Saturday, February 23, 2019

ಒಳ್ಳೆಯ ಕಥೆ... ಕೆಟ್ಟ ನಿರೂಪಣೆ - ಮೆಹಬೂಬಾ (ನಾನು ನೋಡಿದ ಚಿತ್ರಗಳು-೫)

ಪ್ರೇಮಕಾವ್ಯ ಕಟ್ಟುವಲ್ಲಿ ಎಡವಿದ ಪುರಿ


ಒಂದು ಪೂರ್ವ ಜನ್ಮದ ಕಥೆ... ಆಗಾಗ ಬೀಳುವ ಕನಸು.. ಕನಸಿನಲ್ಲೇ ಕನವರಿಸುವ ಹುಡುಗ... ಥಟ್ಟನೆ ಪೂರ್ವ ಜನ್ಮದ ಹುಡುಗಿ ಕಣ್ಣೆದುರು ಬಂದರೆ....

ಇಂತದ್ದೊಂದು ಕಥೆ ಇಟ್ಟುಕೊಂಡು, ಭಾರತ ಹಾಗೂ ಪಾಕಿಸ್ಥಾನದ ಸಂಬಂಧದ ಕುರಿತು ತಿಳಿಸುವ ಸಿನಿಮಾ ಮೆಹಬೂಬಾ.

೧೯೭೧ ರ ಯುದ್ಧದ ಸಂದರ್ಭದಲ್ಲಿ ನಡೆಯುವ ಕಥೆ ಒಂದೆಡೆಯಾದರೆ, ೨೦೧೮ರ ವೇಳೆಗೆ ನಡೆಯುವ ಕಥೆ ಇನ್ನೊಂದು ಕಡೆ.

೧೯೭೧ರಲ್ಲಿ ಕಥಾ ನಾಯಕ ಪಾಕಿಸ್ಥಾನಿ ಸೈನಿಕ. ಆಗ ನಾಯಕಿ ಭಾರತದ ಹಿಂದೂ ಯುವತಿ. ೨೦೧೮ರಲ್ಲಿ ನಾಯಕ ಭಾರತದ ಸೈನಿಕನಾಗುವ ಮಹತ್ವಾಕಾಂಕ್ಷೆ ಉಳ್ಳವನು. ನಾಯಕಿ ಪಾಕಿಸ್ಥಾನಿ.

ನಾಯಕನಿಗೆ ಹಾಗೂ ನಾಯಕಿಗೆ ತನ್ನ ಹಿಂದಿನ ಜನ್ಮದ ಕಥೆ ಆಗಾಗ ಕನಸಿನಲ್ಲಿ ಕಾಡುತ್ತಿರುತ್ತದೆ. ವಾಸ್ತವದಲ್ಲಿ ನಾಯಕ- ನಾಯಕಿ ಎದುರಾಗುತ್ತಾರೆ. ಟ್ರೆಕ್ಕಿಂಗ್ ಹುಚ್ಚಿನ ನಾಯಕನಿಗೆ ಹಿಮಾಲಯದ ಪರ್ವತದ ನಡುವಿನ ಕಮರಿಯ ಆಳದಲ್ಲಿ ಸಿಗುವ ಹಿಂದಿನ ಜನ್ಮದ ನಾಯಕಿಯ ಮೃತದೇಹ. ಆಗ ಸಿಗುವ ಡೈರಿ, ಹಳೆಯ ಕಥೆ.. ಪ್ರಸ್ತುತ ಜನ್ಮದಲ್ಲಿ ನಾಯಕಿಯನ್ನು ಹುಡುಕಿ ಪಾಕಿಸ್ಥಾನ ಕ್ಕೆ ಹೊರಡುವುದು ಇತ್ಯಾದಿ..

ಕಥೆಯ ಒನ್ ಲೈನ್ ಚನ್ನಾಗಿದೆ. ಆದರೆ ನಿರ್ದೇಶಕರು ಅಲ್ಲಲ್ಲಿ ಸಿನಿಮಾವನ್ನು ಬಕ್ವಾಸ್ ಆಗಿಸಿದ್ದಾರೆ.

ಭಾರತ - ಪಾಕ್ ನಡುವೆ ಸಂಸ್ಕೃತಿ ವಿನಿಮಯದ ರೂಪದಲ್ಲಿ ವಿದ್ಯಾರ್ಥಿನಿ ಭಾರತಕ್ಕೆ ಬರುತ್ತಾಳೆ ಎನ್ನುವಂತದ್ದನ್ನು ನಿರ್ದೇಶಕರು ತೋರಿಸಿದ್ದಾರೆ.

ಸಿನಿಮಾ ಅಂತ್ಯದಲ್ಲಿ ಭಾರತದ ಮಹಿಳಾ ಸೈನಿಕರು ಗಡಿ ಕಾಯುವ ಅಂಶ ತೋರಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ಪಾಕಿ ಸೈನಿಕರ ಆಕ್ರೋಶ, ಸುಮ್ಮ ಸುಮ್ಮನೆ ಗುಂಡು ಹಾರಿಸುವುದು ಇತ್ಯಾದಿ ತೋರಿಸಲಾಗಿದೆ. ಈ ಸಂದರ್ಭದಲ್ಲಿ ನಿರ್ದೇಶಕರು ಚಿತ್ರದ ಮೇಲೆ ತಮ್ಮ ಹಿಡಿತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಗಟ್ಟಿ ನಿರೂಪಣೆ ಇದ್ದಿದ್ದರೆ ಕ್ಲೈಮ್ಯಾಕ್ಸ್ ಇನ್ನಷ್ಟು ಸುಂದರ ಹಾಗೂ ಸಹಜವಾಗಿ ಮೂಡಿ ಬರುತ್ತಿತ್ತು.

ಇಸ್ಲಾಂ ಜಿಂದಾಬಾದ್... ಎನ್ನುವುದು ನೋಡುಗರನ್ನು ಇನ್ನೊಂದು ಹಂತಕ್ಕೆ ತಲುಪಿಸುತ್ತದೆ. ಪಾಕಿಸ್ಥಾನಕ್ಕೆ ಜಿಂದಾಬಾದ್ ಹೇಳು ಎಂದು ಖಳ ನಾಯಕ, ನಾಯಕನ ಮೇಲೆ ಒತ್ತಡ ಹೇರಿದಾಗ ತಿರುಗಿ ಬೀಳುವ ನಾಯಕ ಸನ್ನಿವೇಶವನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಆದರೆ ಭಾರತೀಯ ಮಹಿಳಾ ಸೈನಿಕರನ್ನು ಕಾಮಿಡಿಯನ್ನಾಗಿಸಿದ್ದಾರೆ. ಇದು ಖಂಡಿತ ಸರಿಯಾದುದಲ್ಲ.

ತೆಲುಗಿನಲ್ಲಿ ಕಳೆದ ವರ್ಷ ತೆರೆಕಂಡ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಹೆಸರಾಂತ ನಿರ್ದೇಶಕ ಪುರಿ ಜಗನ್ನಾಥ್.

ಪುರಿ ಜಗನ್ನಾಥ್ ತಮ್ಮ ಪುತ್ರ ಆಕಾಶ್ ಪುರಿಯನ್ನು ಬೆಳ್ಳಿ ತೆರೆಗೆ ತರಲು ಆಯ್ದುಕೊಂಡ ಸಿನಿಮಾ ಮೆಹಬೂಬಾ. ಮೊದಲ ಚಿತ್ರದಲ್ಲಿ ಆಕಾಶ್ ಉತ್ತಮವಾಗಿ ನಟಿಸಿದ್ದಾರೆ. ಆದರೆ ಮತ್ತಷ್ಟು ಪಳಗುವ ಅಗತ್ಯವಿದೆ. ಮೊದಲ ಚಿತ್ರದ ಕಾರಣಕ್ಕೆ ಆಕಾಶ್ ಗೆ ಭೇಷ್ ಎನ್ನಬಹುದು.

ಚಿತ್ರದ ನಾಯಕಿ ಕನ್ನಡತಿ ನೇಹಾ ಶೆಟ್ಟಿ. ಮುಂಗಾರು ಮಳೆಯಲ್ಲಿ ನಟಿಸಿದ್ದ ಮಾದಕ ಚಲುವೆ ಚಿತ್ರದಲ್ಲಿ ಉತ್ತಮ ನಟನೆಯೊಂದಿಗೆ ಸೆಳೆಯುತ್ತಾಳೆ. ಮುಸ್ಲಿಂ ಯುವತಿಯಾಗಿ ನಟಿಸಿದ ಈಕೆ ಮನಸ್ಸಿನಲ್ಲಿ ನೆಲೆ ನಿಲ್ಲುತ್ತಾಳೆ. ಕನ್ನಡದ ಚಲನಚಿತ್ರ ರಂಗದವರು ನೇಹಾ ಶೆಟ್ಟಿಯವರಿಗೆ ಅವಕಾಶ ಯಾಕೆ ಕೊಡಲಿಲ್ಲ ಎನ್ನುವುದು ಇನ್ನೂ ನನಗೆ ಕಾಡುತ್ತಿದೆ.

ಉಳಿದಂತೆ ರಾಹುಲ್ ಶರ್ಮಾ, ಸಯ್ಯಾಜಿ ಶಿಂಧೆ, ಪ್ರಮೋದಿನಿ ನಟನೆ ಚನ್ನಾಗಿದೆ.

ಕನ್ನಡದವರೇ ಆದ ಅಜನೀಶ್ ಲೋಕನಾಥ್ ಸಂಗೀತ ಒಂದು ಮಟ್ಟಿಗೆ ಇದೆ. ಆದರೆ ಹಾಡುಗಳು ನೆನಪಿನಲ್ಲಿ ಇರುವುದಿಲ್ಲ.

ಎಲ್ಲ ತೆಲುಗು ಚಿತ್ರಗಳಂತೆ ನಾಟಕೀಯತೆ ಸಾಕಷ್ಟಿದೆ. ಸರಿಯಾಗಿ ಕೆತ್ತಿದ್ದರೆ ಪ್ರೇಮಕಾವ್ಯ ಆಗಬಹುದಿತ್ತು. ಆದರೆ ಮೆಹಬೂಬಾಳನ್ನು ನಿರ್ದೇಶಕರು ಕುರೂಪಿ ಮಾಡಿದ್ದಾರೆ. ಕನ್ನಡವೂ ಸೇರಿ ಹಲವು ಭಾಷೆಗಳಲ್ಲಿ ಒಳ್ಳೆಯ ಚಿತ್ರ ಕೊಟ್ಟ ಪುರಿ ಜಗನ್ನಾಥ್ ಹಲವು ಸಂದರ್ಭಗಳಲ್ಲಿ ಎಡವಿದ್ದಾರೆ. ಹಿಡಿತ ಕಳೆದುಕೊಂಡಿದ್ದಾರೆ.

ಚಿತ್ರ ಅತ್ಯುತ್ತಮವಲ್ಲ. ಆದರೆ ಒಮ್ಮೆ ನೋಡಬಹುದು ಅಷ್ಟೇ.
ಚಿತ್ರಕ್ಕೆ ನಾನು ಕೊಡುವ ಅಂಕ ೫ ಕ್ಕೆ ೨.೫

Friday, February 22, 2019

ಪಾಠ ಮಾಡುವ ಗುರುವೃಂದದ ಗೋಳು ಕೇಳುವರ್ಯಾರು?

ಶಿಕ್ಷಕ ವರ್ಗ ಎಂದರೆ ಮಕ್ಕಳಿಗೆ ವಿದ್ಯಾದಾನ ಮಾಡುವ ಪುಣ್ಯ ಕಾರ್ಯ ಕೈಗೊಳ್ಳುವ ವರ್ಗ ಎನ್ನುವ ಮಾತಿದೆ. ಬೋಧನಾ ವೃತ್ತಿ ಸಮಾಜದಲ್ಲಿ ತನ್ನದೇ ಆದ ಗೌರವ ಹಾಗೂ ಆದರಗಳನ್ನು ಹೊಂದಿರುವ ವೃತ್ತಿ. ಆದರೆ ಶಿಕ್ಷಕರ ಮೇಲೆ ಇರುವ ಹಲವು ಹೊರೆಗಳಿಂದಾಗಿ ಅವರು ಕೈಗೊಳ್ಳುವ ಬೋಧನಾ ಕಾರ್ಯಕ್ಕೆ ತೊಡಕು ಉಂಟಾಗುತ್ತಿದೆ.
ಶಿಕ್ಷಕರೆಂದರೆ ಸಾಕು ಅವರಿಗೆ ವಿಶೇಷವಾದ ಗೌರವ ಹಾಗೂ ಆದರಗಳನ್ನು ತೋರಲಾಗುತ್ತದೆ. ಮಕ್ಕಳ ಬದುಕನ್ನು ರೂಪಿಸುವಂತಹ ಪುಣ್ಯ ಕಾರ್ಯವನ್ನು ಶಿಕ್ಷಕರು ಕೈಗೊಳ್ಳುವುದರಿಂದ ಅವರೆಡೆಗೆ ಯಾವಾಗಲೂ ಗೌರವದ ದೃಷ್ಟಿಯೇ ಇರುತ್ತದೆ. ಇನ್ನು ಗ್ರಾಮೀಣ ಭಾಗಗಳಲ್ಲಂತೂ ಮಾಸ್ಟರ್, ಮಾಸ್ಟ್ರು ಎಂದೇ ಸಂಬೋಧಿಸುತ್ತಾರೆ. ಆದರೆ ಇಂತಹ ಶಿಕ್ಷಕ ವರ್ಗ ಬೋಧನೆಯ ಜತೆ ಜತೆಯಲ್ಲಿ ಕೈಗೊಳ್ಳುವ ಇತರ ಕಾರ್ಯಗಳಿಂದ ಸಂಪೂರ್ಣ ಹೈರಾಣಾಗುತ್ತಿದ್ದಾರೆ.
ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಲ್ಲಿ ಶಿಕ್ಷಕರು ಕೈಗೊಳ್ಳುವ ಕಾರ್ಯಗಳು ಒಂದೆರಡಲ್ಲ. ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಕೆಲಸ ಒಂದೆಡೆಯಾದರೆ, ಅದರಿಂದ ಹೊರತಾದ ಕೆಲಸಗಳನ್ನು ಕೈಗೊಳ್ಳುವ ಬಗೆ ಅನೇಕ. ಅದಕ್ಕೆ ತಕ್ಕಂತೆ ಸರ್ಕಾರ ಕೂಡ ಶಿಕ್ಷಕರ ಮೇಲೆ ಹಲವು ಹೊರೆಗಳನ್ನು ಹೇರುವ ಮೂಲಕ ಶಿಕ್ಷಕ ವೃತ್ತಿ ಕೈಗೊಳ್ಳುವವರನ್ನು ಹೈರಾಣು ಮಾಡುತ್ತಿದೆ.
ಅಕ್ಷರ ದಾಸೋಹ, ಕ್ಷೀರ ಭಾಗ್ಯ, ಸುವರ್ಣ ಆರೋಗ್ಯ ಚೈತನ್ಯ, ಸೈಕಲ್ ವಿತರಣೆ, ಪಠ್ಯ ಪುಸ್ತಕ ವಿತರಣೆ, ಬ್ಯಾಗ್ ವಿತರಣೆ, ಚಿಣ್ಣರ ಅಂಗಳ, ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಬಾ ಮರಳಿ ಶಾಲೆಗೆ, ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ, ಶಾಲೆ ಬಿಟ್ಟ ಮಕ್ಕಳ ಮನೆಗೆ ಭೇಟಿ, ಎಸ್‌ಡಿಎಂಸಿ ರಚನೆ ಹೀಗೆ ಹತ್ತು ಹಲವು ಕಾರ್ಯಗಳು ಶಿಕ್ಷಕರ ನೆತ್ತಿಗೆ ಏರುತ್ತವೆ.
ಪಾಠ ಕಲಿಸುವ ಪುಣ್ಯ ಕಾರ್ಯವನ್ನು ಕೈಗೊಳ್ಳುವ ಶಿಕ್ಷಕರು ಕೈಗೊಳ್ಳುವ ಇತರ ಕಾರ್ಯಗಳು ಇಲ್ಲಿಗೆ ನಿಲ್ಲುವುದಿಲ್ಲ. ಶೌಚಾಲಯ ನಿರ್ವಹಣೆ, ಕಟ್ಟಡ ಕಾಮಗಾರಿ, ಸಮುದಾಯದತ್ತ ಶಾಲೆಗಳನ್ನು ನಡೆಸುವುದು, ಶಾಲಾ ವಾರ್ಷಿಕೋತ್ಸವ, ಪ್ರಗತಿಪತ್ರ ತುಂಬುವುದು, ಪಾಠ ಯೋಜನೆ, ಪಾಠ ಬೋಧನೆ, ಕ್ರಿಯಾ ಯೋಜನೆ, ಕ್ರಿಯಾ ಸಂಶೋಧನೆ, ಶೈಕ್ಷಣಿಕ ಯೋಜನೆ, ದಾಖಲೆ ನಿರ್ವಹಣೆ, ಡಾಟಾ ಎಂಟ್ರಿ, ಮಕ್ಕಳಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ವಿದ್ಯಾರ್ಥಿ ವೇತನ ಪ್ರಕ್ರಿಯೆ ಪೂರ್ಣಗೊಳಿಸುವುದು, ಸಮನ್ವಯ ಶಿಕ್ಷಣ ಹೀಗೆ ಹಲವು ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.
ಇನ್ನು ಚುನಾವಣೆಗಳು ಬಂದರಂತೂ ಶಿಕ್ಷಕರ ಪಾಡು ದೇವರಿಗೇ ಪ್ರೀತಿ. ಮತದಾರರ ಪಟ್ಟಿ ರಚನೆ, ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರರಣೆ ಮಾಡುವುದು, ಚುನಾವಣೆ ಸಂದರ್ಭದಲ್ಲಿ  ವಿಶೇಷ ತರಬೇತಿ, ಮತದಾನದ ಕಾರ್ಯ ಕೈಗೊಳ್ಳಲು ವಿವಿಧ ಪ್ರದೇಶಗಳಿಗೆ ತೆರಳುವುದು ಹೀಗೆ ಒದ್ದಾಡಬೇಕಾಗುತ್ತದೆ. ಚುನಾವಣೆ ಘೋಷಣೆಯಾದಾಗಿನಿಂದ ಹಿಡಿದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳುವ ವರೆಗೂ ಶಿಕ್ಷಕ ವೃಂದ ಕೈಗೊಳ್ಳುವ ಕಾರ್ಯಗಳು ಬಹಳ ಪ್ರಮುಖವಾದದ್ದು.
ಜನಗಣತಿ, ಮಕ್ಕಳ ಗಣತಿ ಹಾಗೂ ಜಾತಿ ಗಣತಿ ಸಂದರ್ಭರ್ದಲ್ಲಿ ಕೂಡ ಮೊದಲು ನೆನಪಾಗುವುದು ಶಿಕ್ಷಕರೇ. ಬಿಎಲ್‌ಒ ಕೆಲಸ, ಔಷೀಯ ಪರಿಕರಗಳನ್ನು, ಮಾತ್ರೆಗಳನ್ನು ಹಂಚುವುದು, ಪಲ್ಸ್ ಪೋಲಿಯೋ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು, ಸಮಾಲೋಚನಾ ಸಭೆ  ನಡೆಸುವುದು, ಎಸ್‌ಡಿಎಂಸಿ ಸಭೆ  ಕೈಗೊಳ್ಳುವುದು, ಪಾಲಕರ ಸಭೆ, ಶಿಕ್ಷಕರ ಸಭೆ, ಪುನಶ್ಚೇತನ ತರಬೇತಿ, ಬ್ರಿಟೀಷ್ ಕೌನ್ಸಿಲ್ ಸಭೆ, ಹೊರ ಸಂಚಾರ, ಕ್ಷೇತ್ರ ಸಂದರ್ಶನ, ಶೈಕ್ಷಣಿಕ ಪ್ರವಾಸ, ಜಿಲ್ಲಾ ದರ್ಶನ ಮುಂತಾದ ಕಾರ್ಯಗಳನ್ನೂ ಕೈಗೊಳ್ಳಬೇಕಾಗುತ್ತದೆ.
ಇಷ್ಟಕ್ಕೇ ನಿಲ್ಲುವುದಿಲ್ಲ ನೋಡಿ ಶಿಕ್ಷಕರ ಕಾರ್ಯ. ಸೇತುಬಂಧ  ಪರೀಕ್ಷೆಗಳನ್ನು ನಡೆಸುವುದು, ಪರಿಹಾರ ಬೋಧನೆ ಹಾಗೂ ಪೂರಕ ಬೋಧನೆ ಕಾರ್ಯ ಕೈಗೊಳ್ಳುವುದು. ಮಕ್ಕಳಿಗಾಗಿ ನಲಿ ಕಲಿ ಹಾಗೂ ಕಲಿ ನಲಿ ಕಾರ್ಯಕ್ರಮಗಳನ್ನು ನಡೆಸುವುದು, ಚೈತನ್ಯ ಮಾದರಿ, ಟಿಎಲ್‌ಎಂ ತಯಾರಿ, ಚಿಣ್ಣರ ಚುಕ್ಕಿಘಿ, ಚುಕ್ಕಿ ಚಿನ್ನ, ಕೇಳೀ ಕಲಿ, ಕ್ರೀಡಾ ಮೇಳ, ಕಲಿಕೋತ್ಸವ, ಮೆಟ್ರಿಕ್ ಮೇಳ, ವಿಜ್ಞಾನ ಮೇಳ ಮುಂತಾದವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ.
ಮಕ್ಕಳ ಪ್ರತಿಭೆಗಳನ್ನು ಹೊರಹಾಕಲೆಂದೇ ರೂಪಿಸಲಾದ ಪ್ರತಿಭಾ  ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೈನ್ಸ್ ಇನ್‌ಸ್ಪೈರ್ ಅವಾರ್ಡ್, ಪೂರಕ ಪರೀಕ್ಷೆ, ನೈದಾನಿಕ ಪರೀಕ್ಷೆ, ಸಿಸಿಇ ಪರೀಕ್ಷೆ, ಘಟಕ ಪರೀಕ್ಷೆ ಹೀಗೆ ಹಲವು ಕಾರ್ಯಗಳು ಶಿಕ್ಷಕ ವರ್ಗವನ್ನು ಸುತ್ತಿಕೊಳ್ಳುತ್ತವೆ.
ಇನ್ನು ಪರೀಕ್ಷೆಗಳು ಬಂದರಂತೂ ಶಿಕ್ಷಕ ವರ್ಗದವರ ಬವಣೆ ಇನ್ನಷ್ಟು ಹೆಚ್ಚುತ್ತವೆ. ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ, ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ, ಕಸ್ತೂರಬಾ ಬಾಲಿಕಾ ವಿದ್ಯಾಲಯ ಪ್ರವೇಶ ಪರೀಕ್ಷೆ, ನವೋದಯ ಪ್ರವೇಶ ಪರೀಕ್ಷೆ, ಎನ್‌ಟಿಎಸ್ ಪರೀಕ್ಷೆ, ಎನ್‌ಎಂಎಂಎಸ್ ಪರೀಕ್ಷೆ ಮುಂತಾದವುಗಳನ್ನು ಕೈಗೊಳ್ಳಬೇಕು. ಈ ಎಲ್ಲ ಪರೀಕ್ಷೆಗಳಲ್ಲಿಯೂ ವಿದ್ಯಾರ್ಥಿಗಳು ಉತ್ತೀರ್ಣರಾಗುವ ನಿಟ್ಟಿನಲ್ಲಿ ತರಬೇತಿಯನ್ನು ಒಡಗಿಸಬೇಕಾಗುತ್ತದೆ.
ಇಷ್ಟರ ಜತೆಯಲ್ಲಿ ಸರ್ಕಾರಿ ಆಚರಣೆಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಶಿಕ್ಷಕ ವರ್ಗದ್ದು. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಹೀಗೆ ಹತ್ತು ಹಲವು ಸರ್ಕಾರಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಿದೆ.
ಇಷ್ಟೆಲ್ಲ ಕೆಲಸ ಮಾಡಿದ ನಂತರ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಯಾವಾಗ ಎನ್ನುವ ಪ್ರಶ್ನೆ ಕಾಡುವುದು ಸಹಜ. ಸರ್ಕಾರ ಕೂಡ ಈ ಎಲ್ಲ ಕಾರ್ಯಗಳನ್ನೂ ಶಿಕ್ಷಕರ ಮೇಲೆ ಹೇರಿ ನಿರಾಳವಾಗಿ ಕುಳಿತಿದೆ. ಈ ಎಲ್ಲ ಕಾರ್ಯಗಳನ್ನು ಕೈಗೊಳ್ಳುವ ಸಂದ‘ರ್ದಲ್ಲಿ ಸಣ್ಣ ಪುಟ್ಟ ಲೋಪಗಳು ಸಂ‘ವಿಸಿದರಂತೂ ಮುಗಿದೇ ಹೋಯಿತು ಎನ್ನುವ ಪರಿಸ್ಥಿತಿ ಇದೆ. ದಂಡವನ್ನು ಹಾಕಿಯೋ ಅಥವಾ ಇನ್ಯಾವುದೋ ರೀತಿಯ ಕ್ರಮಗಳನ್ನು ಕೈಗೊಂಡು ಶಿಕ್ಷಕರನ್ನು ಇನ್ನಷ್ಟು ಹೈರಾಣು ಮಾಡಲಾಗುತ್ತದೆ.
ಇಷ್ಟೆಲ್ಲ ಕಾರ್ಯಗಳನ್ನು ಕೈಗೊಳ್ಳುವ ಶಿಕ್ಷಕರಿಗೆ ಈ ಕಾರ್ಯಗಳನ್ನು ಕೈಗೊಂಡಿದ್ದಕ್ಕಾಗಿ ಸಮರ್ಪಕವಾಗಿ ಸಂಬಳ ಹಾಗೂ ಇತರೆ ಭ ತ್ಯೆಗಳನ್ನು ನೀಡಲಾಗುತ್ತದೆಯೇ ಎಂದರೆ ಊಹೂ ಇಲ್ಲ. ಭತ್ಯೆಗಳನ್ನು ಪಡೆಯುವ ಸಲುವಾಗಿ ಶಿಕ್ಷಕ ವರ್ಗ ಹಲವು ದಿನಗಳ ಕಾಲ ಅಲೆದಾಡಿದ ಸಂದ‘ರ್ಗಳೂ ಇದೆ. ಜತೆ ಜತೆಗೆ ಪ್ರತಿ‘ಟನೆಯ ಮಾರ್ಗಗಳನ್ನು ಹಿಡಿದ ಸಂದ‘ರ್ಗಳೂ ಇದೆ. ಸರ್ಕಾರ ‘ತ್ಯೆಗಳನ್ನು ಕೊಡುವ ಸಂದ‘ರ್ದಲ್ಲಿ ಚೌಕಾಸಿಯ ಮಾರ್ಗವನ್ನೂ ಹಿಡಿಯುತ್ತದೆ. 1 ರೂಪಾಯಿ ‘ತ್ಯೆ ಕೊಡುವ ಸಂದ‘ರ್ವಿದ್ದರೆ ಅಂತಹ ಸಂದ‘ರ್ಗಳಲ್ಲಿ 80 ಪೈಸೆ ಕೊಡುತ್ತೇನೆ ಒಪ್ಪಿಕೊಳ್ಳಿ ಎಂದು ತಾಕೀತು ಮಾಡುತ್ತದೆ. ಶಿಕ್ಷಕ ವೃಂದ ಇಂತಹ ತೊಂದರೆಗಳನ್ನೂ ವೌನವಾಗಿ ಸಹಿಸಿಕೊಂಡಿದ್ದಾರೆ, ಸಹಿಸಿಕೊಳ್ಳುತ್ತಲೇ ಇದ್ದಾರೆ.
ಇಷ್ಟೆಲ್ಲ ಕಾರ್ಯಗಳನ್ನು ಕೈಗೊಳ್ಳುವ ಶಿಕ್ಷಕ ವೃಂದದ ಸಂಖ್ಯೆ ರಾಜ್ಯದ ಶಾಲೆಗಳಲ್ಲಿ ಸಂಪೂರ್ಣವಾಗಿ ‘ರ್ತಿಯಾಗಿದೆಯೇ ಎಂದರೆ ಅದಕ್ಕೂ ನಕಾರಾತ್ಮಕ ಉತ್ತರವೇ ದೊರೆಯುತ್ತದೆ. ಕನ್ನಡ ಮಾ‘್ಯಮದ ಪ್ರತಿ ಶಾಲೆಗಳಲ್ಲಿಯೂ ಕನಿಷ್ಠ ಒಂದಾದರೂ ಶಿಕ್ಷಕ ಹುದ್ದೆ ಖಾಲಿ ಇದ್ದೇ ಇದೆ. ಕಳೆದ ಹಲವು ವರ್ಷಗಳಿಂದ ರಾಜ್ಯ ಸರ್ಕಾರ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲಘಿ. ಈ ಕುರಿತಂತೆ ವಿಚಾರಿಸಿದರೆ ಆರ್ಥಿಕ ಇಲಾಖೆಯ ಕಡೆಗೆ ಮುಖ ಮಾಡಲಾಗುತ್ತದೆ.
ಈ ಎಲ್ಲ ಹೊರೆಗಳನ್ನು ಹೊತ್ತು, ಒದ್ದಾಡುತ್ತಘಿ, ‘ವ್ಯ ‘ಾರತದ ಮುಂದಿನ ಪ್ರಜೆಗಳ ‘ವಿಷ್ಯವನ್ನು ರೂಪಿಸುತ್ತಿರುವ ಶಿಕ್ಷಕ ವೃಂದದ ಬವಣೆಯನ್ನು ಕೇಳುವವರ್ಯಾರು? ಬೋ‘ನೆಯ ಜತೆ ಜತೆಗೆ ಶಿಕ್ಷಕರ ತಲೆಯನ್ನು ಸುತ್ತಿಕೊಂಡಿರುವ ಇತರ ಕಾರ್ಯಗಳ ಹೊರೆಯನ್ನು ಇಳಿಸುವವರು ಯಾರು? ವಿದ್ಯಾರ್ಥಿಗಳ ‘ವಿಷ್ಯ ರೂಪಿಸುವ ಕಾರ್ಯದಲ್ಲಿ ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡುವ, ಅನಗತ್ಯ ಕಾರ್ಯಗಳ ಹೊರೆಯನ್ನು ಇಳಿಸಲು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಮುಂದಾಗುವರೇ ಎನ್ನುವುದು ಶಿಕ್ಷಕ ವಲಯದ ಪ್ರಶ್ನೆಘಿ.
ಶಿಕ್ಷಕರು ಎದುರಿಸುತ್ತಿರುವ ಇಂತಹ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಹುಡುಕುವ ಅಗತ್ಯವಿದೆ. ಬೋ‘ನೆಯನ್ನು ಹೊರತು ಪಡಿಸಿ ಶಿಕ್ಷಕ ವರ್ಗ ಎದುರಿಸುತ್ತಿರುವ ಇತರ ಕಾರ್ಯಗಳನ್ನು ತಡೆಯುವ ಅಗತ್ಯವಿದೆ. ಹೆಚ್ಚಿನ ಶಿಕ್ಷಕರ ನೇಮಕದ ಜತೆ ಜತೆಯಲ್ಲಿ ಸಮಯಕ್ಕೆ ಸರಿಯಾಗಿ ‘ತ್ಯೆ ಹಾಗೂ ಸಂಬಳ ನೀಡಿಕೆ, ಜನಗಣತಿ, ಚುನಾವಣೆ ಮುಂತಾದ ಕಾರ್ಯಗಳಿಗೆ ಬೇರೆಯ ಸಿಬ್ಬಂದಿಗಳನ್ನು ನೇಮಕ ಮಾಡುವುದು ಸೇರಿದಂತೆ ಹಲವು ಗಣನೀಯ ಬದಲಾವಣೆಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಹಲವು ಹೊರೆಗಳ ನಡುವೆ ಒದ್ದಾಡುತ್ತಿರುವ ಶಿಕ್ಷಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರ ದೃಢ ಹೆಜ್ಜೆ ನೀಡಲಿ ಎನ್ನುವುದು ಶಿಕ್ಷಕ ವರ್ಗದ ಆಶಯ.

Tuesday, February 5, 2019

ಟೆಸ್ಟ್ ಲೋಕದಲ್ಲಿ ಮೊದಲ ಶತಕದ ಸಂಭ್ರಮ

(ಚಾರ್ಲ್ಸ್ ಬ್ಯಾನರ್ ಮ್ಯಾನ್ )
ಶತಕ ಭಾರಿಸುವುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಕನಸು. ಅದರಲ್ಲಿಯು ಪ್ರಮುಖವಾಗಿ ಯಾವುದೇ ದೇಶದ ಪರ ಅಂತಾರಾಷ್ಟ್ರೀಯ ವಲಯದಲ್ಲಿ ಮೊದಲ ಶತಕ ಭಾರಿಸುವುದು ಎಂದರೆ ಅದಕ್ಕಿಿಂತ ಹೆಮ್ಮೆಯ ಸಂಗತಿ ಇನ್ನೊೊಂದು ಇರಲಾರದು. ಆಸ್ಟ್ರೇಲಿಯಾದ ಚಾರ್ಲ್ಸ್  ಬ್ಯಾನರ್‌ಮನ್ ಅವರಿಂದ ಹಿಡಿದು ಐರ್ಲೆಂಡ್‌ನ ಕೆವಿನ್ ಓಬ್ರಿಯಾನ್‌ವರೆಗೆ ಬೇರೆ ಬೇರೆ ದೇಶದ ಆಟಗಾರರು ಆಯಾಯಾ ದೇಶದ ಪರ ಮೊದಲ ಶತಕ ಭಾರಿಸಿ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಹಾಗಾದರೆ ಯಾವ ಯಾವ ದೇಶದ ಆಟಗಾರರಿಂದ ಆ ದೇಶದ ಟೆಸ್ಟ್ ಕ್ರಿಕೆಟ್‌ನ ಮೊದಲ ಶತಕ ದಾಖಲಾಯಿತು ಎನ್ನುವ ಕುತೂಹಲ ಪ್ರತಿಯೊಬ್ಬರಿಗೂ ಇರುವುದು ಸಹಜ. ಅಂತಹ ವಿಶಿಷ್ಟ ಸಂಗತಿಯ ಕುರಿತು ಇದೋ ಇಲ್ಲಿದೆ ಕಿರು ಮಾಹಿತಿ.

ಚಾರ್ಲ್ಸ್  ಬ್ಯಾನರ್‌ಮನ್ (ಆಸ್ಟ್ರೇಲಿಯಾ)
ಆಸ್ಟ್ರೇಲಿಯಾದ ಚಾರ್ಲ್ಸ್  ಬ್ಯಾನರ್‌ಮನ್ ಆಸ್ಟ್ರೇಲಿಯಾ ದೇಶದ ಪಾಲಿಗೆ ಮೊಟ್ಟ ಮೊದಲ ಶತಕ ಭಾರಿಸಿದ ಖ್ಯಾತಿಯನ್ನು ಹೊಂದಿದ್ದಾರೆ. ವಿಶ್ವ ಕ್ರಿಕೆಟ್ ಇತಿಹಾಸ (ಟೆಸ್ಟ್, ಏಕದಿನ ಹಾಗೂ ಟಿ20)ದಲ್ಲಿ ದಾಖಲಾದ ಮೊಟ್ಟ ಮೊದಲ ಶತಕ ಭಾರಿಸಿದವರು ಇವರು ಎಂಬ ಖ್ಯಾತಿಯನ್ನು ಹೊಂದಿದ್ದಾರೆ. 1876-77ರಲ್ಲಿ ಮೇಲ್ಬೊರ್ನ್‌ನಲ್ಲಿ ನಡೆದ ಮೊಟ್ಟ ಮೊದಲ ಟೆಸ್ಟ್ ಪಂದ್ಯದಲ್ಲಿ  ಮೊಟ್ಟ ಮೊದಲ ಎಸೆತವನ್ನು ಎದುರಿಸಿದ್ದೂ ಈ ಬ್ಯಾನರ್‌ಮನ್ರೇ. ಅಂದಹಾಗೆ ಮೊದಲ ಶತಕ ಭಾರಿಸಿದ ಇವರು ಅಂದು ಗಳಿಸಿದ್ದು 165ರನ್.

ಡಬ್ಲು. ಜಿ. ಗ್ರೇಸ್ (ಇಂಗ್ಲೆೆಂಡ್)
ಕ್ರಿಕೆಟ್ ಪಿತಾಮಹ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿರುವ ಡಬ್ಲು ಜಿ. ಗ್ರೇಸ್ ಇಂಗ್ಲೆೆಂಡ್ ದೇಶದ ಮೊದಲ ಶತಕ ಭಾರಿಸಿದ ಆಟಗಾರ ಎನ್ನುವ ಖ್ಯಾತಿಯನ್ನು ಹೊಂದಿದ್ದಾರೆ. ಗ್ರೇಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಾಲ್ಕನೇ ಟೆಸ್ಟ್  ಪಂದ್ಯದಲ್ಲಿ ಶತಕ ಸಿಡಿಸಿದರು. 1880ರಲ್ಲಿ ದಿ ಓವಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಗ್ರೇಸ್ 152ರನ್ ಭಾರಿಸಿದ್ದರು.

ಜಿಮ್ಮಿ ಸಿಂಕ್ಲೇರ್ (ದಕ್ಷಿಣ ಆಫ್ರಿಕಾ)
ದಕ್ಷಿಣ ಆಫ್ರಿಕಾ ತಂಡ ಈಗ ವಿಶ್ವ ಕ್ರಿಕೆಟ್‌ನ ಭಲಿಷ್ಠ ರಾಷ್ಟ್ರಗಳಲ್ಲಿ ಒಂದು ಎಂದು ಹೆಸರಾಗಿರಬಹುದು. ಆದರೆ ತನ್ನ ಕ್ರಿಕೆಟ್ ಲೋಕದ ಆರಂಭಿಕ ದಿನಗಳಲ್ಲಿ ದಕ್ಷಿಣ ಆಫ್ರಿಕ ಬಹಳ ದುರ್ಬಲ ತಂಡವಾಗಿತ್ತು. ತನ್ನ ಮೊದಲ ಏಳು ಪಂದ್ಯಗಳಲ್ಲಿ ಯಾವೊಬ್ಬ ಆಟಗಾರ ಕನಿಷ್ಠ ಅರ್ಧಶತಕವನ್ನೂ ಭಾರಿಸಿರಲಿಲ್ಲ. ಆದರೆ 1898-99ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಇಂಗ್ಲೆೆಂಡ್ ವಿರುದ್ಧದ ಪಂದ್ಯದಲ್ಲಿ ದ. ಆಫ್ರಿಕಾದ ಜಿಮ್ಮಿ ಸಿಂಕ್ಲೆರ್ ಮೊಟ್ಟ ಮೊದಲ ಶತಕ ಭಾರಿಸಿದರು. ಈ ಪಂದ್ಯದಲ್ಲಿ ಅವರು 106 ರನ್ ಭಾರಿಸಿದ್ದರು. ಅಂದಹಾಗೆ ದ. ಆಫ್ರಿಕಾದ ಮೊದಲ ಮೂರು ಶತಕಗಳನ್ನು ಭಾರಿಸಿದ ಖ್ಯಾತಿಯೂ ಸಿಂಕ್ಲೇರ್ ಹೆಸರಿನಲ್ಲಿದೆ.

ಕ್ಲಿಫೋರ್ಡ್  ರೋಚ್ (ವೆಸ್ಟ್ ಇಂಡೀಸ್)
ಟ್ರಿನಿಡಾಡ್‌ನ ಆರಂಭಿಕ ಆಟಗಾರ ಕ್ಲಿಫೋರ್ಡ್  ರೋಚ್ ವೆಸ್ಟ್  ಇಂಡೀಸ್ ಪರ ಮೊದಲ ಶತಕ ಭಾರಿಸಿ ದಾಖಲೆ ಬರೆದರು. 1930ರಲ್ಲಿ ಬ್ರಿಡ್‌ಜ್‌‌ಟೌನ್‌ನಲ್ಲಿ ನಡೆದ ಇಂಗ್ಲೆೆಂಡ್ ವಿರುದ್ಧದ ಪಂದ್ಯದಲ್ಲಿ ಕ್ಲಿಫೋರ್ಡ್ ರೋಚ್ 122ರನ್ ಭಾರಿಸಿದರು. ಅಂದ ಹಾಗೆ ವಿಂಡೀಸ್ ಪರ ಮೊಟ್ಟ ಮೊದಲ ದ್ವಿಶತಕ ಭಾರಿಸಿದ ದಾಖಲೆಯೂ ಕ್ಲಿಫೋರ್ಡ್  ರೋಚ್ ಹೆಸರಿನಲ್ಲಿದೆ.

ಸ್ಟೀವ್ ಡೆಂಪ್‌ಸ್ಟರ್
1931ರಲ್ಲಿ ಟೆಸ್‌ಟ್‌ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ನ್ಯೂಜಿಲೆಂಡ್ ತನ್ನ ಎರಡನೇ ಪಂದ್ಯದಲ್ಲಿಯೇ ಆಟಗಾರನ ಶತಕಕ್ಕೆ ಸಾಕ್ಷಿಯಾಯಿತು. 1931ರಲ್ಲಿ ವೆಲ್ಲಿಂಗ್‌ಟನ್‌ನಲ್ಲಿ ಇಂಗ್ಲೆೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಟೀವ್ ಡೆಂಪ್‌ಸ್ಟರ್ ಆಕರ್ಷಕ ಶತಕ ಭಾರಿಸಿದರು. ಇದು ನ್ಯೂಜಿಲೆಂಡ್ ಪರ ಆಟಗಾರನೋರ್ವ ಭಾರಿಸಿದ ಮೊದಲ ಅಂತರಾಷ್ಟ್ರೀಯ ಶತಕವಾಗಿತ್ತು. ಆ ಪಂದ್ಯದಲ್ಲಿ ಡೆಂಪ್‌ಸ್ಟರ್ 136ರನ್ ಭಾರಿಸಿದರು.

ಲಾಲಾ ಅಮರನಾಥ್ (ಭಾರತ)
1933ರ ಡಿಸೆಂಬರ್‌ನಲ್ಲಿ ಭಾರತದ ಮೊಹಿಂದರ್ ಅಮರನಾಥ್ ಮೊಟ್ಟ ಮೊದಲ ಶತಕ ಭಾರಿಸಿದರು. ಇಂಗ್ಲೆೆಂಡ್ ವಿರುದ್ಧದ ಪಂದ್ಯದಲ್ಲಿ ಮೊಹಿಂದರ್ ಅಮರನಾಥ್ ಭಾರತದ ಪರ ಮೊಟ್ಟಮೊದಲ ಶತಕ ಸಿಡಿಸಿದರು. ಈ ಪಂದ್ಯದಲ್ಲಿ ಮೊಹಿಂದರ್ ಭಾರಿಸಿದ್ದು 118ರನ್. ಈ ಪಂದ್ಯದ ನಂತರ ಮೊಹಿಂದರ್ ಅಮರನಾಥ್ ತನ್ನ ರೂಮಿಗೆ ಮರಳಿದರೆ, ಹೊಟೆಲ್‌ನ ಹಾಸಿಗೆಯ ಮೇಲೆ ಅಭಿಮಾನಿಗಳು ಡಜನ್‌ಗಟ್ಟಲೆ ರೊಲೆಕ್‌ಸ್‌ ವಾಚುಗಳನ್ನು ಹಾಗೂ ಇತರ ಉಡುಗೊರೆಗಳನ್ನು ಇರಿಸಿದ್ದರಂತೆ.

ನಝರ್ ಮೊಹಮ್ಮದ್ (ಪಾಕಿಸ್ಥಾಾನ)
ಪಾಕಿಸ್ಥಾನ ತನ್ನ ಮೊಟ್ಟ ಮೊದಲ ಟೆಸ್ಟ್  ಪಂದ್ಯವನ್ನು ಭಾರತದ ವಿರುದ್ಧ 1952ರಲ್ಲಿ ಆಡಿತು. ಈ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ಥಾನದ ಪರ ಮೊದಲ ಶತಕ ದಾಖಲಾಯಿತು. ಲಕ್ನೌದಲ್ಲಿ ನಡೆದ ಪಂದ್ಯದಲ್ಲಿ ನಝರ್ ಮೊಹಮ್ಮದ್ ಭರ್ಜರಿ ಶತಕ ಭಾರಿಸಿದರು. ನಝರ್ ಮೊಹಮ್ಮದ್ ತಮ್ಮ 515 ನಿಮಿಷದ ಸುದೀರ್ಘ ಪಂದ್ಯದಲ್ಲಿ 124ರನ್ ಭಾರಿಸಿ ಅಜೇಯರಾಗಿ ಉಳಿದರು. ಪಾಕಿಸ್ಥಾನ ಸರಣಿಯನ್ನು ಜಯಿಸಲು ನಝರ್ ಪ್ರಮುಖ ಕಾರಣರಾಗಿದ್ದು ವಿಶೇಷ.

ಸಿದ್ಧಾರ್ಥ್ ವೆಟ್ಟಿಮುನಿ (ಶ್ರೀಲಂಕಾ)
1952ರಲ್ಲಿ ಪಾಕಿಸ್ಥಾನ ಟೆಸ್ಟ್  ಮಾನ್ಯತೆ ಪಡೆದ 30 ವರ್ಷಗಳ ನಂತರ ಶ್ರೀಲಂಕಾ ತಂಡ 1982ರಲ್ಲಿ ಟೆಸ್ಟ್  ಮಾನ್ಯತೆ ಪಡೆಯಿತು. 1982ರಲ್ಲಿಯೇ ಶ್ರೀಲಂಕಾದ ಮೊದಲ ಶತಕ ದಾಖಲಾಯಿತು. ಪಾಕಿಸ್ಥಾನದ ವಿರುದ್ಧ ಫೈಸಲಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾದ ಸಿದ್ಧಾರ್ಥ್ ವೆಟ್ಟಿಮುನಿ ಮೊಟ್ಟ ಮೊದಲ ಶತಕ ಸಿಡಿಸಿದರು. ಈ ಪಂದ್ಯದಲ್ಲಿ ಅವರು 157ರನ್ ಭಾರಿಸಿದರು.

ಡೇವ್ ಹಟನ್ (ಜಿಂಬಾಬ್ವೆ)
1992ರಲ್ಲಿ ಭಾರತದ ವಿರುದ್ಧ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಡೇವ್ ಹಟನ್ ಜಿಂಬಾಬ್ವೆಯ ಪರ ಮೊದಲ ಶತಕ ಭಾರಿಸಿದರು. 115 ವರ್ಷಗಳ ನಂತರ ಟೆಸ್ಟ್  ಮಾನ್ಯತೆ ಪಡೆದ ಮೊದಲ ಪಂದ್ಯದಲ್ಲಿ ಶತಕ ಭಾರಿಸಿದ ಖ್ಯಾತಿ ಡೇವ್ ಅವರದ್ದಾಯಿತು. ಈ ಪಂದ್ಯದಲ್ಲಿ ಡೇವ್ ಹಟನ್ ಗಳಿಸಿದ್ದು 121ರನ್. ಇದರಿಂದಾಗಿ ಪಂದ್ಯ ಡ್ರಾ ಆಗಿತ್ತು. ಚಾರ್ಲ್‌ಸ್‌ ಬ್ಯಾನರ್‌ಮನ್ ಗಳಿಸಿದ ಮೊದಲ ಪಂದ್ಯದ ಶತಕದ ಸಂದರ್ಭದಲ್ಲಿ ಪಂದ್ಯ ಡ್ರಾ ಆಗಿತ್ತು. 115 ವರ್ಷದ ನಂತರ ಡೇವ್ ಇನ್ನೊಮ್ಮೆ ಶತಕ ಗಳಿಸಿದರು. ಈ ಸಂದರ್ಭದಲ್ಲಿಯೂ ಪಂದ್ಯ ಡ್ರಾ ಆಗಿದ್ದು ವಿಶೇಷ.

ಅಮಿನುಲ್ ಇಸ್ಲಾಾಂ (ಬಾಂಗ್ಲಾಾದೇಶ)
2000 ನೆ ಇಸವಿಯಲ್ಲಿ ಟೆಸ್ಟ್  ಮಾನ್ಯತೆ ಪಡೆದ ಬಾಂಗ್ಲಾದೇಶದ ಪರ ಮೊಟ್ಟ ಮೊದಲ ಶತಕ ಭಾರಿಸಿದವರು ಅಮಿನುಲ್ ಇಸ್ಲಾಾಂ. ಭಾರತದ ವಿರುದ್ಧ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಅಮಿನುಲ್ ಇಸ್ಲಾಾಂ ಶತಕ ಭಾರಿಸಿದರು. ಅವರ ಈ ಶತಕದ ಇನ್ನಿಿಂಗ್‌ಸ್‌ 145ರನ್‌ಗೆ ಕೊನೆಗೊಂಡಿತ್ತು. ಪಂದ್ಯದಲ್ಲಿ ಇಸ್ಲಾಾಂ ಶತಕ ಸಿಡಿಸಿದರೂ ಪಂದ್ಯವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಿರಲಿಲ್ಲ.

ಕೆವಿನ್ ಓಬ್ರಿಯಾನ್
ಟೆಸ್ಟ್  ಆಡುವ ಮಾನ್ಯತೆ ಪಡೆದ 11ನೇ ರಾಷ್ಟ್ರ ಎಂಬ ಖ್ಯಾತಿ ಪಡೆದ ಐರ್ಲೆಂಡ್ ಪರ ಮೊದಲ ಶತಕ ಭಾರಿಸಿದ್ದು ಕೆವಿನ್ ಓಬ್ರಿಯಾನ್. ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದ ಎರಡನೇ ಇನ್ನಿಿಂಗ್‌ಸ್‌‌ನಲ್ಲಿ ಓಬ್ರಿಯಾನ್ ಶತಕ ಭಾರಿಸಿದರೂ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಮೊದಲ ಟೆಸ್ಟ್ ನಲ್ಲಿ ದೇಶದ ಪರ ಮೊದಲ ಶತಕ ಭಾರಿಸಿದ ಮೂರನೇ ನಿದರ್ಶನ ಇವರದಾಯಿತು.