Friday, August 10, 2018

ನೆಗೆಟಿವ್ ರಾಜಕಾರಣದ ಪೊರೆ ಕಳಚಿದಾಗಲೇ ಕಾಂಗ್ರೆಸ್‌ಗೆ ಮರುಜನ್ಮ

ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಅತ್ಯಂತ ಹೆಚ್ಚು ಸೋಲನ್ನು ಅನುಭವಿಸಿದ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಧನಾತ್ಮಕ ಅಂಶಗಳು ಕಣ್ಣೆದುರಿಗೆ ಸಾಕಷ್ಟು ಇದ್ದರೂ ನೆಗೆಟಿವ್ ಅಂಶಗಳನ್ನೇ ನೆಚ್ಚಿಕೊಂಡು, ನೆಗೆಟಿವ್ ರಾಜಕಾರಣವನ್ನೇ ಮಾಡುತ್ತ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್ ಗೆ ಅಂಶಗಳಿಂದಲೇ ಸೋಲು ಎದುರಾಗುತ್ತಿದೆ ಎನ್ನುವುದು ಅರ್ಥವಾಗುವುದು ಯಾವಾಗ? ಎಂದಿಗೆ ಕಾಂಗ್ರೆಸ್ ತನ್ನ ರಾಜಕಾರಣದ ಶೈಲಿಯನ್ನು ಬದಲಿಸಿಕೊಳ್ಳುವುದಿಲ್ಲವೋ ಅಂದಿನವರೆಗೆ ಕಾಂಗ್ರೆಸ್ ಗೆ ಸೋಲು ಬೆನ್ನು ಬಿಡುವುದಿಲ್ಲ.
ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಕಾಂಗ್ರೆಸ್ ಮಾಡಿಕೊಂಡು ಬಂದಿದ್ದು ಇದೇ ನೆಗೆಟಿವ್ ರಾಜಕಾರಣವನ್ನೇ. ಶತಮಾನಗಳ ಇತಿಹಾಸವನ್ನು ಹೊಂದಿದ ಕಾಂಗ್ರೆಸ್ ತನ್ನ ಜನ್ಮದಿಂದಲೂ ನೆಗೆಟಿವ್ ರಾಜಕಾರಣದಲ್ಲೇ ಮಿಂದೇಳುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇನ್ನು ಕಳೆದ ಒಂದು ದಶಕದಲ್ಲಿ ಅಂದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಚ್ಚಳವಾದಾಗ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಕಾಂಗ್ರೆಸ್ ನೆಗೆಟಿವ್ ರಾಜಕಾರಣ ಇನ್ನಷ್ಟು ಹೆಚ್ಚಳಗೊಂಡಿತು. ಅದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ.
ಇತ್ತೀಚಿನ ವರ್ಷಗಳಲ್ಲಿ ನಡದ ಯಾವುದೇ ಚುನಾವಣೆಯನ್ನು ಗಮನಿಸಿ, ಕಾಂಗ್ರೆಸ್ ಮೊಟ್ಟ ಮೊದಲಿಗೆ ಬಳಕೆ ಮಾಡಿಕೊಳ್ಳುವುದು ನೆಗೆಟಿವ್ ಅಂಶಗಳನ್ನು. ಜಾತಿ, ಧರ್ಮ, ಮೀಸಲಾತಿ, ಪ್ರತ್ಯೇಕ ರಾಜ್ಯ ಹೀಗೆ ಹತ್ತು ಹಲವು ನೆಗೆಟಿವ್ ಅಂಶಗಳೇ ಕಾಂಗ್ರೆಸ್ ಪಾಲಿಗೆ  ಸ್ತ್ರಗಳಾಗುತ್ತವೆ. ಯಾರನ್ನು ಹೇಗೆ ಒಡೆದರೆ ಮತಗಳಾಗಬಹುದು ಎನ್ನುವುದೇ ಕಾಂಗ್ರೆಸ್ ಪಾಲಿಗೆ ಮುಖ್ಯವಾಗುತ್ತವೆ. ಸುಳ್ಳಾದರೂ ಸರಿ ಸುಮ್ಮನೆ ಹುಯ್ಯಲೆಬ್ಬಿಸಿದರೆ ಅದರಿಂದ ಒಂದಷ್ಟು ಓಟು ಸಿಗಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಆದರೆ ಲೆಕ್ಕಾಚಾರಗಳೇ ಕಾಂಗ್ರೆಸ್ ಪಾಲಿಗೆ ಮುಳುವಾಗುತ್ತಿದೆ.
ಸುಮ್ಮನೆ ಗಮನಿಸಿದರೆ ಕಾಂಗ್ರೆಸ್ ನೆಗೆಟಿವ್ ರಾಜಕಾರಣ ಕಣ್ಣಿಗೆ ಪದೇ ಪದೆ ರಾಚುತ್ತದೆ. 2014 ಲೋಕಸಭಾ ಚುನಾವಣೆಗೂ ಮೊದಲಿನ ಕಾಂಗ್ರೆಸ್ ಕಾರ್ಯಗಳನ್ನೇ ಗಮನಿಸಿದರೆ ಹಲವು ಅಂಶಗಳು ಗಮನಕ್ಕೆ ಬರುತ್ತವೆ. ಅದರಲ್ಲಿ ಪ್ರಮುಖವಾದದ್ದು, ಗೋಧ್ರಾ ಹತ್ಯಾಕಾಂಡದ ವಿಷಯ. ಅಂಶವನ್ನೇ ಇಟ್ಟುಕೊಂಡು ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿತು. ಪ್ರಕರಣಗಳನ್ನೂ ದಾಖಲಿಸುವ ಮಟ್ಟಕ್ಕೆ ಇಳಿಯಿತು. ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಂತೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮೋದಿಯವರನ್ನು ಮೌತ್ ಕಾ ಸೌದಾಗರ್ ಎಂದೂ ಕರೆದರು. ಮಣಿಶಂಕರ್ ಅಯ್ಯರ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೋದಿಯವರನ್ನು ನೀಚ ಆದ್ಮಿ ಎಂದು ಕರೆದೂಬಿಟ್ಟರು. ಇದನ್ನು ನೋಡಿದ ಗುಜರಾತ್ ಮತದಾರ ಹಸ್ತಕ್ಕೆ ಬಾಯ್ ಬಾಯ್ ಎಂದು ಹೇಳಿ ಓಡಿಸಿದ್ದು ಮರೆತಿಲ್ಲ ಬಿಡಿ.
2014 ಚುನಾವಣೆಗೂ ಮೊದಲು ಕಾಂಗ್ರೆಸ್ ವಿಶಾಲ ಆಂಧ್ರಪ್ರದೇಶವನ್ನು ಒಡೆದು ಎರಡು ರಾಜ್ಯಗಳನ್ನಾಗಿ ಮಾಡಿತು. ತೆಲಂಗಾಣ ಹಾಗೂ ಆಂಧ್ರ ಎಂದು ವಿಭಜನೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮನಸ್ಸಿನಲ್ಲಿದ್ದುದು ಬರೀ ಮತ ಗಳಿಕೆ ಮಾತ್ರ. ಇದೇ ಕಾಂಗ್ರೆಸ್ 2014 ಚುನಾವಣೆಗೂ ಪೂರ್ವದಲ್ಲಿ ಜೈನರಿಗೆ ಅಲ್ಪಸಂಖ್ಯಾತ ಮಾನ್ಯತೆಯನ್ನು ನೀಡಿತು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲಂತೂ ಕಾಂಗ್ರೆಸ್ ತನ್ನೊಳಗೆ ಪಾಸಿಟಿವ್ ಆಲೋಚನೆಗಳು ಇವೆ ಎನ್ನುವುದನ್ನೇ ಮರೆತಿದೆಯೇನೋ ಎನ್ನುವಂತೆ ವರ್ತಿಸುತ್ತಿದೆ. ಯಾವುದೇ ಕೆಲಸ, ಪ್ರತಿಭಟನೆ, ಹೋರಾಟ, ಚುನಾವಣಾ ಪ್ರಚಾರ ಹೀಗೆ ಎಲ್ಲ ರಂಗಗಳಲ್ಲಿಯೂ ನೆಗೆಟಿವ್ ಅಂಶಗಳಿಗೇ ಮಹತ್ವವನ್ನು ನೀಡುತ್ತಿದೆ.
ಸುಮ್ಮನೆ ಗಮನಿಸಿ, ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನನ್ನು ತಾನು ಪ್ರಚಾರ ಮಾಡಿಕೊಳ್ಳುವಲ್ಲಿ ಸಾಕಷ್ಟು ಧನಾತ್ಮಕ ಅಂಶಗಳಿದ್ದವು. ಆದರೆ ಅದ್ಯಾವುದನ್ನೂ ಮಾಡಲು ಮುಂದಾಗಲಿಲ್ಲ. ಬದಲಾಗಿ ಪಾಟೀದಾರ್ ಚಳುವಳಿಯನ್ನು ಮತಗಳಿಕೆಗಾಗಿ ಬಳಕೆ ಮಾಡಿಕೊಳ್ಳಲು ಮುಂದಾಯಿತು. ತದನಂತರದಲ್ಲಿ ದಲಿತರಿಗೆ ಅನ್ಯಾಯ ಎನ್ನುವ ಗಲಾಟೆಯನ್ನು ಎಬ್ಬಿಸಲು ನೋಡಿತು. ಅಂಶಗಳೇ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮುಳುವಾಯಿತು. ಅಷ್ಟೇ ಏಕೆ ತಾನೊಬ್ಬ ಹಿಂದೂ ಎಂದು ಬಿಂಬಿಸುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನಗಳನ್ನು ಸುತ್ತಿದರು. ತಾವೊಬ್ಬ ಜನಿವಾರ ಹೊಂದಿರುವ ಬ್ರಾಹ್ಮಣ ಎಂದುಕೊಂಡರು. ಆದರೆ ಇದು ಲಕಾರಿಯಾಗಲಿಲ್ಲ. ಚುನಾವಣೆಯ ನಂತರ ದೇವಸ್ಥಾನವನ್ನು ಮರೆತರು. ಜನಿವಾರ ಎಲ್ಲಿಗೆ ಹೋಯಿತೋ ಗೊತ್ತಿಲ್ಲ.
ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳ ಚುನಾವಣೆಗೂ ಮೊದಲು ಕಾಂಗ್ರೆಸ್ ದೇಶದಲ್ಲಿ ಅಸಹಿಷ್ಣುತೆಯಿದೆ ಎಂದು ಹುಯ್ಯಲೆಬ್ಬಿಸಲು ಮುಂದಾಯಿತು. ದೇಶದಲ್ಲಿ ಮುಸ್ಲೀಮರಿಗೆ ಆತಂಕಕರ ವಾತಾವರಣವಿದೆ ಎಂದು ಬೊಬ್ಬಿರಿಯಲು ಯತ್ನಿಸಿ ಸೋಲನ್ನು ಅನುಭವಿಸಿತು. ಇನ್ನು ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಪ್ರತ್ಯೇಕ ಧರ್ಮ ಅಂಶವನ್ನೇ ಪ್ರಮುಖವಾಗಿಸಲು ಮುಂದಾಯಿತು. ರಾಹುಲ್ ಗಾಂಧಿ ಕೂಡ ವಚನಗಳನ್ನು ಹೇಳಿದರು. ದೇವಸ್ಥಾನಗಳು, ಮಠ ಮಂದಿರಗಳನ್ನು ಸುತ್ತಿದರು. ಇದು ಯಾವುದೂ ಕಾಂಗ್ರೆಸ್ ಗೆ ಲಾಭ ತಂದುಕೊಡಲಿಲ್ಲ. ಬದಲಾಗಿ ಸಾಕಷ್ಟು ಹೊಡೆತವನ್ನೇ ನೀಡಿತು.
ಭಾರತದ ಆಯುರ್ವೇದವೋ, ಯೋಗವೋ ಅಥವಾ ಪ್ರಾಚೀನ ಸಂಸ್ಕೃತಿ ಸಂಪ್ರದಾಯಗಳನ್ನೋ ವಿಶ್ವದ ಎದುರು ತೆರೆದಿಡಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನೆಗೆಟಿವ್ ಅಂಶಗಳನ್ನು ತೆರೆದಿಟ್ಟರು. ವಿದೇಶಗಳ ನಾಯಕರು ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತದ ಪ್ರಥಮ ಪ್ರಧಾನಿ ನೆಹರೂ ಅವರಿಗೆ ಹಾವುಗಳನ್ನು ಆಡಿಸುವುದನ್ನು ಹೆಮ್ಮೆ ಎಂಬಂತೆ ತೋರಿಸಿದ್ದರಂತೆ. ಆಮೇಲಾದರೂ ಅಷ್ಟೇ ಭಾರತದಲ್ಲಿನ ಯಾವುದೇ ಪಾಸಿಟಿವ್ ಅಂಶಗಳನ್ನೂ ಕಾಂಗ್ರೆಸ್ ವಿಶ್ವದ ಎದುರು ತೆರೆದಿಡುವ ಪ್ರಯತ್ನವನ್ನೇ ಮಾಡಲಿಲ್ಲ. ಭಾರತದಲ್ಲಿನ ಪ್ರವಾಸೋದ್ಯಮದ ಕುರಿತು, ಹೂಡಿಕೆಗೆ ಇರುವ ವಿಪುಲ ಅವಕಾಶಗಳ ಕುರಿತು ಯಾವತ್ತೂ ಕಾಂಗ್ರೆಸ್ ಧನಾತ್ಮಕವಾಗಿ ಮಾತನಾಡಲೇ ಇಲ್ಲ. ವಿಶ್ವದ ಎದುರು ಭಾರತವನ್ನು ಧನಾತ್ಮಕವಾಗಿ ತೆರೆದಿಡುವ ಪ್ರಯತ್ನವನ್ನೇ ಮಾಡಲಿಲ್ಲ. ಬದಲಾಗಿ ಭಾರತದಲ್ಲಿನ ನೆಗೆಟಿವ್ ಅಂಶಗಳನ್ನು ವಿಶ್ವದ ವೇದಿಕೆಗಳಲ್ಲಿ ತೆರೆದಿಡುವುದರಲ್ಲೇ ಆಸಕ್ತಿಯನ್ನು ತೋರಿಸಿತು.
ಕಾಂಗ್ರೆಸ್ ಇಂತಹ ತನ್ನ ನೆಗೆಟಿವ್ ಮನಸ್ಥಿತಿಯಿಂದಲೇ ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. 2019 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಗದ್ದುಗೆಗೆ ಏರುವ ಕನಸನ್ನು ಕಾಣುತ್ತಿದೆ. ಆದರೆ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರುಗಳಿಗೆ ತಮ್ಮ ನಾಯಕರ ಮೇಲೆಯೇ ನಂಬಿಕೆ ಇಲ್ಲ ಎನ್ನುವಂತಹ ಪರಿಸ್ಥಿತಿ ಉದ್ಭವವಾಗಿದೆ. 2019 ಚುನಾವಣೆಯಲ್ಲಿ ರಾಹುಲ್ ಪ್ರಧಾನಿಯಾಗುತ್ತಾರೆಯೇ ಎಂದು ಗಟ್ಟಿಯಾಗಿ ಕೇಳಿದರೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸದೃಢವಾಗಿ ಹೌದು ಎನ್ನುವಲ್ಲಿ ವಿಲರಾಗುತ್ತಾರೆ. ನಕ್ಕು ಸುಮ್ಮನಾಗುತ್ತಾರೆ. ಗೆಲ್ಲುವ ಕನಸನ್ನು ಹೊಂದಿರುವ ಕಾಂಗ್ರೆಸ್ಸಿಿಗರು ಯಾವುದೋ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿಗೆ ಮುಂದಾಗುತ್ತಾರೆ. ತೃತೀಯ ರಂಗದ ಕುರಿತಂತೆ ಧ್ವನಿ ಎತ್ತುತ್ತಾರೆ. ಹಂತಕ್ಕೆ ಬಂದು ತಲುಪಿದೆ ಕಾಂಗ್ರೆಸ್ ಮನಸ್ಥಿತಿ.
ಕಾಂಗ್ರೆಸ್ ಯಾವತ್ತಿಗೂ ಪಾಸಿಟಿವ್ ರಾಜಕಾರಣವನ್ನು ಮಾಡಬಹುದು ಎನ್ನುವುದರ ಕುರಿತಂತೆ ಆಲೋಚನೆಯನ್ನೇ ಮಾಡಿಲ್ಲ. ತಾನು ಮಾಡಿದ ಧನಾತ್ಮಕ ಕಾರ್ಯಗಳನ್ನು ರಾಷ್ಟ್ರಾದ್ಯಂತ ಧನಾತ್ಮಕವಾಗಿ ಪ್ರಚಾರ ಮಾಡುವುದಕ್ಕೆ ಕಾಂಗ್ರೆಸ್ ಯಾವತ್ತಿಗೂ ಮುಂದಾಗಿಲ್ಲ. ಮುಂದೆ ತಾನು ಅಧಿಕಾರಕ್ಕೆ ಬಂದರೆ ಜನರಿಗೆ ಅನುಕೂಲವಾಗುವಂತಹ ಕಾರ್ಯಗಳ ಕುರಿತು ಯಾವುದೇ ಗಟ್ಟಿ ನಿಲುವನ್ನೇ ಕಾಂಗ್ರೆಸ್ ಹೊಂದಿಲ್ಲ.
ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮನ್ನು ಅಧಿಕಾರಕ್ಕೆ ತಂದರೆ ಯಾವ ರೀತಿ ಬದಲಾವಣೆಗಳನ್ನು ಮಾಡಬಲ್ಲೆ ಎಂಬುದನ್ನು ಜನರ ಮನಸ್ಸಿನಲ್ಲಿ ಧನಾತ್ಮಕವಾಗಿ ಅಚ್ಚಳಿಯದಂತೆ ಮೂಡಿಸುತ್ತಿದ್ದಾರೆ. ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಅದೇ ಹಳೆಯ ಸಿದ್ಧ ಸೂತ್ರಕ್ಕೆ ಜೋತು ಬಿದ್ದಿದೆ.
ಪ್ರಧಾನಿ ಮೋದಿಯವರನ್ನೋ ಅಥವಾ ಅವರ ಸರ್ಕಾರದ ಕಾರ್ಯಗಳನ್ನೋ ತೆಗಳಿದರೆ, ಆರೋಪಗಳನ್ನು ಮಾಡಿದರೆ ಅದೇ ದೊಡ್ಡ ಸಾಧನೆ ಎಂದುಕೊಂಡಿದೆ ಕಾಂಗ್ರೆಸ್. ವಿನಾಕಾರಣ ಮೋದಿ ಮೇಲೆ ಗೂಬೆ ಕೂರಿಸುವುದರಲ್ಲೇ ಕಾಂಗ್ರೆಸ್ಸಿಗೆ ತೃಪ್ತಿ. ಮೋದಿಯವರು ಕೈಗೊಳ್ಳುವಂತಹ ಯೋಜನೆಗಳಿಗಿಂತ ಉತ್ತಮವಾದುದನ್ನು ತಾನು ರೂಪಿಸಬಲ್ಲೆ ಎಂದು ಕಾಂಗ್ರೆಸ್ ಎಂದಿಗೂ ಬಿಂಬಿಸಿಲ್ಲ. ದೇಶದ ಭವಿಷ್ಯಕ್ಕೆ ಅಗತ್ಯವಾದುದನ್ನು ತಾನು ಮಾಡಬಲ್ಲೆ ಎನ್ನುವ ಮಾತುಗಳು ಕಾಂಗ್ರೆಸ್ ಹಾಗೂ ಅದರ ನಾಯಕರಿಂದ ಯಾವತ್ತೂ ಬಂದಿಲ್ಲ. ಸಮಾಜದ ಪಾಸಿಟಿವ್ ಅಂಶಗಳ ಕುರಿತು ಯಾವತ್ತೂ ಆಲೋಚನೆಯನ್ನೇ ಮಾಡಿಲ್ಲ.
ಕಾಂಗ್ರೆಸ್ ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳಲಿದ್ದಲ್ಲಿ ಅದು ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಳ ಹಂತಕ್ಕೆ ತಲುಪಬಹುದು. ಮೊಟ್ಟ ಮೊದಲನೆಯದಾಗಿ ಕಾಂಗ್ರೆಸ್ ವಂಶಾಡಳಿತ ಎಂಬ ಹಳೆಯ ಸಂಪ್ರದಾಯವನ್ನು ಬದಲಿಸಬೇಕು. ಕಾಂಗ್ರೆಸ್ ನಲ್ಲಿಸುವ ಸಮರ್ಥ ಯುವ ನಾಯಕರಿಗೆ ಪಟ್ಟವನ್ನು ಕಟ್ಟಿ, ಪಕ್ಷ ಮುನ್ನಡೆಸಲು ಬಿಟ್ಟಾಗ ಕಾಂಗ್ರೆಸ್ ಬಹುಪಾಲು ಬದಲಾಗಬಹುದು. ಯಾವಾಗ ನೆಹರು-ಗಾಂಧಿ ಕುಟುಂಬದ ಚುಕ್ಕಾಣಿಯನ್ನು ಬದಲಿಸಿ ಕಾಂಗ್ರೆಸ್ ಇತರ ನಾಯಕರನ್ನು ಪಕ್ಷದ ಮುಂದಾಳುವನ್ನಾಗಿ ಮಾಡುತ್ತದೆಯೋ ಆವಾಗ ಜನಸಾಮಾನ್ಯರಲ್ಲಿ ಕಾಂಗ್ರೆಸ್ ಕಡೆಗೆ ಇರುವ ನಿರಾಶಾವಾದದ ಭಾವನೆಗಳು ಬದಲಾಗುತ್ತವೆ.
ವಿ. ಡಿ. ಸಾರ್ವರ್ಕರ್ ರನ್ನು ಸುಮ್ಮನೆ ತೆಗಳಿದರೆ, ಸಂಘವನ್ನು ದೂರಿದರೆ ಖಂಡಿತವಾಗಿಯೂ ಜನರು ನಂಬುವುದಿಲ್ಲ. ಜಶೋದಾ ಬೆನ್ ಗೆ ಅನ್ಯಾಯವಾಯಿತು ಎಂದು ಹುಯ್ಯಲಿಟ್ಟರೆ, ಅಸಹಿಷ್ಣುತೆ ಎಂದು ಸೊಲ್ಲೆತ್ತಿಿದ್ದರೆ ಪ್ರತಿಯೊಬ್ಬರೂ ಕಾಂಗ್ರೆಸ್ ನ್ನು ಆಚೆಗಟ್ಟುತ್ತಾರೆ.
ಮೋದಿಯವನ್ನು ತೆಗಳುವುದನ್ನು ಬಿಟ್ಟು ದೇಶಕ್ಕೆ ಅಗತ್ಯವಾದ ಹಾಗೂ ಅನಿವಾರ್ಯವಾದ ಯೋಜನೆಗಳ ಕುರಿತು ನೀಲನಕ್ಷೆ ರೂಪಿಸಿ ಅದನ್ನು ಪರಿಣಾಮಕಾರಿಯಾಗಿ ಜನರ ಮುಂದಿಡಬಹುದು. ಕಪಿಲ್ ಸಿಬಲ್, ಚಿದಂಬರಂ, ಮಣಿಶಂಕರ ಅಯ್ಯರ್ ರಂತಹ ಹಿರಿಯರಿಗೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯನ್ನು ಕೊಟ್ಟು ಅವರ ಜಾಗದಲ್ಲಿ ಸಚಿನ್ ಪೈಲೆಟ್, ಜ್ಯೋತಿರಾದಿತ್ಯ ಸಿಂಧಿಯಾರಂತಹ ಹೊಸ ತಲೆಮಾರಿನ ಯುವಕರಿಗೆ ಅವಕಾಶ ನೀಡಿ, ಮೊಟ್ಟ ಮೊದಲಿಗೆ ಪಕ್ಷದಲ್ಲೇ ಪಾಸಿಟಿವ್ ಅಂಶಗಳನ್ನು ಬೆಳೆಸುವ ಅಗತ್ಯವಿದೆ.
ಅಭಿವೃದ್ಧಿ ರಾಜಕಾರಣವನ್ನು ಬಿಟ್ಟು ಅದೇ ಹಳೆಯ ದ್ವೇಷದ, ಒಡೆಯುವ, ಜಾತಿಯ ರಾಜಕಾರಣವನ್ನೇ ನಂಬಿಕೊಂಡಿದ್ದರೆ ಕಾಂಗ್ರೆಸ್ ಅವಸಾನವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಪಂಸಖ್ಯಾತ ಓಲೈಕೆಯನ್ನು ಮಾಡುತ್ತಿದ್ದರೆ, ರಾಜ್ಯಗಳ ನಡುವೆ, ಭಾಷೆಗಳ ನಡುವೆ ಒಡಕನ್ನು ಹುಟ್ಟು ಹಾಕುತ್ತಿದ್ದರೆ ಕಾಂಗ್ರೆಸ್ ಮತ್ತಷ್ಟು ಕೆಳಮಟ್ಟಕ್ಕೆ ಕುಸಿಯುತ್ತದೆಯೇ ಹೊರತು ಎಂದಿಗೂ ಜನರ ಮನಸ್ಸಲ್ಲಿ ಸ್ಥಾನ ಗಳಿಸುವುದಿಲ್ಲ. ಜನಸಾಮಾನ್ಯರು, ಮತದಾರರು ಮೊದಲಿಗಿಂತ ಬುದ್ಧಿವಂತರಾಗಿದ್ದಾರೆ. ಅವರಿಗೆ ಮೊದಲಿನಂತೆ ಸುಳ್ಳುಹೇಳಿದರೆ ಕ್ಷಣಮಾತ್ರದಲ್ಲಿ ಅರ್ಥವಾಗಿ ಬಿಡುತ್ತದೆ. ಕಾಂಗ್ರೆಸ್ ಇನ್ನೂ ಅಂತಹ ಹಳೆಯ ರಾಜಕಾರಣಕ್ಕೇ ಜೋತು ಬಿದ್ದರೆ ಜನಸಾಮಾನ್ಯ, ಮತದಾರ ಕಾಂಗ್ರೆಸ್ ನ್ನು ಕಾಲಕಸಕ್ಕಿಂ ಕಡೆ ಮಾಡಿಬಿಟ್ಟಾನು. ಮುಂದಿನ ದಿನಗಳಲ್ಲಾದರೂ ಕಾಂಗ್ರೆಸ್ ಪಾಸಿಟಿವ್ ರಾಜಕಾರಣದ ಕಡೆಗೆ ಹೊರಳಲಿ.
 
 

No comments:

Post a Comment