Saturday, September 8, 2018

ಮಾಯಾಂಕ್ ಅಗರ್ವಾಲ್‌ರನ್ನು ಪದೇ ಪದೆ ಕಡೆಗಣಿಸಿದ ಬಿಸಿಸಿಐ

ಕಳೆದ ಒಂದೂವರೆ ವರ್ಷದ ಅವಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎಂದರೆ ಅದು ಮಾಯಾಂಕ್ ಅಗರ್ವಾಲ್ ಮಾತ್ರ. ಶತಕಗಳ ಮೇಲೆ ಶತಕ ಭಾರಿಸಿ, ರನ್ ಸುರಿಮಳೆಯನ್ನೇ ಸುರಿಸುತ್ತಿರುವ ಮಾಯಾಂಕ್ ಅಗರ್ವಾಲ್‌ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡದೇ ಬಿಸಿಸಿಐ ಮಾತ್ರ ಪದೇ ಪದೆ ಕಡೆಗಣನೆ ಮಾಡುತ್ತಿದೆ.
ಕರ್ನಾಟಕ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ದೇಸೀಯ ಕ್ರೀಡೆಗಳಲ್ಲಿ ರನ್ ಸುರಿಮಳೆಯನ್ನೇ ಸುರಿಸಿದ್ದಾರೆ. ರಣಜೀ ಟ್ರೋಫೀ, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ದೇವಧರ್ ಟ್ರೋಫಿ ಹೀಗೆ ವಿವಿಧ  ದೇಸೀಯ ಕ್ರೀಡೆಗಳಲ್ಲಿ ಶತಕಗಳ ಮೇಲೆ ಶತಕ ಭಾರಿಸಿದ್ದಾರೆ. ಇಷ್ಟೇ ಅಲ್ಲದೇ ಭಾರತ ಎ ತಂಡದ ಪರ ಇಂಗ್ಲೆೆಂಡ್ ಎ ವಿರುದ್ಧ ಆಂಗ್ಲರ ನೆಲದಲ್ಲೇ ಎರಡು ಶತಕ ಭಾರಿಸಿ ಸಾಧನೆ ಮಾಡಿದ್ದಾಾರೆ.
ಮಾಯಾಂಕ್ ಅಗರ್ವಾಲ್ ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಜತೆ ಜತೆಯಲ್ಲಿ ಆಸ್ಟ್ರೇಲಿಯಾ ಎ ಹಾಗೂ ವೆಸ್ಟ್  ಇಂಡಿಸ್‌ಎ ನಡುವಿನ ಭಾರತ ಎ ತಂಡದ ಸರಣಿಯಲ್ಲಿಯೂ ಕೂಡ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಕಳೆದ ಒಂದು ವರ್ಷದ ಅವಯಲ್ಲಿ ಲೀಸ್ಟ್  ಎ ತಂಡದ ಪರ ಕೇವಲ 8 ಪಂದ್ಯಗಳಲ್ಲಿ 723 ರನ್ ಗಳಿಸಿದ ಸಾಧನೆ ಮಾಯಾಂಕ್‌ರ ಹೆಸರಲ್ಲಿದೆ. ಇಷ್ಟೇ ಅಲ್ಲ 2017-18ರ ದೇಸೀಯ ಕ್ರೀಡೆಗಳಲ್ಲಿ ಮಾಯಾಂಕ್ ಗಳಿಸಿದ್ದು ಬರೋಬ್ಬರಿ 2141ರನ್. ದೇಸೀಯ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ 2000 ರನ್ ದಾಖಲಿಸಿದ ಮೊದಲ ಆಟಗಾರ ಎನ್ನುವ ಖ್ಯಾಾತಿಯೂ ಮಾಯಾಂಕ್ ಬೆನ್ನಿಗಿದೆ. ಇನ್ನೂ ವಿಶೇಷವೆಂದರೆ ಮಾಯಾಂಕ್ ಅಗರ್ವಾಲ್ ವಿಶ್ವದ ಮಟ್ಟದಲ್ಲಿ ದೇಸೀಯ ಕ್ರಿಕೆಟ್‌ನಲ್ಲಿ ಒಂದು ವರ್ಷದಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಸಾಧಕರ ಯಾದಿಯಲ್ಲಿಯೂ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಿದ್ದರೂ ಕೂಡ ಮಾಯಾಂಕ್‌ರನ್ನು ಭಾರತ ತಂಡಕ್ಕೆೆ ಆಯ್ಕೆ ಮಾಡದೇ ಕಡೆಗಣಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಭಾರತದ ನೆಲದಲ್ಲಿ ಮಾತ್ರವಲ್ಲ ವಿದೇಶದ ನೆಲದಲ್ಲಿಯೂ ಅರ್ಗವಾಲ್ ಸಾಕಷ್ಟು ರನ್ ಸುರಿಮಳೆಗೈದಿದ್ದಾರೆ. ಭಾರತ ಟೆಸ್‌ಟ್‌ ತಂಡದಲ್ಲಿನ ಹಲವು ಆಟಗಾರರು ಇಂಗ್ಲೆೆಂಡ್ ನೆಲದಲ್ಲಿ ರನ್ ಗಳಿಸಲು ಪರದಾಡಿದ್ದು ಕಣ್ಣೆದುರಿಗೇ ಇದೆ. ಹೀಗಿರುವ ಸಂದರ್ಭರ್ದಲ್ಲೇ ಮಾಯಾಂಕ್, ಇಂಗ್ಲೆೆಂಡ್ ನೆಲದಲ್ಲಿ ಆಂಗ್ಲ ಯುವ ತಂಡದ ಸ್ವಿಿಂಗ್ ಬಾಲಿಂಗ್‌ನ್ನು ಲೀಲಾಜಾಲವಾಗಿ ಎದುರಿಸ ಶತಕಗಳನ್ನು ಭಾರಿಸಿದ್ದರು. ಇವರನ್ನು ತಂಡಕ್ಕೆೆ ಆಯ್ಕೆ ಮಾಡಿದ್ದರೆ, ಪ್ರಭಾವಿ ಆಗಬಲ್ಲರು ಎನ್ನುವ ಭರವಸೆಯನ್ನು ಹುಟ್ಟು ಹಾಕಿದ್ದರು.
ಶತಕಗಳ ಮೇಲೆ ಶತಕ, ರನ್‌ಗಳ ಸುರಿಮಳೆ ಭಾರಿಸುತ್ತಿರುವ ಮಾಯಾಂಕ್ ಅಗರ್ವಾಲ್ ಭಾರತದ ಟೆಸ್ಟ್ , ಏಕದಿನ ತಂಡಗಳಿಗೆ ಆಯ್ಕೆಯಾಬೇಕಾದರೆ ಇನ್ನೇನು ಮಾಡಬೇಕು ಎನ್ನುವ ಪ್ರಶ್ನೆಗಳು ಹಿರಿಯ ಆಟಗಾರರಿಂದ, ಕ್ರಿಕೆಟ್ ಪ್ರೇಮಿಗಳಿಂದ ಕೇಳಿ ಬಂದಿದೆ. ಪದೇ ಪದೆ ವಿಫಲರಾಗುತ್ತಿರುವ ಆಟಗಾರರಿಗೆ ಪದೇ ಪದೆ ಮಣೆ ಹಾಕಲಾಗುತ್ತಿದೆ. ಆದರೆ ಗಮನಾರ್ಹ ಪ್ರದರ್ಶನ ನೀಡಿ ಮತ್ತೆ ಮತ್ತೆ ಆಯ್ಕೆ ಮಂಡಳಿಯ ಕದ ತಟ್ಟುತ್ತಿದ್ದರೂ ಮಾಯಾಂಕ್ ಅಗರ್ವಾಲ್‌ರನ್ನು ಕಡೆಗಣನೆ ಮಾಡುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಹರ್ಭಜನ್  ಸಿಂಗ್‌ರಂತಹ ಹಿರಿಯ ಆಟಗಾರರೇ ಮಾಯಾಂಕ್‌ಗೆ ಅವಕಾಶ ನೀಡಬೇಕಿತ್ತು ಎಂದು ಹೇಳುತ್ತಿದ್ದಾರೆ. ಆದರೆ ಬಿಸಿಸಿಐ ಮಾತ್ರ ಮಾಯಾಂಕ್ ಅಗರ್ವಾಲ್‌ರನ್ನು ಕಡೆಗಣಿಸುವ ಮೂಲಕ ಪ್ರತಿಭಾವಂತ ಆಟಗಾರನಿಗೆ ಅನ್ಯಾಯ ಮಾಡುತ್ತಿದೆ.

---
ಬೇಕೆಂದೇ ಕಡೆಗಣನೆ
ಮಾಯಾಂಕ್ ಅಗರ್ವಾಲ್ ಇಷ್ಟೆಲ್ಲ ರನ್ ಗಳಿಸಿದ್ದರೂ ಕೂಡ ಅವರನ್ನು ಕಡೆಗಣನೆ ಮಾಡಿ ಪೃಥ್ವಿ ಶಾ ಹಾಗೂ ಹನುಮ ವಿಹಾರಿಗೆ ಇಂಗ್ಲೆೆಂಡ್ ತಂಡದ ವಿರುದ್ಧ ಟೆಸ್ಟ್  ಸರಣಿಗೆ ಆಯ್ಕೆ ಮಾಡಲಾಯಿತು. ಅಷ್ಟೇ ಅಲ್ಲದೇ ಏಷ್ಯಾ ಕಪ್‌ಗೂ ಅವಕಾಶ ನೀಡಲಿಲ್ಲ. ಇದನ್ನೆಲ್ಲ ಗಮನಿಸಿದಾಗ ಮಾಯಾಂಕ್ ಅಗರ್ವಾಲ್‌ರನ್ನು ಬೇಕೆಂದೇ ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಮಾತುಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ. ಪ್ರತಿಭಾವಂತ ಆಟಗಾರನಿಗೆ ಮಣೆ ಹಾಕುವ ಬದಲು ಉಳಿದವರನ್ನು ಆಯ್ಕೆ ಮಾಡುತ್ತಿರುವುದು ಬಿಸಿಸಿಐನಲ್ಲಿನ ರಾಜಕೀಯವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿದೆ.

No comments:

Post a Comment