Sunday, June 6, 2010

ಸತ್ಯದ ಸಾರ ಸಾರುವ ಸತ್ಯಹರಿಶ್ಚಂದ್ರ


ನಿರದೆಶನ : ಹುಣಸೂರು ಕೃಷ್ಣಮೂರ್ತಿ 
ನಿರಮಾಪಕರು : ವಿಜಯಾ ಪ್ರೊಡಕ್ಷನ್
ಸಂಗೀತ : ಪಿ. ಎಂ. ರಾವ್
ಚಿತ್ರ ಬಿಡುಗಡೆ : 1965
ತಾರಾಗಣದಲ್ಲಿ : ಡಾ. ರಾಜಕುಮಾರ್, ಫಂಡರೀಬಾಯಿ, ನರಸಿಂಹರಾಜೂ, ಎಂ. ಪಿ. ಶಂಕರ್ ಮುಂತಾದವರು

ಸತ್ಯ ಹರಿಶ್ಚಂದ್ರ ಕನ್ನಡದ ಉತ್ತಮ ಚಿತ್ರಗಳಲ್ಲಿ ಒಂದು. 1965ರಲ್ಲಿಯೇ ಭಾರೀ ವೆಚ್ಚದಲ್ಲಿ ನಿರಮಾಣವಾಗಿದ್ದ ಈ ಚಿತ್ರವನ್ನು ನೋಡದವರೆ ಇಲ್ಲ.
ಸತ್ಯವೇ ತಾಯಿ ತಂದೆ ಎಂಬ ನೀತಿಯನ್ನು ಮೈಗೂಡಿಸಿಕೊಂಡು ಅದಕ್ಕಾಗಿಯೇ ಬಾಳಿ ಬದುಕಿದ ರಾಜನೊಬ್ಬನ ಕಥೆ ಸತ್ಯಹರಿಶ್ಚಂದ್ರ. ಏನೇ ಕಷ್ಟ ಬಂದರೂ ಸತ್ಯವನ್ನು ಬಿಡಬಾರದು ಎಂಬ ಗುಣ ರಾಜನದ್ದು. ಅದಕ್ಕಾಗಿಯೇ ಆತ ಹಲವು ರೀತಿಯ ಕಷ್ಟದ ಕೋಟಲೆಯನ್ನೂ ಅನುಭವಿಸುತ್ತಾನೆ. ಮಹಾಮುನಿ ವಿಶ್ವಾಮಿತ್ರನ ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಗೆಲ್ಲುವ ಕಥೆಯೇ ಸತ್ಯ ಹರಿಶ್ಚಂದ್ರ.
ರಾಜಾ ಹರಿಶ್ಚಂದ್ರನಾಗಿ ಡಾ. ರಾಜ್ಕುಮಾರ್ ಅವರದ್ದು ಚಿತ್ರದಲ್ಲಿ ಮೇರು ಅಭಿನಯ. ಹರಿಶ್ಚಂದ್ರನ ಮಡದಿಯಾಗಿ ಫಂಡರಿಬಾಯಿ ಮನೋಜ್ಞವಾಗಿ ನಟಿಸಿದ್ದಾರೆ. ವಿಶ್ವಾಮಿತ್ರನಾಗಿ ಉದಯ್ಕುಮಾರ್ ಸಿಟ್ಟಿನ ಪ್ರತಿರೂಪವಾಗಿಕಾಣುತ್ತಾರೆ. ರಾಜನನ್ನು ಕಾಡುವ ವಿಶ್ವಾಮಿತ್ರನ ಬಂಟ ನಕ್ಷತ್ರಿಕನ ಪಾತ್ರದಲ್ಲಿ ನಟಿಸಿದ್ದು ಕಾಮಿಡಿ ಕಿಂಗ್ ನರಸಿಂಹರಾಜೂ. ಚಿತ್ರದಲ್ಲಿ ಇವರು ಹಾಸ್ಯ, ಭಯ, ಸಿಟ್ಟು ಮುಂತಾದ ಎಲ್ಲ ರೀತಿಯ ಅಭಿನಯಗಳನ್ನೂ ಮಾಡಿ ನೋಡುಗರನ್ನು ಸೆಳೆಯುತ್ತಾರೆ. ವೀರಬಾಹುವಿನ ಪಾತ್ರ ನಿರ್ವಹಿಸಿರುವ ಎಂ. ಪಿ. ಶಂಕರ್ ತಮ್ಮ ವಿಶಿಷ್ಟ ಅಭಿನಯದಿಂದಾಗಿ ಆಕಷರ್ಿಸುತ್ತಾರೆ.
ಚಿತ್ರದ ಹಾಡುಗಳೂ ಅಷ್ಟೆ, ಮತ್ತೆ ಮತ್ತೆ ಕೇಳುವಂತಿದೆ. `ನಮೋ ಭೂತನಾಥ..', `ವಿಧಿ ವಿಪರೀತ...', `ಆನಂದ ಸದನ ಅರವಿಂದನಯನ..' ಹಾಡುಗಳು, ಜೊತೆಗೆ ಎಂ. ಪಿ. ಶಂಕರ್ ಅಭಿನಯಿಸಿದ `ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ' ಹಾಗೂ `ನನ್ನ ನೀನು ನಿನ್ನ ನಾನು..' ಎಂಬ ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ.
ನಾಲ್ಕು ದಶಕಗಳ ಹಿಂದೆಯೇ ಕಪ್ಪು ಬಿಳುಪು ಬಣ್ಣದಲ್ಲಿ ಅದ್ದೂರಿಯಾಗಿ ನಿರಮಾಣವಾಗಿದ್ದ ಈ ಚಿತ್ರವನ್ನು 2008ರಲ್ಲಿ ಬಹುವರ್ಣಗಳ ಮೂಲಕ ಮತ್ತೆ ಬಿಡುಗಡೆ ಮಾಡಲಾಯಿತು. 1965ರಲ್ಲಿ ಶತದಿನ ಆಚರಿಸಿದ್ದ ಚಿತ್ರ 2008ರಲ್ಲಿ ಬಾಕ್ಸಾಫೀಸ್ನಲ್ಲಿ ಸಂಪೂರ್ಣ ನೆಲಕಚ್ಚಿತು.
ಸತ್ಯದ ನೀತಿಯನ್ನು ಸಾರುವ ಆದರ್ಶಮಯ ಚಿತ್ರ ಎಲ್ಲ ಕಾಲದಲ್ಲಿಯೂ, ಎಲ್ಲರೂ ನೋಡಲೇಬೇಕಾದ ಚಿತ್ರ ಎಂದು ಹೆಸರಾಗಿದೆ.

ವಿನಯ್ ದಂಟಕಲ್

No comments:

Post a Comment