Saturday, September 13, 2014

ಹರಟೆ

ಒಂದು ಇತಿಹಾಸ

ಇತ್ತೀಚೆಗೆ ಪರಿಚಯದವರ ಜೊತೆಗೆ ಮಾತನಾಡುತ್ತಿದ್ದೆ.
ಅವರೊಂದು ಇಂಟರೆಸ್ಟಿಂಗ್ ವಿಷಯವನ್ನು ತಿಳಿಸಿದರು.

ಶಿರಸಿ ತಾಲೂಕಿನ ಕರೂರಿನಲ್ಲಿ ಒಂದು ಕೋಟೆಯಿರುವ ವಿಷಯ ನನಗೆ ಬಾಲ್ಯದಿಂದಲೇ ತಿಳಿದಿದೆ.
ದಿನದಿಂದ ದಿನಕ್ಕೆ ಈ ಕೋಟೆ ನನ್ನಲ್ಲಿ ಅಪಾರ ಕುತೂಹಲವನ್ನೂ ಹುಟ್ಟುಹಾಕಿತ್ತು.
ಅದನ್ನು ನೋಡಬೇಕು ಎಂದುಕೊಂಡು ಎಂದು ಹಲವು ಸಾರಿ ಕರೂರಿನ ಕಡೆಗೆ ಪಯಣ ಬೆಳೆಸಿದ್ದೆ.
ಆದರೆ ಕಾರಣಾಂತರಗಳಿಂದ ಆಗಲಿಲ್ಲ.
ನಮ್ಮ ಮಾತು ಕರೂರಿನ ಗೌಡರಾಳ್ವಿಕೆಯ ಕಡೆಗೆ ಸರಿಯಿತು.
ಕರೂರಿನ ಗೌಡರು ಸೋದೆಯ ಅರಸರ ಸಾಮಂತರು ಎಂದು ತಿಳಿಸಿದರು ಅವರು.
ಅವರ ಕೋಟೆ ಸೋಂದಾ ಕೋಟೆಯಂತೆ ಇದೆ ಎನ್ನುವ ಮಾಹಿತಿ ತಿಳಿಸಿ ಕೋಟೆಯ ಸುತ್ತ ಮಾಸ್ತಿಗಲ್ಲುಗಳು, ವೀರಗಲ್ಲುಗಳೂ ಇವೆ. ಸ್ಥಳೀಯವಾಗಿ ಪ್ರಭುದೇವರು, ಆಂಜನೇಯನ ಗುಡಿಯನ್ನು ನಿರ್ಮಾಣ ಮಾಡಿದ್ದು ಇವರೇ ಎಂಬ ಮಾಹಿತಿಯನ್ನು ಅವರು ನೀಡಿದರು. 
ನನಗೆ ಕುತೂಹಲಗೊಂಡು ಕೇಳಿದೆ. 
ನನ್ನೂರಿನಿಂದ ಕರೂರು ನಾಲ್ಕು ಕಿ.ಮಿ.
ಕರೂರಿನ ದಿಕ್ಕಿನಲ್ಲಿ ಸಮಾ ವಿರುದ್ಧವಾಗಿ ನಾಲ್ಕು ಕಿ.ಮಿ ಹೋದರೆ ಬಾಳೂರು.
ಅಲ್ಲೂ ಒಂದು ಕೋಟೆಯಿತ್ತು. ಅಲ್ಲೂ ಗೌಡರ ಆಳ್ವಿಕೆಯಿತ್ತು. ಈಶ್ವರ, ಸುಬ್ರಹ್ಮಣ್ಯ, ಗಣಪತಿಯ ದೇವಾಲಯ ಕಟ್ಟಿಸಿದವರು ಅವರು. ಹೆಸರಾಂತ ಗುಡ್ಡೇತೋಟದ ಕೋಟೆ ವಿನಾಯಕನ ದೇವಾಲಯ ಕಟ್ಟಿದ್ದು ಇದೇ ಗೌಡರು.
ನನ್ನೂರು ಬಾಳೂರು ಗೌಡರ ಆಳ್ವಿಕೆಗೆ ಬರುತ್ತಿತ್ತೋ ಅಥವಾ ಕರೂರು ಗೌಡರ ಅಧೀನಕ್ಕೆ ಬರುತ್ತಿತ್ತೋ ಎಂಬುದು ನನ್ನೊಳಗಿನ ಕುತೂಹಲವಾಗಿ ಅವರ ಬಳಿ ಕೇಳಿದೆ.
ಅದಕ್ಕವರು ಗೊತ್ತಿಲ್ಲ ಎಂದರು. ಕೊನೆಗೆ ಯಾರದ್ದೇ ಆಳ್ವಿಕೆಗೆ ಬರಲಿ. ಸೋದೆ ಅರಸರ ಸಾಮಂತರು ಇವರಾದ ಕಾರಣ ಸೋದೆ ಅರಸರ ಅಧೀನಕ್ಕೆ ಬರುತ್ತದೆ ಎಂದರು. ನಾನು ಹುಂ ಎಂದು ಸುಮ್ಮನಾದೆ.

ಕರೂರು ಅರಸರ ಬಗ್ಗೆ ಇನ್ನೊಂದು ವಿಷಯವನ್ನು ಅವರು ತಿಳಿಸಿದರು.
ಕರೂರು ಅರಸ ತನ್ನ ಮಗಳನ್ನು ಆಂದ್ರಪ್ರದೇಶದ ನಾಗಾರ್ಜುನಕೊಂಡಕ್ಕೆ ಮದುವೆ ಮಾಡಿಕೊಟ್ಟಿದ್ದನಂತೆ.
ಕರೂರು ಅರಸನ ಮಗಳ ಮನೆತನದವರು ಇಂದಿಗೂ ಇದ್ದಾರಂತೆ ಎಂದರು.
ನನಗೆ ಅಚ್ಚರಿಯಾಯಿತು. ಅವರನ್ನು ಹುಡುಕಿ ಹೋಗುವ ಸಾಹಸ ಮಾಡುವ ತುಡಿತ ಹುಟ್ಟಿತು.
ಸುಮ್ಮನೇ ಕೇಳಿದೆ.
`ಅಲ್ಲಾ ಮಾರಾಯ್ರೆ.. ಈಗ ಬಸ್ಸು ಕಾರುಗಳಿವೆ. ಅವುಗಳ ಮೇಲೆ  ಕರೂರಿನಿಂದ ಅಜಮಾಸು 500 ಕಿ.ಮಿ ದೂರವಿರುವ ನಾಗಾರ್ಜುನ ಕೊಂಡಕ್ಕೆ ಹೋಗಿ ಹುಡುಕಿ ಅದ್ಹೇಗೆ ಮಗಳನ್ನು ಕೊಟ್ಟರು? ಅಲ್ಲ ಅವರು ಕುದುರೆ ಮೇಲೆ ಹೋದರು ಕನಿಷ್ಟ ಒಂದು ವಾರ ಬೇಕಲ್ಲ. ಇನ್ನು ನಡೆದುಕೊಂಡು ಹೋದರೆ ಒಂದು ತಿಂಗಳೇ ಬೇಕು. ನಡುವೆ ಕೃಷ್ಣಾ, ತುಂಗಭದ್ರಾ ನದಿಗಳು ಸಿಗುತ್ತವೆ. ಆಗ ಆ ನದಿಗಳು ಈಗಿನದ್ದಕ್ಕಿಂತ ಹೆಚ್ಚು ಅಬ್ಬರಿಸುತ್ತ ಹರಿಯುತ್ತಿದ್ದವು. ಅದನ್ನು ಹೇಗೆ ದಾಟಿದರು? ಅಲ್ಲ ಕರೂರಿನ ಗೌಡರು ನಾಗಾರ್ಜುನ ಕೊಂಡದ ವರೆಗೆ ಹೋಗಿ ತಮ್ಮ ಮಗಳಿಗೆ ಅನುರೂಪ ಗಂಡನ್ನು ಹುಡುಕಿ, ಆ ಗಂಡು ಅಲ್ಲಿಂದ ಇಲ್ಲಿಗೆ ಬಂದು ಹೆಣ್ಣು ನೋಡಿ, ಮದುವೆ ನಿಶ್ಚಯಿಸಿ, ಮದುವೆಯಾಗಿ ಮತ್ತೆ ಮರಳಿ ಹೋಗಲು ಏನಿಲ್ಲವೆಂದರೂ ಕನಿಷ್ಟ ಮೂರ್ನಾಲ್ಕು ತಿಂಗಳೇ ಬೇಕಾಗಿರಬಹುದಲ್ಲವೇ? ಇನ್ನು ತಂದೆ-ತಾಯಿ ಮಗಳನ್ನು ನೋಡಲು ಹೋಗಬೇಕು ಅಥವಾ ಮಗಳು ತವರಿಗೆ ಮರಳಬೇಕು ಎಂದರೆ ಮತ್ತೆ ತಿಂಗಳುಗಟ್ಟಲೆ ಪಯಣ ನಡೆಯಲೇಬೇಕು.. ಎಂತಾ ಕಾಲ ಮಾರಾಯ್ರೆ..' ಎಂದೆ.
ಅವರೂ ಹೌದು.. ಎಂದು ವಿಸ್ಮತರಾದರು.

ಕೊನೆಗೆ ಮೊನ್ನೆ ಇದೇ ವಿಷಯವನ್ನು ಶಿರಸಿಯ ಇತಿಹಾಸ ತಜ್ಷ ಲಕ್ಷ್ಮೀಶ ಹೆಗಡೆ ಅವರ ಮುಂದಿಟ್ಟೆ.
ಅವರು ಹೇಳಿದ್ದು `ಅಲ್ಲ ಗಂಡನ್ನು ಹುಡುಕಿಕೊಂಡು ಕರೂರು ಗೌಡರು ನಾಗಾರ್ಜುನ ಕೊಂಡಕ್ಕೆ ಹೋದರು ಅಂತ ಹೇಗೆ ಭಾವಿಸುತ್ತೀರಿ? ಸೋದೆ ಅರಸರಿಗೆ ನಾಗಾರ್ಜುನ ಕೊಮಡದ ಅರಸರ ಮಿತ್ರರಿದ್ದು ಕರೂರು-ನಾಗಾರ್ಜುನಕೊಂಡದ ನಡುವೆಯೆಲ್ಲೋ ಭೇಟಿಯಾಗಿ, ಸ್ನೇಹ ಬೆಳೆದು ಕರೂರು ಅರಸರು ಮಗಳ ಮದುವೆ ಪ್ರಸ್ತಾಪ ಮಾಡಿರಬಹುದಲ್ಲ.. ಹಾಗೆಯೇ ಅಲ್ಲಿಂದಲೇ ಬಂದು ಮದುವೆ ಮಾಡಿಕೊಂಡು ಹೋಗಿರಬಹುದು..' ಎಂದರು.
ನನಗೆ ಹೌದಲ್ಲ ಅನ್ನಿಸಿತಾದರೂ ಅರಸರ ಮಗಳು ತವರಿಗೆ ಬರುವುದು ಹಾಗೂ ಕರೂರು ಅರಸರು ನಾಗಾರ್ಜುನ ಕೊಂಡಕ್ಕೆ ಮಗಳ ನೋಡುವುದನ್ನು ಹೋಗುವುದರ ಬಗ್ಗೆ ಕೇಳಿದೆ.
ಅದಕ್ಕವರು `ಆಗ ಕುದುರೆಗಳೇ ಸಂಚಾರಕ್ಕೆ ಬಳಕೆಯಾಗುತ್ತಿದ್ದವು. ಕುದುರೆಗಳು ನಮ್ಮ ಕಾರುಗಳಿಗಿಂತ ವೇಗವಾಗಿ ಓಡಬಲ್ಲ ತಾಕತ್ತು ಹೊಂದಿವೆ. ಈಗಿನದಕ್ಕಿಂತ ಮೂರ್ನಾಲ್ಕು ದಿನಗಳು ವಿಳಂಬವಾಗಿ ಆಗಿನ ಪ್ರಯಾಣ ಇರುತ್ತಿತ್ತು. ತೀರಾ ತಿಂಗಳುಗಟ್ಟಲೆ ಪ್ರಯಾಣ ನಡೆಯುವುದಿಲ್ಲ.. ಕುದುರೆಗಳು ಸಲೀಸಾಗಿ ನದಿ ದಾಟುತ್ತವೆ..' ಎಂದರು. ಅವರ ಉತ್ತರ ನನಗೆ ಸಮಾಧಾನ ತಂದಿತ್ತು.


ಆದರೆ ನಾಗಾರ್ಜುನ ಕೊಂಡದಲ್ಲಿ ಇರುವ ಕರೂರು ಗೌಡರ ಮಗಳ ಕುಟುಂಬಸ್ಥರನ್ನು ಹುಡುಕುವ ಹಂಬಲ ಮನಸ್ಸಿನಲ್ಲಿ ಮೂಡುತ್ತಿದೆ. ನಾಗಾರ್ಜುನ ಕೊಂಡ ಸೆಳೆಯುತ್ತಿದೆ. 

********


`ಅಣಾ ನಾನೊಂದು ಧಾರವಾಹಿ ಮಾಡೋಣ ಅಂತಿದ್ದೇನೆ' ಎಂದಳು ತಂಗಿ.
`ಎಂತದ್ದೇ ಅದು?' ಎಂದೆ ನಾನು.
`ವಿನಯನ ಲೈಫ್ ಸ್ಟೋರಿ ಅಂತ ಮಾಡೋಣ ಅಂದುಕೊಂಡಿದ್ದೇನೆ' ಎಂದಳವಳು.
`ಶಿ.. ಬ್ಯಾಡ.. ನನ್ ಲೈಫ್ ಸ್ಟೋರಿ ಅಷ್ಟು ಇಂಟರೆಸ್ಟಿಂಗ್ ಆಗಿಲ್ಲ. ಟಿ.ಆರ್.ಪಿ. ಬರೋದಿಲ್ಲ.. ಬ್ಯಾಡ..ಬಿಡು' ಎಂದೆ.
`ಅಯ್ಯೋ.. ಮಾರಾಯಾ.. ಯಾರಂದಿದ್ದು ನಿನ್ ಲೈಫ್ ಸ್ಟೋರಿ ಅದರಲ್ಲಿ ಇರ್ತದೆ ಅಂತ?' ಎಂದಳು ಅವಳು.
`ಮತ್ತೆ... ನನ್ ಹೆಸರು ಇಟ್ಟಿದ್ದೀಯಲ್ಲೆ...' ಎಂದೆ.
`ಅಯ್ಯೋ ಮಾರಾಯಾ.. ಹೆಸರಷ್ಟೇ ವಿನಯನ ಲೈಫ್ ಸ್ಟೋರಿ ಅಂತ. ಕಥೆಯಲ್ಲೆಲ್ಲೂ ನೀನು ಬರೋದಿಲ್ಲ. ನಿನಗೆ ಸಂಬಂಧಿಸಿದ್ದೂ ಅಲ್ಲ. ಒಂದು ಕೌಟುಂಬಿಕ ಧಾರವಾಹಿ ಅದು. ಸುಮ್ನೆ ನೆಪಕ್ಕಷ್ಟೆ ನಿನ್ ಹೆಸರು.' ಎಂದಳವಳು.
ನಾನು ಪೆಚ್ಚಾಗಿ ನೋಡುತ್ತಿದ್ದಾಗಲೇ ಅವಳು ಮುಂದುವರಿಸಿದಳು `ಅಲ್ಲಾ.. ಈಗಿನ ಎಷ್ಟೋ ಸಿನಿಮಾಗಳನ್ನು ನೋಡು ಕತೆಗೂ ಟೈಟಲ್ಲಿಗೂ ಸಂಬಂಧವೇ ಇರೋದಿಲ್ಲ. ಎಂತದ್ದೋ ಕಥೆ ಇನ್ನೆಂತದ್ದೋ ಹೆಸರು. ಹಂಗೆ ಈ ಧಾರವಾಹಿ ಕೂಡ. ಹೆಸರಷ್ಟೇ ನಿಂದು. ಕಥೆ ಇನ್ನೇನೋ. ನಿಂಗೆ ಬೇಜಾರಾಗ್ತದೆ ಅಂತಾದ್ರೆ ಎಲ್ಲಾದರೂ ಧಾರವಾಹಿಯ ಒಂದೆರಡು ಸಾಲಲ್ಲಿ ನಿನ್ನ ಲೈಫು ಅನ್ನೋ ಒಂದೆರಡು ಸಾಲಿನ ಡೈಲಾಗು ಸೇರಿಸಿಬಿಡ್ತೀನಿ.. ಥೇಟು ಈಗಿನ ಕನ್ನಡ ಸಿನೆಮಾಗಳಲ್ಲಿ ಬರೋ ಥರಾ..' ಎಂದಳು.
ನಾನು ಪೆಚ್ಚಾದೆ. ತಂಗಿ ನಕ್ಕಳು..!



********


ವಾದ್ರಾ ಬಿಸಿನೆಸ್. :

2004ರಿಂದ2014ರ ನಡುವೆ ಪಂಜಾಬಿನಲ್ಲಿ ನಾನು ತಗೊಂಡಿದ್ದ ನೂರಾರು ಎಕರೆ ಜಮೀನಿತ್ತು.
ನನ್ನಲ್ಲಿ ಸಿಕ್ಕಾಪಟ್ಟೆ ಅಕೌಂಟ್ಸ್ ಇತ್ತು ಆದ್ರೂ ದುಡ್ಡು ಬೇಕಿತ್ತು.
ತಕ್ಷಣ ನನ್ನ ಮೊಬೈಲಿನಲ್ಲಿ ನನ್ನ ಜಮೀನಿನ ಐದಾರು ಪೋಟೋ ತೆಗೆದೆ.
ಮೋಬೈಲಿನಲ್ಲಿ OLX appsನ ಡೌನ್ ಲೊಡ್ ಮಾಡದೆ.
ಪೋಟೋ ಅಪ್ಲೋಡ್ ಮಾಡದರೆ `ಬಿಟ್ಟಿ ಜಮಿನು ಬೇಕಾದವ್ರು ತಗೋಳಿ..' ಅಂತ ಕ್ಯಾಚಿ ಟೈಟಲ್ ಕೊಟ್ಟೆ
ಶೇರ್ ಮಾಡದೆ.. ನಾನ್ ಶೇರ್ ಮಾಡಿದ ಅರ್ಧ ಗಂಟೇಲೆ ಹೆಸರಾಂತರಿಂದ, ಖ್ಯಾತನಾಮರಿಂದ, ವಿದೇಶಿಯರಿಂದೆಲ್ಲ ಪೋನ್ಸ್ ಬರೋಕೆ ಶುರುವಾಯ್ತು.
ಒಂದಿಬ್ಬರು ಒಳ್ಳೆ ರೇಟಿಗೆ ಜಮೀನು ತಗೋಳೋಕೆ ತಯಾರಾಗಿದ್ರು.
ನಾನು ಅವರಿಗೆ ಕೂಡಲೇ ಜಮೀನು ಮಾರಿಬಿಟ್ಟೆ.
ಬಂದ ದುಡ್ಡಲ್ಲಿ ಅರ್ಧ ಅತ್ತೆಗೆ ಕೊಟ್ಟೆ.

ಈ ನಡುವೆ ಹೆಂಗೆ ಮಾರಾಟ ಮಾಡ್ಬೇಕು ಗೊತ್ತಾ?
OLX..!!

No comments:

Post a Comment