Wednesday, August 19, 2015

ಹುಡುಕು

ಕಣ್ಣೀರ ಮಳೆಯಲ್ಲಿ
ಮಿಂದೆದ್ದು ಬಂದಾಗ
ಸಿಕ್ಕಿತಲ್ಲ ಮನಕೆ
ಒಂದು ಶಾಂತಿ |

ಬೇಸರದ ಒಡಲಿಂದ
ಜಿಗಿದು ಹೊರ ಬಂದಾಗ
ಮಿಡಿಯಿತಲ್ಲಾ ಮನದಿ
ಸಂತಸದ ತಂತಿ |

ಭಯದ ಕೋಟೆಯನೀಗ
ಸೀಳಿ ಹೊರಬಂದಾಗ
ಮೂಡಿತಲ್ಲಾ ಮನದಿ
ಹೊಸತೊಂದು ಶಕ್ತಿ |

ಕಷ್ಟಗಳ ಸೆಳವಿಂದ
ಈಜಿ ಹೊರಬಂದಾಗ
ದೊರಕಿತಲ್ಲಾ ಜೀವ
ಜೀವಕ್ಕೆ ಮುಕ್ತಿ |

ದುಃಖವು ಕರಗಿದೊಡೆ
ಸಂತಸ ಮೂಡಿದೊಡೆ
ಹುಡುಕಿತಲ್ಲಾ ಮನವು
ಕವನಕ್ಕೆ ಸ್ಪೂರ್ತಿ ||


*****

(ಈ ಕವಿತೆಯನ್ನು ಬರೆದಿರುವುದು 08-12-2005ರಂದು ದಂಟಕಲ್ಲಿನಲ್ಲಿ)

No comments:

Post a Comment