Tuesday, May 19, 2015

ಕರೆ

ಹೇ ಯುವಕ ಸಾಧಿಸು
ಫಲ ಸಿಗುವ ವರೆಗೆ ಸಾಧಿಸು
ಗುರಿ ತಲುಪುವ ವರೆಗೆ ಸಾಧಿಸು
ಜೀವ ವಿರುವ ವರೆಗೂ ಜಯಿಸು ||

ಕಲ್ಲು ಮುಳ್ಳುಗಳ ದಾರಿ
ಈ ಬಾಳಿನೊಳು ತುಂಬಿಹುದು
ಅವನೆಲ್ಲ ಸರಿಸಿ ಪಕ್ಕಕ್ಕಿಟ್ಟು ನೀ
ಲೋಕದೊಳು ಜಯಗಳಿಸು ||

ಈ ಜೀವನವೊಂದು ಸ್ಪರ್ಧೆ
ಗೆಲುವೊಂದೆ ಬಾಳಿನ ಗುರಿ
ಕೊನೆಯ ಜಯವ ಪಡೆದು ನಿಲ್ಲಲು
ಅತಿಮ ಚರಣದವರೆಗೂ ಸಾಧಿಸು ||

ದುಃಖ ನಿರಾಸೆ ಬಾಳಿನಲಿ
ತುಂಬಿಹುದು ಪ್ರತಿ ಕ್ಷಣದಲಿ
ಅವುಗಳೆಲ್ಲವ ತಾಳುಮೆಯಿಂದ
ಜಯಿಸು ನೀ ಜಗದಲಿ ||

****
(ಈ ಕವಿತೆಯನ್ನು ಬರೆದಿರುವುದು 15-03-2004ರಂದು ದಂಟಕಲ್ಲಿನಲ್ಲಿ)
(11 ವಸಂತಗಳ ಹಿಂದೆ ಬರೆದ ಈ ಕವಿತೆ ನನ್ನ ನನ್ನ ಬರವಣಿಗೆಯ ಪಯಣದ ನಾಲ್ಕನೇ ಕವಿತೆ. ಮೊದಲ ತೊದಲು ಹೀಗಿದೆ ನೋಡಿ)

No comments:

Post a Comment