Wednesday, March 17, 2010

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು ದಿನ-೧

 ದಿನ-೧..
ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ...

ಕೆಲವು ದಿನಗಳ ಹಿಂದೆ ನಾವು ಮಿತ್ರರು ಸೇರಿ ಊಟಿಗೆ ಹೋಗೋಣ ಎಂಬ ಪ್ಲಾನ್ ಹಾಕಿಕೊಂಡೆವು..
ಆ ಪ್ರಕಾರವಾಗಿ ಪೆಬ್ರವರಿ ೧೮ ರಂದು ಸಂಜೆಯ ವೇಳೆಗೆ ರಾಘವ ನ ಜೊತೆ ನಾನು ಹೊರಟೆ..
ನಮ್ಮ ತಂಡದ ಸದಸ್ಯರಾದ ಕಿಟ್ಟು ಹಾಗು ಮೋಹನ ಮೊದಲೇ ಮೈಸೂರು ತಲ್ಲುಪಿದ್ದರು...
ನಾವು ಬೆಂಗಳೂರನ್ನು ಬಿಡುವ ವೇಳೆಗೆ ಬಾನಲ್ಲಿ ಸೂರ್ಯ ಇಳಿಯುತ್ತಿದ್ದ.. ಸಂಜೆ ೫ ಮೀರಿತ್ತು..
ರಾಘವನ ಮೋಟರ್ ಸೈಕಲ್ ಏರಿ ಹೊರಟೆವು.. ಮೈಸೂರಿನ ಕಡೆ ನಮ್ಮ ಪಯಣ ಬಲು ನಿಧಾನವಾಗಿ ಸಾಗಿತು.
ಬಿಡದಿ ಬಳಿ ಏಳನೀರು ಕುಡಿದು ಹೊರಟೆವು.. ಬಾಯಿಯಲ್ಲಿ ಹಳೆಯ ಹಾಡುಗಳಿದ್ದವು..
ಕೆಳವು ಕಡೆ ರಾಘು, ಹಲವು ಕಡೆ  ನಾನು ವಾಹನ ಚಲಾಯಿಸಿದೆ..
ಮೈಸೂರು ರಸ್ತೆಯಂತೂ ವಾಹನಗಳ ಭರಾಟೆಯಿಂದ ಕೂಡಿತ್ತು..
ಅಂತು ಇಂತೂ ಮೈಸೂರು ತಲುಪಿದಾಗ ಸಂಜೆ ೮ ಗಂಟೆ..
ಅಲ್ಲಿನ ಹುಣಸೂರು ಸರ್ಕಲ್ನಲ್ಲಿ ಮಿರ್ತರಿಗಾಗಿ ಕಾದೆವು..
ಕೆಳವು ಸಮಯದ ನಂತರ ಅವರು ಬಂದರು..
ನಂತರ ಕೊಂಚ ಮಾತುಕತೆ ನಡೆಯಿತು..
ಆ ಪ್ರಕಾರವಾಗಿ ನಾವು ರಾತ್ರಿ ಉಳಿಯುವುದು ಗುಂಡ್ಲುಪೇಟೆಯಲ್ಲಿ ಎಂಬ ನಿರ್ಧಾರವಾಯಿತು..
ಇಲ್ಲಿಂದ ನಾವು ಬದಲಾವಣೆ ಮಾಡಿ ಹೊರಟೆವು..
ನಾನು ಮೋಹನನ ಬೈಕ್ ಏರಿದೆ..ರಾಘು ಬೈಕ್ಗೆ ಕಿಟ್ಟು ಬಂದ..
 ರೇಸ್ ಬಾಬಾ ರೇಸ್
ಇಲ್ಲಿ ಮಿತ್ರರು ರೇಸ್ ಗೆ ಬಿದ್ದರು..
ಒಬ್ಬರಿಗಿಂತ ಮತ್ತೊಬ್ಬರು ವೇಗವಾಗಿ ಹೋಗಬೇಕೆಂಬ ತವಕ..
ಅದೆಸ್ತು ವೇಗವಾಗಿ ಸಾಗಿದರೋ..?
ಕೊನೆಗೆ ನಂಜನಗೂಡಿನಲ್ಲಿ ಊಟ ಮಾಡಿದೆವು..
ನಂತರ ಮತ್ತೆ ಮುಂದೆ ಹೊರಟೆವು..
ಇಲ್ಲೂ ಮತ್ತೆ ರೇಸ್..!!!
ಕೊನೆಗೆ ಗುಂಡ್ಲುಪೇಟೆ ತಲುಪುವ ವೇಳೆಗೆ ಆಗಲೇ ಸಮಯ ೧೧ ಆಗಿತ್ತು..
ಎಲ್ಲಿ ಉಳಿಯೋದು ಎಂದು ಚಿಂತಿಸಿದೆವು..
ಕೊನೆಗೆ ಉಳಿಯಲು ಲಾಡ್ಜ್ ಹುಡುಕಿದೆವು..
ಸಿಕ್ಕಿತು.. ಕಡಿಮೆ ಬೆಲೆಗೆ..
ಅಲ್ಲಿ ಸ್ನಾನ ಮಾಡಿ ಮಲಗಿದೆವು..
ಮರುದಿನದ ಪಯಣದ ಕನಸು ಕಣ್ಣಿನಲ್ಲಿತ್ತು....

(ಮುಂದುವರಿಯುತ್ತದೆ...)

No comments:

Post a Comment