Sunday, June 6, 2010

ಸತ್ಯದ ಸಾರ ಸಾರುವ ಸತ್ಯಹರಿಶ್ಚಂದ್ರ


ನಿರದೆಶನ : ಹುಣಸೂರು ಕೃಷ್ಣಮೂರ್ತಿ 
ನಿರಮಾಪಕರು : ವಿಜಯಾ ಪ್ರೊಡಕ್ಷನ್
ಸಂಗೀತ : ಪಿ. ಎಂ. ರಾವ್
ಚಿತ್ರ ಬಿಡುಗಡೆ : 1965
ತಾರಾಗಣದಲ್ಲಿ : ಡಾ. ರಾಜಕುಮಾರ್, ಫಂಡರೀಬಾಯಿ, ನರಸಿಂಹರಾಜೂ, ಎಂ. ಪಿ. ಶಂಕರ್ ಮುಂತಾದವರು

ಸತ್ಯ ಹರಿಶ್ಚಂದ್ರ ಕನ್ನಡದ ಉತ್ತಮ ಚಿತ್ರಗಳಲ್ಲಿ ಒಂದು. 1965ರಲ್ಲಿಯೇ ಭಾರೀ ವೆಚ್ಚದಲ್ಲಿ ನಿರಮಾಣವಾಗಿದ್ದ ಈ ಚಿತ್ರವನ್ನು ನೋಡದವರೆ ಇಲ್ಲ.
ಸತ್ಯವೇ ತಾಯಿ ತಂದೆ ಎಂಬ ನೀತಿಯನ್ನು ಮೈಗೂಡಿಸಿಕೊಂಡು ಅದಕ್ಕಾಗಿಯೇ ಬಾಳಿ ಬದುಕಿದ ರಾಜನೊಬ್ಬನ ಕಥೆ ಸತ್ಯಹರಿಶ್ಚಂದ್ರ. ಏನೇ ಕಷ್ಟ ಬಂದರೂ ಸತ್ಯವನ್ನು ಬಿಡಬಾರದು ಎಂಬ ಗುಣ ರಾಜನದ್ದು. ಅದಕ್ಕಾಗಿಯೇ ಆತ ಹಲವು ರೀತಿಯ ಕಷ್ಟದ ಕೋಟಲೆಯನ್ನೂ ಅನುಭವಿಸುತ್ತಾನೆ. ಮಹಾಮುನಿ ವಿಶ್ವಾಮಿತ್ರನ ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಗೆಲ್ಲುವ ಕಥೆಯೇ ಸತ್ಯ ಹರಿಶ್ಚಂದ್ರ.
ರಾಜಾ ಹರಿಶ್ಚಂದ್ರನಾಗಿ ಡಾ. ರಾಜ್ಕುಮಾರ್ ಅವರದ್ದು ಚಿತ್ರದಲ್ಲಿ ಮೇರು ಅಭಿನಯ. ಹರಿಶ್ಚಂದ್ರನ ಮಡದಿಯಾಗಿ ಫಂಡರಿಬಾಯಿ ಮನೋಜ್ಞವಾಗಿ ನಟಿಸಿದ್ದಾರೆ. ವಿಶ್ವಾಮಿತ್ರನಾಗಿ ಉದಯ್ಕುಮಾರ್ ಸಿಟ್ಟಿನ ಪ್ರತಿರೂಪವಾಗಿಕಾಣುತ್ತಾರೆ. ರಾಜನನ್ನು ಕಾಡುವ ವಿಶ್ವಾಮಿತ್ರನ ಬಂಟ ನಕ್ಷತ್ರಿಕನ ಪಾತ್ರದಲ್ಲಿ ನಟಿಸಿದ್ದು ಕಾಮಿಡಿ ಕಿಂಗ್ ನರಸಿಂಹರಾಜೂ. ಚಿತ್ರದಲ್ಲಿ ಇವರು ಹಾಸ್ಯ, ಭಯ, ಸಿಟ್ಟು ಮುಂತಾದ ಎಲ್ಲ ರೀತಿಯ ಅಭಿನಯಗಳನ್ನೂ ಮಾಡಿ ನೋಡುಗರನ್ನು ಸೆಳೆಯುತ್ತಾರೆ. ವೀರಬಾಹುವಿನ ಪಾತ್ರ ನಿರ್ವಹಿಸಿರುವ ಎಂ. ಪಿ. ಶಂಕರ್ ತಮ್ಮ ವಿಶಿಷ್ಟ ಅಭಿನಯದಿಂದಾಗಿ ಆಕಷರ್ಿಸುತ್ತಾರೆ.
ಚಿತ್ರದ ಹಾಡುಗಳೂ ಅಷ್ಟೆ, ಮತ್ತೆ ಮತ್ತೆ ಕೇಳುವಂತಿದೆ. `ನಮೋ ಭೂತನಾಥ..', `ವಿಧಿ ವಿಪರೀತ...', `ಆನಂದ ಸದನ ಅರವಿಂದನಯನ..' ಹಾಡುಗಳು, ಜೊತೆಗೆ ಎಂ. ಪಿ. ಶಂಕರ್ ಅಭಿನಯಿಸಿದ `ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ' ಹಾಗೂ `ನನ್ನ ನೀನು ನಿನ್ನ ನಾನು..' ಎಂಬ ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ.
ನಾಲ್ಕು ದಶಕಗಳ ಹಿಂದೆಯೇ ಕಪ್ಪು ಬಿಳುಪು ಬಣ್ಣದಲ್ಲಿ ಅದ್ದೂರಿಯಾಗಿ ನಿರಮಾಣವಾಗಿದ್ದ ಈ ಚಿತ್ರವನ್ನು 2008ರಲ್ಲಿ ಬಹುವರ್ಣಗಳ ಮೂಲಕ ಮತ್ತೆ ಬಿಡುಗಡೆ ಮಾಡಲಾಯಿತು. 1965ರಲ್ಲಿ ಶತದಿನ ಆಚರಿಸಿದ್ದ ಚಿತ್ರ 2008ರಲ್ಲಿ ಬಾಕ್ಸಾಫೀಸ್ನಲ್ಲಿ ಸಂಪೂರ್ಣ ನೆಲಕಚ್ಚಿತು.
ಸತ್ಯದ ನೀತಿಯನ್ನು ಸಾರುವ ಆದರ್ಶಮಯ ಚಿತ್ರ ಎಲ್ಲ ಕಾಲದಲ್ಲಿಯೂ, ಎಲ್ಲರೂ ನೋಡಲೇಬೇಕಾದ ಚಿತ್ರ ಎಂದು ಹೆಸರಾಗಿದೆ.

ವಿನಯ್ ದಂಟಕಲ್

Sunday, May 23, 2010

ಚಿತ್ರವಿಮರ್ಷೆ : ಶಂಕರ್ ಐಪಿಎಸ್

ವಿಜಯ್ ತಾಕತ್ತಿನ ಪ್ರದರ್ಶನ

ಶಂಕರ್ ಐಪಿಎಸ್ ಇದು ವಿಜಯನ  ದಾಢಸಿತನ ಅನಾವರಣ ಮಾಡುವ ಚಿತ್ರ. ಒಳ್ಳೆಯವರಿಗೆ ಒಳ್ಳೆಯವನಾಗಿ ಕೆಟ್ಟವರಿಗೆ ಕೆಟ್ಟವನಾಗಿ ಕಾಣಿಸಿಕೊಳ್ಳುವ ಶಂಕರ್ (ವಿಜಯ್)ಗೆ ಅಪರಾಧಿಗಳನ್ನು ಮಟ್ಟಹಾಕುವುದೇ ಕೆಲಸ. ಕಂಡಕಂಡಲ್ಲಿ ಅಪರಾಧಿಗಳನ್ನು, ರೌಡಿಗಳನ್ನು, ಅತ್ಯಾಚಾರಿಗಳನ್ನು ಹಿಗ್ಗಾ ಮುಗ್ಗಾ ಜಾಡಿಸಿ ಎನ್ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡುವ ಶಂಕರ್, ಮಿಸ್ ಇಂಡಿಯಾ ಆಗಬೇಕೆಂಬ ಕನಸನ್ನು ಹೊಂದಿರುವ ಹುಡುಗಿ(ಕ್ಯಾಥರೀನ್ ಥೆರೇಸಾ) ಗೆ ಸಹಾಯ ಮಾಡುತ್ತಾನೆ. ಆಕೆಗೆ ಮಿಸ್ ಇಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ತರಬೇತಿ ಕೊಡಿಸುತ್ತಾನೆ. ಆದರೆ ಆಕೆಯ ಮೇಲೆ ಆಸಿಡ್ ದಾಳಿಯಾಗುತ್ತಾದೆ. ಹೆಸರಾಂತ ಉದ್ಯಮಿಯೊಬ್ಬನ ಮಗ ಆಕೆಯ ಮೇಲೆ ಆಸಿಡ್ ದಾಳಿ ಮಾಡುತ್ತಾನೆ. ಆಸಿಡ್ ದಾಳಿಗೆ ಒಳಗಾದ ಆಕೆಗೆ ನ್ಯಾಯವನ್ನು ಕೊಡಿಸಿ, ಸಮಾಜಕ್ಕೆ ಬುದ್ಧಿಹೇಳುವ ದಕ್ಷ ಅಧಿಕಾರಿಯಾಗಿ ವಿಜಯ್ ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಮಾಡೆಲ್ ಟ್ರೈನಿಯಾಗಿ ಕೆಲಸ ಮಾಡುವ ನಾಯಕಿ (ರಾಗಿಣಿ) ವಿಜಯ್ಗೆ ಬೆಂಗಾವಲಾಗಿ ನಿಂತು ಅಪರಾಧಿಗಳ ಮಟ್ಟಹಾಕುವ ನಾಯಕನ ಕಾರ್ಯದಲ್ಲಿ ಸಹಾಯ ಮಾಡುತ್ತಾಳೆ.
ಹೆಸರಿಗೆ ತಕ್ಕಂತೆ ಇದು ಖಾಕಿ ಚಿತ್ರ. ಹಾಗಾಗಿ ಚಿತ್ರದುದ್ದಕ್ಕೂ ಚಾಲೆಂಜುಗಳು, ಧಮಕಿಗಳು, ಫೈಟ್ಗಳು ಇದ್ದೇ ಇವೆ. ಚಿತ್ರದಲ್ಲಿ ಖಾಕಿ ಹಾಗೂ ಕಪ್ಪುಕೋಟುಗಳು ಪರಸ್ಪದ ಎದುರಾಳಿಗಳಾಗುತ್ತವೆ. ಇವೆರಡೂ ಪರಸ್ಪರ ಮೇಲಾಟದಲ್ಲಿ ತೊಡಗುತ್ತವೆ. ಪೊಲೀಸ್ ಅಧಿಕಾರಿ ಶಂಕರ್ಗೆ ಎದುರಾಗಿ ನಿಂತು ಸವಾಲು ಹಾಕುವ ಪಾತ್ರದಲ್ಲಿ ರಂಗಾಯಣ ರಘು ಬೊಂಬಾಟಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಅವಿನಾಶ್ ಹಾಗೂ ಶೋಭರಾಜ್ ಅವರುಗಳಿಗೆ ಅಪರೂಪಕ್ಕೆ ಒಳ್ಳೆಯ ಪಾತ್ರಗಳು ದೊರಕಿವೆ. ಚಿತ್ರಗಳಲ್ಲಿ ಯಾವಾಗಲೂ ವಿಲನ್ ಪಾತ್ರಗಳನ್ನು ಮಾಡುತ್ತಿದ್ದ ಶೋಭರಾಜ್ ಹಾಗೂ ಅವಿನಾಶ್ ಈ ಚಿತ್ರದಲ್ಲಿ ಬೇರೆಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದುದ್ದಕ್ಕೂ ಕಾಣಿಸಿಕೊಂಡಿರುವ ವಿಜಯ್ ಎಲ್ಲ ರೀತಿಯ ಅಭಿನಯಗಳನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರೆ ಕಾಮಿಡಿಯನ್, ಅವರೇ ಆಕ್ಷನ್ ಕಿಂಗ್, ಅವರೇ ಚಾಲೇಂಜರ್ ಕೊನೆಗೆ ಅವರೇ ಐಟಂ ಸಾಂಗಿಗೂ ಹೆಜ್ಜೆ ಹಾಕುತ್ತಾರೆ. ಎಲ್ಲಾ ಸಂಭಾಷಣೆಯನ್ನು ನಿಧಾನವಾಗಿ ಸ್ಪಷ್ಟವಾಗಿ ಉಚ್ಛರಿಸಿ ಎಲ್ಲರ ಸಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಸಂಭಾಷಣೆಗಳನ್ನು ವೇಗವಾಗಿ ಹೇಳಿದ್ದರೆ ವಿಜಯ್ನ್ನು ಮತ್ತೊಬ್ಬ `ಸಾಯಿಕುಮಾರ್' ಅನ್ನಬಹುದು. ಆದರೂ ಕೆಲವೊಮ್ಮೆ ಸಡನ್ನಾಗಿ ಸಿಟ್ಟಿಗೇಳುವುದು ನೋಡುಗರಿಗೆ ಕಿರಿಕಿರಿ ಉಂಟುಮಾಡುತ್ತದೆ. ಫೈಟುಗಳನ್ನು ಚೆನ್ನಾಗಿಯೇ ಮಾಡಿ ಪ್ರೇಕ್ಷಕರನ್ನು ಸೆಳೆಯುವ ವಿಜಯ್ ಚಿತ್ರದಲ್ಲಿ ಬೇಜಾನಾಗಿ ಬಟ್ಟೆ ಬಿಚ್ಚಿ ತಮ್ಮ ಸಿಕ್ಸ್ ಪ್ಯಾಕ್ ಶರೀರ ಪ್ರದಶರ್ಿಸುವ ಮೂಲಕ ತಾಕತ್ತು ತೋರಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯರಿಗೆ ಕೊಂಚ ಸ್ಕೋಪ್ ಕಡಿಮೆ. ಮಾಡೆಲ್ ಆಗಿದ್ದ ಕ್ಯಾಥರೀನ್ಗೆ ಇದು ಕನ್ನಡದ ಮೊದಲ ಚಿತ್ರ. ಚಿತ್ರದಲ್ಲಿ ಅವರದ್ದು ಮಿಸ್ ಇಂಡಿಯಾ ಸ್ಪಧರ್ಿಯ ಪಾತ್ರ. ಆದರೂ ಅವರು ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಂಗಾಯಣ ರಘು ಚಿತ್ರದ ಪ್ಲಸ್ ಪಾಯಿಂಟ್ಗಳಲ್ಲಿ ಒಂದು. ಚಿತ್ರದಲ್ಲಿ 5 ಹಾಡುಗಳಿವೆ. ಆದರೆ ಈ ಹಾಡುಗಳು ಮಾತ್ರ ಏನು ಮಾಡಿದರೂ ನೆನಪಲ್ಲಿ ಉಳಿಯಲಾರವು. ಇದಕ್ಕೆ ಸಂಗೀತ ನಿದರ್ೆಶಕರು ಕಾರಣವೋ ಗೀತೆಗಳನ್ನು ಬರೆದವರು ಕಾರಣವೋ ತಿಳಿಯುವುದಿಲ್ಲ. ವಿಜಯ್ ತೆರೆಯ ಮೇಲೆ ಇದ್ದಷ್ಟೂ ಹೊತ್ತು ಇತರ ಪಾತ್ರಗಳು ಮಾತೇ ಆಡದಿರುವುದು ಚಿತ್ರದ ಮೈನಸ್ ಪಾಯಿಂಟ್ಗಳಲ್ಲಿ ಒಂದು.
ಇನ್ನುಳಿದಂತೆ ದಾಸರಿ ಸೀನು ಅವರು ಕ್ಯಾಮರಾ ಮೂಲಕ ಉತ್ತಮ ದೃಷ್ಯಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಸಂಭಾಷಣೆಯಲ್ಲಿರುವ ಗಟ್ಟಿತನ ಸೆಳೆಯುತ್ತದೆ. ವಿಜಯ್ ವಿಜ್ರಂಭಣೆಗೆ ಬೇಕಾದ ಸಂಭಾಷಣೆಗಳನ್ನು ನಿದರ್ೇಶಕ ರಮೇಶ್ ಬಾಬೂ ಕೆತ್ತಿದ್ದಾರೆ. ಉತ್ತಮ ಸಂದೇಶವನ್ನು ಹೇಳಲು ಹೊರಟ ರಮೇಶ್ ಬಾಬೂ ಅದನ್ನು ಮಾಸ್ ಜನರ ಮನಸ್ಸಿಗೆ ಮುಟ್ಟಿಸುವಲ್ಲಿ ಕೆಲವೊಮ್ಮೆ ವಿಫಲರಾಗಿದ್ದಾರೆ. ಚಿತ್ರವನ್ನೂ ಇನ್ನೂ ಉತ್ತಮವಾಗಿ ಮಾಡಲು ರಮೇಶ್ ಬಾಬೂ ಪ್ರಯತ್ನಿಸಿದ್ದರೆ ಮಾಸ್ ಜೊತೆಗೆ ಕ್ಲಾಸ್ ಜನರನ್ನು ಸೆಳೆಯಬಹುದಿತ್ತು.
ಮಾಸ್ಗೆ ಬೇಕಾಗಿರುವ ಎಲ್ಲ ಮಸಾಲೆ ಅಂಶಗಳನ್ನೂ ಒಳಗಿರಿಸಿಕೊಂಡು, ಸಂಪೂರ್ಣ ವಿಜಯ್ ತಾಕತ್ ಹಾಗೂ ದಾಢಸಿತನದ ಮೇಲೆ ಹೊರಬಂದಿರುವ ಶಂಕರ್ ಐಪಿಎಸ್ ವಿಜಿ ಅಭಿಮಾನಿಗಳಿಗೆ ಹಬ್ಬದೂಟ ನೀಡುತ್ತದೆ.

ವಿನಯ್ ದಂಟಕಲ್

Saturday, May 22, 2010

ಕ್ಲಾಸಿಕ್ ಸಿನೆಮಾ

ನಗಿಸುತ್ತಲೇ ಅಳಿಸುವ
ಮೇರಾ ನಾಮ್ ಜೋಕರ್

ನಿರದೆಶಕ : ರಾಜ್ ಕಪೂರ್
ನಿರಮಾಪಕ : ರಾಜ್ ಕಪೂರ್
ಕಥೆ : ಕೆ. ಏ. ಅಬ್ಬಾಸ್
ಸಂಗೀತ : ಶಂಕರ್ ಜೈಕಿಷನ್
ಸಂಕಲನ : ರಾಜ್ ಕಪೂರ್
ಚಿತ್ರ ಬಿಡುಗಡೆ : 18 ಡಿಸೆಂಬರ್ 1970

ಮೇರಾ ನಾಮ್ ಜೋಕರ್ ಹಿಂದಿ ಚಿತ್ರರಂಗದ ಪ್ರಸಿದ್ದ ಚಲನಚಿತ್ರಗಳಲ್ಲೊಂದು. ರಾಜ್ ಕಪೂರ್ ಎಂಬ ವಿಶಿಷ್ಟ, ವಿಚಿತ್ರ ಹಾಗೂ ವಿಲಕ್ಷಣ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಚಿತ್ರ ಮೇರಾ ನಾಮ್ ಜೋಕರ್. 
ಮೂರು ಭಾಗಗಳಲ್ಲಿರುವ ಈ ಚಿತ್ರ ರಾಜು ಎಂಬ ಜೋಕರ್ ಬದುಕಿನ ಮೂರು ಕಾಲಘಟ್ಟಗಳನ್ನು ವಿವರಿಸುತ್ತದೆ. ಮೊದಲ ಭಾಗದಲ್ಲಿ ಯುವ ರಾಜೂ (ರಿಷಿ ಕಪೂರ್) ತನ್ನ ಶಿಕ್ಷಕಿ ಮೇರಿ (ಸಿಮಿ ಅಗರವಾಲ್)ಯ ಆಕರ್ಷಣೆಗೆ ಒಳಗಾದರೆ ಎರಡನೇ ಭಾಗದಲ್ಲಿ ರಾಜೂ (ರಾಜ್ ಕಪೂರ್) ಜೆಮಿನಿ ಸರ್ಕಸ್ನ ಪಾತ್ರಧಾರಿ ರಷ್ಯಾದ ಮರೀನಾ (ಕ್ಷೇನಿಯಾ ರ್ಯಾರಬೆಂಕಿನಾ)ಳನ್ನು ಪ್ರೀತಿಸುತ್ತಾನೆ. ಈ ಭಾಗ ಹೆಚ್ಚು ತಮಾಷೆಯಿಂದ ಕೂಡಿದ್ದು ನೋಡುಗರ ಹೊಟ್ಟೆ ಹುಣ್ಣಾಗಿಸುತ್ತದೆ. ಮೂರನೇ ಭಾಗದಲ್ಲಿ ರಾಜೂ, ಮೀನಾ(ಪದ್ಮಿನಿ)ಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ಚಿತ್ರನಟಿಯಾಗುವ ಕನಸನ್ನು ಹೊಂದಿದ ಆಕೆ ತನ್ನ ಆಸೆ ಈಡೇರಿಸಿಕೊಳ್ಳಲು ರಾಜುವನ್ನು ಬಳಸಿಕೊಂಡು ನಂತರ ಆತನನ್ನು ಮರೆತು ಬಿಡುತ್ತಾಳೆ. ಕೊನೆಯಲ್ಲಿ ರಾಜು ಏನಾಗುತ್ತಾನೆ ಎಂಬುದು ಚಿತ್ರದ ಕಥೆ. ರಿಷಿ ಕಪೂರ್ಗೆ ಇದು ಪಾದಾರ್ಪಣೆಯ ಚಿತ್ರ. ಚಿತ್ರದಲ್ಲಿ ಹಲವು ಅಂಶಗಳು ನೋಡುಗರನ್ನು ಸೆಳೆಯುತ್ತವೆ.
ಜೊಕರ್ ರೀತಿಯ ಗೊಂಬೆ, ಅದರ ಜೊತೆ ರಾಜೂ ಮಾತನಾಡುವುದು, ಸರ್ಕಸ್ ನೋಡುತ್ತಿದ್ದಾಗಲೇ ರಾಜೂನ ತಾಯಿ ಸಾಯುವುದು, ಆಕೆ ಸತ್ತಾಗ ರಾಜೂ ಕಪ್ಪು ಕನ್ನಡಕ ಧರಿಸಿ ಅಳುವುದು, ನಂತರ ದುಃಖದ ನಡುವೆಯೂ ಎಲ್ಲರನ್ನೂ ನಗಿಸುವುದು, ಹಿಂದಿ ಭಾಷೆ ಬರದ ಮರೀನಾಗೆ ತನ್ನ ಪ್ರೇಮ ನಿವೇದನೆ ಮಾಡುವುದು, ಆಕೆ ಹರುಕು ಮುರುಕು ಹಿಂದಿಯಲ್ಲಿ ರಾಜೂನ ತಾಯಿಯ ಜೊತೆ ಮಾತನಾಡುವುದು ಈ ಮುಂತಾದ ದೃಷ್ಯಗಳು ಅತ್ಯಂತ ಸುಂದರವಾಗಿ ಮೂಡಿಬಂದಿದೆ.
ಹಾಡುಗಳು ಈ ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದಲ್ಲಿನ ಎಲ್ಲಾ ಹಾಡುಗಳೂ ಒಂದಕ್ಕಿಂತ ಇನ್ನೊಂದು ಉತ್ತಮವಾಗಿ ಮೂಡಿ ಬಂದಿವೆ. ಮುಖೇಶ್ ಸಿರಿಕಂಠದಲ್ಲಿ ಒಡಮೂಡಿದ `ಜಾನೇ ಕಹಾಂ ಗಯೇ ವೋ ದಿನ್', `ಜೀನಾ ಯಹಾಂ ಮರ್ನಾ ಯಹಾಂ', `ಕಾಟೇ ನಾ ಕಾಟೆ ರೈನಾ', `ಕೆಹ್ತಾ ಹೈ ಜೋಕರ್', ಲತಾ ಮಂಗೇಶ್ಕರ್ ಹಾಡಿದ `ಅಂಗ್ ಲಗ್ ಜಾ ಬಲ್ಮಾ', ಮನ್ನಾ ಡೇ ಹಾಡಿದ ಕಾಮಿಡಿ ಗೀತೆ `ಏ ಭಾಯ್ ಜರಾ ದೇಖೆ ಚಲೋ' ಈ ಮುಂತಾದ ಹಾಡುಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿವೆ.
ಚಿತ್ರದಲ್ಲಿ ಧರಮೇಂದ್ರ, ಮನೋಜ್ ಕುಮಾರ್, ಧಾರಾ ಸಿಂಗ್, ಅಚಲಾ ಸಚ್ದೇವ್ ಮುಂತಾದವರೂ ನಟಿಸಿದ್ದಾರೆ. 255 ನಿಮಿಷದ ಜಿತ್ರ ನೀಡುಗರಿಗೆ ಬಹಳ ಖುಷಿ ಕೊಡುವ ಚಿತ್ರ. ಸುಮಾರು ನಾಲ್ಕು ತಾಸು ಅರಾಮವಾಗಿ ನೋಡಬಹುದಾದ ಚಿತ್ರ. ಹಿಂದಿ ಚಿತ್ರರಂಗದ ಕ್ಲಾಸಿಕ್ ಸಿನೆಮಾಗಳಲ್ಲಿ ಒಂದೆಂದು ಹೆಸರಾಗಿದೆ.

ವಿನಯ್ ದಂಟಕಲ್

Tuesday, May 18, 2010

ಮರೆತರೂ ಮರೆಯದ ಮೊಘಲ್-ಇ-ಆಝಂ

ಎವರ್ ಗ್ರೀನ್ ಲವ್ ಸ್ಟೋರಿ...

ಮರೆತರೂ ಮರೆಯದ
ಮೊಘಲ್-ಇ-ಆಝಂ

ಚಿತ್ರ ನಿರದೆಶಕ : ಕೆ. ಆಸಿಫ್
ಕಥೆ : ಅಮನ್, ಕೆ. ಆಸಿಫ್, ಕಮಲ್ ಅಮ್ರೋಹಿ, ವಜಾಹತ್ ಮಿರಜಾ, ಎಹಸಾನ್ ರಿಜ್ವಿ
ಸಂಗೀತ : ನೌಶಾದ್
ಚಿತ್ರಬಿಡುಗಡೆ : 5 ಆಗಸ್ಟ್ 1960
ತಾರಾಗಣ : ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್, ಮಧುಬಾಲಾ, ದುರ್ಗ ಕೋಟೆ ಮುಂತಾದವರು.

ಹಿಂದಿ ಚಿತ್ರರಂಗದಲ್ಲಿ ಎವರ್ಗ್ರೀನ್ ಲವ್ಸ್ಟೋರಿ ಎಂಬ ಖ್ಯಾತಿ ಪಡೆದುಕೊಂಡಿದ್ದು ಕೆ. ಆಸಿಫ್ ನಿದರ್ೇಶನದ ಮೊಘಲ್-ಇ-ಆಝಂ. 1960ರ ದಶಕದ ಹಿಂದಿ ಚಿತ್ರರಂಗದ ಹಣೆಬರಹವನ್ನು ಬದಲಿಸಿದ ಈ ಚಿತ್ರ ಈಗಲೂ ಪ್ರೇಮಿಗಳ ಪಾಲಿನ ಬೈಬಲ್.
ಹಿಂದಿ ಹಾಗೂ ಉದರ್ು ಭಾಷೆಗಳಲ್ಲಿ ತಯಾರಾದ ಈ ಚಿತ್ರ ಭಾರತದಲ್ಲಿ ಮೊಘಲ್ ಆಳ್ವಿಕೆಯ ಕಾಲದಲ್ಲಿ ನಡೆದ ಅಮರ ಪ್ರೇಮಕಥೆಯನ್ನು ಹೊಂದಿದೆ. ಆಸ್ಥಾನದ ನೃತ್ಯಗಾತಿ ಅನಾರ್ಕಲಿ (ಮಧುಬಾಲಾ)ಯನ್ನು ಮೊಘಲ್ ರಾಜಕುವರ ಸಲೀಂ (ದಿಲೀಪ್ ಕುಮಾರ್) ಪ್ರೇಮಿಸಿ ಮದುವೆಯಾಗಲು ಬಯಸುತ್ತಾನೆ. ಆದರೆ ಸಲೀಂ ಹಾಗೂ ಅನಾರ್ಕಲಿ ಇವರ ಪ್ರೇಮವನ್ನು ಮಹಾರಾಜ ಅಕ್ಬರ್ (ಪೃಥ್ವಿರಾಜ್ ಕಪೂರ್) ವಿರೋಧಿಸುತ್ತಾನೆ. ಸುಖದ ಸುಪ್ಪತ್ತಿಗೆಯಲ್ಲಿ ವಾಸಿಸುವ ದೇಶವನ್ನು ಆಳುವ ಮಹಾರಾಜನ ಮಗನೊಬ್ಬ ಸಾಮಾನ್ಯ ನೃತ್ಯಗಾತಿಯನ್ನು ಮದುವೆಯಾಗುವುದನ್ನು ಅಕ್ಬರ್ ತಡೆಯುತ್ತಾನೆ. ಅಲ್ಲದೆ ಅಕ್ಬರ್ ಅನಾರ್ಕಲಿಯನ್ನು ಜೈಲಿಗೆ ತಳ್ಳುತ್ತಾನೆ. ಸಲೀಂನನ್ನು ಪ್ರೀತಿಸಿದ ಆಕೆಗೆ ಚಿತ್ರಹಿಂಸೆ ನೀಡುತ್ತಾನೆ. ಆದರೂ ಆಕೆ ಸಲೀಂನ ಮೇಲಿನ ಪ್ರೀತಿಯನ್ನು ಮರೆಯುವುದಿಲ್ಲ.
ಕೊನೆಗೊಮ್ಮೆ ಸಲೀಂ ಪಕ್ಕದ ರಾಜ್ಯದ ಜೊತೆಗೆ ನಡೆದ ಯುದ್ಧದಲ್ಲಿ ಸೋಲುತ್ತಾನೆ. ಅಲ್ಲದೆ ಆತನನ್ನು ಗಲ್ಲಿಗೇರಿಸಲು ಮುಂದಾಗುತ್ತಾರೆ. ಆಗ ಅದನ್ನು ತಪ್ಪಿಸುವ ಅನಾರ್ಕಲಿ ಸಲೀಂನ ಬದಲು ತಾನು ಸಾಯಲು ಸಿದ್ಧಳಾಗುತ್ತಾಳೆ. ಕೊನೆಗೆ ಅನಾರ್ಕಲಿ ಬದುಕಿದ್ದಂತೆಯೇ ಆಕೆಯನ್ನು ಗೋರಿಯೊಳಕ್ಕೆ ತಳ್ಳಿ ಗೋಡೆಕಟ್ಟಲಾಗುತ್ತದೆ. ರಾಜಕುವರ ಸಲೀಂನ ಮೇಲಿನ ಪ್ರೀತಿಗಾಗಿ ಸಾಮಾನ್ಯ ನೃತ್ಯಗಾತಿ ತನ್ನ ಜೀವವನ್ನೇ ಬಲಿಕೊಡುತ್ತಾಳೆ.
ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್, ಮಧುಬಾಲಾ ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಈ ಮೂವರೂ ನೀಡಿರುವ ಭಾವಪೂರ್ಣ ಅಭಿನಯ ನೋಡುಗರನ್ನು ಸೆಳೆಯುತ್ತದೆ. ಅನಾರ್ಕಲಿ ಹಾಗೂ ಸಲೀಂರ ನಡುವಿನ ಪ್ರೇಮಮಯ ಸನ್ನಿವೇಶಗಳು, ಇಬ್ಬರೂ ಒಬ್ಬರನ್ನೊಬ್ಬರು ಅಗಲಿರುವಾಗಿನ ದೃಶ್ಯಗಳು ಹಾಗೂ ಕ್ಲೈಮ್ಯಾಕ್ಸ್ ಚಿತ್ರದ ವಿಶೇಷತೆಗಳಲ್ಲಿ ಒಂದೆನಿಸಿವೆ. ಚಿತ್ರದಲ್ಲಿನ ಹಾಡುಗಳೂ ಅಷ್ಟೆ. ಒಂದಕ್ಕಿಂತ ಇನ್ನೊಂದು ಚೆನ್ನಾಗಿ ಮೂಡಿಬಂದಿವೆ. ಮೊಹಮ್ಮದ್ ರಫಿ ಹಾಗೂ ಇತರರು ಹಾಡಿದ ಲತಾ ಮಂಗೇಶ್ಕರ್ ಹಾಡಿದ `ಏ ಮೊಹಬ್ಬತ್ ಜಿಂದಾಬಾದ್' ಹಾಗೂ `ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಎಂಬ ಹಾಡುಗಳು ಈಗಲೂ ಜನರನ್ನು ಸೆಳೆಯುತ್ತಿವೆ.
1960ರಲ್ಲಿಯೇ 1 ಕೋಟಿ ಹಣವನ್ನು ಖಚರ್ುಮಾಡಿ ಈ ಚಿತ್ರವನ್ನು ನಿರಮಾಣ ಮಾಡಿದ ಖ್ಯಾತಿ ಆಸಿಫ್ಗೆ ಸಲ್ಲುತ್ತದೆ. ಅತ್ಯಂತ ವೈಭವೋಪೇತವಾಗಿ ಚಿತ್ರೀಕರಣವಾಗಿರುವ ಈ ಚಿತ್ರ ಹಿಂದಿಚಿತ್ರರಂಗದಲ್ಲೊಂದು ಮೈಲಿಗಲ್ಲು ಎಂದೇ ಖ್ಯಾತಿ ಪಡೆದಿದೆ.

Sunday, May 16, 2010

ನೋವು-ನೆರವು ದಾಖಲಾದಾಗ....

ಕಳೆದ ವರ್ಷ ಉತ್ತರ ಕರ್ನಾಟಕ ಹಲವು ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ-ನೆರೆಯ ಭೀಕರತೆ ಈಗ ಇತಿಹಾಸ. ಆದರೆ ಸಂಕಷ್ಟಕ್ಕೀಡಾಗಿ ಜೀವನದ ಹಳಿ ತಪ್ಪಿದವರ ಬದಕು-ಬವಣೆ, ಸಮಯದಲ್ಲಿ ಸ್ಪಂದಿಸಿದವರ ಕಾರ್ಯವನ್ನು ದಾಖಲು ಮಾಡುವ ಅಪರೂಪದ ಕೆಲಸ  ರಾಜಧಾನಿಯ ಚ್ರೈತ್ರ ರಶ್ಮಿ ಪ್ರಕಾಶನದಿಂದ ನಡೆದಿದೆ.
ಈ ಪ್ರಕಾಶನ ಸಂಸ್ಥೆ ಹೊರತಂದ `ನೆರೆಯ ನೋವಿಗೆ ಸ್ಪಂದನ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬಸವನಗುಡಿಯ ಸೃಷ್ಟಿ ವೆಂಚರ್ಸ್ ನ ಪುಳಿಯೋಗರೆ ಪಾಯಿಂಟ್ ಕಟ್ಟಡದಲ್ಲಿ ನಡೆದಾಗ, ನೋವಿನ ನೆನಪು ಸಭಿಕರ ಹೃದಯವನ್ನು ಆವರಿಸಿಕೊಂಡಿತೆಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಈ ಮೂರು ಘಟನಾವಳಿಗಳೇ ತುಣುಕುಗಳೇ ಸಹೃದಯರ ಎದೆತುಂಬಿಬರಲು ಸಾಕಾಗಿತ್ತು.


`ನಮ್ಮ ಹಣಿಬಾರ ಛಂದ ಇಲ್ಲ ಬಿಡ್ರಿ. ತುಸು ಕಾಳು ಪಾಳ ನಿತ್ಯದ ಗಂಜಿಗೆ ಇಟಕೊಂಡಿದ್ವಿ. ಅದೂ ಹೋತು. ಜೀವ ಇದ್ದೂ ಇಲ್ಲದಂಗಾಗೇದ. ನಾವೂ ಹೊಳೆ ನೀರಿನಾಗ ಕೊಚ್ಚಿಕೊಂಡು ಹೋಗಿದ್ರ ಭೇಷಿತ್ತು'.
-----
`ಕುಡಿಯಾಕ ಬೇರೆ ನೀರೇ ಇಲ್ರಿ. ಈ ಪ್ರವಾಹದ ರಾಡಿ ನೀರಲ್ಲೇ ಅನ್ನ-ಸಾರು ಮಾಡ್ತಾರ್ರಿ. ಎಷ್ಟು ದಿನ ಬದುಕ್ತೀವಿ ಅನ್ನಾದು ಆ ದೇವ್ರಿಗೆ ಗೊತ್ತದ...'
----
`ಮಳೀ ಸಂಜೀಕ ಅಥವಾ ರಾತ್ರೀಗ ನಿಲ್ಲಬಹ್ದು ಅಂತಾ ಅಂದ್ಕೊಂಡಿದ್ವಿ. ರಾತ್ರಿ ಮಲಗಿದ ಮ್ಯಾಗ ಮಳಿ ಆರ್ಭಟ ಮತ್ತೂ ಜೋರಾತು. ಡೋಣಿ ಊರೊಳಗ ನುಗ್ತಾ ಐತಿ ಅಂತ ಗೊತ್ತಾತು. ಮನಿಗಳೆಲ್ಲಾ ಕುಸಿಯಾಕ ಹತ್ತಿದ್ವು. ತುಂಬಿದ ಮನಿ ಬಿಟ್ಟು ಹೋಗೋದು ಹ್ಯಾಂಗ ಅಂತ ಚಿಂತಿ ಆತು. ಆದ್ರ ಮೊದಲು ಜೀಂವಾ ಉಳೀಲಿ. ನಂತ್ರ ಮನೀ ಅಂತ ಇದ್ದ ಬದ್ದ ಆಹಾರ, ಅಕ್ಕಿ-ಬ್ಯಾಳಿ ಎಲ್ಲ ಗಂಟು ಕಟಗೊಂಡ ಮನಿಯಿಂದ ಹೊರಗ ಓಡಿದ್ವಿ. ಹತ್ತೇ ನಿಮಿಷಕ್ಕ ಮನೀ ಕೊಚಿಗಂಡು ಹೋತು...'
-------
ಎಸ್. ಎಂ. ಜಾಮದಾರ ಹಾಗೂ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ. ಶ್ರೀ. ಆನಂದ್ ನೆರೆಯ ಸಮಯದಲ್ಲಿ ತಾವು ಕೈಗೊಂಡ ಕ್ರಮಗಳನ್ನು ಸಭೆಗೆ ತಿಳಿಸಿದರು. ನೊಂದವರಿಗೆ ಸಹಾಯ ಮಾಡಿದ ಸಾವಯವ ಕೃಷಿ ಮಿಷನ್ನಿನ ಕಾರ್ಯಗಳನ್ನು ವಿವರಿಸಲಾಯಿತು.
ಉತ್ತರ ಕರ್ನಾಟಕದ ಮಂದಿಯ ಆಹಾರ, ಉತ್ಪಾದನೆ, ಬೇಳೆ ಕಾಳು ಬೆಳೆಯುವಿಕೆ, ರೈತಾಪಿ ಕೆಲಸಗಳ ಬಗ್ಗೆ ಆನಂದ್ ಸಾಕಷ್ಟು ಮಾಹಿತಿ ನೀಡಿದರು.
ನೆರೆ ಹಾವಳಿಯಲ್ಲಿ ಸಿಲುಕಿ ಹಲವು ಜನರನ್ನು ರಕ್ಷಿಸಿದ ಬಯಲು ನಾಡಿನ ತಿಮ್ಮಣ್ಣ ಹುಳಸದ್ ಉಪಸ್ಥಿತರಿದ್ದರು. ಪ್ರವಾಹ ಬಂದಾಗ ತಮ್ಮ ಹೊಲ ಹಾಳಾಗುವುದನ್ನೂ ಲೆಕ್ಕಿಸದೇ ಕೆರೆಯ ಕೋಡಿ ಒಡೆದು ಊರನ್ನು ಉಳಿಸಿದ ನೆರೆ ಸಂತ್ರಸ್ಥ ಭೀಮನಗೌಡ ಪಾಟೀಲರು ದೂರದ ಬಾಗಲಕೋಟೆಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ, ನೆರೆಯ ಸಂದರ್ಭದಲ್ಲಿ ತಾವು ಹಾಗೂ ಉತ್ತರ ಕರ್ನಾಟಕದ ಜನರು ಅನುಭವಿಸಿದ ನೋವನ್ನು ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ `ನೆರೆಯ ನೋವಿಗೆ ಸ್ಪಂದನ' ಪುಸ್ತಕದ ಸಂಪಾದಕ ರಾಮಚಂದ್ರ ಹೆಗಡೆ ಸಿ ಎಸ್ ತಾವು ಉತ್ತರ ಕರ್ನಾಟಕಕ್ಕೆ ನೆರೆ ಸಂತ್ರಸ್ಥರ ಜೊತೆ ಮಾತನಾಡಲು ಹೋದಾಗ ಆದ ಅನುಭವವನ್ನು ಸಭೆಯ ಮುಂದಿಟ್ಟರು.

ಪುಸ್ತಕದ ಬಗ್ಗೆ
`ನೆರೆ ನೋವಿಗೆ ಸ್ಪಂದನ' ಪುಸ್ತಕ ಸಂಪೂರ್ಣವಾಗಿ ನೆರೆ ಸಂತ್ರಸ್ತರ ಜೀವನ ಹಾಗೂ ನೆರೆ ಹಾವಳಿಯ ಭೀಕರತೆಯನ್ನು ತೆರೆದಿಡುತ್ತದೆ. ನೆರೆ ಪೀಡಿತ ಪ್ರದೇಶಗಳಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿ ಅವರ ಅನುಭವಗಳನ್ನು ದಾಖಲಿಸಿದ ರಾಮಚಂದ್ರ ಹೆಗಡೆ ಹಾಗೂ ಅವರ ಬಳಗದ ಕಾರ್ಯ ಮಚ್ಚುವಂತಹದ್ದು. ದಾಖಲಾಗದ ಹಲವು ನೆರೆ ಸಂಗತಿಗಳನ್ನು, ನೆರೆಯ ನೋವಿಗೆ ತಕ್ಷಣವೇ ಸ್ಪಂದಿಸಿದವರ ಮತ್ತು ನೆರೆಯಲ್ಲಿ ಸಿಲುಕಿದ ಜನರನ್ನು ಉಳಿಸಿದ ವ್ಯಕ್ತಿಗಳ ಕಾರ್ಯವನ್ನು ಈ ಪುಸ್ತಕ ವಿವರಿಸುತ್ತದೆ.
ರಾಮಚಂದ್ರ ಹೆಗಡೆ, ಎನ್ವೀ ವೈದ್ಯ ಹೆಗ್ಗಾರ ಅವರ ಲೇಖನ, ಸಂಜಯ ಭಟ್ಟ ಬೆಣ್ಣೆಗದ್ದೆ, ಅರ್ಪಿತಾ ಭಟ್ಟ, ನವೀನ ಗಂಗೋತ್ರಿ, ಪ್ರಿಯಾ ಕಲ್ಲಬ್ಬೆ ಅವರ ಕವನಗಳು ಓದುಗರ ಮನಸ್ಸಿಗೆ ನಾಟುವ ಈ ಪುಸ್ತಕದ ಬೆಲೆ 20ರೂ. ಮಾನವೀಯ ಉದ್ದೇಶವೇ ಪ್ರಧಾನವಾಗಿಟ್ಟುಕೊಂಡು ಪ್ರಕಟವಾಗಿರುವ ಪುಸ್ತಕ ಇದಾಗಿದೆ ಎನ್ನುವುದು ಪ್ರಕಾಶಕರ ನುಡಿ.

 -----------------------------------------------
ವಿ.ಸೂ ..
ಇದು ನೆರೆ ನೋವಿನಲ್ಲಿ ನೊಂದವರ ಕಥೆ..
ನೆರೆಯಲ್ಲಿ ಬಸವಳಿದವರಿಗೆ ಸಮಾಧಾನ ಹೇಳಿದವರ ಕಥೆ..
ಇಂತಹ ಹಲವು ಸಂಗತಿಗಳನ್ನು ಸಂಗ್ರಹಿಸಿದ್ದಾರೆ ರಾಚಮ್ ಅಣ್ಣ..
ಅವರಿಗೆ ಧನ್ಯವಾದ.. 
ಪುಸ್ತಕ ನೆರೆ ನೋವಿಗೆ ಸಿಕ್ಕ ಜನರಿಗೆ ಸಮಾಧಾನ ಹೇಳುತ್ತದೆ..
ಈ ಪುಸ್ತಕದ ಬೆಲೆ ಕೇವಲ ೨೦ ರೂಪಾಯಿಗಳು..
ಇದನ್ನು ಕೊಂಡು ಓದಿರಿ...

-ವಿನಯ ದಂಟಕಲ್

Monday, April 26, 2010

ಸಾನಿಯಾ ಕಾಲಿಟ್ಟೊಡನೆ ಪವರ್ ಕಟ್.., ಗುಟ್ಕಾ ಔಟ್..

ಅಯ್ಯೋ ಪಾಪಾ. ಮೂಗುತಿ ಸುಂದರಿಗೆ ಇಂತಹ ಪಾಡು ಬರಬಾರದಿತ್ತು. ಮೊನ್ನೆಯಷ್ಟೇ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ನನ್ನು ಮದುವೆಯಾಗಿ ಭಾರತಕ್ಕೆ ಬಾಯ್ ಬಾಯ್ ಹೇಳಿದ ಈಕೆಗೆ ಪಾಕಿಸ್ತಾನದಲ್ಲಿ ದೊರಕಿದ್ದು ಭವ್ಯ ಸ್ವಾಗತ. ಆದರೆ ಅದಾದ ಕೆಲವೇ ದಿನಗಳಲ್ಲಿ ಆಕೆಗೆ ಪಾಕಿಸ್ತಾನದ ಜನರ ಅಸಲಿ ಮುಖದ ಪರಿಚಯವಾಗತೊಡಗಿದೆ.
ಮದುವೆಯ ಔತಣಕೂಟ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನದಲ್ಲಿ ಅದ್ದೂರಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದ ಶೋಯೆಬ್ ಕುಟುಂಬಕ್ಕೆ ಮೊದಲನೆಯದಾಗಿ ಶಾಕ್ ನೀಡಿದ್ದು ಅಲ್ಲಿನ ವಿದ್ಯುತ್ ಇಲಾಖೆ. ಈ ಕಾರ್ಯಕ್ರಮದಲ್ಲಿ ಅತಿಯಾಗಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದರ ಬಗ್ಗೆ ನೋಟಿಸ್ ನೀಡಿದ ಪಾಕ್ ವಿದ್ಯುತ್ ಮಂಡಳಿ ಶೋಯೆಬ್ ಮನೆಯ `ಪವರ್ ಕಟ್' ಮಾಡಿಬಿಟ್ಟಿತು. ಇದರಿಂದ ಪಾಪಾ ಸಾನಿಯಾಗೆ ಅದೆಷ್ಟು ನೋವಾಗಿರಬೇಡ..?
ಪಾಕಿಸ್ತಾನಿಯನನ್ನು ಮನಮೆಚ್ಚಿ ಮದುವೆಯಾಗಿದ್ದಾಗಿದೆ. ಇನ್ನು ಆತನ ಜೊತೆ ಪಾಕಿಸ್ತಾನದಲ್ಲಿ ಆರಾಮವಾಗಿ ಬದುಕಿ ಜೀವಿಸಬಹುದು ಎಂದು ಕನಸು ಕಂಡಿದ್ದ ಆಕೆಗೆ ಈ ಪವರ್ ಕಟ್ ಅಲ್ಲಿನ ವಾಸ್ತವತೆಯ ಪರಿಚಯ ಮಾಡಿಕೊಟ್ಟಿರಬೇಕು.
ಪಾಪ ಇಷ್ಟೇ ಆಗಿದ್ದರೆ ಚೆನ್ನಾಗಿತ್ತು. ಈಗ ಪಾಕ್ನಲ್ಲಿ ಅವಳ ಹೆಸರಿನಲ್ಲಿ ಗುಟ್ಕಾವೊಂದು ತಯಾರಾಗಿ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಆ ಗುಟ್ಕಾದ ಹೆಸರು `ಸಾನಿಯಾ ಭಾಭಿ '. ಅದರ ಜೊತೆಗೆ `72% ಎಕ್ಸ್ಟ್ರಾ ಸ್ಟ್ರಾಂಗ್' ಎಂಬ ಅಡಿಬರಹ ಬೇರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಆ ಗುಟ್ಕಾ ಕಂಪನಿ ಆ ಗುಟ್ಕಾ ಪ್ಯಾಕ್ ಮೇಲೆ `ತಾಜಗೀ ಬರ್ ಹೋ ಅಂಗ್ ಅಂಗ್.... ಜಬ್ ಹೋ ಸಾನಿಯಾ ಭಾಬಿ ಗುಟ್ಕಾ ಸಂಗ್' ಎಂಬ ಬರಹವನ್ನೂ ಮುದ್ರಿಸಿಬಿಟ್ಟಿದೆ.
ಇದರಿಂದ ಬಹಳ ಪರಿಶಾನ್ ಆಗಿರುವ ಸಾನಿಯಾ ಯಾಕಾದರೂ ಭಾರತ ಬಿಟ್ಟೆನೋ ಎಂದು ಕನವರಿಸುತ್ತಿರಬಹುದು...

Thursday, April 22, 2010

ಮಧ್ಯಮ ಶೂರರು...

ಟೆಸ್ಟ್ ಕ್ರಿಕೆಟ್ಗೆ ಅದರದೇ ಆದ ಖದರಿದೆ. ಎಷ್ಟೇ ಹೊಸ ನಮೂನೆಯ ಕ್ರಿಕೆಟ್ ಆಟಗಳು ಬಂದರೂ ಟೆಸ್ಟ್ನ ವೈಭವ ಎಲ್ಲೂ ಸಿಗಲಾರದು. ಟೆಸ್ಟ್ ಆಡುವ ಆಟಗಾರರೂ ಅಷ್ಟೇ. ಕ್ರಿಕೆಟ್ ಪುಸ್ತಕದಲ್ಲಿ ದಾಖಲಾಗಿರುವ ಎಲ್ಲ ರೀತಿಯ ಆಟದ ಶಾಟ್ಗಳನ್ನೂ ಪ್ರದರ್ಶಿಸಿ  ನೋಡುಗರಿಗೆ ಹಬ್ಬದೂಟವನ್ನು ನೀಡುತ್ತಾರೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದ ಟೆಸ್ಟ್ ಕ್ರಿಕೆಟ್ ಹೊಸತನವನ್ನೂ ಹೊಸ ಆಟಗಾರರನ್ನೂ ಹೊಂದಿ ಉತ್ತಮ ರೀತಿಯಲ್ಲಿ ಬದಲಾಗುತ್ತಾ ಬಂದಿದೆ. ಬ್ರಾಡಮನ್, ಗೂಚ್, ಹ್ಯಾಡ್ಲಿ, ಕಪಿಲ್ ದೇವ್, ಸೋಬರ್ರ್ಸ್ ತಹ ಆಟಗಾರರನ್ನು ಕಂಡ ಟೆಸ್ಟ್ ಲಾರಾ, ಸಚಿನ್, ಹೇಡನ್ರಂತಹ ಆಟಗಾರರನ್ನೂ ಕಂಡಿದೆ.
ಇಂದಿನ ದಿನಮಾನದಲ್ಲಿ ಟೆಸ್ಟ್ ಸಹ ಹೊಡೆಬಡೆಯ ಆಟಕ್ಕೆ ಮಾರುಹೋಗುತ್ತಿದೆ. ಸೆಹವಾಗ್, ಯುವರಾಜ್ರಂತಹ ಆಟಗಾರರು ಒಂದು ದಿನದ ಪಂದ್ಯದಂತೆ ಟೆಸ್ಟನಲ್ಲೂ ಹೊಡೆ ಬಡಿ ಆಟ ಆಡಲು ಪ್ರಾರಂಭಿಸಿದ್ದಾರೆ. ಕ್ಲಾಸಿಕ್ ಹಾಗೂ ಸುಂದರ ಆಟದ ಗೂಡು ಎಂದು ಹೆಸರಾಗಿದ್ದ ಟೆಸ್ಟ್ ಈಗ ಅಬ್ಬರದ ಆಟವಾಗಿ ಬದಲಾಗುತ್ತಿದೆ. ಇಂತಹ ಬದಲಾಗುತ್ತಿರುವ ಟೆಸ್ಟ್ ಆಟದಲ್ಲಿ ಕೆಲವರು ಆ ಆಟಗಾರರಿದ್ದಾರೆ. ಹಳೆಯ ಶೈಲಿ, ಬ್ಯಾಟ್ ಬೀಸುವಿಕೆಯನ್ನು ಹೊಂದಿರುವಂತಹ ಆಟಗಾರರು. ದ್ರಾವಿಡ್, ಲಕ್ಷ್ಮಣ್, ಕಾಲಿಸ್, ಪಾಂಟಿಂಗ್, ಚಂದ್ರಪಾಲ್, ಕಾಲಿಂಗ್ವುಡ್ ಮುಂತಾದವರೇ ಈ ಆಟಗಾರರು.
ಇವರ ಶೈಲಿ ಅದೇ ಹಳೆಯ ರೀತಿಯದು. ಬ್ಯಾಟಿಂಗಿಗೆ ಬಂದರಂತೂ ಮಿನಿಮಂ 100 ಗ್ಯಾರಂಟಿ. ಇವರ ಆಟವನ್ನು ನೋಡುವುದೆಂದರೆ ಸುಂದರ ಸಿನೆಮಾ ವೀಕ್ಷಿಸಿದಂತೆ. ಆಟವೂ ಅಷ್ಟೆ ಗಂಭೀರ ಹಾಗೂ ವೈಭವೋಪೇತ. ಈ ಆಟಗಾರರು ಸಾಮಾನ್ಯವಾಗಿ ಕ್ರೀಸಿಗೆ ಬರುವ ವೇಳೆಗೆ ತಂಡದಲ್ಲಿ 3-4 ವಿಕೆಟ್ಗಳು ಬಿದ್ದಿರುತ್ತವೆ. ತಂಡದ ಪಾಲಿಗೆ ಆಪದ್ಭಾಂದವರಂತೆ ಬರುವ ಇವರು ಸೋಲಿನತ್ತ ಸಾಗುವ ತಂಡವನ್ನು ಗೆಲುವಿನೆಡೆಗೆ ತಂದು ನಿಲ್ಲಿಸುತ್ತಾರೆ.
ಈ ಆಟಗಾರರು ಸೆಹವಾಗ್, ಅಫ್ರೀದಿಯಂತೆ ಗುಡುಗುವುದಿಲ್ಲ. ಬದಲಾಗಿ ಕ್ರೀಸಿಗೆ ಕಚ್ಚಿಕೊಂಡು ನಿಂತುಬಿಡುತ್ತಾರೆ. ಬೌಂಡರಿಗಳ ಮೇಲೆ ಬೌಂಡರಿ ಬಾರಿಸುತ್ತಾರೆ. ಬೌಲರ್ಗಳ ಬೆವರಿಳಿಸುತ್ತಾರೆ. ತಮ್ಮ ವಿಶಿಷ್ಟ ಬ್ಯಾಟಿಂಗ್ನಿಂದ ತಂಡದ ಭವಿಷ್ಯವನ್ನೇ ಬದಲಾಯಿಸುತ್ತಾರೆ.
ಸಾಮಾನ್ಯವಾಗಿ ಟೆಸ್ಟ್ ಆಡುವ ತಂಡಗಳಲ್ಲೆಲ್ಲ ಇಂತಹ ಒಬ್ಬಿಬ್ಬರು ಆಟಗರರು ಇದ್ದೇ ಇರುತ್ತಾರೆ. ದಕ್ಷಿಣ ಆಫ್ರಿಕಾದ ಪಾಲಿಗೆ ಕಾಲಿಸ್, ಆಮ್ಲಾ, ಶ್ರೀಲಂಕಾ ಪಾಲಿಗೆ ಜಯವರ್ಧನೆ, ಆಸ್ಟ್ರೇಲಿಯಾದಲ್ಲಿ ಪಾಂಟಿಂಗ್, ಮೈಕ್ ಹಸ್ಸಿ, ಕ್ಲಾರ್ಕ, ಇಂಗ್ಲೆಂಡ್ನಲ್ಲಿ ಕಾಲಿಂಗ್ವುಡ್, ಪಾಕಿಸ್ತಾನದಲ್ಲಿ ಮೊಹಮ್ಮದ್ ಯುಸುಫ್ ಹಾಗೂ ಮಿಸ್ಬಾ ಉಲ್ ಹಕ್, ವೆಸ್ಟ್ ಇಂಡಿಸ್ ಪಾಲಿಗೆ ಚಂದ್ರಪಾಲ್ ಹಾಗೂ ಭಾರತದ ಪಾಲಿಗೆ ದಿ ವಾಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಇಂತಹ ಆಟವನ್ನು ಆಡುತ್ತಾರೆ. ತಂಡದ ಹಾಗೂ ದೇಶದ ಪಾಲಿಗೆ ಇವರು ಬಹಳ ನಂಬಿಕಸ್ತ ಬ್ಯಾಟ್ಸ್ಮನ್ನುಗಳು. ಯಾರೇ ಔಟಾಗಲಿ, ಎಸ್ಟೇ ವಿಕೆಟ್ ಬೀಳಲಿ. ಇವರಿದ್ದಾರಲ್ಲ ಎಂಬ ಭಾವನೆ ಎಲ್ಲರ ಮನದಲ್ಲಿಯೂ ಅಚ್ಚೊತ್ತಿರುತ್ತದೆ. ಇವರು ಎಷ್ಟೇ ಬಾಲ್ಗಳನ್ನು ಹಾಳು ಮಾಡಲಿ, ಎಷ್ಟೇ ಕುಟುಕಲಿ ಅದರ ಹಿಂದೆ ಗೆಲುವಿನ ಉದ್ದೇಶ ಇದ್ದೇ ಇರುತ್ತದೆ.
ಈ ಬ್ಯಾಟ್ಸ್ಮನ್ಗಳ ಎದುರು ಬಾಲ್ ಮಾಡುವುದು ಎಂತಹ ಯಶಸ್ವಿ ಬೌಲರ್ಗೇ ಆದರೂ ಅದು ಬಹಳ ಕಷ್ಟ. ಯಾವುದೇ ರೀತಿಯ ಬೌಲ್ ಹಾಕಲಿ ಇವರದ್ದು ಒಂದೇ ಧ್ಯಾನ ಅದನ್ನು ಕಟ್ ಮಾಡುವುದು ಹಾಗೂ ಅದೇ ರೀತಿ ಬೌಂಡರಿ ಗಳಿಸುವುದು. ದಿನಗಟ್ಟಲೇ ಕ್ರೀಸಿನಲ್ಲಿ ನಿಂತುಬಿಡುವ ಇವರು ಬೌಲರ್ಗಳ ಸಹನೆಯನ್ನು ಪರೀಕ್ಷೆ ಮಾಡುತ್ತಾರೆ. ಆದರೆ ಬೌಲರ್ ಎಷ್ಟೇ ಒದ್ದಾಡಿದರೂ ಇವರ ವಿಕೆಟ್ ಪಡೆಯುವುದು ಮಾತ್ರ ಬಹಳ ಕಷ್ಟ.
ಭಾರತದ ಟೆಸ್ಟ್ ತಂಡವನ್ನೇ ತೆಗೆದುಕೊಂಡರೆ ಇಲ್ಲಿ ಸೆಹವಾಗ್ರನ್ನು ಬೇಗನೆ ಔಟ್ ಮಾಡಬಹುದು, ಸಚಿನ್ನ್ನು ಬೇಗನೆ ಔಟ್ ಮಾಡಬಹುದು, ಇನ್ನುಳಿದಂತೆ ಗಂಭೀರ್ ಯುವರಾಜ್, ಧೋನಿ ಅಂತವರನ್ನೂ ಔಟ್ ಮಾಡಬಹುದು ಆದರೆ ದ್ರಾವಿಡ್ ಹಾಗೂ ಲಕ್ಷ್ಮಣ್ ಒಮ್ಮೆ ಕ್ರೀಸಿನಲ್ಲಿ ಝಾಂಡಾ ಊರಿದರೆಂದರೆ ಊಹು ಯಾರೆಂದರೆ ಯಾರಬಳಿಯೂ ಅವರನ್ನು ಔಟ್ ಮಾಡಲು ಸಾಧ್ಯವೇ ಇಲ್ಲ. ಶತಕಗಳನ್ನು ಹೊಡೆದ ನಂತರವೇ ಅವರು ವಿಕೆಟ್ ಒಪ್ಪಿಸುವುದು. ಅಂತಹ ಆಟದ ವೈಖರಿ ಅವರದ್ದು. ತೀರಾ ಇತ್ತೀಚೆಗೆ ಈ ಇಬ್ಬರೂ ಆಟಗಾರರೂ ತಂಡದಲ್ಲಿ ಆಡದಿದ್ದರಿಂದ ದಕ್ಷಿಣ ಆಫ್ರಿಕಾದ ವಿರುದ್ಧ ಹೀನಾಯವಾಗಿ ಸೋತಿದ್ದು ನೆನಪಿನಲ್ಲಿ ಇರಬಹುದು. ಕೊನೆಗೆ ಮರು ಪಂದ್ಯದಲ್ಲಿ ಲಕ್ಷ್ಮಣ್ ಶತಕ ಹೊಡೆದು ಮ್ಯಾಚ್ ಗೆದ್ದಿದ್ದು ಯಾವಾಗಲೂ ನೆನಪಿರುತ್ತದೆ.
ಟೆಸ್ಟ್ ಇತಿಹಾಸವನ್ನು ಕೆದಕಿದಾಗ ಇಂತಹ ಆಟಗಾರರು ಬಹಳಷ್ಟು ಜನರಿದ್ದರು. ತಮ್ಮ ಮನಮೋಹಕ ಆಟದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದ ಇವರು ಮ್ಯಾಚುಗಳನ್ನೂ ಸಲೀಸಾಗಿ ಗೆದ್ದುಬಿಡುತ್ತಿದ್ದರು. ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಬ್ರಾಡಮನ್ ಹಾಗೆಯೇ ಬ್ರಿಯಾನ್ ಲಾರಾ, ಇಂಜಮಾಮ್-ಉಲ್-ಹಕ್, ಅಜರ್ುನ ರಣತುಂಗಾ, ಸ್ಟೀವ್ ವಾ ಇಂತವರೆಲ್ಲ ಹೊಡೆ ಬಡಿ ಆಟಕ್ಕಿಂತ ಭಿನ್ನವಾದ ಕ್ರಿಕೆಟ್ ಆಡಿ ಜನಮಾನಸದಲ್ಲಿ ಅಜರಾಮರವಾಗಿ ಉಳಿದವರು. ಎಷ್ಟೇ ಸೆಹವಾಗ್, ಅಫ್ರೀದಿ, ಪೀಟರ್ಸನ್, ಸ್ಮಿತ್ರಂತಹ ಆಟಗಾರರು ಬಂದರೂ ಟೆಸ್ಟ್ ಅಂದಕೂಡಲೇ ಇವರು ಪದೆ ಪದೆ ನೆನಪಾಗುತ್ತಾರೆ. ಬಹುಶಃ ಇಂತಹ ಆಟಗಾರರಿಲ್ಲದ ಟೆಸ್ಟ್ ಕ್ರಿಕೆಟ್ನ್ನು ನೋಡಿದರೆ ಮೊದಲಿನ ಖುಷಿ ದಕ್ಕಲಾರದು.


Thursday, April 15, 2010

ಒಂದಷ್ಟು ಹನಿಗಳು...

ಹಿಂದೆ ಯಾವಾಗಲೋ ಬರೆದ ಒಂದೆರಡು ಹನಿ ಕವನಗಳನ್ನು ನಿಮ್ಮ ಮುಂದೆ ಬರೆದು ಇಡುತ್ತಿದ್ದೇನೆ..


9)ಪ್ರೀತಿಗೆ ಕಾರಣ

ಪ್ರಿಯಾ,
ನೀನು 
ನಿನ್ನ ಕೈಯಲ್ಲಿ 
ಫಳ ಫಳನೆ 
ಹೊಳೆಯುತ್ತಿರುವ 
ಚಿನ್ನದ ನೆಕ್ಲೆಸ್ ನಷ್ಟೇ 
ಸುಂದರ......!!!!


10)ಧನ್ವಂತರಿ...!!!

ಧನ್ವಂತರಿ ಧನ್ವಂತರಿ
ರೋಗಗಳೆಲ್ಲ ಓಡಿಹೊಯಿತ್ರಿ..
ಆದ್ರೂ ಮೈ ಮರಿಬ್ಯಾದ್ರಿ,
ಆಗಾಗ್ ಇಲ್ಲಿಗೆ ಬರ್ತಾ ಇರ್ರಿ...!!!

Monday, April 12, 2010

ಅರ್ಜಿಗಿರಿ



ಅರ್ಜಿ ಗಿರಿ

ನಿಮಗೆ ನಮ್ಮೂರಿನಲ್ಲಿರುವ ಅನೇಕ ವಿಶೇಷತೆಗಳ ಬಗ್ಗೆ ಹೇಳಲೇಬೇಕು. ಹಲವು ವೈಶಿಷ್ಟ್ಯ ಹಾಗೂ ವೈಚಿತ್ರ್ಯಗಳು ಇಲ್ಲಿ ತುಂಬಿ ಕಣ್ಣಿಗೆ ರಾಚುತ್ತವೆಯಾದರೂ ಎದ್ದು ಕಾಣುವುದು ಇಲ್ಲಿನ `ಅರ್ಜಿ ಗಿರಿ'.
ಹಲೋ ಒಂದು ನಿಮಿಷ. ನೀವೇನು ಅರ್ಜಿ ಗಿರಿ ಹೆಸರು ಕೇಳಿದ ಕೂಡ್ಲೇ ಇದೇನೋ ಗೂಂಡಾಗಿರಿ, ಗಾಂಧಿಗಿರಿ ಇಂಥವುಗಳ ಸಾಲಿಗೆ ಸೇರುವಂಥದ್ದು ಅಂದ್ಕೊಂಡ್ರಾ? ಅಲ್ಲ.. ಈ ಅರ್ಜಿ ಗಿರಿ ಇವೆಲ್ಲಕ್ಕಿಂತ ಡಿಫರೆಂಟು..
ನಮ್ಮೂರಿನ ಈ ಅರ್ಜಿ ಗಿರಿಯ ಬಗ್ಗೆ ಹೇಳಬೇಕಂದ್ರೆ ರಾಮಾಯಣದ ಹಾಗೇ ಅರ್ಜಿಯಾಯಣ ಎಂಬ ಇನ್ನೊಂದು ಭಾರಿ ಗೃಂಥವನ್ನೆ ಬರೆಯಬೇಕಾಗಲೂ ಬಹುದು. ಅಷ್ಟು ದೊಡ್ಡದು ಅದು..
ಹಿಂದೆ ಎಲ್ಲೋ ಎರಡು ಶತಮಾನಗಳ ಹಿಂದೆ ಊರಿಗೆ ರಸ್ತೆ ಮಾಡಿಸುವ ಮಹದುದ್ದೇಶದಿಂದ ಯಾವುದೋ ಹಿರಿ ತಲೆ ಬ್ರಿಟೀಷ್ ಸಕರ್ಾರಕ್ಕೆ ಕೊಟ್ಟ ಅರ್ಜಿಯಿಂದಲೇ ಈ ಅರ್ಜಿ ಗಿರಿಕಾಂಡ ಪ್ರಾರಂಭವಾಗುತ್ತದೆ. ಈಗಂತೂ ಈ ಅರ್ಜಿ ಗಿರಿಗೆ ಕೈಹಾಕದ ವ್ಯಕ್ತಿಯೇ ಇಲ್ಲ ನಮ್ಮೂರಲ್ಲಿ ಅಂದರೆ ಅದರ ತೀವ್ರಗತಿ ನಿಮಗರ್ಥವಾದೀತು.!!
ಅರ್ಜಿ ಗಿರಿಎಂದರೆ ಬೇರೇನೂ ಅಲ್ಲ.  ಊರಿಗೆ ಯಾವುದೇ ಕೆಲಸವಾಗಬೇಕಾದರಾಗಲಿ, ಕಾರ್ಯಗಳು ಆಗಬೇಕಾದರಾಗಲೀ, ಯಾವುದೋ ಜನಪ್ರತಿನಿಧಿಗೋ, ಅಧಿಕಾರಿಗೋ, ಜಿಲ್ಲಾ ಕಲೆಕ್ಟರಿಗೊ ಗ್ರಾಮ ಪಂಚಾಯತಿ ಮೇಂಬರ್ರಿಗೋ ಅರ್ಜಿ ಗುಜರಾಯಿಸೋದೆ ಆಗಿದೆ.
ಇವರು ಉಳಿದೆಲ್ಲ ವಿಷಯಗಳಲ್ಲಿ ಹೇಗೆಯೆ ಇರಲಿ, ಅರ್ಜಿ ಗಿರಿಯ ವಿಷಯ ಬಂದಾಗ ಪಕ್ಕಾ ಅಹಿಂಸಾ ವೃತಸ್ಥರು. ಮಂದಗಾಮಿಗಳು.. ಇಲ್ಲಿಯವರಿಗೆ ಏನು ಗೊತ್ತಿಲ್ಲದಿದ್ದರೂ ಯಾರ್ಯಾರಿಗೆ ಅರ್ಜಿ ಕೊಟ್ಟರೆ ಹೇಗೆ ಎಂಬ ಸುದ್ದಿ ಗೊತ್ತಿದೆ. ವಿದ್ಯುತ್ ತೊಂದರೆಗೆ ಸೆಕ್ಷನ್ ಆಫೀಸರು, ಬಸ್ಸಿಗೆ ಡಿಪೊ ಮ್ಯಾನೇಜರು, ರಸ್ತೆಗೆ ರಾಜಕಾರಣಿ, ಬರ-ನೆರೆ ಬಂದರೆ ಕಂದಾಯ ಇಲಾಖೆ ಈ ಮುಂತಾದ ಕೆಲವು ವಿಭಾಗದವರಿಗೆ ನಮ್ಮೂರಿಗರ ಹ್ಯಾಂಡ್ ರೈಟಿಂಗಿನ ಪರಿಚಯ ಅದ್ಯಾವಾಗಲೂ ಆಗಿ ಹೋಗಿದೆಯಂತೆ.
ನಿಮಗೆ ಗೊತ್ತಿಲ್ಲ. ಯಾವುದೆ ಊರಿನಲ್ಲಾದರೂ ಎಲ್ಲರಿಗೂ ಸಂಬಂದಿಸಿದಂತೆ ಏನಾದರೊಂದು ಕಾಮನ್ ಸುದ್ದಿ ಇರಲಿಕ್ಕಿಲ್ಲ. ಆದರೆ ಇಲ್ಲಿ ತೊಂಭತ್ತರ ಹಿರಿಯರಾದಿಯಾಗಿ ಒಂಭತ್ತರ ಕಿರಿಯರವರೆಗೂ ಅರ್ಜಿಯೆಂಬ ಕಾಮನ್ ಸಂಗತಿ ಗೊತ್ತೇ ಇದ್ದು ಬಿಟ್ಟಿದೆ. ಪರೀಕ್ಷಿಸಿ ನೋಡಿ ಬೇಕಾದರೆ, ಇಲ್ಲಿಯವರೆಗೂ ನಮ್ಮೂರಿಗರು ಕೊಟ್ಟ ಅರ್ಜಿಗಳನ್ನು ಲೆಖ್ಖ ಹಾಕಿದರೆ, ಗಿನ್ನಿಸ್ಸು ಬುಕ್ಕಿನಲ್ಲಿ ಮೊದಲ ಸ್ಥಾನ ಯಾರ ಪೈಪೋಟಿಯೂ ಇಲ್ಲದೆಯೇ ಇಲ್ಲಿಗರಿಗೆ ದಕ್ಕಿಬಿಡುತ್ತದೆ.
ಇಲ್ಲಿ ಯಾರಾದರೂ ಹಿರಿಯರು ಕಿರಿಯರ ಬಳಿ `ತಮಾ, ಪೆನ್ನು  ಪಟ್ಟಿ ತಗೊಂಡು ಬಾ' ಅಂದಕೂಡಲೇ ಊರಿಗರು ಯಾವುದಕ್ಕೋ ಅರ್ಜಿ ಬಿತ್ತು ಎಂದುಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಕಿರಿಯರು `ಶುರುವಾಯ್ತು ಅರ್ಜಿ ಕಾಟ' ಎಂದು ಗೊಣಗಲು ಮೊದಲಾಗುತ್ತಾರೆ. ಹಾಗೆಯೇ ಇಲ್ಲಿಯ ಕಿರಿಯರು, ಮಕ್ಕಳು ಸಂಜೆಯ ವೇಳೆ ಬಾಯಿಪಾಠ ಹೇಳಿ ಹೋಂ ವರ್ಕರ್  ಮಾಡದಿದ್ದರೂ ಅರ್ಜಿ ಬರೆಯುವ ಕೆಲಸ ಮಾಡೆಮಾಡುತ್ತವೆ.
ಇಲ್ಲಿಯ ಹೆಂಗಸರೂ ಕೂಡ ಅರ್ಜಿ ಗಿರಿಯ ವಿಷಯದಲ್ಲಿ ಹಿಂದೆ ಬಿದ್ದವರಲ್ಲ. ಅಂತ-ಇಂತ ಯಾವುದೇ ಸ್ತ್ರೀವಾದಿ ಸಂಘಟನೆಗಳು ಇಲ್ಲಿ ಇಲ್ಲದಿದ್ದರೂ ಅವರು ಅರ್ಜಿ ಕೊಡುವ ಕೈಂಕರ್ಯ ಮರೆತಿಲ್ಲ. ಇಲ್ಲಿ ಪುರುಷರು ಅರ್ಜಿ ಕೊಡುವ ಇಲಾಖೆಗಳೇ ಬೇರೆ.. ಅದೇ ರೀತಿ ಸ್ತ್ರೀಯರ ರೂಟೇ ಬೇರೆ. ಪುರುಷರದ್ದು ಬಹುತೇಕ ವ್ಯಾವಹಾರಿಕವಾದರೆ ಸ್ತ್ರೀಮಣಿಗಳು ಸ್ಥಳಿಯ ಶಾಲೆಗೆ, ಆಸ್ಪತ್ರೆಗೆ, ಪತ್ರಿಕೆಗಳಿಗೆಲ್ಲ ಅರ್ಜಿ  ಕೊಡುವ ಕಾರ್ಯವನ್ನು ಮದುವೆ ಮನೆಯಲ್ಲಿ ಕೇರಿ ಕರೆಯುವ ಹಾಗೇ ಹಲವರ ಜೊತೆಗೆ ಸೇರಿ ಕೈಗೊಳ್ಳುತ್ತಾರೆ.
ನಮ್ಮೂರಲ್ಲಿ ಅರ್ಜಿ ಕೊಡುವವರದ್ದು ಒಂದು ಗುಂಪಾದರೆ ಅರ್ಜಿ  ಜಡಿಯುವವರದ್ದು ಮತ್ತೊಂದು ಗುಂಪು. ಇಲ್ಲಿ ಅರ್ಜಿ ಕೊಡುವವರು ಸಮಾಜಸೇವಕರು. ಸ್ವಾರಥರು ಹಾಗೂ ಲೋಕ ಕಲ್ಯಾಣಾರ್ಥವಾಗಿ ಕೆಲಸ ಮಾಡುವಂಥವರು. ಆದರೆ ಈ ಅರ್ಜಿ  ಜಡಿಯುವವರು ಇದ್ದಾರಲ್ಲ ಇವರು ಮಾತ್ರ ಪಕ್ಕಾ ಅಡ್ಡ ಪಿಕರ್ಿಗಳು. ಇವರಿಗೆ ಮಾಡಲು ಬೇರೆ ಕೆಲಸವೇ ಇಲ್ಲವೇನೋ ಎಂಬಂತೆ ಇದ್ದು, ಆಗಾಗ ಏನಾದರೂ ಅಡ್ಡ ಅರ್ಜಿ ಗಳನ್ನು ಜಡಿಯುತ್ತಿರುತ್ತಾರೆ. ಇವರ ಕೆಲಸ ಮತ್ತೇನಲ್ಲ, ಏನಾದರೂ ಆಗುವಂಥ ಕೆಲಸಗಳಿದ್ದರೆ ಅವು ಆಗದಂತೆ ಮಾಡಿ ಮಜಾ ತೆಗೆದುಕೊಳ್ಳುವುದು.  ಯಾವುದೇ ರಸ್ತೆ ಕಾರ್ಯಗಳಿದ್ದರೆ ಅವನ್ನು ತಡೆಯುವುದು. ಪಕ್ಕದ ಮನೆಯ ಹಸುಗೂಸು ಅಳುತ್ತದೆಂದು ಶಬ್ದಮಾಲಿನ್ಯದ ಕಾರಣ ನೀಡಿ ಗ್ರಾಮ ಪಂಚಾಯ್ತಿಗೆ ತಳ್ಳಿ ಅರ್ಜಿ ಕೊಡುವುದು. ಇಂಥದ್ದೇ ಈ ಮಂದಿಗಳು ನಡೆಸುವ ಪುಂಡರಪೂಟಿಗೆ ಉದಾಹರಣೆಗಳು.
ನಮ್ಮೂರಿನ ಈ ಅರ್ಜಿ ಗಿರಿಯ ಸುದ್ದಿ ಕೇಳಿದ ಯಾವುದೋ ಬುದ್ಧಿಜೀವಿ ಈ ಬಗ್ಗೆ ಅಧ್ಯಯನ ನಡೆಸಲು ಬರುವವರಿದ್ದಾರೆಂಬ ಗಾಳಿ ಸುದ್ದಿ ಬಂದಿದೆ. ಅವರು ಹಾಗೆ ಬಂದರೆಂದರೆ ಖಂಡಿತ ಒಂದು ಪಿ.ಎಚ್.ಡಿ ಸಿಕ್ಕೇ ಸಿಗುತ್ತದೆಂಬುದು ಎಲ್ಲರ ವಾದ.
ನಮ್ಮೂರಿನಲ್ಲಿರುವ ಸೂರಕ್ಕಿ ಸೀತಾರಾಮ ಅಲಿಯಾಸ್ ಶೀತೂಭಾವ, ಉಳಿದ ಎಲ್ಲ ಕೆಲಸಗಳಲ್ಲಿ ಹಿಂದುಳಿದಿದ್ದರೂ ಅರ್ಜಿ  ಕೊಡುವುದರಲ್ಲಿ ಫೇಮಸ್ಸು. ಆದರೆ ಈತ ಇಲ್ಲಿಯವರೆಗೆ ಕೊಟ್ಟ ಅರ್ಜಿ ಯಿಂದ ಒಂದೇ ಒಂದು ಉಪಯೋಗವೂ ಆಗದೆ ಇರುವುದು ವಿಧಿ ವಿಲಾಸವೋ, ದುರಂತವೂ ಗೊತ್ತಾಗದು. ಅಲ್ಲದೇ ಈ ಶೀತೂಭಾವ ಅರ್ಜಿ ಯ ಕುರಿತಾಗಿ `ಅರ್ಜಿ ನಿನ್ನೆ ಇಂದು ನಾಳೆ' ಎಂಬ ಮಹಾನ್ ಪುಸ್ತಕವೊಂದನ್ನೂ ಬರೆಯುತ್ತಿದ್ದಾರೆ. ಇದು ಅರ್ಜಿ ಟ್ರೇನಿಂಗ್ ಕೋರ್ಸ್ಗೆ ಒಳ್ಳೆಯ ಹ್ಯಾಂಡ್ಬುಕ್ ಆದೀತು ಎಂಬುದು ಎಲ್ಲರ ಅನಿಸಿಕೆ. ಇನ್ನೂ ವಿಚಿತ್ರವೆಂದರೆ ಬೆಂಗಳೂರಿನ ಯಾವುದೋ ದೇಸಾಯಿ, ಬಾಬೂ ಮುಂತಾದ ನಿದರ್ೇಶಕರು `ನಮ್ಮ ಪ್ರೀತಿಯ ಅರ್ಜಿ ' ಎಂಬ ಚಲನಚಿತ್ರ ಮಾಡಲು ಮುಂದಾಗಿದ್ದಾರಂತೆ.
ಇಷ್ಟಕ್ಕೇ ನಿಲ್ಲುವುದಿಲ್ಲ ಈ ಅರ್ಜಿ ಗಿರಿಯ ಪ್ರತಾಪ.. ಪ್ರತಿ ಸಲ ಚುನಾವಣೆ ಬಂದಾಗ ಊರೂರಿಗೆ ತೆರಳುವ ಜನಪ್ರತಿನಿಧಿಗಳು ಈ ಊರಿಗೆ ಬರುವುದೇ ಇಲ್ಲ. ಯಾಕಂದರೆ ನಮ್ಮೂರಿನಲ್ಲಿ ತುಂಬಾ ಅರ್ಜಿ ಗಿರಿಯ ಘಾಟಿದೆಯಂತೆ. ಇದು ನಮ್ಮೂರಿನ ಅರ್ಜಿ ಗಿರಿಯ ಪುಂಡರಪೂಟು. ಈಗಿನ ನಮ್ಮೂರಿನಲ್ಲಿ ಅದರ ಘಮಲು ನೋಡಿದರೆ ಕನಿಷ್ಟ ಒಂದೆರಡು ಶತಮಾನಗಳಷ್ಟಾದರೂ ಗಟ್ಟಿಯಾಗಿ ಇಲ್ಲಿ ಅರ್ಜಿ ಗಿರಿ ನಿಲ್ಲಬಹುದೆಂಬ ಗುಮಾನಿಯಿದೆ.
ಅಂದ ಹಾಗೆ ಲೇಟೆಸ್ಟಾದ ಬ್ರೆಕಿಂಗ್ ನ್ಯೂಸ್ ಏನಂದ್ರೆ ನಮ್ಮೂರಿಗರು ಅರ್ಜಿ ಗಿರಿಯ ಟ್ರೇನಿಂಗ್ ಕೋರ್ಸನ್ನು ಪ್ರಾರಂಭಿಸಲು ಮುಂದಾಗಿದ್ದಾರಂತೆ. ಆ ಟ್ರೇನಿಂಗು ಪ್ರಾಕ್ಟಿಕಲ್ಲು ಹಾಗೂ ಥಿಯರಿ ಎರಡೂ ಪ್ರಕಾರಗಳಲ್ಲಿ ಇದೆಯಂತೆ ಎಂಬುದು ಅಚ್ಚರಿ. ಜೊತೆಗೆ ಪೋಸ್ಟಲ್ ಕೋರ್ಸ್ ಕೂಡ  ಇದೆ ಎಂಬುದು ಹುಬ್ಬೇರುವ ಸಂಗತಿ.
ಆದರೆ ನಮ್ಮೂರಿನ ಅರ್ಜಿ ಗಿರಿಯಲ್ಲಿ ದೊಡ್ಡದೊಂದು ದೋಷವಿರುವುದು ನಾಡಿನ ಹೆಮ್ಮೆಯ ಟಿವಿಯೊಂದರ ಲೈವ್ ಆಪರೇಷನ್ನಿನಿಂದ ಬೆಳಕಿಗೆ ಬಂದು ಎಲ್ಲರ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ನಮ್ಮೂರಿಗರು ಬರೆಯುತ್ತಿರುವ ಅರ್ಜಿ ಗಳಲ್ಲಿ ಸರಿಯಾದ ರೀತಿ, ನೀತಿ, ರಿವಾಜು ಇಲ್ಲದಿರುವುದು ಆ ಆಪರೇಷನ್ ಟೀವಿಯಿಂದ ತಿಳಿದುಬಂದಿದೆ. ಅಂದರೆ, ನಮ್ಮೂರಿಗರು ಕೊಡುವ ಅರ್ಜಿಯ ಫಾರಮೆಟು ಉಲ್ಟಾ-ಪಲ್ಟಾ ಆಗಿರುತ್ತದಂತೆ. ಅಲ್ಲದೇ ಅರ್ಜಿ ಗೆ ಉದ್ದನೆಯ ಹಾಳೆಯೂ ಬಳಕೆಯಾಗುತ್ತಿಲ್ಲವಂತೆ.... ಎಂಬುದನ್ನು ನಾನು ಯಾವುದೋ ಇಲಾಖೆಯ ಮುಖ್ಯಸ್ಥರ ಮೂಲಕ ತಿಳಿದೆ.
ನನಗೂ ಒಮ್ಮೆ ಈ ಅರ್ಜಿ ಗಿರಿಯ ರೋಗ ಹಿಡಿದಿತ್ತು.. ಯಾರ್ಯಾರೋ ಕೆಳಿಕೊಂಡರೆಂದು ಅರ್ಜಿ  ಬರೆದೂ ಬರೆದೂ ಬೆವರು ಸುರಿಸಿದ್ದೆ.,. ಕೊನೆಗೊಮ್ಮೆ ಅರ್ಜಿ ಬರೆಯುವುದರ ವಿರುದ್ಧ ಒಂದು ದಿನ ಟ್ಯೂಬ್ಲೈಟ್ ಬೆಳಕಿನಲ್ಲಿ ಇದ್ದಕ್ಕಿದ್ದಂತೆ ಜ್ಞಾನೋದಯವಾದ ಮೇಲೆ ಬಿಟ್ಟುಬಿಟ್ಟೆ.!!!
ಇಂತಿಪ್ಪ ಅರ್ಜಿ ಗಿರಿ ನಿಮ್ಮಲ್ಲಿಗೂ ಬಂದು ಕಾಲಿಟ್ಟೀತು.. ಅಂದಹಾಗೆ ಅಜಿ ಬರೆಯುವುದಕ್ಕೆ ನೀವೂ ಉತ್ಸುಕರಾಗಿದ್ದೀರಾ? ನಿಮಗೆ ಅರ್ಜಿ ಬರೆಯಲು ಟ್ರೇನಿಂಗು ಬೇಕಾ? ಹಾಗಾದ್ರೆ ಯಾಕೆ ತಡ? ಈಗಲೇ ಅರ್ಜಿ ಗಿರಿಯ ಪೋಸ್ಟಲ್ ಟ್ರೇನಿಂಗ್ ಕೋರ್ಸ್ಗೆ ಸೇರ್ರಲಾ...

-ವಿನಯ್ ಹೆಗಡೆ

ಸಾನಿಯಾಗೊಂದು ಆತ್ಮೀಯ ಪತ್ರ


ಆತ್ಮೀಯ ಸಾನಿಯಾ..,
ನಿಜ, ಭಾರತದ ಟೆನ್ನಿಸ್ ಪಾಲಿಗೆ ನೀನು ಹೊಸತೊಂದು ಆಶಾಕಿರಣ. ಭಾರತೀಯ ನಾರಿಯರು ಕ್ರೀಡೆಯಲ್ಲಿ ಯಾವಾಗಲೂ ಹಿಂದುಳಿದವರು ಎಂಬ ಮಾತು ಹೆಚ್ಚಾಗಿ ಪ್ರಚಲಿತವಾಗಿದ್ದ ಕಾಲದಲ್ಲಿಯೇ ನೀನು ಹೊಸ ತಾರೆಯಾಗಿ ಉದಯಿಸಿದ್ದು. ಕ್ರಿಕೆಟ್ನ ಸವರ್ಾಧಿಕಾರದ ನಡುವೆ ಸೊರಗಿ ಹೋಗುತ್ತಿದ್ದ ಭಾರತೀಯರ ವಿವಿಧ ಕ್ರೀಡಾ ಪ್ರತಿಭೆಯನ್ನು ಎತ್ತಿಹಿಡಿದವರಲ್ಲಿ ನೀನೂ ಒಬ್ಬಾಕೆ. ಇಲ್ಲಿನ ಎಲ್ಲ ವರ್ಗದವರೂ ಕ್ರಿಕೆಟ್ ಭಜನೆ ಮಾಡುತ್ತಿದ್ದ ಕಾಲದಲ್ಲಿ ಟೆನ್ನಿಸ್ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿ ಕೋಟ್ಯಾಂತರ ಮಂದಿಯನ್ನು ಅಭಿಮಾನಿಗಳನ್ನಾಗಿ ಮಾಡಿಕೊಂಡಾಕೆ ನೀನು.
ನಿಜಕ್ಕೂ ನೀನು ಟೆನ್ನಿಸ್ಲೋಕಕ್ಕೆ ಕಾಲಿಟ್ಟಾಗ ಭಾರತದ ಟೆನ್ನಿಸ್ ಸೊರಗಿತ್ತು. ಎಲ್ಲೋ ಒಂದೆರಡು ಮಹಿಳೆಯರು ಆಗಾಗ ಗೆದ್ದು ದೀಪಾವಳಿಯ ಪಟಾಕಿಯಂತೆ ಸುದ್ದಿ ಮಾಡುತ್ತಿದ್ದರು. ಆದರೆ ಯಾರೂ ನಿನ್ನಷ್ಟು ಹೆಸರು ಮಾಡಲಿಲ್ಲ. ನಿಜಕ್ಕೂ ನೀನು ಟೆನ್ನಿಸ್ನಲ್ಲಿ ಉತ್ತಮ ಸಾಧಕಿ ಹೌದು. ಬಂದ ಹೊಸತರಲ್ಲಿಯೇ ಟೆನ್ನಿಸ್ ಲೋಕದಲ್ಲಿ ಭಾರೀ ಹೆಸರು ಮಾಡಿದ ಆಟಗಾತರ್ಿಯರಿಗೆ ಚಕ್ಕನೆ ಸೋಲುಣಿಸಿ ಶಾಕ್ ಕೊಟ್ಟವಳು ನೀನು. ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್, ಸನ್ಫೀಸ್ಟ್, ಮಿಯಾಮಿ ಓಪನ್ಗಳಂತಹ ಟೆನ್ನಿಸ್ನ ಹೆಸರಾಂತ ಟೂನರ್ಿಗಳಲ್ಲಿ ಭಾರತೀಯರಲ್ಲಿ ಇದುವರೆಗೆ ಯಾರೂ ಏರದಂತಹ ಎತ್ತರವನ್ನು ತಲುಪಿ ಸುದ್ದಿ ಮಾಡಿದಾಕೆ ನೀನು. ಅಷ್ಟೇ ಅಲ್ಲ ನೀನು ಮಾರಿಯಾ ಶರಪೋವಾ, ಸೆರೇನಾ ವಿಲಿಯಮ್ಸ್ರಂತಹ ಆಟಗಾತರ್ಿಯರ ಎದುರು ಕಾದಾಡಿ ಹೆಸರು ಮಾಡಿದವಳು.
ಕ್ರೀಡೆಗಳಲ್ಲಿ ಹಾಗೂ ಟೆನ್ನಿಸ್ನಲ್ಲಿ ಭಾರತೀಯ ನಾರಿಯರ ನಾಯಕಿಯಾಗಿ ನೀನು ರೂಪುಗೊಂಡಾಗ ಎಲ್ಲರೂ ಬಹಳ ಸಂತಸ ಪಟ್ಟಿದ್ದರು. ಹದಿ ಹರೆಯದಲ್ಲಿಯೇ ಟೆನ್ನಿಸ್ನಲ್ಲಿ ಒಳ್ಳೆಯ ಸಾಧನೆ ಮಾಡಿದಾಗ ಇಡೀ ಭಾರತೀಯರೆ ನಿನ್ನ ಬೆನ್ನಿಗೆ ನಿಂತು ಸಂತಸ ಪಟ್ಟರು. ನೂರರ ಆಚೀಚೆ ನಿನ್ನ ರ್ಯಾಂಕಿಂಗ್ಗಳಿದ್ದಾಗ ಈಕೆ ರ್ಯಾಂಕಿಂಗ್ನಲ್ಲಿ ಇನ್ನೂ ಮೇಲೆ ಬರಲಿ ಎಂದುಕೊಂಡರು. ನೀನು 100ರಿಂದ 75ಕ್ಕೆ ಬಂದೆ, 50ಕ್ಕೆ ಬಂದೆ ಕೊನೆಗೆ 40ರ ಆಸುಪಾಸಿಗೂ ಬಂದೆ. ಆಗೆಲ್ಲಾ ನಿನ್ನಷ್ಟೆ ಸಂತಸ ಪಟ್ಟವರು ನಮ್ಮ ಭಾರತೀಯರು.
ನೀನು ಸೋತಾಗ ತಾವೇ ಸೋತೆವೇನೋ ಎಂಬಷ್ಟು ದುಃಖಪಟ್ಟರು. `ಮುಂದಿನ ಟೂನರ್ಿಮೆಂಟ್ನಲ್ಲಿ ಸಾನಿಯಾ ಗೆಲ್ತಾಳೆ' ಅಂತ ತಮ್ಮಲ್ಲಿಯೇ ಸಮಾಧಾನ ಪಟ್ಟುಕೊಂಡರು. ನೀನು ಹೋದ ಟೂನರ್ಿಗೆ ತಾವೂ ಹೋಗಿ ನಿನ್ನನ್ನು ಹುರಿದುಂಬಿಸಿ ಸಂತಸಪಟ್ಟ ಮಂದಿ ಇನ್ನೂ ಬಹಳಷ್ಟು. 
ಇನ್ನು ಇಲ್ಲಿನ ಯುವಕರಂತೂ ನಿನ್ನ ಮೂಗುತಿ ಮುಖಕ್ಕೆ ಮರುಳಾಗಿ ಕನಸುಗಳ ಮೂಟೆಯನ್ನೇ ಕಟ್ಟಿಕೊಂಡರು. ಆಗೊಮ್ಮೆ ಪ್ರತಿದಿನ ಪೇಪರ್ಗಳಲ್ಲಿ ಬರುತ್ತಿದ್ದ ನಿನ್ನ ಪೋಟೋಗಳನ್ನು ಬೆಳಗಾಗುತ್ತಲೇ ನೋಡಿ ಆನಂದಪಟ್ಟರು. ಪೇಪರ್ನಲ್ಲಿ ಬರುತ್ತಿದ್ದ ನಿನ್ನ ಭಾವಚಿತ್ರಗಳನ್ನು ಕತ್ತರಿಸಿ ಇಟ್ಟುಕೊಂಡವರು ಹಲವರು. ಇನ್ನು ಕೆಲವರು ಇದ್ದರೆ ಇಂತವಳೊಬ್ಬಳು ಗೆಳತಿ ಇರಬೇಕು ಎಂದು ಕೊಂಡರು. ಬೆಳಗಿನ ಜಾವದ ಕನಸಿನಲ್ಲಿ ನಿನ್ನ ಕಂಡು ಖುಷಿಪಟ್ಟರು. ಸದಾ ಸಾನಿಯಾ ಸಾನಿಯಾ ಎಂದು ಕನವರಿಸಿದರು. ನಿನ್ನ ಮೋಡಿ ಅದೆಷ್ಟಿತ್ತೆಂದರೆ ಹಲವು ಭಾರತೀಯ ಹುಡುಗಿಯರೂ ನಿನ್ನ ಹಾಗೇ ಮೂಗುತಿ ಹಾಕಿಕೊಂಡು `ಮೂಗುತಿ ಸುಂದರಿ'ಯರಾಗಲಾರಂಭಿಸಿದರು. ಕಾಲೇಜುಗಳಲ್ಲಿ ನಿನ್ನಂತೆ ಕಾಣುವ ಹುಡುಗಿಯರನ್ನು `ಸಾನಿಯಾ' ಎಂಬ ಅಡ್ಡಹೆಸರನ್ನಿಟ್ಟು ಕರೆಯುವ ಪರಿಪಾಠವೂ ಬೆಳೆಯಿತು.
ಅದೆಂತಹ ಕ್ರೇಜé್ ಹುಟ್ಟುಹಾಕಿಬಿಟ್ಟಿದ್ದೀಯಾ ಮಾರಾಯ್ತಿ ನೀನು..? ಸುಂದರವಾಗಿರುವವರು ಬಾಲಿವುಡ್ಡಿನ ಹೀರೋಯಿನ್ಗಳು ಮಾತ್ರ ಎಂಬ ಮಾತೊಂದಿತ್ತು. ಹೆಸರಾಂತ ಜಾಹಿರಾತು ಕಂಪನಿಗಳೆಲ್ಲ ಅವರ ಬೆನ್ನಿಗೆ ಬಿದ್ದುಬಿಟ್ಟಿದ್ದರು. ಆದರೆ ನೀನು ಬಂದೆ ನೋಡು. ಆಮೇಲೆ ಎಲ್ಲವೂ ಬದಲಾಗಿಬಿಟ್ಟವು. ಅಷ್ಟೇ ಅಲ್ಲ ಸಾಲು ಸಾಲು ಜಾಹಿರಾತು ಕಂಪನಿಗಳು ನಿನ್ನ ಮನೆಯ ಬಾಗಿಲು ಬಡಿದರು. ಜಾಹಿರಾತು ಕಂಪನಿಗಳು ನಿನ್ನ ಮನೆಯ ಬಾಗಿಲು ಬಡಿದ ಹಾಗೆಲ್ಲಾ ನೀನು ಬದಲಾಗಲಾರಂಭಿಸಿದೆ. ಉತ್ತಮವಾಗಿ ಆಟವಾಡುತ್ತಿದ್ದ ನೀನು ಯಾರ್ಯಾರ ಕೈಯ್ಯಲ್ಲಿಯೋ ಸೋಲಲಾರಂಭಿಸಿದೆ.
ಉತ್ತಮ ಪ್ರತಿಭೆ ಇದ್ದ ನೀನು ಹಣ ಗಳಿಸಿದಂತೆಲ್ಲ ಕೇವಲ ಸುದ್ದಿ ಮಾಡುವ ವ್ಯಕ್ತಿಯಾದೆ. ನೀನು ಟೆನಿಸ್ ಮ್ಯಾಚ್ಗಳಲ್ಲಿ ಗೆಲ್ಲದೆ ಹೋದರೂ ನಿನ್ನ ಬಗ್ಗೆ ಬರೀ ಸುದ್ದಿಗಳಷ್ಟೇ ಬರಲಾರಂಭಿಸಿತು. ಅದಕ್ಕೂ ಮಿಗಿಲಾಗಿ ನೀನು ಮೊಣಕಾಲು ನೋವು, ಕೈ ನೋವು ಅಂತೆಲ್ಲ ನೆಪಗಳನ್ನು ಹೇಳಿ ಟೂನರ್ಿಯಿಂದ ಹಿಂದೆ ಸರಿದೆ. ಓಲಂಪಿಕ್, ಏಷ್ಯನ್ ಗೇಮ್ಸ್ಗಳಂತಹ ಕ್ರೀಡೆಗಳಲ್ಲಿ ನಿನ್ನ ಮೇಲೆ ನಿರೀಕ್ಷೆ ಇಟ್ಟವರೆಲ್ಲ ನೀನು ಸೋತ ಕೂಡಲೇ ನಿರಾಶರಾದರು. ಬಹುಶಃ ಆಗಲೇ ಇರಬೇಕು ಭಾರತೀಯರಿಗೆ ನಿನ್ನ ಮೇಲೆ ಮನಸ್ಸು ಮುರಿಯಲು.
ಇಷ್ಟರ ನಡುವೆಯೂ ನೀನು ಆಗೊಮ್ಮೆ ಈಗೊಮ್ಮೆ ಕನ್ನಡದ ಕುವರ ಮಹೇಶ್ ಭೂಪತಿ ಜೊತೆ ಮಿಕ್ಸೆಡ್ ಡಬಲ್ಸ್ ಆಡಿ ಗೆಲ್ತಾ ಇದ್ಯಲ್ಲಾ ಆಗಲೂ ನಾವು ಕುತೂಹಲದಿಂದ ನೋಡಿದ್ದಿದೆ. ಮತ್ತೆ ಗೆಲ್ತಾಳೆ ಅಂತ ಖುಷಿಪಟ್ಟಿದ್ದಿದೆ. ಆದರೆ ಆಗ ನೀನು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಅಂತಾಗಿಬಿಟ್ಟೆ. ಆಗ ಅಂದುಕೊಂಡೆವು ನಾವು `ಇವಳು ಇಷ್ಟೇ' ಅಂತ. ಅಲ್ಲಿಂದೀಚೆಗೆ ನೀನು ಗೆದ್ದರೂ ಸೋತರೂ ಭಾರತೀಯರು ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ.
ಈ ನಡುವೆ ಅದ್ಯಾರೋ ಇದ್ದಾನಲ್ಲ ನಿನ್ನ ಬಾಲ್ಯದ ಗೆಳೆಯ ಸೋಹ್ರಾಬ್ ಅವನ ಜೊತೆ ಮದುವೆ ಆಗ್ತೀಯಾ ಅನ್ನುವ ಸುದ್ದಿ ಬಂತು. ಕೆಲವರು ಖುಷಿ ಪಟ್ಟರೆ ಹಲವರು ಹೊಟ್ಟೆಉರಿ ಮಾಡಿಕೊಂಡರು. ಬಹು ದಿನಗಳ ಗೆಳತಿ ಯಾರನ್ನೋ ಮದುವೆ ಆಗಿ ಹೋಗ್ತಾ ಇದ್ದಾಳೆ ಎಂದು ಬೇಸರ ಪಟ್ಟುಕೊಂಡರು. ತಮ್ಮದೆ ಕುಟುಂಬದ ಹುಡುಗಿಯೊಬ್ಬಳು ಮದುವೆ ಆಗಿ ಹೋಗ್ತಾಳೆ ಅನ್ನುವಷ್ಟು ನೊಂದುಕೊಂಡರು.
ಆದರೆ ನೀನು ಆತನ ಜೊತೆ ಮದುವೆಯನ್ನು ಮುರಿದುಕೊಂಡೆ ನೋಡು ಆಗ ಮಾತ್ರ ನಿನ್ನ ಮೇಲೆ ಬಹಳ ಬೇಸರ ಹುಟ್ಟಿಬಿಟ್ಟಿತು. ಸ್ವಾರ್ಥಕ್ಕೋಸ್ಕರ ಬಾಲ್ಯದ ಮಿತ್ರನ ಜೊತೆ ಮದುವೆ ಆಗುವುದನ್ನು ತಪ್ಪಿಸಕೊಂಡೆ ನೋಡು ಆಗ ಬಹುತೇಕರು ನಿನ್ನನ್ನು ವಿರೋಧಿಸಿದರು. ಇವಳಿಗೂ ಬಾಲಿವುಡ್ಡಿನ ರೋಗ ಹಿಡಿಯಿತು, ದಿನಕ್ಕೊಬ್ಬರಂತೆ ಹುಡುಗರನ್ನು ಬದಲಾಯಿಸುವ ರೋಗ ಇವಳಿಗೆ ತಗುಲಿತು ಎಂದು ಹಲವರು ಮಾತಾಡಿಕೊಂಡರು. ದಿನಕ್ಕೊಬ್ಬ ಬಾಯ್ಫ್ರೆಂಡ್ಗಳನ್ನು ಬದಲಾಯಿಸುವ ಕರೀನಾ, ಕತ್ರಿನಾರ ಸಾಲಿಗೆ ನಿನ್ನನ್ನು ಸೇರಿಸಲಾರಂಭಿಸಿದರು.
ಅಷ್ಟೇ ಆದರೆ ಒಳ್ಳೆಯದಿತ್ತೇನೋ. ಆದರೆ ನೀನು ಪಾಕ್ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿದೆ ನೋಡು ಆಗ ಮಾತ್ರ ನಿನ್ನ ಮೇಲಿದ್ದ ಅಲ್ಪಸ್ವಲ್ಪ ಅಭಿಮಾನವೂ ಹೊರಟುಹೋಯಿತು. ಇಡಿಯ ಭಾರತೀಯ ಜನರು ನಿನ್ನ ಈ ಒಂದು ನಿಧರ್ಾರದಿಂದ ನೊಂದು ಕೊಂಡರು. ಅಷ್ಟೇ ಅಲ್ಲ ಅವರು ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲ ಕಣೆ, ಆ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ ನಿನಗೆ ಯಾವಾಗ ಪರಿಚಯವಾದ..? ಯಾವಾಗ ನಿನ್ನ ಜೊತೆ ಮಾತಾಡಿದ..? ಯಾವಾಗ ಪ್ರೇಮ ನಿವೇದನೆ ಮಾಡಿದ..? ಸಕಲ ಭಾರತೀಯ ಯುವಕರು ಅದೇ ಕುತೂಹಲದಲ್ಲಿದ್ದಾರೆ.
ನೀನು ಮಲ್ಲಿಕ್ ಜೊತೆ ಮದುವೆ ಆಗುವ ವಿಷಯವನ್ನು ಜಾಹಿರು ಪಡಿಸಿದಾಗ ಬಹಳಷ್ಟು ಮಂದಿ ಅದನ್ನು ನಂಬಲೇ ಇಲ್ಲ. ಭಾರತೀಯ ಹುಡುಗಿ ಓರ್ವ ಪಾಕಿಸ್ತಾನಿಯನ್ನು ಮದುವೆ ಆಗುತ್ತಾಳೆ ಎಂಬುದನ್ನು ಕನಸು ಮನಸಿನಲ್ಲಿಯೂ ಆಲೋಚಿಸದ ಇಲ್ಲಿನ ಜನರು ನೀನಂದುದನ್ನು ಒಂದು ಸುಳ್ಳು ಸುದ್ದಿ ಇರಬೇಕು ಅಂದುಕೊಂಡರು. ಆದರೆ ನೀನು ಆ ಬಗ್ಗೆ ಬಹಳ ಗಂಭೀರವಾಗಿ ಮಾತನಾಡಿದಾಗಲೇ ಎಲ್ಲರಿಗೂ ತಿಳಿದಿದ್ದು ಇದೊಂದು ನಿಜವಾದ ಸುದ್ದಿ ಎಂದು.
ಆ ಸುದ್ದಿಯನ್ನು ಪ್ರಕಟಿಸಿದ ನಂತರ ನೀನು ನೀಡುತ್ತಿರುವ ಹಲವು ಹೇಳಿಕೆಗಳು ಎಲ್ಲರನ್ನು ಬೆರಗುಗೊಳಿಸುತ್ತಿದೆ. ಮದುವೆ ಆಗಿ ನೀನು ದುಬೈನಲ್ಲಿ ವಾಸಿಸುತ್ತೀಯಂತೆ, ಪಾಕಿಸ್ತಾನಿಯನನ್ನು ಮದುವೆ ಆದ ಮೇಲೂ ನೀನು ಭಾರತದ ಪರವಾಗಿಯೇ ಆಟ ಆಡುತ್ತೀಯಂತೆ ಇದು ನಿಜವಾ..? ಭಾರತೀಯರು ಈ ಮಾತುಗಳನ್ನು ನಂಬಬಹುದಾ.? ಅರ್ಥವಾಗುತ್ತಿಲ್ಲ.
ಇಷ್ಟೆಲ್ಲ ಹೇಳಿದ ಮೇಲೆ ನಿನಗೆ ಇನ್ನೂ ಕೆಲವು ಮಾತುಗಳನ್ನು ಹೇಳೋಣ ಅನ್ನಿಸುತ್ತಿದೆ. ನಿಜಕ್ಕೂ ನೀನು ಪಾಕಿಸ್ತಾನಿಯನ್ನು ಮದುವೆ ಆಗ್ತಾ ಇದ್ದೀಯಲ್ಲಾ ನಿನಗೆ ಭಾರತೀಯರು ಯಾರೂ ಸಿಗಲಿಲ್ಲವಾ? ಭಾರತದಲ್ಲಿ ಸುಮಾರು 7-8 ಕೋಟಿ ಮುಸ್ಲಿಮ್ ಯುವಕರಿದ್ದರಲ್ಲ ಅವರ್ಯಾರೂ ನಿನಗೆ ಇಷ್ಟವಾಗಲಿಲ್ಲವಾ? ಮದುವೆ ಆಗಲು ನಿನಗೆ ಪಾಕಿಸ್ತಾನಿಯೇ ಬೇಕಾದನಾ? ಭಾರತೀಯಳಾಗಿದ್ದುಕೊಂಡು ಪಾಕಿಯನ್ನು ನೀನು ಮದುವೆ ಆಗುವುದು ಎಷ್ಟು ಸರಿ? ನೀನು ಮದುವೆ ವಿಷಯ ಬಹಿರಂಗಪಡಿಸಿದ ನಂತರ ಏನಾಯ್ತು ಗೊತ್ತಲ್ಲ. ಭಾರತೀಯರು ನಿನ್ನ ಪ್ರತಿಕೃತಿ ದಹನ ಮಾಡಿದರು. ವಿರೊಧಿಸಿದರು.. ಪ್ರತಿಭಟನೆ ಮಾಡಿದರು. ಆದರೆ ಅದೇ ಹೊತ್ತಿನಲ್ಲಿ ಪಾಕಿಯರೇನು ಮಾಡಿದರು ಗೊತ್ತಲ್ಲ. ಕುಣಿದರು, ಕುಪ್ಪಳಿಸಿದರು. ಹಬ್ಬ ಮಾಡಿರು. ಪಾಪ ಇಲ್ಲಿನ ಯುವಕರು ಬೇಸರ ಮಾಡಿಕೊಂಡರು. ಹೋಗ್ಲಿ ಬಿಡು.. ಇಲ್ಲಿಯ ಜನರು ನಿನ್ನನ್ನು ಸಂತಸದಿಂದ ಬೀಳ್ಕೊಡುತ್ತಾರೆ. ಖುಷಿಯಿಂದ ನಿನ್ನ ಕಳಿಸಿಕೊಡುತ್ತಾರೆ.
ಆದರೆ ನಿನ್ನಲ್ಲಿ ಒಂದೇ ಕೋರಿಕೆ. ಶೋಯೆಬ್ ಜೊತೆ ಮದುವೆ ಎಂಬ ಸುದ್ದಿಯನ್ನು ನೀನಾಗಲೇ ತಿಳಿಸಿಬಿಟ್ಟಿದ್ದೀಯಾ. ಯಾವುದೇ ಕಾರಣಕ್ಕೂ ಮತ್ತೆ ಆ ಸುದ್ದಿಯನ್ನು ಸುಳ್ಳಾಗಿಸಬೇಡ. ಸೊಹ್ರಾಬ್ಗೆ ಕೈ ಕೊಟ್ಟಂತೆ ಆತನಿಗೂ ಕೈ ಕೊಡಬೇಡ. ನೀನು ಭಾರತದ ಪರವಾಗಿ ಆಡದಿದ್ದರೂ ಬೇಜಾರಿಲ್ಲ. ಒಳ್ಳೆಯ ರೀತಿಯ ಜೀವನವನ್ನು ನಡೆಸಿಕೊಂಡು ಹೋಗು ಸಾಕು. ಆದರೆ ಒಂದು ಮಾತ್ರ ಸತ್ಯ. ನಿನಗೆ ಇದುವರೆಗಿದ್ದ ಕೋಟ್ಯಾಂತರ ಅಭಿಮಾನಿಗಳ ಆದರ, ಪ್ರೀತಿ ಎಲ್ಲ ನಿಂತುಹೋಗಿದೆ. ಮತ್ತೆ ನಿನ್ನನ್ನು ಅವರು ಅಭಿಮಾನದಿಂದ ನೋಡಲಾರರು. ಅಲ್ಲಾದರೂ ನೀನು ಉತ್ತಮವಾಗಿ ಬದುಕು. ಇನ್ನೂ ಹೆಚ್ಚಿನ ಸಾಧನೆ ಮಾಡು ಎಂಬುದೆ ಎಲ್ಲರ ಹಾರೈಕೆ.

ಇಂತಿ ನಿನ್ನ ಅಭಿಮಾನಿ
ಭಾರತೀಯ ಯುವಕ

Sunday, April 11, 2010

ಗೆಳತಿ ಯಾಕ್ಹಿಗೆ...?




ಗೆಳತಿ ಯಾಕ್ಹಿಗೆ...?

ಗೆಳತಿ ಯಾಕ್ಹಿಗೆ...?
ಮೊದ-ಮೊದಲು ಈ ಭೂರಮೆಯ 
ಚುಂಬಿಸಿ ತೃಪ್ತಿಪಡಿಸಿದ 
ವರ್ಷಧಾರೆಯಲ್ಲೊಮ್ದು ಕಂಪಿದೆಯಲ್ಲ,..!!

ಮಾಮರದ ತಳಿರೆಲೆಗಳ ಚಿಗುರ 
ನಡು-ನಡುವಲ್ಲಿ ಕುಳಿತು 
ಕಾಣದ ಕನಸನ್ನು ಕಟ್ಟುತ್ತ
ಉಲಿವ ಕೋಗಿಲೆಯ ಕಂಠದೊದಳಲ್ಲೂ 
ಝಾಲಕಿದೆಯಲ್ಲಾ...!!!

ಹಾಗೆ ಸಾಗಿದಾಗ.......
ಏನನ್ನೂ ಬಯಸದಿದ್ದ ಈ 
ಭಾವದಾಳ-ಬಾಳ ಬದುಕಲ್ಲಿ 
ನೀ-ನೆಂಬ ಭೃಂಗವೆದೆಯ 
ಗೂಡಿದೆ ಕಿಂಡಿಕೊರೆದು, ರಂಧ್ರ ಮಾಡಿ 
ನಿನ್ನ ನೆನಪನ್ನೇ ಭದ್ರವಾಗಿಸಿದೆಯಲ್ಲ...!!!

ಗೆಳತಿ ಯಾಕ್ಹಿಗೆ...?
ನಿನ್ನ ನೆನಪು-ಒನಪು 
ನನ್ನ ಸೆಳೆಯುತ್ತಿದೆಯಲ್ಲಾ...!!!


Tuesday, March 23, 2010

ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು

ಮಾರ್ಚ್ 23, ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ದಾಸ್ಯಮುಕ್ತಿಗಾಗಿ ಜೀವನವನ್ನೇ ಬಲಿದಾನಗೈದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾದ ದಿನ. ಇಂದಿಗೆ ಈ ವೀರಯೋಧರು ದೇಶಕ್ಕಾಗಿ ಜೀವತೆತ್ತು 79 ವರ್ಷಗಳು ಸಂದಿವೆ. ಇಂದು ನಾವು ದೇಶದ ಒಳಿತಿಗೆ ಶ್ರಮಿಸಿದರೆ ಅದೇ ಈ ವೀರರಿಗೆ ನೀಡುವ ಅತ್ಯುನ್ನತ ಗೌರವ.

* ಸಿ.ಎಸ್. ರಾಮಚಂದ್ರ ಹೆಗಡೆ


"ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ..." ಹಾಗೊಂದು ಹಾಡು ಲಾಹೋರ್ ನ ಜೈಲಿನ ಗೋಡೆ ಗೋಡೆ ಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದ್ದಾಗಲಿ, ಸಂಗೀತ ಗೋಷ್ಠಿಯದ್ದಾಗಲಿ ಆಗಿರಲಿಲ್ಲ. ದೇಶಭಕ್ತಿಯ ಮಹಾಪರಾಧಕ್ಕಾಗಿ ನೇಣಿನ ಶಿಕ್ಷೆಗೆ ಒಳಗಾದ ಮೂವರು ಭಾರತೀಯ ಯುವಕರು ತಮ್ಮ ಬಲಿದಾನದ ಸಮಯ ಹತ್ತಿರವಾಯಿತೆಂದು ಸಂಭ್ರಮದಿಂದ ಆನಂದದಿಂದ ಹೇಳತೊಡಗಿದ್ದ ಹಾಡದು. ಸಾಯಲು ಹೊರಟವರಿಂದ ಸಂಭ್ರಮದ ಹಾಡು!

ತಾಯ ವಿಮೋಚನೆಗಾಗಿ, ಸ್ವಾತಂತ್ರ್ಯದ ಕನಸು ಕಂಡ ಆ ಮೂವರು ಭಾರತೀಯ ಯುವಕರಿಗೆ ಬ್ರಿಟಿಷ್ ಸರ್ಕಾರ ನೀಡಿದ್ದು ಗಲ್ಲು ಶಿಕ್ಷೆಯ ಉಡುಗೊರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಮರುದಿನ ಗಲ್ಲಿಗೇರಿಸಬೇಕಿತ್ತಾದರೂ ದೇಶಾಭಿಮಾನಿಗಳ ಪ್ರತಿಭಟನೆಗೆ ಹೆದರಿ ಬ್ರಿಟಿಷ್ ಸರ್ಕಾರ ಒಂದು ದಿನ ಮುಂಚೆಯೇ ಅವರನ್ನು ನೇಣಿ ಗೇರಿಸಲು ನಿರ್ಧರಿಸಿತ್ತು. ಸೆರೆಮನೆಯ ಅಧಿಕಾರಿಗಳು ಆ ಯುವಕರಿಗೆ ಈ ವಿಷಯ ತಿಳಿಸಿದಾಗ ಅವರಿಗೋ ಅತ್ಯಾನಂದ. ಆ ಮೂವರು ಗೆಳೆಯರಲ್ಲೂ ಪೈಪೋಟಿ - ತಮ್ಮಲ್ಲಿ ಮೊದಲು ಗಲ್ಲಿಗೇರುವ ಅವಕಾಶ ಯಾರದಿರಬೇಕು ಎಂಬ ಸಲುವಾಗಿ! ಅವರಿಗದು ಮಾತೃಭೂಮಿಯ ಮುಕ್ತಿಗಾಗಿ ಬಲಿದಾನಗೈಯ್ಯುವ ಭಾಗ್ಯ!

ಪ್ರತ್ಯಕ್ಷ ಸಾವಿನ ಎದುರು ನಿಂತಾಗಲೂ ಅವರಲ್ಲಿ ಭಯದ ಲವಲೇಶವೂ ಇಲ್ಲ. ಗಲ್ಲಿನ ವೇದಿಕೆ ಏರಿದಾಗಲೂ ಮುಖದಲ್ಲಿ ನಗು. ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಜೀವ ತೆಗೆವ ನೇಣಿನ ಕುಣಿಕೆಯನ್ನು ಅವರು ಚುಂಬಿಸಿದರು. ಮನದಲ್ಲಿ ಅದೇನನ್ನೋ ಸಾಧಿಸಿದ ತೃಪ್ತಿ. ಮೊಗದಲ್ಲಿ ಚೈತನ್ಯದ ಚಿಲುಮೆ. ಸಾಯಲು ಹೊರಟವರ ಮುಖದಲ್ಲಿ ನಗು. ಬ್ರಿಟಿಷ್ ಅಧಿಕಾರಿಗಳಿಗೆ ಅತ್ಯಾಶ್ಚರ್ಯ. ಅಲ್ಲಿದ್ದವರು ಐದು ಮಂದಿ ಬ್ರಿಟಿಷ್ ಅಧಿಕಾರಿಗಳು. ಒಬ್ಬ ಬ್ರಿಟಿಷ್ ಅಧಿಕಾರಿ ಕೇಳಿದ 'ಯಾಕೆ ನಗುತ್ತಿದ್ದೀರಿ?' ಬಲಿದಾನಕ್ಕೆ ಸಿದ್ಧನಾದ ಯುವಕರಲ್ಲಿ ಒಬ್ಬ ಹೇಳಿದ "ಸಾರ್ ನೀವು ಅದೃಷ್ಟವಂತರು!" ಬ್ರಿಟಿಷ್ ಅಧಿಕಾರಿಗೆ ಮತ್ತಷ್ಟು ಅಚ್ಚರಿ . 'ಕ್ಷಣದಲ್ಲಿ ಹೆಣವಾಗಿ ಉರುಳುವ ನೀವು ನಮ್ಮ ಅದೃಷ್ಟವನ್ನೇಕೆ ಹೊಗಳ್ತೀರಿ?' ಆತನ ಪ್ರಶ್ನೆ. ಅದಕ್ಕೆ ಆ ಭಾರತೀಯ ಯುವಕ ನಗುತ್ತಲೇ ಉತ್ತರಿಸುತ್ತಾನೆ. "ತನ್ನ ತಾಯ್ನಾಡಿನ ಮುಕ್ತಿಗಾಗಿ, ಸ್ವಾತಂತ್ರ್ಯದ ಕನಸಿಗಾಗಿ ಈ ನಾಡಿನ ಯುವಕ ಅದೆಷ್ಟು ಆನಂದದಿಂದ, ಸಂತೋಷದಿಂದ, ಸಂಭ್ರಮದಿಂದ ಬಲಿದಾನ ಮಾಡ್ತಾನೆ, ಅದನ್ನು ನೋಡುವ ಅದೃಷ್ಟ 30 ಕೋಟಿ ಭಾರತೀಯರಲ್ಲಿ ನಿಮಗೆ ಐದು ಜನರಿಗೆ ಮಾತ್ರ ಸಿಗ್ತಿರೋದು , ನೀವು ಅದೃಷ್ಟವಂತರು!"

ಎಂತಹ ತಾಕತ್ತಿನ ಮಾತದು. ಸಾವಿನ ಸಮ್ಮುಖದಲ್ಲೂ ಅಂದು ಹಾಗೆ ದಿಟ್ಟ ವಾಗಿ ಮಾತಾಡಿದವನು ನಮ್ಮೆಲ್ಲರ ಪ್ರೀತಿಯ ಸರ್ದಾರ್ ಭಗತ್ ಸಿಂಗ್. ಜತೆಗಿದ್ದವರು ಅವನಷ್ಟೇ ಉಜ್ವಲ ದೇಶಭಕ್ತಿ, ಸ್ವಾತಂತ್ರ್ಯದ ಕನಸನ್ನು ಎದೆಯೊಳಗಿಟ್ಟುಕೊಂಡಿದ್ದ ಸುಖದೇವ್ ಮತ್ತು ಶಿವರಾಂ ರಾಜಗುರು.

ಅಂದು 23 ಮಾರ್ಚ್ 1931. ಇನ್ನೂ ತಾರುಣ್ಯದ ಹೊಸ್ತಿಲಲ್ಲಿದ್ದ ಭಗತ್ ಸಿಂಗ್, ಸುಖದೇವ್, ರಾಜಗುರು ಈ ನಮ್ಮ ಭಾರತದ ದಾಸ್ಯ ವಿಮೋಚನೆಗಾಗಿ, ತಮ್ಮ ಮಾತೃಭೂಮಿಯ ಅಗಾಧ ಪ್ರೀತಿ, ಉಜ್ವಲ ದೇಶಭಕ್ತಿಯ ಕಾರಣಕ್ಕಾಗಿ ನಗುನಗುತ್ತಲೇ ನೇಣಿಗೇರಿದ ದಿನ. 'ಈ ದೇಶಕಾಗಿ ಸಾಯಲೂ ಸಿದ್ಧ' ಅನ್ನೋದು ಕೇವಲ ಮಾತಲ್ಲ, ಈ ದೇಶದ ಯುವಕರು ಮಾತೃಭೂಮಿಯ ಒಳಿತಿಗಾಗಿ ಸಾವಿಗೂ ಸವಾಲು ಹಾಕಬಲ್ಲರು ಎಂಬುದನ್ನು ಜಗತ್ತಿಗೇ ನಿರೂಪಿಸಿ ಸಾಧಿಸಿ ತೋರಿಸಿದ ದಿನ. ಅಂದು ಅವರಿಗಿದ್ದದ್ದು ಭಾರತದ ದಾಸ್ಯ ವಿಮೋಚನೆ ಹಾಗೂ ಸ್ವತಂತ್ರ ಭಾರತದ ಕನಸು ಮಾತ್ರ. ನಾವು ಸ್ವತಂತ್ರರಾಗಿ, ದಾಸ್ಯಮುಕ್ತರಾಗಿ ಇರುವ ಇಂದಿನ ಈ ದಿನಗಳಿಗಾಗಿ ಅವರು ತಮ್ಮ ಸುಂದರ ನಾಳೆಗಳನ್ನು ಬಲಿಕೊಟ್ಟಾಗ , ತಾಯ್ನಾಡಿಗಾಗಿ ನಗುನಗುತ್ತಾ ನೇಣಿಗೇರಿದಾಗ ಭಗತ್ ಸಿಂಗ್ ಗೆ ಕೇವಲ 23 ವರ್ಷ, ಸುಖದೇವ್ ಗೆ 27 ವರ್ಷ ಹಾಗೂ ರಾಜಗುರು ಗೆ 25 ವರ್ಷ! ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ಆನಂದ, ದಾಸ್ಯಮುಕ್ತಿಯನ್ನೇ ಜೀವನದ ಧ್ಯೇಯವಾಗಿಸಿ ಕೊಂಡವರು ಅವರು. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲೇ ಅವರದು ಧೀರೋದಾತ್ತ ಅಧ್ಯಾಯ. ಇನ್ನೂ ಶತ ಶತಮಾನಗಳವರೆಗೆ ಭಾರತೀಯ ಯುವಕರಿಗೊಂದು ಆದರ್ಶ, ಅನುಪಮ ಮಾದರಿ, ಉಜ್ವಲ ಮಾರ್ಗದರ್ಶಿ.

ಮನೆಯಲ್ಲಿ ಮದುವೆ ಮಾಡುತ್ತೇನೆಂದಾಗ 'ಭಾರತದ ಸ್ವಾತಂತ್ರ್ಯವೇ ನನ್ನ ಮದುವೆ' ಎಂದು ಪತ್ರ ಬರೆದಿಟ್ಟು ಮನೆಯಿಂದ ಹೊರಬಂದು ಸಂಪೂರ್ಣ ತನ್ನನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡ ಭಗತ್, ದೇಶಾಭಿಮಾನವನ್ನೇ ತಮ್ಮ ರಕ್ತದ ಕಣಕಣ ದಲ್ಲಿ ತುಂಬಿಕೊಂಡು, ದೇಶಭಕ್ತಿಯನ್ನೇ ಉಸಿರಾಡುತ್ತಾ ಬಲಿದಾನದ ಸಮಯ ಬಂದಾಗ 'ನಾನು ಮೊದಲು ನಾನು ಮೊದಲು' ಎಂದು ಪೈಪೋಟಿಗಿಳಿದು ನಗು ನಗುತ್ತಾ ನೇಣಿ ಗೇರಿದ ಸುಖದೇವ್, ರಾಜಗುರು ... ಎಂತಹ ವೀರ ಪರಂಪರೆಯ ಮಕ್ಕಳು ನಾವು! ಆದರೆ ನಮ್ಮಲ್ಲೇಕಿಂದು ಆತ್ಮ ವಿಸ್ಮೃತಿಯ ಕರಿನೆರಳು? ನಾವಿಂದು ಬಲಿದಾನಗೈಯಬೇಕಿಲ್ಲ. ಮನೆ ಮಠ ಸಂಸಾರ ಬಿಟ್ಟು ಬರಬೇಕಿಲ್ಲ. ಯೌವನ, ಬದುಕನ್ನು ತ್ಯಾಗ ಮಾಡಬೇಕಿಲ್ಲ. ಆದರೆ ಕನಿಷ್ಟ ದೇಶವನ್ನು ಪ್ರೀತಿಸಲಾರೆವಾ? ದೇಶದ ಒಳಿತಿಗೆ ಸ್ಪಂದಿಸಲಾರೆವಾ? ಆ ವೀರ ಬಲಿದಾನಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಲಾರೆವಾ? ನಮ್ಮ ಈ ವೀರ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲಾರೆವಾ? ಈ ದೇಶದ ರೈತ, ಗಡಿಕಾಯುವ ಸೈನಿಕರ ಕುರಿತು ಕಿಂಚಿತ್ತೂ ಕಾಳಜಿ ಹೊಂದಲಾರೆವಾ? ಅಷ್ಟೂ ಮಾಡಲಾಗದಿದ್ದರೆ ಸುಖಾಸುಮ್ಮನೆ ಈ ದೇಶಕ್ಕೆ ಬೈಯ್ಯೋದು ಬಿಟ್ಟು, ಈ ದೇಶವನ್ನು ಟೀಕಿಸೋದು ಬಿಟ್ಟು, ದೇಶಕ್ಕಾಗಿ ಕೆಲಸ ಮಾಡುತ್ತಿರುವವರ ಕಾಲೆಳೆಯೋದು ಬಿಟ್ಟು ಸುಮ್ಮನಿರಲಾರೆವಾ?

ದೇಶಕ್ಕಾಗಿ ನಾವೇನೂ ಮಾಡಬೇಕಿಲ್ಲ. ನನ್ನ ಹಳ್ಳಿ, ನನ್ನ ಊರು, ನನ್ನ ಜನ, ನನ್ನ ಸುತ್ತಮುತ್ತಲಿನ ಸಮಾಜಕ್ಕಾಗಿ ಸ್ಪಂದಿಸುವುದೇ, ತುಡಿಯುವುದೇ, ಸಮಾಜದ ಒಳಿತಿಗೆ ಶ್ರಮಿಸುವುದೇ ನಾವಿಂದು ಮಾಡಬೇಕಾದ ಕಾರ್ಯ. ಅದೇ ದೇಶ ಕಟ್ಟುವ ಕೆಲಸ.

ಭಗತ್ ಸಿಂಗ್,ರಾಜಗುರು , ಸುಖದೇವ್ ರ ಬಲಿದಾನದ ಈ ದಿನ ಅಂತಹದೊಂದು ಸಂಕಲ್ಪ ಮಾಡೋಣ. ಇಲ್ಲದಿದ್ದರೆ ಮತ್ತೊಂದು ಮಾರ್ಚ್ 23 ಬರುತ್ತದೆ, ಹೋಗುತ್ತದೆ. ಮತ್ತು ನಾವು ಒಂದೊಂದೇ ವರ್ಷ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ . ಅಷ್ಟೇ!






***************************************************
 ಇದು ನಮ್ಮ ರಾಮಚಂದ್ರ ಹೆಗಡೆ ಸಿ. ಎಸ ಅವರು ಬರೆದ ಲೇಖನ..
ಅವರು ದಟ್ಸ್ ಕನ್ನಡ ದಲ್ಲಿ ಬರೆದಿದ್ದರು.. ಅದನ್ನು ನಿಮಗಾಗಿ ಹಾಗೆ ಎತ್ತಿ ಇಟ್ಟಿದ್ದೇನೆ..- ವಿನಯ್

Wednesday, March 17, 2010

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು ದಿನ-೧

 ದಿನ-೧..
ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ...

ಕೆಲವು ದಿನಗಳ ಹಿಂದೆ ನಾವು ಮಿತ್ರರು ಸೇರಿ ಊಟಿಗೆ ಹೋಗೋಣ ಎಂಬ ಪ್ಲಾನ್ ಹಾಕಿಕೊಂಡೆವು..
ಆ ಪ್ರಕಾರವಾಗಿ ಪೆಬ್ರವರಿ ೧೮ ರಂದು ಸಂಜೆಯ ವೇಳೆಗೆ ರಾಘವ ನ ಜೊತೆ ನಾನು ಹೊರಟೆ..
ನಮ್ಮ ತಂಡದ ಸದಸ್ಯರಾದ ಕಿಟ್ಟು ಹಾಗು ಮೋಹನ ಮೊದಲೇ ಮೈಸೂರು ತಲ್ಲುಪಿದ್ದರು...
ನಾವು ಬೆಂಗಳೂರನ್ನು ಬಿಡುವ ವೇಳೆಗೆ ಬಾನಲ್ಲಿ ಸೂರ್ಯ ಇಳಿಯುತ್ತಿದ್ದ.. ಸಂಜೆ ೫ ಮೀರಿತ್ತು..
ರಾಘವನ ಮೋಟರ್ ಸೈಕಲ್ ಏರಿ ಹೊರಟೆವು.. ಮೈಸೂರಿನ ಕಡೆ ನಮ್ಮ ಪಯಣ ಬಲು ನಿಧಾನವಾಗಿ ಸಾಗಿತು.
ಬಿಡದಿ ಬಳಿ ಏಳನೀರು ಕುಡಿದು ಹೊರಟೆವು.. ಬಾಯಿಯಲ್ಲಿ ಹಳೆಯ ಹಾಡುಗಳಿದ್ದವು..
ಕೆಳವು ಕಡೆ ರಾಘು, ಹಲವು ಕಡೆ  ನಾನು ವಾಹನ ಚಲಾಯಿಸಿದೆ..
ಮೈಸೂರು ರಸ್ತೆಯಂತೂ ವಾಹನಗಳ ಭರಾಟೆಯಿಂದ ಕೂಡಿತ್ತು..
ಅಂತು ಇಂತೂ ಮೈಸೂರು ತಲುಪಿದಾಗ ಸಂಜೆ ೮ ಗಂಟೆ..
ಅಲ್ಲಿನ ಹುಣಸೂರು ಸರ್ಕಲ್ನಲ್ಲಿ ಮಿರ್ತರಿಗಾಗಿ ಕಾದೆವು..
ಕೆಳವು ಸಮಯದ ನಂತರ ಅವರು ಬಂದರು..
ನಂತರ ಕೊಂಚ ಮಾತುಕತೆ ನಡೆಯಿತು..
ಆ ಪ್ರಕಾರವಾಗಿ ನಾವು ರಾತ್ರಿ ಉಳಿಯುವುದು ಗುಂಡ್ಲುಪೇಟೆಯಲ್ಲಿ ಎಂಬ ನಿರ್ಧಾರವಾಯಿತು..
ಇಲ್ಲಿಂದ ನಾವು ಬದಲಾವಣೆ ಮಾಡಿ ಹೊರಟೆವು..
ನಾನು ಮೋಹನನ ಬೈಕ್ ಏರಿದೆ..ರಾಘು ಬೈಕ್ಗೆ ಕಿಟ್ಟು ಬಂದ..
 ರೇಸ್ ಬಾಬಾ ರೇಸ್
ಇಲ್ಲಿ ಮಿತ್ರರು ರೇಸ್ ಗೆ ಬಿದ್ದರು..
ಒಬ್ಬರಿಗಿಂತ ಮತ್ತೊಬ್ಬರು ವೇಗವಾಗಿ ಹೋಗಬೇಕೆಂಬ ತವಕ..
ಅದೆಸ್ತು ವೇಗವಾಗಿ ಸಾಗಿದರೋ..?
ಕೊನೆಗೆ ನಂಜನಗೂಡಿನಲ್ಲಿ ಊಟ ಮಾಡಿದೆವು..
ನಂತರ ಮತ್ತೆ ಮುಂದೆ ಹೊರಟೆವು..
ಇಲ್ಲೂ ಮತ್ತೆ ರೇಸ್..!!!
ಕೊನೆಗೆ ಗುಂಡ್ಲುಪೇಟೆ ತಲುಪುವ ವೇಳೆಗೆ ಆಗಲೇ ಸಮಯ ೧೧ ಆಗಿತ್ತು..
ಎಲ್ಲಿ ಉಳಿಯೋದು ಎಂದು ಚಿಂತಿಸಿದೆವು..
ಕೊನೆಗೆ ಉಳಿಯಲು ಲಾಡ್ಜ್ ಹುಡುಕಿದೆವು..
ಸಿಕ್ಕಿತು.. ಕಡಿಮೆ ಬೆಲೆಗೆ..
ಅಲ್ಲಿ ಸ್ನಾನ ಮಾಡಿ ಮಲಗಿದೆವು..
ಮರುದಿನದ ಪಯಣದ ಕನಸು ಕಣ್ಣಿನಲ್ಲಿತ್ತು....

(ಮುಂದುವರಿಯುತ್ತದೆ...)

Monday, March 15, 2010

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು

ಅಲ್ಲಿಗೆ ಹೋಗಿ ಬಂದೆ..
ಮಿತ್ರರ ಜೊತೆಗೆ.. ಬಹು ದಿನಗಳ ಆಸೆ ಇತ್ತು..
ಅಂತೂ ಕೈಗೂಡಿತು..
ನಮ್ಮ ಪ್ರಯಾಣ ಬಹಳ ಚನ್ನಾಗಿತ್ತು..
ಮೊದಲು ಬೆಂಗಳೂರಿನಿಂದ ಮೈಸೂರು, ನಂತರ ಬಂಡೀಪುರ, ಊಟಿ, ಗುದಳುರಿಗೆ ತೆರಳಿದೆವು...
ನಂತರ ಸುಲ್ತಾನ್ ಬತ್ತೇರಿ ಹಾಗು ಎಡಕ್ಕಲ್ ಗುಡ್ಡಕ್ಕೆ ಸಹ ಹೋಗಿ ಬಂದೆವು...
ಅದರ ವಿವರ ಇನ್ನೊಮ್ಮೆ........

Sunday, March 14, 2010

Yugaadi ...

ಯುಗ ಯುಗಾದಿ ಕಳೆದರು...
ಯುಗಾದಿ ಮರಳಿ ಬರುತಿದೆ...
ನವ ವಸಂತದ ಸಂತಸದ ಯುಗಾದಿ ಮತ್ತೆ ಬಂದಿದೆ..
ನಿಮಗೆಲ್ಲರಿಗೂ ಯುಗಾದಿಯ ಶುಭಾಶಯಗಳು...

ಜೀವನದಲ್ಲಿ ಸಿಹಿ-ಕಹಿ ಎರಡು ಸಮನಾಗಿ ಇರಬೇಕು ಎಂಬ ತತ್ವ ಸಾರುವ ಯುಗಾದಿ ಮನುಷ್ಯನ ಬದುಕಿನ ಪ್ರಪುಲ್ಲತೆಯ ಸಂಕೇತ...
ಈ ದಿನದ ನೆನಪಿನಲ್ಲಿ ಬದುಕಿನಲ್ಲಿ ಹೊಸ ಹೆಜ್ಜೆ ಇಡೋಣ ಬನ್ನಿ...

ಈ ಖುಷಿ ಗೆ ಒಂದು ಹನಿ ಚುಟುಕ...


8) ಯುಗಾದಿ..

ಯುಗಾದಿ ಎಂದ ಕೂಡಲೇ
ನನಗೆ ನೆನಪಾಗುವುದು 
you ಮತ್ತು ಗಾದಿ...!!!

ಮತ್ತೆ ಸಿಗೋಣ...
ಮತ್ತಸ್ಟು ಹೊಸ ಹುರುಪಿನ ಜೊತೆಗೆ...

Thursday, February 4, 2010

ಕೆಲವು ಹನಿ ಚುಟುಕಗಳು...

 ಇವು ಅಪರೂಪಕ್ಕೆ ಬರೆದ ಹನಿಗಳು..
 ಸುಮ್ಮನೆ ನಿಮ್ಮ ಮುಂದೆ...

6) ಮೊಡವೆ

ಮೊಡವೆ ಎಂದರೆ
ಹೆಣ್ಣು ಹುಡುಗಿಯ ಮೊಗದ ಭಾವನೆಗಳು
ಹೊರ ಹೋಗುವ ಒಂದು
way...!!!


7) ತಾಳಿ..

ಹರೆಯಕ್ಕೆ.,
ಯವ್ವನದೊದಲಿಗೆ
ಸಿಕ್ಕ ಒಂದು ಕಡಿವಾಣ ..
ಗಂಡಿನ ಲಗಾಮು..!!