Friday, August 30, 2013

ಕಾರಣವಿಲ್ಲದ ಒಂದು ಕಥೆ..

ನಿಜಕ್ಕೂ ಇದೊಂದು ವಿಶಿಷ್ಟ ಕಥೆ.
ನಮ್ಮ ಹವ್ಯಕ ಹುಡುಗ-ಹುಡುಗಿಯ ನಡುವೆ ನಡೆದ ಕಥೆ. ನಿಮ್ಮನ್ನು ಇದು ಚಿಂತನೆಗೆ ಹಚ್ಚಬಹುದೆಂಬ ನಂಬಿಕೆ ನನ್ನದು.
ಕಥೆ ಓದಿ. ನಿಮಗೆ ಏನು ಅನಿಸಿತು ಅಂತ ಬರೆಯಿರಿ.
--------------------

 ಅದು ನಮ್ಮದೆ ಹವ್ಯಕರ ಪಟ್ಟಣ. ತೀರಾ ಚಿಕ್ಕದಲ್ಲ. ದೋಡ್ಡದೂ ಅಲ್ಲ. ಅದಕ್ಕೊಂದು ಕಾಲೇಜು. ಡಿಗ್ರಿಯದು. ಅದರಲ್ಲಿ ನಮ್ಮ ನೂರಾರು ಹವಿ ಹುಡುಗ ಹುಡುಗಿಯರು. ಏನೋ ಸಾಧಿಸಬೇಕು ಎಂಬ ಕನಸು ಹೊತ್ತವರು.
ಆತ ಆ ಕಾಲೇಜಿನ ಹುಡುಗನೇ. ಕೆಲವು ವಿಶಿಷ್ಟ ಅಂಶಗಳನ್ನು ಹೊಂದಿರುವ ಹುಡುಗ. ಉತ್ಸಾಹದ ಬುಗ್ಗೆ. ಆತನಲ್ಲೂ ನೂರಾರು ಕನಸು. ಇನ್ನೂ ಬಹು ವರ್ಷ ಉರಿಯ ಬೇಕಾದ ದೀಪ ಆತ.
ಆತನ ಮನಸ್ಸನ್ನು ಕದ್ದಿದ್ದು ಅದೇ ಕಾಲೇಜಿನ ಓರ್ವ ಬಿಳಿ ಹುಡುಗಿ. ಪಕ್ಕಾ ಹವ್ಯಕರವಳು. ನೋಡೋಕೆ ಚೆನ್ನಾಗೂ ಇದ್ದಳು. ಕಾಡಿ ಬೇಡಿ ಪ್ರೇಮಿಸಿದ. ಒಲಿಸಿಕೊಂಡ. ಅದಾದ ಬಹು ತಿಂಗಳು ಆ ಪಟ್ಟಣದ ತುಂಬೆಲ್ಲ ಅವರೆ ಅವರು. ಎಲ್ಲರ ಬಾಯಿಯಲ್ಲಿಯೂ ದೊಡ್ಡ ಸದ್ದಾಗದ ಸುದ್ದಿ.

ಹೀಗಿರಲು ಆತನಿಗೆ ದೂರದೂರಿನಲ್ಲಿ ಉದ್ಯೋಗ ಸಿಕ್ಕಿತು. ಆಕೆಯೂ ಅಷ್ಟೆ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರೆಂಬ ಮಾಯಾ ನಗರಿಗೆ ಬಂದಳು. ಇಲ್ಲೂ ಅವರ ಪ್ರೀತಿ ಮುಂದುವರಿಯಿತು. ಆದರೆ ಬೆಂಗಳೂರು ಎಂಥವರನ್ನೂ ಎಂಥ ಸನ್ನಿವೇಶವನ್ನೂ ಬದಲಿಸುವ ತಾಕತ್ತು ಉಳ್ಳ ನಗರಿ. ಆ ಹುಡುಗ ಈ ನಗರಿಗೆ ಬಂದ ಮೇಲೆ ತನ್ನ ಉದ್ಯೋಗದಲ್ಲಿ ಬ್ಯೂಸಿ ಆದ. ಆಕೆಯೂ ತನ್ನ ಓದಿನಲ್ಲಿ ತಡಗಿಕೊಂಡಳು.
ಆದರೆ ಈ ಬ್ಯೂಸಿ ಬದುಕು ಅವರ ಪ್ರೀತಿಗೇನೂ ತೊಂದರೆ ಮಾಡಲಿಲ್ಲ. ಪ್ರತಿ ದಿನದಲ್ಲಿ ಪುರಸೊತ್ತು ಇಲ್ಲದಿದ್ದರೂ ಮೊಬೈಲು ಅವರನ್ನು ಬೆಸೆದಿತ್ತು. ಪ್ರತಿ ಶನಿವಾರ- ಭಾನುವಾರದ ವೀಕೆಂಡ್ಗಳು ಈ ಪ್ರೇಮಿಗಳ ಪಾಲಿಗೆ ಜೊತೆಗೂಡುವ ದಿನಗಳಾಗಿತ್ತು. ಆ ದಿನಗಳಂದು ಅವರ ಪಾಲಿಗೆ ಪಾಕರ್ುಗಳು ಕರೆಯುತ್ತಿದ್ದವು, ಸಿನಿಮಾ ಥಿಯೇಟರ್ಗಳು ಕೈ ಬೀಸುತ್ತಿದ್ದವು.
ಈ ದಿನಗಳಲ್ಲಿ ಅವರು ಪಕ್ಕಾ ಪ್ರೇಮಿಗಳಾಗುತ್ತಿದ್ದರು. ಇಷ್ಟರ ಜೊತೆಗೆ ಅವರು ಹಬ್ಬ ಹರಿದಿನಗಳಂದು ಮನೆಗೆ ಹೋಗುವಾಗ ಜೊತೆಗೆ ಹೋಗುತ್ತಿದ್ದರು. ಜೊತೆಗೆ ಬರುತ್ತಿದ್ದರು. ಅಷ್ಟು ಅನ್ಯೋನ್ಯತೆ ಅವರದ್ದು. ಆ ಹುಡುಗನಿಗಂತೂ ಅವಳೇ ಜೀವ, ಜೀವಾಳ. ಅವಳಿಗೂ ಅಷ್ಟೆ, ಇವನೇ ಎಲ್ಲ.

ಇಂತಹ ಸುಂದರ ಪ್ರೀತಿಗೆ ಅದ್ಯಾರ ದೃಷ್ಟಿ ಬಿತ್ತೋ. ಇದ್ದಕ್ಕಿದ್ದಂತೆ ಇವರ ಪ್ರೇಮದಲ್ಲಿ ಒಂದು ದೊಡ್ಡ ಟ್ವಿಸ್ಟ್ ಬಂದಿತು. ಆಕೆಯ ಪಾಲಿಗೆ `ಯೂ ಟರ್ನ್' ಅದು. ಆಕೆ ಉನ್ನತ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲೇ ಅವನಿದ್ದ ರಾಹುಲ್ ದ್ರಾವಿಡ್ನಂತಹ ಆಟಗಾರ ಸಚಿನ್. ಉತ್ತರ ಭಾರತೀಯ. ಎಲ್ಲ ಉತ್ತರ ಭಾರತೀಯರಂತೆ ಬಿಳಿ ಚ್ವಾರೆ. ಅಷ್ಟೇ ಬಡಕಲು. ಉದ್ದುದ್ದ ಕಡ್ಡಿ ಕಡ್ಡಿ ಕೂದಲು. ಮೈತುಂಬಾ ಸ್ಟೈಲೋ ಸ್ಟೈಲು. ಅವನಿಗೆ ನಮ್ಮ ಕಥಾ ನಾಯಕಿ ಅದ್ಯಾವ ಮೋಡಿ ಮಾಡಿದಳೋ. ಅವನಿಗೆ ಈಕೆ ಅದ್ಹೇಗೆ ಚೆಂದ ಕಂಡಳೋ... ಪ್ರಪೋಸ್ ಮಾಡಿಯೇ ಬಿಟ್ಟ.
ಈ ಪ್ರೇಮ ಮಯಿ ಅದನ್ನು ಒಪ್ಪುತ್ತಾಳಾ..? ಊಹು.. ಈಕೆಯ ಪಾಲಿಗೆ ನಮ್ಮ ಕಥಾ ನಾಯಕನೇ ಎಲ್ಲ. ಅದಕ್ಕೆ ಆ ಆಟಗಾರನ ಪ್ರಪೋಸಲ್ಲನ್ನು ತಿರಸ್ಕರಿಸಿದಳು. ಅವ ಬಿಡುವನೆ? ಇಂತಹ ಎಷ್ಟು ಹುಡುಗಿಯರನ್ನು, ಬೌಲರ್ಗಳನ್ನು ನೋಡಿದವನೋ ಅವ.. ಛಲದ ಅಂಕ ಮಲ್ಲ.
ನಮ್ಮ ನಾಯಕಿಯನ್ನು ಮತ್ತೆ ಮತ್ತೆ ಕಾಡಿದ. ಎಡಬಿಡದೇ ಕಾಡಿದ. ಈಕೆಯೂ ಅಹಲ್ಯೆಯಂತೇ ಕಲ್ಲು ಬಂಡೆ. ಆತನ ಪ್ರಪೋಸಲ್ಲಿಗೆ ಈಕೆಯದು ಒಂದೆ ಮಾತು `ನೋ ನೋ ನೋ'...
ಅವ ಬಿಡಲಿಲ್ಲ. ಈಕೆ ಒಪ್ಪಲಿಲ್ಲ.

ನಮ್ಮ ನಾಯಕಿಯೂ ಮನುಷ್ಯಳೇ ತಾನೆ. ಎಷ್ಟು ದಿನ ಅಂತ ತನ್ನ ಮನಸ್ಸನ್ನು ಒಂದೆಡೆಗೆ ಗಟ್ಟಿಯಾಗಿ ಹಿಡಿದಿಡಬಲ್ಲಳು? ಈ ನಡುವೆ ನಮ್ಮ ನಾಯಕನಿಗೆ ಪುರಸೊತ್ತಿಲ್ಲದ ಕೆಲಸ. ಪಾಪ ಹಲವು ದಿನಗಳಾದರೂ ಆತನ ಬಳಿ ಈಕೆಯನ್ನು ಭೇಟಿ ಮಾಡಲು ಸಾಧ್ಯವಾಗಲೇ ಇಲ್ಲ.
ಇತ್ತ ಬೆಣ್ಣೆ ನಿಧಾನವಾಗಿ ಕರಗುತ್ತಿತ್ತು. ನಮ್ಮ ಕಥಾ ನಾಯಕಿಗೆ ಬೇಡ ಬೇಡವೆಂದರೂ ಮನಸ್ಸು ಆ ಸಚಿನ್ನನೆಡೆಗೆ ಸೆಳೆಯುತ್ತಿತ್ತು. ಏಕೆ ಗೊತ್ತಿಲ್ಲ ಅವಳಿಗೆ ಆತ ಪದೆ ಪದೆ ಕಾಡುತ್ತಿದ್ದ. ಮತ್ತೆ ಮತ್ತೆ ನೆನಪಾಗುತ್ತಿದ್ದ. ಆತ ಅವಳಿಗೆ ನೆನಪಾದಾಗಲೆಲ್ಲ ನಮ್ಮ ಕಥಾ ನಾಯಕ ಮರೆತು ಹೋಗುತ್ತಿದ್ದ. ಇದು ಅವಳ ತಪ್ಪಲ್ಲ ಬಿಡಿ.. ಆತನೂ ಎಡಬಿಡದೇ ಕಾಡಿದರೆ ಆಕೆ ಇನ್ನೇನು ಮಾಡ್ತಾಳೆ ಹೇಳಿ?
ಕೊನೆಗೊಂದು ದಿನ ಆಕೆ ಸಚಿನ್ನನ ಪ್ರೀತಿಗೆ ಓಕೆ ಎಂದಳು. ಆತನ ಇಷ್ಟು ದಿನದ ಡಿಫೆನ್ಸ್ ಆಟಕ್ಕೂ ಸಾರ್ಥಕತೆ ಸಿಕ್ಕಿತ್ತು.
ಇದರ ನಂತರ ನಡೆದದ್ದು ಮತ್ತೂ ಕೆಟ್ಟ ಕಥೆ.
ನಮ್ಮ ನಾಯಕಿ ಮತ್ತೊಬ್ಬನ ಪ್ರೀತಿಗೆ `ಎಸ್' ಎಂದ ವಿಷ್ಯ ತಿಳಿದ ನಾಯಕ ಬಹಳ ಬೇಸರ ಮಾಡಿಕೊಂಡ. ನಂಬಲು ಆತನಿಗೆ ಕಷ್ಟವಾಯಿತು. ಯಾಕೆ ಹೀಗೆ, ಇದು ಹೌದಾ ಅಂತ ನಾಯಕಿಯನ್ನು ಕೇಳಿದ. ಆಕೆ ಇಲ್ಲ ಅನ್ನುತ್ತಾಳೇನೋ ಅಂದುಕೊಂಡಿದ್ದ. ಆದರೆ ಆಕೆ ಹೌದು ಎಂದಳು. ಇದು ಆತನಿಗೆ ಅತ್ಯಂತ ಆಘಾತ ಉಂಟುಮಾಡಿತು.

ಅವನಿಗೆ ಒಮ್ಮೆ ರವಿ ಬೆಳಗೆರೆಯ `ಹೇಳಿ ಹೋಗು ಕಾರಣ'ದ ಪ್ರಾರ್ಥನಾ ನೆನಪಾದಳು. ಈತನೂ ಕಾರಣ ಕೇಳಿದ. ಆದರೆ ಆಕೆ ಉತ್ತರ ನೀಡಲಿಲ್ಲ. ನೆಗ್ಲೆಕ್ಟ್ ಮಾಡಿದಳು. ಈತನಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ನಮ್ಮ ನಾಯಕನನ್ನು ಕೊನೆಗೊಮ್ಮೆ ಬಿಟ್ಟೇ ಬಿಟ್ಟಳು.
ಈಗ ಬೆಂಗಳೂರಿನಲ್ಲಿ ಆಕೆ ಆ ಆಟಗಾರನೊಂದಿಗೆ ಕಳೆಯುತ್ತಿದ್ದಾಳೆ. ಪಾಪ ನಮ್ಮ ನಾಯಕ ಬಹಳ ಬೇಸರದಲ್ಲಿದ್ದಾನೆ. ತೀರಾ ಇತ್ತೀಚೆಗೆ ನಮ್ಮ ನಾಯಕ ನನ್ನ ಬಳಿ ಬಂದು ಈ ಕಥೆಯನ್ನು ಹೇಳಿಕೊಂಡ. ಆ ನಂತರ ನನ್ನಲ್ಲ ಕೆಲವು ಪ್ರಶ್ನೆಗಳು ಮೂಡಿದವು.
ಆಕೆ ಯಾಕೆ ಹೀಗೆ ಮಾಡಿದಳು? ಆಕೆ ಮಾಡಿದ್ದು ಸರಿಯಾ?
ನೋಡಲು ಚೆನ್ನಾಗಿದ್ದ, ಸಖತ್ ಶ್ರೀಮಂತನೂ ಆಗಿದ್ದ ಆತನನ್ನು ಯಾಕೆ ಬಿಟ್ಟು ಬಿಟ್ಟಳು?
ನಮ್ಮ ಹುಡುಗೀರು ಯಾಕೆ ಹೀಗೆ ನಂಬಿದವರಿಗೆ ಕೈ ಕೊಡ್ತಾರೆ?
ಬೆಂಗಳೂರು ಎಂತವರನ್ನೂ ಹಾಳು ಮಾಡುತ್ತದಾ?
ಈ ಕಥೆಯ ಬಗ್ಗೆ ನಿಮಗೆ ಅನಿಸೋದು ಏನು?

4 comments:

  1. well, i would say, life gives you people... if she is ignoring you... let her go... because life never depends on a single person... in childhood, parents..in younger age, maybe girls... in the elder age it may be wife..and in the later times, children may play a big role.. in between of this, you will get plenty and plenty of friends.... so take a chill... even though its difficult, let her go and move on.... and by the way, its a nice story with a sad ending :)

    ReplyDelete
  2. ಹ್ಮ್ಮ್ ....

    ಬೆಂಗಳೂರಿನಲ್ಲೇ ಇರುವ ನನಗೆ ಇದು ಹೊಸ ಕಥೆ ಎನಿಸಲಿಲ್ಲ . ಇಂಥದ್ದೊಂದು ಕಥೆಗೆ ಸಾಕ್ಷಿಯಾಗಿದ್ದು ನೆನಪಿಗೆ ಬಂತು.... :( ಏನೂ ಮಾಡಲಾಗದೆ ಹೋದ ಅಸಹಾಯಕತೆ ಇಂದಿಗೂ ಕಾಡುತ್ತೆ .. :( :(

    ಬೆಂಗಳೂರು ಬದಲಾಯಿಸುತ್ತದೆ ಎನ್ನುವುದಕ್ಕಿಂತ ಮುಗ್ದತೆಯನ್ನು ಕೊಲ್ಲುತ್ತೆ. ಇಲ್ಲಿ ಭಾವನಾತ್ಮಕ ಬಂಧಗಳಿಗಿಂತ.. ಪ್ರಾಕ್ಟಿಕಲ್ ಎಂಬ ಬಲೆಯೇ ಹೆಚ್ಚು ಮೋಹಕ.

    ReplyDelete
    Replies
    1. Houdu nija...
      Nanna bhavanegaloo illi sattu hogide...!

      Delete