Friday, August 19, 2016

ಅವದೂತ ಯತಿ ಶ್ರೇಷ್ಟ ಸಹಜಾನಂದರು

ಮಾರುತಿಯ ಆರಾಧಕರು, ಶ್ರೀಧರ ಸ್ವಾಮೀಜಿಗಳ ಪ್ರಿಯ ಶಿಷ್ಯರು

ವಾಯುಪುತ್ರ ಹನುಮಂತ ಅವದೂತ ಪರಂಪರೆಯಲ್ಲಿ ಕೇಳಿ ಬರುವ ಮೊಟ್ಟಮೊದಲ ಹೆಸರು. ಶ್ರೀರಾಮನ ಸೇವೆಯಲ್ಲಿಯೇ ಸರ್ವಸ್ವವನ್ನೂ ಕಂಡವನು. ಪ್ರಪಂಚದ ಕುರಿತಾಗಿ ಪೂರ್ಣ ವಿರಕ್ತನಾದ ಭಕ್ತಶ್ರೇಷ್ಟ. ಇಂತಹ ಮಾರುತಿಯ ಆರಾಧನೆಯ ಮೂಲಕ ಅವದೂತರಾಗಿ ಲೋಕಕಲ್ಯಾಣವನ್ನು ಮಾಡಿದವರೇ ಸಹಜಾನಂದ ಅವದೂತ ಸ್ವಾಮೀಜಿಗಳು.
ಶಿವನ ಅಷ್ಟ ಮೂತರ್ಿಗಳಲ್ಲಿ ಮಾರುತನಿಗೆ ಪ್ರಮುಖ ಸ್ಥಾನವಿದೆ. ಇಂತಹ ಮಾರುತನ ಅವತಾರವೇ ಮಾರುತಿ. ಮಾರುತಿ ನೆಲೆನಿಂತ ಕ್ಷೇತ್ರ ಕೊಳಗೀಬೀಸ್. ಶಿರಸಿ ತಾಲೂಕಿನ ಕೊಳಗೀಬೀಸ್ ಸಹಜಾನಂದ ಅವದೂತರ ತಪೋಭೂಮಿ. ಕೊಳಗೀಬೀಸಿನ ಮಾರುತಿ ದೇವರನ್ನು ಆರಾಧನೆ ಮಾಡಿ ಲೋಕಕಲ್ಯಾಣ ಕಾರ್ಯವನ್ನು ನೆರವೇರಿಸಿದವರು ಸಹಜಾನಂದ ಅವದೂತ ಯತಿಗಳು. 1950ರ ದಶಕದಲ್ಲಿ ಕೊಳಗೀಬೀಸಿನ ಮಾರುತಿ ದೇವಸ್ಥಾನವನ್ನು ಜೀಣೋದ್ಧಾರ ಮಾಡಿಸಿ, ಭವ್ಯವಾಗಿ ನಿಮರ್ಿಸಲು ಕಾರಣೀಭೂತರಾದವರು ಸಹಜಾನಂದ ಯತಿಗಳು.
ಸಹಜಾನಂದ ಅವದೂತರು ಮೂಲತಃ ಶಿರಸಿ ತಾಲೂಕಿನ ಜಾಗನಳ್ಳಿಯವರು. ಊರಿನಲ್ಲಿ ಮೈಲಿಬೇನೆ ಬಂದು, ತೀರಾ ಸಂಕಟ ಉಂಟಾಗಿ, ಶರೀರ ದುರ್ಬಲವಾಗಿ ಕಣ್ಣು ಕೂಡ ಕಾಣಿಸದಿರುವಂತಾದ ಹೊತ್ತಿನಲ್ಲಿ ಸಹಜಾನಂದ ಅವದೂತರು ಕೊಲ್ಲೂರು-ಕೊಡಚಾದ್ರಿಗೆ ತೆರಳಿ ಭಗವಂತನ ಧ್ಯಾನಕ್ಕೆ ಮುಂದಾದರು. ಸಹಜಾನಂದ ಅವದೂತರು ಸನ್ಯಾಸ ದೀಕ್ಷೆ ಪಡೆದಿದ್ದು ಸಿದ್ದಾಪುರ ತಾಲೂಕಿನ ನೆಲೆಮಾಂವ್ ಮಠದಲ್ಲಿ. ನೆಲೆಮಾಂವ್ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿಗಳು ಸನ್ಯಾಸ ದೀಕ್ಷೆಯನ್ನು ನೀಡಿದರು. ಆ ಸಂದರ್ಭದಲ್ಲಿ ಶ್ರೀ ಶ್ರೀಧರ ಸ್ವಾಮಿಗಳಖ ದರ್ಶನ ಭಾಗ್ಯ ಸಹಜಾನಂದ ಅವದೂತರಿಗಾಯಿತು. ಸಹಜಾನಂದ ಅವದೂತರು ಶ್ರೀಧರ ಸ್ವಾಮೀಜಿಗಳನ್ನೇ ಗುರುವಾಗಿ ಸ್ವೀಕರಿಸಿದರು. ಶ್ರೀಧರರಿಂದ ತಪಸ್ಸಿಗೆ ಪ್ರೇರಣೆ ಪಡೆದು ಉಗ್ರ ತಪಸ್ಸನ್ನು ಗೈದರು. ಕಾಶಿಯಲ್ಲಿ 12 ವರ್ಷಗಳ ಕಾಲ ನಿರಂತರವಾಗಿ ತಪಸ್ಸನ್ನು ಮಾಡಿದರು. ಈ ಸಂದರ್ಭದಲ್ಲಿ ಸಹಜಾನಂದ ಅವದೂತರಿಗೆ ಮೈಮೇಲಿನ ಪರಿವೆಯೂ ಇಲ್ಲದಂತಾಯಿತು. ಅನ್ನ-ಆಹಾರಾದಿಗಳ ಅಪೇಕ್ಷೆ ಕೂಡ ದೂರವಾಯಿತು. ಮೈಮೇಲೆ ವಿಷ ಪ್ರಾಣಿಗಳು ಸಂಚಾರ ಮಾಡಿದರೂ ಕೂಡ ಏಕಾಗ್ರತೆಗೆ ಭಂಗ ಬರಲಿಲ್ಲ.
ನಿರಂತರ ತಪಸ್ಸಿನ ಕಾರಣ ಕೆಲವೇ ಕಾಲದ ನಂತರ ಸಹಜಾನಂದ ಅವದೂತರ ಕಣ್ಣಿನ ದೃಷ್ಟಿ ಸರಿಯಾಯಿತು. ಮೈಮೇಲಿನ ಮೈಲಿ ಕಲೆಯ ಅವಶೇಷಗಳು ಕಾಣೆಯಾದವು. ಮನಸ್ಸೂ ಪ್ರಪಂಚದಿಂದ ಪರಮಾರ್ಥವನ್ನು ನಿರೀಕ್ಷಿಸುವಂತಾಗಿತ್ತು. ಆಗಲೇ ಗೃಹಸ್ಥ ಧರ್ಮವನ್ನು ಸ್ವೀಕರಿಸಿ, ಪುತ್ರನನ್ನು ಪಡೆದಿದ್ದರೂ ಗೃಹಸ್ಥ ಧರ್ಮದ ಕಡೆಗಿನ ಆಸಕ್ತಿ ಸಂಪೂರ್ಣ ಕಳೆದುಹೋಗಿತ್ತು. ರಾಗ-ದ್ವೇಷ-ಶೋಕ-ಮೋಹವಿಲ್ಲದ ಸಿದ್ಧಾಂತಃಕರಣದ ಸಂಸ್ಕಾರ ದೊರೆತಿತ್ತು. ನಂತರ ಶ್ರೀಧರ ಸ್ವಾಮೀಜಿಗಳು ತೆರಳಿದ ಕಡೆಗೆಲ್ಲ ತೆರಳಿದರು. ಶ್ರೀಧರರು ತಪಸ್ಸು ಮಾಡಿದ ಕಡೆಗಳಲ್ಲೆಲ್ಲ ಸಹಜಾನಂದರೂ ತಪಸ್ಸು ಮಾಡಿದರು. ನಂತರ ಕೊಳಗೀಬೀಸಿಗೆ ಬಂದ ಸಹಜಾನಂದ ಅವದೂತರು ತಮ್ಮ ಕರ್ಮ ಹಾಗೂ ಜ್ಞಾನ ಯೋಗಕ್ಕೆ ಅದೇ ಸಿದ್ಧಭೂಮಿ ಎಂದು ತಿಳಿದು ಅಲ್ಲಿಯೇ ನೆಲೆನಿಂತರು. ಈ ಸಂದರ್ಭದಲ್ಲಿ ಅವರ ಮೈಮೇಲೆ ವಸ್ತ್ರಗಳಿರಲಿಲ್ಲ. ಕೇವಲ ಕೌಪೀನಧಾರಿಯಾಗಿದ್ದು. ಮೇಲೊಂದು ವ್ಯಾಘ್ರಚರ್ಮವನ್ನು ಸುತ್ತುತ್ತಿದ್ದರು. ಕೈಯಲ್ಲೊಂದು ಕಮಂಡಲವಿರುತ್ತಿತ್ತು. ತದನಂತರ ಕೊಳಗೀಬೀಸಿನ ಮಾರುತಿ ದೇವಾಲಯವನ್ನು ಜೀಣರ್ೋದ್ಧಾರಗೊಳಿಸಿದರು. ತದನಂತರದಲ್ಲಿ ಕೊಳಗೀಬೀಸು ಆಂಜನೇಯ ಸ್ವಾಮಿಯ ಪುಣ್ಯಕ್ಷೇತ್ರವಾಗಿ ಪವಿತ್ರ ಯಾತ್ರಾ ಸ್ಥಳವಾಗಿ ಬದಲಾಯಿತು.
ದಿನಕಳೆದಂತೆ ಕೊಳಗೀಬೀಸಿನಲ್ಲಿ ಧಾಮರ್ಿಕ ಪಾಠಗಳನ್ನು, ವೇದ ಶಿಬಿರಗಳನ್ನು ಆರಮಭಿಸಲಾಯಿತು. ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸುವ ತಾಣವಾಗಿ ಕೊಳಗೀಬೀಸು ಮಾಪರ್ಾಡಾಯಿತು. ಅಷ್ಟೇ ಅಲ್ಲದೇ ಯಕ್ಷಗಾನ ಕಲೆಗೆ ವಿಶೇಷ ಪ್ರೋತ್ಸಾಹ ಸಿಕ್ಕಿತು. ಯಕ್ಷಗಾನದ ಮೇರು ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಅದೆಷ್ಟೋ ಮಹಾನ್ ಕಲಾವಿದರು ಶ್ರೀಕ್ಷೇತ್ರದಲ್ಲಿ ಗೆಜ್ಜೆ ಕಟ್ಟಿ ಕುಣಿದರು. ಕ್ರಮೇಣ ಸಹಜಾನಂದ ಅವದೂತರಿಗೆ ಶಿಷ್ಯ ಪರಂಪರೆಯೂ ಬೆಳೆಯಿತು. ಶ್ರೀಧರ ಸ್ವಾಮಿಗಳನ್ನು ಕೊಳಗೀಬೀಸಿಗೆ ಪದೇ ಪದೆ ಕರೆಯಿಸಿ ಧಾಮರ್ಿಕ ಕೈಂಕರ್ಯವನ್ನು ಕೈಗೊಂಡರು.
ಯಾತ್ರಾರ್ಥವಾಗಿ ಕಾಶಿಗೆ ಹೋಗಿದ್ದ ಸಂದರ್ಭದಲ್ಲಿ ಶ್ರೀಧರ ಸ್ವಾಮೀಜಿಗಳ ದರ್ಶನ ಭಾಗ್ಯ ಲಭಿಸಿತು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ತಮ್ಮ ಪೂವರ್ಾಶ್ರಮದ ಪುತ್ರನಿಗೆ ಸನ್ಯಾಸ ದೀಕ್ಷೆಯನ್ನು ಕೊಟ್ಟು ಶ್ರೀಶ್ರೀ ರಾಮಾನಂದ ಸ್ವಾಮೀಗಳೆಂದು ಕರೆದರು. ಇನ್ನೋರ್ವ ಗೃಹಸ್ಥ ಶಿಷ್ಯನಿಗೂ ಸನ್ಯಾಸ ದೀಕ್ಷೆಯನ್ನು ನೀಡಿ ಶಿವಾನಂದ ಎನ್ನುವ ಅಭಿದಾನವನ್ನು ನೀಡಿದರು. ಸಹಜಾನಂದ ಅವದೂತರ ಪರಮ ಪ್ರಿಯ ಶಿಷ್ಟಯರಾದ ರಾಮಾನಂದ ಸ್ವಾಮೀಜಿಗಳು ಈಗ ದೀವಗಿಯ ಮಠದಲ್ಲಿ ನೆಲೆನಿಂತಿದ್ದಾರೆ. ಶಿವಾನಂದ ಸ್ವಾಮೀಜಿಗಳು ಯಲ್ಲಾಪುರ ತಾಲೂಕಿನ ನಾಯ್ಕನಕೆರೆಯಲ್ಲಿ ನೆಲೆನಿಂತು ಇದೀಗ ಮುಕ್ತರಾಗಿದ್ದಾರೆ. ಇವರಷ್ಟೇ ಅಲ್ಲದೇ ಪರಮಾನಂದರು ಹಾಗೂ ಕೇಶವಾನಂದರು ಎಂಬ ಇನ್ನಿಬ್ಬರು ಪ್ರಿಯ ಶಿಷ್ಯರಿದ್ದರು. ಇವರಿಬ್ಬರೂ ಕೂಡ ಪರಿವ್ರಾಜಕ ಸನ್ಯಾಸಿಗಳಾಗಿ ಲೋಕಸಂಚಾರ ಮಾಡಿದ್ದಾರೆ.
ಅವದೂತ ಪರಂಪರೆಯ ಪ್ರಮುಖ ಯತಿವರೇಣ್ಯರು ಎನ್ನಿಸಿಕೊಂಡಿರುವ ಸಹಜಾನಂದ ಅವದೂತರು ತಮ್ಮ ಸಾಧನೆಯ ಬಲದಿಂದಲೇ ಎಲ್ಲವನ್ನೂ ಸಾಧಿಸಿದವರು. ಮಹಾತ್ವರ ಸಾಲಿನಲ್ಲಿ ನಿಂತವರು. ತಾವೂ ಬೆಳಗಿ, ಇನ್ನೊಬ್ಬರ ಜೀವನಕ್ಕೂ ಬೆಳಕಾದವರು. ಗೃಹಸ್ಥಾಶ್ರಮದ ನಂತರ ಸನ್ಯಾಸ ದೀಕ್ಷೆ ಪಡೆದವರು. ಆಂಜನೇಯನನ್ನು ಆರಾಧ್ಯದೈವವಾಗಿ ನಂಬಿ ಆರಾಧಿಸಿದವರು. ಇಂತಹ ಸಹಜಾನಂದ ಅವದೂತರು ಕೊಳಗೀಬೀಸಿನ ಮಾರುತಿ ದೇವರ ಸನ್ನಿದಾನದಲ್ಲಿಯೇ ಆ1, 1966ರ ಪರಾಭವ ಸಂವತ್ಸರದ ಅಧಿಕ ಶ್ರಾವಣ ಶುದ್ಧ ಹುಣ್ಣಿಮೆಯ ಸೋಮವಾರದಂದು ಮಹಾಸಮಾಧಿ ಹೊಂದಿದರು. ತದನಂತರ 1978ರ ಫೆ.20ರಂದು ಸ್ವರ್ಣವಲ್ಲಿ ಮಠದ ಸರ್ವಜ್ಞೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ಸಹಜಾನಂದ ಅವದೂತ ಸ್ವಾಮೀಜಿಗಳು ಮಹಾಸಮಾಧಿ ಹೊಂದಿದ ಸ್ಥಳದಲ್ಲಿ ಗುರುಲಿಂಗ ಸ್ಥಾಪನೆ ಮಾಡಿದರು. ಕಳೆದ 5 ದಶಕಗಳಲ್ಲಿ ಕೊಳಗೀಬೀಸ್ ಧಾಮರ್ಿಕ ತಾಣವಾಗಿ ಬೆಳೆದು ಬಂದಿದೆ. ಮಾರುತಿಯ ಶಕ್ತಿ ಸ್ಥಳಗಳಲ್ಲಿ ಒಂದು ಎನ್ನಿಸಿದೆ. ಮಹಾಗುರು ಆಂಜನೇಹ, ಆಂಜನೇಯನ ಆರಾಧಕ ಶಿಷ್ಯ ಸಹಜಾನಂದ ಅವದೂತರ ವಿಶಿಷ್ಟ ಕ್ಷೇತ್ರ ಎಂದು ಜನಮಾನಸದಲ್ಲಿ ನೆಲೆನಿಂತಿದೆ. ಭಕ್ತರ ಬೇಡಿಕೆಗಳನ್ನು ಈಡೇರಿಸುವ ಇಷ್ಟಾರ್ಥಗಳನ್ನು ಕರುಣಿಸುವ, ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವ ತಾಣ ಎಂದು ಪ್ರಖ್ಯಾತಿ ಪಡೆದಿದೆ.


(ವಿಶ್ವವಾಣಿಯ ಆ.18ರ ಗುರು ಪುರವಣಿಯಲ್ಲಿ ಪ್ರಕಟಗೊಂಡಿದೆ) 

Tuesday, August 9, 2016

ಅಕ್ರಮ ಚಟುವಟಿಕೆಗಳ ತಾಣವಾದ ಭೀಮನವಾರೆ ಗುಡ್ಡ

ಮಾದಕ ವಸ್ತುಗಳ ಬಳಕೆ : ಅರಣ್ಯ ಇಲಾಖೆ ಅಧಿಕಾರಿಗಳ ಶಾಮೀಲಿನ ಶಂಕೆ

.....................

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು ಎನ್ನಿಸಿಕೊಂಡಿರುವ ಸಿದ್ದಾಪುರ ತಾಲೂಕಿನ ಭೀಮನವಾರೆಗುಡ್ಡ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ. ಮಾದಕ ವ್ಯಸನಿಗಳು, ಮದ್ಯವ್ಯಸನಿಗಳು ಭೀಮನವಾರೆ ಗುಡ್ದದಲ್ಲಿ ದಿನಂಪ್ರತಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಈ ಕುರಿತು ಕಠಿಣ ಕ್ರಮ ಕೈಗೊಲ್ಳಬೇಕಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಭೀಮನವಾರೆ ಗುಡ್ಡ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಆಂಗುಬೆಯ ಸೂಯಾಸ್ತವನ್ನು ನೆನಪಿಗೆ ತರುವಂತಹ ಪ್ರಸಿದ್ಧ ತಾಣ ಇದಾಗಿದ್ದು ಸಿದ್ದಾಪುರದಿಂದ 35 ಕಿಲೋಮೀಟರ್ ಹಾಗೂ ಶಿರಸಿಯಿಂದ 30 ಕಿಲೋಮೀಟರ್ ದೂರದಲ್ಲಿದೆ. ಈ ಪ್ರವಾಸಿ ತಾಣದ ವೀಕ್ಷಣೆಗೆ ದಿನಂಪ್ರತಿ ಹಲವಾರು ಜನರು ದೂರದ ಊರುಗಳಿಂದ ಆಗಮಿಸುತ್ತಾರೆ. ವಾರಾಂತ್ಯದಲ್ಲಿ ನೂರಾರು ಜನರು ಭೀಮನವಾರೆ ಗುಡ್ಡದಲ್ಲಿ ಪ್ರಕೃತಿ ವೀಕ್ಷಣೆ ಮಾಡಿ ಮನದಣಿಯುತ್ತಿದ್ದಾರೆ.
ಭೀಮನವಾರೆಗುಡ್ಡದಲ್ಲಿ ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಭೀಮನವಾರೆ ಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ದಿನಂಪ್ರತಿ ಮದ್ಯಪಾನದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಲ್ಲದೇ ವಾರದ ಕೆಲವು ದಿನಗಳಲ್ಲಿ ಈ ತಾಣ ವೀಕ್ಷಣೆಗೆ ಆಗಮಿಸುವ ಸುತ್ತಮುತ್ತಲ ಪ್ರದೇಶದ (ಅಲ್ಪಸಂಖ್ಯಾತ ಕೋಮಿನ) ಯುವಕರು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿಕೊಂಡಿದ್ದಾರೆ. ಭೀಮನವಾರೆ ಗುಡ್ಡದ ಪ್ರದೇಶದಲ್ಲಿ ಗಾಂಜಾ ಸೇವನೆ, ಮದ್ಯಪಾನ ಮಾಡುವುದು ಸೇರಿದಂತೆ ಹಲವು ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೇ ಭೀಮನವಾರೆ ಗುಡ್ಡಕ್ಕೆ ಬರುವ ಪ್ರೇಮಿಗಳೂ ಕುಡ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ಸ್ಥಳೀಯರ ಅಂಬೋಣವಾಗಿದೆ.
ಭೀಮನವಾರೆ ಗುಡ್ಡದಲ್ಲಿ ಅಕ್ರಮ ಚಟುವಟಿಕೆ, ಮದ್ಯಪಾನ, ಮಾದಕ ವಸ್ತುಗಳ ಸೇವನೆಗೆ ಸಾಕ್ಷಿಯಾಗಿ ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿರುತ್ತವೆ. ಈ ಭಾಗದ ಯುವಕರು ನಿಗದಿತ ಸಮಯಕ್ಕೆ ಭೀಮನವಾರೆ ಗುಡ್ಡವನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳುತ್ತಾರಾದರೂ ಕೆಲ ದಿನಗಳಲ್ಲಿಯೇ ಮದ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುತ್ತಾರೆ ಎಂಬುದು ಸ್ಥಳೀಯರ ಅಂಬೋಣ. ಭೀಮನವಾರೆ ಗುಡ್ಡದಲ್ಲಿಯೇ ಇರುವ ಒಂದೆರಡು ಸ್ಥಳಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಸ್ಪೀಟ್ ಕೂಡ ಆಡಲಾಗುತ್ತಿದೆ. ಇದರಿಂದಾಗಿ ಪ್ರವಾಸಿ ತಾಣದ ಪ್ರದೇಶ ಸಂಪೂರ್ಣವಾಗಿ ಹಾಳಾಗುತ್ತಿದೆ.
ಭೀಮನವಾರೆ ಗುಡ್ಡಕ್ಕೆ ತೆರಳುವ ಮಾರ್ಗದ ನಡುವೆ ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಒಂದು ಇದೆ. ಆದರೆ ಇಲ್ಲಿ ಸಮರ್ಪಕವಾಗಿ ತನಿಖೆ ನಡೆಸಲಾಗುವುದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭೀಮನವಾರೆ ಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಕಂಡೂ ಕಾಣದಂತಿದ್ದಾರೆ. ದಿನಂಪ್ರತಿ ಅನೈತಿಕ ಚಟುವಟಿಕೆಗಳು ನಡೆದರೂ ಅರಣ್ಯ ಇಲಾಖೆ ಅಧಿಕಾರಿಗಳು ತಮಗೂ, ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವತರ್ಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಡೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಅನುಮಾನಕ್ಕೂ ಕೂಡ ಕಾರಣವಾಗಿದೆ.   ನೂರಾರು ಪ್ರವಾಸಿಗರು ಆಗಮಿಸಿ ಅತ್ಯುತ್ತಮ ಪ್ರವಾಸಿ ತಾಣವಾಗಬಹುದಾಗಿದ್ದ, ತನ್ಮೂಲಕ ಸ್ಥಳೀಯರಿಗೆ ಆದಾಯದ ಮೂಲವಾಗಿ ಮಾಪರ್ಾಡಾಗಬಹುದಾಗಿದ್ದ ಬೀಮನವಾರೆಗುಡ್ಡ ಅಕ್ರಮ ಚಟುವಟಿಕೆಗಳಿಂದಾಗಿ ಕುಖ್ಯಾತಿಗೆ ಕಾರಣವಾಗುತ್ತಿದೆ.
ಮುಂದಿನ ದಿನಗಳಲ್ಲಿ ಭೀಮನವಾರೆಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಮಾದಕವಸ್ತು ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರವಾಸಿ ತಾಣಕ್ಕೆ ಆಗಮಿಸುವವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಮಾದಕ ವಸ್ತು ಸೇವನೆ ಮಾಡುವವರ ವಿರುದ್ಧ ಹಾಗೂ ಅನೈತಿಕ ಚಟುವಟಿಕೆಗಳನ್ನು ಕೈಗೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

///////////////////

ಬೀಮನವಾರೆ ಗುಡ್ಡದ ವಾತಾವರಣ ಹದಗೆಟ್ಟಿದೆ. ಮದ್ಯವ್ಯಸನಿಗಳು ಹಾಗೂ ಮಾದಕ ವಸ್ತು ಸೇವನೆ ಮಾಡುವವರ ತಾಣವಾಗಿ ಬದಲಾಗಿದೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ರಾಜೇಶ ನಾಯ್ಕ
ಪ್ರವಾಸಿ


(ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)