Saturday, June 22, 2019

ಗೋವಾ ಹತ್ಯಾಕಾಂಡಕ್ಕೆ ಚರ್ಚ್ ಕ್ಷಮೆ ಕೋರುವುದು ಯಾವಾಗ?


ಭಾರತದ ಇತಿಹಾಸದಲ್ಲಿ ಅದೆಷ್ಟೋ ನರಮೇಧಗಳು ಜರುಗಿದೆ. ಮುಸ್ಲೀಮರ ಧಾಳಿಗೆ ಲಕ್ಷ ಲಕ್ಷ ಜನರು ಬಲಿಯಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕ್ರೈಸ್ತ ಮಿಷನರಿಗಳ ದಾಳಿಗೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಿಂದೂಗಳು ಜೀವ ತೆತ್ತಿರುವುದು ಬಹುತೇಕರಿಗೆ ತಿಳಿದಿಲ್ಲ. ಹಿಂದೂಗಳ ಸಾವಿಗೆ ಸಾಕ್ಷಿಯಾಗಿರುವುದೇ ನಮ್ಮದೇ ಪಕ್ಕದ ರಾಜ್ಯ ಗೋವಾ.
ಗೋವಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಮ್ಮದೇ ರಾಜ್ಯಕ್ಕೆ ಅಂಟಿಕೊಂಡಿರುವ ಭಾರತದ ಅತ್ಯಂತ ಚಿಕ್ಕ ರಾಜ್ಯ ಗೋವಾ. ಸಮುದ್ರ ತೀರಗಳು, ಅಗ್ಗದ ಮದ್ಯ, ಢಾಳವಾಗಿರುವ ಪೋರ್ಚುಗೀಸ್ ಸಂಸ್ಕೃತಿ ಹೀಗೆ ಹಲವು ಕಾರಣಗಳು ಗೋವಾದ ವೈಶಿಷ್ಟ್ಯತೆಗೆ ಸಾಕ್ಷಿ. ದೇಶ-ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಜನರು ಗೋವಾಕ್ಕೆ ಭೇಟಿ ನೀಡುತ್ತಾರೆ. ಇಂತಹ ಗೋವಾ ಕರಾಳ ಇತಿಹಾಸವನ್ನು ಹೊಂದಿರುವುದು ಹೆಚ್ಚಿನವರಿಗೆ ಗೊತ್ತಿಲ್ಲ.
450 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ವಸಾಹತು ವ್ಯವಸ್ಥೆಯಲ್ಲಿ ನಲುಗಿದ ಗೋವಾ ಭಾರತದೊಳಕ್ಕೆ ಸೇರುವವರೆಗೂ ಅಲ್ಲಿ ನಡೆದ ಕರಾಳ ಘಟನೆಗಳು ಹೆಚ್ಚಿನವರಿಗೆ ತಿಳಿಯದಿರುವುದು ದುರಂತ. ಪೋರ್ಚುಗೀಸರ ಆಡಳಿತದ ಅವಧಿಯಲ್ಲಿ ಗೋವಾದಲ್ಲಿ ನಡೆದ ಭಯಾನಕ ಘಟನೆಗಳು ಎಂತವರನ್ನೂ ಬೆಚ್ಚಿ ಬೀಳಿಸುತ್ತವೆ.
1510ರಲ್ಲಿ ಆಲ್ಫೋನ್ಸ್ ಡಿ ಅಲ್ಬುಕರ್ಕ್ ಗೋವಾಕ್ಕೆ ಬಂದಾಗಿನಿಂದ ಅಲ್ಲಿ ದುರಂತದ ಪುಟಗಳು ತೆರೆದುಕೊಳ್ಳುತ್ತವೆ. ಅಲ್ಬುಕರ್ಕ್ ಗೋವಾಕ್ಕೆ ಬರುವುದಕ್ಕೂ ಮೊದಲು ಆ ಪ್ರದೇಶವೆಲ್ಲ ಬಿಜಾಪುರದ ಆದಿಲ್ ಖಾನ್ ಆಡಳಿತಕ್ಕೊಳಪಟ್ಟಿತ್ತು. ಗೋವಾದ ಜನರು ಆದಿಲ್ ಖಾನ್ ಎಂಬ ಮುಸ್ಲೀಂ ಆಡಳಿತಗಾರನ ಅಡಿಯಲ್ಲಿ ಕೆಲಸ ಮಾಡಲು ವಿರೋಧ ವ್ಯಕ್ತಪಡಿಸುತ್ತಿರುತ್ತಾರೆ. ಅದಕ್ಕಾಗಿ ಹೊನ್ನಾವರದ ದಂಡನಾಯಕ ತಿಮ್ಮಯ್ಯನ ಸಹಾಯವನ್ನೂ ಪಡದುಕೊಂಡು ಆದಿಲ್ ಖಾನ್‌ನ ವಿರುದ್ಧ ಹೋರಾಟ ನಡೆಸುತ್ತಿರುತ್ತಾರೆ.
ಏಕಾಂಗಿ ತಿಮ್ಮಯ್ಯ ತಾನೊಬ್ಬನೇ ಆದಿಲ್‌ಖಾನ್‌ನನ್ನು ಎದುರಿಸಲು ಕಷ್ಟಪಡುತ್ತಿರುತ್ತಾನೆ. ಈ ವೇಳೆ ಆತ ಆದಿಲ್ ಖಾನ್ ವಿರುದ್ಧ ಯುದ್ಧಕ್ಕೆ ಅಲ್ಬುಕರ್ಕ್ ಬಳಿ ಸಹಾಯ ಯಾಚಿಸುತ್ತಾನೆ. ಬಲಿಷ್ಠ ನೌಕಾಪಡೆ ಹೊಂದಿದ್ದ ಅಲ್ಬುಕರ್ಕ್ ಸಹಾಯದಿಂದ ಆದಿಲ್ ಖಾನ್‌ನನ್ನು ತಿಮ್ಮಯ್ಯ ಸೋಲಿಸುತ್ತಾನೆ. ಆ ನಂತರ ಅಲ್ಬುಕರ್ಕ್‌ನಿಗೆ ತಿಮ್ಮಯ್ಯ ಸಾಕಷ್ಟು ಕೊಡುಗೆಗಳನ್ನು ನೀಡಿ ಕಳಿಸುತ್ತಾನೆ. ಈ ವೇಳೆಗೆ ಗೋವಾದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರು. ಬೆರಳೆಣಿಕೆಷ್ಟು ಮುಸ್ಲೀಮರಿದ್ದರು.
ನಂತರ ಅಲ್ಬುಕರ್ಕ್‌ಗೆ ಗೋವಾದ ಮೇಲೆ ಕಣ್ಣು ಬಿತ್ತು. ಆತ ಅದನ್ನು ತನ್ನ ಕೈವಶ ಮಾಡಿಕೊಳ್ಳಲು ಯತ್ನಿಸಿದ. ಹೊನ್ನಾವರದ ದಂಡನಾಯಕ ತಿಮ್ಮಯ್ಯನನ್ನು ಬೆದರಿಸಿ ಗೋವಾವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದರೊಂದಿಗೆ ಗೋವಾದ 450 ವರ್ಷಗಳ ದುರಂತ ಅಧ್ಯಾಯ ಆರಂಭಗೊಳ್ಳುತ್ತದೆ. ಈ ದುರಂತದ ವಿವರಗಳನ್ನು ಗೋವಾದ ದುರಂತ ಅಧ್ಯಾಯವನ್ನು ಅಂಕಣಕಾರ್ತಿ ಶೆಫಾಲಿ ವೈದ್ಯ ವಿವರವಾಗಿ ಬಿಚ್ಚಿಟ್ಟಿದ್ದಾರೆ.
ಶೆಫಾಲಿ ವೈದ್ಯ ನೀಡಿದ ವಿವಿರಗಳ ಪ್ರಕಾರ, ತಿಮ್ಮಯ್ಯ ಪೋರ್ಚುಗೀಸರ ಬೆದರಿಕೆಗೆ ಮಣಿದ ನಂತರ ಗೋವಾದಲ್ಲಿ ಕರಾಳ ದಿನಗಳು ಆರಂಭಗೊಂಡವು. ಸಾಮೂಹಿಕ ಮತಾಂತರ, ವಿನಾಕಾರಣ ಶಿಕ್ಷೆಯನ್ನು ನೀಡುವ, ಕ್ರಿಶ್ಚಿಯನ್ ಮಿಷನರಿಗಳನ್ನು ವಿರೋಧಿಸುವವರನ್ನು ನೇಣಿಗೆ ಹಾಕುವಂತಹ ಕಠಿಣ ಕ್ರಮಗಳನ್ನು ಕೈಗೊಂಡಿರುವುದು ಹಲವರಿಗೆ ತಿಳಿದಿಲ್ಲ.
ಪೋರ್ಚುಗೀಸ್ ಆಡಳಿತ ಆರಂಭವಾದ ನಂತರ ಗೋವಾದಲ್ಲಿ ವ್ಯವಸ್ಥಿತಯವಾಗಿ ಮತಾಂತರಗಳು ಆರಂಭಗೊಂಡವು. ದೇವಸ್ಥಾನಗಳನ್ನು ನೆಲಸಮ ಮಾಡಲಾಯಿತು. ಅಂತಹ ಜಾಗಗಳಲ್ಲಿ ಚರ್ಚುಗಳು ನಿರ್ಮಾಣಗೊಂಡವು. ಬೆದರಿಸುವ ಮುಖಾಂತರ, ಆಮಿಷಗಳನ್ನು ಒಡ್ಡುವ ಮೂಲಕ ಹಾಗೂ ಇತರ ಹಲವು ಮಾರ್ಗಗಳ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಕಾರ್ಯಗಳು ನಡೆದವು.
16ನೇ ಶತಮಾನದಲ್ಲಿಯೇ ಯಾರು ಕ್ರಿಶ್ಚಿಯನ್‌ರನ್ನು ವಿರೋಧಿಸುತ್ತಾರೋ, ಕ್ರಿಶ್ಚಿಯನ್ ಆಚರಣೆಗಳನ್ನು ಕೈಗೊಳ್ಳುವುದಿಲ್ಲವೋ ಅಂತವರನ್ನು ಗೋವಾದಿಂದ ಹೊರಕ್ಕೆ ಓಡಿಸಲಾಯಿತು. ಗೋವಾದಲ್ಲಿ ಹಿಂದೂಗಳನ್ನು ಓಡಿಸಿದ ನಂತರ ಅಲ್ಲಿ ಪೋರ್ಚುಗೀಸರ ಹಿಡಿತ ಇನ್ನಷ್ಟು ಬಲಗೊಂಡಿತು. ಗೋವಾದ ಕೆಲವು ದ್ವೀಪಗಳಿಗೆ ಮಾತ್ರ ಮೊದ ಮೊದಲು ಸೀಮಿತರಾಗಿದ್ದ ಪೋರ್ಚುಗೀಸರು ನಂತರದಲ್ಲಿ ಆ ದ್ವೀಪಗಳಿಂದ ಮುಂದಡಿ ಇಟ್ಟರು. ಪ್ರಮುಖ ಸ್ಥಳಗಳಲ್ಲಿ ತಮ್ಮ ವಸಾಹತು ಸ್ಥಾಪಿಸಿದರು. ವಸಾಹತು ಸ್ಥಳದಲ್ಲಿ ಮತಾಂತರಗಳು ಅವ್ಯಾಹತವಾಗಿ ನಡೆದವು.
ಗೋವಾದಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಹಲವರು ಬಹುತೇಕ ಸಂದರ್ಭಗಳಲ್ಲಿ ಹಿಂದೂ ಆಚರಣೆಗಳನ್ನು ಮುಂದುವರಿಸಿದ್ದರು. ಮೂರ್ತಿಗೆ ಹೂವುಗಳನ್ನು ಇಡುವುದು, ಹಿಂದೂಗಳಂತೆ ಬಟ್ಟೆಗಳನ್ನು ತೊಡುವುದು, ದೀಪಗಳನ್ನು ಬೆಳಗುವುದು ಹೀಗೆ ಹಲವು ಸಂಪ್ರದಾಯಗಳನ್ನು ಮುಂದುವರಿಸಿದ್ದರು. ಅಲ್ಲದೇ ಕೆಲವರು ಮರಳಿ ಹಿಂದೂ ಧರ್ಮಕ್ಕೆ ಬರುವ ಯತ್ನವನ್ನೂ ಕೈಗೊಂಡರು. ಇದು ಪೋರ್ಚುಗೀಸರಿಗೆ ಸರಿ ಕಾಣಲಿಲ್ಲ.
ವಿಶೇಷವಾಗಿ ಆಗ ಅಲ್ಲಿ ಕ್ರೈಸ್ತ ಮಿಷನರಿಗಳ ಮುಂದಾಳತ್ವ ವಹಿಸಿದ್ದ  ಫ್ರಾನ್ಸಿಸ್  ಕ್ಸೇವಿಯರ್‌ಗೆ ಇದು ಸರಿ ಕಾಣಿಸಲಿಲ್ಲ. ಆತ ಹಿಂದೂಗಳನ್ನು ನಂಬಬಾರದು, ಹಿಂದುಗಳು ಎಂದಿಗೂ ನಂಬಿಕೆಗೆ ಅರ್ಹರಲ್ಲ  ಎಂದು ಹೇಳಿದ್ದಲ್ಲದೇ, ವ್ಯಾಟಿಕನ್‌ನಲ್ಲಿದ್ದ ಪೋಪ್‌ಗೆ ಒಂದು ಪತ್ರವನ್ನು ಬರೆಯುತ್ತಾನೆ. ಈ ಪತ್ರದಲ್ಲಿ ಧರ್ಮಾಚರಣೆಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ವಿಚಾರಣಾ ನ್ಯಾಯಾಲಯವನ್ನು ಆರಂಭಿಸಬೇಕು ಎಂದು ಆಗ್ರಹಿಸುತ್ತಾನೆ.
ಕ್ಯಾಥೋಲಿಕ್ ಆಚರಣೆಗಳನ್ನು ವಿರೋಧಿಸುವವರ ವಿರುದ್ಧ ಕ್ರಮ ಕೈಗೊಳ್ಳಲೆಂದೇ ಆರಂಭಗೊಂಡ ವಿಚಾರಣಾ ನ್ಯಾಯಾಲಯ (ಕೋರ್ಟ್ ಆಫ್  ಇನ್ಕ್ವಿಸಿಷನ್) ಹಲವು ಕರಾಳ ಅದ್ಯಾಯಗಳನ್ನು ಹೊಂದಿದೆ.
ಫ್ರಾನ್ಸಿಸ್ ಕ್ಸೇವಿಯರ್ ಪತ್ರಕ್ಕೆ ಮನ್ನಣೆ ನೀಡಿದ ಪೋರ್ಚುಗೀಸ್ ಸರ್ಕಾರ ಗೋವಾದಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್ ಆರಂಭಕ್ಕೆ ಒಪ್ಪಿಗೆ ನೀಡಿತು. ಹಳೆಯ ಗೋವಾದಲ್ಲಿದ್ದ ಆದಿಲ್ ಖಾನ್ ಅರಮನೆಯಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್ ಆರಂಬಿಸಲಾಯಿತು. ಈ ಅರಮನೆ ಆವರಣದಲ್ಲಿಯೇ ಬಹುದೊಡ್ಡ ಸೆರೆಮನೆಯನ್ನೂ ತೆರೆಯಲಾಯಿತು. ಈ ಅರಮನೆಯಲ್ಲಿ ನೆಲ ಮಾಳಿಗೆಗಳೂ ಇದ್ದವು. ಯಾರು ಪೋರ್ಚುಗೀಸರ ಹಾಗೂ ಕ್ರಿಶ್ಚಿಯನ್ನರ ವಿರುದ್ಧ ಧ್ವನಿ ಎತ್ತಿದರೋ ಅಂತವರನ್ನೆಲ್ಲ ಸರಣಿ ಸರಣಿಯಾಗಿ ಬಂಧಿಸಲಾಯಿತು. ಮೊದಲ ಹಂತದಲ್ಲಿ  ವಿರೋಧಿಗಳ ಆಸ್ತಿಯನ್ನು, ಸಂಪತ್ತುಗಳನ್ನು ವಶಪಡಿಸಿಕೊಂಡರೆ, ಎರಡನೇ ಹಂತದಲ್ಲಿ  ಕ್ರೂರ ಶಿಕ್ಷೆಯನ್ನು ನೀಡಿ ದಂಡಿಸಲಾಗುತ್ತಿತ್ತು. ವ್ಯಕ್ತಿಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತಿತ್ತು. ಬಿಸಿ ನೀರು ಸುರಿಯುವುದು, ಮೈಗೆ ಸೂಜಿಯಿಂದ ಚುಚ್ಚುವುದು, ಗುಪ್ತಾಂಗಗಳಿಗೆ ಸೂಜಿಯಿಂದ ಚುಚ್ಚುವುದು, ಹಗ್ಗದಿಂದ ನೇತುಹಾಕುವುದು ಹೀಗೆ ಹಲವು ಅಮಾನವೀಯ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಯಾರು ಈ ಶಿಕ್ಷೆಗಳಿಗೆ ಹೆದರಿ ಕ್ರಿಶ್ಚಿಯನ್ ಮತಕ್ಕೆ ಸೇರಿಕೊಳ್ಳಲು ಒಪ್ಪುತ್ತಾರೋ ಅಂತವರಿಗೆ ಶಿಕ್ಷೆ ನೀಡುವುದನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಇಂತಹ ಶಿಕ್ಷೆಗೂ ಹೆದರದವರನ್ನು ಸಾರ್ವಜನಿಕ ಸ್ಥಳದಲ್ಲಿ ಜೀವಂತವಾಗಿ ಸುಟ್ಟು ಹಾಕಲಾಗುತ್ತಿತ್ತುಘಿ.
ಫ್ರೆಂಚ್  ಪ್ರವಾಸಿ ಚಾರ್ಲ್ಸ್ ಧಿಲ್ಲೋನ್ ಗೋವಾದಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್‌ನಲ್ಲಿ ಒಂದೂವರೆ ವರ್ಷಗಳ ಕಾಲ ಶಿಕ್ಷೆಗೆ ಒಳಗಾಗಿದ್ದಘಿ. ಆದರೆ ಫ್ರೆಂಚ್  ಸರ್ಕಾರದ ಒತ್ತಡಕ್ಕೆ ಮಣಿದ ಪೋರ್ಚುಗೀಸ್ ಸರ್ಕಾರ ಆತನನ್ನು ಬಿಡುಗಡೆ ಮಾಡಿತ್ತು. ಈತ ಪ್ಯಾರಿಸ್‌ಗೆ ಮರಳಿದ ನಂತರ ಕೋರ್ಟ್ ಆಫ್  ಇನ್ಕ್ವಿಸಿಷನ್‌ನ ಕ್ರೂರ ಮುಖವನ್ನು ಪುಸ್ತಕವೊಂದರಲ್ಲಿ ಬರೆಯುವ ಮೂಲಕ ಅನಾವರಣಗೊಳಿಸಿದ್ದಾನೆ. ಕೋರ್ಟ್ ಆಫ್  ಇನ್ಕ್ವಿಸಿಷನ್ ನ ಕ್ರೂರ ಮುಖವನ್ನು ಅನಾವರಣಗೊಳಿಸಲು ಇರುವ ಪ್ರಮುಖ ಸಾಕ್ಷ್ಯಗಳಲ್ಲಿ ಚಾರ್ಲ್ಸ್ ಧಿಲ್ಲೋನ್ ಬರೆದ ಪುಸ್ತಕ ಪ್ರಮುಖ ಸಾಕ್ಷಿ ಎನ್ನಿಸಿಕೊಂಡಿದೆ.
ಗೋವಾದ ಹಿಂದೂಗಳ ದೌರ್ಭಾಗ್ಯ ಇಷ್ಟಕ್ಕೆ ಕೊನೆಗೊಳ್ಳುವುದಿಲ್ಲ. ಅವರು ಗೋವಾದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಪದೋನ್ನತಿ ಇರುತ್ತಿರಲಿಲ್ಲ, ಒಳ್ಳೆಯ ಸಂಬಳವಂತೂ ಇಲ್ಲವೇ ಇಲ್ಲ ಎನ್ನಬಹುದು. ಹಿಂದೂಗಳು ಗ್ರಾಮಸಭೆಗಳನ್ನು ನಡೆಸುವಂತಿರಲಿಲ್ಲಘಿ. ಧಾರ್ಮಿಕವಾಗಿ ಯಾವುದೇ ಕಾರ್ಯಕ್ರಮಗಳನ್ನು ಮಾಡುವಂತಿರಲಿಲ್ಲಘಿ. ಅಷ್ಟೇ ಏಕೆ ಭಕ್ತಿಗೀತೆಗಳನ್ನೂ ಸಹ ಹಾಡುವಂತಿರಲಿಲ್ಲಘಿ. ಈ ರೀತಿ ಯಾರಾದರೂ ಮಾಡಿದ್ದ ಪಕ್ಷದಲ್ಲಿ ಅಂತವರನ್ನು ಕೋರ್ಟ್ ಆಫ್  ಇನ್ಕ್ವಿಸಿಷನ್ ಹೆಸರಿನಲ್ಲಿ ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಲಾಗುತ್ತಿತ್ತು.
ಇಂತಹ ಮಾರಣಹೋಮಗಳ ಕಾರಣದಿಂದಲೇ ಕೋರ್ಟ್ ಆಫ್  ಇನ್ಕ್ವಿಸಿಷನ್ ಅತ್ಯಂತ ಹೀನಾಯ ಕಾನೂನು ಎಂದೇ ಕರೆಸಿಕೊಂಡಿದೆ. ಬಹುತೇಕ 252 ವರ್ಷಗಳ ಕಾಲ ಗೋವಾದಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್ ಜಾರಿಯಲ್ಲಿತ್ತು. ಪೋರ್ಚುಗೀಸರು ಗೋವಾವನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್‌ನ ದಾಖಲೆಗಳನ್ನೆಲ್ಲ ಬೆಂಕಿ ಹಾಕಿ ಸುಟ್ಟು ಹಾಕಿದ ಕಾರಣ ಈ ಕುರಿತು ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲಘಿ. ಆದರೆ ಇರುವ ದಾಖಲೆಗಳ ಪ್ರಕಾರ, ಗೋವಾದಲ್ಲಿ 65 ವರ್ಷಗಳ ಅವಧಿಯಲ್ಲಿ ಕೋರ್ಟ್ ಆಫ್  ಇನ್ಕ್ವಿಸಿಷನ್ ಹೆಸರಿನಲ್ಲಿ ಬಂಧಿಸಿದವರ ಸಂಖ್ಯೆ 16 ಸಾವಿರಕ್ಕೂ ಅಧಿಕ. ಆ ದಿನಗಳ ಸಂದರ್ಭದಲ್ಲಿ ಗೋವಾದ ಜನಸಂಖ್ಯೆಯನ್ನು ಲೆಕ್ಖ ಹಾಕಿದರೆ ಇದು ಬಹುದೊಡ್ಡ ಸಂಖ್ಯೆಯಾದೀತು.
16ನೇ ಶತಮಾನದಿಂದ ಇಂದಿನವರೆಗೂ ಗೋವಾ ಅದೆಷ್ಟೋ ಬದಲಾಗಿದೆ. ಆದರೆ ಗೋವಾದಲ್ಲಿನ ಮಾರಣಹೋಮದ ಕಲೆಗಳು ಮಾತ್ರ ಈಗಲೂ ಕಾಣಿಸಿಕೊಳ್ಳುತ್ತಿವೆ. ಗೋವಾದಲ್ಲಿ ನಡೆದಂತಹ ಹಿಂದೂಗಳ ಮಾರಣಹೋಮಗಳು ಭಾರತದ ನೆಲದಲ್ಲಿ ಆಗಾಗ ನಡೆಯುತ್ತಲೇ ಇದೆ. ಕಾಶ್ಮೀರದಲ್ಲಿಘಿ, ಕೇರಳದಲ್ಲಿ, ಪಶ್ಚಿಮ ಬಂಗಾಳದಲ್ಲಿ, ಅಸ್ಸಾಂನಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಲೇ ಇದೆ. ಹಿಂದೂಗಳ ಹತ್ಯೆ ಮತ್ತೆ ಮತ್ತೆ ನಡೆಯುತ್ತಲೇ ಇದೆ. ಪ್ರಸ್ತುತ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ಮಾತನಾಡುವವರು ನಮ್ಮದೇ ಪಕ್ಕದ ಪುಟ್ಟ ರಾಜ್ಯ ಗೋವಾದ ನರಮೇಧಗಳನ್ನು ನೆನಪು ಮಾಡಿಕೊಳ್ಳಲೇಬೇಕಾಗುತ್ತದೆ. ಗೋವಾದ ರಕ್ತ ಸಿಕ್ತ ಇತಿಹಾಸಗಳ ಕುರಿತು ಕಣ್ಣಾಡಿಸುವ ಜರೂರತ್ತಿದೆ. ಶಾಂತಿ ಮಂತ್ರ ಜಪಿಸುವ ಚರ್ಚ್ ಕೋರ್ಟ್ ಆಫ್  ಇನ್ಕ್ವಿಸಿಷನ್ ಹೆಸರಿನಲ್ಲಿ ನಡೆಸಿದ ಸಹಸ್ರಾರು ಹಿಂದೂಗಳ ಹತ್ಯೆಯ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಿದೆ.
ಕೋರ್ಟ್ ಆಫ್  ಇನ್ಕ್ವಿಸಿಷನ್ ಆರಂಭಿಸಿ ಅದೆಷ್ಟೋ ಸಾವಿರ ಹಿಂದೂಗಳ ಹತ್ಯೆಗೆ ಕಾರಣವಾದ ್ರಾನ್ಸಿಸ್ ಕ್ಸೇವಿಯರ್‌ನ ದೇಹವನ್ನು ಗೋವಾದಲ್ಲಿ ಇಂದಿಗೂ ಸಂರಕ್ಷಿಸಿ ಇಡಲಾಗಿದೆ. ಬಹಳ ಪವಿತ್ರ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಹಿಂದೂಗಳ ಮಾರಣಹೋಮ ಮಾಡಿದ ಇಂತಹ ವ್ಯಕ್ತಿಯನ್ನು ಸಂತ ಪದವಿಗೂ ಏರಿಸಿರುವುದು ದುರಂತವಲ್ಲವೇ?
ಚರ್ಚ್ ಈ ಹಿಂದೆ ರವಾಂಡಾದಲ್ಲಿ  ನಡೆಸಿದ ನರಮೇಧಕ್ಕಾಗಿ ಕ್ಷಮೆಯನ್ನು ಕೇಳಿದೆ. ಯೆಹೂದಿಗಳ ಸರಣಿ ಹತ್ಯೆಗೂ ಕೂಡ ಚರ್ಚ್ ಕ್ಷಮೆಯನ್ನು ಯಾಚಿಸಿದೆ. ಆದರೆ ಗೋವಾದಲ್ಲಿ ಚರ್ಚ್ ಕೋರ್ಟ್ ಆಫ್  ಇನ್ಕ್ವಿಸಿಷನ್ ಹೆಸರಿನಲ್ಲಿ ನಡೆಸಿದ ಹಿಂದೂಗಳ ಹತ್ಯೆಯ ಕುರಿತು ಯಾವತ್ತೂ ಮಾತನಾಡಿಲ್ಲ. ಗೋವಾದಲ್ಲಿ 450 ವರ್ಷಗಳ ಕಾಲ ಹಿಂದೂಗಳಿಗೆ ಶಿಕ್ಷೆ ನೀಡಿ ಅವರನ್ನು ಕ್ರೂರವಾಗಿ ಹಿಂಸಿಸಿ, ಸಾಯಿಸಿದ್ದಕ್ಕೆ ಸಂಬಂಧಿಸಿದಂತೆ ಇದುವರೆಗೂ ಚಕಾರವೆತ್ತಿಲ್ಲಘಿ. ಚರ್ಚ್ ತನ್ನ ಮಾರಣಹೋಮಕ್ಕಾಗಿ ಗೋವಾದ ಜನತೆಯ ಕ್ಷಮೆ ಕೇಳುವುದು ಯಾವಾಗ? ಗೋವಾದ ಜನತೆಯನ್ನು ಹಿಂಸಿಸಿದ್ದಕ್ಕಾಗಿ ಪಾಪ ಪ್ರಾಯಶ್ಚಿತ್ತ, ಪಾಪ ನಿವೇದನೆ ಮಾಡಿಕೊಳ್ಳುವುದು ಯಾವಾಗ? ಚರ್ಚ್ ಗೋವನ್ನರ ಬಳಿ ಕ್ಷಮೆ ಕೇಳಿದಾಗ ಮಾತ್ರ ಅಲ್ಲಿ ನರಳಿ, ಕ್ರೂರವಾಗಿ ಸತ್ತ ಹಿಂದೂಗಳ ಆತ್ಮಕ್ಕೆ ಕೊಂಚ ನೆಮ್ಮದಿ ಸಿಗಲು ಸಾಧ್ಯ.

No comments:

Post a Comment