Saturday, February 15, 2014

ನೀತಿ

ಅರಳಬೇಕು ಮನದಲ್ಲಿ ಪ್ರೀತಿ
ಹೃದಯದಲಿ ಒಲವು |
ತುಂಬಬೇಕು ಕಣ್ಣಿನಲಿ ಕರುಣೆ
ಮನದಲಿ ಸಹನೆ ||

ಚಿಗುರಬೇಕು ಜೀವದಲಿ ಉಸಿರು
ಬರಡಿನಲಿ ಹಸಿರು |
ತೊಡೆಯಬೇಕು ಎದೆಯಲ್ಲಿ ಕ್ರೌರ್ಯ
ತುಂಬಿರಲಿ ಧೈರ್ಯ ||

ಬೆಳಗಬೇಕು ಮನೆಯಲ್ಲಿ ದೀಪ
ನೂರೊಂದು ರೂಪ |
ಹುಡುಕಬೇಕು ಹೊಸತೊಂದು ಶಕ್ತಿ
ಜೀವನದ ಮುಕ್ತಿ ||

ಬರೆಯಬೇಕು ಹಲವೆಂಟು ಸಾಲು
ಕವನದ ಸೊಲ್ಲು |
ಹೆಚ್ಚಬೇಕು ರಾಷ್ಟ್ರದೆಡೆ ಪ್ರೀತಿ
ಒಗ್ಗಟ್ಟೇ ಶಕ್ತಿ ||


**
(ಈ ಕವಿತೆಯನ್ನು ಬರೆದಿದ್ದು 14-11-2005ರಂದು ದಂಟಕಲ್ಲಿನಲ್ಲಿ)

2 comments: