೇಡಿ.. ಆ ಊರಿಗೆ ಬಂದಿರುವವರ ಮೇಲೆ ಮಾತ್ರ ಕಣ್ಣಿಡಿ ಸಾಕು.. ನೀವಿನ್ನು ಹೊರಡಿ.. ಎಂದ ಬಾಸ್
ಸರಿ ಎಂದು ಉಳಿದವರು ಹೋದರು.
ಬಾಸ್ ಮುಖದಲ್ಲಿ ಕಿರುನಗೆಮೂಡಿತು. ಅದೇನೋ ತಪ್ಪಿಸಿಕೊಂಡೆ, ನಿರಾಳನಾದೆ ಎನ್ನುವ ಭಾವ ಆತನ ಮುಖದಲ್ಲಿ ಕಾಣಿಸಿತ್ತು.


(ಮುಂದುವರಿಯುತ್ತದೆ)

Monday, June 10, 2019

ಬಲಿದಾನ ಚಿಹ್ನೆ : ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ


ಧೋನಿ ಧರಿಸಿದ್ದ ಬಲಿದಾನ ಬ್ಯಾಡ್ಜ್‌ಗೆ ಸಂಬಂಧಿಸಿದಂತೆ ಐಸಿಸಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ನೀತಿಯನ್ನು ಅನುಸರಿಸುತ್ತಿದೆ ಎನ್ನುವ ಅಭಿಪ್ರಾಯ ಕ್ರಿಕೆಟ್ ಪ್ರೇಮಿಗಳದ್ದು. ಐಸಿಸಿಯ ನಡೆಗೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಚಿಹ್ನೆಯನ್ನು ಒಳಗೊಂಡ ಕೈಗವಸನ್ನು ಮಹೇಂದ್ರ ಸಿಂಗ್ ಧೋನಿ ಧರಿಸಿದ್ದರು. ಆದರೆ ಇದಕ್ಕೆ ಅಸಮಧಾನ ವ್ಯಕ್ತಪಡಿಸಿರುವ ಐಸಿಸಿ ಈ ಚಿಹ್ನೆಯನ್ನು ತೆಗೆದುಹಾಕುವಂತೆ ಬಿಸಿಸಿಐಗೆ ಮನವಿ ಮಾಡಿಕೊಂಡಿತ್ತು.
ಐಸಿಸಿಯ ಈ ನಿಲುವು ವ್ಯಾಪಕವಾಗಿ ಖಂಡನೆಗೆ ಒಳಗಾಗಿದೆ. ಕ್ರಿಕೆಟ್ ಅಭಿಮಾನಿಗಳು ಐಸಿಸಿಯ ನಡೆಯನ್ನು ವಿರೋಧಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಪ್ರತ್ಯೇಕ ಹ್ಯಾಷ್‌ಟ್ಯಾಗ್ ಮೂಲಕ ಐಸಿಸಿಯ ವಿರುದ್ಧ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಅಲ್ಲದೇ ಧೋನಿಯನ್ನು ಬೆಂಬಲಿಸುತ್ತಿರುವ ಅಭಿಮಾನಿಗಳು ಚಿಹ್ನೆಯನ್ನು ತೆಗೆಯದಂತೆ ಆಗ್ರಹಿಸಿದ್ದಾರೆ.

ಸೆಲ್ಯೂಟ್, ನಮಾಜ್‌ಗೆ ಇಲ್ಲ ವಿರೋಧ:
ಧೋನಿ ಧರಿಸಿದ್ದ ಕೈಗವಸಿನ ಮೇಲಿನ ಚಿಹ್ನೆಗೆ ಸಂಬಂಧಿಸಿದಂತೆ ಐಸಿಸಿ ಕಾನೂನು ಹಾಗೂ ನಿಯಮಗಳ ನೆಪ ಒಡ್ಡಿದೆ. ಆದರೆ ಮೈದಾನದಲ್ಲಿ ಬೇರೆ ಬೇರೆ ದೇಶಗಳ ಆಟಗಾರರು ಬೇರೆ ಬೇರೆ ನಡೆಯನ್ನು ಪ್ರದರ್ಶಿಸಿದಾಗ ಐಸಿಸಿ ವೌನ ವಹಿಸಿದ್ದು, ಧೋನಿ ವಿಷಯದಲ್ಲಿ ಮಾತ್ರ ಅನಾವಶ್ಯಕವಾಗಿ ಆಸಕ್ತಿ ತೋರುತ್ತಿದೆ ಎನ್ನುವ ಆರೋಪ ಅಭಿಮಾನಿಗಳದ್ದು.
ವೆಸ್ಟ್ ಇಂಡೀಸ್ ಆಟಗಾರನೋರ್ವ ಕ್ಯಾಚ್ ಹಿಡಿದ ನಂತರ ಸೆಲ್ಯೂಟ್ ಮಾಡಿದ ಸಂದರ್ಭದಲ್ಲಿ ಐಸಿಸಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪಾಕಿಸ್ಥಾನದ ಆಟಗಾರರು ಮೈದಾನದಲ್ಲಿಯೇ ನಮಾಜ್ ಮಾಡಿದ ಸಂದರ್ಭದಲ್ಲಿಯೂ ಕೂಡ ಐಸಿಸಿ ಯಾವುದೇ ನಿಯಮಗಳ ನೆಪವನ್ನೂ ಹೇಳಿರಲಿಲ್ಲ. ಅಷ್ಟೇ ಏಕೆ ಹಿಂದೆ ಜಿಂಬಾಬ್ವೆಯ ಆಟಗಾರ ಹೆನ್ರಿ ಓಲಾಂಗಾ, ತನ್ನ ದೇಶದ ಸರ್ವಾಧಿಕಾರಿ ರಾಬರ್ಟ್ ಮುಗಾಬೆ ವಿರುದ್ಧ ಮೈದಾನದಲ್ಲಿಯೇ ಪ್ರತಿಭಟನೆಯನ್ನು ನಡೆಸಿದಾಗಲೂ ಕೂಡ ಐಸಿಸಿ ವೌನ ವಹಿಸಿತ್ತು. ಹಿಂದೆ ಭಾರತದ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಇಯಾನ್ ಬೆಲ್, ಯುದ್ಧದಲ್ಲಿ ಮಡಿದ ಸೈನಿಕರ ಪರವಾಗಿ ಕೆಂಪು ಬಣ್ಣದ ಸ್ಟಿಕ್ಕರ್ ಧರಿಸಿ ಆಡಿದ್ದರು. ಅಷ್ಟೇ ಏಕೆ, ಇಂಗ್ಲೆಂಡ್ ತಂಡದ ಜೆರ್ಸಿಯ ಮೇಲೆ ಅದರ ಸೇನೆಯ ಚಿಹ್ನೆಗಳು ರಾರಾಜಿಸುತ್ತಿವೆ. ಆದರೆ ಅದ್ಯಾವುದೂ ಐಸಿಸಿಗೆ ಕಾಣಿಸುತ್ತಿಲ್ಲ. ಆದರೆ ಈಗ ಧೋನಿ ಕೈಗವಸಿನ ವಿಚಾರದಲ್ಲಿ ಮಾತ್ರ ಅನಗತ್ಯ ಆರೋಪಗಳನ್ನು ಮಾಡುತ್ತಿದೆ. ಈ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಪಾತ್ರವಾಗಿದೆ.
ಹಿಂದೆ ಐಸಿಸಿ ಹಲವು ವಿಷಯಗಳಲ್ಲಿಯೂ ಒಂದು ಕಣ್ಣಿಗೆ ಬೆಣ್ಣೆಘಿ, ಇನ್ನೊಂದು ಕಣ್ಣಿಗೆ ಸುಣ್ಣ ನೀತಿಯನ್ನು ಅನುಸರಿಸಿತ್ತುಘಿ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ದೇಶಗಳ ಆಟಗಾರರು ಸ್ಲೆಡ್ಜಿಂಗ್ ಮಾಡಿದ ಸಂದರ್ಭದಲ್ಲಿ ಅದರ ಕುರಿತು ಮೃದು ಧೋರಣೆ ತಾಳಿದ್ದ ಐಸಿಸಿ ಭಾರತೀಯ ಆಟಗಾರರು ಸ್ಲೆಡ್ಜಿಂಗ್ ಮೂಲಕ ಪ್ರತ್ಯುತ್ತರ ನೀಡಿದ ಸಂದರ್ಭದಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಹೆಸರಿನಲ್ಲಿ ಆಟಗಾರರಿಗೆ ನಿಷೇಧವನ್ನು ಹೇರಿದ ಸಂದರ್ಭಗಳೂ ಇದ್ದವು.
ಅನಾವಶ್ಯಕ ಕ್ಯಾತೆ
ಈ ವಿಶ್ವಕಪ್‌ನಲ್ಲಿ ಐಸಿಸಿ ಗಮನ ಹರಿಸಲು ಹಲವು ವಿಷಯಗಳಿವೆ. ಐಸಿಸಿ ನೇಮಿಸಿರುವ ಅಂಪಾಯರ್‌ಗಳು ತಪ್ಪುಗಳ ಮೇಲೆ ತಪ್ಪುಗಳನ್ನು ಂಆಡುವ ಮೂಲಕ ಪಂದ್ಯಗಳ ಲಿತಾಂಶ ಏರು ಪೇರಾಗಲು ಕಾರಣರಾಗುತ್ತಿದ್ದಾರೆ. ವಿಂಡೀಸ್ ಹಾಗೂ ಆಸಿಸ್ ಪಂದ್ಯದ ಸಂದರ್ಭದಲ್ಲಿ ಅಂಪಾಯರ್ 7-8 ತಪ್ಪು ತೀರ್ಪು ನೀಡಿದ ಸಂದರ್ಭದಲ್ಲಿಯೂ ಕೂಡ ಅದರ ಬಗ್ಗೆ ಐಸಿಸಿ ವೌನ ತಾಳಿದೆ. ಹೀಗಿರುವಾಗ ಧೋನಿ ವಿಷಯದ ಬಗ್ಗೆ ಅನಾವಶ್ಯಕ ಆಸಕ್ತಿ ತಳೆದಿರುವುದು ಮಾತ್ರ ವಿಚಿತ್ರ ಎನ್ನಿಸಿದೆ.
ವಿಶ್ವಕಪ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಐಸಿಸಿ ಕೈಗೊಳ್ಳಬೇಕಾದ ಅನೇಕ ಕಾರ್ಯಗಳಿವೆ. ವಿಶ್ವಕಪ್ ಸಮರ್ಪಕವಾಗಿ ನಡೆಯುವ ನಿಟ್ಟಿನಲ್ಲಿ ಐಸಿಸಿ ಕ್ರಮ ಕೈಗೊಳ್ಳಬೇಕಿದೆ. ತಪ್ಪು ನಿರ್ಣಯ ಕೊಡುತ್ತಿರುವ ಅಂಪಾಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಅದನ್ನು ಬಿಟ್ಟು ಅನಾವಶ್ಯಕ ವಿವಾದ ಹುಟ್ಟು ಹಾಕುವುದು ಸರಿಯಲ್ಲ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಆಶಯ.

-----
ಪಾಕಿಸ್ಥಾನದ ಪ್ರಭಾವವೇ?
ಧೋನಿ ಕೈಗವಸಿನ ಚಿಹ್ನೆಯ ವಿಷಯದಲ್ಲಿ ಐಸಿಸಿ ಪಾಕಿಸ್ಥಾನದ ಪ್ರಭಾವಕ್ಕೆ ಮಣಿದಿದೆಯೇ ಎನ್ನುವ ಪ್ರಶ್ನೆಗಳು ಮೂಡಿದೆ. ಧೋನಿ ಸೇನಾಮುದ್ರೆ ಬಳಸಿರುವುದು ಪುಲ್ವಾಮಾ ದಾಳಿಗೆ ವಿರೋಧ ವ್ಯಕ್ತಪಡಿಸುವ ಸಲುವಾಗಿ ಎಂದು ಪಾಕಿಸ್ಥಾನ ಭಾವಿಸಿದೆ. ಧೋನಿ ಸೇನಾಮುದ್ರೆ ಬಳಸಿರುವುದರಿಂದ ಎಲ್ಲರಿಗಿಂತ ಹೆಚ್ಚು ಮುಜುಗರಕ್ಕೀಡಾಗಿದ್ದು ಪಾಕಿಸ್ಥಾನ ಮಾತ್ರಘಿ. ಹೀಗಾಗಿ ಪಾಕಿಸ್ಥಾನವು ಐಸಿಸಿ ಮೇಲೆ ಈ ಮುದ್ರೆ ತೆಗೆಯುವಂತೆ ಹೇಳಲು ಪ್ರಭಾವ ಬೀರಿತು ಎನ್ನುವುದು ಅಭಿಮಾನಿಗಳ ವಾದವಾಗಿದೆ.







Thursday, June 6, 2019

ಅನುಮಾನ ಹುಟ್ಟಿಸುತ್ತಿದೆ ಕಾಡುಕೋಣಗಳ ಸರಣಿ ಸಾವು

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದವೇ ವನ್ಯಪ್ರಾಣಿಗಳು?


ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ತಾಲೂಕು ವ್ಯಾಪ್ತಿಯಲ್ಲಿರುವ ಅಣಶಿ-ದಾಂಡೇಲಿ ಕಾಳಿ ಹುಲಿ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ  ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾಡುಕೋಣಗಳ ಸರಣಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದೆ. ಅಸಹಜ ಸಾವನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸುವ ಮೂಲಕ ಅರಣ್ಯ ಇಲಾಖೆ ಯಾವುದೋ ದೊಡ್ಡ ತಪ್ಪನ್ನು ಮರೆಮಾಚಲು ಯತ್ನಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಕಾಳಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 16ಕ್ಕೂ ಅಧಿಕ ಕಾಡುಕೋಣಗಳು ಮೃತಪಟ್ಟಿದ್ದರೂ ಕೇವಲ 4 ಕಾಡುಕೋಣಗಳು ಮಾತ್ರ ಸತ್ತಿವೆ ಎನ್ನುವ ಮೂಲಕ ಅರಣ್ಯ ಇಲಾಖೆ ನೈಜ ಕಾರಣವನ್ನು ಮುಚ್ಚಿಡಲು ಯತ್ನಿಸುತ್ತಿದೆ. ತನ್ಮೂಲಕ ಯಾವುದೋ ಅಂಶವನ್ನು ಮರೆಮಾಚಲು ಯತ್ನಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.


ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯ
ಕಾಡುಕೋಣಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಕೆಳ ಹಂತದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜೋಯಿಡಾ ಕಾಡಿನಲ್ಲಿ ಪ್ರಾರಂಭಿಕ ಹಂತದಲ್ಲಿ ಕಾಡುಕೋಣಗಳು ಮೃತಪಟ್ಟ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ ಕೆಳ ಹಂತದ ಅರಣ್ಯಾಧಿಕಾರಿಗಳು ಸ್ಥಳೀಯ ಹಂತದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಹಜ ಸಾವು ಎಂದು ವರದಿ ಬರುವಂತೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಕಾಡುಕೋಣಗಳ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ  ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ತಜ್ಞ ವೈದ್ಯರ ಮೊರೆ ಹೋದರು ಎನ್ನುವ ಮಾತುಗಳು ಕೇಳಿ ಬಂದಿದೆ. ಕಾಡುಕೋಣಗಳು ಸಹಜ ಕಾರಣದಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾಯುವುದಿಲ್ಲಘಿ. ಶಿವಮೊಗ್ಗ ದ ವೈದ್ಯರಿಗೆ ಕಾಡುಕೋಣಗಳ ತಾಜಾ ಮಾಂಸ ಸಿಗದ ಕಾರಣ ವೈದ್ಯಕೀಯ ಪರೀಕ್ಷೆಯಲ್ಲಿ ನಿಖರ ಕಾರಣಗಳು ತಿಳಿದುಬರುವ ಸಾಧ್ಯತೆಗಳು ಕಡಿಮೆ ಎನ್ನುವುದು ಶಿವಮೊಗ್ಗದ ವೈದ್ಯಕೀಯ ಮೂಲಗಳ ಮಾಹಿತಿ.
ಇದೀಗ ಬೆಂಗಳೂರಿನ ಎರಡು ಪ್ರಯೋಗಾಲಯಗಳಿಗೆ ಕಾಡುಕೋಣಗಳ ಅಂಗಾಂಗಗಳನ್ನು ಒಯ್ಯಲಾಗಿದೆ. 10-12 ದಿನಗಳಲ್ಲಿ ಅವುಗಳ ಪರೀಕ್ಷೆಯ ವರದಿಗಳು ಹೊರಬೀಳಲಿದೆ. ನಂತರವಷ್ಟೇ ಕಾಡುಕೋಣಗಳ ಸಾವಿನ ಕಾರಣಗಳು ತಿಳಿದುಬರಲಿದೆ.


ಇನ್ನಷ್ಟು ಕಾಡುಕೋಣಗಳ ಸಾವು
ಕಾಡುಕೋಣಗಳ ಸರಣಿ ಸಾವು ಕೇವಲ ಕಾಳಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೀಮಿತವಾಗಿಲ್ಲಘಿ. ಕಾಡುಕೋಣಗಳು ಕಾಳಿ ನದಿಗೆ ನಿರ್ಮಿಸಲಾಗಿರುವ ಕೊಡಸಳ್ಳಿ ಅಣೆಕಟ್ಟು ಹಿನ್ನೀರು ಪ್ರದೇಶದ ವ್ಯಾಪ್ತಿಯಲ್ಲಿಯೂ ಮೃತಪಟ್ಟಿವೆ. ನಾಲ್ಕಕ್ಕೂ ಅಧಿಕ ಕಾಡುಕೋಣಗಳು ಕೊಡಸಳ್ಳಿ ಅಣೆಕಟ್ಟೆ ಹಿನ್ನೀರು ಪ್ರದೇಶದಲ್ಲಿ ಸತ್ತಿವೆ ಎನ್ನುವ ಮಾಹಿತಿಗಳು ಹೊಸದಿಗಂತಕ್ಕೆ ಲಭ್ಯವಾಗಿದೆ.
ಅರಣ್ಯ ಸಚಿವರೇ ಇತ್ತ ಗಮನ ಕೊಡಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿಯೇ ಅರಣ್ಯ ಇಲಾಖೆಯೂ ಇದೆ. ಜೋಯಿಡಾ ಕಾಡಿನಲ್ಲಿ ಕಾಡುಕೋಣಗಳ ಸರಣಿ ಸಾವಿನ ಕುರಿತು ಕುಮಾರಸ್ವಾಮಿಯವರು ಕ್ರಮ ಕೈಗೊಳ್ಳುವ ಅಗತ್ಯವಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಕಿವಿ ಹಿಂಡುವ ಮೂಲಕ ವನ್ಯಜೀವಿಗಳ ಸರಣಿ ಸಾವು ತಡೆಗೆ ಕ್ರಮ ಕೈಗೊಳ್ಳಬೇಕಿದೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಖಡಕ್ ನಿರ್ಧಾರ ಕೈಗೊಂಡು ಕೆಲವೇ ಸಂಖ್ಯೆಗಳಷ್ಟಿರುವ ಕಾಡುಕೋಣಗಳ ರಕ್ಷಣೆಗೆ ಆದೇಶ ಹೊರಡಿಸಬೇಕು ಎನ್ನುವುದು ಪರಿಸರ ಪ್ರೇಮಿಗಳ ಮನವಿಯಾಗಿದೆ.

ಸಾವಿಗೇನು ಕಾರಣ?
ಕಾಡುಪ್ರಾಣಿಗಳಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಚಿಕ್ಕಪುಟ್ಟ ಸಮಸ್ಯೆಗಳೆಲ್ಲ ಕಾಡುಪ್ರಾಣಿಗಳನ್ನು ಕಾಡುವುದೇ ಇಲ್ಲಘಿ. ಕಾಡುಪ್ರಾಣಿಗಳು ಏಕಾಏಕಿ ಬಹಳಷ್ಟು ಸಂಖ್ಯೆಯಲ್ಲಿ ಅಸುನೀಗುತ್ತಿವೆ ಎಂದರೆ ಅದಕ್ಕೆ ಬಲವಾದ ಕಾರಣಗಳೇ ಇರುತ್ತವೆ. ಮಾರಕ ಖಾಯಿಲೆ, ಸೋಂಕು, ವಿಷ ಪ್ರಾಶನ ಅಥವಾ ಇನ್ನಿತರ ಯಾವುದೋ ಕಾರಣಗಳಿಂದ ಕಾಡುಕೋಣಗಳು ಸಾಯುತ್ತಿರಬಹುದು ಎನ್ನುವುದು ಪರಿಸರ ಪ್ರೇಮಿಗಳ ಮನಸ್ಸಿನಲ್ಲಿ ಮೂಡಿರುವ ಶಂಕೆ.
ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಮನುಷ್ಯರ ಅತಿಕ್ರಮ ಪ್ರವೇಶಕ್ಕೆ ಅವಕಾಶವಿಲ್ಲಘಿ. ಇಂತಹ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿರುವ ಕಾಡುಕೋಣಗಳು ಮಾತ್ರ ಮೃತಪಟ್ಟಿವೆ. ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯ ಹೊರಗಿನ, ಅಂದರೆ ಮನುಷ್ಯರ ಓಡಾಟ ಹೆಚ್ಚಿರುವ ಕಾಡುಗಳಲ್ಲಿನ ಕಾಡೆಮ್ಮೆಘಿ, ಕಾಡುಕೋಣಗಳು ಮೃತಪಟ್ಟಿಲ್ಲಘಿ. ಹೀಗಾಗಿ ಜೋಯಿಡಾ ಕಾಡಿನಲ್ಲಿ ಕಾಡುಕೋಣಗಳ ಸಾವಿಗೆ ಬೇರೇನೋ ಕಾರಣಗಳಿವೆ ಎನ್ನುವ ಸಂಶಯ ಬಲವಾಗಿದೆ.



ಮಾಧ್ಯಮಗಳಿಗೆ ನಿರ್ಬಂಧ
ಕಾಳಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡುಕೋಣಗಳು ಸರಣಿ ರೂಪದಲ್ಲಿ ಮೃತಪಟ್ಟಿರುವ ವಿಷಯಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡ ತಕ್ಷಣ ಅರಣ್ಯ ಇಲಾಖೆ ಈ ಪ್ರದೇಶಗಳಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದೆ. ಯಾವುದೇ ಅಧಿಕಾರಿಗಳಿಗೂ ಕಾಡುಕೋಣಗಳ ಸಾವಿನ ಕುರಿತು ಮಾಹಿತಿ ಹಂಚಿಕೊಳ್ಳಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎನ್ನುವ ಮಾಹಿತಿಗಳು ಅಧಿಕಾರಿ ವಲಯದಿಂದ ಕೇಳಿ ಬಂದಿದೆ. ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಅರಣ್ಯ ಇಲಾಖೆಯ ನಡೆ ಇನ್ನಷ್ಟು ಅನುಮಾನಕ್ಕೂ ಕಾರಣವಾಗಿದೆ.


------------------
ಕಾಡುಪ್ರಾಣಿಗಳಲ್ಲಿಯೇ ಅತ್ಯಂತ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಪ್ರಾಣಿಗಳೆಂದರೆ ಅದು ಕಾಡುಕೋಣಗಳು. ಆದರೆ ಕಾಳಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕಾಡುಕೋಣಗಳು ಮೃತಪಟ್ಟಿರುವುದನ್ನು ಗಮನಿಸಿದರೆ ಇದು ಸಹಜವಾದುದಲ್ಲಘಿ. ಬೇರೇ ಏನೋ ಕಾರಣ ಇದೆ ಎನ್ನಿಸುತ್ತದೆ.
ಸಂಜಯ ಭಟ್ಟ ಬೆಣ್ಣೆ
ಪರಿಸರಪ್ರೇಮಿ

Tuesday, June 4, 2019

ಮತ್ತೆ ಬತ್ತಿದ ಅಘನಾಶಿನಿ

(ಚಿತ್ರ- ಗೋಪಿ ಜಾಲಿ)
ಹರಿವು ನಿಲ್ಲಿಸಿದ ಪಾಪನಾಶಿನಿ ನದಿ/ಜೀವ ಜಗತ್ತಿಗೆ ಆತಂಕ



ಎರಡು ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಹರಿವು ನಿಲ್ಲಿಸಿದ್ದ ಅಘನಾಶಿನಿ ಮತ್ತೊಮ್ಮೆ ಬತ್ತಿ ಹೋಗಿದೆ. ಉತ್ತರ ಕನ್ನಡದ ಜೀವದಾಯಿ ನದಿಗಳಲ್ಲಿ ಒಂದಾಗಿರುವ ಅಘನಾಶಿನಿ ನದಿ ಬತ್ತಿರುವುದರಿಂದ ನದಿ ಪಾತ್ರದ ಜೀವ ಸಂಕುಲಗಳು ಆತಂಕಕ್ಕೆ ಈಡಾಗಿವೆ.
ಶಿರಸಿಯ ಶಂಕರಹೊಂಡ ಹಾಗೂ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಹುಟ್ಟುವ ಅಘನಾಶಿನಿ ನದಿಯ ಕವಲು ಒಂದುಗೂಡಿ 98 ಕಿಲೋಮೀಟರ್ ದೂರ ಹರಿದು ಕುಮಟಾ ತಾಲೂಕಿನಲ್ಲಿ ಅರಬಿ ಸಮುದ್ರವನ್ನು ಸೇರುತ್ತದೆ.  ಈ ಅವಧಿಯಲ್ಲಿ ಸಹಸ್ರಾರು ಕುಟುಂಬಗಳು, ಸಹಸ್ರಾರು ಎಕರೆ ಪ್ರದೇಶಗಳು ಅಘನಾಶಿನಿ ನದಿಯನ್ನೇ ಅವಲಂಭಿಸಿವೆ.
2017ರಲ್ಲಿ ಪ್ರಕೃತಿಯ ಮುನಿಸು ಹಾಗೂ ಮನುಷ್ಯನ ದುರಾಸೆಯ ಕಾರಣದಿಂದ ಬತ್ತಿ ಹೋಗಿದ್ದ ಅಘನಾಶಿನಿ ನದಿ ಇದೀಗ ಮತ್ತೊಮ್ಮೆ ಬತ್ತಿದೆ. ಅಘನಾಶಿನಿ ನದಿ ತೀರದಲ್ಲಿ ಈಗ ಕಲರವವಿಲ್ಲಘಿ. ಪರಿಣಾಮವಾಗಿ ಅಘನಾಶಿನಿ ಕಣಿಯ ರೈತರು, ಅಡಿಕೆ ಬೆಳೆಗಾರರು, ಅಘನಾಶಿನಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನಸಾಮಾನ್ಯರು ಹೈರಾಣಾಗಿದ್ದಾರೆ. ನದಿ ತೀರದದಲ್ಲಿದ್ದ ಅಡಿಕೆ ತೋಟಗಳು ಒಣಗಿ ಹೋಗಿವೆ. ಅಪ್ಪೆಮರಗಳು ನೀರಿಲ್ಲದೇ ಸೊರಗಿದೆ. ಅಬ್ಬರದಿಂದ ಧುಮ್ಮಿಕ್ಕುತ್ತಿದ್ದ ಉಂಚಳ್ಳಿ ಜಲಪಾತ ಜೀವ ಕಳೆದುಕೊಂಡಿದೆ. ಅಘನಾಶಿನಿ ನದಿ ನೀರನ್ನೇ ಅವಲಂಬಿಸಿದ್ದ ಅಪರೂಪ ಸಿಂಗಳೀಕಗಳು, ಕಾಡೆಮ್ಮೆಗಳಿಗೂ ಕುಡಿಯಲು ನೀರಿಲ್ಲ ಎನ್ನುವಂತಾಗಿದೆ. ಅಘನಾಶಿನಿಯ ತಟದಲ್ಲಿ ಜೀವನ ಸಾಗಿಸುತ್ತಿದ್ದ ಅಪರೂಪದ ನೀರುನಾಯಿಗಳೂ ಕೂಡ ಬದುಕಿಗಾಗಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾರ್ನಬಿಲ್, ಕೆಂಪು ಅಳಿಲು ಸೇರಿದಂತೆ ಅಳಿವಿನಂಚಿನಲ್ಲಿರುವ ಹಲವು ಜೀವಿಗಳು ಒದ್ದಾಡುತ್ತಿವೆ.

(ಚಿತ್ರ- ಗೋಪಿ ಜಾಲಿ)
ಕಡಿಮೆಯಾಗಿದೆ ನೀರು, ಸೊರಗಿದೆ ಉಪನದಿಗಳು
ಪ್ರತಿ ವರ್ಷ ಮೇ ತಿಂಗಳಿನಲ್ಲಿ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟ ತೀವ್ರ ಇಳಿಕೆ ಕಂಡಿದೆ. ಕಳೆದ 3 ವರ್ಷಗಳ ಅವಧಿಯಲ್ಲಿ ನದಿ ಎರಡನೇ ಬಾರಿ ಬತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅಘನಾಶಿನಿ ನದಿಯ ಉಪನದಿಗಳಲ್ಲಿಯೂ ಕೂಡ ನೀರಿಲ್ಲ. ಅಘನಾಶಿನಿ ನದಿ ಮೂಲದಲ್ಲಿಯೂ ನೀರಿಲ್ಲ. ಪ್ರಮುಖ ಉಪನದಿಯಾದ ಭತ್ತಗುತ್ತಿಗೆ ಹೊಳೆ ಬತ್ತಿದೆ. ಬೆಣ್ಣೆಹಳ್ಳ, ಬುರುಡೆ ಜಲಪಾತಕ್ಕೆ ಕಾರಣವಾದ ಬೀಳಗಿ ಹೊಳೆಯೂ ನೀರಿಲ್ಲದೇ ಸೊರಗಿದೆ. ಇದೆಲ್ಲದರ ಪರಿಣಾಮ ಕರಾವಳಿ ಪ್ರದೇಶದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ. ಅರಬ್ಬಿ ಸಮುದ್ರ ನೀರು ಅಘನಾಶಿನಿ ನದಿಯ ಒಳಗೆ ನುಗ್ಗಲು ಆರಂಭಿಸಿದೆ. ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಹಲವು ಕಿಲೋಮೀಟರ್ ಒಳಭಾಗದ ವರೆಗೆ ಉಪ್ಪುನೀರು ನುಗ್ಗುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ಶಾಲ್ಮಲಾ ನದಿ ಬತ್ತಿ ಹೋಗಿತ್ತುಘಿ. ಯಲ್ಲಾಪುರ ಪಟ್ಟಣಕ್ಕೆ ನೀರನ್ನು ಒದಗಿಸುವ ಬೇಡ್ತಿ ನದಿ ಬತ್ತಿ ಹಲವು ದಿನಗಳೇ ಕಳೆದಿವೆ. ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು ಆತಂಕವನ್ನು ಹೊರಹಾಕಿದ್ದರು. ಇದೀಗ ಮಲೆನಾಡಿನ ಇನ್ನೊಂದು ನದಿ ಬತ್ತಿ ಹೋಗಿದೆ. ಇದರ ನೇರ ಪರಿಣಾಮ ಪರಿಸರದ ಮೇಲಾಗುತ್ತಿದೆ. ನದಿಯನ್ನೇ ನಂಬಿದ್ದ ಜೀವ ಜಗತ್ತುಘಿ, ಪಕ್ಷಿಘಿ, ಪ್ರಾಣಿ ಸಂಕುಲ ಉಸಿರು ಚೆಲ್ಲುತ್ತಿವೆ. 10-12 ದಿನಗಳ ಒಳಗಾಗಿ ಮಳೆಯಾಗದಿದ್ದಲ್ಲಿ ಮಲೆನಾಡಿನ ಪರಿಸ್ಥಿತಿ ಇನ್ನಷ್ಟು ಘೋರವಾಗಿರಲಿದೆ.

(ಚಿತ್ರ- ಗೋಪಿ ಜಾಲಿ)

---------------------
ನದಿ ತೀರಗಳಲ್ಲಿ ಜನಸಂಖ್ಯೆ ಜಾಸ್ತಿಯಾಗಿದೆ. ನದಿಗಳ ಮೇಲಿನ ಅವಲಂಬನೆ ಕೂಡ ಹೆಚ್ಚಾಗಿದೆ. ಪಂಪ್ ಮೂಲಕ ಕೃಷಿಗೆ ನದಿ ನೀರನ್ನು ಬಳಸುವ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ನದಿಗಳು ಬತ್ತುತ್ತಿವೆ. ಮಳೆ ನೀರು ಇಂಗಿಸಿದರೆ ಇಂತಹ ಸಮಸ್ಯೆಗೆ ಪರಿಹಾರ ಹುಡುಕಬಹುದು.
ಶಿವಾನಂದ ಕಳವೆ
ಪರಿಸರ ಬರಹಗಾರರು

Monday, June 3, 2019

ಕಾಣದ ರೋಗಕ್ಕೆ ಕಾಡುಕೋಣಗಳ ಬಲಿ


ಮಾರಕ ರೋಗ ಸಾಧ್ಯತೆ/ಮನುಷ್ಯರಿಗೂ ತಗುಲಬಹುದೇ?


ಪ್ರಕರಣ ಮುಚ್ಚಿಡಲು ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆ
ಕಾಡುಕೋಣಗಳ ಮೃತದೇಹ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಅಂಗಾಂಗಗಳ ರವಾನೆ
ಹೊಟ್ಟೆ ಹಾಗೂ ಬಾಯಿ ಹುಣ್ಣಿನಿಂದ ಕಾಡುಕೋಣಗಳು ಮೃತಪಟ್ಟಿರುವ ಶಂಕೆ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡುಕೋಣಗಳು ಸರಣಿ ರೂಪದಲ್ಲಿ  ಮೃತಪಡುತ್ತಿರುದು ಆತಂಕಕ್ಕೆ ಕಾರಣವಾಗಿದೆ. ಕಾಡುಕೋಣಗಳ ಸರಣಿ ಸಾವು ಮಾರಕ ರೋಗದ ಸಾಧ್ಯತೆಯನ್ನು ಹುಟ್ಟು ಹಾಕಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಅರಣ್ಯ ಇಲಾಖೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ 16ಕ್ಕೂ ಅಧಿಕ ಕಾಡುಕೋಣಗಳು ನಿಘೂಡ ರೋಗಕ್ಕೆ ಬಲಿಯಾಗಿವೆ. ಅಣಶಿ, ಕ್ಯಾಸಲ್‌ರಾಕ್ ಮುಂತಾದ ಪ್ರದೇಶಗಳಲ್ಲಿ ಕಾಡುಕೋಣಗಳು ಮೃತಪಟ್ಟಿವೆ. ಅಜಮಾಸು 10ರಿಮದ 12 ವರ್ಷ ಪ್ರಾಯದ ಕಾಡುಕೋಣಗಳು ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಮೃತಪಟ್ಟಿವೆ.

ನಿಘೂಡ ರೋಗ?
ಮಲೆನಾಡಿನ ಅನೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಂಗಗಳು ಮೃತಪಟ್ಟ ಘಟನೆ ಹಸಿಯಾಗಿದೆ. ಈ ಮಂಗಗಳಿಂದಾಗಿ ಮನುಷ್ಯನಿಗೂ ಮಂಗನ ಖಾಯಿಲೆ ಬಂದು ಅನೇಕರನ್ನು ಬಲಿ ತೆಗೆದುಕೊಂಡ ಘಟನೆಗಳು ಜನರ ಮನಸ್ಸಿನಲ್ಲಿ  ಭೀತಿಯನ್ನು ಹೆಚ್ಚಿಸಿರುವ ಬೆನ್ನಲ್ಲೇ ಕಾಡುಕೋಣಗಳ ಸರಣಿ ಸಾವು ಆತಂಕ ತಂದಿದೆ. ಮೃತಪಟ್ಟಿರುವ ಕಾಡುಕೋಣಗಳಿಂದ ಮನುಷ್ಯನಿಗೂ ನಿಘೂಡ ಖಾಯಿಲೆಗಳು ಬರಬಹುದೇ ಎನ್ನುವ ಪ್ರಶ್ನೆಗಳು ಮೂಡಿವೆ.

ಮುಚ್ಚಿಟ್ಟ ಅರಣ್ಯ ಇಲಾಖೆ
ಜೋಯಿಡಾ ಕಾಡಿನಲ್ಲಿ ಸಾಲು ಸಾಲು ಕಾಡುಕೋಣಗಳು ಸತ್ತಿದ್ದರೂ ಅರಣ್ಯ ಇಲಾಖೆ ಅದನ್ನು ಮುಚ್ಚಿಡಲು ಮುಂದಾಗಿದೆ. ಇದುವರೆಗೂ 16ಕ್ಕೂ ಹೆಚ್ಚಿನ ಕಾಡುಕೋಣಗಳು ಬಲಿಯಾಗಿದ್ದರೂ ಅರಣ್ಯ ಇಲಾಖೆ ಕೇವಲ 4 ಕಾಡುಕೋಣ ಮಾತ್ರ ಸತ್ತಿದೆ ಎನ್ನುವ ಮೂಲಕ ಗಂಭೀರ ವಿಷಯವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ.
ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಕಟ್ಟೆಘಿ, ಕೋಡುಗಾಳಿ, ಕಡಗರ್ಣಿ ಹಾಗೂ ದಿಗಾಳಿಗಳಲ್ಲಿ ಕಾಡುಕೋಣಗಳು ಮೃತಪಟ್ಟಿವೆ. ಇದಲ್ಲದೇ ಅಣಶಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಅನೇಕ ಕಡೆಗಳಲ್ಲಿಯೂ ಕಾಡುಕೋಣಗಳು ಅಸಹಜವಾಗಿ ಸತ್ತಿವೆ ಎನ್ನುವ ಮಾಹಿತಿಯನ್ನು  ಸ್ಥಳೀಯ ಮಟ್ಟದ ಅರಣ್ಯ ಅಧಿಕಾರಿಗಳೇ ನೀಡಿದ್ದಾರೆ.
ಸತ್ತಿರು ಕಾಡುಕೋಣಗಳ ಕಳೆಬರಗಳ ಮರಣೋತ್ತರ ಪರೀಕ್ಷೆಗಾಗಿ ಕಾಡುಕೋಣಗಳ ಅಂಗಾಂಗಗಳನ್ನು  ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ಈ ಕಾಡುಕೋಣಗಳು ಹೊಟ್ಟೆ ಹಾಗೂ ಗಂಟಲು ಹುಣ್ಣಿನಿಂದ ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿಗಳು ಹೊರಬರಬೇಕಿದೆ.
ಕುಡಿಯುವ ನೀರು ಹಾಗೂ ಆಹಾರದ ಸಮಸ್ಯೆ ಈ ಸಾರಿ ಎಲ್ಲ ಕಡೆಗಳಲ್ಲಿಯೂ ತಲೆದೋರಿದೆ. ಈ ಸಮಸ್ಯೆ ಕಾಳಿ ಸಂರಕ್ಷಿತ ಅರಣ್ಯ ಪ್ರದೇಶವನ್ನೂ ಬಿಟ್ಟಿಲ್ಲಘಿ. ಆದರೆ ಕಾಡುಕೋಣಗಳು ಮೃತಪಟ್ಟ ಸ್ಥಳಗಳ ಸುತ್ತಮುತ್ತ ಕುಡಿಯುವ ನೀರು ಹಾಗೂ ಆಹಾರದ ಸಮಸ್ಯೆ ತಲೆದೋರದಂತೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಹೀಗಿದ್ದರೂ  ಕಾಡುಕೋಣಗಳ ಸರಣಿ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಅರಣ್ಯ ಇಲಾಖೆ ಕಾಡುಕೋಣಗಳ ಸಾವಿಗೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳಬೇಕಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಎಚ್ಚೆತ್ತುಕೊಂಡು ಸರಣಿ ಸಾವು ತಪ್ಪಿಸಬೇಕಿದೆ. ಈ ಕಾಡುಕೋಣಗಳಿಗೆ ತಗುಲಿರುವ ಸೋಂಕು ಮನುಷ್ಯನಿಗೂ ತಗುಲಬಹುದೇ ಅಥವಾ ಇನ್ನಿತರ ಖಾಯಿಲೆಗಳಿಗೆ ಕಾರಣವಾಗಬಹುದೇ ಎನ್ನುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸುವ ಅಗತ್ಯವಿದೆ. ಪ್ರಕರಣ ಮುಚ್ಚಿ ಹಾಕುವ ಬದಲು ಅರಣ್ಯ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡುವ ಜರೂರತ್ತಿದೆ.