Wednesday, September 18, 2013

ಆಶಯ


ಜಾರಿಬಿಡಲಿ ಕಣ್ಣಬಿಂದು
ನೋವ ಮರೆಸುವಲ್ಲಿ
ಚಿಮ್ಮಿ ಬರಲಿ ನಗುವ ಬುಗ್ಗೆ
ನೋವ ನಗಿಸುವಲ್ಲಿ..||

ಕಳೆದಾಗಿದೆ ನೂರು ಕಷ್ಟ
ಮುಂದೆ ಇರಲಿ ನಲಿವ ಬೆಟ್ಟ
ಬಾಳಬುತ್ತಿ ಅರಳೋಮುನ್ನ
ಜಾರಿ ಬಿಡಲಿ ಕಣ್ಣಬಿಂದು..||

ನಲಿವು ಬಾಳ ಸ್ವಪ್ನದಂತೆ
ಮನವ ಮೆರೆಸುತಿರುವುದು
ನೂರು ನೋವು ಎದುರುಬರಲಿ
ನಲಿವು ಹಿಂದೆ ಬರುವುದು..||

(ಇದನ್ನು ಬರೆದಿದ್ದು 23-10-2006ರಂದು ದಂಟಕಲ್ಲಿನಲ್ಲಿ )
(ಈ ಕವಿತೆಯನ್ನು ತಂಗಿ ಸುಪರ್ಣ ಹಾಗೂ ಪೂರ್ಣಿಮಾ ಅವರು ರಾಗ ಹಾಕಿ ಹಾಡಿದ್ದಾರೆ.. ಅವರಿಗೆ ಧನ್ಯವಾದಗಳು..)
(ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ 23-01-2008ರಂದು ವಾಚಿಸಲಾಗಿದೆ. 
ಜೂನ್-ಜುಲೈ 2009ರ ಚೈತ್ರರಶ್ಮಿಯಲ್ಲಿ ಪ್ರಕಟವಾಗಿದೆ)

No comments:

Post a Comment