Tuesday, April 1, 2014

ಯುಗಾದಿ

ಯುಗಾದಿ ಬಂತು, ಯುಗಾದಿ ಬಂತು
ಸಂತಸವ ತಂತು |

ವಸಂತ ಬಂದ ನಾಡಿಗೆ ಹರುಷದ
ಭಾಗ್ಯವನೇ ತಂದ |

ಕೋಗಿಲೆಯಿಂದ ಸುಂದರ ಹಾಡು
ಅದೃಶ್ಯವಾಗಿ ಬಂತು |

ಗಿಡಮರವೆಲ್ಲ ನಾಡಿನ ಸೊಬಗಿಗೆ
ಚಿಗುರನ್ನೇ ತಂತು |

ರೈತರ ಬೆವರು ಇಬ್ಬನಿಯಾಗಿ
ಧರೆಗಿಳಿದು ಬಂತು |

ನಾಡಿನ ಜನತೆಗೆ ಅನ್ನವ ನೀಡಲು
ಮುನ್ನುಡಿ ಇದು ಎಂತು |

ಜನತೆಗೆಲ್ಲ ಬೇವು ಬೆಲ್ಲವು
ಸವಿಯನ್ನು ತಂತು |

ಸುಖದ ಜೊತೆಗೆ ಕಷ್ಟವು ಇರುವ
ಅರಿವನ್ನು ತಂತು |

**

(ಈ ಕವಿತೆಯನ್ನು ಬರೆದಿದ್ದು 17-03-2004ರಂದು ದಂಟಕಲ್ಲಿನಲ್ಲಿ)
(ಕವಿತೆಯೊಂದಿಗೆ ಯುಗಾದಿಯ ಹಾರ್ದಿಕ ಶುಭಾಷಯಗಳು)

No comments:

Post a Comment