Monday, July 30, 2018

ಸಾಲು ಸಾಲು ಅವಮಾನಗಳನ್ನೆದುರಿಸಲು ಆಕೆ ಮಾಡಿದ ಮಹಾಪಾಪವಾದರೂ ಏನು?

ಇತ್ತೀಚಿನ ದಿನಗಳಲ್ಲಿ ಕಾಂಗಿ ಹಿಂಬಾಲಕರಿಂದ ಸತತ ಅವಮಾನಕ್ಕೊಳಗಾಗುತ್ತಿರುವ ಮಹಿಳೆಯರಲ್ಲಿ ಜಶೋದಾ ಬೆನ್ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಕಾರಣವಿಲ್ಲದೇ, ಟೀಕಿಸಲೇಬೇಕು ಎನ್ನುವ ಕಾರಣಕ್ಕೆ ದೋಷಾರೋಪಣೆಯನ್ನು ಮಾಡುತ್ತಿರುವ ಕಾಂಗಿಗಳು ಸುಖಾಸುಮ್ಮನೆ ಜಶೋದಾ ಬೆನ್ ಹೆಸರನ್ನು ಅಲ್ಲಿ-ಇಲ್ಲಿ ಎಳೆದು ತರುವ ಮೂಲಕ ಅವರ ಮನಸ್ಸಿಗೆ ಘಾಸಿಯನ್ನು ಎಸಗುವ ಕಾರ್ಯ ಕೈಗೊಳ್ಳುತ್ತಿದ್ದಾರೆ.

ಬಾಲ್ಯದಲ್ಲಿ ಅಂದರೆ ಕೇವಲ ಮೂರೋ ಅಥವಾ ನಾಲ್ಕೋ ವರ್ಷಗಳ ಪ್ರಾಯದಲ್ಲಿದ್ದಾಾಗ ಜಶೋದಾ ಬೆನ್‌ರನ್ನು ನರೇಂದ್ರ ಮೋದಿ ವರಿಸಿದ್ದರು. ಆ ಸಂದರ್ಭದಲ್ಲಿ  ನರೇಂದ್ರ ಮೋದಿ ಅವರಿಗಾದ ವಯಸ್ಸಾದರೂ ಎಷ್ಟು ಅಂತೀರಿ? ಕೇವಲ 13. ಮದುವೆ, ಹೆಂಡತಿ, ಸಂಸಾರ ಇತ್ಯಾದಿಗಳ ಕುರಿತಂತೆ ಚಿಕ್ಕ ಭಾವನೆಯೂ ಮೊಳೆತಿರದಂತಹ ವಯಸ್ಸು ಅದು. ಬುದ್ಧಿ ಬಲಿತ ನಂತರ ಮೋದಿ ತೆಗೆದುಕೊಂಡ ನಿರ್ಧಾರವಾದರೂ ಎಂತಹುದು? ನವ ಭಾರತ ನಿರ್ಮಾಣ. ಭವ್ಯ ಭಾರತಕ್ಕಾಗಿ ರಾಷ್ಟ್ರ ಜಾಗೃತಿ ಮೂಡಿಸುವ ಮಹತ್ಕಾರ್ಯ. ರಾಷ್ಟ್ರ ನಿರ್ಮಾಣದ ಧ್ಯೇಯೋದ್ದೇಶದಿಂದ ಪತ್ನಿಯಿಂದ ದೂರ ಬಂದ ಮೋದಿ ನಡೆ ಪ್ರಜ್ಞಾವಂತರಲ್ಲಿ ವಿಶೇಷ ಆದರಣೆಗೆ ಒಳಗಾಗುತ್ತಿದೆ. ರಾಷ್ಟ್ರ ನಿರ್ಮಾಣದ ಸಂಕಲ್ಪಕ್ಕಾಗಿ ಸಾಂಸಾರಿಕ ಜಂಜಡಗಳನ್ನು ಬಿಟ್ಟು ದೇಶಕ್ಕಾಗಿ ಜೀವ- ಜೀವನವನ್ನೇ ಮುಡಿಪಾಗಿಟ್ಟ ನರೇಂದ್ರರ ಈ ನಡೆಯನ್ನೇ ಕಾಂಗಿಗಳು ಕಾರಣವಿಲ್ಲದೆಯೇ ಟೀಕಿಸುತ್ತಿದ್ದಾಾರೆ. ಅದೂ ಯಾವ ರೀತಿ? ದೇಶಕ್ಕಾಾಗಿ ಅಭಿವೃದ್ಧಿ ಮಂತ್ರವನ್ನು ಜಪಿಸುವ ಮೋದಿ  ಪತ್ನಿಯನ್ನು ತ್ಯಜಿಸಿಲ್ಲವೇ, ಹೆಂಡತಿಯನ್ನು ಬೀದಿಗೆ ತಂದಿಲ್ಲವೇ? ಎಂದು ಹೀನವಾಗಿ ಚಿತ್ರಿಸುವ ಕಾಂಗಿ ಮನಸ್ಥಿತಿ, ರೋಗಗ್ರಸ್ಥ ಮನಸ್ಸುಗಳ ಪ್ರತೀಕವಲ್ಲದೇ ಬೇರೇನೂ ಅಲ್ಲ. ಬಹುಶಃ ಈ ಮನಸ್ಥಿತಿಯನ್ನು ಗ್ಯಾಾಂಗ್ರಿನ್ ಹುಣ್ಣಿಗೆ ಹೋಲಿಕೆ ಮಾಡಬಹುದು.

ಕಾಂಗಿಗಳಿಗೆ ತಮ್ಮ ಅಧಿನಾಯಕಿಯ ಮೂಲದ ಕುರಿತು ಯಾರಾದರೂ ಪ್ರಶ್ನಿಸಿದಾಗ, ಯುವರಾಜನ ಮದುವೆಯ ಕುರಿತು ಸಂದೇಹಗಳನ್ನು ವ್ಯಕ್ತಪಡಿಸಿದಾಗಲೆಲ್ಲ ಜಶೋದಾ ಬೇನ್ ಹೆಸರು ನೆನಪಾಗುತ್ತದೆ. ಇಟಲಿಯ ರಾಣಿ ತಮ್ಮ ಯವ್ವನದಲ್ಲಿ ಮಾಡಿದ್ದು ಸರಿ ಎನ್ನುವಂತೆ ಮಾತನಾಡುತ್ತಾರೆ. ಯುವರಾಜನಿಗೆ ಮದುವೆಯಾಗಿಲ್ಲ, ಏನಿವಾಗ ಎಂಬ ಧೋರಣೆಯಲ್ಲಿ ಮಾತನಾಡುತ್ತಾರೆ. ಅಷ್ಟೆಲ್ಲ ಹೇಳಿದ ನಂತರ ಇವ್ಯಾವುದಕ್ಕೂ ಸಂಬಂಧವೇ ಇಲ್ಲದಂತಹ ಮಹಾಸಾಧ್ವಿ  ಜಶೋದಾ ಬೆನ್‌ರನ್ನು ಎಳೆದು ತರುತ್ತಾರೆ. ಆಕೆಗೆ ಅನ್ಯಾಯವಾಗಿ ಹೋಗಿದೆ ಎಂದೂ ಹುಯ್ಯಲಿಡುತ್ತಾರೆ.

ಹಾಗೆ ನೋಡಿದರೆ ಕಾಂಗಿಗಳಿಗೆ ಜಶೋದಾ ಬೇನ್‌ರ ಹೆಸರನ್ನು ಸುಮ್ಮನೆ ಎತ್ತಲೂ ನೈತಿಕತೆ ಬೇಕಾಗುತ್ತದೆ. ಕಳೆದ 66 ವರ್ಷಗಳಿಂದಲೂ ಜಶೋದಾ ಬೇನ್ ಗೌರವಯುತವಾಗಿ, ಎಲ್ಲರಿಗೂ ಮಾದರಿಯಾಗಿ ಬದುಕುತ್ತಿದ್ದಾರೆ. ನೋಡಿದ ತಕ್ಷಣ ಕಾಲಿಗೆರಗಿ ನಮಸ್ಕರಿಸಬೇಕು ಎನ್ನುವಷ್ಟು ಭಕ್ತಿ ಉಕ್ಕುತ್ತದೆ. ಸಮಾಜಕ್ಕೆ ಪಾಠ ಮಾಡುವ, ನಾಳೆಯ ಪ್ರಜೆಗಳನ್ನು ಹುಟ್ಟು ಹಾಕುವ ಶಿಕ್ಷಕ ವೃತ್ತಿಯನ್ನು ಮೂರು ದಶಕಗಳ ಕಾಲ ತಪಸ್ಸಿನಂತೆ ಕೈಗೊಂಡು ಬದುಕಿದವರು ಜಶೋದಾ ಬೆನ್. ತಮ್ಮ ಬದುಕಿನ ಅವಯಲ್ಲಿ ಜಶೋದಾ ಬೇನ್ ಯಾವತ್ತಿಗೂ ಮೋದಿಯವರ ಬಳಿ ಕೈ ಚಾಚಿಲ್ಲ. ರಾಷ್ಟ್ರ ನಾಯಕ ತನ್ನ ಸಹಾಯಕ್ಕೆ ಬರಲಿ ಎಂದು ಕನಸಿನಲ್ಲೂ ಕನವರಿಸಿಲ್ಲ. ತನ್ನ ಪತಿ ರಾಷ್ಟ್ರದ ಪ್ರಧಾನಿ ಎಂಬ ಚಿಕ್ಕ ಗರ್ವದ ಲವಲೇಶವೂ ಅವರ ನಡೆ-ನುಡಿಯಲ್ಲಿ ಇಣುಕಿಲ್ಲ.

ಯಾವಾಗ ನರೇಂದ್ರ ಮೋದಿ 1992ರ ವೇಳೆಗೆ ಗುಜರಾತಿನಲ್ಲಿ ಪಕ್ಷ ಸಂಘಟನೆಗಾಗಿ ದೊಡ್ಡ ಮಟ್ಟದ ಅಭಿಯಾನಕ್ಕೆ ಮುಂದಾದರೋ, ಆವಾಗಿಲಿಂದಲೇ ಜಶೋದಾ ಬೇನ್‌ಗೆ ಅವಮಾನಗಳ ಸರಮಾಲೆ ಆರಂಭವಾಯಿತು ಎನ್ನಬಹುದು. ನರೇಂದ್ರ ಮೋದಿ ಬಿಜೆಪಿ ಸಂಘಟನೆಯನ್ನು ದೊಡ್ಡ ಮಟ್ಟದಲ್ಲಿ ಕೈಗೊಂಡಂತೆಲ್ಲ, ರಾಷ್ಟ್ರ ನಾಯಕ ಎಂದು ಬಿಂಬಿತವಾದಂತೆಲ್ಲ, ಮಾಧ್ಯಮಗಳು , ಕಾಂಗಿ ಬಾಲಗಳು ಜಶೋದಾ ಬೇನ್‌ರ ಹೆಸರಿಗೆ ಕೆಸರು ಎರಚುವ ಕಾರ್ಯದಲ್ಲಿ ಅವ್ಯಾಹತವಾಗಿ ತಮ್ಮನ್ನು ತೊಡಗಿಸಿಕೊಂಡರು. ಗುಜರಾತಿನ ಮುಖ್ಯಮಂತ್ರಿಯಾಗಿ ಮೋದಿ ಚುನಾಯಿತರಾದ ಮೇಲಂತೂ ಕಾಂಗಿಗಳ ಒರಲಾಟ ಇನ್ನಷ್ಟು ಹೆಚ್ಚಿತು. ಅದಕ್ಕೆೆ ಪೂರಕವಾಗಿ ಮಾಧ್ಯಮಗಳೂ ಸಾಕಷ್ಟು ಒಗ್ಗರಣೆ, ಮಸಾಲೆಗಳನ್ನು ತುರುಕಿದವು. ಕಾಂಗಿಗಳ ಇಂತಹ ಹೀನ ಕಾರ್ಯ ತುತ್ತ ತುದಿಯನ್ನು ತಲುಪಿದ್ದು 2014ರ ವೇಳೆಗೆ. ಯಾವಾಗ ಕಾಂಗಿಗಳು 2014 ಚುನಾವಣೆಯಲ್ಲಿ ಮಕಾಡೆ ಮಲಗಿ, ಮೋದಿ ಪ್ರಧಾನಿಯಾಗುತ್ತಾಾರೆ ಎನ್ನುವುದು ಪ್ರಖರವಾಗತೊಡಗಿತೋ, ಕಾಂಗಿ ಬಾಲಬಡುಕರು, ಯಾವುದಕ್ಕೂ ಸಂಬಂಧವೇ ಇರದಿದ್ದ ಜಶೋದಾ ಬೇನ್‌ರ ಹೆಸರನ್ನು ಇನ್ನಷ್ಟು ಎಳೆದು ತಂದರು. ತಾವು ಹೇಳಿದಂತೆ ಯಾವುದೂ ನಡೆದಿರದೇ ಇದ್ದರೂ ಕಾಂಗಿ ಗುಲಾಮರ ಮನಸ್ಥಿತಿ ಸ್ವಲ್ಪವೂ ಬದಲಾಗಲಿಲ್ಲ.

ಜಶೋದಾ ಬೇನ್‌ರೇ ಸ್ವತಃ ತಾವು ಚನ್ನಾಗಿದ್ದೇನೆ ಎಂದೂ, ಮೋದಿಯವರು ದೂರವಾದ ನಂತರ ಯಾವುದೇ ಸಮಸ್ಯೆ ಆಗಲಿಲ್ಲ ಎಂದೂ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಹೇಳುತ್ತಲೇ ಇದ್ದಾರೆ. ಆದರೆ ಕಾಂಗಿಗಳಿಗೆ ಇದ್ಯಾವುದೂ ಬೇಕಾಗಿಲ್ಲ. ಕಾಂಗ್ರೆಸ್ ಬೆನ್ನಿಗೆ ನಿಂತಿರುವ ಆಂಗ್ಲ ಮಾಧ್ಯಮಗಳಿಗೂ ಕೂಡ ಇದು ಗೌಣವಾಗಿ ಕಾಣುತ್ತಿದೆ. ಬಹುಶಃ ಜಶೋದಾ ಬೇನ್ ಹೆಸರಿಗೆ ಕೆಸರು ಎರಚಿದರೆ ಆಂಗ್ಲ ಮಾಧ್ಯಮಗಳ ಆತ್ಮಕ್ಕೆ ಯಾವಾಗಲೋ ಆಗಿರುವ ಅತೃಪ್ತಿಗೆ ಶಾಂತಿ ಸಿಗುತ್ತಿದೆಯೇನೋ ಬಲ್ಲವರಾರು?

ಕಾಂಗಿಗಳಿಗೆ ಯಾವುದೋ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದವರ, ಅರೆನಗ್ನವಾಗಿ ನೃತ್ಯ ಮಾಡುತ್ತ, ಗ್ರಾಹಕರ ಮನಸ್ಸನ್ನು ತೃಪ್ತಿ ಪಡಿಸುತ್ತಿದ್ದವರ ತಪ್ಪನ್ನು ಮುಚ್ಚಿ ಹಾಕಲು ಅಸ್ತ್ರ ಬೇಕಾಗಿದೆ. ಮೋದಿಯವರನ್ನು ಇನ್ಯಾವುದೇ ಅಸ್ತ್ರದಿಂದಲೂ ಹಣಿಯಲು ಸಾದ್ಯವಿಲ್ಲ. ಈ ಕಾರಣದಿಂದ ಜಶೋದಾ ಬೇನ್‌ಗೆ ಅನ್ಯಾಯವಾಗಿದೆ ಎಂಬ ಹುಯಿಲನ್ನು ಎಬ್ಬಿಸಿ ಸಂಚಲನ ಉಂಟು ಮಾಡಿ, ಸುಳ್ಳನ್ನೇ ಸತ್ಯ ಮಾಡೋಣ ಎನ್ನುವುದೇ ಮುಖ್ಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯಂತೂ ವಾರ್ತಾವಾಹಿನಿಗಳಲ್ಲೋ ಅಥವಾ ಇನ್ಯಾವುದೋ ಮಾಧ್ಯಮಗಳಲ್ಲೂ ಜಶೋದಾ ಬೇನ್‌ರ ಭಾವಚಿತ್ರವನ್ನೂ ಸರಿಯಾಗಿ ನೋಡಿರದ ಕಾಂಗಿ ಕಮಂಗಿಗಳು ತಾವೇ ಜಶೋದಾ ಬೇನ್‌ರನ್ನು ಕಣ್ಣಾರೆ ಕಂಡಿದ್ದೇವೇನೋ ಎಂಬಂತೆ ಪೋಸ್ಟುಗಳ ಮೂಲಕ ತೇಜೋವಧೆಗೆ ಮುಂದಾಗುವಂತಹ ನೀಚ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಹಿಳಾ ರಕ್ಷಣೆಯೇ ನಮ್ಮ ಆದ್ಯತೆ, ಮಹಿಳೆಯರ ತೇಜೋವಧೆಗೆ ಸ್ವಲ್ಪವೂ ಅವಕಾಶ ಕೊಡುವುದಿಲ್ಲ ಎನ್ನುವುದು ಕಾಂಗಿ ಮಹಾನಾಯಕರ ಬಾಯಲ್ಲಿ ಬರುವ ದೊಡ್ಡ ದೊಡ್ಡ ಮಾತುಗಳು. ಆದರೆ ಅವರ ಕಾಲ ಕೆಳಗೆಯೇ ಅವರದೇ ಬಾಲಬಡುಕರು, ಭಟ್ಟಂಗಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಹಿಳೆಯೊರ್ವರ ತೇಜೋವಧೆಗೆ ಯತ್ನಿಸುತ್ತಿರುವುದು ವೈರುಧ್ಯವೇ ಹೌದು. ಈ ಮೂಲಕ ತಾನು ಹೇಳುವುದು ಒಂದು, ಮಾಡುವುದು ಇನ್ನೊದು, ಹೇಳಿದಂತೆ ಮಾಡಬೇಕೆಂಬ ನಿಯಮ ನನಗಿಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತಿಿದೆ.

ವಿವಾಹ, ಸಂಸಾರ, ಮಕ್ಕಳು ಇತ್ಯಾಾದಿ ಸಂಬಂಧಗಳ ಕುರಿತು ಕಾಂಗಿಗಳನ್ನು ನಿಲುವು ಅವರ ಅಗತ್ಯಗಳಿಗೆ ತಕ್ಕಂತೆ ಬದಲಾಗುತ್ತಿರುವುದು ವಿಪರ್ಯಾಸ. ಜಶೋದಾ ಬೆನ್ ಬಗ್ಗೆ ಮಾತನಾಡುವ ಕಾಂಗಿ ಬಾಲಬಡುಕರು, ಮೊದಲ ಪ್ರಧಾನಿ ನೆಹರೂಗಿದ್ದ ಎಡ್ವಿನಾಳ ಜತೆಗಿನ ಸಂಗವನ್ನೋ, ಮಹಿಳಾ ಪ್ರಧಾನಿಗಳ ಕುರಿತು ಅವರ ಆಪ್ತನೇ ಹೊರ ತಂದ ಅಕ್ರಮ ಸಂಬಂಧ ದ ಪುಸ್ತಕಗಳಲ್ಲಿನ ಅಂಶಗಳ ಬಗ್ಗೆಯೋ, ದಿಗ್ವಿಜಯರ ಮೂರನೇ ಮದುವೆಯೋ, ತರೂರರ ಪತ್ನಿಯ ಸಾವೋ, ಎನ್. ಡಿ. ತಿವಾರಿ ಎಂಬ ಹಣ್ಣು ಹಣ್ಣು ಮುದಿಜೀವದ ಮಕ್ಕಳ ಕುರಿತೋ ಮಾತನಾಡುವುದೇ ಇಲ್ಲ.

ಕಾಂಗಿಗಳ ಕುರಿತಾಗಿ ಹೇಳ ಹೊರಟರೆ ಇನ್ನೂ ಹಲವಾರು ವಿಷಯಗಳು ತೆರೆದುಕೊಳ್ಳಬಹುದು. ತಮ್ಮಲ್ಲೇ ತಪ್ಪನ್ನು ಇಟ್ಟುಕೊಂಡು ಯಾವುದಕ್ಕೂ ಸಂಬಂಧ ಇಲ್ಲದೇ ತಮ್ಮ ಪಾಡಿಗೆ ತಾವಿರುವವರ ಕುರಿತು ಅಪಪ್ರಚಾರ ಮಾಡುವ ಕಾಂಗಿ ಕಮಂಗಿಗಳ ಕಿವಿಯನ್ನು ಎಷ್ಟು ಹಿಂಡಿದರೂ ಅವರಿಗೆ ಬುದ್ಧಿ ಬರುವುದಿಲ್ಲ.

ಮುಂದಿನ ದಿನಗಳಲ್ಲಾದರೂ ಕಾಂಗಿಗಳು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳದಿದ್ದಲ್ಲಿ ಅವರವರ ಮನೆಯವರೂ ಕೂಡ ಅವರನ್ನು ತಿರಸ್ಕರಿಯಾರು. ಅದರ ಜತೆಗೆ ಜಶೋದಾಬೆನ್ ಎಂಬ ವೌನ ತಪಸ್ವಿಯ ಮೂಕರೋದನದ ಕುದಿಬಿಂದುಗಳು ಅಪಪ್ರಚಾರ ಮಾಡುವವರನ್ನು ಸುಟ್ಟೀತು. 

No comments:

Post a Comment