Thursday, October 8, 2009

ಎಲ್ಲ ಮರೆತಿರುವಾಗ ( ಕಥೆ-ಭಾಗ 4)

(ಮೂರನೆ ಭಾಗದಿಂದ.....)
***************************************
ರಚನಾ ಗೆ ಸಂದಿಗ್ಧವಾಗಿತ್ತು..
ಅವನನ್ನು ಕರೆದೊಯ್ಯಬೇಕು ಅನ್ನುವ ಆಸೆ.. ಆದರೆ ಯಾರು ಏನು ಹೇಳುತ್ತಾರೋ ಎಂಬ ಆಲೋಚನೆ ಬೇರೆ..
ಕೊನೆಗೆ ಆಕೆ ನಿರ್ಧರಿಸಿ..ಆತನನ್ನು ಕರೆದೊಯ್ದಳು..
ಪಾಪ.. ಆಟ ಮೊದಲಿಗೆ ಈಕೆಯ್ ಜೊತೆಗೆ ಬರಲೇ ಇಲ್ಲ..
ಈಕೆಯೂ ಬಿಡಲಿಲ್ಲ..
ಆಕೆ ನೇರವಾಗಿ ಅವನನ್ನು ಕರೆದೊಯ್ದದ್ದು ಒಂದು ಹುಚ್ಚರ ಆಸ್ಪತ್ರೆಗೆ..
ಅಲ್ಲಿ ಅವನನ್ನು ಚಿಕಿತ್ಸೆಗೆ ಒಳಪಡಿಸಲಾಯಿತು..
ಸುಮಾರು ಎರಡು ತಿಂಗಳ ನಂತರ ಆತ ಸರಿಯಾದ..
ಮೊದಲಿನ ಹಾಗೆ ಉತ್ತಮ ವ್ಯಕ್ತಿ ಆದ..
ಹುಚ್ಚು ಬಿಟ್ಟಿತು..
***************************************************
ಕೊನೆಗೊಮ್ಮೆ ರಚನಾ , ಅವನನ್ನು ಬೆಂಗಳೂರಿನ ತನ್ನ ಮನೆಗೆ ಕರೆದೊಯ್ದಳು.
ಆತನಿಗೆ ಯಾಕೋ ತುಂಬಾ ಮುಜುಗರವಾಗಿತ್ತು..
ಆದರೆ ಮುಜುಗರದಸ್ಟೆ ಆತ್ಮೀಯತೆಯ ಭಾವವು ಆಕೆಯೆಡೆಗೆ ಉಮ್ಟಗಿತ್ತು..
ರಚನಾ ಅವನನ್ನು ಮೊದಲಿನ ಹಾಗೆ ಮಾಡಲು ಬಹಳ ಪ್ರಯತ್ನ ಪಟ್ಟು ಯಶಸ್ವಿಯಾದಳು..
ಆತನು ದಿನ ಕಳೆದಂತೆ ಮೊದಲಿನ ಲವಲವಿಕೆ ಪಡೆದುಕೊಂಡ..
ಅಲ್ಲದೆ ಮೊದಲಿನ ಹಾಗೆ ಹಾಡಲು ಪ್ರಾರಂಭಿಸಿದ...
ಅವನನ್ನು ಆಕೆ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಕರೆದೊಯ್ದು ಹಾಡಲು ಪ್ರಾರಂಭಿಸಿದಳು..
ಮೊದಮೊದಲು ಆತ ಬಹಳವೇ ಕಷ್ಟ ಪಟ್ಟ. ಆದರು ಕೊನೆಗೆ ಆತ ಸರಿಯಾದ ದಾರಿಗೆ ಬಂದ..
ಹಿಂದೆಂದೂ.. ಕಲಿತಿದ್ದ ರಾಗಗಳೆಲ್ಲ.. ನೆನಪಾದವು..
ಮರೆತರು ಮರೆಯದ ಸಂಗೀತ ಮತ್ತೆ ಹಾಡಾಗಿ ಬಂತು..
******************************************
ಇಂಥ ಹೊತ್ತಿನಲ್ಲಿಯೇ ಆಕೆ ಆತನಿಗೆ ಸ್ವಲ್ಪ ಸ್ವಲ್ಪವಾಗಿಯೇ ಹತ್ತಿರವಾಗ ತೊಡಗಿದಳು..
ಸ್ನೇಹ ಕ್ರಮೇಣ ಪ್ರೇಮದೆಡೆಗೆ ತಿರುಗತೊಡಗಿತು.....

(ಮುಂದುವರಿಯುವುದು............................................)

Wednesday, October 7, 2009

ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ

ಇದು ನಮ್ಮ ಪ್ರಿತಿಯ್ ನಿರ್ದೇಶಕ ಯೋಗರಾಜ ಭಟ್ ಬರೆದ ಮುಂಗಾರು ಮಳೆ ಯಾ ಕವಿತೆ.. 
ಹಾಗೇ ಸುಮ್ಮನೆ ಇಲ್ಲಿ ಇಟ್ಟಿದ್ದೇನೆ ಅಸ್ಟೇ...

ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ


ನಿನ್ನ ಮುಗಿಲ ಸಾಲೆ..
ಧರೆಯ ಕೊರಳ ಪ್ರೇಮದ ಮಾಲೆ..
ಸುರಿವ ಒಲುಮೆಯ ಜಡಿ ಮಳೆಗೆ..
ಪ್ರೀತಿ ಮೂಡಿದೆ

ಯಾವ ಚಿಪ್ಪಿನಲ್ಲಿ..
ಯಾವ ಹನಿಯು ಮುತ್ತಾಗುವುದೊ..
ಒಲವು ಎಲ್ಲಿ ಕುಡಿ ಒಡೆಯುವುದೊ..
ತಿಳಿಯದಾಗಿದೆ

ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ

—————-೧————————–

ಭುವಿ ಕೆನ್ನೆ ತುಂಬ..
ಮುಗಿಲು ಸುರಿದ ಮುತ್ತಿನ ಗುರುತು

ನನ್ನ ಎದೆಯ ತುಂಬ..
ಅವಳು ಬಂದ ಹೆಜ್ಜೆಯ ಗುರುತು..
ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ

ಎಳೆ ಮುಗಿಲಿನಲ್ಲಿ..
ರಂಗು ಚೆಲ್ಲಿ ನಿಂತಳು ಅವಳು..
ಬರೆದು ಹೆಸರ ಕಾಮನ ಬಿಲ್ಲು…
ಏನು ಮೋಡಿಯೊ

ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ

—————-೨————————–

ಯಾವ ಹನಿಗಳಿಂದ..
ಯಾವ ನೆಲವು ಹಸಿರಾಗುವುದೊ

ಯಾರ ಸ್ಪರ್ಷದಿಂದ..
ಯಾರ ಮನವು ಹಸಿಯಾಗುವುದೊ..
ಯಾರ ಉಸಿರಲ್ಯಾರ ಹೆಸರೊ..
ಯಾರು ಬರೆದರೊ

ಯಾವ ಪ್ರೀತಿ ಹೂವು..
ಯಾರ ಹೃದಯದಲ್ಲರಳುವುದೊ..
ಯಾರ ಪ್ರೇಮ ಪೂಜೆಗೆ ಮುಡಿಪೊ..
ಯಾರು ಬಲ್ಲರು...

ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ

Thursday, October 1, 2009

ಎಲ್ಲ ಮರೆತಿರುವಾಗ (ಕಥೆ- ಭಾಗ - ೩)

(ಎರಡನೇ ಭಾಗದಿಂದ )
.....ಅವಳಿಗೆ ಮನೆಗೆ ಹೋದರು ಅದೇ ನೆನಪು.
ಅವನ್ಯಾರೋ... ಅವನೇಕೆ ಹಾಗೋ..ಅಂತ..
ಯಾಕೋ ಆಕೆಗೆ ಅಂದುಕೊಂಡ ಪ್ರಾಜೆಕ್ಟ್ ಕೆಲಸ ಮಾಡಲು
ಆಗಲೇ ಇಲ್ಲ..
ಮತ್ತೆ ಮರಳಿ ಶಿರಸಿಗೆ ಬಂದಳು.. ಊರಿನಿಂದ..
ಜೊತೆಗೆ ತನ್ನ ಗೆಳತಿ ಕವಿತಳನ್ನು ಕರೆದುಕೊಂಡು ಬಂದಿದ್ದಳು..
ಶಿರಸಿಗೆ ಬಂದವಳು ಮೊದಲು ಮಡಿದ ಕೆಲಸವೆಂದರೆ ಆ ಹಾಡುಗಾರ
ಹುಚ್ಚನನ್ನು ಹುಡುಕಿದ್ದು.. ಆದರೆ ಆತ ಆ ಬಸ್ ಸ್ಟ್ಯಾಂಡ್ ನಲ್ಲಿ ಸಿಗಲೇ ಇಲ್ಲ..
ಎಲ್ಲಿ ಹೋದನೋ ಅಂದುಕೊಂಡು ಮರಳಿದಳು..
ಯಾರೇ? ಎಂದು ಕೇಳಿದ ಕವಿತಾಳಿಗೆ ಏನೋ ಸಬೂಬು ಹೇಳಿದಳು ರಚನಾ .
................................................................................................
ರಚನ ಗೆ ಇತ್ತೀಚಿಗೆ ಅದೇ ಆಲೋಚನೆ.. ತಾನ್ಯಾಕೆ ಅವನ ಬಗ್ಗೆ ಆಲೋಚಿಸುತ್ತಿದ್ದೇನೆ..ಅಂತ..
ಹೀಗಿರಲು, ಒಮ್ಮೆ ಅವಳಿಗೆ ಬೋರಾಗಿದ್ದಾಗ ಸಿಕ್ಕ ಪ್ತ್ರಿಕೆಯೋಮ್ದರಲ್ಲಿ ಕನ್ನದಿಸುತ್ತಿದ್ದಾಗ
ಅವನ ಫೋಟೋ ಅಕಸ್ಮಾತ್ತಾಗಿ ಕಂಡಿತು. ಅಚ್ಚರಿಯಿಂದ ಓದಿದವಳಿಗೆ ಗೊತ್ತದದ್ದೇನೆಮದರೆ
ಆತ ಹಿಂದೊಮ್ಮೆ ರಾಜ್ಯ ಮಟ್ಟದ ಹಾಡುಗಾರ ಆಗಿದ್ದ ಎಂಬುದು..
ಯಾರೋ ವರದಿಗಾರ ಆತನ ಬಗ್ಗೆ ವರದಿ ಮಾಡಿದ್ದ.. ಈಗಂತೂ ಅವನೆಡೆಗಿದ್ದ ಕುತೂಹಲ
ಇಮ್ಮಡಿಸಿತು... ಅರೆ ರಾಜ್ಯ ಮಟ್ಟದ ಹಾಡುಗಾರ ಹುಚ್ಚನೇಕೆ ಆದ?
ಯಾಕೋ ಅವಳಿಗೆ ಕುಮಾರ ಗಂಧರ್ವ ನೆನಪಿಗೆ ಬಂದರು..
ಆತ ಹಾಗೆ ಆಗಲು ಇನ್ನೇನೋ ಕಾರಣವಿದೆ ಅನ್ನಿಸಿತು ಅವಳಿಗೆ...
ಮತ್ತೆ ಆತನನ್ನು ಹುಡುಕಲು ಹೊರಟಳು..
ಅಂತು ಶಿರಸಿ ಪೇಟೆಯ ಗಲ್ಲಿ ಗಲ್ಲಿಯನ್ನು ಹುಡುಕಿದ ಮೇಲೆ ಅಲ್ಲೆಲ್ಲೋ ಆತ ಸಿಕ್ಕ.

(ಮುಂದುವರಿಯುವುದು...............)