Thursday, October 25, 2018

ಗೆಳತಿ ನೀನಿಲ್ಲದೇ.!

ನಿನ್ನೊಡನೆ
ಮಾತಾಡಲಾಗದೇ
ಪದಗಳು ಬಿಕ್ಕುತ್ತಿವೆ
ಗೆಳತಿ...
ಮನದ ಕದ ಕಿರ್ರೆನ್ನುತ್ತಿದೆ..!!

ನನ್ನಷ್ಟಕ್ಕೆ ನಾನೇ
ಬೆಂದು ಹಣ್ಣಾಗುತ್ತಿದ್ದೇನೆ
ಗೆಳತಿ,
ನಿನ್ನ ಜೊತೆಯಿಲ್ಲದೇ..||

ಕಣ್ಣೆವೆಗಳಲ್ಲಿ
ನೀರು ತೊಟ್ಟಿಕ್ಕಲು
ಸಮಯ ಕಾದಿದೆ
ಗೆಳತಿ
ನೀನಿಲ್ಲದೇ..!!

(Incomplete...!!!)

Monday, October 22, 2018

ಅಡ್ಡ ಹೆಸರಿನ ಅಡ್ಡಾದಲ್ಲಿ…!

ಕಾಲೇಜು ದಿನಗಳಲ್ಲಿ ಅಡ್ಡ ಹೆಸರು ಎನ್ನುವುದು ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ. ವಿಶಿಷ್ಟ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಇಂತಹ ಅಡ್ಡ ಹೆಸರುಗಳಲ್ಲಿ ಹಲವು ಫನ್ನಿಯಾಗಿದ್ದರೆ, ಇನ್ನೂ ಕೆಲವುಗಳು ಸಿಲ್ಲಿಯಾಗಿರುತ್ತವೆ.
ಪ್ರತಿಯೊಬ್ಬರಿಗೂ ಅವರದೇ ಆದ ನಾಮಧೇಯಗಳಿದ್ದರೂ, ಅವರವರ ಹವ್ಯಾಸ, ಅಭಿನಯ, ಚಟ ಹೀಗೆ ಹಲವು ಕಾರಣಗಳಿಂದಾಗಿ ಹೆಸರಿನ ಮುಂದೆ ಅಡ್ಡ ಹೆಸರುಗಳು ಸೇರಿಕೊಂಡು ಬಿಡುತ್ತವೆ. ಕೆಲವೊಮ್ಮೆ ನಿಜವಾದ ಹೆಸರೇ ಮರೆತು ಹೋಗುವಷ್ಟರ ಮಟ್ಟಿಗೆ ಅಡ್ಡ ಹೆಸರುಗಳಲ್ಲಿ ಕರೆಯಲಾಗುತ್ತದೆ. ಹಲವು ಸಾರಿ ಈ ಅಡ್ಡ ಹೆಸರುಗಳಿಗೆ ಎಲ್ಲರೂ ಹೊಂದಿಕೊಂಡು ಬಿಡುತ್ತಾರೆ. ಕೆಲವೊಮ್ಮೆ ಮಾತ್ರ ವಿರೋಧಗಳು ಕೇಳಿ ಬರುತ್ತವೆ ಅಷ್ಟೇ.
ಸುಮ್ಮನೆ ಕಾಲೇಜು ದಿನಗಳ ಗೆಳೆಯರ ಬಳಗವನ್ನು ಗಮನಿಸಿ, ಅವರ ಬಳಗದಲ್ಲಿ ಹೆಚ್ಚಿನ ಮಂದಿ ತಮ್ಮ ನಿಜವಾದ ಹೆಸರುಗಳಿಂದ ಕರೆದುಕೊಳ್ಳುವುದೇ ಇಲ್ಲ. ಕೆಂಪ, ಬಿಡ್ಡ, ಮಚ್ಚಾ, ಮಗಾ, ಕುಂಟ, ಕುಳ್ಳ ಹೀಗೆ ಅವರವರ ಗಾತ್ರಗಳಿಗನುಗುಣವಾಗಿ ಅಡ್ಡ ಹೆಸರುಗಳು ಸ್ಥಾನ ಪಡೆದುಕೊಳ್ಳುತ್ತವೆ. ಇನ್ನು ಗುಂಪಿನಲ್ಲೊಬ್ಬ ಮಂಜ ಎನ್ನುವ ಹೆಸರಿನವನ್ನು ಇದ್ದರಂತೂ ಕೋಳಿ ಎಂಬ ಅಡ್ಡ ಹೆಸರು ಆತನಿಗೆ ಖಾಯಂ ಎಂಬಂತಾಗಿದೆ.
ಗೆಳೆಯರ ಬಳಗದಲ್ಲೊಬ್ಬ ಹುಲಿ ಇರುತ್ತಾನೆ, ದಾಸ ಇರುತ್ತಾ. ಇನ್ನು ಆ ಬಳಗದಲ್ಲಿ ಬ್ರಾಹ್ಮಣರ ಹುಡುಗರು ಇದ್ದರಂತೂ ಅವರಿಗೆ ಭಟ್ಟ, ಹೆಗಡೆ ಅಥವಾ ಪುಳಚಾರ್ ಎಂಬ ಅಡ್ಡ ಹೆಸರು ಖಾಯಂ.
ಕರ್ನಾಟಕದಲ್ಲಿ ಪ್ರಾದೇಶಿಕವಾಗಿ ಅಡ್ಡ ಹೆಸರುಗಳು ಬದಲಾಗುತ್ತವೆ. ಉತ್ತರ ಕರ್ನಾಟಕದಲ್ಲಿ ಅಡ್ಡ ಹೆಸರುಗಳೂ ರಗಡ್ ಆಗಿರುತ್ತವೆ. ಮೆಣಸಿನಕಾಯಿ, ಬೆಳ್ಳಕ್ಕಿ, ಇಂತಹ ಹೆಸರುಗಳು ಉತ್ತರ ಕರ್ನಾಟಕದಲ್ಲಿಕಾಣಸಿಗುತ್ತವೆ. ಅದೇ ದಕ್ಷಿಣ ಕರ್ನಾಟಕ ಭಾಗಗಳಿಗೆ ಬಂದರೆ ಅಲ್ಲಿ ಕರೆಯುವ ಅಡ್ಡ ಹೆಸರುಗಳು ಭಿನ್ನ. ಬಿಡ್ಡ, ಕೆಂಪ, ಕರಿಯ, ದೊಡ್ಡಣ್ಣ, ಚಿಕ್ಕಣ್ಣ ಇತ್ಯಾದಿಗಳು ಇಲ್ಲಿ ಜಾಸ್ತಿ. ಬೆಂಗಳೂರು ಕಡೆಗಳಲ್ಲಿ ಬಳಕೆಯಾಗುವ ಅಡ್ಡ ಹೆಸರುಗಳಲ್ಲಿ ತಮಿಳು, ತೆಲುಗಿ ಪ್ರಭಾವ ಜಾಸ್ತಿ ಇರುತ್ತವೆ. ಅದೇ ಕಾರಣಕ್ಕೆ ಬೆಂಗಳೂರು ಭಾಗದಲ್ಲಿ ಮಚ್ಚಾ, ಮಗಾ, ಸಿವಾ ಇಂತದ್ದೆಲ್ಲ ಜಾಸ್ತಿ. ಮಂಗಳೂರು, ಉಡುಪಿ, ಉತ್ತರ ಕನ್ನಡಗಳಲ್ಲಿ ಕರೆಯುವ ಅಡ್ಡ ಹೆಸರುಗಳು ಇನ್ನಷ್ಟು ಬೇರೆ ಬೇರೆಯಾಗಿರುತ್ತವೆ.
ಸಿನಿಮಾ ನಟರುಗಳ ಹೆಸರನ್ನು ಅಡ್ಡ ಹೆಸರಾಗಿ ಕರೆಯುವ ವಾಡಿಕೆ ಹಲವು ಸಂದರ್ಭಗಳಲ್ಲಿದೆ. ಯಾವುದೋ ಹುಡುಗನಿಗೆ ಯಾರೋ ಹೀರೋ ಇಷ್ಟವಾದರೆ, ಆ ನಟನ ಚಿತ್ರಗಳ ಹೆಸರನ್ನು ಹೇಳಿ ಕರೆಯುವುದು, ಇನ್ಯಾರಿಗಾದರೂ ಚಿನ್ರನಟನ ಹೋಲಿಕೆ ಇದ್ದರೆ ಅದೇ ಹೆಸರಿನಿಂದ ಕರೆಯುವುದು ಹೀಗೆ. ಇನ್ನು ಆತ/ಆಕೆ ಏನಾದರೂ ತಪ್ಪನ್ನು ಮಾಡಿದರೆ ಅದನ್ನೇ ಅಡ್ಡ ಹೆಸರಿನಿಂದ ಕರೆದಿರುವುದೂ ಇದೆ.
ನಾವು ಹೈಸ್ಕೂಲಿಗೆ ಹೋಗುವಾಗ ಒಬ್ಬ ವಿದ್ಯಾರ್ಥಿ ಇದ್ದ. ಆತನಿಗೆ ಹಕ್ಕಿಗಳನ್ನು ಬೇಟೆಯಾಡುವುದು ಅಂದರೆ ಬಹಳ ಖುಷಿಯ ಸಂಗತಿಯಾಗಿತ್ತು. ಆತನ ಸಾಮರ್ಥ್ಯ ಎಷ್ಟಿತ್ತೆಂದರೆ ಆತ ಕವಣೆ ಕಲ್ಲನ್ನು ಬೀಸಿಯೋ ಅಥವಾ ಚ್ಯಾಟರ್ ಬಿಲ್ಲಿನಿಂದ ಹೊಡೆದೋ ಪಿಕಳಾರ ಹಕ್ಕಿಗಳನ್ನು ಕೊಂದು ಅದನ್ನು ತಿನ್ನುತ್ತಿದ್ದ. ಇದರಿಂದಾಗಿ ಆತನಿಗೆ ಪಿಕಳಾರ ಎಂಬ ಅಡ್ಡ ಹೆಸರೇ ಬಂದಿತ್ತು. ಹಲವು ಸಂದರ್ಭಗಳಲ್ಲಿ ಮದ್ಯಪಾನ ಮಾಡುವವರು, ಮದ್ಯದ ಕಂಪನಿಗಳ ಹೆಸರನ್ನು ಕಿರಿದಾಗಿಸಿ ಅಡ್ಡ ಹೆಸರಿನಿಂದ ಕರೆದಿದ್ದೂ ಇದೆ. ಎಂಸಿ, ಕೆಎಫ್ ಇತ್ಯಾದಿ ಅಡ್ಡ ಹೆಸರುಗಳು ಹಲವರಿಗಿರುತ್ತವೆ. ಹಲವು ಸಂದರ್ಭಗಳಲ್ಲಿ ಯಾರದ್ದಾದರೂ ಒನ್ ವೇ ಲವ್ ಇದ್ದರೆ, ಆ ಹುಡುಗಿಯ ಹೆಸರನ್ನು ಸೇರಿಸಿ ಕೀಟಲೆ ಮಾಡುವುದೂ ಇದೆ.
ಪ್ರತಿ ಗ್ರೂಪನ್ನೂ ಗಮನಿಸಿ. ಅಲ್ಲೊಬ್ಬ ದಾಸ ಇರುತ್ತಾನೆ. ಪುಂಡ ಇರುತ್ತಾನೆ. ಪೋಲೀಸ ಇರುತ್ತಾನೆ. ಮಿಲಿಟ್ರಿ ಇರುತ್ತಾನೆ. ಇಂತಹ ಹೆಸರುಗಳನ್ನು ಆಯಾಯಾ ವಿದ್ಯಾರ್ಥಿಗಳು ತಮ್ಮ ಪಾಲಿಗೆ ಸಿಕ್ಕ ಬಿರುದು, ಬಾವಲಿಗಳೆಂಬಂತೆ ಸಂತಸದಿಂದಲೇ ಸ್ವೀಕಾರ ಮಾಡುತ್ತಾರೆ. ಕಾಲೇಜು ದಿನಗಳಲ್ಲಿ ಆರಂಭವಾದ ಗೆಳೆತನ ಬದುಕಿನುದ್ದಕ್ಕೂ ಮುಂದುವರೆದ ಸಂದರ್ಭದಲ್ಲಿ ಆ ಮಿತ್ರ ಮಂಡಳಿಗಳು ಪರಸ್ಪರರನ್ನು ಅಡ್ಡ ಹೆಸರಿನಿಂದಲೇ ಕರೆದುಕೊಂಡ, ಕರೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ.
ಇನ್ನು ಹುಡುಗಿಯರಿಗೂ ಕೂಡ ಅಷ್ಟೇ ವಿಶಿಷ್ಟ ಅಡ್ಡ ಹೆಸರುಗಳಿರುತ್ತವೆ. ಯಾರಾದರೂ ಉದ್ದವಾದ ಹುಡುಗಿ ಇದ್ದರೆ ಅವರನ್ನು ಕೊಕ್ಕರೆ ಎಂತಲೋ, ಒಂಟೆ ಎಂದೋ ಕರೆಯುತ್ತಾರೆ. ದಪ್ಪ ಇದ್ದವಳ ಹೆಸರು ಏನೇ ಇದ್ದರೂ ಆಕೆ ಡುಮ್ಮಿ ಎಂದೋ, ಟೆಡ್ಡಿಯಾಗಿಯೋ, ಕರಡಿಮರಿಯಾಗಿಯೋ ಕರೆಸಿಕೊಳ್ಳುತ್ತಾಳೆ.
ಹಲವು ಸಂದರ್ಭಗಳಲ್ಲಿ ಅಡ್ಡ ಹೆಸರಿನ ಬಳಕೆ ಅತಿರೇಕಕ್ಕೆ ಹೋದದ್ದೂ ಇದೆ. ವಿದ್ಯಾರ್ಥಿ ವಿದ್ಯಾರ್ಥಿಗಳ ನಡುವೆ ಹೊಡೆದಾಟಗಳು ನಡೆದಿದ್ದೂ ಇದೆ. ಇಂತಹ ಅಡ್ಡ ಹೆಸರುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದದ್ದೂ ಇದೆ. ಆದರೆ ಇವೆಲ್ಲ ಸುಮ್ಮನೆ ಅತಿರೇಕ ಎನ್ನಿಸಿಕೊಳ್ಳುತ್ತವೆ.
ಕಾಲೇಜು ಬದುಕು ಎಂದ ಮೇಲೆ ಓದು, ಆಟ, ಓಟ, ಸಂತಸ, ಸಂಭ್ರಮಗಳು ಎಷ್ಟು ಸಹಜವೋ ಅದೇ ರೀತಿ ಅಡ್ಡ ಹೆಸರುಗಳೂ ಕೂಡ. ಇವು ಆ ದಿನಗಳ ಬದುಕಿನಲ್ಲಿ ಪ್ರಮುಖ ಭಾಗವಾಗಿ ಬದಲಾಗುತ್ತವೆ. ಇವನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡರೆ ಸುಮ್ಮನೇ ಬೇಸರಕ್ಕೆ ಕಾರಣವಾಗುವುದಷ್ಟೇ. ಬದಲಾಗಿ ಅಡ್ಡ ಹೆಸರುಗಳನ್ನು ಸುಮ್ಮನೇ ಎಂಜಾಯ್ ಮಾಡೋಣ ಬನ್ನಿ. ಕರೆಯುವವರು ಕರೆಯಲಿ, ಹೇಳುವವರು ಹೇಳಿಲಿ, ಖುಷಿಯಾಗಿರೋಣ. ಅಡ್ಡ ಹೆಸರುಗಳನ್ನು ಪ್ರೀತಿಯಿಂದ ಆದರಿಸಿ, ನಾವೂ ಕರೆದು, ಕರೆಸಿಕೊಂಡು ಖುಷಿ ಪಡೋಣ. ಅಡ್ಡ ಹೆಸರುಗಳು ಯಾಕಾಗಿ ಹುಟ್ಟಿಕೊಳ್ಳುತ್ತವೆ ಎನ್ನುವುದು ಕಷ್ಟ. ಅದೇ ರೀತಿ ಅಡ್ಡ ಹೆಸರನ್ನು ಇಡುವುದನ್ನು ತಡೆಯುವುದೂ ಕೂಡ ಕಷ್ಟ. ಯಾರೋ ಅಡ್ಡ ಹೆಸರನ್ನಿಟ್ಟರು ಎಂದು ಬೇಸರಿಸದೇ, ಅದಕ್ಕಾಗಿ ಸಿಟ್ಟು ಮಾಡಿಕೊಳ್ಳದೇ ಆ ಸಂದರ್ಭಗಳನ್ನು ಎಂಜಾಯ್ ಮಾಡೋಣ. ಸೂಕ್ತ ಸಂದರ್ಭ, ಸಮಯಗಳು ಸಿಕ್ಕರೆ ನಾವೂ ಕೂಡ ಯಾರಿಗಾದರೂ ಅಡ್ಡ ಹೆಸರು ಇಡಬಲ್ಲೆವು ಎಂಬುದನ್ನು ತೋರಿಸೋಣ. ತೀರಾ ಬದುಕಿಗೆ ಘಾಸಿಯಾಗದಂತೆ ಅಡ್ಡ ಹೆಸರನ್ನಿಟ್ಟು ಸಂಭ್ರಮಿಸೋಣ. ಅಲ್ಲವೇ.



Saturday, October 20, 2018

ಇದ್ದರೆ ಇರಬೇಕು ಇಂತಹ ಗುರು

ಕ್ರಿಕೆಟ್ ಲೋಕದ ಈ ಜಂಟಲ್‌ಮ್ಯಾನ್ ರನ್ ಗುಡ್ಡೆ ಹಾಕಿಲ್ಲ, ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸುರಿಸಲಿಲ್ಲ. ಯಾವುದೋ ಪ್ರಶಸ್ತಿಗಳ ಬೆನ್ನು ಹತ್ತಲಿಲ್ಲ. ರಾಜ್ಯಸಭಾ  ಸದಸ್ಯತ್ವ ಕೊಡಿ ಎನ್ನಲಿಲ್ಲ. ತಾವಾಯಿತು, ತಮ್ಮ ಶ್ರಮವಾಯಿತು ಎಂದುಕೊಂಡೇ ಉಳಿದರು. ತೆರೆಮರೆಯಲ್ಲೇ ಉಳಿದು, ಮುಂದಿನ ಜಮನಾದ ಸ್ಟಾರ್‌ಗಳನ್ನು ಕೆತ್ತುವ ಕೆಲಸ ಮಾಡಿದರು. ಹಾಗೆ ಮಾಡುತ್ತಲೇ ಎಲ್ಲರ ಕಣ್ಮಣಿ ಆದರು. ಬ್ಯಾಾಟಿಂಗ್ ಎಂಬ ಆಯುಧವನ್ನು ಕಳಚಿಟ್ಟರೆ ಏನಂತೆ, ನನ್ನೊಳಗಿನ ಪ್ರತಿಭಾ  ಪೋಷಣೆಯ ಶಕ್ತಿ ಸಾಕಷ್ಟಿದ್ದು, ನನ್ನಂತಹ ಇನ್ನೂ ಅನೇಕರನ್ನು ತಯಾರು ಮಾಡಬಲ್ಲೇ. . . ಎಂದು ಕೊಂಡು ಹೆಜ್ಜೆ ಹಾಕಿದ ವ್ಯಕ್ತಿ ಇವರು. ಇವರೇ ರಾಹುಲ್ ಶರತ್‌ಚಂದ್ರ ದ್ರಾಾವಿಡ್. ಭಾರತ ಎ ಕ್ರಿಕೆಟ್ ತಂಡ ಹಾಗೂ ಅಂಡರ್ 19 ತಂಡದ ಮುಖ್ಯ ಕೋಚ್.
ಪದಾರ್ಪಣೆ ಪಂದ್ಯದಲ್ಲಿ ಶತಕ ಭಾರಿಸಿದ ಪೃಥ್ವಿ ಶಾ ಮೊದಲು ಪೋನ್ ಮಾಡಿದ್ದು ದ್ರಾವಿಡ್‌ಗೆ, ನನ್ನ ಆಟ ಉತ್ತಮವಾಗಲು, ಫಾರ್ಮಿಗೆ ಮರಳಲು ಕಾರಣವಾದದ್ದು ಗುರು ರಾಹುಲ್ ದ್ರಾವಿಡ್ ಎಂದು ಹೇಳಿದ್ದು ಮಯಾಂಕ್ ಅಗರ್ವಾಲ್, ಟೆಸ್ಟ್ಗೆ ಆಯ್ಕೆಯಾಗಿ ಅರ್ಧ  ಶತಕ ಭಾರಿಸಿದ ಹನುಮ ವಿಹಾರಿ ಧನ್ಯವಾದ ಸಲ್ಲಿಸಿದ್ದು ಗುರು ದ್ರಾವಿಡ್‌ಗೆ, ಅಷ್ಟೇ ಏಕೆ, ಭಾರತ ಟೆಸ್ಟ್  ತಂಡದ ಮಧ್ಯಮ ಕ್ರಮಾಂಕದ ಖಾಯಂ ಆಟಗಾರ ತಮ್ಮ ಫಾರ್ಮ್ ಕಳೆದುಕೊಂಡಾಗೆಲ್ಲ ಸಲಹೆ ಪಡೆಯುವುದು ದ್ರಾವಿಡ್ ಬಳಿಯೇ.
ದ್ರಾವಿಡ್ ಎಂಬ ಕ್ರಿಕೆಟ್ ಲೋಕದ ಮಹಾ ಗುರುವಿನ ಕುರಿತು ಹೆಚ್ಚು ಹೇಳಬೇಕಾಗಿಲ್ಲ. ಈ ಮೇಲಿನ ಅಭಿಪ್ರಾಯಗಳೇ ದ್ರಾವಿಡ್ ಕಲಿಸುವಿಕೆಯನ್ನು ತಿಳಿಸಿ ಹೇಳುತ್ತವೆ.
ರಾಹುಲ್ ದ್ರಾವಿಡ್. ಕೆಲವೇ ವರ್ಷಗಳ ಹಿಂದೆ ಭಾರತದ ಪಾಲಿಗೆ ದಿ ವಾಲ್ ಆಗಿದ್ದವರು. ಕಲಾತ್ಮಕತೆಗೆ, ನಂಬಿಕೆಗೆ, ನಿರಂತರ ಪ್ರದರ್ಶನಕ್ಕೆ ಇನ್ನೊೊಂದು ಹೆಸರಾಗಿದ್ದವರು. ಟೆಸ್ಟ್  ಕ್ರಿಕೆಟ್‌ನಲ್ಲಿ  ಭಾರತದ ತಂಡದ ರಕ್ಷಕನಾಗಿ, ಆಪದ್ಭಾಾಂಧ ವನಾಗಿದ್ದವರು. ಎಲ್ಲ ನಂಬಿಕಸ್ಥ ಬ್ಯಾಟ್‌ಸ್‌‌ಮನ್‌ಗಳು ವಿಲವಾದ ಸಂದರ್ಭದಲ್ಲೂ ದ್ರಾವಿಡ್, ನಾನಿದ್ದೇನೆ ಎಂದು ತಂಡಕ್ಕಾಗಿ ಏಕಾಂಗಿಯಾಗಿ ಹೋರಾಡಿದವರು. ಹಲವು ಟೆಸ್‌ಟ್‌ ಹಾಗೂ ಏಕದಿನ ಪಂದ್ಯಗಳನ್ನು ಭಾರತದ ಪಾಲಿಗೆ ಉಳಿಸಿಕೊಟ್ಟವರು. ಇಂತಹ ದ್ರಾವಿಡ್ ನಿವೃತ್ತಿಯಾದಾಗ ಭಾರತದ  ಪಾಲಿಗೆ ಮುಂದೇನು ಎನ್ನುವ ಪ್ರಶ್ನೆಗಳು ಕಾಡಿದ್ದು ಸುಳ್ಳಲ್ಲ.
ಕ್ರಿಕೆಟ್ ಅಂಗಣದಿಂದ ನಿವೃತ್ತಿಯಾದರೇನಂತೆ ನನ್ನಂತಹ ಹಲವು ದ್ರಾವಿಡ್‌ರನ್ನು ಸೃಷ್ಟಿ ಮಾಡಿಕೊಡುತ್ತೇನೆ ಎಂದು ನಿಲುವು ತಾಳಿದ್ದು ಇದೇ ದಿ ವಾಲ್. ಆಟಗಾರನಾಗಿ ವಿದಾಯ ಹೇಳಿದ್ದರೂ ತರಬೇತುದಾರನಾಗಿ ಭಾರತದ  ಪಾಲಿಗೆ ಮತ್ತದೇ ಆಪದ್ಬಾಾಂಧವನ ಪಾತ್ರ ವಹಿಸುತ್ತಿರುವವನು ದ್ರಾವಿಡ್.
ಸುಮ್ಮನೇ ಗಮನಿಸಿ, ಅದೆಷ್ಟೋ ಯುವಕರು ಭಾರತ  ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ತುದಿಗಾಲಲ್ಲಿದ್ದಾರೆ. ಮತ್ತೆ ಹಲವರು ತಮ್ಮ ಬ್ಯಾಟಿಂಗ್ ಪ್ರತಿಭೆಯ ಮೂಲಕ ರಾಷ್ಟ್ರೀಯ ತಂಡದ ಕದವನ್ನು ತಟ್ಟುತ್ತಿದ್ದಾರೆ. ಮೊದಲಿನಂತೆ ಯಾವುದೇ ಆಟಗಾರ ವಿಫಲನಾದರೆ ಯಾರನ್ನು ಹುಡುಕುವುದು ಎನ್ನುವ ಪ್ರಶ್ನೆ ಇದೀಗ ಆಯ್ಕೆ ಮಂಡಳಿಯನ್ನು ಕಾಡುವುದಿಲ್ಲ. ದ್ರಾವಿಡ್ ಹಲವು ಆಟಗಾರರನ್ನು ಬದಲಿಯಾಗಿ ರೂಪಿಸಿ ಇಟ್ಟಿದ್ದಾರೆ. ಇದೇ ದ್ರಾವಿಡ್ ತಾಕತ್ತು.
ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ರಿಷಬ್ ಪಂಥ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅನುಕೂಲ್ ರಾಯ್, ಹನುಮ ವಿಹಾರಿ, ಶುಬ್‌ಮನ್ ಗಿಲ್, ಮನ್‌ಜ್ಯೋತ್ ಕಲ್ರಾ, ಹಿಮಾಂಶು ರಾಣಾ... ದ್ರಾವಿಡ್ ಗರಡಿಯಲ್ಲಿ ಪಳಗಿ, ಬೆಳಗಿದವರ ಲೀಸ್‌ಟ್‌ ಹೀಗೆಯೇ ಮುಂದುವರಿಯುತ್ತದೆ. ಮುಂದುವರಿಯುತ್ತಲೇ ಇದೆ ಬಿಡಿ.
ದ್ರಾವಿಡ್ ಭಾರತದ ಎ ತಂಡದ ಹಾಗೂ ಅಂಡರ್ 19 ತಂಡದ ಕೋಚ್ ಆಗಿದ್ದಾಗ, ಅವರು ಹಿರಿಯರ ತಂಡದ ಕೋಚ್ ಆಗಬೇಕಿತ್ತು ಎಂದು ಬಯಸಿದವರು ಅನೇಕರು. ಆ ಸಂದರ್ಭದಲ್ಲಿ  ಅಂತಹ ಆಫರ್‌ನ್ನು ನಯವಾಗಿ ತಿರಸ್ಕರಿಸಿದ ದ್ರಾವಿಡ್, ಕ್ರಿಕೆಟ್ ಲೋಕದ ಯುವ ಮನಸ್ಸುಗಳನ್ನು ಮಾಗಿಸುವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಷ್ಟೇ ಅಲ್ಲ, ಗೆಲುವು ಸಾಸುವ ಜತೆ ಹೇಗೆ ಸಂಭ್ರಮಿಸಬೇಕು ಎಂಬುದನ್ನೂ ಹೇಳಿಕೊಟ್ಟರು. ಅಪ್ಘಾನಿಸ್ಥಾನದಂತಹ ತಂಡಗಳು ಅಚ್ಚರಿಯ ಹಾಗೂ ಗುಣಮಟ್ಟದ ಕ್ರಿಕೆಟ್ ಪ್ರದರ್ಶನ ನೀಡಿದಾಗೆಲ್ಲ ಅಂತವರ ಬೆನ್ನಿಗೆ ನಿಂತು ಶ್ಲಾಘಿಸುವ ಕಾರ್ಯವನ್ನೂ ಕೈಗೊಂಡು ಆದರ್ಶ ಮೆರೆದರು.
ದ್ರಾವಿಡ್ ಕ್ರಿಕೆಟ್ ಕೋಚ್ ಆಗಿ ಅಷ್ಟೇ ಕಾರ್ಯ ನಿರ್ವಹಿಸಲಿಲ್ಲ. ಬದಲಾಗಿ ಅಥ್ಲೆಟಿಕ್‌ಸ್‌‌ನ ಪ್ರತಿಭೆಗಳ ಬೆನ್ನಿಗೆ ನಿಲ್ಲುವ ಕಾರ್ಯವನ್ನೂ ಮಾಡಿದರು. ಏಷ್ಯನ್ ಗೇಮ್‌ಸ್‌‌ನಲ್ಲಿ ಪದಕ ಗೆದ್ದ ಸ್ವಪ್ನ ಬರ್ಮನ್‌ಳಂತಹ ಹಲವು ಪ್ರತಿಭೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ತಾನು ಎಲ್ಲರಿಗಿಂತ ಭಿನ್ನ ಎಂಬುದನ್ನು ನಿರೂಪಿಸಿದರು.
ದ್ರಾವಿಡ್ ಶಿಷ್ಯರು ಇದೀಗ ಭಾರತದ ಕ್ರಿಕೆಟ್ ತಂಡದ ಆಧಾರ ಸ್ಥಂಭವಾಗುವಂತಹ ಹಂತ ತಲುಪಿದೆ. ದ್ರಾವಿಡ್ ಹುಡುಗರು ಇದೀಗ ಸದ್ದು ಮಾಡುತ್ತಿದ್ದಾರೆ. ಹೀಗೆಯೇ ಮುಂದುವರಿದಲ್ಲಿ, ಮುಂದಿನ ದಿನಗಳಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಭಾರತ ತಂಡಕ್ಕೆ ಆಯ್ಕೆ ಆದ ಸಂದರ್ಭದಲ್ಲಿ ತನ್ನ ಈ ಸಾಧನೆಗೆ ದ್ರಾವಿಡ್ ತರಬೇತಿ ಹಾಗೂ ಸಲಹೆಯೇ ಕಾರಣ ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಇದ್ದರೆ ಇರಬೇಕು ಇಂತಹ ಗುರು ಎಂಬಂತಾಗಿದೆ.

Thursday, October 11, 2018

ಮ್ಯಾಕ್ಸ್ ಮುಲ್ಲರನ ದತ್ತು ಪುತ್ರ ಭಗವಾನ್ ಮನಸ್ಸಿನ ಗೊಂದಲಗಳು


ಕೆಲವರಿರುತ್ತಾರೆ, ಅವರಿಗೆ ಇದ್ದದ್ದರಲ್ಲಿ ಕೊಂಕನ್ನು ಹುಡುಕುವುದು, ತಪ್ಪನ್ನು ಹುಟ್ಟು ಹಾಕುವುದು ಇತ್ಯಾದಿಗಳ ಮೇಲೆಯೇ ಆಸಕ್ತಿ. ಎಲ್ಲವನ್ನೂ ಸುಳ್ಳು ಎನ್ನುವ ಮೂಲಕ ತಮ್ಮ ಅಸ್ತಿತ್ವವನ್ನು ಪ್ರಚುರ ಪಡಿಸುವುದೇ ಬಹುಮುಖ್ಯ ಕಾರ್ಯವಾಗುತ್ತದೆ. ಅಂತಹ ಸಾಲಿನಲ್ಲಿ ಮುಖ್ಯವಾಗಿರುವವರೇ ಭಗವಾನ್.ಕಳೆದ ಕೆಲವು ವರ್ಷಗಳನ್ನು ನೋಡಿದರೆ ಪ್ರತಿ ದಸರಾ, ನವರಾತ್ರಿ ಬಂತೆಂದರೆ ಸಾಕು, ದೀಪಾವಳಿ ಬಂತೆಂದರೆ ಸಾಕು ಭಗವಾನ್ ತಮ್ಮ ನಾಲಗೆಯನ್ನು ಉದ್ದ ಮಾಡುತ್ತಾಾರೆ. ರಾಮ ಸುಳ್ಳು, ರಾಮಾಯಣ ನಡೆದಿಲ್ಲ, ಸೀತೆ ಸುಳ್ಳು, ಮಹಾಭಾರತ ನಡೆದಿಲ್ಲ, ಪುರಾಣಗಳೆಲ್ಲ ಪೊಳ್ಳು ಎನ್ನುವ ಅರ್ಥದಲ್ಲಿ ಮಾತನಾಡುತ್ತಾಾರೆ. ಯಜ್ಞ ಯಾಗಾದಿಗಳಲ್ಲಿ ಯಾವುದೇ ಶಕ್ತಿ ಇಲ್ಲ, ನೀವು ಕಟ್ಟಿಕೊಂಡ ದಾರಕ್ಕೆ ಶಕ್ತಿ ಇದ್ದರೆ ಪಾಕಿಸ್ಥಾನ ಹಾಗೂ ಚೀನಾದ ಗಡಿಗೆ ಹೋಗಿ ಯಜ್ಞ ಯಾಗಾದಿಗಳನ್ನು ಮಾಡಿ ಎಂದು ಹಲುಬುತ್ತಾರೆ. ಸಹಸ್ರ ಸಹಸ್ರ ವರ್ಷಗಳ ಭವ್ಯ ಇತಿಹಾಸವಿರುವ ಭಾರತದ ಕುರಿತು ಹೀಗಳೆಯುವ ಮಾತನಾಡುತ್ತಾಾರೆ. ಅಷ್ಟೇ ಏಕೆ ಯಾರಾದರೂ ತಮ್ಮನ್ನು ಉಪನ್ಯಾಾಸಕ್ಕೆ ಕರೆದರೆ, ಅಂತಹ ವೇದಿಕೆಗಳಲ್ಲಿ ಹಿಂದೂ ದೇವರುಗಳನ್ನು ಬಯ್ಯಲು ಶುರುವಿಟ್ಟುಕೊಳ್ಳುತ್ತಾಾರೆ. ನಮ್ಮ ಪುರಾಣಗಳ ಬಗ್ಗೆ, ಗಣಪ, ಕೃಷ್ಣ, ಶಿವ, ರಾಮ, ವಿಷ್ಣು ಹೀಗೆ ನಮ್ಮ ಅಸಂಖ್ಯಾತ ದೇವರುಗಳ ಬಗ್ಗೆ ತಮ್ಮದೇ ಆದ ಹೊಸ ವ್ಯಾಖ್ಯಾನಗಳನ್ನು ನೀಡಲು ಆರಂಭಿಸುತ್ತಾರೆ. ಯಜ್ಞ ಯಗಾದಿಗಳನ್ನು ದ್ವೇಷ ಮಾಡುತ್ತಾರೆ. ತಮ್ಮ ಮನಸ್ಸಿನಲ್ಲಿ ಏನೇನು ಅಂಶಗಳು ಮೂಡುತ್ತವೆಯೋ ಅದನ್ನೆಲ್ಲ ಸಂಶೋಧನೆ ಎಂದು ಹೇಳುವ ಮೂಲಕ ಇತಿಹಾಸವೆಂಬ ಹಸಿ ಗೋಡೆಯ ಮೇಲೆ ಹರಳನ್ನು ಅಂಟಿಸಲು ಯತ್ನಿಸುತ್ತಾರೆ.ಇಂತಹ ಭಗವಾನರ ಮಾತುಗಳಿಗೆ ತಲೆಯಲ್ಲಾಡಿಸಲು ಕೆಲವು ವಂದಿ ಮಾಗಧರೂ ಇದ್ದಾರೆ. ಭಗವಾನ್ ಹೇಳಿದ್ದೆಲ್ಲ ಸತ್ಯ ಎನ್ನುವ ಹಿರಿ-ಕಿರಿ ಹಾಗೂ ಕಿರಿಕಿರಿ ತಲೆಗಳೂ ಇವೆ. ಭಗವಾನ್ ಒಂದು ಬಾಣವನ್ನು ಬಿಡುವುದನ್ನೇ ಕಾಯುತ್ತಿರುವ ಇಂತಹ ಪ್ರಭೃತಿಗಳೆಲ್ಲ ಆ ಬಾಣದ ಹಿಂದೆ ತಮ್ಮದೂ ಒಂದಿರಲಿ ಎಂದು ಸಾಲು ಸಾಲು ಕಿರು, ಮರಿ ಬಾಣಗಳನ್ನು ಬಿಡಲು ಆರಂಭಿಸುತ್ತಾರೆ. ಇಂತಹ ಪ್ರಭೃತಿಗಳಿಗೆ ನಿಜವಾದುದ್ಯಾವುದೂ ಬೇಕಾಗಿಲ್ಲ. ಇತಿಹಾಸವನ್ನು ತಿರುಚುವುದು, ನಮ್ಮದೇ ಸಂಪ್ರದಾಯ, ಸಂಸ್ಕೃತಿಗಳನ್ನು ಹೀಗಳೆಯುವುದು ಅಷ್ಟೇ ಸಾಕಾಗಿರುತ್ತದೆ. ಜತೆಗೆ ಸಮಾಜದಲ್ಲಿ ಮೇಲ್ವರ್ಗ, ಕೆಳವರ್ಗ, ತುಳಿತ, ದಮನ ಇತ್ಯಾಾದಿಗಳನ್ನು ಹುಟ್ಟು ಹಾಕುವ ಅನಿವಾರ್ಯತೆ, ಅಗತ್ಯತೆ, ಅದರ ನಡುವೆಯೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಜರೂರತ್ತಿರುತ್ತದೆ.ಸೂಕ್ಷ್ಮವಾಗಿ ಗಮನಿಸಿದಾಗ ಭಗವಾನ್ ಮಾತುಗಳಲ್ಲಿ ಅಡಗಿರುವ ಹಲವು ವೈರುಧ್ಯಗಳು, ಗೊಂದಲಗಳು, ವೈರುಧ್ಯಗಳು ತಟ್ಟನೆ ನಮ್ಮ ಕಣ್ಣೆದುರಿಗೆ ಬರುತ್ತವೆ. ಬಹುಶಃ ಇದನ್ನು ಭಗವಾನ್ ಬಳಿ ಕೇಳಿದರೆ ಹಾರಿಕೆ ಉತ್ತರ ನೀಡಬಹುದು ಅಥವಾ ಜಾರಿಕೊಂಡು ಇನ್ನೇನೋ ಹೇಳಿ ತಪ್ಪಿಸಿಕೊಳ್ಳಬಹುದೇನೋ. ಇನ್ನೂ ಗಟ್ಟಿಯಾಗಿ ಕೇಳಿದರೆ ತುಳಿತ, ಹೇರಿಕೆ ಇತ್ಯಾದಿ ಶಬ್ದಗಳನ್ನು ಬಳಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಬಹುದು.ಭಗವಾನ್ ಹಲವು ವರ್ಷಗಳಿಂದ ಹೇಳಿಕೊಂಡು ಬಂದಿರುವುದೆಂದರೆ ರಾಮಾಯಣ ಸುಳ್ಳು ಎನ್ನುವ ವಿಷಯವನ್ನು. ರಾಮ ಸುಳ್ಳು, ಸೀತೆ ಭೂಮಿಯ ಅಂತರಂಗದಿಂದ ಬಂದಿಲ್ಲ ಎನ್ನುವ ವಿಷಯವನ್ನು ಹೇಳುತ್ತಲೇ ಬಂದಿದ್ದಾರೆ. ಆದರೆ ಇದೇ ಭಗವಾನ್ ರಾವಣನ ಕುರಿತು ಮಾತನಾಡುತ್ತಾರೆ. ರಾವಣ ರಾಕ್ಷಸನಲ್ಲ, ಆತನನ್ನು ಬೇಕೆಂದೇ ರಾಕ್ಷಸನಂತೆ ಚಿತ್ರಿಸಲಾಗಿದೆ ಎಂದು ಹೇಳುತ್ತಾರೆ. ಇಂತಹ ಹೇಳಿಕೆಗಳ ನಡುವೆಯೇ ಹಲವು ಗೊಂದಲಗಳು ಕಾಡುತ್ತವೆ. ರಾಮ, ಸೀತೆ ಸುಳ್ಳು ಎನ್ನುವ ಭಗವಾನ್‌ಗೆ ರಾವಣ ಮಾತ್ರ ನಿಜವಾಗಿ ಕಾಣುವುದು ವಿಚಿತ್ರ. ರಾಮಾಯಣವೇ ನಡೆದಿಲ್ಲ ಎಂದು ಹೇಳುವ ಇವರು ರಾವಣ ಮಾತ್ರ ನಿಜ ಎನ್ನುವ ಮೂಲಕ ತಮ್ಮ ಮನಸ್ಸಿನಲ್ಲಿಯೇ ಗೊಂದಲ ಇದೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ರಾಮಾಯಣ ಸುಳ್ಳು ಎನ್ನುವ ಇವರು ರಾವಣನನ್ನೂ ಸುಳ್ಳು ಎಂದು ಹೇಳಲು ಹೋಗುವುದಿಲ್ಲ. ಅದೇ ರೀತಿ ರಾವಣನನನ್ನು ಹೀರೋ ಎಂದು ಪ್ರಚುರಪಡಿಸಲು ಮುಂದಾಗುವ ಭಗವಾನ್ ರಾಮಾಯಣವನ್ನು ತಾವೇ ಸುಳ್ಳು ಎಂದು ಹೇಳಿದ್ದನ್ನು ಜಾಣರಂತೆ ಮರೆತುಬಿಡುತ್ತಾರೆ.ಬಾಯಿ ಬಿಟ್ಟರೆ ಬ್ರಾಹ್ಮಣರಿಂದ ದಲಿತರ ಮೇಲೆ ಅನ್ಯಾಯವಾಗಿದೆ ಎಂದು ಹೇಳುವವರು ಭಗವಾನ್. ವೈದಿಕರು ಹಿಂದುಳಿದವರನ್ನು ತುಳಿದರು ಎಂದು ಒರಲುತ್ತಾರೆ. ಅರಚುತ್ತಾರೆ. ಇದೇ ಭಗವಾನ್ ರಾವಣನನ್ನು ಪೂಜಿಸಬೇಕು ಎನ್ನುತ್ತಾರೆ. ಆದರೆ ರಾವಣ ಬ್ರಾಹ್ಮಣನಲ್ಲವೇ ಎಂದು ಕೇಳಿದರೆ ಅದಕ್ಕೆ ಉತ್ತರವನ್ನೇ ನೀಡುವುದಿಲ್ಲ. ಆರ್ಯರೆಂದರೆ ಬ್ರಾಹ್ಮಣರು, ದ್ರಾವಿಡರೆಲ್ಲ ದಲಿತರು ಎಂದು ಹೇಳುವ ಮೂಲಕ ಹೊಸದೊಂದು ವಾದ ಸರಣಿಯನ್ನು ಹುಟ್ಟು ಹಾಕುತ್ತಾರೆ. ರಾವಣನನ್ನು ದ್ರಾವಿಡರ ಸಾಲಿಗೆ ಸೇರಿಸಿಕೊಳ್ಳುವ ಇವರು, ಅಂತಹ ರಾವಣ ಬ್ರಾಹ್ಮಣನಲ್ಲವೇ ಎಂದರೆ ಮಾತನಾಡುವುದಿಲ್ಲ. ಭಗವಾನ್ ಮನಸ್ಸಿನ ಕುತರ್ಕದಂತೆಯೇ ಬ್ರಾಹ್ಮಣನಾದ ರಾವಣನನ್ನು ಇತರರು ತುಳಿದರಲ್ಲವೇ ಎಂದರೆ ಅದಕ್ಕೆ ಉತ್ತರಿಸುವ ಪ್ರಯತ್ನವನ್ನೇ ಮಾಡುವುದಿಲ್ಲ.ದಸರೆ ಸಂದರ್ಭದಲ್ಲಿ ಮೈಸೂರು ಸಡಗರ, ಸಂಭ್ರಮದಲ್ಲಿ ಮಿಂದೇಳುತ್ತದೆ. ಹಬ್ಬವನ್ನಾಚರಿಸುತ್ತದೆ. ಇಡೀ ದೇಶವೇ ದಸರೆ ಹಬ್ಬದ ಸಡಗರವನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತದೆ. ನಮ್ಮೊೊಳಗಿನ ಅಂಧಃಕಾರವನ್ನು ಹೋಗಲಾಡಿಸಿ ಜ್ಞಾನ ಜ್ಯೋತಿಯನ್ನು ಬೆಳಗಿಸಿಕೊಳ್ಳಬೇಕು ಎಂದು ಬಯಸುತ್ತದೆ. ಆದರೆ ಆ ಸಂದರ್ಭಗಳಲ್ಲೇ ಭಗವಾನ್ ತಮ್ಮಲ್ಲಿನ ಅಂಧಃಕಾರವನ್ನು ಸಮಾಜದ ಮೇಲೆ ಕಾರುವ ಯತ್ನವನ್ನು ಮಾಡುತ್ತಾರೆ. ಮಹಿಷಾಸುರನ ಪರ ವಹಿಸಿ ಮಾತನಾಡುತ್ತಾರೆ. ಚಾಮುಂಡೇಶ್ವರಿ ಮೂರ್ತಿಯನ್ನು ಅಂಬಾರಿಯ ಮೇಲಿಟ್ಟು ಮೆರವಣಿಗೆ ಮಾಡುವುದನ್ನು ವಿರೋಧಿಸುತ್ತಾರೆ. ಮಹಿಷನ ಮೂರ್ತಿಯನ್ನು ಇಡಬೇಕು, ಮಹಿಷಾಸುರ ದಸರಾವನ್ನು ಆಚರಿಸಬೇಕು ಎಂದೆಲ್ಲ ಬಡಬಡಿಸುತ್ತಾರೆ. ಆದರೆ ಹೀಗೆಲ್ಲ ಹುಯ್ಯಲಿಡುವ ಭಗವಾನ್, ಈ ಹಿಂದೆ ಹಲವು ವೇದಿಕೆಗಳಲ್ಲಿ ದೇವರು ಸುಳ್ಳು, ಪುರಾಣಗಳೆಲ್ಲ ಮಿಥ್ಯ ಎಂದು ಹೇಳಿದ್ದನ್ನು ಮರೆತುಬಿಡುತ್ತಾರೆ. ಇವರ ಪ್ರಕಾರ ದೇವರುಗಳು, ಪುರಾಣಗಳು ಮಾತ್ರ ಸುಳ್ಳು, ಆದರೆ ರಾಕ್ಷಸರು ಮಾತ್ರ ಸಥ್ಯವೇ?ಈ ಎಲ್ಲ ಅಂಶಗಳನ್ನೂ ಗಮನಿಸಿದಾಗ ಭಗವಾನ್ ಮನಸ್ಸು ಗೊಂದಲಗಳ ಗೂಡು ಎನ್ನುವುದು ಸ್ಪಷ್ಟವಾಗುತ್ತದೆ. ಹಿಂದೆ ಬ್ರಿಟಿಷರ ಕಾಲದಲ್ಲಿ ಮ್ಯಾಕ್ಸ್ ಮುಲ್ಲರ್ ಭಾರತದ ಸಂಸ್ಕೃತಿಯನ್ನು ನಾಶ ಮಾಡುವ ಪಣ ತೊಟ್ಟು ಅದಕ್ಕೆ ಪೂರಕ ಕಾರ್ಯಗಳನ್ನು ಕೈಗೊಂಡನಂತೆ. ದೀಗ ಭಗವಾನ್ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಅವರನ್ನು ಮ್ಯಾಕ್ಸ್ ಮುಲ್ಲರ್ ವಾದಿ ಎಂದು ಕರೆಯಬಹುದು. ಅದಿಲ್ಲವಾದರೆ ಮ್ಯಾಕ್ಸ್ ಮುಲ್ಲರ್‌ನನ್ನು ಗುರು ಎಂದು ದತ್ತು ತೆಗೆದುಕೊಂಡ ಮಹಾನುಭಾವ ಎಂದು ಕರೆಯಬಹುದು.ಆರ್ಯ-ದ್ರಾವಿಡ ಸಿದ್ಧಾಾಂತ ಸಂಶೋಧನೆಗಳ ಮೂಲಕವೇ ಸುಳ್ಳು ಎಂದು ಸಾಬೀತಾಗಿದ್ದರೂ ಅದೇ ಅಂಶವನ್ನು ಹಿಡಿದುಕೊಂಡು ಜಗ್ಗಾಡುತ್ತ, ನಿಜ ಎಂದು ಬಿಂಬಿಸಲು ಮುಂದಾಗಿರುವ ಭಗವಾನ್ ಯಾವ ಪುರುಷಾರ್ಥ ಸಾಧನೆಯಲ್ಲಿ ತೊಡಗಿದ್ದಾರೆ?ತಾವು ಪ್ರತಿಪಾದಿಸುವ ಅಂಶಗಳಿಗೆ ಕಟ್ಟು ಬೀಳಲಾಗದೇ ಅರ್ಧಮರ್ಧ ಮಾತ್ರ ವಿಷಯಗಳನ್ನು ಹೇಳಿ, ಅದನ್ನೂ ಸಮರ್ಥನೆ ಮಾಡಿಕೊಳ್ಳಲಾಗದೇ ನಗೆಪಾಟಲಿಗೀಡಾಗುತ್ತಿದ್ದಾರೆ. ಹಿಂದೂ ದೇವರನ್ನು, ಪುರಾಣಗಳನ್ನು ವಿರೋಧಿಸಬೇಕು. ದಾನವರ ಪೂಜೆಗೆ ಆದ್ಯತೆ ನೀಡಬೇಕು. ದೇವರನ್ನು ವಿರೋಧಿಸುವ, ದಾನವ ಪೂಜೆಗೆ ಮಹತ್ವ ನೀಡುವ ವಿದ್ಯಾರ್ಥಿ ವೃಂದವನ್ನು ಸೃಷ್ಟಿ ಮಾಡಬೇಕು ಇಂತಹ ಮನಸ್ಥಿತಿಯನ್ನು ಹೊಂದಿರುವ ಭಗವಾನ್ ತಮ್ಮ ಇಂತಹುದೇ ಮಾತುಗಳಿಂದ ಸಮಾಜದಲ್ಲಿ ಇನ್ನಷ್ಟು ನಿಕೃಷ್ಟವಾಗುತ್ತಿದ್ದಾರೆ. ತಾವೇ ಮಾತಿನ ಮೂಲಕ ಹೇಳಿದ್ದನ್ನು ತಾವೇ ಸಮರ್ಥನೆ ಮಾಡಿಕೊಳ್ಳಲು ಒದ್ದಾಡಿ, ತಾವೊಬ್ಬ ಅಪ್ರಬುದ್ಧ ಎಂಬುದನ್ನು ಸಾಬೀತು ಮಾಡಿಕೊಳ್ಳುತ್ತಿದ್ದಾರೆ.ಇಂತಹ ಗೊಂದಲದ ಮನಸ್ಥಿತಿಯ ಭಗವಾನ್ ಬಹಿರಂಗ ಚರ್ಚೆಗೂ ಬರುವ ಪ್ರಯತ್ನ ನಡೆಸುವುದಿಲ್ಲ. ಬಹಿರಂಗ ಚರ್ಚೆಗೆ ಬಂದರೂ ಅಲ್ಲಿ ಸಮರ್ಪಕ ಉತ್ತರವನ್ನು ನೀಡುವುದೇ ಇಲ್ಲ.ತಾವೇ ಗೊಂದಲದ ತಳಹದಿಯ ಮೇಲೆ ಕೂತಿರುವಾಗ, ತಾವು ಹೇಳುತ್ತಿರುವುದನ್ನು ಸಮರ್ಥನೆ ಮಾಡಿಕೊಳ್ಳಲು ಶಕ್ತಿಯೇ ಇಲ್ಲವಾಗಿರುವಾಗ, ತಮ್ಮದೇ ನೆಲೆಗಟ್ಟನ್ನು, ತಮ್ಮದೇ ಸಂಸ್ಕೃತಿಯ ಕುರಿತಂತೆ ಇತಿಹಾಸದ ಸಂಶೋಧನೆ ಹೆಸರಿನಲ್ಲಿ ಸುಳ್ಳಿನ ಸರಮಾಲೆ ಕಟ್ಟುವಂತಹ, ಉಪನ್ಯಾಸಕ ಭಗವಾನ್ ವಿದ್ಯಾರ್ಥಿಗಳಿಗೆ ಇನ್ನೇನನ್ನು ತಾನೇ ಕಲಿಸಬಲ್ಲರು? ಯಾವ ನೆಲೆಗಟ್ಟಿನ ಮೇಲೆ ಶಿಷ್ಯ ಸಮೂಹವನ್ನು ಬೆಳೆಸಲು ಮುಂದಾಗಿದ್ದಾರೆ? ಇಂತಹವರ ಮುಂದೆ ಭಗವಂತನೇ ಬಂದು, ತಾನು ಭಗವಂತ ಎಂದರೂ ಅವರ ಕುರಿತು ಅನುಮಾನವನ್ನು ವ್ಯಕ್ತಪಡಿಸದೇ ಬಿಟ್ಟಾಾರೆಯೇ? ಹೇ ಭಗವಾನ್, ಈ ಭಗವಾನ್‌ಗೆ ಯಾವಾಗ ಬುದ್ಧಿ ಬರುತ್ತದೆಯೋ?

Wednesday, October 10, 2018

ಬಾಕ್ಸಿಂಗ್ ರಿಂಗ್ ಗೆ ಇಳಿದ ಚಾಯ್‌ವಾಲಾ

ಭಾರತ ಪ್ರತಿಭಾವಂತ ಕ್ರೀಡಾಪಟುಗಳ ದೇಶ. ಭಾರತದಲ್ಲಿ ಎಲ್ಲಿ ಯಾವ ಪ್ರತಿಭೆಯನ್ನು ಹೊಂದಿರುವ ಕ್ರೀಡಾಪಟುಗಳಿದ್ದಾರೆ ಎನ್ನುವುದು ಕಷ್ಟ. ಕೂಲಿ ಕಾರ್ಮಿಕನ ಮಗಳು, ಪಿಡಬ್ಲುಡಿ ಕೆಲಸಗಾರನ ಮಗ, ದನ ಕಾಯುವವ, ಮಾರುಕಟ್ಟೆಯಲ್ಲಿ ಮೂಟೆ ಎಸೆಯುವವ ಹೀಗೆ ಹಲವರು ತಮ್ಮ ಛಲ, ಶ್ರಮದಿಂದಾಗಿ ವಿವಿಧ  ಕ್ರೀಡೆಗಳಲ್ಲಿ ಪಾಲ್ಗೊೊಂಡು ದೇಶಕ್ಕೆ ಪದಕಗಳನ್ನೇ ಗೆದ್ದುಕೊಡುತ್ತಿದ್ದಾರೆ. ಅಂತಹ ಸಾಲಿಗೆ ಇನ್ನೋರ್ವ ಸೇರ್ಪಡೆಯಾಗಿದ್ದಾನೆ. ಅವನೇ ರಾಜೇಶಕುಮಾರ್ ಕಸಾನಾ.
ರಾಜೇಶ ಕುಮಾರ್ ಕಸಾನಾ ಪ್ರಸ್ತುತ ಬಾಕ್ಸಿಂಗ್ ರಿಂಗ್‌ನಲ್ಲಿ ಸದ್ದು ಮಾಡುತ್ತಿರುವ ಕ್ರೀಡಾಪಟು. ದೇಶದ ನಂಬರ್ 1ವೃತ್ತಿಪರ ಬಾಕ್ಸರ್ ಎಂದು ಕರೆಸಿಕೊಂಡಿರುವಾತ. ಇಂತಹ ಕ್ರೀಡಾಪಟು ಚಹಾ ಮಾರಾಟ ಮಾಡಿ, ಬಾಕ್ಸಿಂಗ್ ರಿಂಗ್‌ನಲ್ಲಿ ಪ್ರತಿಭೆ  ಪ್ರದರ್ಶನ ಮಾಡುತ್ತಿದ್ದ ಎನ್ನುವುದು ಅಚ್ಚರಿಯಾದರೂ ಸತ್ಯ.
ಹರಿಯಾಣದ ಬಿವಾನಿಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಚಹಾ ಮಾರುವ ರಾಜೇಶ್, ವೃತ್ತಿಪರ ಬಾಕ್ಸಿಂಗ್ನಲ್ಲಿ ಮಿಂಚು ಹಡಿಸಿದ್ದಾರೆ. ಓಲಿಂಪಿಕ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಅವರನ್ನು ಮಾದರಿಯಾಗಿ ಇರಿಸಿಕೊಂಡು ಅವರ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.
ತಮ್ಮ ಊರಿನಲ್ಲಿ ಎಲ್ಲರ ಪಾಲಿಗೆ ಅಕ್ಕರೆಯಿಂದ ಲುಕಾ ಎಂದು ಕರೆಸಿಕೊಳ್ಳುವ ರಾಜೇಶ್ ಸಹೋದರನ ಜೊತೆಗೆ ಟೀ ಅಂಗಡಿಯನ್ನು ನಡೆಸಿಕೊಳ್ಳುತ್ತಿದ್ದಾರೆ. ಮುಂಜಾನೆ ಐದು ಎಂಟೆಗೆ ಎದ್ದು ಚಹಾ ಮಾರಾಟ ಆರಂಭಿಸುವ ರಾಜೇಶ್ ಮದ್ಯಾಹ್ನ 1ರ ವರೆಗೂ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಾರೆ. ಮದ್ಯಾಹ್ನ ಊಟ-ವಿಶ್ರಾಾಂತಿಯ ಬಳಿಕ ಸಂಜೆ 6ರ ಹೊತ್ತಿಗೆ ಬಾಕ್ಸಿಂಗ್ ಅಭ್ಯಾಸ ಕ್ಕೆ  ತೆರಳುತ್ತಾರೆ.
10 ರೂಪಾಯಿಗೆ ಚಹಾ ಮಾರಾಟ ಮಾಡುವ ಕಸಾನಾ, ಈ ಮೂಲಕವೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಬಾಕ್ಸರ್ ಆಗಬೇಕು ಎನ್ನುವುದು ಅಪ್ಪನ ಕನಸು. ಈ ಕನಸ್ನು ನನಸಾಗಿಸಲು ಹೊರಟಿದ್ದಾಾರೆ ಕಸಾನಾ. ಎಷ್ಟೇ ಕಷ್ಟ ಬಂದರೂ ಅಪ್ಪನ ಕನಸು ನನಸು ಮಾಡುವ ಛಲ ರಾಜೇಶ್ ಕಸಾನಾದು.
 2015ರಲ್ಲಿ ಮೊದಲ ಬಾರಿಗೆ ವೃತ್ತಿಪರ ಬಾಕ್ಸಿಂಗ್ ರಿಂಗಿಗೆ ಇಳಿದ ರಾಜೇಶ್, ಮನ್‌ಪ್ರೀತ್ ಸಿಂಗ್‌ರನ್ನು ಮಣಿಸಿದ್ದರು. ಆ ಬಳಿಕ 10 ಸ್ಪರ್ಧೆಗಳಲ್ಲಿ 9 ಬಾರಿ ಗೆಲುವು ದಾಖಲಿಸಿದ್ದಾರೆ. ಇನ್ನೊೊಂದು ಪಂದ್ಯ ಡ್ರಾ ಆಗಿದೆ.
ಲೈಟ್‌ವೇಟ್ ವೃತ್ತಿಪರ ಬಾಕ್ಸಿಂಗ್ನಲ್ಲಿ ದೇಶದಲ್ಲೇ ನಂ.1 ಪಟ್ಟ ಎನಿಸಿಕೊಂಡಿದ್ದು, ವಿಶ್ವ ವೃತ್ತಿಪರ ಬಾಕ್ಸಿಂಗ್ ಲೈಟ್‌ವೇಟ್ ಶ್ರೇಯಾಂಕದಲ್ಲಿ 221ನೇ ಸ್ಥಾನದಲ್ಲಿದ್ದಾರೆ. 24ರ ಹರೆಯದ ರಾಜೇಶ್‌ರ ಅಪ್ಪ ಚಾಲಕರಾಗಿದ್ದರು. ಆದರೆ ಕ್ಯಾನ್ಸರ್‌ಗೆ ಬಲಿಯಾದರು. ಸೋದರಿಗೂ ಕ್ಯಾನ್ಸರ್ ತಗುಲಿದ್ದರಿಂದ 2011ರಲ್ಲಿ ಆಸ್ತಿಯನ್ನು ಮಾರಾಟ ಮಾಡಬೇಕಾಯಿತು. 2013ರಲ್ಲಿ ಸೋದರಿ ಕೂಡಾ ಇಹಲೋಕ ತ್ಯಜಿಸಿದರು.
ಶಾಲಾ ಕಲಿಕೆ ಸಂದರ್ಭದಲ್ಲಿ  ಅಪ್ಪನನ್ನು ಕಳೆದುಕೊಂಡೆ. ಅವರ ಮರಣಾನಂತರ ನಾನು ಶಾಲೆ ಬಿಟ್ಟು ಡ್ರೈವರ್ ಆಗಿ ದುಡಿದೆ. ಆದರೆ ನಾನು ಅಂದುಕೊಂಡಂತೆ ನಡೆಯದ ಕಾರಣ ಇದೀಗ ಟೀ ಶಾಪ್ ನಡೆಸುತ್ತಿದ್ದೇನೆ ಎನ್ನುವುದು ರಾಜೇಶ್ ಮನದಾಳದ ಮಾತು.
ಇಂತಹ ರಾಜೇಶ್ ಬೆನ್ನಿಗೆ ರಾಯಲ್ ಸ್ಪೋರ್ಟ್‌ಸ್‌ ಪ್ರೊಮೊಕ್ಷ್ಸ್ ನಿಂತಿದೆ.
2016ರಲ್ಲಿ ದಿಲ್ಲಿಯ ಜ್ಯಾಗರಾಜ್ ಸ್ಟೇಡಿಯಂನಲ್ಲಿ ವಿಜೆಂದರ್ ಎಂಟನೇ ಬಾರಿಗೆ ವೃತ್ತಿಪರ ಸ್ಪರ್ಧೆ  ಗೆದ್ದಾಗ ಅವರ ಹೋರಾಟವನ್ನು ನಾನು ನಿಕಟವಾಗಿ ವೀಕ್ಷಿಸಿದ್ದೆ. ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ನನಗೂ ಸಿಕ್ಕಿತು. ಆದರೆ ಅವರ ಜತೆ ಮಾರ್ಗದರ್ಶನ ಪಡೆಯುವ ಅವಕಾಶ ಸಿಕ್ಕಿಲ್ಲ ಎಂದು ರಾಜೇಶ್ ಹೇಳಿದ್ದಾಾರೆ.
ಭಾರತದಲ್ಲಿ ಇಂತಹ ಪ್ರತಿಭೆಗಳು ಸಾಕಷ್ಟಿವೆ. ಆದರೆ ಇಂತಹ ಪ್ರತಿಭೆಗಳಿಗೆ ನೀರೆರೆದು ಪೋಷಿಸುವವರ ಸಂಕ್ಯೆ ಹೆಚ್ಚಳವಾಗಬೇಕಿದೆ. ಸ್ವಲ್ಪ ಸಹಾಯ ಮಾಡಿ, ಬೆನ್ನಿಿಗೆ ನಿಂತರೆ ವಿಶ್ವವೇ ಬೆರಗಾಗುವಂತಹ ಲಿತಾಂಶ ನೀಡಲು ಭಾರತದ ರ್ಸ್ಪಗಳು ಸಿದ್ಧರಿದ್ದಾಾರೆ. ಪ್ರತಿಭೆಗಳ ಖನಿಯಾಗಿರುವ ಆಟಗಾರರ ಬೆನ್ನುತಟ್ಟುವ ಕೆಲಸ ಎಲ್ಲೆಡೆ ಆಗಬೇಕಾಗಿದೆ.