Tuesday, August 12, 2014

ಸತ್ಯವಾದ ಹನಿಗಳು

ಕಾರಣ

ಸನಾತನಿಗಳ ಬಗ್ಗೆ

ವಿರುದ್ಧ ಚೀರಾಡುವವರಿಗೆ
ಇರುವ ಒಂದೇ ಕಾರಣ
ವಿನಾಕಾರಣ |

ಪಂಚ್


ಬಚ್ಚಲಮನೆಯ ಎದುರು ಬರೆದಿದ್ದ ಬರಹ :

ನಿಮ್ಮೊಳಗಿನ ಸಂಗೀತಗಾರನಿಗೆ ಇಲ್ಲಿ ವೇದಿಕೆ ಇದೆ..

ಇಬ್ಬಗೆ


ಮೂಢನಂಬಿಕೆ
ನಿಷೇಧಿಸಬೇಕೆಂದರು
ಮುಖ್ಯಮಂತ್ರಿ
ಸಿದ್ದರಾಮಯ್ಯರು..|
ಕಾವೇರಿ ಒಡಲು ತುಂಬಿತು
ಬಾಗಿನ ಕೊಟ್ಟರು ||

ಒಗ್ಗೂಡು

ಬಿಹಾರದಲ್ಲಿ
ಒಂದಾದರು
ನಿತೀಶ್ ಹಾಗೂ ಲಾಲೂ
ಇನ್ನುಮುಂದೇನಿದ್ದರೂ
ಬಾಣದ ಜೊತೆಗೆ ಕಂದೀಲು ||

No comments:

Post a Comment