Saturday, August 18, 2018

ಭಾರತ ಕ್ರಿಕೆಟ್‌ನ ಭವ್ಯ ಪರಂಪರೆಯ ಕೊಂಡಿ ಅಜಿತ್ ವಾಡೇಕರ್

ಎಂಟು ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ ಆಟಗಾರನಾಗಿ, ಅಗ್ರೆಸ್ಸಿವ್ ಆಟದಿಂದ ಎದುರಾಳಿಗಳ ನಿದ್ದೆಗೆಡಿಸಿದ್ದ ಹೆಸರಾಂತ ಕ್ರಿಕೆಟ್ ಆಟಗಾರ ಅಜಿತ್ ವಾಡೇಕರ್ ನಿಧನರಾಗಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಉತ್ತಮ ಪ್ರದರ್ಶನಕ್ಕೆ ನಾಂದಿ ಹಾಕಿದ ಆಟಗಾರ ಅಜಿತ್ ವಾಡೇಕರ್.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ತಮ್ಮ 77ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಕ್ರಿಕೆಟ್ ಜೀವನದ ರೋಚಕತೆಯಿಂದ ಕೂಡಿದೆ.
1941ರ ಏಪ್ರಿಲ್ 1ರಂದು ಜನಿಸಿದ್ದ ಅಜಿತ್ ಲಕ್ಷ್ಮಣ ವಾಡೇಕರ್ ತಮ್ಮ 17ನೇ ವಯಸ್ಸಿನಲ್ಲಿ ಅಂದರೆ 1958ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಂತರ ನಾಲ್ಕೇ ವರ್ಷಗಳಲ್ಲಿ ಭಾರತ ತಂಡದ ಆಸ್ತಿಯಾದರು. ಬಾಲ್ಯದ ದಿನಗಳಲ್ಲಿ ಅಜಿತ್ ಗಣತ ವಿಭಾಗವನ್ನು ಆಯ್ಕೆ ಮಾಡಿಕೊಂಡು, ಇಂಜಿನಿಯರ್ ಆಗಲಿ ಎನ್ನುವುದು ಅಜಿತ್ ತಂದೆ ಲಕ್ಷ್ಮಣ್‌ರ ಕನಸಾಗಿತ್ತು. ಆದರೆ ಕ್ರಿಕೆಟ್ ಕಡೆಗೆ ಒಲವು ಮೂಡಿಸಿಕೊಂಡಿದ್ದ ಅಜಿತ್, ಕ್ರಿಕೆಟ್‌ನಲ್ಲಿ ಪೂರ್ಣಕಾಲಿಕವಾಗಿ ತೊಡಗಿಸಿಕೊಂಡರು.
ಸೋಟಕ ಎಡಗೈ ಬ್ಯಾಟ್ಸಮನ್ ಆಗಿದ್ದ ವಾಡೇಕರ್ ಅವರು 1971ರಲ್ಲಿ ವೆಸ್ಟ್  ಇಂಡೀಸ್ ಮತ್ತು ಇಂಗ್ಲೆಡ್‌ನಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಐತಿಹಾಸಿಕ ಗೆಲುವು  ಸಾಧಿಸಲು ಕಾರಣರಾಗಿದ್ದರು. 1966ರಿಂದ 1974ರವರೆಗೆ 8 ವರ್ಷಗಳ ಕಾಲ ಭಾರತ ತಂಡದ ಆಟಗಾರನಾಗಿ, ನಾಯಕನಾಗಿ ಮುನ್ನಡೆಸಿದರು.
ಭಾರತ ತಂಡ ಕಂಡ ಅತ್ಯುತ್ತಮ ಸ್ಲಿಪ್ ಫಿಲ್ಡರ್ ಎನ್ನುವ ಹೆಗ್ಗಳಿಕೆ ಕೂಡ ಇವರಿಗಿದೆ. ಪ್ರಥಮ ಸ್ಲಿಪ್‌ನಲ್ಲಿ ಫೀಲ್ಡಿಿಂಗ್ ಮಾಡುತ್ತಿದ್ದ ವಾಡೇಕರ್ ಆಕರ್ಷಕ ಕ್ಯಾಚುಗಳನ್ನು ಹಿಡಿಯುವ ಮೂಲಕ ಹೆಸರಾಗಿದ್ದರು.
ಬಾಂಬೆ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದ ಅಜಿತ್ ವಾಡೇಕರ್ 1971ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದರು. ಇವರ ನೇತೃತ್ವದ ಟೀಂ ಇಂಡಿಯಾ 1971ರಲ್ಲಿ ಇಂಗ್ಲೆೆಂಡ್ ವಿರುದ್ಧದ 3 ಟೆಸ್ಟ್  ಪಂದ್ಯಗಳ ಸರಣಿಯನ್ನ 1-0 ಅಂತರದಲ್ಲಿ ಕೈವಶ ಮಾಡಿಕೊಂಡಿತು. ಇದಾದ ಬಳಿಕ ಅದೇ ವರ್ಷ ವೆಸ್ಟ್  ಇಂಡೀಸ್ ವಿರುದ್ಧ ಕೂಡ ಟೆಸ್ಟ್  ಸರಣಿಯಲ್ಲಿ ಗೆದ್ದು ಜಯ ಗಳಿಸಿದ್ದರು.
ಇದಾದ ಬಳಿಕೆ 1972-73ರ ಅವಯಲ್ಲಿ ಇವರ ನೇತೃತ್ವದ ಟೀಂ ಇಂಡಿಯಾ ತಂಡ  ಇಂಗ್ಲೆೆಂಡ್ ತಂಡವನ್ನು  2-1 ಅಂತರದಲ್ಲಿ ಸೋಲಿಸಿ ಸರಣಿ ಜಯಿಸಿತ್ತು. ಈ ಮೂಲಕ ವಿದೇಶಿ ನೆಲದಲ್ಲಿ ಮೂರು ಬಾರಿ ಸರಣಿ ಗೆದ್ದ ಯಶಸ್ವಿ ನಾಯಕನಾಗಿ ವಾಡೇಕರ್ ಗುರುತಿಸಿಕೊಂಡಿದ್ದರು. ಸತತ ಏಳು ವರ್ಷಗಳ ಕಾಲ ಟೀಂ ಇಂಡಿಯಾ ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಇವರು, 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದರು.
ಇವರ ನಾಯಕತ್ವದ ಅಡಿಯಲ್ಲಿ ಸುನೀಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಫಾರೂಕ್ ಇಂಜಿನಿಯರ್, ಭಾರತದ ಸ್ಪಿನ್ ಅಸಗಳಾದ ಬಿಶನ್‌ಸಿಂಗ್ ಬೇಡಿ, ಇಎಎಸ್ ಪ್ರಸನ್ನ, ಬಿ. ಚಂದ್ರಶೇಖರ್, ಎಸ್. ವೆಂಕಟರಾಘವನ್ ಅವರು ಆಟವಾಡಿದ್ದಾಾರೆ. ಅಜಿತ್ ವಾಡೇಕರ್ ನಿಧನದಿಂದ ಭಾರತ ಕ್ರಿಕೆಟ್ ಇತಿಹಾಸದ ಭವ್ಯ ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆ.

ಪಾದಾರ್ಪಣೆ, ಸಾ‘ನೆ
1966ರ ಡಿಸೆಂಬರ್ 13ರಂದು ವೆಸ್ಟ್  ಇಂಡೀಸ್ ವಿರುದ್ಧ ಟೀಂ ಇಂಡಿಯಾ ಪರ ಮುಂಬೈನಲ್ಲಿ ಪಾದಾರ್ಪಣೆ ಮಾಡದರು. 1974ರ ಜುಲೈ 13ರಂದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇವರು ಟೆಸ್ಟ್  ಕ್ರಿಕೆಟ್‌ನಲ್ಲಿ 2113 ರನ್ ಗಳಿಸಿದ್ದರು. ಇದರಲ್ಲಿ 1 ಶತಕ, 14 ಅರ್ಧ ಶತಕಗಳಿದ್ದವು. 143ರನ್ ವಾಡೇಕರ್‌ರ ಸರ್ವಾಧಿಕ ಸ್ಕೋರ್. 46 ಕ್ಯಾಚ್‌ಗಳನ್ನು ಹಿಡಿದು ಸಾಧನೆ ಮಾಡಿದ್ದರು. ಆದರೆ ಇವರು ಆಡಿದ್ದು ಕೇವಲ ಎರಡೇ ಎರಡು ಏಕದಿನ ಪಂದ್ಯ. ಈ ಎರಡು ಪಂದ್ಯಗಳಲ್ಲಿ ಗಳಿಸಿದ ಒಟ್ಟೂ ರನ್ 73.
237 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅಜಿತ್ ವಾಡೇಕರ್ 15,380ರನ್ ಭಾರಿಸಿದ್ದಾಾರೆ. ಇವರಿಗೆ ಭಾರತ ಸರ್ಕಾರ 1967ರಲ್ಲಿ ಅರ್ಜುನ್ ಪ್ರಶಸ್ತಿ ಹಾಗೂ 1972ರಲ್ಲಿ  ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇತರೆ ಕಾರ್ಯಗಳು
1990ರ ವೇಳೆಗ ಅಜಿತ್ ವಾಡೇಕರ್ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು. ಅಲ್ಲದೇ 1990ರ ದಶಕದಲ್ಲಿ ಭಾರತ ಕ್ರಿಕೆಟ್ ತಂಡದ ತರಬೇತುದಾರನಾಗಿ, ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ  ಕಾರ್ಯ ನಿರ್ವಹಣೆ ಮಾಡಿದ್ದಾಾರೆ. ಟೆಸ್‌ಟ್‌ ತಂಡದ ಆಟಗಾರನಾಗಿ, ನಾಯಕನಾಗಿ, ತರಬೇತುದಾರ ಹಾಗೂ ಮ್ಯಾನೇಜರ್ ಆಗಿ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡಿದ ಕೆಲವೇ ಕೆಲವು ಆಟಗಾರರಲ್ಲಿ ಅಜಿತ್ ವಾಡೇಕರ್ ಒಬ್ಬರು. 

No comments:

Post a Comment