Tuesday, November 26, 2013

ನಾಡು ನುಡಿಯ ಜೊತೆಗೆ ಪ್ರೀತಿ (ಪ್ರೇಮಪತ್ರ-8)

ಇದು ನಮ್ಮ ಕರ್ನಾಟಕದ ನಾಡು ನುಡಿಯ ಕುರಿತು ಗೆಳೆಯನೊಬ್ಬ ತನ್ನ ಗೆಳತಿಗೆ ಬರೆಯುವ ಪತ್ರ. ಬಹುಕಾಲದಿಂದ ಪತ್ರ ಬರೆಯದಿದ್ದ ಆತ ಕೊನೆಗೊಮ್ಮೆ ಆಕೆಗೆ ಪತ್ರ ಬರೆದಾಗ ಅದರಲ್ಲಿ ಯಾವರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ? ಯಾವ ವಿಷಯಗಳನ್ನು ಬಳಕೆ ಮಾಡುತ್ತಾನೆ ಎಂಬುದು ಈ ಪತ್ರದಲ್ಲಿದೆ.

ಆತ್ಮೀಯ ಗೆಳತಿ,
ಪ್ರೀತಿ
ಬಹು ದಿನಗಳಾಗಿದ್ದವಲ್ಲ ಪತ್ರ ಬರೆಯದೇ. ಹಾಳಾದ ಕೆಲಸದ ಒತ್ತಡಗಳ ನಡುವೆ ಪತ್ರವನ್ನು ಬರೆಯುವ ಸಂಸ್ಕೃತಿಯೇ ಮರೆತು ಹೋಗಿದೆ. ಅದರ ಜೊತೆ ಮೊಬೈಲ್ ಮೇನಿಯಾ, ಇಂಟರ್ನೆಟ್ ಹಾವಳಿ ಇವುಗಳಿಂದಲೂ ಪತ್ರ ಬರೆಯುವ ಬಗೆ ಕಾಣದಾಗುತ್ತಿದೆ. ಎಂತಹ ದುರಂತ ಅಲ್ವಾ? ಹೋಗ್ಲಿ ಬಿಡು.. ಎಷ್ಟೇ ಕಾಲ ಮುಂದುವರಿದರೂ, ಯಾವುದೇ ರೀತಿಯ ತಂತ್ರಜ್ಞಾನಗಳು ಬಂದರೂ ನಾವು ಮಾತ್ರ ಪತ್ರಗಳಲ್ಲಿಯೇ ಮಾತಾಡೋಣ. ಆಗಬಹುದಲ್ವಾ?
ನಿನಗೆ ಈ ಸಾರಿ ನಮ್ಮ ಕನ್ನಡ ನಾಡು ಹಾಗೂ ನಿಡುಯ ಬಗ್ಗೆ ಹೇಳಬೇಕು ಅಂದುಕೊಮಡಿದ್ದೇನೆ. ಬಹುದಿನಗಳಿಂದ ನಮ್ಮ ನಾಡು ನುಡಿಗಳ ಕುರಿತು ಅದೆಷ್ಟೋ ಭಾವನೆಗಳು ನನ್ನ ಮನಸ್ಸಿನಲ್ಲಿ ಹಾದುಹೋಗುತ್ತಿದೆ. ಎಂತಹ ನಾಡು ನಮ್ಮದು? ಅದೆಷ್ಟು ವರ್ಷಗಳ ಬವ್ಯ ಇತಿಹಾಸ ನಮ್ಮದು? ಒಮ್ಮೆ ಮೆಲುಕು ಹಾಕಿದರೆ ಮೈಮನಸ್ಸು ರೋಮಾಂಚಿತಗೊಳ್ಳುತ್ತದೆ.
ಕರುನಾಡು. ಈ ಶಬ್ದವೇ ಅದೆಷ್ಟು ಆಪ್ತವಲ್ಲವಾ? ಕನ್ನಡ ನಾಡನ್ನು ಆಪ್ತವಾಗಿ ಕರುನಾಡು ಎನ್ನುತ್ತಾರೆ. ಕರು ನಾಡು ಎಂದರೆ ಕರುಣೆಯ ನಾಡು. ಎಲ್ಲರ ಪಾಲಿಗೆ ಪ್ರೀತಿಯ ಬೀಡು. ಇದಕ್ಕಾಗಿಯೇ ಅದೆಷ್ಟೋ ಮಂದಿ ಕನ್ನಡ ನಾಡಿಗೆ ವಲಸೆ ಬಂದು ಇಲ್ಲಿ ಸುಖ ಜೀವನವನ್ನು ಕಂಡುಕೊಳ್ಳುತ್ತಿದ್ದಾರೆ.
ನಮ್ಮ ಕನ್ನಡ ನಾಡಿಗೆ ಸಹಸ್ರಾರರು ವರ್ಷಗಳ ಇತಿಹಾಸವೇ ಇದೆ. ಎಷ್ಟು ಹಿಂದೆ ಅಂದರೆ ವೇದಗಳ ಕಾಲಕ್ಕೇ ನಾವು ಹೋಗಬೇಕು. ಆಗ ನಮ್ಮ ನಾಡನ್ನು ಕುಂತಲ ನಾಡು ಎಂದು ಕರೆಯುತ್ತಿದ್ದರು. ಕುಂತಲ ಎಂದರೆ ಮೇಲ್ಭಾಗದವನು ಎಂದರ್ಥ. ಅಂದರೆ ಇಡಿಯ ದಕ್ಷಿಣ ಭಾರತದಲ್ಲಿಯೇ ನಮ್ಮ ಕನರ್ಾಟಕ ಅತ್ಯಂತ ಎತ್ತರದ ಪ್ರದೇಶ. ಹಾಗಾಗಿಯೇ ದಕ್ಷಿಣ ಭಾರತದ ಎಲ್ಲ ಜೀವ ದಾಯಿ ನದಿಗಳು ನಮ್ಮಲ್ಲಿಯೇ ಹುಟ್ಟಿ ಇತರ ರಾಜ್ಯಗಳ ಕಡೆಗೆ ಹರಿದುಹೋಗುತ್ತವೆ. ಆಂಧ್ರದ ಜೀವನದಿಗಳಾದ ಕೃಷ್ಣ, ತುಂಗಭದ್ರ, ತಮಿಳುನಾಡಿನ ಜೀವನದಿಯಾದ ಕಾವೇರಿ, ಗೋವಾದ ಜೀವನದಿ ಮಾಂಡೋವಿ ಈ ನದಿಗಳ ತವರು ಭೂಮಿ ನಮ್ಮದು.
ರಾಮಾಯಣ ಕಾಲದಲ್ಲಿ ರಾಮ ವನವಾಸಕ್ಕೆ ಬಂದಾಗ ನಮ್ಮ ಹಂಪಿಯ ಬಳಿಯೇ ಆತ ಸೀತೆಯನ್ನು ಕಳೆದುಕೊಂಡಿದ್ದು. ಕಡೆಗೆ ಇಲ್ಲಿಯೇ ಆತ ಹನುಮನನ್ನು ಭೇಟಿಯಾದದ್ದು. ವಾಲಿಯನ್ನು ಕೊಂದದ್ದು. ಆಗ ಈ ಪ್ರದೇಶಕ್ಕೆ ಕಿಷ್ಕಿಂದೆ ಎನ್ನುತ್ತಿದ್ದರು. ಕಡೆಗೆ ಅದು ಹಂಪೆಯಾಯಿತು. ಭವ್ಯ ಇತಿಹಾಸಕ್ಕೆ ಸಾಕ್ಷಿಯಾಯಿತು.
ಪ್ರೀತಿಯ ಗೆಳತಿ.,
ಕನರ್ಾಟಕದ ಕುರಿತು ಇಷ್ಟನ್ನು ಹೇಳಿದರೆ ಸಾಧ್ಯವಾಗುವುದಿಲ್ಲ. ಈ ಕನ್ನಡ ನಾಡು ಇತಿಹಾಸದ ಪ್ರಕಾರ ಗೋದಾವರಿ ನದಿಯವರೆಗೆ ಹಬ್ಬಿತ್ತು ಎಂಬ ದಾಖಲೆಗಳೂ ಇವೆ. ಈಗ ಆ ಗಾತ್ರವನ್ನು ಕಾಲಕ್ಕೆ ತಕ್ಕಂತೆ ಕಳೆದುಕೊಂಡಿದೆ. ನಮ್ಮಲ್ಲಿ ಆಳಿದ ರಾಜರಾದರೂ ಎಂಥವರು? ಕದಂಬರ ಮಯೂರ, ಹೊಯ್ಸಳರ ವಿಷ್ನುವರ್ಧನ, ವಿಜನಗರದ ಕೃಷ್ಣದೇವರಾಯ, ಟಿಪ್ಪು, ಹೈದರಾಲಿ, ಮೈಸೂರು ಅರಸರು ಒಬ್ಬರೇ ಇಬ್ಬರೇ.. ಇಲ್ಲಿನ ಚಿಕ್ಕಪುಟ್ಟ ರಾಜರುಗಳೂ ಶೌರ್ಯದ ಖನಿಯೇ ಆಗಿದ್ದರು. ಇನ್ನೂ ವಿಶೇಷ ಎಂದರೆ ವಿಜಯನಗರದ ಅರಸರ ಕಾಲದಲ್ಲಿ ಹಂಪಿಯ ಬೀದಿ ಬೀದಿಗಳಲ್ಲಿ ಚಿನ್ನ, ರತ್ನ, ವಜ್ರ ವೈಢೂರ್ಯಗಳನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಬಹುಷ್ಯ ಇಷ್ಟು ಶ್ರೀಮಂತ ರಾಜ್ಯ ಆ ಕಾಲದಲ್ಲಿ ವಿಶ್ವದ ಇತರ ಯಾವುದೇ ಭಾಗಗಳಲ್ಲಿಯೂ ಇರಲಿಲ್ಲ.
ಇದಕ್ಕಾಗಿಯೇ ಇರಬೇಕು ನಮ್ಮ ಕರುನಾಡನ್ನು ಕವಿ ವರ್ಯರು ಹಾಡಿ ಹೊಗಳಿದ್ದು. ನಮ್ಮ ರಾಷ್ಟ್ರಕವಿ ಕುವೆಂಪು ತಮ್ಮ ನಾಡಗೀತೆಯಲ್ಲಿ ಹೇಳಿತ್ತಾರೆ,.
ಜೈ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ..
ಅಂದರೆ ಭಾರತ ಮಾತೆಯ ಪ್ರೀತಿಯ ಮಗಳಾದ ಕನಾಟಕವೇ ನಿನಗಿದೋ ಕೋಟಿ ನಮಸ್ಕಾರ ಅಂತ.
ಅವರು ಮುಂದುವರಿದು ಹೇಳುತ್ತಾರೆ, ಕನರ್ಾಟಕದಲ್ಲಿ ಇಲ್ಲದ ಜಾತಿಗಳಿಲ್ಲ. ಆಳದ ಅರಸರಿಲ್ಲ. ಇದು ಸರ್ವಜನಾಂಗದ ಶಾಂತಿಯ ತೋಟ. ಬಯಸಿ, ಆಶ್ರಯದಾತರಾಗಿ ಬಂದವರಿಗೆ ಈ ರಾಜ್ಯ ಇಲ್ಲ ಎಂದಿಲ್ಲ.
ನಮ್ಮ ರಾಜ್ಯ ಈ ಹಿಂದೆ ತಮಿಳುನಾಡಿನಿಂದ ಬಂದ ರಾಮಾನುಜಾಚಾರ್ಯರಿಗೆ, ಮರಾಠಾ ಅರಸು ಶಿವಾಜಿಯ ಮಗ ಬಾಜೀರಾಯ ಹೀಗೆ ಹಲವರಿಗೆ ಆಶ್ರಯ ಕೊಟ್ಟಿತ್ತು. ಈಗಲೂ ಅಷ್ಟೇ ಟಿಬೆಟ್ನ ಸಾವಿರಾರು ನಿರಾಶ್ರಿತರಿಗೆ, ಅಸ್ಸಾಂನ, ಗೋಖರ್ಾಲ್ಯಂಡ್ಗಳ ಜನರಿಗೆ ಉದ್ಯೋಗ ಆಶ್ರಯ ಎರಡನ್ನೂ ನೀಡುತ್ತ ಬಂದಿದೆ.
ಕನ್ನಡ ನಾಡಿನ ಇತಿಹಾಸಗಳು ಇನ್ನೂ ಇವೆ ಗೆಳತಿ. ಇದರ ವಿಶೇಷತೆಗಳ ಬಗೆಗೆ ನಿನಗೆ ಕೊಂಚ ಹೇಳಲೇ ಬೇಕು. ಕನ್ನಡ ನಾಡಿನ ಕವಿಗಳಿಗೆ ಇದುವರೆಗೂ 8 ಜ್ಞಾನಪೀಠಗಳು ಬಂದಿವೆ. ಭಾರತದ ಉಳಿದ ಯಾವುದೇ ಭಾಷೆಗೆ ಇಷ್ಟು ಜ್ಞಾನಪಿಠ ಪ್ರಶಸ್ತಿಗಳು ಬಂದಿಲ್ಲ. ಎಂಥ ಹೆಮ್ಮೆಯ ಸಂಗತಿ ಅಲ್ವಾ?
ಸರ್. ಸಿವಿ ರಾಮನ್, ನಿಕೋಲಾಯ್ ರೋರಿಚ್, ದೇವಿಕಾ ರಾಣಿ, ಮನ್ನಾ ಡೇ ಮುಂತಾದ ಮಹಾನ್ ಸಾಧಕರ ಕರ್ಮ ಭೂಮಿ ಇದು. ಬೇರೆ ರಾಜ್ಯಗಳವರು ಇವರು. ಆದರೂ ಕನ್ನಡ ನಾಡಿನಲ್ಲಿ ತಮ್ಮ ಸಾಧನೆಗಳನ್ನು ಮಾಡಿ ಮೆರೆದಿದ್ದಾರೆ.
ಕನ್ನಡ ನಾಡು ಅಂದಕೂಡಲೇ ಮೊಟ್ಟಮೊದಲು ನೆನಪಿಗೆ ಬರುವಂತದ್ದೆಂದರೆ ಜೋಗಜಲಪಾತ. ಕನರ್ಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಜೋಗ ಜಲಪಾತದ ಸೌಂದರ್ಯವನ್ನು ಆಸ್ವಾದಿಸುವುದೇ ಒಂದು ಹೆಮ್ಮೆ. ನಾಲ್ಕು ಕವಲಾಗಿ 960 ಅಡಿಗೊ ಹೆಚ್ಚು ಆಳಕ್ಕೆ ಧುಮುಕುವ ಈ ಜಲಪಾತ ಮಳೆಗಾಲದಲ್ಲಿ ತನ್ನ ಸಂದರ್ಯವನ್ನು ನೂರ್ಮಡಿಗೊಳಿಸಿಕೊಳ್ಳುತ್ತದೆ. ಆಗ ಎಲ್ಲೆಲ್ಲಿಂದ ಜನರು ಬರ್ತಾರೆ ಗೊತ್ತಾ? ವಿದೇಶಗಳ ಜನರೂ ಬಂದು ಹೋಗ್ತಾರೆ. ಇದನ್ನು ಭಾರತದ ನಯಾಗರಾ ಎಂದು ಕರೆಯುತ್ತಾರೆ.
ಇಷ್ಟೇ ಅಲ್ಲ ನಮ್ಮ ರಾಜ್ಯದಲ್ಲಿ 280ಕ್ಕೂ ಹೆಚ್ಚಿನ ಜಲಪಾತಗಳಿವೆ. ಇದೊಂದು ದಾಖಲೆಯೇ ಹೌದು. ರಾಜ್ಯದ ಪಶ್ಚಿಮ ಭಾಗದಲ್ಲಿ ಹಾದುಹೋಗಿರುವ ಸಹ್ಯಾದ್ರಿ ಪರ್ವತ ಶ್ರೇಣಿ ವಿಶ್ವ ಪರಂಪರೆಯ ತಾಣವಾಗಿ ಸೇರ್ಪಡೆಗೊಂಡಿದೆ. ಇಲ್ಲಿ ಕನಿಷ್ಟ 80ಕ್ಕೂ ಹೆಚ್ಚಿನ ಅಭಯಾರಣ್ಯಗಳು ಮತ್ತು ರಕ್ಷಿತಾರಣ್ಯಗಳಿವೆ. ಇದರೊಳಗಿನ ಜೀವಿ ಸಂಕುಲಗಳು ಅದೆಷ್ಟೋ ಲಕ್ಷ, ಅವುಗಳನ್ನು ಲೆಕ್ಕ ಹಾಕುವುದು ಕಷ್ಟ.
ಇದಕ್ಕಾಗಿಯೇ ಕವಿ ನಿಸಾರ ಅಹಮದರು ಹೇಳುತ್ತಾರೆ,
ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾಧ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ...!!
ಎಂತಹ ಅರ್ಥಪೂರ್ಣ ಸಾಲುಗಳಲ್ಲವಾ? ಕೆಲವೇ ಶಬ್ದಗಳಲ್ಲಿ ಕನ್ನಡನಾಡನ್ನು ಕಟ್ಟಿಕೊಡುವ ಕವಿವಾಣಿಗೆ ಅದೆಷ್ಟು ನಮನಗಳನ್ನು ಹೆಳಿದರೂ ಸಾಲದು.
ಕರುನಾಡು ಎಂದ ತಕ್ಷಣ ನಾನು ನಿನಗೆ ಕನ್ನಡ ನಾಡಿನ ಪ್ರಮುಖ ಭಾಗವಾದ ಕೊಡಗಿನ ಬಗ್ಗೆ ಹೇಳಲೇಬೇಕು. ವಿಶಿಷ್ಟ ಸಂಸ್ಕೃತಿ, ವಿಭಿನ್ನ ಮನಸ್ಥಿತಿಯ ಕೊಡವರು ಅಪಾರ ದೇಶಪ್ರೇಮಿಗಳು. ಇಲ್ಲಿನ ಪ್ರತಿ ಮನೆಯ, ಪ್ರತಿ ಕುಟುಂಬದ ಒಬ್ಬ ವ್ಯಕ್ತಿ ಭಾರತದ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಅದು ಅವರಿಗೆ ಹೆಮ್ಮೆ. ಅಷ್ಟೇ ಅಲ್ಲ ಇವರು ಹಾಕಿ ಆಟದ ಪ್ರಿಯರು. ಈ ಪ್ರದೇಶಕ್ಕೆ ಕನರ್ಾಟಕದ ಕಾಶ್ಮೀರ ಎನ್ನುತ್ತಾರೆ. ಕನ್ನಡನಾಡಿನ ಅತ್ಯಂತ ಹಸಿರು ಹಸಿರಾದ ಜಿಲ್ಲೆ ಇದು ಎಂದು ಖ್ಯಾತಿ ಪಡೆದಿದೆ.
ಇನ್ನು ಇಲ್ಲಿಯ ಉತ್ತರಕನ್ನಡ ಜಿಲ್ಲೆಯ ಬಗ್ಗೆ ಹೇಳಲೇ ಬೆಕು. ಇದೂ ಸಹ ಅತ್ಯಂತ ಹೆಚ್ಚು ಕಾಡನ್ನು ಹೊಂದಿರುವ ದೇಶದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಹೊಂದಿದೆ. ಭತ್ತ, ಕಬ್ಬು, ಅಡಿಕೆ ಕಾಳುಮೆಣಸು, ಏಲಕ್ಕಿ, ಲವಂಗ, ವೆನಿಲ್ಲಾ, ಹತ್ತಿ ಈ ಮುಂತಾದವುಗಳು ಇಲ್ಲಿನ ಪ್ರಮುಖ ಬೆಳೆಗಳು. ಇದರಿಮದಾಗಿಯೇ ಈ ಪ್ರದೆಶವನ್ನು ಸಂಬಾರ ಪದಾರ್ಥಗಳ ರಾಣಿ ಎಂದು ಕರೆಯುತ್ತಾರೆ.
ಕನರ್ಾಟಕದಲ್ಲಿ ನೋಡುವಂತಹ ಸ್ಥಳಗಳ:ಉ ಸಾಕಷ್ಟಿವೆ. ಪೌರಾಣಿಕವಾಗಿ, ಐತಿಹಾಸಿಕವಾಗಿ, ಪ್ರಾವೋಸೋದ್ಯಮದ ದೃಷ್ಟಿಯಿಂದ, ತಂತ್ರಜ್ಞಾನದ ಕಾರಣದಿಮದ ನೂರಾರು ಪ್ರದೇಶಗಳನ್ನು ಹೆಸರಿಸಬಹುದು. ಪುರಾಣ ಪ್ರಸಿದ್ಧ ಗೋಕರ್ಣ, ನಿತ್ಯ ದಾಸೋಹದ ಧರ್ಮಸ್ಥಳ, ಕುಕ್ಕೆ, ಬಸವನ ಬಾಗೇವಾಡಿ, ಚಾಮುಂಡಿ ಬೆಟ್ಟ, ಕೊಲ್ಲೂರು, ಶಂಕರಾಚಾರ್ಯರ ಜ್ಞಾನವ್ಯಾಪಿ ಸ್ಥಳ ಶೃಂಗೇರಿ ಹೀಗೆ ನೂರಾರು ಸ್ಥಳಗಳಿದ್ದರೆ, ಮೋಹಿನಿ ಭಸ್ಮಾಸುರನ ಸಾವಿ ಕಾರಣವಾಗಿದೆ ಎಂಬ ಪ್ರತೀತಿಯನ್ನು ಸಾರುವ ಯಾಣ, ರೇಣುಕಾ ದೇವಿಯ ಚಂದ್ರಗುತ್ತಿ, ಭೀಮ ನಿದ್ರಿಸಿದ್ದ ಎನ್ನುವ ಭೀಮನವಾರೆ ಗುಡ್ಡ, ಹನುಮ, ವಾಲಿ ಸುಗ್ರೀವರ ನಾಡು ಹಂಪಿ, ಮಹಿಷಾಸುರನ ಸಂಹಾರಸ್ಥಳ ಮೈಸೂರು. ಹೀಗೆ ಲೆಕ್ಕ ಹಾಕಿದರೆ ಒಂದೆರಡಕ್ಕೆ ನಿಲ್ಲುವುದಿಲ್ಲ.
ಜೋಗ ಜಲಪಾತ, ಸಾತೊಡ್ಡಿ ಜಲಪಾತ, ಉಂಚಳ್ಳಿ ಜಲಪಾತ, ಅಬ್ಬಿ ಜಲಪಾತ, ಗಗನ ಚುಕ್ಕಿ, ಭರಚುಕ್ಕಿ, ಕಲ್ಲತ್ತಗಿರಿ ಜಲಪಾತ, ಮಾಗೋಡು ಜಲಪಾತ ಹೀಗೆ ಅದೆಷ್ಟೋ ಬಗೆಯ ಜಲಪಾತಗಳು ಇಲ್ಲಿವೆ. ವಿಶ್ವದಲ್ಲೇ ಹೆಸರಾದ ಸಾಫ್ಟ್ವೇರ್ ತಂತ್ರಜ್ಞಾನದಿಮದ ಜಗತ್ತನ್ನೇ ಕೈಬೀಸಿ ಕರೆಯುವ ಬೆಂಗಳೂರು ಮಹಾನಗರಿ ನಮ್ಮ ರಾಜ್ಯದ ರಾಜಧಾನಿ. ಈ ನಗರಿಯಲ್ಲಿ ಇಲ್ಲ ಎನ್ನುವುದೇ ಇಲ್ಲ. ರಾಷ್ಟ್ರದ, ವಿದೇಶಗಳ ಬಹು ವಿದಧ ಜನರು ಇಲ್ಲಿ ಸಿಗುತ್ತಾರೆ. ಈ ನಗರಿಯ ಅರ್ಧಕ್ಕಿಂತ ಹೆಚ್ಚಿನ ಭಾಗದ ಜನರು ಇತರ ಪ್ರದೇಶಗಳಿಂದ ವಲಸೆ ಬಂದು ಉಳಿದವರೇ ಆಗಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿಗಳಲ್ಲಿ ಒಂದು.
ಅದಕ್ಕೆ ಕವಿ ಹಂಸಲೇಖ ತಮ್ಮ ಗೀತೆಯೊಮದರಲ್ಲಿ ಹೇಳುತ್ತಾರೆ,
ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು.
ಮೆಟ್ಟಿದರೆ ಕನ್ನಡ ನಾಡಿನಲ್ಲಿ ಮೆಟ್ಟ ಬೇಕು ಎಂದು.
ಡಾ. ರಾಜ್ ಕುಮಾರ್ ಇಲ್ಲಿನ ಚಿತ್ರರಂಗದ ಮೇರು ಶಿಖರ. ಮಹಾನ್ ನಟ. ಜೊತೆಗೆ ಶಂಕರ್ ನಾಗ್ ವಿದೇಶಗಳಲ್ಲಿಯೂ ಹೆಸರು ಮಾಡಿದ ಪ್ರತಿಭಾ ಶಾಲಿ ನಟ. ಇದೀಗ ಅಂತಹ ಪ್ರತಿಭಾವಂತ ನಟರುಗಳ ದಂಡೇ ಕನ್ನಡ ಜಿತ್ರರಂಗದಲ್ಲಿದೆ ಎನ್ನುವುದು ಹೆಮ್ಮೆಯ ಸಂಗತಿ.

ಗೆಳಿತಿ,
ನಮ್ಮ ನಾಡಿನ ಅತಿಥಿಸತ್ಕಾರದ ಬಗ್ಗೆ ನಿನಗೆ ಹೆಳಲೇ ಬೇಕು. ಹಸಿದು ಬಂದವರಿಗೆ ಇಲ್ಲ ಎಂದು ಗೊತ್ತಿಲ್ಲದ ಮುಗ್ಧ ಜನರ ನಾಡು ನಮ್ಮದು. ಎಂತಹ ಬಿಸಿಲಿನಲ್ಲಿ ಬಸವಳಿದು ಬಂದ ಜನರಿರಲಿ, ಆತ ಅದೆಷ್ಟೇ ಅಪರಿಚಿತನಿರಲಿ ಅಥವಾ ಶತ್ರುವೇ ಆಗಿರಲಿ ಆತನಿಗೆ ನಮ್ಮ ನಾಡಿನ ಜನರು ತಂಪಾದ ಮಜ್ಜಿಗೆ ತಂಬುಳಿ, ಬೆಲ್ಲ-ನೀರು, ಯಳ್ಳು ತಂಪುಗಳನ್ನು ಕೊಟ್ಟು ಸತ್ಕರಿಸುತ್ತಾರೆ. ಅಲ್ಲದೆ ಆತನಿಗೆ ಊಟ ಹಾಕಿ ಸಂತೃಪ್ತಿಯಿಂದ ಕಳಿಸುತ್ತಾರೆ. ಹಾಗೆ ಸತ್ಕಾರ ಮಾಡದಿದ್ದರೆ ಅವರ ಮನಸ್ಸಿಗೆ ಏನೋ ಕಸಿವಿಸಿ. ನಿನಗೂ ಸಹ ಹಲವು ಬಾರಿ ಹೀಗೆಯೇ ಆಗಿರಬೇಕು ಅಲ್ಲವಾ?
ಆದರೆ ದುರಂತ ನೋಡು ಗೆಳತಿ, ಕಾಲ ಎಂಬುದು ಎಂತವರನ್ನು ಎಂತಹ ಪ್ರದೇಶ ಬದಿಲಿಸಿ ಬಿಡುತ್ತದಲ್ಲ..
ನಮ್ಮ ನಾಡಿನಲ್ಲಿ ಸಮಸ್ಯೆಗಳೂ ಹಾಗೇಯೇ ತುಂಬಿ ತುಳುಕಲಾರಂಭಿಸಿವೆ.
ಗಣಿಗಾರಿಕೆ, ಪ್ರಾಣಿ ಭೇಟೆ, ಭೃಷ್ಟ ರಾಜಕಾರಣಿಗಳು, ವಲಸಿಗರ ಹಾವಳಿ, ನಕ್ಸಲ್ ಸಮಸ್ಯೆ ಇವುಗಳೆಲ್ಲ ರಾಜ್ಯದಲ್ಲಿ ಅಪಾರ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ. ಇಲ್ಲಿನ ಹಳ್ಳಿಗಳ ಯುವಕರು ನಗರದತ್ತ ಮುಖ ಮಾಡುತ್ತಿದ್ದಾರೆ. ಹಳ್ಳಿಗೆಳೆಲ್ಲ ವೃದ್ಧಾಶ್ರಮಗಳಾಗುತ್ತಿವೆ. ಹಳ್ಳಿಗಳಲ್ಲಿನ ವಯಸ್ಸಾದ ತಂದೆ ತಾಯಿಗಳು ಮನೆಯ ಮುಂದೆ ನಿಂತು ಮಕ್ಕಳು ಈಗ ಮನೆಗೆ ಬಂದಾರು ಆಗ ಮನೆಗೆ ಬಂದಾರು ಎಂಬ ನಿರೀಕ್ಷೆಯಲ್ಲಿ ನಿಂತಿರುತ್ತಾರೆ.
ಎಂತಹ ದುರಂತ ಅಲ್ವಾ? ರಾಜ್ಯ ಒಮದಾನೊಂದು ಕಾಲದಲ್ಲಿ ಶ್ರೀಮಂತ ವಾಗಿತ್ತು. ಆದರೆ ಈಗ ಬರ ಬಂದ ಕಾರಣ ರೈತರು ನೆಣು ಹಾಕಿಕೊಳ್ಳುತ್ತಿದ್ದಾರೆ, ಗುಳೆ ಹೋಗುತ್ತಿದ್ದಾರೆ. ಪ್ರತಿದಿನ ಅವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಗೆಳತಿ,.
ಇದು ನಮ್ಮ ರಾಜ್ಯದ ಜ್ವಲಂತ ಸಮಸ್ಯೆಗಳು ಇವುಗಳ ಕುರಿತು ಹೆಳಿದೆ ಅಂತ ಬೇಸರ ಮಾಡಿಕೊಳ್ಳಬೇಡ. ಒಳ್ಲೆಯದು ಇರುವಲ್ಲಿ ಕೆಟ್ಟದ್ದು ಹೇಗೋ ಹಾಗೆಯೇ ಸೌಲಭ್ಯಗಳಿದ್ದಲ್ಲಿ ಸಮಸ್ಯೆಗಳೂ ಇರುತ್ತವೆ. ಆದರೆ ಈ ಸಮಸ್ಯೆಗಳ ನಡುವೆಯೂ ನಮ್ಮ ನಾಡಿನ ರೈತ ಸ್ವರ್ಗ ಸುಖವನ್ನು ಕಾಣುತ್ತಿದ್ದಾನೆ.
ಮುಂದಿನ ದಿನಗಳಲ್ಲಿ ಕೃಷಿ ಪ್ರದಾನ ವ್ಯವಸ್ಥೆ ರಾಜ್ಯದಲ್ಲಿ ಬಂದು ರೈತನಿಗೆ ಬೆಲೆ ಬರುತ್ತದೆ ಎಂಬ ಕನಸಿನೊಮದಿಗೆ ಆತ ಬಾಳುತ್ತಿದ್ದಾನೆ.
ಅಬ್ಬ ತುಂಬ ಬರೆದುಬಿಟ್ಟೆ ಅನಿಸ್ತಾ ಇದೆಯಲ್ಲ.. ಊಹುಂ. ನಮ್ಮ ನಾಡಿನ ವಿಷಯದ ಕುರಿತು ಹೇಳುವುದಾದರೆ ಇದು ಏನ#ಏನೂ ಅಲ್ಲ. ಮುಂದೊಮ್ಮೆ ನಮ್ಮ ನಾಡಿನ ಕುರಿತು ಇನ್ನೂ ವಿವರವಾಗಿ ಹೇಳುತ್ತೇನೆ ಆಗಬಹುದಲ್ಲ. ಕೊನೆಯದಾಗಿ ಯಾಕೋ ಕವಿ ಪ. ಗ. ಭಟ್ಟರ ಕವಿತೆ ನೆನಪಾಗುತ್ತದೆ.
ಭಾರತಮಾತೆಯ ಒಲವಿನ ಬದುಕಿಗೆ
ಕನ್ನಡ ನಾಡೇ ಮುಕುಟ ಮಣಿ.
ಆಕೆಯ ಸೊಂಟದ ಒಡ್ಯಾಣದ ಕವಚಕೆ
ಕರ್ನಾಟಕವೇ ಚಿನ್ನದ ಖನಿ!!
ಉಳಿದ ವಿಷಯ ಮುಂದಿನ ಪತ್ರದಲ್ಲಿ.. ನೆನಪುಗಳ ಸರಮಾಲೆಯೊಂದಿಗೆ

ಇಂತಿ ನಿನ್ನ ಗೆಳೆಯ


ಜೀವನ್ 

(ವಿ.ಸೂ : ಆತ್ಮೀಯರೇ.. ಈ ಪತ್ರವನ್ನು ನನ್ನ ದೋಸ್ತನೊಬ್ಬನಿಗೆ ಪ್ರೆಸೆಂಟೇಶನ್ನಿಗಾಗಿ ಬರೆದುಕೊಟ್ಟಿದ್ದೆ.. ಏನು ಕಾರಣವೋ ಗೊತ್ತಿಲ್ಲ.. ಆ ಪ್ರೆಸೆಂಟೇಷನ್ ಕಾರ್ಯಕ್ರಮ ರದ್ದಾದ್ದರಿಂದ ಈ ಪತ್ರ ಹಾಗೇ ಉಳಿದಿತ್ತು.. ಕರ್ನಾಟಕದ ಕುರಿತು ವಿವರ ಹೇಳುವ ಪತ್ರ.. ಇದೋ ನಿಮ್ಮೆದುರು)

No comments:

Post a Comment