Wednesday, December 11, 2013

ಕೇಳದೆ..ಕರೆ


ಕರೆದರೆ ಯಾಕೋ ತಿರುಗುವುದಿಲ್ಲ..
ನನ್ನೆಡೆ ನಿನ್ನಲಿ ಸಿಟ್ಟಿದೆಯಾ..?

ಮಾತೂ ಇಲ್ಲ, ಕಥೆಯೂ ಇಲ್ಲ
ಮೌನವೆ ಬಾಳಲಿ ತಿಂಬಿದೆಯಲ್ಲ
ಮಾತಲಿ ಮೌನದ ಗೂಡಿದೆಯಲ್ಲ
ಸಿಟ್ಟಿನ ಕಾವಲು ಜೊತೆಗಿದೆಯಲ್ಲ ||

ಭಾವದ ಒಡಲು ತುಂಬಿಹುದೇನು?
ದುಃಖದ ಕಟ್ಟೆಯು ಕೂಡಿಹುದೇನು?
ನಿನ್ನೊಳಗಾಗಿಹ ಕುಂದುಗಳೇನು?
ನನ್ನೆಡೆ ಸಿಟ್ಟಿಗೆ ಈ ಪರಿಯೇನು?

ನನ್ನನು ನೀನು ಮರೆತಿಹೆಯಾ
ತನುವಲಿ ಕಾಡುವ ಗುರುತಿದೆಯಾ
ನನ್ನೆಡೆ ನೀನು ಹೊರಳದೆ ಇರಲು
ಕಾರಣವೇನು ಹೇಳುವೆಯಾ..?||

(ಈ ಕವಿತೆಯನ್ನು ಬರೆದಿದ್ದು 08.04.2006ರಂದು)
(ತಂಗಿ ಸುಪರ್ಣಾ ಹೆಗಡೆ ಹಾಗೂ ಪೂರ್ಣಿಮಾ ಹೆಗಡೆ ಇವರುಗಳು 
ಈ ಹಾಡಿಗೆ ರಾಗವನ್ನು ಸಂಯೋಜಿಸಿ ಹಾಡಿದ್ದಾರೆ. ಅವರಿಗೆ ಧನ್ಯವಾದಗಳು)

No comments:

Post a Comment