Saturday, August 18, 2018

ಭಾರತ ಕ್ರಿಕೆಟ್‌ನ ಭವ್ಯ ಪರಂಪರೆಯ ಕೊಂಡಿ ಅಜಿತ್ ವಾಡೇಕರ್

ಎಂಟು ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ ಆಟಗಾರನಾಗಿ, ಅಗ್ರೆಸ್ಸಿವ್ ಆಟದಿಂದ ಎದುರಾಳಿಗಳ ನಿದ್ದೆಗೆಡಿಸಿದ್ದ ಹೆಸರಾಂತ ಕ್ರಿಕೆಟ್ ಆಟಗಾರ ಅಜಿತ್ ವಾಡೇಕರ್ ನಿಧನರಾಗಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಉತ್ತಮ ಪ್ರದರ್ಶನಕ್ಕೆ ನಾಂದಿ ಹಾಕಿದ ಆಟಗಾರ ಅಜಿತ್ ವಾಡೇಕರ್.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ತಮ್ಮ 77ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಕ್ರಿಕೆಟ್ ಜೀವನದ ರೋಚಕತೆಯಿಂದ ಕೂಡಿದೆ.
1941ರ ಏಪ್ರಿಲ್ 1ರಂದು ಜನಿಸಿದ್ದ ಅಜಿತ್ ಲಕ್ಷ್ಮಣ ವಾಡೇಕರ್ ತಮ್ಮ 17ನೇ ವಯಸ್ಸಿನಲ್ಲಿ ಅಂದರೆ 1958ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಂತರ ನಾಲ್ಕೇ ವರ್ಷಗಳಲ್ಲಿ ಭಾರತ ತಂಡದ ಆಸ್ತಿಯಾದರು. ಬಾಲ್ಯದ ದಿನಗಳಲ್ಲಿ ಅಜಿತ್ ಗಣತ ವಿಭಾಗವನ್ನು ಆಯ್ಕೆ ಮಾಡಿಕೊಂಡು, ಇಂಜಿನಿಯರ್ ಆಗಲಿ ಎನ್ನುವುದು ಅಜಿತ್ ತಂದೆ ಲಕ್ಷ್ಮಣ್‌ರ ಕನಸಾಗಿತ್ತು. ಆದರೆ ಕ್ರಿಕೆಟ್ ಕಡೆಗೆ ಒಲವು ಮೂಡಿಸಿಕೊಂಡಿದ್ದ ಅಜಿತ್, ಕ್ರಿಕೆಟ್‌ನಲ್ಲಿ ಪೂರ್ಣಕಾಲಿಕವಾಗಿ ತೊಡಗಿಸಿಕೊಂಡರು.
ಸೋಟಕ ಎಡಗೈ ಬ್ಯಾಟ್ಸಮನ್ ಆಗಿದ್ದ ವಾಡೇಕರ್ ಅವರು 1971ರಲ್ಲಿ ವೆಸ್ಟ್  ಇಂಡೀಸ್ ಮತ್ತು ಇಂಗ್ಲೆಡ್‌ನಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಐತಿಹಾಸಿಕ ಗೆಲುವು  ಸಾಧಿಸಲು ಕಾರಣರಾಗಿದ್ದರು. 1966ರಿಂದ 1974ರವರೆಗೆ 8 ವರ್ಷಗಳ ಕಾಲ ಭಾರತ ತಂಡದ ಆಟಗಾರನಾಗಿ, ನಾಯಕನಾಗಿ ಮುನ್ನಡೆಸಿದರು.
ಭಾರತ ತಂಡ ಕಂಡ ಅತ್ಯುತ್ತಮ ಸ್ಲಿಪ್ ಫಿಲ್ಡರ್ ಎನ್ನುವ ಹೆಗ್ಗಳಿಕೆ ಕೂಡ ಇವರಿಗಿದೆ. ಪ್ರಥಮ ಸ್ಲಿಪ್‌ನಲ್ಲಿ ಫೀಲ್ಡಿಿಂಗ್ ಮಾಡುತ್ತಿದ್ದ ವಾಡೇಕರ್ ಆಕರ್ಷಕ ಕ್ಯಾಚುಗಳನ್ನು ಹಿಡಿಯುವ ಮೂಲಕ ಹೆಸರಾಗಿದ್ದರು.
ಬಾಂಬೆ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದ ಅಜಿತ್ ವಾಡೇಕರ್ 1971ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದರು. ಇವರ ನೇತೃತ್ವದ ಟೀಂ ಇಂಡಿಯಾ 1971ರಲ್ಲಿ ಇಂಗ್ಲೆೆಂಡ್ ವಿರುದ್ಧದ 3 ಟೆಸ್ಟ್  ಪಂದ್ಯಗಳ ಸರಣಿಯನ್ನ 1-0 ಅಂತರದಲ್ಲಿ ಕೈವಶ ಮಾಡಿಕೊಂಡಿತು. ಇದಾದ ಬಳಿಕ ಅದೇ ವರ್ಷ ವೆಸ್ಟ್  ಇಂಡೀಸ್ ವಿರುದ್ಧ ಕೂಡ ಟೆಸ್ಟ್  ಸರಣಿಯಲ್ಲಿ ಗೆದ್ದು ಜಯ ಗಳಿಸಿದ್ದರು.
ಇದಾದ ಬಳಿಕೆ 1972-73ರ ಅವಯಲ್ಲಿ ಇವರ ನೇತೃತ್ವದ ಟೀಂ ಇಂಡಿಯಾ ತಂಡ  ಇಂಗ್ಲೆೆಂಡ್ ತಂಡವನ್ನು  2-1 ಅಂತರದಲ್ಲಿ ಸೋಲಿಸಿ ಸರಣಿ ಜಯಿಸಿತ್ತು. ಈ ಮೂಲಕ ವಿದೇಶಿ ನೆಲದಲ್ಲಿ ಮೂರು ಬಾರಿ ಸರಣಿ ಗೆದ್ದ ಯಶಸ್ವಿ ನಾಯಕನಾಗಿ ವಾಡೇಕರ್ ಗುರುತಿಸಿಕೊಂಡಿದ್ದರು. ಸತತ ಏಳು ವರ್ಷಗಳ ಕಾಲ ಟೀಂ ಇಂಡಿಯಾ ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಇವರು, 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದರು.
ಇವರ ನಾಯಕತ್ವದ ಅಡಿಯಲ್ಲಿ ಸುನೀಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಫಾರೂಕ್ ಇಂಜಿನಿಯರ್, ಭಾರತದ ಸ್ಪಿನ್ ಅಸಗಳಾದ ಬಿಶನ್‌ಸಿಂಗ್ ಬೇಡಿ, ಇಎಎಸ್ ಪ್ರಸನ್ನ, ಬಿ. ಚಂದ್ರಶೇಖರ್, ಎಸ್. ವೆಂಕಟರಾಘವನ್ ಅವರು ಆಟವಾಡಿದ್ದಾಾರೆ. ಅಜಿತ್ ವಾಡೇಕರ್ ನಿಧನದಿಂದ ಭಾರತ ಕ್ರಿಕೆಟ್ ಇತಿಹಾಸದ ಭವ್ಯ ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆ.

ಪಾದಾರ್ಪಣೆ, ಸಾ‘ನೆ
1966ರ ಡಿಸೆಂಬರ್ 13ರಂದು ವೆಸ್ಟ್  ಇಂಡೀಸ್ ವಿರುದ್ಧ ಟೀಂ ಇಂಡಿಯಾ ಪರ ಮುಂಬೈನಲ್ಲಿ ಪಾದಾರ್ಪಣೆ ಮಾಡದರು. 1974ರ ಜುಲೈ 13ರಂದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇವರು ಟೆಸ್ಟ್  ಕ್ರಿಕೆಟ್‌ನಲ್ಲಿ 2113 ರನ್ ಗಳಿಸಿದ್ದರು. ಇದರಲ್ಲಿ 1 ಶತಕ, 14 ಅರ್ಧ ಶತಕಗಳಿದ್ದವು. 143ರನ್ ವಾಡೇಕರ್‌ರ ಸರ್ವಾಧಿಕ ಸ್ಕೋರ್. 46 ಕ್ಯಾಚ್‌ಗಳನ್ನು ಹಿಡಿದು ಸಾಧನೆ ಮಾಡಿದ್ದರು. ಆದರೆ ಇವರು ಆಡಿದ್ದು ಕೇವಲ ಎರಡೇ ಎರಡು ಏಕದಿನ ಪಂದ್ಯ. ಈ ಎರಡು ಪಂದ್ಯಗಳಲ್ಲಿ ಗಳಿಸಿದ ಒಟ್ಟೂ ರನ್ 73.
237 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅಜಿತ್ ವಾಡೇಕರ್ 15,380ರನ್ ಭಾರಿಸಿದ್ದಾಾರೆ. ಇವರಿಗೆ ಭಾರತ ಸರ್ಕಾರ 1967ರಲ್ಲಿ ಅರ್ಜುನ್ ಪ್ರಶಸ್ತಿ ಹಾಗೂ 1972ರಲ್ಲಿ  ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇತರೆ ಕಾರ್ಯಗಳು
1990ರ ವೇಳೆಗ ಅಜಿತ್ ವಾಡೇಕರ್ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು. ಅಲ್ಲದೇ 1990ರ ದಶಕದಲ್ಲಿ ಭಾರತ ಕ್ರಿಕೆಟ್ ತಂಡದ ತರಬೇತುದಾರನಾಗಿ, ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ  ಕಾರ್ಯ ನಿರ್ವಹಣೆ ಮಾಡಿದ್ದಾಾರೆ. ಟೆಸ್‌ಟ್‌ ತಂಡದ ಆಟಗಾರನಾಗಿ, ನಾಯಕನಾಗಿ, ತರಬೇತುದಾರ ಹಾಗೂ ಮ್ಯಾನೇಜರ್ ಆಗಿ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡಿದ ಕೆಲವೇ ಕೆಲವು ಆಟಗಾರರಲ್ಲಿ ಅಜಿತ್ ವಾಡೇಕರ್ ಒಬ್ಬರು. 

ಯುವಕರ ಸ್ವಾತಂತ್ರ್ಯ ಹರಣ ಆಗುತ್ತಿರುವುದೆಲ್ಲಿ?


ನಮ್ಮ ಹಿರಿಯರ ತ್ಯಾಗ, ಬಲಿದಾನ, ಶ್ರಮದ ಪ್ರತಿಫಲವಾಗಿ ಭಾರತಕ್ಕೆ 1947ರಲ್ಲೇ ಸ್ವಾತಂತ್ರ್ಯ ಸಿಕ್ಕಿದೆ. ನಮಗೆ ಸಿಕ್ಕ ಸ್ವಾತಂತ್ರ್ಯ ಸಂಭ್ರಮಕ್ಕೆ 72 ವಸಂತಗಳೇ ಕಳೆದಿವೆ. ಸ್ವಾತಂತ್ರ್ಯವೇನೋ ಸಿಕ್ಕಾಯಿತು. ಆದರೆ ಇಂದಿನ ಯುವ ಶಕ್ತಿ ಅದನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳುತ್ತಿದೆಯಾ? ಹಿರಿಯರ ತ್ಯಾಗ, ಬಲಿದಾನ, ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಯುವ ಜನತೆ ನೀಡುತ್ತಿದೆಯಾ? ನೂರಾರು ವರ್ಷಗಳ ಹೋರಾಟದಿಂದಾಗಿ ಸಿಕ್ಕ ಸ್ವಾತಂತ್ರ್ಯ ದಿನಂಪ್ರತಿ ಕಳೆದು ಹೋಗುತ್ತಿದೆಯಾ? ಹೌದು. ದೈನಂದಿನ ಹಲವು ಅನಗತ್ಯ ಕಾರ್ಯಗಳಿಂದಲೇ ಸಿಕ್ಕ ಸ್ವಾತಂತ್ರ್ಯ ಕಳೆದು ಹೋಗುತ್ತಿದೆ. ಸ್ವಾತಂತ್ರ್ಯದ ಶ್ರಮವನ್ನು ಯುವ ಜನತೆ ಹೇಗೆಲ್ಲ ಹಾಳು ಮಾಡುತ್ತಿದೆ? ಆಧುನಿಕ ಸ್ವಾತಂತ್ರ ಹರಣದ ಐದು ಅಂಶಗಳು ಇಲ್ಲಿದೆ ನೋಡಿ

೧)• ಇಂದಿನ ಯುವ ಜನತೆ ಮೊಬೈಲ್ ದಾಸರಾಗಿ ಬಿಟ್ಟಿದ್ದಾಾರೆ. ಒಂದೇ ಒಂದು ಕ್ಷಣವೂ ಕೂಡ ಮೊಬೈಲ್ ಬಿಟ್ಟಿರಲಾರರು ಎನ್ನುವಂತಹ ಸಮಯ ಬಂದಿದೆ. ಸಾಮಾಜಿಕ ಜಾಲತಾಣಗಳು ಯುವಕರ ಸ್ವಾತಂತ್ರ್ಯವನ್ನು ಬಲಿ ತೆಗೆದುಕೊಂಡಿದೆ. ಯಾವಾಗ, ಯಾರ ಕೈಲಿ ನೋಡಿದರೂ ಮೊಬೈಲ್ ಮಾತ್ರ ಎನ್ನುವಂತಾಗಿದೆ. ಅಂಗೈಲಿ ಅರಮನೆಯಂತಿರುವ ಮೊಬೈಲ್ ಸದ್ದಿಲ್ಲದೇ ಸ್ವಾತಂತ್ರವನ್ನು ಕಿತ್ತುಕೊಂಡಿದೆ.

೨) • ಹಣವಿಲ್ಲದೇ ಯಾವುದೂ ಇಲ್ಲ. ಬದುಕಿಗೆ ಹಣವೇ ಮುಖ್ಯ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಹಣಕ್ಕಾಗಿ ಏನು ಬೇಕಾದರೂ ಮಾಡುತ್ತೇವೆ ಎನ್ನುವಂತಹ ಸಂದರ್ಭ ಎದುರಾಗಿದೆ. ಹಣ ಸಿಗುತ್ತದೆ ಎಂದಾದರೆ ಎಲ್ಲವನ್ನೂ ಕಳೆದುಕೊಳ್ಳಲು ಸಿದ್ಧ ಎನ್ನುವಂತಾಗಿದೆ. ಹಣವೂ ಸ್ವಾತಂತ್ರಹರಣ ಮಾಡಿದೆ.

೩) ಅವಕಾಶಗಳು ಯಾರಿಗೆ ಬೇಕಿಲ್ಲ ಹೇಳೀ? ಸುಂದರ ಬದುಕು ಕಟ್ಟಿಕೊಳ್ಳಲು ಅವಕಾಶ ಬಹು ಅತ್ಯಗತ್ಯ. ಅವಕಾಶ ತಾನಾಗಿಯೇ ಬರಲಿ ಎಂದು ಯಾರೊಬ್ಬರೂ ಕಾದು ಕುಳಿತುಕೊಳ್ಳಲು ಸಿದ್ಧವಿಲ್ಲ. ಅವಕಾಶಕ್ಕಾಗಿ ತಮ್ಮ ಸ್ವಾಭಿಮಾನವನ್ನೇ ಅಡವಿಟ್ಟು ಬದುಕುವಂತಹ ಪ್ರಸಂಗ ಎದುರಾಗಿದೆ. ಅವಕಾಶ ಸಿಗುತ್ತದೆ ಎಂದಾದರೆ ಸ್ವಾಭಿಮಾನ ಹಾಳಾಗಲಿ ಬಿಡಿ ಎನ್ನುವವರು ಹೆಚ್ಚುತ್ತಿದ್ದಾಾರೆ. ಸ್ವಾಾಭಿಮಾನ ಕಳೆದುಕೊಂಡರೆ ಸ್ವಾತಂತ್ರ ಕಳೆದುಕೊಂಡಂತೇ.

೪)• ಬದುಕುವುದಕ್ಕಾಾಗಿ ಉದ್ಯೋಗ ಬೇಕೇಬೇಕು. ಉದ್ಯೋಗ ಮಾಡುವ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಮರ್ಜಿಗೆ ಸಿಲುಕಲೇಬೇಕು ಎನ್ನುವಂತಾಗಿದೆ. ಸ್ವತಂತ್ರನಡೆಗೆ ಅವಕಾಶವೇ ಇಲ್ಲ ಎನ್ನುವಂತಾಗಿದೆ. ಹಿರಿಯ ಅಧಿಕಾರಿಗಳು ಹೇಳಿದಂತೆ ಮಾಡಬೇಕು, ಹೇಳಿದಂತೆ ಕೇಳಬೇಕು. ಅವರು ಹೇಳಿದ್ದು ಬಿಟ್ಟು ಸ್ವತಂತ್ರ ಆಲೋಚನೆ ಕೈಗೊಂಡರೆ ವೃತ್ತಿಗೆ ಧಕ್ಕೆ ಬರಬಹುದು. ಈ ಮೂಲಕ ಸ್ವಾತಂತ್ರ ಸದ್ದಿಲ್ಲದೇ ಕಳೆದುಹೋಗುತ್ತಿದೆ.

೫)• ಸಾಮಾಜಿಕ ಜಾಲತಾಣಗಳ ಪರಿಣಾಮದಿಂದ ಹೋರಾಟದ ಮನೋಭಾವವನ್ನೇ ಯುವ ಜನತೆ ಕಳೆದುಕೊಳ್ಳುತ್ತಿದೆ. ಯಾವುದೇ ಹೋರಾಟ ಕೈಗೊಳ್ಳಬೇಕಾದಲ್ಲಿ ಅದು ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಲೈಕ್ ಒತ್ತಿ, ಶೇರ್ ಮಾಡುವ ಮೂಲಕ ಹೋರಾಟಕ್ಕೆ, ಹರತಾಳಕ್ಕೆ ತಮ್ಮ ಕೊಡುಗೆ ಮುಗಿಯಿತು ಎಂಬಂತೆ ವರ್ತಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಸ್ವಾತಂತ್ರವನ್ನು ಇನ್ನೊಮ್ಮೆ ನಾವು ವಿದೇಶಗಳ ಕೈಗೆ ಕೊಟ್ಟು ಬಿಟ್ಟಿದ್ದೇವೆ. ಅದರಿಂದ ಹೊರಬರಲು ಸಾಧ್ಯವಾಗದೇ ಒದ್ದಾಡುತ್ತಿದ್ದೇವೆ.

Friday, August 10, 2018

ನೆಗೆಟಿವ್ ರಾಜಕಾರಣದ ಪೊರೆ ಕಳಚಿದಾಗಲೇ ಕಾಂಗ್ರೆಸ್‌ಗೆ ಮರುಜನ್ಮ

ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಅತ್ಯಂತ ಹೆಚ್ಚು ಸೋಲನ್ನು ಅನುಭವಿಸಿದ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಧನಾತ್ಮಕ ಅಂಶಗಳು ಕಣ್ಣೆದುರಿಗೆ ಸಾಕಷ್ಟು ಇದ್ದರೂ ನೆಗೆಟಿವ್ ಅಂಶಗಳನ್ನೇ ನೆಚ್ಚಿಕೊಂಡು, ನೆಗೆಟಿವ್ ರಾಜಕಾರಣವನ್ನೇ ಮಾಡುತ್ತ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್ ಗೆ ಅಂಶಗಳಿಂದಲೇ ಸೋಲು ಎದುರಾಗುತ್ತಿದೆ ಎನ್ನುವುದು ಅರ್ಥವಾಗುವುದು ಯಾವಾಗ? ಎಂದಿಗೆ ಕಾಂಗ್ರೆಸ್ ತನ್ನ ರಾಜಕಾರಣದ ಶೈಲಿಯನ್ನು ಬದಲಿಸಿಕೊಳ್ಳುವುದಿಲ್ಲವೋ ಅಂದಿನವರೆಗೆ ಕಾಂಗ್ರೆಸ್ ಗೆ ಸೋಲು ಬೆನ್ನು ಬಿಡುವುದಿಲ್ಲ.
ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಕಾಂಗ್ರೆಸ್ ಮಾಡಿಕೊಂಡು ಬಂದಿದ್ದು ಇದೇ ನೆಗೆಟಿವ್ ರಾಜಕಾರಣವನ್ನೇ. ಶತಮಾನಗಳ ಇತಿಹಾಸವನ್ನು ಹೊಂದಿದ ಕಾಂಗ್ರೆಸ್ ತನ್ನ ಜನ್ಮದಿಂದಲೂ ನೆಗೆಟಿವ್ ರಾಜಕಾರಣದಲ್ಲೇ ಮಿಂದೇಳುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇನ್ನು ಕಳೆದ ಒಂದು ದಶಕದಲ್ಲಿ ಅಂದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಚ್ಚಳವಾದಾಗ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಕಾಂಗ್ರೆಸ್ ನೆಗೆಟಿವ್ ರಾಜಕಾರಣ ಇನ್ನಷ್ಟು ಹೆಚ್ಚಳಗೊಂಡಿತು. ಅದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ.
ಇತ್ತೀಚಿನ ವರ್ಷಗಳಲ್ಲಿ ನಡದ ಯಾವುದೇ ಚುನಾವಣೆಯನ್ನು ಗಮನಿಸಿ, ಕಾಂಗ್ರೆಸ್ ಮೊಟ್ಟ ಮೊದಲಿಗೆ ಬಳಕೆ ಮಾಡಿಕೊಳ್ಳುವುದು ನೆಗೆಟಿವ್ ಅಂಶಗಳನ್ನು. ಜಾತಿ, ಧರ್ಮ, ಮೀಸಲಾತಿ, ಪ್ರತ್ಯೇಕ ರಾಜ್ಯ ಹೀಗೆ ಹತ್ತು ಹಲವು ನೆಗೆಟಿವ್ ಅಂಶಗಳೇ ಕಾಂಗ್ರೆಸ್ ಪಾಲಿಗೆ  ಸ್ತ್ರಗಳಾಗುತ್ತವೆ. ಯಾರನ್ನು ಹೇಗೆ ಒಡೆದರೆ ಮತಗಳಾಗಬಹುದು ಎನ್ನುವುದೇ ಕಾಂಗ್ರೆಸ್ ಪಾಲಿಗೆ ಮುಖ್ಯವಾಗುತ್ತವೆ. ಸುಳ್ಳಾದರೂ ಸರಿ ಸುಮ್ಮನೆ ಹುಯ್ಯಲೆಬ್ಬಿಸಿದರೆ ಅದರಿಂದ ಒಂದಷ್ಟು ಓಟು ಸಿಗಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಆದರೆ ಲೆಕ್ಕಾಚಾರಗಳೇ ಕಾಂಗ್ರೆಸ್ ಪಾಲಿಗೆ ಮುಳುವಾಗುತ್ತಿದೆ.
ಸುಮ್ಮನೆ ಗಮನಿಸಿದರೆ ಕಾಂಗ್ರೆಸ್ ನೆಗೆಟಿವ್ ರಾಜಕಾರಣ ಕಣ್ಣಿಗೆ ಪದೇ ಪದೆ ರಾಚುತ್ತದೆ. 2014 ಲೋಕಸಭಾ ಚುನಾವಣೆಗೂ ಮೊದಲಿನ ಕಾಂಗ್ರೆಸ್ ಕಾರ್ಯಗಳನ್ನೇ ಗಮನಿಸಿದರೆ ಹಲವು ಅಂಶಗಳು ಗಮನಕ್ಕೆ ಬರುತ್ತವೆ. ಅದರಲ್ಲಿ ಪ್ರಮುಖವಾದದ್ದು, ಗೋಧ್ರಾ ಹತ್ಯಾಕಾಂಡದ ವಿಷಯ. ಅಂಶವನ್ನೇ ಇಟ್ಟುಕೊಂಡು ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿತು. ಪ್ರಕರಣಗಳನ್ನೂ ದಾಖಲಿಸುವ ಮಟ್ಟಕ್ಕೆ ಇಳಿಯಿತು. ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಂತೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮೋದಿಯವರನ್ನು ಮೌತ್ ಕಾ ಸೌದಾಗರ್ ಎಂದೂ ಕರೆದರು. ಮಣಿಶಂಕರ್ ಅಯ್ಯರ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೋದಿಯವರನ್ನು ನೀಚ ಆದ್ಮಿ ಎಂದು ಕರೆದೂಬಿಟ್ಟರು. ಇದನ್ನು ನೋಡಿದ ಗುಜರಾತ್ ಮತದಾರ ಹಸ್ತಕ್ಕೆ ಬಾಯ್ ಬಾಯ್ ಎಂದು ಹೇಳಿ ಓಡಿಸಿದ್ದು ಮರೆತಿಲ್ಲ ಬಿಡಿ.
2014 ಚುನಾವಣೆಗೂ ಮೊದಲು ಕಾಂಗ್ರೆಸ್ ವಿಶಾಲ ಆಂಧ್ರಪ್ರದೇಶವನ್ನು ಒಡೆದು ಎರಡು ರಾಜ್ಯಗಳನ್ನಾಗಿ ಮಾಡಿತು. ತೆಲಂಗಾಣ ಹಾಗೂ ಆಂಧ್ರ ಎಂದು ವಿಭಜನೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮನಸ್ಸಿನಲ್ಲಿದ್ದುದು ಬರೀ ಮತ ಗಳಿಕೆ ಮಾತ್ರ. ಇದೇ ಕಾಂಗ್ರೆಸ್ 2014 ಚುನಾವಣೆಗೂ ಪೂರ್ವದಲ್ಲಿ ಜೈನರಿಗೆ ಅಲ್ಪಸಂಖ್ಯಾತ ಮಾನ್ಯತೆಯನ್ನು ನೀಡಿತು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲಂತೂ ಕಾಂಗ್ರೆಸ್ ತನ್ನೊಳಗೆ ಪಾಸಿಟಿವ್ ಆಲೋಚನೆಗಳು ಇವೆ ಎನ್ನುವುದನ್ನೇ ಮರೆತಿದೆಯೇನೋ ಎನ್ನುವಂತೆ ವರ್ತಿಸುತ್ತಿದೆ. ಯಾವುದೇ ಕೆಲಸ, ಪ್ರತಿಭಟನೆ, ಹೋರಾಟ, ಚುನಾವಣಾ ಪ್ರಚಾರ ಹೀಗೆ ಎಲ್ಲ ರಂಗಗಳಲ್ಲಿಯೂ ನೆಗೆಟಿವ್ ಅಂಶಗಳಿಗೇ ಮಹತ್ವವನ್ನು ನೀಡುತ್ತಿದೆ.
ಸುಮ್ಮನೆ ಗಮನಿಸಿ, ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನನ್ನು ತಾನು ಪ್ರಚಾರ ಮಾಡಿಕೊಳ್ಳುವಲ್ಲಿ ಸಾಕಷ್ಟು ಧನಾತ್ಮಕ ಅಂಶಗಳಿದ್ದವು. ಆದರೆ ಅದ್ಯಾವುದನ್ನೂ ಮಾಡಲು ಮುಂದಾಗಲಿಲ್ಲ. ಬದಲಾಗಿ ಪಾಟೀದಾರ್ ಚಳುವಳಿಯನ್ನು ಮತಗಳಿಕೆಗಾಗಿ ಬಳಕೆ ಮಾಡಿಕೊಳ್ಳಲು ಮುಂದಾಯಿತು. ತದನಂತರದಲ್ಲಿ ದಲಿತರಿಗೆ ಅನ್ಯಾಯ ಎನ್ನುವ ಗಲಾಟೆಯನ್ನು ಎಬ್ಬಿಸಲು ನೋಡಿತು. ಅಂಶಗಳೇ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮುಳುವಾಯಿತು. ಅಷ್ಟೇ ಏಕೆ ತಾನೊಬ್ಬ ಹಿಂದೂ ಎಂದು ಬಿಂಬಿಸುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನಗಳನ್ನು ಸುತ್ತಿದರು. ತಾವೊಬ್ಬ ಜನಿವಾರ ಹೊಂದಿರುವ ಬ್ರಾಹ್ಮಣ ಎಂದುಕೊಂಡರು. ಆದರೆ ಇದು ಲಕಾರಿಯಾಗಲಿಲ್ಲ. ಚುನಾವಣೆಯ ನಂತರ ದೇವಸ್ಥಾನವನ್ನು ಮರೆತರು. ಜನಿವಾರ ಎಲ್ಲಿಗೆ ಹೋಯಿತೋ ಗೊತ್ತಿಲ್ಲ.
ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳ ಚುನಾವಣೆಗೂ ಮೊದಲು ಕಾಂಗ್ರೆಸ್ ದೇಶದಲ್ಲಿ ಅಸಹಿಷ್ಣುತೆಯಿದೆ ಎಂದು ಹುಯ್ಯಲೆಬ್ಬಿಸಲು ಮುಂದಾಯಿತು. ದೇಶದಲ್ಲಿ ಮುಸ್ಲೀಮರಿಗೆ ಆತಂಕಕರ ವಾತಾವರಣವಿದೆ ಎಂದು ಬೊಬ್ಬಿರಿಯಲು ಯತ್ನಿಸಿ ಸೋಲನ್ನು ಅನುಭವಿಸಿತು. ಇನ್ನು ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಪ್ರತ್ಯೇಕ ಧರ್ಮ ಅಂಶವನ್ನೇ ಪ್ರಮುಖವಾಗಿಸಲು ಮುಂದಾಯಿತು. ರಾಹುಲ್ ಗಾಂಧಿ ಕೂಡ ವಚನಗಳನ್ನು ಹೇಳಿದರು. ದೇವಸ್ಥಾನಗಳು, ಮಠ ಮಂದಿರಗಳನ್ನು ಸುತ್ತಿದರು. ಇದು ಯಾವುದೂ ಕಾಂಗ್ರೆಸ್ ಗೆ ಲಾಭ ತಂದುಕೊಡಲಿಲ್ಲ. ಬದಲಾಗಿ ಸಾಕಷ್ಟು ಹೊಡೆತವನ್ನೇ ನೀಡಿತು.
ಭಾರತದ ಆಯುರ್ವೇದವೋ, ಯೋಗವೋ ಅಥವಾ ಪ್ರಾಚೀನ ಸಂಸ್ಕೃತಿ ಸಂಪ್ರದಾಯಗಳನ್ನೋ ವಿಶ್ವದ ಎದುರು ತೆರೆದಿಡಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನೆಗೆಟಿವ್ ಅಂಶಗಳನ್ನು ತೆರೆದಿಟ್ಟರು. ವಿದೇಶಗಳ ನಾಯಕರು ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತದ ಪ್ರಥಮ ಪ್ರಧಾನಿ ನೆಹರೂ ಅವರಿಗೆ ಹಾವುಗಳನ್ನು ಆಡಿಸುವುದನ್ನು ಹೆಮ್ಮೆ ಎಂಬಂತೆ ತೋರಿಸಿದ್ದರಂತೆ. ಆಮೇಲಾದರೂ ಅಷ್ಟೇ ಭಾರತದಲ್ಲಿನ ಯಾವುದೇ ಪಾಸಿಟಿವ್ ಅಂಶಗಳನ್ನೂ ಕಾಂಗ್ರೆಸ್ ವಿಶ್ವದ ಎದುರು ತೆರೆದಿಡುವ ಪ್ರಯತ್ನವನ್ನೇ ಮಾಡಲಿಲ್ಲ. ಭಾರತದಲ್ಲಿನ ಪ್ರವಾಸೋದ್ಯಮದ ಕುರಿತು, ಹೂಡಿಕೆಗೆ ಇರುವ ವಿಪುಲ ಅವಕಾಶಗಳ ಕುರಿತು ಯಾವತ್ತೂ ಕಾಂಗ್ರೆಸ್ ಧನಾತ್ಮಕವಾಗಿ ಮಾತನಾಡಲೇ ಇಲ್ಲ. ವಿಶ್ವದ ಎದುರು ಭಾರತವನ್ನು ಧನಾತ್ಮಕವಾಗಿ ತೆರೆದಿಡುವ ಪ್ರಯತ್ನವನ್ನೇ ಮಾಡಲಿಲ್ಲ. ಬದಲಾಗಿ ಭಾರತದಲ್ಲಿನ ನೆಗೆಟಿವ್ ಅಂಶಗಳನ್ನು ವಿಶ್ವದ ವೇದಿಕೆಗಳಲ್ಲಿ ತೆರೆದಿಡುವುದರಲ್ಲೇ ಆಸಕ್ತಿಯನ್ನು ತೋರಿಸಿತು.
ಕಾಂಗ್ರೆಸ್ ಇಂತಹ ತನ್ನ ನೆಗೆಟಿವ್ ಮನಸ್ಥಿತಿಯಿಂದಲೇ ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. 2019 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಗದ್ದುಗೆಗೆ ಏರುವ ಕನಸನ್ನು ಕಾಣುತ್ತಿದೆ. ಆದರೆ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರುಗಳಿಗೆ ತಮ್ಮ ನಾಯಕರ ಮೇಲೆಯೇ ನಂಬಿಕೆ ಇಲ್ಲ ಎನ್ನುವಂತಹ ಪರಿಸ್ಥಿತಿ ಉದ್ಭವವಾಗಿದೆ. 2019 ಚುನಾವಣೆಯಲ್ಲಿ ರಾಹುಲ್ ಪ್ರಧಾನಿಯಾಗುತ್ತಾರೆಯೇ ಎಂದು ಗಟ್ಟಿಯಾಗಿ ಕೇಳಿದರೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸದೃಢವಾಗಿ ಹೌದು ಎನ್ನುವಲ್ಲಿ ವಿಲರಾಗುತ್ತಾರೆ. ನಕ್ಕು ಸುಮ್ಮನಾಗುತ್ತಾರೆ. ಗೆಲ್ಲುವ ಕನಸನ್ನು ಹೊಂದಿರುವ ಕಾಂಗ್ರೆಸ್ಸಿಿಗರು ಯಾವುದೋ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿಗೆ ಮುಂದಾಗುತ್ತಾರೆ. ತೃತೀಯ ರಂಗದ ಕುರಿತಂತೆ ಧ್ವನಿ ಎತ್ತುತ್ತಾರೆ. ಹಂತಕ್ಕೆ ಬಂದು ತಲುಪಿದೆ ಕಾಂಗ್ರೆಸ್ ಮನಸ್ಥಿತಿ.
ಕಾಂಗ್ರೆಸ್ ಯಾವತ್ತಿಗೂ ಪಾಸಿಟಿವ್ ರಾಜಕಾರಣವನ್ನು ಮಾಡಬಹುದು ಎನ್ನುವುದರ ಕುರಿತಂತೆ ಆಲೋಚನೆಯನ್ನೇ ಮಾಡಿಲ್ಲ. ತಾನು ಮಾಡಿದ ಧನಾತ್ಮಕ ಕಾರ್ಯಗಳನ್ನು ರಾಷ್ಟ್ರಾದ್ಯಂತ ಧನಾತ್ಮಕವಾಗಿ ಪ್ರಚಾರ ಮಾಡುವುದಕ್ಕೆ ಕಾಂಗ್ರೆಸ್ ಯಾವತ್ತಿಗೂ ಮುಂದಾಗಿಲ್ಲ. ಮುಂದೆ ತಾನು ಅಧಿಕಾರಕ್ಕೆ ಬಂದರೆ ಜನರಿಗೆ ಅನುಕೂಲವಾಗುವಂತಹ ಕಾರ್ಯಗಳ ಕುರಿತು ಯಾವುದೇ ಗಟ್ಟಿ ನಿಲುವನ್ನೇ ಕಾಂಗ್ರೆಸ್ ಹೊಂದಿಲ್ಲ.
ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮನ್ನು ಅಧಿಕಾರಕ್ಕೆ ತಂದರೆ ಯಾವ ರೀತಿ ಬದಲಾವಣೆಗಳನ್ನು ಮಾಡಬಲ್ಲೆ ಎಂಬುದನ್ನು ಜನರ ಮನಸ್ಸಿನಲ್ಲಿ ಧನಾತ್ಮಕವಾಗಿ ಅಚ್ಚಳಿಯದಂತೆ ಮೂಡಿಸುತ್ತಿದ್ದಾರೆ. ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಅದೇ ಹಳೆಯ ಸಿದ್ಧ ಸೂತ್ರಕ್ಕೆ ಜೋತು ಬಿದ್ದಿದೆ.
ಪ್ರಧಾನಿ ಮೋದಿಯವರನ್ನೋ ಅಥವಾ ಅವರ ಸರ್ಕಾರದ ಕಾರ್ಯಗಳನ್ನೋ ತೆಗಳಿದರೆ, ಆರೋಪಗಳನ್ನು ಮಾಡಿದರೆ ಅದೇ ದೊಡ್ಡ ಸಾಧನೆ ಎಂದುಕೊಂಡಿದೆ ಕಾಂಗ್ರೆಸ್. ವಿನಾಕಾರಣ ಮೋದಿ ಮೇಲೆ ಗೂಬೆ ಕೂರಿಸುವುದರಲ್ಲೇ ಕಾಂಗ್ರೆಸ್ಸಿಗೆ ತೃಪ್ತಿ. ಮೋದಿಯವರು ಕೈಗೊಳ್ಳುವಂತಹ ಯೋಜನೆಗಳಿಗಿಂತ ಉತ್ತಮವಾದುದನ್ನು ತಾನು ರೂಪಿಸಬಲ್ಲೆ ಎಂದು ಕಾಂಗ್ರೆಸ್ ಎಂದಿಗೂ ಬಿಂಬಿಸಿಲ್ಲ. ದೇಶದ ಭವಿಷ್ಯಕ್ಕೆ ಅಗತ್ಯವಾದುದನ್ನು ತಾನು ಮಾಡಬಲ್ಲೆ ಎನ್ನುವ ಮಾತುಗಳು ಕಾಂಗ್ರೆಸ್ ಹಾಗೂ ಅದರ ನಾಯಕರಿಂದ ಯಾವತ್ತೂ ಬಂದಿಲ್ಲ. ಸಮಾಜದ ಪಾಸಿಟಿವ್ ಅಂಶಗಳ ಕುರಿತು ಯಾವತ್ತೂ ಆಲೋಚನೆಯನ್ನೇ ಮಾಡಿಲ್ಲ.
ಕಾಂಗ್ರೆಸ್ ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳಲಿದ್ದಲ್ಲಿ ಅದು ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಳ ಹಂತಕ್ಕೆ ತಲುಪಬಹುದು. ಮೊಟ್ಟ ಮೊದಲನೆಯದಾಗಿ ಕಾಂಗ್ರೆಸ್ ವಂಶಾಡಳಿತ ಎಂಬ ಹಳೆಯ ಸಂಪ್ರದಾಯವನ್ನು ಬದಲಿಸಬೇಕು. ಕಾಂಗ್ರೆಸ್ ನಲ್ಲಿಸುವ ಸಮರ್ಥ ಯುವ ನಾಯಕರಿಗೆ ಪಟ್ಟವನ್ನು ಕಟ್ಟಿ, ಪಕ್ಷ ಮುನ್ನಡೆಸಲು ಬಿಟ್ಟಾಗ ಕಾಂಗ್ರೆಸ್ ಬಹುಪಾಲು ಬದಲಾಗಬಹುದು. ಯಾವಾಗ ನೆಹರು-ಗಾಂಧಿ ಕುಟುಂಬದ ಚುಕ್ಕಾಣಿಯನ್ನು ಬದಲಿಸಿ ಕಾಂಗ್ರೆಸ್ ಇತರ ನಾಯಕರನ್ನು ಪಕ್ಷದ ಮುಂದಾಳುವನ್ನಾಗಿ ಮಾಡುತ್ತದೆಯೋ ಆವಾಗ ಜನಸಾಮಾನ್ಯರಲ್ಲಿ ಕಾಂಗ್ರೆಸ್ ಕಡೆಗೆ ಇರುವ ನಿರಾಶಾವಾದದ ಭಾವನೆಗಳು ಬದಲಾಗುತ್ತವೆ.
ವಿ. ಡಿ. ಸಾರ್ವರ್ಕರ್ ರನ್ನು ಸುಮ್ಮನೆ ತೆಗಳಿದರೆ, ಸಂಘವನ್ನು ದೂರಿದರೆ ಖಂಡಿತವಾಗಿಯೂ ಜನರು ನಂಬುವುದಿಲ್ಲ. ಜಶೋದಾ ಬೆನ್ ಗೆ ಅನ್ಯಾಯವಾಯಿತು ಎಂದು ಹುಯ್ಯಲಿಟ್ಟರೆ, ಅಸಹಿಷ್ಣುತೆ ಎಂದು ಸೊಲ್ಲೆತ್ತಿಿದ್ದರೆ ಪ್ರತಿಯೊಬ್ಬರೂ ಕಾಂಗ್ರೆಸ್ ನ್ನು ಆಚೆಗಟ್ಟುತ್ತಾರೆ.
ಮೋದಿಯವನ್ನು ತೆಗಳುವುದನ್ನು ಬಿಟ್ಟು ದೇಶಕ್ಕೆ ಅಗತ್ಯವಾದ ಹಾಗೂ ಅನಿವಾರ್ಯವಾದ ಯೋಜನೆಗಳ ಕುರಿತು ನೀಲನಕ್ಷೆ ರೂಪಿಸಿ ಅದನ್ನು ಪರಿಣಾಮಕಾರಿಯಾಗಿ ಜನರ ಮುಂದಿಡಬಹುದು. ಕಪಿಲ್ ಸಿಬಲ್, ಚಿದಂಬರಂ, ಮಣಿಶಂಕರ ಅಯ್ಯರ್ ರಂತಹ ಹಿರಿಯರಿಗೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯನ್ನು ಕೊಟ್ಟು ಅವರ ಜಾಗದಲ್ಲಿ ಸಚಿನ್ ಪೈಲೆಟ್, ಜ್ಯೋತಿರಾದಿತ್ಯ ಸಿಂಧಿಯಾರಂತಹ ಹೊಸ ತಲೆಮಾರಿನ ಯುವಕರಿಗೆ ಅವಕಾಶ ನೀಡಿ, ಮೊಟ್ಟ ಮೊದಲಿಗೆ ಪಕ್ಷದಲ್ಲೇ ಪಾಸಿಟಿವ್ ಅಂಶಗಳನ್ನು ಬೆಳೆಸುವ ಅಗತ್ಯವಿದೆ.
ಅಭಿವೃದ್ಧಿ ರಾಜಕಾರಣವನ್ನು ಬಿಟ್ಟು ಅದೇ ಹಳೆಯ ದ್ವೇಷದ, ಒಡೆಯುವ, ಜಾತಿಯ ರಾಜಕಾರಣವನ್ನೇ ನಂಬಿಕೊಂಡಿದ್ದರೆ ಕಾಂಗ್ರೆಸ್ ಅವಸಾನವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಪಂಸಖ್ಯಾತ ಓಲೈಕೆಯನ್ನು ಮಾಡುತ್ತಿದ್ದರೆ, ರಾಜ್ಯಗಳ ನಡುವೆ, ಭಾಷೆಗಳ ನಡುವೆ ಒಡಕನ್ನು ಹುಟ್ಟು ಹಾಕುತ್ತಿದ್ದರೆ ಕಾಂಗ್ರೆಸ್ ಮತ್ತಷ್ಟು ಕೆಳಮಟ್ಟಕ್ಕೆ ಕುಸಿಯುತ್ತದೆಯೇ ಹೊರತು ಎಂದಿಗೂ ಜನರ ಮನಸ್ಸಲ್ಲಿ ಸ್ಥಾನ ಗಳಿಸುವುದಿಲ್ಲ. ಜನಸಾಮಾನ್ಯರು, ಮತದಾರರು ಮೊದಲಿಗಿಂತ ಬುದ್ಧಿವಂತರಾಗಿದ್ದಾರೆ. ಅವರಿಗೆ ಮೊದಲಿನಂತೆ ಸುಳ್ಳುಹೇಳಿದರೆ ಕ್ಷಣಮಾತ್ರದಲ್ಲಿ ಅರ್ಥವಾಗಿ ಬಿಡುತ್ತದೆ. ಕಾಂಗ್ರೆಸ್ ಇನ್ನೂ ಅಂತಹ ಹಳೆಯ ರಾಜಕಾರಣಕ್ಕೇ ಜೋತು ಬಿದ್ದರೆ ಜನಸಾಮಾನ್ಯ, ಮತದಾರ ಕಾಂಗ್ರೆಸ್ ನ್ನು ಕಾಲಕಸಕ್ಕಿಂ ಕಡೆ ಮಾಡಿಬಿಟ್ಟಾನು. ಮುಂದಿನ ದಿನಗಳಲ್ಲಾದರೂ ಕಾಂಗ್ರೆಸ್ ಪಾಸಿಟಿವ್ ರಾಜಕಾರಣದ ಕಡೆಗೆ ಹೊರಳಲಿ.