Tuesday, September 30, 2014

ವರ್ಷದ ಹರ್ಷ

ಅಬ್ಬರದ ಮಳೆ..
ಬಾನು ಬೊಬ್ಬಿರಿದಿದೆ..

ಗುಡುಗು ಢುಂ ಢುಂ
ಸಿಡಿಲು ಛಟ್ ಛಟ್...

ಮಳೆಹನಿಯ ಚಿಟಪಟ
ಮನದ ತುಂಬ ನರ್ತನ

ಹಸಿರು, ಜಗಕೆ ಚೇತನ
ಮಳೆ ನೀಡಿದೆ ಹೊಸತನ 

ಗುಡುಗಿನ ಅಬ್ಬರಕೆ
ಮೈಮನ ರೋಮಾಂಚನ

ಸಿಡಿಲಿನ ಧೀಶಕ್ತಿಗೆ
ಲೋಕವೆಲ್ಲ ಝಲ್ಲಣ..

ನದಿತೊರೆಗಳು ತುಂಬಿದೆ
ಕೆಂಪು ನೀರು ಹರಿದಿದೆ

ಹಸಿರು ಚಿಗುರು ಮೊಳೆತಿದೆ
ಹೂ ಹಕ್ಕಿ ನಲಿದಿದೆ.

ಮತ್ತೆ ಪ್ರೀತಿ ಮೊಳೆತಿದೆ
ವರ್ಷಧಾರೆ ಸುರಿದಿದೆ

ಮಳೆಯೆಂದರೆ ಚೇತನ
ಮಳೆಯಿಂದಲೇ ಜೀವನ |

***

(ಈ ಕವಿತೆ ಬರೆದಿದ್ದು ಸೆ.30, 2014ರಂದು)
(ಇವತ್ತು ಸುರಿಯುತ್ತಿರುವ ಮಳೆ ನೋಡಿ ಸುಮ್ಮನೆ ಗೀಚಿದ್ದು)

No comments:

Post a Comment