Wednesday, September 5, 2018

ಬಡತನದಲ್ಲಿ ಅರಳಿದ ಪ್ರತಿಭೆಗಳು ನೋವಿನಲ್ಲೂ ಚಿನ್ನ ಗೆದ್ದರು

ನೋವಿನಲ್ಲೂ ಚಿನ್ನ ಗೆದ್ದಳು ಸ್ವಪ್ನಾ-ಉದ್ಯೋಗಕ್ಕಾಗಿ ಅಲೆಯುತ್ತಿದ್ದ ಮಂಜಿತ್‌ಗೆ ಬಂಗಾರ


ಬಡತನವಿರಲಿ, ಅನಾರೋಗ್ಯವೇ ಇರಲಿ ದೇಶಕ್ಕೆ ಪದಕ ಗೆಲ್ಲಬೇಕೆಂಬ ತವಕ ಇದ್ದರೆ ಎಂತಹ ಸಮಸ್ಯೆಯನ್ನೂ ಮರೆತು ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಈ ಏಷ್ಯನ್ ಗೇಮ್ಸ್  ಮತ್ತೊಮ್ಮೆ ಸಾಬೀತು ಪಡಿಸಿದೆ. ಬಡತನ, ಅನಾರೋಗ್ಯದ ನಡುವೆ ಸ್ವಪ್ನಾ ಬರ್ಮನ್ ಚಿನ್ನ ಗೆದ್ದರೆ, ಉದ್ಯೋಗವಿಲ್ಲದೇ ಗದ್ದೆಯಲ್ಲಿ ದುಡಿಯುತ್ತಿದ್ದ ಮಂಜಿತ್ ಸಿಂಗ್ ಕೂಡ ಬಂಗಾರ ಗೆದ್ದು ಸಾಧನೆ ಮಾಡಿದ್ದಾಾರೆ.

ನೋವು ನುಂಗಿ ಗೆದ್ದ ಸ್ವಪ್ನಾ:
ತೀವ್ರ ಪ್ರಮಾಣದ ಜ್ವರ, ಅಸಾಧ್ಯ ಹಲ್ಲು ನೋವು. ಇದರ ನಡುವಲ್ಲೇ ದೇಶಕ್ಕಾಗಿ ಪದಕ ಗೆಲ್ಲುವ ತವಕ. ಮೂರು ದಿನಗಳ ಕಾಲ ಏಳು ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿದ ಸ್ವಪ್ನಾ ಬರ್ಮನ್ ಚಿನ್ನ ಗೆದ್ದು, ವಿಶೇಷ ಸಾಧನೆ ಮಾಡಿದ್ದಾಳೆ.
ಹೆಪ್ಟಾಥ್ಲಾನ್. ಇಂಥದ್ದೊೊಂದು ಹೆಸರಿನ ಆಟವಿದೆ ಎನ್ನುವುದು ಹಲವು ಭಾರತೀಯರಿಗೆ ಗೊತ್ತಿಲ್ಲ. ಆದರೆ ಹೆಪ್ಟಾಥ್ಲಾನ್ ಎಂಬ ಕ್ರೀಡೆ ಇದೆ ಎಂಬುದನ್ನು ತಿಳಿಸಿಕೊಟ್ಟವಳು ಸ್ವಪ್ನಾ ಬರ್ಮನ್. ಏಳು ವಿಭಿನ್ನ ಕ್ರೀಡೆಗಳನ್ನು ಒಳಗೊಂಡ ಹೆಪ್ಟಾಥ್ಲಾನ್‌ನಂತೆಯೇ ಸ್ವಪ್ನಾಳ ಬದುಕು ಕೂಡ ವಿಭಿನ್ನವಾಗಿತ್ತು.
100ಮೀ. ಹರ್ಡಲ್‌ಸ್‌, ಎತ್ತರ ಜಿಗಿತ, ಗುಂಡುಎಸೆತ, 200 ಮೀ. ಓಟ, ಲಾಂಗ್ ಜಂಪ್, ಜಾವೆಲಿನ್ ಥ್ರೋ, 800ಮೀ. ಓಟ ಹೀಗೆ ಒಟ್ಟು ಏಳು ವಿವಿಧ ಕ್ರೀಡೆಗಳನ್ನು ಒಟ್ಟಾಾಗಿಸಿ ಹೆಪ್ಟಾಥ್ಲಾನ್ ಎನ್ನಲಾಗುತ್ತದೆ. ಈ ಕ್ರೀಡೆಗೆ ಏಳು ರೀತಿಯ ಕೌಶಲ್ಯದ ಅಗತ್ಯವಿದೆ.
ಕ್ರೀಡಾಕೂಟಕ್ಕೆೆ ತೆರಳುವ ಮೊದಲೇ, ಆರು ಬೆರಳಿನ ಸ್ವಪ್ನಾ ಬರ್ಮನ್‌ಗೆ ಸರಿ ಹೊಂದುವಂತಹ ಶೂ ಸಿಗದೇ ಸಮಸ್ಯೆ ಉಂಟಾಗಿತ್ತು. ಆ ಸಮಸ್ಯೆಯ ನಡುವೆಯೂ ಕ್ರೀಡಾಕೂಟದಲ್ಲಿ ಪಾಲ್ಗೊೊಂಡವಳಿಗೆ ಕಾಡಿದ್ದು ತೀವ್ರ ಪ್ರಮಾಣದ ಜ್ವರ ಹಾಗೂ ಹಲ್ಲುನೋವು. ಈ ನೋವಿನ ನಡುವೆಯೂ ಆಟವನ್ನಾಡಿದ ಸ್ವಪ್ನಾ ಚಿನ್ನ ಗೆದ್ದು ಮೆರೆದಿದ್ದಾಳೆ.
ಚಿಕಿತ್ಸೆ ಪಡೆಯುತ್ತಲೇ ಎಲ್ಲಾ ವಿಭಾಗದಲ್ಲೂ ಆಕೆ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದಳು. ಹೈ ಜಂಪ್‌ನಲ್ಲಂತೂ ಆಕೆ ಅಸಾಧ್ಯ ನೋವಿನ ನಡುವೆ ಆಡಿದ್ದಳು. ಜಾವೆಲಿನ್ ಹಾಗೂ ಶಾಟ್‌ಪುಟ್‌ನಲ್ಲಿ ಆಕೆ ನೀಡಿದ ಅಧ್ಭುತ ಪ್ರದರ್ಶನವೇ ಆಕೆಯನ್ನು ಬಂಗಾರದ ಪದಕವನ್ನು ಇನ್ನಷ್ಟು ಹತ್ತಿರ ಮಾಡಿಸಿತ್ತು.
ಬಡ ಕುಟುಂಬ, ಕಾಯಿಲೆ ಪೀಡಿತ ತಂದೆ:
ಬಡತನದಲ್ಲಿ ಬೆಳೆದು ಬಂದ ಸ್ವಪ್ನಾಳ ಬಾಲ್ಯ ಬಹಳ ಕಷ್ಟಕರವಾಗಿತ್ತು. ಸ್ವಪ್ನಾಳ ತಂದೆ ತಳ್ಳುಗಾಡಿ ನಡೆಸುತ್ತಿದ್ದರು. ತಳ್ಳು ಗಾಡಿಯ ಮೂಲಕ ಬಂದ ದುಡ್ಡಿನಲ್ಲಿ ಬದುಕು ಸಾಗಿಸಬೇಕಿತ್ತು. ಅಂತದ್ದರಲ್ಲಿ 2013ರಲ್ಲಿ ಸ್ವಪ್ನಾ ತಂದೆ ಪಾಶ್ವವಾಯುಗೆ ತುತ್ತಾದರು. ಅಲ್ಲಿಂದ ಅವರು ಹಾಸಿಗೆಯಲ್ಲೇ ಜೀವನ ದೂಡುತ್ತಿದ್ದಾರೆ. ಸ್ವಪ್ನಾ ತಾಯಿ ಹತ್ತಿರದ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ.
ಕ್ರೀಡೆಯ ಆರಂಭಿಕ ದಿನಗಳಲ್ಲಿ ಸ್ಪಪ್ನಾ  ಹೈ ಜಂಪ್‌ನಲ್ಲಿ ಆಸಕ್ತಿ ತೋರಿಸಿದ್ದಳು. ಕುಳ್ಳಗಿದ್ದ ಕಾರಣ ಆಕೆಯನ್ನು ಹೈ ಜಂಪ್ ಆಟದಿಂದ ರಿಜೇಕ್ಟ್  ಮಾಡಲಾಗಿತ್ತು. ನಂತರ ಎರಡು ಬಾರಿ ಟ್ರಯಲ್ ನಡೆಸಿ ಆಯ್ಕೆ ಮಾಡಲಾಗಿತ್ತು.ಸ್ವಪ್ನಾಳ ಎರಡೂ ಕಾಲಿಗೆ ಆರು ಬೆರಳುಗಳಿದೆ. ಈ ಕಾರಣದಿಂದ ಧರಿಸಲು ಸರಿಯಾದ ಶೂಗಳೇ ಇರಲಿಲ್ಲ. ಹೀಗಿದ್ದಾಗಲೂ ಉತ್ತಮ ಪ್ರದರ್ಶನ ನೀಡಿದ್ದಾಳೆ.
ಕಷ್ಟದ ನಡುವೆಯೂ ಉತ್ತಮ ತರಬೇತಿ ಪಡೆದು, ನೋವಿನ ನಡುವೆಯೂ ಒಳ್ಳೆಯ ಪ್ರದರ್ಶನ ನೀಡಿದ ಸ್ವಪ್ನಾಳ ಸಾಧನೆಗೆ ಹ್ಯಾಟ್ಸಾಫ್  ಹೇಳೋಣ.

ದನಕಾಯುವ ಮಂಜಿತ್ ಬಂಗಾರ ಗೆದ್ದ:

ಕತ್ತಲಲ್ಲಿ ಇದ್ದೋನು, ಬೆಳಕಲ್ಲಿ ಎದ್ದೋನು
ಮಣ್ಣಲ್ಲಿ ಇದ್ದೋನು, ಬಂಗಾರ ಗೆದ್ದನು...
ಇಂತದ್ದೊೊಂದು ಹಾಡು ಚಿನ್ನಾರಿ ಮುತ್ತಾದಲ್ಲಿದೆ. ಮಂಜಿತ್ ಸಿಂಗ್ ಕಥೆ ಚಿನ್ನಾರಿ ಮುತ್ತಕ್ಕಿಿಂತ ಬೇರೆ ರೀತಿಯೇನೂ ಅಲ್ಲ.
ಹರ್ಯಾಣ ಮೂಲದ ವೇಗದ ಓಟಗಾರ ಮಂಜಿತ್ ಸಿಂಗ್ ಚಿನ್ನ ಗೆಲ್ಲುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ ಬಿಡಿ. 800 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ ವ್ಯಕ್ತಿ ಮಂಜಿತ್.
ಮಂಜಿತ್‌ಗೆ ಮಾಡಲು ಉದ್ಯೋಗವೇ ಇಲ್ಲ. ಓಎನ್‌ಜಿಸಿಯಲ್ಲಿ 2 ವರ್ಷದ ಗುತ್ತಿಗೆ ಮೇರೆಗೆ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾನೆ. ಉಳಿದ ಸಮಯದಲ್ಲಿ ಗದ್ದೆಯಲ್ಲಿ ದುಡಿಯುತ್ತಾನೆ. ತದನಂತರದಲ್ಲಿ ದನ ಕಾಯುತ್ತಾನೆ.
ಮಂಜಿತ್ ಸಿಂಗ್ ತಂದೆ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಶಾಟ್‌ಪುಟ್ ಪ್ಲೇಯರ್. ಆದರೆ ಮನೆಯಲ್ಲಿ ಅನುಕೂಲಸ್ಥರಲ್ಲ. ಹೀಗಾಗಿ ಮಂಜಿತ್‌ಗೆ ಆರಂಭಿಕ ದಿನಗಳಲ್ಲಿ ಉತ್ತಮ ತರಬೇತಿಯೂ ಸಿಕ್ಕಿರಲಿಲ್ಲ. ಮಂಜಿತ್ ಆಟವನ್ನು ಗಮನಿಸಿದವರಿಗೆ ಆತ ಆರಂಭದಲ್ಲಿ ಹಿಂದೆ ಬಿದ್ದು, ತದನಂತರ ಏಕಾಏಕಿ ಒಬ್ಬೊಬ್ಬರನ್ನಾಗಿ ಹಿಂದಿಕ್ಕುವುದು ಕಂಡುಬರುತ್ತದೆ. ಆತನ ಬದುಕೂ ಅಷ್ಟೇ. ಆರಂಭದಲ್ಲಿ ಎಲ್ಲರಿಗಿಂತ ಹಿಂದೆ ಬಿದ್ದವನು ನಂತರ ಒಂದೊಂದಾಗಿ ಸಾಧನೆ ಮಾಡಿದ್ದಾನೆ ಎನ್ನುವುದು ಮಂಜಿತ್ ಕುಟುಂಬಸ್ಥರ ಅಭಿಪ್ರಾಯ.

ಬಡತನ, ಕಷ್ಟ, ನೋವು ಇವು ದೇಶದ ಮುಂದೆ ಗೌಣವಾಗುತ್ತವೆ. ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹರಡುವ ಸಂದರ್ಭ ಬಂದರೆ ಇವೆಲ್ಲವನ್ನೂ ಕಡೆಗಣನೆ ಮಾಡಿ ಸಾಧನೆ ಮಾಡುತ್ತಾನೆ ಎನ್ನುವುದಕ್ಕೆ ಈ ಇಬ್ಬರು ಆಟಗಾರರೇ ಸಾಕ್ಷಿ. ಇಂತಹ ಅಸಂಖ್ಯಾತ ಕಷ್ಟಸಹಿಷ್ಣು ಆಟಗಾರರಿಗೊಂದು ಸಲಾಂ.

No comments:

Post a Comment