Sunday, August 18, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 7

ಏಳನೇ ಭಾಗ..


ಗುಡಲೂರಿನಲ್ಲಿ ಮಲಗುವ ಮುನ್ನ ಮನಸ್ಸಿನಲ್ಲಿದ್ದುದು ವಯನಾಡಿನ ಟೀ ತೋಟಗಳು..
ಕುತೂಹಲ ಬೀರುವ ಗುಡ್ಡ ಬೆಟ್ಟಗಳು..
ಟಿ.ವಿ ಇರುವ ರೂಮು ಬೇಕೆಂಬ ಬೇಡಿಕೆಗೆ ಒಪ್ಪಿಗೆ ಸಿಕ್ಕಿತ್ತಲ್ಲ.. ಅದ್ಯಾವುದೋ ಚಾನಲ್ಲಿನಲ್ಲಿ ಸಿನೆಮಾ ನೋಡುವ ವ್ಯರ್ಥ ಪ್ರಯತ್ನ ಮಾಡಿದೆವು.. ತಮಿಳು, ಮಲೆಯಾಳಮ್, ಹಿಂದು ಚಾನಲ್ಲುಗಳ ಸಾಲು ಸಾಲಿತ್ತು..
ಉದಯ ಟಿವಿಯೋ ಮತ್ಯಾವುದೋ ಒದೆರಡು ಕನ್ನಡ ಚಾನಲ್ಲುಗಳಿದ್ದವು..
ತೆಲಗು ಸಿನೆಮಾ ಅರ್ಧ ನೋಡಿ ಮುಗಿಸುವುದರೊಳಗೆ ನಿದ್ರಾದೇವಿ ನಮ್ಮನ್ನು ಅಪ್ಪಿಕೊಂಡಿದ್ದಳು..

ಮುಂಜಾನೆ ಎದ್ದು `ದರ್ಶನ ಲಾಡ್ಜಿನ' ಟೆರೆಸ್ ಮೇಲಿನಿಂದ ನೋಡಿದರೆ ಇಬ್ಬನಿಯ ಮಾಲೆ ಗುಡಲೂರನ್ನು ಮುತ್ತಿತ್ತು..
ಯಾವುದೋ ಯೂರಪ್ ರಾಷ್ಟ್ರದಲ್ಲಿ ವಿಹಾರ ಮಾಡಿದ ಅನುಭವ,.
ರಸ್ತೆಯಲ್ಲಿ ವಾಹನಗಳು ಲೈಟ್ ಹಾಕಿ ನಿಧಾನವಾಗಿ ಚಲಿಸುತ್ತಿದ್ದುದನ್ನು ನೋಡುವುದೇ ಚೆಂದ ಮಾರಾಯ್ರೆ..
ರಸ್ತೆಯಲ್ಲ ಬೆಳ್ಳಗೆ.. ವಾಹನಗಳು ಮೆಲ್ಲಗೆ...
ಅದ್ಯಾಕೋ ಗುಡಲೂರು ಬಹಳ ಸೆಳೆಯಿತು..
ತುಂಬ ಇಷ್ಟವಾಯಿತು.. ಪದೆ ಪದೆ ನೆನಪಾಗುವಂತಾಯಿತು..
ಕೊನೆಗೊಮ್ಮೆ ಚೆಕ್ ಔಟ್ ಆಗಿ ಹೊರ ಬಂದು ಅಲ್ಲೇ ಹತ್ತಿರದಲ್ಲಿ `ಸಾಪಡ್' ಖ್ಯಾತಿಯ ಹೊಟೆಲಿಗೆ ಲಗ್ಗೆ ಇಟ್ಟು ಮಸ್ಸಾಲೆ ದೋಸೆಗೆ ಆರ್ಡರ್ ಮಾಡಿದೆವು..
ದೋಸೆ ಬಿಸಿ ಬಿಸ್ಸಿ ಬಂತು.. ತಿಂದು.. ಮಸ್ಸಾಲೆ ಟೀ ಕುಡಿದು ಬೈಕೇರಿದೆವು..

ಊಟಿ ಮೈಸೂರು ದಾರಿಯಲ್ಲಿ ಗುಡಲೂರು ಪಟ್ಟಣದಲ್ಲಿಯೇ ಕೊಂಚ ದೂರ ಸಾಗಿ ನಂತರ ಎಡಕ್ಕೆ ಹೊರಳಿದರೆ ವಯನಾಡಿನ ರಸ್ತೆ ಸಿಗುತ್ತದೆ.. ಇಲ್ಲಿ ಎರಡು ರಸ್ತೆಗಳಿವೆ.. ಒಂದು ರಸ್ತೆ ನೀರ ಕೋಜಿಕ್ಕೋಡ್ ಗೆ ತೆರಳಿದರೆ ಇನ್ನೊಂದು ರಸ್ತೆ ಸುಲ್ತಾನ್ ಬತ್ತೇರಿ ಮೂಲಕ ಸಾಗುತ್ತದೆ.. ಗುಡಲೂರಿನಿಂದ ಸುಲ್ತಾನ್ ಬತ್ತೇರಿಗೆ 50-60 ಕಿಮಿ ದೂರ. ನಾವು ಆರಿಸಿಕೊಂಡಿದ್ದು ಇದೇ ಮಾರ್ಗ. ಸಿನೆಮಾದಲ್ಲಿ ಕಾಡಿದ್ದ ಎಡಕಲ್ಲು ಗುಡ್ಡ ನೋಡುವುದು, ಟೀ ತೋಟಗಳಲ್ಲಿ ಓಡಿ.. ಆಡುವುದು ನಮ್ಮ ಪ್ರಮುಖ ಉದ್ದೇಶವಾಗಿತ್ತು.. ಇಲ್ಲಿ ನಾನು ರಾಘುವಿನ ಬೈಕೇರಿದೆ.. ಕಿಟ್ಟು ಮೋಹನನ ಬೈಕೇರಿದ..
ಮುಂದೆ ಮುಂದೆ ಸಾಗಿದಂತೆಲ್ಲ ನಮ್ಮ ಕಣ್ಣ ಮುಂದೆ ಟೀ ತೋಟಗಳದ್ದೇ ದೃಶ್ಯ ವೈಭವ.. ಏನೋ ಥ್ರಿಲ್ಲು...

ಈ ರಸ್ತೆ ಥೇಟು ನಮ್ಮ ಶಿರಸಿ-ಹುಲೇಕಲ್ ರಸ್ತೆಯ ಹಾಗೆಯೇ ಇದೆ.. ಇನ್ನೂ ಕಾಡು.. ತಿರುವು, ಮುರುವು.. ಅಪ್ ಎಂಡ್ ಡೌನ್.. ಅದೆಂತದೋ ತರಹೇವಾರಿ ಊರುಗಳು.. ಹೆಸರುಗಳು ನೆನಪಿನಲ್ಲಿ ಉಳಿಯುವಂತದ್ದಲ್ಲ.. ಅಲ್ಲೊಂದು ಕಡೆ ದಟ್ಟ ಕಾಡು.. ಬಹುಶಃ ಬಂಡಿಪುರ-ನಾಗರಹೊಳೆ-ಮಧುಮಲೈ ಅರಣ್ಯಗಳೆಲ್ಲ ಸೇರಿದ ಕಾಡಿನ ಭಾಗವಿರಬೇಕು.. ಅದು ಕಳೆಯುವಷ್ಟರಲ್ಲಿ ತಮಿಳುನಾಡು-ಕೇರಳ ಗಡಿ ಭಾಗದ ಚೆಕ್ ಪೋಸ್ಟ್ ಸಿಕ್ಕಿತು.. ದಾಟಿ ಮುನ್ನಡೆದೆವು.. ಆ ನಂತರದ ವಾತಾವರಣ ವಿಚಿತ್ರ ವೆನ್ನಿಸತೊಡಗಿತು..
ಆ ಕಾಡು ಕಳೆಯುತ್ತಿದ್ದಂತೆಯೇ ಒಂದು ಊರು.. ಊರ ತುಂಬ ಮಸೀದಿಗಳು.. ಗುಮ್ಮಟಗಳು.. ಅದೆಂತದ್ದೋ ವಿಚಿತ್ರ ವಾಸನೆ.. ದೌರ್ಭಾಗ್ಯ ನೋಡಿ ಮನೆಗಳ ಮುಂದೆ ಪಾಕಿಸ್ತಾನದ ಧ್ವಜಗಳು ಹಾರಾಡುತ್ತಿದ್ದವು.. ಯಾ ಅಲ್ಲಾಹ್... ಇದೆಲ್ಲಿಗೆ ಬಂದೆವು..? ನಮಗೆ ಗೊತ್ತಿಲ್ಲದಂತೆಯೇ ಅದ್ಯಾವುದೋ ಪಾಕಿಸ್ತಾನದ ನಾಡನ್ನು ಹೊಕ್ಕೆವಾ..? ಜೊತೆಯಲ್ಲಿದ್ದ ಮೋಹನ ಕುದ್ದು ಹೋದ.. ಇವ ಎಲ್ಲಿ ಬೈಯಲು ಶುರು ಹಚ್ಚಿಕೊಳ್ಳುತ್ತಾನೋ ಎನ್ನುವ ಭಯ ನಮ್ಮದು.. ಕೇರಳದಲ್ಲಿ ಮುಸ್ಲೀಮರು ಬಹುಸಂಖ್ಯಾತರು ಎಂದು ಕೇಳಿದ್ದ ನಮಗೆ ಪ್ರತ್ಯಕ್ಷವಾಗಿ ಅರಿವಿಗೆ ಬಂದಿತು..

ಆ ಊರು ಕಳೆಯುವಷ್ಟರಲ್ಲಿ ಒಂದಷ್ಟು ಟೀ ತೋಟಗಳು ನಮಗೆ ಕಂಡು ಮನಸ್ಸು ತಿಳಿಯಾಯಿತು..
ಅಲ್ಲಿ ಒಂದು ಕಡೆ ರಸ್ತೆಗೆ ಚಾಚಿಕೊಂಡಿದ್ದ ಟೀ ತೋಟ ಕಂಡೊಡನೆ ನಮ್ಮ ವಾಹನಕ್ಕೆ ಬ್ರೇಕ್ ಬಿದ್ದಿತು..
ಇಳಿದು ಸೀದಾ ತೋಟಕ್ಕೆ ನುಗ್ಗಿದ್ದೇ.. ಆ ಸಂದರ್ಭದಲ್ಲಿ ಅದ್ಯಾರಾದರೂ ತೋಟದ ಮಾಲಿಕ ನಮ್ಮನ್ನು ಕಂಡಿದ್ದರೆ ಯಾರೋ ಕಳ್ಳರು ನಿಗ್ಗಿದ್ದಾರೆ ಎಂದು ಗುಂಡು ಹಚ್ಚಿ ಬಿಡುತ್ತಿದ್ದನೇನೋ..
ಒಂದಷ್ಟು ಪೋಟೋ ಸೆಷನ್ನುಗಳು ಮುಗಿದವು..
ಅಲ್ಲೊಂದು ಅನಾಥ ಗೇಟಿನ ತರಹದ ಆಕೃತಿಯಿತ್ತು.. ಅದಕ್ಕೊಂದು ಕುಣಿಕೆ.. ಅದೆಂತದ್ದು ಎನ್ನುವುಚು ಅರ್ಥವಾಗಲಿಲ್ಲ..
ರಾಘವ ಹೋದವನೇ ನೇಣು ಹಾಕಿದವರ ರೀತಿ ಪೋಸು ಕೊಟ್ಟ.. ಪೋಟೋ ಕ್ಲಿಕ್ಕಿಸಿ ಮುಗಿಯಿತು..
ಕಿಟ್ಟುವಂತೂ ` ಹ್ವಾ.. ಇಲ್ಲೇ ಇಷ್ಟು ಸೊಲಿಡ್ಡಿದ್ದು.. ಇನ್ನು ವಯನಾಡಲ್ಲಿ ಎಷ್ಟು ಮೊಸ್ತಿದ್ದಿಕ್ಕಲೇ..' ಎಂದ..
ಮೋಹನ.. ಮಾರಾಯಾ ಯಾರಿಗೆ ಗೊತ್ತು.. ವಯನಾಡು ಖರಾಬಾಗಿ ಇದ್ದಿರಲಿಕ್ಕೂ ಸಾಕು ಎಂದು ಹೇಳಿದ..
ನಾವು ಮುನ್ನಡೆದೆವು..
ಮಂಜು ಸುರಿಯುವ ದಾರಿಯಲ್ಲಿ ಸೂರ್ಯ ನೆತ್ತಿಗೆ ಬರುವ ಮೊದಲು ನಾವು ಸುಲ್ತಾನ್ ಬತ್ತೇರಿಯನ್ನು ತಲುಪಿದೆವು..
ಇಲ್ಲಿಗೇನೋ ಬಂದೆವು.. ಮುಂದೆಲ್ಲಿ ಹೋಗುವುದು/..?
ಕಾಡಿತು ಗೊಂದಲ.. ವಯನಾಡಿನ ಐಡಿಯಾ ಕೊಟ್ಟ ಮೋಹನನಿಗೂ ವಯನಾಡಿನಲ್ಲಿ ನೋಡುವುದು ಏನನ್ನು ಎನ್ನುವುದು ಗೊತ್ತಿರಲಿಲ್ಲ.. ಕೇಳಬೇಕಲ್ಲ... ಯಾರನ್ನು ಕೇಳುವುದು..?
ಯಾರನ್ನು ನೋಡಿದರೂ ಲುಂಗಿ..ಗಳು.. ಗಡ್ಡಗಳು.. ಹಣೆಯ ಮೇಲೆ ಶ್ರೀಗಂಧದ ಅಡ್ಡ ಗೆರೆಗಳು..
ಸ್ವಾಮಿಯೇ ಅಯ್ಯಪ್ಪಗಳು.. ಅಲ್ಲಾ ಹೋ ಅಕ್ಬರ್ ಗಳು..

ಅದ್ಯಾರೋ ಪುಣ್ಯಾತ್ಮನಿಗೆ ನಮ್ಮ ಪಾಡು ಅರ್ಥವಾಯಿತಿರಬೇಕು..
ಮಲೆಯಾಳಮ್ಮಿನಲ್ಲಿ ಅದೇನೋ ಕೇಳಿದ..
ನಾವು ಕಣ್ಣು ಕಣ್ಣು ಬಿಟ್ಟೆವು.. ಹಿಂದಿಯಲ್ಲಿ ಮೋಹನ, ಕಿಟ್ಟು ಮಾತಾಡಿದೆವು..
ನಾನು ರಾಘು ಸುಮ್ಮನೆ ಪೋಸು ಕೊಟ್ಟೆವು..
ಕೊನೆಗೆ ಆತ ಕೋಜಿಕ್ಕೋಡ್ ರಸ್ತೆಯನ್ನು ತೋರಿಸಿ ಗೋ ಸ್ಟ್ರೇಟ್.. ಟೇಕ್ ಲೆಪ್ಟ್ ಎಂದ.. ವೋಕೆ ವೋಕೆ.. ಥ್ಯಾಂಕ್ಸುಗಳು ಎಂದು ಮುಂದೆ ಹೊರಟೆವು..
ಅಲ್ಲೆಲ್ಲೊ ಕೆಂದಾಳಿ ಮುಮಡಿಗೆ ತರದ ಎಳನೀರು ನಮ್ಮನ್ನು ಬಾ ಕುಡಿ.. ಬಾಕುಡಿ ಎಂದು ಕರೆದವು..
ಕುಡಿಯೋಣ ಎಂದು ಕತ್ತರಿಸಿ ಬಾಯಿಗೆ ಹಾಕಿದರೆ ಅದು ಸೀಯಾಳವಲ್ಲ ಮಾರಾಯ್ರೆ...
ಪುಲ್ ಬೆಳೆದು ಹೋಗಿ ಕಾಯಾಗಿಬಿಟ್ಟಿದೆ.. ಕೊನೆಗೆ 20 ರು. ಕೊಟ್ಟು ಕುಡಿದು ಬಂದೆವು..


ವಯನಾಡು ಕೇರಳದ ಕೊಟ್ಟ ಕೊನೆಯಲ್ಲಿರುವ ಜಿಲ್ಲೆ.. ಒಂದು ಕಡೆ ಕರ್ನಾಟಕ ಇನ್ನೊಂದು ಕಡೆಗೆ ತಮಿಳುನಾಡು.. ನಡುವೆ ಇರುವ ವಯನಾಡಿನಲ್ಲಿ ಸುಲ್ತಾನ್ ಬತ್ತೇರಿ ಪ್ರಮುಖ ಪಟ್ಟಣ.. ಕಲ್ಪೆಟ್ಟಾ ಜಿಲ್ಲಾ ಕೇಂದ್ರ..
ಪ್ರವಾಸೋದ್ಯಮವನ್ನೇ ಮೂಲವಾಗಿಟ್ಟುಕೊಂಡ ಜಿಲ್ಲೆ.. ಕೊಜಿಕ್ಕೋಡ್-ಕೊಳ್ಳೆಗಾಲ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ..
ಎಡಕಲ್ಲು ಗುಡ್ಡ, ಕಲ್ಪೆಟ್ಟಾ,  ಸುಲ್ತಾನ್ ಬತ್ತೇರಿ, ಬ್ರಹ್ಮಗಿರಿ ಬೆಟ್ಟ, ವೈತಿರಿ, ಮಾನಂತವಾಡಿ, ಮೀನಮುಟ್ಟಿ ಜಲಪಾತ ಹೀಗೆ ಹೇರಳವಾದ ಪ್ರವಾಸಿ ತಾಣಗಳು ಇಲ್ಲಿವೆ.. ಗೊತ್ತಿದ್ದವರಿಗೆ ಮಾತ್ರ ವಯನಾಡು ಸುಲಭವಾಗಿ ಅರ್ಥವಾಗುತ್ತದೆ.. ಇಲ್ಲವಾದರೆ ಮ್ಮೆ ಮ್ಮೆ ಮ್ಮೆ ಅಥವಾ.. ಬ್ಬೆ ಬ್ಬೆ ಬ್ಬೆ.. ಯೇ ಗತಿ..

ನಮ್ಮ ಪಾಡು ಅದೇ ರೀತಿಯಾಗಿತ್ತು.. ಸುಲ್ತಾನ್ ಬತ್ತೇರಿಯೆಂಬ ಊರನ್ನು ಕಟ್ಟಿದ ಮೈಸೂರಿಗ ಹೈದರಾಲಿ, ಟಿಪ್ಪು ಸುಲ್ತಾನ್  ಕಟ್ಟಿಸಿದ ಕೋಟೆಯನ್ನು ನೋಡಲಿಲ್ಲ.. ಮಾನಂತವಾಡಿ ಬಳಿ ಇದ್ದ ಕಬಿನಿ ಹಿನ್ನೀರನ್ನೂ ನೋಡಲಿಲ್ಲ.. ಯಾರೊ ಹೇಳಿದರು ಎಡಕಲ್ಲು ಗುಡ್ಡ.. ಚಂದ್ರಶೇಖರ್.. ಜಯಂತಿ ನೆನಪಾದರು.. ಸಂತೋಷಾ.. ಸಂಗೀತಾ.. ರಸಮಯ.. ಎಂದು ಕೊಂಡು ಅತ್ತ ತಿರುಗಿದೆವು...
ಎಡಕಲ್ಲು ಗುಡ್ಡಕ್ಕೆ ಖ್ಯಾತಿ ತಂದಿದ್ದು ಕನ್ನಡಿಗರಾದ ಕಣಗಾಲ್ ಪುಟ್ಟಣ್ಣನವರು.. ಅವರು ಅಲ್ಲಿ ಸಿನೆಮಾ ಶೂಟಿಂಗ್ ಮಾಡುವ ಮುನ್ನ ಆ ಕುರಿತು ಅಷ್ಟು ಪರಿಚಯ ಇರಲಿಲ್ಲವಂತೆ.. ಅವರು ಸಿನೆ ಮಾಡಿದರು.. ಕನ್ನಡಿಗರು ಅದೇನೇನನ್ನೋ ನೆನೆದು ಅಲ್ಲಿಗೆ ಹೋದರು.. ಪ್ರವಾಸೋದ್ಯಮ ಬೆಳೆಯಿತು... ಆದಾಯದ ಮೂಲವಾಯಿತು..
ನಾವು ಹೊರಟೆವು...
15-20 ಕಿ.ಮಿ ದೂರವಿರಬಹುದು.. ಕಿರಿದಾದ ಹಾದಿ.. ಎದುರು ಕಡೆಯಿಂದ ರೊಂಯ್ಯನೆ ಬರುವ ಪ್ರವಾಸಿಗರ ವಾಹನಗಳು..
ಸರ್ಕಸ್ಸಿನ ರೀತಿ ಹೋದೆವು... ಕಾಡು.. ಖುಷಿ ಕೊಟ್ಟಿತು.. ದೂರದಲ್ಲೆಲ್ಲೋ ಮುಗಿಲೆತ್ತರದಲ್ಲಿ ಎಡಕಲ್ಲು ಗುಡ್ಡವನ್ನು ಕಂಡಂತಾಯಿತು.. ಹೋ ಎಂದೆವು.. ಮದಲ್ಲಿ ರೋಮಾಂಚನಾ..
ಬಿಡಿ ನಾವು ದುರದೃಷ್ಟವಂತರು.. ಹುಡುಗರೇ ಬಂದಿದ್ದೇವೆ.. ಜೊತೆಯಲ್ಲಿ ಹುಡುಗಿಯರು ಬರಬೇಕಿತ್ತು ಎನ್ನುವ  ಭಾವನೆ ಮನದಲ್ಲಿ ಮೂಡಿ ತೊಡೆ ಬೆಚ್ಚಗಾಯಿತು.. ನಮ್ಮನ್ನು ನಾವು ಹಳಿದುಕೊಂಡು ಮುನ್ನಡೆದೆವು..
ಅಲ್ಲೊಂದು ಕಡೆ ಅಪ್ ಹತ್ತಿ ಚಿಕ್ಕೊಂದು ಟರ್ನ್ ತೆಗೆದುಕೊಂಡರೆ ಅಲ್ಲಿ ನಮ್ಮ ವಾಹನ ನಿಲ್ಲಿಸುವ ಸ್ಥಳ ಬಂದಿತು.. ನಾವು ಕೊಡೋದಿಲ್ಲ ಎಂದರೂ ಅವರು ಬಿಡೋದಿಲ್ಲ ಎಂಬಂತೆ 30 ರು. ಪಾರ್ಕಿಂಗ್ ಶುಲ್ಕವನ್ನು ನೀಡಿದೆವು.,..
ಅಲ್ಲೊಂದಷ್ಟು ಹೊಟೆಲುಗಳಿವೆ.. ಗಾಡಿ ನಿಲ್ಲಿಸಲು ಸ್ಥಳವಿದೆ.. ವಿಶಾಲವಾಗಿ.. 50-60 ಗಾಡಿಗಳು ಇದ್ದವು..
ಅಲ್ಲಿಂದ 1 ಕಿ.ಮಿ ಜೀಪು ಹೋಗುತ್ತದೆ.. ಗುಡ್ಡವನ್ನು ಹತ್ತಿ.. ಥೇಟು ಕೊಡಚಾದ್ರಿಯಲ್ಲಿ ಕರೆದೊಯ್ಯುತ್ತಾರಲ್ಲ ಹಾಗೇ.. ತಲೆಗೆ 150, 200 ರು.. ಸಿಕ್ಕವರಿಗೆ ಸೀರುಂಡೆ ಎನ್ನುವಂತೆ.. ಕೆತ್ತಲು ಕಾಯುತ್ತಿರುತ್ತಾರೆ...

ನಮ್ಮನ್ನು ಕಂಡು ಬನ್ನಿ ಬನ್ನಿ ಎಂದರು.. ನಾವೊಮ್ಮೆ ನಮ್ಮ ವಿಟಮಿನ್ ಪ್ರಮಾಣವನ್ನು ನೋಡಿಕೊಂಡೆವು..
ಬೇಡ.. ನಟರಾಜ ಸರ್ವೀಸಿಗೆ ಜೈ ಎನ್ನುತ್ತೇವೆ.. ಎಂದು ಹೆಜ್ಜೆ ಹಾಕಿದರೆ.. ನಮ್ಮಂತೆ ಇನ್ನೂ ಹವು ಜನ ಅಲ್ಲಿದ್ದಾರೆ..
ಗುಡ್ಡ ಹತ್ತೋಣ ಬನ್ನಿ.. ಎಂದು ಕರೆ ನೀಡಿದ ನಮಗೆ ಅನೇಕರು ಸಾಥ್ ನೀಡಿದರು.. ಗುಡ್ಡ ಬೆಟ್ಟ ತಿರುಗಿ ರೂಢಿಯಿದ್ದ ನಮ್ಮ ವೇಗಕ್ಕೆ ಉಳಿದವರು ಸಾಥ್ ನೀಡಲು ಸಾಧ್ಯವಾಗಲಿಲ್ಲ. ಾದರೆ ಹತ್ತುತ್ತಿದ್ದ ಹಲವರಲ್ಲಿ ಬಹಳಷ್ಟು ಜನ ಚೆಂದ ಚೆಂದದ ಹುಡುಗಿಯರಿದ್ದರು..
ನಮ್ಮ ವೇಗ ತನ್ನಿಂದ ತಾನೇ ಸ್ಲೋ ಆಯಿತು..
ಎಲ್ಲಿಲ್ಲದ ನಾಟಕೀಯತೆ ನಮ್ಮ ನಡಿಗೆಗೆ ಬಂದಿತು.. ಇದೇ ಮೊದಲ ಬಾರಿಗೆ ಗುಡ್ಡ ಹತ್ತುತ್ತಿದ್ದೇವೇನೋ ಎನ್ನುವ ರೀತಿ ನಟನೆ ಮಾಡತೊಡಗಿದೆವು..
ಎಡಕಲ್ಲು ಗುಡ್ಡ ಬಾ ಎನ್ನುತ್ತಲೇ ಇತ್ತು.. ದಾರಿ ಮಧ್ಯದಲ್ಲಿ ಇದ್ದ ದೊಡ್ಡ ದೊಡ್ಡ ಬಂಡೆಗಳ ಪೋಟೋ ತೆಗೆಯುವ ನೆಪದಲ್ಲಿ ಹುಡುಗಿಯರ ಪೋಟೋ ತೆಗೆಯುವ ಯತ್ನ ಮಾಡಿ ಸಫಲರಾದೆವು..
ಹೀಗಿರುವಾಗ ಎಡಕಲ್ಲು ಗುಡ್ಡದ ಬುಡ ಬಂದಿತು.. ರಸ್ತೆ ಇಲ್ಲಿಗೆ ಮುಕ್ತಾಯವಾಗುತ್ತದೆ.. ಇನ್ನು ಮುಂದೆ ಒರಟು ದಾರಿಯಲ್ಲಿ ಗುಡ್ಡ ಹತ್ತಬೇಕು.. ಹತ್ತಲು ಅಣಿಯಾದರೆ ಬಾಯಾರಿಕೆ..
ಅಲ್ಲೊಂದು ಕಡೆ ಬಾಯಿಗಷ್ಟು ದ್ರವಾಹಾರವನ್ನು ಹಾಕಿ ಮುಂದಕ್ಕೆ ಹೆಜ್ಜೆ ಹಾಕಿದೆವು.. ನೆತ್ತಿಯ ಮೇಲೆ ಬಂದಿದ್ ಸೂರ್ಯ ಸುಡಲು ಪ್ರಾರಂಭಿಸಿದ್ದ..
(ಮುಂದುವರಿಯುತ್ತದೆ..)

No comments:

Post a Comment