Saturday, October 20, 2018

ಇದ್ದರೆ ಇರಬೇಕು ಇಂತಹ ಗುರು

ಕ್ರಿಕೆಟ್ ಲೋಕದ ಈ ಜಂಟಲ್‌ಮ್ಯಾನ್ ರನ್ ಗುಡ್ಡೆ ಹಾಕಿಲ್ಲ, ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸುರಿಸಲಿಲ್ಲ. ಯಾವುದೋ ಪ್ರಶಸ್ತಿಗಳ ಬೆನ್ನು ಹತ್ತಲಿಲ್ಲ. ರಾಜ್ಯಸಭಾ  ಸದಸ್ಯತ್ವ ಕೊಡಿ ಎನ್ನಲಿಲ್ಲ. ತಾವಾಯಿತು, ತಮ್ಮ ಶ್ರಮವಾಯಿತು ಎಂದುಕೊಂಡೇ ಉಳಿದರು. ತೆರೆಮರೆಯಲ್ಲೇ ಉಳಿದು, ಮುಂದಿನ ಜಮನಾದ ಸ್ಟಾರ್‌ಗಳನ್ನು ಕೆತ್ತುವ ಕೆಲಸ ಮಾಡಿದರು. ಹಾಗೆ ಮಾಡುತ್ತಲೇ ಎಲ್ಲರ ಕಣ್ಮಣಿ ಆದರು. ಬ್ಯಾಾಟಿಂಗ್ ಎಂಬ ಆಯುಧವನ್ನು ಕಳಚಿಟ್ಟರೆ ಏನಂತೆ, ನನ್ನೊಳಗಿನ ಪ್ರತಿಭಾ  ಪೋಷಣೆಯ ಶಕ್ತಿ ಸಾಕಷ್ಟಿದ್ದು, ನನ್ನಂತಹ ಇನ್ನೂ ಅನೇಕರನ್ನು ತಯಾರು ಮಾಡಬಲ್ಲೇ. . . ಎಂದು ಕೊಂಡು ಹೆಜ್ಜೆ ಹಾಕಿದ ವ್ಯಕ್ತಿ ಇವರು. ಇವರೇ ರಾಹುಲ್ ಶರತ್‌ಚಂದ್ರ ದ್ರಾಾವಿಡ್. ಭಾರತ ಎ ಕ್ರಿಕೆಟ್ ತಂಡ ಹಾಗೂ ಅಂಡರ್ 19 ತಂಡದ ಮುಖ್ಯ ಕೋಚ್.
ಪದಾರ್ಪಣೆ ಪಂದ್ಯದಲ್ಲಿ ಶತಕ ಭಾರಿಸಿದ ಪೃಥ್ವಿ ಶಾ ಮೊದಲು ಪೋನ್ ಮಾಡಿದ್ದು ದ್ರಾವಿಡ್‌ಗೆ, ನನ್ನ ಆಟ ಉತ್ತಮವಾಗಲು, ಫಾರ್ಮಿಗೆ ಮರಳಲು ಕಾರಣವಾದದ್ದು ಗುರು ರಾಹುಲ್ ದ್ರಾವಿಡ್ ಎಂದು ಹೇಳಿದ್ದು ಮಯಾಂಕ್ ಅಗರ್ವಾಲ್, ಟೆಸ್ಟ್ಗೆ ಆಯ್ಕೆಯಾಗಿ ಅರ್ಧ  ಶತಕ ಭಾರಿಸಿದ ಹನುಮ ವಿಹಾರಿ ಧನ್ಯವಾದ ಸಲ್ಲಿಸಿದ್ದು ಗುರು ದ್ರಾವಿಡ್‌ಗೆ, ಅಷ್ಟೇ ಏಕೆ, ಭಾರತ ಟೆಸ್ಟ್  ತಂಡದ ಮಧ್ಯಮ ಕ್ರಮಾಂಕದ ಖಾಯಂ ಆಟಗಾರ ತಮ್ಮ ಫಾರ್ಮ್ ಕಳೆದುಕೊಂಡಾಗೆಲ್ಲ ಸಲಹೆ ಪಡೆಯುವುದು ದ್ರಾವಿಡ್ ಬಳಿಯೇ.
ದ್ರಾವಿಡ್ ಎಂಬ ಕ್ರಿಕೆಟ್ ಲೋಕದ ಮಹಾ ಗುರುವಿನ ಕುರಿತು ಹೆಚ್ಚು ಹೇಳಬೇಕಾಗಿಲ್ಲ. ಈ ಮೇಲಿನ ಅಭಿಪ್ರಾಯಗಳೇ ದ್ರಾವಿಡ್ ಕಲಿಸುವಿಕೆಯನ್ನು ತಿಳಿಸಿ ಹೇಳುತ್ತವೆ.
ರಾಹುಲ್ ದ್ರಾವಿಡ್. ಕೆಲವೇ ವರ್ಷಗಳ ಹಿಂದೆ ಭಾರತದ ಪಾಲಿಗೆ ದಿ ವಾಲ್ ಆಗಿದ್ದವರು. ಕಲಾತ್ಮಕತೆಗೆ, ನಂಬಿಕೆಗೆ, ನಿರಂತರ ಪ್ರದರ್ಶನಕ್ಕೆ ಇನ್ನೊೊಂದು ಹೆಸರಾಗಿದ್ದವರು. ಟೆಸ್ಟ್  ಕ್ರಿಕೆಟ್‌ನಲ್ಲಿ  ಭಾರತದ ತಂಡದ ರಕ್ಷಕನಾಗಿ, ಆಪದ್ಭಾಾಂಧ ವನಾಗಿದ್ದವರು. ಎಲ್ಲ ನಂಬಿಕಸ್ಥ ಬ್ಯಾಟ್‌ಸ್‌‌ಮನ್‌ಗಳು ವಿಲವಾದ ಸಂದರ್ಭದಲ್ಲೂ ದ್ರಾವಿಡ್, ನಾನಿದ್ದೇನೆ ಎಂದು ತಂಡಕ್ಕಾಗಿ ಏಕಾಂಗಿಯಾಗಿ ಹೋರಾಡಿದವರು. ಹಲವು ಟೆಸ್‌ಟ್‌ ಹಾಗೂ ಏಕದಿನ ಪಂದ್ಯಗಳನ್ನು ಭಾರತದ ಪಾಲಿಗೆ ಉಳಿಸಿಕೊಟ್ಟವರು. ಇಂತಹ ದ್ರಾವಿಡ್ ನಿವೃತ್ತಿಯಾದಾಗ ಭಾರತದ  ಪಾಲಿಗೆ ಮುಂದೇನು ಎನ್ನುವ ಪ್ರಶ್ನೆಗಳು ಕಾಡಿದ್ದು ಸುಳ್ಳಲ್ಲ.
ಕ್ರಿಕೆಟ್ ಅಂಗಣದಿಂದ ನಿವೃತ್ತಿಯಾದರೇನಂತೆ ನನ್ನಂತಹ ಹಲವು ದ್ರಾವಿಡ್‌ರನ್ನು ಸೃಷ್ಟಿ ಮಾಡಿಕೊಡುತ್ತೇನೆ ಎಂದು ನಿಲುವು ತಾಳಿದ್ದು ಇದೇ ದಿ ವಾಲ್. ಆಟಗಾರನಾಗಿ ವಿದಾಯ ಹೇಳಿದ್ದರೂ ತರಬೇತುದಾರನಾಗಿ ಭಾರತದ  ಪಾಲಿಗೆ ಮತ್ತದೇ ಆಪದ್ಬಾಾಂಧವನ ಪಾತ್ರ ವಹಿಸುತ್ತಿರುವವನು ದ್ರಾವಿಡ್.
ಸುಮ್ಮನೇ ಗಮನಿಸಿ, ಅದೆಷ್ಟೋ ಯುವಕರು ಭಾರತ  ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ತುದಿಗಾಲಲ್ಲಿದ್ದಾರೆ. ಮತ್ತೆ ಹಲವರು ತಮ್ಮ ಬ್ಯಾಟಿಂಗ್ ಪ್ರತಿಭೆಯ ಮೂಲಕ ರಾಷ್ಟ್ರೀಯ ತಂಡದ ಕದವನ್ನು ತಟ್ಟುತ್ತಿದ್ದಾರೆ. ಮೊದಲಿನಂತೆ ಯಾವುದೇ ಆಟಗಾರ ವಿಫಲನಾದರೆ ಯಾರನ್ನು ಹುಡುಕುವುದು ಎನ್ನುವ ಪ್ರಶ್ನೆ ಇದೀಗ ಆಯ್ಕೆ ಮಂಡಳಿಯನ್ನು ಕಾಡುವುದಿಲ್ಲ. ದ್ರಾವಿಡ್ ಹಲವು ಆಟಗಾರರನ್ನು ಬದಲಿಯಾಗಿ ರೂಪಿಸಿ ಇಟ್ಟಿದ್ದಾರೆ. ಇದೇ ದ್ರಾವಿಡ್ ತಾಕತ್ತು.
ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ರಿಷಬ್ ಪಂಥ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅನುಕೂಲ್ ರಾಯ್, ಹನುಮ ವಿಹಾರಿ, ಶುಬ್‌ಮನ್ ಗಿಲ್, ಮನ್‌ಜ್ಯೋತ್ ಕಲ್ರಾ, ಹಿಮಾಂಶು ರಾಣಾ... ದ್ರಾವಿಡ್ ಗರಡಿಯಲ್ಲಿ ಪಳಗಿ, ಬೆಳಗಿದವರ ಲೀಸ್‌ಟ್‌ ಹೀಗೆಯೇ ಮುಂದುವರಿಯುತ್ತದೆ. ಮುಂದುವರಿಯುತ್ತಲೇ ಇದೆ ಬಿಡಿ.
ದ್ರಾವಿಡ್ ಭಾರತದ ಎ ತಂಡದ ಹಾಗೂ ಅಂಡರ್ 19 ತಂಡದ ಕೋಚ್ ಆಗಿದ್ದಾಗ, ಅವರು ಹಿರಿಯರ ತಂಡದ ಕೋಚ್ ಆಗಬೇಕಿತ್ತು ಎಂದು ಬಯಸಿದವರು ಅನೇಕರು. ಆ ಸಂದರ್ಭದಲ್ಲಿ  ಅಂತಹ ಆಫರ್‌ನ್ನು ನಯವಾಗಿ ತಿರಸ್ಕರಿಸಿದ ದ್ರಾವಿಡ್, ಕ್ರಿಕೆಟ್ ಲೋಕದ ಯುವ ಮನಸ್ಸುಗಳನ್ನು ಮಾಗಿಸುವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಷ್ಟೇ ಅಲ್ಲ, ಗೆಲುವು ಸಾಸುವ ಜತೆ ಹೇಗೆ ಸಂಭ್ರಮಿಸಬೇಕು ಎಂಬುದನ್ನೂ ಹೇಳಿಕೊಟ್ಟರು. ಅಪ್ಘಾನಿಸ್ಥಾನದಂತಹ ತಂಡಗಳು ಅಚ್ಚರಿಯ ಹಾಗೂ ಗುಣಮಟ್ಟದ ಕ್ರಿಕೆಟ್ ಪ್ರದರ್ಶನ ನೀಡಿದಾಗೆಲ್ಲ ಅಂತವರ ಬೆನ್ನಿಗೆ ನಿಂತು ಶ್ಲಾಘಿಸುವ ಕಾರ್ಯವನ್ನೂ ಕೈಗೊಂಡು ಆದರ್ಶ ಮೆರೆದರು.
ದ್ರಾವಿಡ್ ಕ್ರಿಕೆಟ್ ಕೋಚ್ ಆಗಿ ಅಷ್ಟೇ ಕಾರ್ಯ ನಿರ್ವಹಿಸಲಿಲ್ಲ. ಬದಲಾಗಿ ಅಥ್ಲೆಟಿಕ್‌ಸ್‌‌ನ ಪ್ರತಿಭೆಗಳ ಬೆನ್ನಿಗೆ ನಿಲ್ಲುವ ಕಾರ್ಯವನ್ನೂ ಮಾಡಿದರು. ಏಷ್ಯನ್ ಗೇಮ್‌ಸ್‌‌ನಲ್ಲಿ ಪದಕ ಗೆದ್ದ ಸ್ವಪ್ನ ಬರ್ಮನ್‌ಳಂತಹ ಹಲವು ಪ್ರತಿಭೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ತಾನು ಎಲ್ಲರಿಗಿಂತ ಭಿನ್ನ ಎಂಬುದನ್ನು ನಿರೂಪಿಸಿದರು.
ದ್ರಾವಿಡ್ ಶಿಷ್ಯರು ಇದೀಗ ಭಾರತದ ಕ್ರಿಕೆಟ್ ತಂಡದ ಆಧಾರ ಸ್ಥಂಭವಾಗುವಂತಹ ಹಂತ ತಲುಪಿದೆ. ದ್ರಾವಿಡ್ ಹುಡುಗರು ಇದೀಗ ಸದ್ದು ಮಾಡುತ್ತಿದ್ದಾರೆ. ಹೀಗೆಯೇ ಮುಂದುವರಿದಲ್ಲಿ, ಮುಂದಿನ ದಿನಗಳಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಭಾರತ ತಂಡಕ್ಕೆ ಆಯ್ಕೆ ಆದ ಸಂದರ್ಭದಲ್ಲಿ ತನ್ನ ಈ ಸಾಧನೆಗೆ ದ್ರಾವಿಡ್ ತರಬೇತಿ ಹಾಗೂ ಸಲಹೆಯೇ ಕಾರಣ ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಇದ್ದರೆ ಇರಬೇಕು ಇಂತಹ ಗುರು ಎಂಬಂತಾಗಿದೆ.

No comments:

Post a Comment