Friday, February 23, 2018

ಕೋಹ್ಲಿಗೇಕೆ ರೋಹಿತ್, ಪಾಂಡ್ಯ ಮೇಲೆ ಪ್ರೀತಿ?

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪದೇ ಪದೆ ವಿಫಲರಾಗುತ್ತಿದ್ದರೂ ಅವರಿಗೆ ಅವಕಾಶಗಳ ಮೇಲೆ ಅವಕಾಶ ನೀಡುತ್ತಿರುವುದು ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.
ಇತ್ತೀಚಿನ ದಿನಗಳಲ್ಲಿ ಭಾರತ ದ ಕ್ರಿಕೆಟ್ ತಂಡದ ಆಟವನ್ನು ಗಮನಿಸಿದರೆ ನಾಯಕ ವಿರಾಟ್ ಕೋಹ್ಲಿಗೆ ಕೆಲವು ಆಟಗಾರರ ಮೇಲೆ ಇರುವ ಪ್ರೀತಿ ಎದ್ದು ಕಾಣುತ್ತದೆ.
ಹಿಟ್ ಮ್ಯಾನ್ ಎಂದೇ ಹೆಸರು ಗಳಿಸಿರುವ ರೋಹಿತ್ ಶರ್ಮಾ ಆಗೊಮ್ಮೆ ಈಗೊಮ್ಮೆ ಶತಕವನ್ನು ಗಳಿಸುತ್ತಾರೆ. ಆದರೆ ಉಳಿದ ಸಂದರ್ಭಗಳಲ್ಲಿ ವಿಫಲರಾಗುತ್ತಿದ್ದಾರೆ. ೧೦ ಅಥವಾ ೧೫ ಇನ್ನಿಂಗ್ಸ್‌ಗೊಮ್ಮೆ ಮಾತ್ರ ಅವರು ಎರಡಂಕಿ ಅಥವಾ ಮೂರಂಕಿ ರನ್ ಗಳಿಸುತ್ತಿದ್ದಾರೆ. ಉಳಿದ ಸಂದರ್ಭಗಳಲ್ಲಿ ಅವರ ಬ್ಯಾಟಿನಿಂದ ಒಂದಂಕಿಗಿಂತ ಹೆಚ್ಚಿನ ರನ್ ಸೃಷ್ಟಿಯಾಗುವುದೇ ಇಲ್ಲ.
ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿಯಲ್ಲಿ ಒಂದು ಶತಕ ಬಾರಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಅವರ ಸಾಧನೆ ಕಡಿಮೆಯೇ. ಟೆಸ್ಟ್‌ನಲ್ಲಿಯೂ ಕೂಡ ಹೇಳಿಕೊಳ್ಳುವಂತಹ ಆಟ ಹೊರಹೊಮ್ಮಿಲ್ಲ. ಇನ್ನು ಟಿ೨೦ಯಲ್ಲಂತೂ ಒಂದಂಕಿಗಿಂತ ಹೆಚ್ಚಿನ ರನ್ ಬಂದೇ ಇಲ್ಲ. ಹೀಗಿದ್ದರೂ ರೋಹಿತ್‌ಗೆ ಪದೇ ಪದೆ ಅವಕಾಶ ನೀಡಲಾಗುತ್ತಿದೆ.
ಇದೇ ರೀತಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಕ್ಯಾಪ್ಟನ್ ಕೋಹ್ಲಿಯ ಕೃಪೆಗೆ ಪಾತ್ರರಾಗಿ ತಂಡದಲ್ಲಿ ಉಳಿದುಕೊಂಡಿದ್ದಾರೆ. ತಂಡಕ್ಕೆ ಆಯ್ಕೆಯಾದ ಆರಂಭದ ದಿನಗಳಲ್ಲಿ ಬ್ಯಾಟ್ ಹಾಗೂ ಬೌಲ್ ಮೂಲಕ ಅಬ್ಬರ ತೋರಿದ್ದ ಹಾರ್ದಿಕ್ ಇತ್ತೀಚೆಗಿನ ಕೆಲವು ಪಂದ್ಯಗಳಲ್ಲಿ ಸದ್ದನ್ನೇ ಮಾಡಿಲ್ಲ. ಅವರ ಬ್ಯಾಟ್ ಮಾತನಾಡುತ್ತಿಲ್ಲ. ಅದೇ ರೀತಿ ಬೌಲಿಂಗ್ ಕೂಡ ಪರಿಣಾಮಕಾರಿಯಾಗಿಲ್ಲ. ಆದರೂ ತಂಡದಲ್ಲಿ ಉಳಿದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಂತೂ ಒಂದೇ ಒಂದು ಪಂದ್ಯದಲ್ಲಿ ಕೂಡ ಹಾರ್ದಿಕ್ ಪಾಂಡ್ಯ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದರೂ ಉಳಿದ ಪಂದ್ಯಗಳಲ್ಲಿ ಪ್ರದರ್ಶನ ಕಳಪೆಯೇ ಆಗಿತ್ತು. ಹೀಗಿದ್ದರೂ ತಂಡದಲ್ಲಿ ಪಾಂಡ್ಯ ಉಳಿದುಕೊಂಡಿರುವ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.
ನಾಯಕ ವಿರಾಟ್ ಕೋಹ್ಲಿ ಹಾಗೂ ತಂಡದ ನಿರ್ದೇಶಕ ರವಿಶಾಸ್ತ್ರಿ ಅವರ ಕೃಪೆಯಿಂದಲೇ ಈ ಇಬ್ಬರೂ ಆಟಗಾರರು ಪದೇ ಪದೆ ಅವಕಾಶ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಸುಳ್ಳಲ್ಲ. ಮುಂಬರುವ ಟಿ೨೦ ವಿಶ್ವಕಪ್ ಪಂದ್ಯಾವಳಿಗಾಗಿ ತಂಡವನ್ನು ರೂಪಿಸಲಾಗುತ್ತಿದೆ ಎನ್ನುವ ಕಾರಣವನ್ನು ನೀಡಿ, ಈ ಆಟಗಾರರಿಗೆ ಅವಕಾಶ ಕೊಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಟಿ೨೦ ವಿಶ್ವಕಪ್‌ಗೆ ಹೊಸ ಆಟಗಾರರಿಗೂ ಅವಕಾಶ ನೀಡುವ ಮೂಲಕ ತಂಡವನ್ನು ಇನ್ನಷ್ಟು ಸದೃಢಗೊಳಿಸುವ ಬದಲು ವಿಫಲರಾಗುತ್ತಿರುವವರಿಗೆ ಮತ್ತೆ ಮತ್ತೆ ಮಣೆ ಹಾಕುವುದು ಎಷ್ಟು ಸರಿ ಎಂಬ ವಾದಗಳೂ ಕ್ರಿಕೆಟ್ ಅಭಿಮಾನಿಗಳ ವಲಯದಿಂದ ಕೇಳಿ ಬಂದಿವೆ.
ಪದೇ ಪದೆ ವಿಫಲರಾಗುತ್ತಿರುವ ರೋಹಿತ್ ಶರ್ಮಾ ಬದಲಿಗೆ ಕನ್ನಡಿಗ ಕೆ. ಎಲ್. ರಾಹುಲ್ ಅಥವಾ ಪ್ರತಿಭಾನ್ವಿತ ಅಜಿಂಕ್ಯ ರಹಾನೆಗೆ ಅವಕಾಶ ನೀಡಬೇಕು ಎನ್ನುವ ಅಭಿಪ್ರಾಯಗಳು ವ್ಯಾಪಕವಾಗುತ್ತಿವೆ. ಪಾಂಡ್ಯ ಬದಲು ಅವರಷ್ಟೇ ಪ್ರತಿಭಾವಂತರಾದ ಆಲ್‌ರೌಂಡರ್‌ಗಳಿಗೆ ಅವಕಾಶ ನೀಡಬಹುದಾಗಿತ್ತು.
ಪ್ರತಿಭಾವಂತರಾದ ರಿಷಬ್ ಪಂಥ್, ಇಶಾನ್ ಕಿಶನ್, ಮಾಯಾಂಕ್ ಅಗರ್ವಾಲ್, ಪಾರ್ಥಿವ್ ಪಟೇಲ್ ಮುಂತಾದ ಆಟಗಾರರಿಗೂ ಅವಕಾಶಗಳನ್ನು ನೀಡಬಹುದಾಗಿತ್ತು. ತನ್ಮೂಲಕ ಅವರ ಆಟವನ್ನೂ ಪರೀಕ್ಷಿಸಬಹುದಿತ್ತು ಎನ್ನುವ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಹೀಗೆ ವಿಫಲರಾಗುತ್ತಿರುವ ಆಟಗಾರರನ್ನು ಕೈಬಿಟ್ಟು ಬದಲಿಗೆ ಪ್ರತಿಭಾವಂತರಿಗೆ ಮಣೆ ಹಾಕಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Thursday, February 22, 2018

ನಾನು ಓದಿದ ಪುಸ್ತಕಗಳು -1

ಪರ್ವತದಲ್ಲಿ ಪವಾಡ

ಕೆಲವು ದಿನಗಳ ಹಿಂದಷ್ಟೇ ನಾನು ಇದೇ ಅಂಗಳದಲ್ಲಿ ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿರುವ ಪರ್ವತದಲ್ಲಿ ಪವಾಡ ಪುಸ್ತಕ ಓದಲು ಆರಂಭಿಸಿರುವುದಾಗಿ ಹೇಳಿದ್ದೆ... ಓದಿದೆ... ನಿಜಕ್ಕೂ ಈ ಪುಸ್ತಕದ ಬಗ್ಗೆ ಕೆಲವಾದರೂ ಮಾತುಗಳನ್ನ ಅರುಹಲೇಬೇಕು.
ಹಲವಾರು ಅನುವಾದಿತ ಪುಸ್ತಕಗಳನ್ನು ನಾನು ಓದಿದ್ದೇನೆ. ಹೆಸರಾಂತ ವ್ಯಕ್ತಿಗಳು ಅನುವಾದಿಸಿದ ಪುಸ್ತಕಗಳನ್ನು ಓದಲು ಯತ್ನಿಸಿ ಕಷ್ಟಪಟ್ಟಿದ್ದೂ ಇದೆ. ಕೆಲವು ಅನುವಾದಿತ ಪುಸ್ತಕಗಳಂತೂ ಅದೆಷ್ಟು ಗಡಚೆಂದರೆ, ಅವರ ಕನ್ನಡ ಅನುವಾದವನ್ನು ಮತ್ತೊಮ್ಮೆ ಕನ್ನಡಕ್ಕೆ ಅನುವಾದ ಮಾಡಿಕೊಂಡು ಓದಿದಾಗ ಅರ್ಥವಾಗಬಲ್ಲದು... ಸಂಯುಕ್ತ ಪುಲಿಗಲ್ ಅವರ ಪುಸ್ತಕ ಓದಲು ಶುರುವಿಟ್ಟುಕೊಳ್ಳುವ ಮೊದಲು ನನಗೆ ಇಂತಹದ್ದೊಂದು ಭಯ ಕಾಡಿದ್ದು ಸುಳ್ಳಲ್ಲ. ಹೀಗಾಗಿಯೇ ಪುಸ್ತಕ ಕೊಂಡು ತಂದು ಹಲವೇ ತಿಂಗಳಾಗಿದ್ದರೂ ಅವುಗಳ ಕಡೆಗೆ ಕಣ್ಣಾಡಿಸಿರಲಿಲ್ಲ. ಆದರೆ ಮೊದಲ ಅಧ್ಯಾಯದ ಒಂದೆರಡು ಪ್ಯಾರಾ ಓದುತ್ತಲೇ ಸಂಯುಕ್ತರ ಬರವಣಿಗೆ ಇಷ್ಟವಾಗಿಬಿಟ್ಟಿತು. ಅನುವಾದದ ಪುಸ್ತಕಗಳ ಕುರಿತು ನನ್ನ ಅಭಿಪ್ರಾಯ ಬದಲಾಗುವಂತಿತ್ತು.

ನ್ಯಾಂಡೋ ಪರಾಡೊ ಎಂಬ ಲ್ಯಾಟಿನ್ ಅಮೆರಿಕದ ಕ್ರೀಡಾಪಟು, ಉದ್ಯಮಿ ಬರೆದ ಪುಸ್ತಕವೇ ಪರ್ವತದಲ್ಲಿ ಪವಾಡ. ಮಿರಾಕಲ್ ಇನ್ ಆಂಡಿಸ್ ಎಂಬ ಆಂಗ್ಲ ನಾಮಧೇಯಕ್ಕೆ ವಿಶಿಷ್ಟ ಹೆಸರಿಟ್ಟಿದ್ದಾರೆ ಸಂಯುಕ್ತರು.
ಮೊದಲ ಅಧ್ಯಾಯದಲ್ಲಿ ಪರಾಡೋರ ಬಾಲ್ಯ, ಕ್ರೀಡೆ ಇತ್ಯಾದಿಗಳ ಬಗ್ಗೆ ವಿವರಗಳಿದ್ದರೆ ನಂತರದಲ್ಲಿ ಬದುಕಿನ ಕರಾಳತೆಗಳು ತೆರೆದುಕೊಳ್ಳುತ್ತವೆ.

ಸೊಂಟ ಮಟ್ಟ ತುಂಬಿದ ಹಿಮ ಪದರ... ಅದರ ನಡುವೆ ಆಗಾಗ ಉಂಟಗುವ ಹಿಮಪಾತ, ಕ್ರೂರ ಚಳಿ..ಗಾಳಿ ಈ ನಡುವೆ ಬದುಕಿಗಾಗಿ ಕಾಯುವಿಕೆ... ಒಹ್.. ಖರ್ಚಾದ ಆಹಾರ.. ಕೊನೆಗೆ ಅನಿವಾರ್ಯವಾಗಿ ಅಪಘಾತದಲ್ಲಿ ಸತ್ತವರ ಮಾಂಸವನ್ನೇ ಕತ್ತರಿಸಿ ಕತ್ತರಿಸಿ ತಿನ್ನುವುದು... ಬದುಕಿನ ಎಲ್ಲ ಮುಖಗಳ ಅನಾವರಣ ಇಲ್ಲಾಗುತ್ತದೆ.

ಕಣ್ಣೆದುರೇ ನವೆದು ನವೆದು ಸಾಯುವ ತಂಗಿ, ತಾಯಿ..ಗೆಳೆಯರು... ಅವರು ಸತ್ತರೆಂದು ಅಳುವಂತಿಲ್ಲ... ಅಳಬೇಡ.. ಅತ್ತರೆ ದೇಹದಲ್ಲಿ ಉಪ್ಪಿನಂಶ ಕಡಿಮೆ ಆಗುತ್ತದೆ. ನಾವು ಬದುಕಬೇಕೆಂದರೆ ದೇಹದಲ್ಲಿ ಉಪ್ಪಿನಂಶ ಇರಲೇಬೇಕು ಎನ್ನುವ ಗೆಳೆಯನ ತಾಕೀತು...
ಪಶ್ಚಿಮಕ್ಕೆ ಚಿಲಿ ಇದೆ ಎನ್ನುವ ಆಶಾವಾದ... ನುರಿತ ಪರ್ವತಾರೋಹಣ ಮಾಡುವವರೂ ಹತ್ತಲು ಹಿಂಜರಿಯುವ ಸೇಲರ್ ಪರ್ವತವನ್ನು ಏನೂ ಇಲ್ದೆ ಹತ್ತುವ ನ್ಯಾಂಡೋ... ಮಿತ್ರರನ್ನು ಬದುಕಿಸುವ ಪರಿ ಇವೆಲ್ಲ ಹಿಡಿದಿಡುತ್ತದೆ.

೨೫೮ ಪುಟಗಳ ೧೯೦ ರೂಪಾಯಿ ಬೆಲೆಯ ಛಂದ ಪುಸ್ತಕದಿಂದ ಹೊರ ಬಂದಿರುವ ಪರ್ವತದಲ್ಲಿ ಪವಾಡ ಪುಸ್ತಕ ತೇಜಸ್ವಿ ಅನುವಾದಿಸಿದ ಮಹಾಪಲಾಯನ, ಪ್ಯಾಪಿಲಾನ್ ನಂತಹ ಪುಸ್ತಕಗಳ ಸಾಲಿನಲ್ಲಿ ನಿಲ್ಲುತ್ತದೆ.

ಸಿಕ್ಕ ಜೀವನವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಬದುಕಿನಲ್ಲಿ ಕೊರಗಬೇಡಿ. ನಿಮ್ಮ ಆಸ್ತಿತ್ವವನ್ನು ಜೀವಿಸಿ. ಪ್ರತಿ ಕ್ಷಣವೂ ಜೀವಂತಿಕೆಯಿಂದ ಬದುಕಿ ಎಂಬ ಅಂಶಗಳನ್ನು ಸಾರುವ ಪುಸ್ತಕ ಎಲ್ಲರನ್ನೂ ಸೆಳೆಯುತ್ತದೆ.

ಸಂಯುಕ್ತ ಪುಲಿಗಲ್ ಅವರ ಸರಳ ಬರವಣಿಗೆ ಇಷ್ಟವಾಗುತ್ತದೆ. ಎಲ್ಲೂ ಗಡಚೆನ್ನಿಸದೇ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸಂಯುಕ್ತರ ಅನುವಾದಕ್ಕೆ ಮನಸೋತಿಹೆ. ಅವರಿಂದ ಇನ್ನಷ್ಟು ಅನುವಾದಿತ ಕೃತಿಗಳು ಬರಲಿ. ಆಂಗ್ಲ ಅಥವಾ ಇನ್ಯಾವುದೇ ಭಾಷೆಯ ಕೃತಿಗಳು ಕನ್ನಡಿಗರಿಗೆ ಓದಲು ಸಿಗುಂತಾಗಲಿ ಎಂಬ ಆಸೆ.

ಜಿಕೆವಿಕೆ ಕೃಷಿ ಮೇಳದಲ್ಲಿ ಹಾಕಲಾಗಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕ ಮಳಿಗೆಯಲ್ಲಿ ೫೦ರೂಪಾಯಿಗೆ ನನಗೆ ಸಿಕ್ಕಿದ್ದ ಈ ಪುಸ್ತಕ ಬದುಕಿನ ಹಲವು ಪಾಠಗಳನ್ನ ಹೇಳಿದೆ. ಧನ್ಯವಾದ ಸಂಯುಕ್ತ ಅವರಿಗೆ.

ನೀವೂ ಓದಿ


ಕೆ. ಎಸ್ ನಾರಾಯಣಾಚಾರ್ಯರು ಬರೆದಿರುವ ಚಾಣಕ್ಯ ಪುಸ್ತಕ ಓದಿದೆ. ಪುಸ್ತಕ ಓದಿದ ಮೇಲೆ ನನ್ನಲ್ಲಿ ಉಂಟಾದ ಭಾವನೆಗಳನ್ನ ಹೇಳಲೇಬೇಕು...

* ಕಾದಂಬರಿಯಾಗಿ ಬಹಳ ಓದಿಸಿಕೊಂಡು ಹೋಗುವಂತಹ ಪುಸ್ತಕ... ಪ್ರತಿ ಅಧ್ಯಾಯವೂ ಬಹಳ ಕುತೂಹಲಕಾರಿ. ಒಮ್ಮೆ ಕೈಗೆತ್ತಿಕೊಂಡರೆ ಓದುತ್ತಲೇ ಇರಬೇಕು ಅನ್ನಿಸುತ್ತದೆ..

* ಕಾದಂಬರಿಯಲ್ಲಿ ಕಥಾನಾಯಕ ಚಾಣಕ್ಯ. ಅಲ್ಲಲ್ಲಿ ಅತಿಮಾನುಷನಾಗಿದ್ದು ನಮಗೆ ವಿಚಿತ್ರ ಎನ್ನಿಸುತ್ತದೆ. ಮಾಟ ಮಂತ್ರಗಳನ್ನು ನಂಬುವವರು ಒಪ್ಪಿಕೊಳ್ಳಬಹುದು. ಆದರೆ ಕೆಲವು ಅತಿಯಾಯಿತೆನ್ನಿಸಿತು.

* ಚಾಣಕ್ಯ + ಚಂದ್ರಗುಪ್ತ ಇಬ್ಬರಿಂದ ಮಗಧ ಸಾಮ್ರಾಜ್ಯ ಮೈದಳೆಯಿತು ಎನ್ನುವುದು ಸರಿ. ಆದರೆ ಕಾದಂಬರಿಯಲ್ಲಿ ಚಾಣಕ್ಯನೇ ಎಲ್ಲ ಎನ್ನಲಾಗಿದೆ. ಚಂದ್ರಗುಪ್ತ ಬೆದರು ಬೊಂಬೆಯಂತೆ, ಕೈಗೊಂಬೆಯಂತೆ ಚಿತ್ರಣಗೊಂಡಿದ್ದಾನೆ. ಇತಿಹಾಸ ಈ ರೀತಿ ಇದೆಯೇ ಎಂಬ ಅನುಮಾನ ಮೂಡುತ್ತದೆ. ಚಂದ್ರಗುಪ್ತನ ಕುರಿತು ಪಾಠಗಳಲ್ಲಿ ಓದಿದವರಿಗೆ ಇರಸು ಮುರುಸು ಆಗಿ.. ಮನಸು ಕಲಸು ಮೇಲೋಗರವಾಗುತ್ತದೆ.

* ಹಿಂದೂ, ಜೈನ, ಬೌದ್ಧ ಧರ್ಮಗಳ ಅಂದಿನ ಘರ್ಷಣೆಯ ಮುಖ ಕೊಂಚ ಅನಾವರಣಗೊಂಡಿದೆ. ಹೀಗೂ ನಮ್ಮ ದೇಶದ ಇತಿಹಾಸ ಇದ್ದರಬಹುದೇ ಎಂಬ ಚಿಂತನೆಗೆ ಒಡ್ಡುತ್ತದೆ..

* ಕೊನೆಯದಾಗಿ... ನಾರಾಯಣಾಚಾರ್ಯರ ಅಗಸ್ತ್ಯ ಕಾದಂಬರಿ ಇಷ್ಟವಾದಷ್ಟು... ಚಾಣಕ್ಯ ಇಷ್ಟವಾಗಲಿಲ್ಲ... ಈ ಕಾದಂಬರಿಯನ್ನು ಬ್ರಾಹ್ಮಣ ದ್ವೇಷಿಗಳು ಓದಿದರೆ ಸಿಡಿಮಿಡಿಗೊಂಡಾರು.

Tuesday, February 20, 2018

ನಾ ನೋಡಿದ ಚಿತ್ರಗಳು -2

ಅಪೊಕ್ಯಾಲಿಪ್ಟೋ

ನಾನು ಇವತ್ತಷ್ಟೇ ನೋಡಿದ ಚಿತ್ರ. ಇಂಗ್ಲೀಷ್ ಅಬ್ ಟೈಟಲ್ ಹೊಂದಿದ ಎರಡೂ ಮುಕ್ಕಾಲು ತಾಸಿನ ಚಿತ್ರ. ಸಬ್ ಟೈಟಲ್ ಇಲ್ಲದೆಯೂ ಚಿತ್ರ ನೋಡಬಹುದು. ಅರ್ಥವಾಗುತ್ತದೆ. ಇಷ್ಟವಾಗುತ್ತದೆ.

ಯಾವುದೇ ನಾಗರಿಕತೆಗಳಲ್ಲಿ ಕೂಡ ಒಳಜಗಳಗಳು, ಪರಸ್ಪರ ಯುದ್ಧಗಳು, ಮಹತ್ವಾಕಾಂಕ್ಷೆಗಳು, ವಿಚಿತ್ರ ಆಚರಣೆಗಳು ಇದ್ದೇ ಇರುತ್ತವೆ. ಈ ಚಿತ್ರ ಮೆಕ್ಸಿಕೋದಲ್ಲಿನ ಮಯನ್ ನಾಗರಿಕರ ಬದುಕು ಅನಾವರಣಗೊಳಿಸುತ್ತದೆ.

ಚಿತ್ರದ ನಾಯಕ ಆಗಷ್ಟೇ ಟೀನೇಜ್ ಮುಗಿಸಿ ಮುಂದಿನ ಬದುಕಿಗೆ ಕಾಲಿಟ್ಟವನು. ಅವನಿಗೊಬ್ಬ ಹೆಂಡತಿ. ಆಗಲೇ ಒಂದು ಮಗುವಿನ ತಾಯಿ. ಇನ್ನೊಂದು ಕೂಸು ಹೊಟ್ಟೆಯಲ್ಲಿ. ಆತನ ತಂದೆ ಆ ಬುಡಕಟ್ಟು ಪಂಗಡದ ನಾಯಕ. ಪ್ರಕೃತಿಯೇ ಇವರಿಗೆ ವರ. ಪಂಚಭೂತಗಳೇ ಶಕ್ತಿ. ಕಾಡೆಂದರೆ ಹಸ್ತ ರೇಖೆಯಷ್ಟೇ ಸಲೀಸು. ಬೇಟೆಯಲ್ಲಿ ಎತ್ತಿದ ಕೈ.

ತಮ್ಮ ಗುಂಪಿನಲ್ಲೇ ಕುಣಿಯುತ್ತ, ನಲಿಯುತ್ತ ಇದ್ದವರ ಮೇಲೆ ಆ ದಿನಗಳ ನಗರವಾಸಿಗಳು ದಾಳಿ ಮಾಡುತ್ತಾರೆ. ಆ ಪಂಗಡದ ಮುದುಕರನ್ನು, ಹೋರಾಡುವವರನ್ನು ಕತ್ತರಿಸುತ್ತಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ, ಹಿಡಿದು ಕಟ್ಟಿ ಹಾಕುತ್ತಾರೆ. ಕಥಾನಾಯಕ ತನ್ನ ಮಡದಿಯನ್ನೂ, ಮಗುವನ್ನೂ ಬಾವಿಯೊಂದಕ್ಕೆ ಇಳಿಸಿದ ಸಂದರ್ಭದಲ್ಲಿ ಶತ್ರುಗಳಿಗೆ ಸಿಕ್ಕಿಕೊಳ್ಳುತ್ತಾನೆ.

ನಗರದಲ್ಲಿ ಹೆಂಗಸರನ್ನು ಮಾರಲಾಗುತ್ತದೆ. ದೊಡ್ಡದೊಂದು ಬಲಿಪೀಠದ ಮೇಲೆ ಗಂಡಸರನ್ನು ಹತ್ಯೆ ಮಾಡಲು ಒಯ್ಯುತ್ತಾರೆ. ಈಗಾಗಲೇ ಸಹಸ್ರ ಸಹಸ್ರ ಸಂಖ್ಯೆಯ ಜನರನ್ನು ಅಲ್ಲಿ ಹತ್ಯೆ ಮಾಡಲಾಗಿದೆ. ಹೀಗೆ ಕೊಂದವರ ರಕ್ತವನ್ನು ಆ ನಗರದ ಜನತೆ ತಮಗೂ, ತಮ್ಮ ಮಕ್ಕಳ ಮೈಗೂ ಹಚ್ಚುತ್ತಿವೆ. ಹೀಗೆ ಹಚ್ಚಿಕೊಂಡರೆ ಪ್ಲೇಗ್ ನಂತಹ ಕಾಯಿಲೆ ಬರಲಾರದು ಎಂಬುದು ಅವರ ನಂಬಿಕೆ.

ನಾಯಕನನ್ನು ವಧಾ ಸ್ಥಾನದ ಮೇಲೆ ಬಲಿಗಾಗಿ ಕತ್ತಿ ಎತ್ತಬೇಕೆಂಬಷ್ಟರಲ್ಲಿ ಸೂರ್ಯಗ್ರಹಣ ನಡೆಯುತ್ತದೆ. ಇದೊಂದು ಶಕುನ ಎಂದುಕೊಂಡು ಅವನನ್ನು ಬಿಡುತ್ತಾರೆ. ನಾಯಕ ಬಚಾವಾಗುತ್ತಾನೆ. ಕೊನೆಗೆ ನಾಯಕನನ್ನು ದೊಡ್ಡದೊಂದು ಬಯಲಿಗೆ ಕಳಿಸಿ ಓಡುವಂತೆ ಹೇಳಲಾಗುತ್ತದೆ. ಓಡುವಾಗ ಹಿಂದೆ ಬಾಣ ಬಿಡಲಾಗುತ್ತದೆ. ಅದನ್ನು ತಪ್ಪಿಸಿಕೊಂಡು ಮುನ್ನಡೆದರೆ ಜಗಜಟ್ಟಿಗಳು ಸಿಗಿದು ಹಾಕಲು ಕಾಯುತ್ತಿರುತ್ತಾರೆ. ನಾಯಕ ಇದನ್ನೂ ನಿವಾಳಿಸಿ ಮುನ್ನಡೆಯುತ್ತಾನೆ. ಆಗ ನಗರದ ಯೋಧರು ಆತನ ಬೆನ್ನು ಬೀಳುತ್ತಾರೆ. ಒಬ್ಬಂಟಿ ನಾಯಕನ ಪರವಾಗಿ ಪಂಚಭೂತಗಳು ಮಾತ್ರ ನಿಲ್ಲುತ್ತವೆ.

ಇದರ ನಡುವೆ ಕುಂಭದ್ರೋಣ ಮಳೆ. ನಾಯಕನ ಮಡದಿ ಇರುವ ಬಾವಿಯಲ್ಲಿ ಸಿಕ್ಕಾಪಟ್ಟೆ ನೀರು ತುಂಬಲು ಆರಂಭವಾಗುತ್ತದೆ. ಗರ್ಭಿಣಿಗೆ ಪ್ರಸವ ವೇದನೆಯೂ... ಇನ್ನೊಂದು ಮಗು ನೀರಲ್ಲಿ ಮುಳುಗಲಾರಂಭಿಸುತ್ತದೆ.

ನಾಯಕ ಬದುಕುತ್ತಾನಾ? ಗರ್ಭಿಣಿ ಬಾವಿಯಿಂದ ಹೊರ ಬರ್ತಾಳಾ? ಆಕೆಗೆ ಹೆರಿಗೆ ಆಗ್ತದಾ? ಮಯನ್ ನಾಗರೀಕತೆ ಅಳಿವು ಹೇಗೆ?
ಇದೆಲ್ಲಕ್ಕೂ ವಿಶಿಷ್ಟವಾದ ಕ್ಲೈಮ್ಯಾಕ್ಸ್ ಉತ್ತರ ಹೇಳುತ್ತದೆ.

ಕನ್ನಡದ ಚಿತ್ರಗಳಲ್ಲಿ ಕ್ಲೈಮ್ಯಾಕ್ ನಲ್ಲಿ ಹೀಗೆಯೇ ಆಗುತ್ತದೆ ಎಂಬುದನ್ನು ನಾವು ಊಹಿಸಬಹುದು. ಆದರೆ ವಿದೇಶಿ ಚಿತ್ರಗಳು ಹೀಗಲ್ಲ.

ವಿಶಿಷ್ಟ ಚಿತ್ರ ಆಪೊಕ್ಯಾಲಿಪ್ಟೋ... ನೋಡಿ.
ಚಿತ್ರಕ್ಕೆ ನಾನು ಕೊಡುವ ಅಂಕ ೧೦ಕ್ಕೆ ೮+


ಹೈವೇ ಯಲ್ಲಿ ತೆರೆದಕೊಂಡ ಕನಸುಗಳು...

ರೋಡ್ ಮೂವಿಗಳೆಂದರೆ ನನಗೆ ಇಷ್ಟದ ಸಿನಿಮಾ ಪ್ರಕಾರಗಳಲ್ಲಿ ಒಂದು. ಇಂಗ್ಲೀಷಿನ ರೋಡ್ ಮೂವಿಗಳಾದ ಡ್ಯೂಯೆಲ್, ಹಿಂದಿಯ 'ರೋಡ್ ಮೂವಿ', ಕನ್ನಡದ ಸವಾರಿ ೧-೨ ಇವೆಲ್ಲ ಇಷ್ಟವಾಗಿದೆ. ಇಂತದ್ದೇ ಒಂದು ರೋಡ್ ಮೂವಿ ಹೈವೆ.

೨೦೧೪ರಲ್ಲಿ ತೆರೆಗೆ ಬಂದ ಈ ಚಿತ್ರದ ಜೀವಾಳ ಆಲಿಯಾ ಭಟ್ ಹಾಗೂ ಅಮೋಘ ಕಥೆ. ರಣದೀಪ್ ಹೂಡಾನ ಒರಟುತನ.

ಶ್ರೀಮಂತ ಪೊಲೀಸ್ ಅಧಿಕಾರಿಯ ಮಗಳಾಗಿ ಹುಟ್ಟಿದ ವೀರಾ (ಆಲಿಯಾ)ಗೆ ಜಗತ್ತು ಸುತ್ತುವ ತವಕ. ಹಿಮಾಲಯದ ಪಹಾಡಿಗಳ ನಡುವೆ ಮನೆ ಕಟ್ಟಿ ಬದುಕು ಕಟ್ಟಿಕೊಳ್ಳುವ ಕನಸು. ಆದರೆ ಶ್ರೀಮಂತಿಕೆಯ ಸುಪ್ಪತ್ತಿಗೆ ನಡುವೆ ಎಲ್ಲದ್ದಕ್ಕೂ ಕಟ್ಟುನಿಟ್ಟು.

ಮರು ದಿನ ಮದುವೆ. ಆಕೆಗೆ ಕರಾಳ ರಾತ್ರಿಯಲ್ಲಿ ನಗರದ ಹೊರಕ್ಕೆ ದೀರ್ಘ ಜಾಲಿ ರೈಡ್ ಹೋಗುವ ಆಸೆ. ಏನಾದ್ರೂ ಆದ್ರೆ ನಾನು ಜವಾಬ್ದಾರನಲ್ಲ.. ಎಂಬ ತಾಕೀತಿನೊಂದಿಗೆ ಕರೆದೊಯ್ಯುವ ಗೆಳೆಯ. ನಡುವೆ ಆಕೆಯನ್ನು ಅಪಹರಿಸುವ ರಣದೀಪ್ ಹೂಡಾ.

ಪೊಲೀಸ್ ಅಧಿಕಾರಿಯ ಮಗಳು ಎಂಬ ಸತ್ಯ ಗೊತ್ತಾದ ತಕ್ಷಣ ಹೂಡಾನ ಸಖ್ಯ ತೊರೆಯುವ ಅಪಹರಣಕಾರರ ಗುಂಪು. ಹೂಡಾ ಒಬ್ಬಂಟಿ. ಈ ನಡುವೆ ದೆಹಲಿ, ಪಂಜಾಬ್, ಹರ್ಯಾಣ, ರಾಜಸ್ತಾನ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರಗಳಲ್ಲಿ ಓಡಾಟ. ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿದ ವೀರಾನ ತಂದೆ. ಒರಟು ಹೂಡಾನ ಮೇಲೆ ವೀರಾಳಿಗೆ ಅರಳಿದ ಒಲವು.

ರಾಜಸ್ತಾನದ ಮರುಭೂಮಿ, ಪೈರು ಬೆಳೆದು ನಿಂತ ಹರ್ಯಾಣ, ಪಂಜಾಬಿನ ಗದ್ದೆಗಳು, ಗುಡ್ಡ ಬೆಟ್ಟಗಳ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರಗಳ ಸೌಂದರ್ಯದ ಅನಾವರಣ. ಇವೆಲ್ಲಕ್ಕೂ ಮೆರಗು ಎಂಬಂತೆ ಆಲಿಯಾ ಭಟ್ ಳ ಅಮೋಘ ಅಭಿನಯ.

ಅಳಬೇಡ...ಶ್... ಎನ್ನುವಾಗಿನ ಆಲಿಯಾ... ಚಿಕ್ಕಂದಿನಲ್ಲಿ ನನ್ನ ಮೇಲೆ ಪದೆ ಪದೆ ಅಂಕಲ್ ಒಬ್ಬರು ಚಾಕಲೇಟ್ ಆಸೆಗಾಗಿ ಅತ್ಯಾಚಾರ ಮಾಡುತ್ತಿದ್ದರು. ಅದನ್ನು ಅವರು ಮುದ್ದು ಮಾಡುತ್ತಿದ್ದರು. ವಿಷಯವನ್ನು ಅಮ್ಮನಿಗೆ ಹೇಳಿದಾಗ ಆಕೆ ಹೇಳಿದ್ದು, ಇದು ಮರ್ಯಾದೆ ಪ್ರಶ್ನೆ... ಅಳಬೇಡ... ಶ್... ಎಂದು ಎನ್ನುವಾಗಿನ ಆಲಿಯಾ...
ಹಿಮದಲ್ಲಿ ಆಡುವ ಆಲಿಯಾ... ಅಪಹರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮರುಭೂಮಿಯಲ್ಲಿ ಓಡಲು ಯತ್ನಿಸುವ ಆಲಿಯಾ... ಹಸಿದವಳಿಗೆ ಆಹಾರ ನೀಡಲು ಯತ್ನಿಸಿ ಅತ್ಯಾಚಾರಕ್ಕೆ ಯತ್ನಿಸಿದಾಗ... ನೀನೂ ಅಂಕಲ್ ನ ಹಾಗೇ ಮುದ್ದು ಮಾಡ್ತೀಯಾ ಎಂದು ಕೇಳುವ ಆಲಿಯಾ... ಮೇಕಪ್ ಇಲ್ಲದೆಯೇ ನಟಿಸಿದ ಆಲಿಯಾ... ಕೊನೆಯ ತನಕ ಕಾಡುತ್ತಾರೆ.

೨೦ ವರ್ಷಕ್ಕೂ ಕಡಿಮೆ ವಯೋಮಾನದ ಆಲಿಯಾಳ ಅಮೋಘ ನಟನೆಗೆ ಮಾರು ಹೋಗದವರೇ ಇಲ್ಲ ಬಿಡಿ. ಈ ಕಾರಣಕ್ಕಾಗಿ ಆಕೆಗೆ ಬಹುಮಾನಗಳೇ ಬಂದಿವೆ.

ಆಕೆಯ ಕನಸು ನನಸಾಗ್ತದಾ? ಇಬ್ಬರ ಪ್ರೇಮಕ್ಕೆ ಸುಖಾಂತ್ಯದ ಮುದ್ರೆ ಬೀಳ್ತದಾ? ಕಂಡಲ್ಲಿ ಗುಂಡೇಟು ಆದೇಶ ನೀಡಿದ ನಂತರ ಏನಾಗ್ತದೆ? ಕ್ಲೈಮ್ಯಾಕ್ಸ್ ಅನೂಹ್ಯವಾದುದು.

ಒಮ್ಮೆ ನೋಡಿ...
ಮಗದೊಮ್ಮೆ ನೋಡಬೇಕು ಎನ್ನಿಸುತ್ತದೆ...

Monday, January 22, 2018

ದೇಶದ ಅತ್ಯಂತ ಶ್ರೀಮಂತ ಸ್ಟಾರ್ಟ್‌ಅಪ್ ಸ್ಥಾಪಕರು

ಕೆಲವು ವರ್ಷಗಳವರೆಗೂ ಭಾರತದಲ್ಲಿ ಸ್ಟಾರ್ಟ್‌ಅಪ್ ವಲಯ ಎನ್ನುವುದು ಬಾಲ್ಯಾವಸ್ಥೆಯಲ್ಲಿತ್ತು. ಆಗೊಬ್ಬರು, ಈಗೊಬ್ಬರು ಸ್ಟಾರ್ಟ್‌ಅಪ್ ಮೂಲಕ ಯಶಸ್ಸನ್ನು ಸಾಸಿದ್ದರು ಅಷ್ಟೇ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಸ್ಟಾರ್ಟ್‌ಅಪ್ ರಂಗ ತೀವ್ರ ಅಭಿವೃದ್ಧಿ ಹೊಂದುತ್ತಿದೆ. ಬೆಂಗಳೂರು ಭಾರತದಲ್ಲಿ ಹಾಗೂ ಜಾಗತಿಕವಾಗಿ ದೊಡ್ಡ ಸ್ಟಾರ್ಟ್‌ಅಪ್ ಹಬ್ ಆಗಿ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿಮಂಗಳೂರಿನಲ್ಲಿಯೂ ಕೂಡ ಸ್ಟಾರ್ಟ್‌ಅಪ್ ಹಬ್ ನಿರ್ಮಾಣಕ್ಕೆ ಎಲ್ಲ ಅವಕಾಶಗಳೂ ಇವೆ. ಭಾರತದಲ್ಲಿ ಹಲವರು ಸ್ಟಾರ್ಟ್‌ಅಪ್‌ಗಳ ಮೂಲಕವೇ ಕೋಟ್ಯಂತರ ರೂ.ಗಳಷ್ಟು ಆದಾಯ ಮಾಡಿಕೊಂಡಿದ್ದಾರೆ. ಘಟಾನುಘಟಿ ಕಂಪನಿಗಳೇ ಆದಾಯ ಗಳಿಕೆಯಲ್ಲಿ ಎಡವಿ ಬೀಳುತ್ತಿರುವ ಸಂದ‘ರ್ದಲ್ಲಿ ಸಣ್ಣ ಪ್ರಮಾಣದಲ್ಲಿ ಹುಟ್ಟಿಕೊಂಡ ಸ್ಟಾರ್ಟ್ ಅಪ್‌ಗಳು ಕೋಟ್ಯಂತರ ರೂ.ಗಳ ವಹಿವಾಟನ್ನು ನಡೆಸುತ್ತಿರುವ ನಿದರ್ಶನಗಳಿವೆ. ಭಾರತದಲ್ಲಿ ಸ್ಟಾರ್ಟ್ ಅಪ್‌ಗಳ ಮೂಲಕವೇ ಹೇರಳ ಆದಾಯ ಗಳಿಸಿಕೊಂಡವರ ಕಿರು ಯಾದಿಯನ್ನು ಇಲ್ಲಿ ನೀಡಲಾಗಿದೆ.


ಕಳೆದ ಕೆಲವು ವರ್ಷಗಳಿಂದ ಫಂಡಿಂಗ್ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ಅನೇಕ ದೊಡ್ಡ ದೊಡ್ಡ ಕಂಪನಿಗಳು ಫಂಡಿಂಗ್ ಪಡೆದುಕೊಳ್ಳಲಾಗದೇ ಒದ್ದಾಡಿ ಹೋಗಿವೆ. ಅದರೆ ಭಾರತದ ಸ್ಟಾರ್ಟ್‌ಅಪ್ ಉದ್ಯಮಿಗಳು ಯಶಸ್ವಿ ಉದ್ಯಮವನ್ನು ನಿರ್ಮಿಸುತ್ತಿದ್ದಾರೆ. ಈ ಉದ್ಯಮದಿಂದ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಅಕರ್ಷಕ ಮೊತ್ತದ ಹಣವನ್ನು ಹೊಂದಿದ್ದಾರೆ. ಪ್ರತಿ ವರ್ಷ ಈ ಸ್ಟಾರ್ಟ್ ಅಪ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಆದಾಯ ಗಳಿಕೆ ಕೂಡ ಜಾಸ್ತಿಯಾಗುತ್ತಿರುವುದು ವಿಶೇಷ. ಭಾರತವೊಂದರಲ್ಲಿಯೇ ಪ್ರತಿ ವರ್ಷ ನೂರಾರು ಸಂಖ್ಯೆಯ ಸ್ಟಾರ್ಟ್‌ಅಪ್ ಗಳು ಜನ್ಮ ತಾಳುತ್ತಿವೆ. ಪ್ರತಿ ವರ್ಷವೂ ಸ್ಟಾರ್ಟ್‌ಅಪ್‌ಗಳ ಮೂಲಕ ಅತ್ಯಂತ ಹೆಚ್ಚಿನ ಪ್ರಮಾಣದ ಆದಾಯ ಗಳಿಸಿಕೊಂಡವರ ಯಾದಿಯನ್ನು ತಯಾರಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಇವು ಏರಿಳಿತವಾಗುತ್ತಲೂ ಇರುತ್ತದೆ. 2017ರಲ್ಲಿ ಕೂಡ ಭಾರತದ ಸ್ಟಾರ್ಟ್ ಅಪ್ ಸಾಧಕರ ಯಾದಿಯನ್ನು ತಯಾರಿಸಲಾಗಿದ್ದು, ಭುವನ್ ತುರಾಕಿಯಾ ಅವರು ಮೊದಲ ಸ್ಥಾನದಲ್ಲಿದ್ದಾರೆ.

ಏನಿದು ಸ್ಟಾರ್ಟ್‌ಅಪ್ ?
ಸ್ಟಾರ್ಟ್‌ಅಪ್ ಎನ್ನುವುದು ಅಂತರ್ಜಾಲದ ಕಂಪನಿ. ಇದು ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವುದರ ಜೊತೆಗೆ ಪ್ರಮುಖ ವಸ್ತುಗಳಿಗೆ ಮಾರುಕಟ್ಟೆಯನ್ನೂ ಒದಗಿಸುವ ಕೆಲಸ ಮಾಡುತ್ತದೆ. ವಸ್ತುಗಳನ್ನು ಕೊಳ್ಳುವುದು ಹಾಗೂ ಮಾರಾಟ ಮಾಡಲು ಇದೊಂದು ವೇದಿಕೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಸ್ತುಗಳನ್ನುಪೂರೈಸುವ ಅಂತರ್ಜಾಲ ಕಂಪನಿಗಳಿವು. ವಿಶಿಷ್ಟ ಬಗೆಯ, ಕ್ರಿಯಾಶೀಲ ಮನಸ್ಸಿನ ವ್ಯಕ್ತಿಗಳು ವಿಶಿಷ್ಟ ರೀತಿಯ ಸ್ಟಾರ್ಟ್ ಅಪ್ ತಯಾರಿಸಿ ಅದರಲ್ಲಿ ಯಶಸ್ಸನ್ನು ಗಳಿಸಿಕೊಂಡಿದ್ದಾರೆ. ಜಗತ್ತಿನ ಅತ್ಯಂತ ವೇಗದ ಮಾರುಕಟ್ಟೆ ಇದು ಎನ್ನುವ ಖ್ಯಾತಿ ಕೂಡ ಇದೆ.

ಪ್ರಧಾನಿ ಮೋದಿ ಉತ್ತೇಜನ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಸ್ಟಾರ್ಟ್ ಅಪ್‌ಗಳ ಬೆಳವಣಿಗೆಗೆ ಸಾಕಷ್ಟು ಉತ್ತೇಜನಗಳನ್ನು ನೀಡಿದಾರೆ. 2015ರ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಸ್ಟಾರ್ಟ್‌ಅಪ್ ಇಂಡಿಯಾವನ್ನು ಘೋಷಣೆ ಮಾಡಿದರು. ‘ಾರತದಲ್ಲಿ ಸ್ಟಾರ್ಟ್‌ಅಪ್ ಉತ್ತೇಜನಕ್ಕಾಗಿ ಲೈಸನ್ಸ್ ಪ್ರಕ್ರಿಯೆಯನ್ನು ಸರಳಗೊಳಿಸಿದರು. ಅಲ್ಲದೇ ಮುದ್ರಾ ಯೋಜನೆ, ಪಿಎಂಎಂವೈ ಮೂಲಕ ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ತೆರಿಗೆ ಪ್ರಮಾಣದಲ್ಲಿಯೂ ಇಳಿಕೆ ಮಾಡಿದರು. ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಂಡರು. ಪರಿಣಾಮವಾಗಿ 2015ರಿಂದೀಚೆಗೆ ದೇಶದಾದ್ಯಂತ 10 ಸಾವಿರಕ್ಕೂ ಸ್ಟಾರ್ಟ್‌ಅಪ್‌ಗಳು ಹುಟ್ಟಿಕೊಂಡು ಯಶಸ್ಸು ಪಡೆಯಲಾರಂಭಿಸಿವೆ.

2017ರಲ್ಲಿ ಭಾರತದ ಟೆಕ್ ಉದ್ಯಮಿಗಳ ಪಟ್ಟಿಯಲ್ಲಿ ಇನ್ನೂ ಅನೇಕ ಪರಿಚಿತ ಹೆಸರುಗಳಿವೆ. ಅದರೆ ಕೆಲವರ ಹೆಸರು ಈ ಪಟ್ಟಿಯಿಂದ ಜಾರಿ ಹೋಗಿದೆ. ಸ್ನ್ಯಾಪ್‌ಡೀಲ್ ಕುನಾಲ್ ಬಹಾಲ್ ಮತ್ತು ಓಲಾ ಸಂಸ್ಥೆಯ ಭವಿಷ್ ಅಗರ್ವಾಲ್ ಅವರು ಭಾರತದ 15 ಶ್ರೀಮಂತರ ಉದ್ಯಮಿಗಳ ಪಟ್ಟಿಯಲ್ಲಿದ್ದಾರೆ. ಅಂದ ಹಾಗೆ ಈ ಸ್ಟಾರ್ಟ್ ಅಪ್ ರಂಗದಲ್ಲಿ ಭಾರೀ ನಷ್ಟವನ್ನು ಅನುಭವಿಸಿದವರೂ ಇದ್ದಾರೆ. ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದವರೂ ಇದ್ದಾರೆ. ಅದೇ ರೀತಿ ಅಪಾರ ಹಣ ಗಳಿಸಿ ಬದುಕು ಹಸನು ಮಾಡಿಕೊಂಡವರಿದ್ದಾರೆ. ಭಾರತದಲ್ಲಿ ಕಳೆದ ಒಂದು ವರ್ಷದ ಅವಯಲ್ಲಿ ಅತ್ಯಂತ ಹೆಚ್ಚಿನ ಆದಾಯ ಗಳಿಸಿಕೊಂಡ ಭಾರತದ ಸ್ಟಾರ್ಟ್‌ಅಪ್ ಸಾಧಕರ ಯಾದಿ ಇಲ್ಲಿದೆ.

1. ಭುವಿನ್ ತುರಾಖಿಯ, ಡೈರೆಕ್ಟಿ/ಮೀಡಿಯಾ.ನೆಟ್ (ರೂ. 11,500 ಕೋಟಿ)
2016ರ ಅಂತ್ಯದ ವೇಳೆಗೆ ತುರಾಖಿಯ ತಮ್ಮ ಸಹೋದರ ದಿವ್ಯಾಂಕ್ ತುರಾಖಿಯ ಅವರೊಂದಿಗೆ ತಮ್ಮ ಮೀಡಿಯಾ.ನೆಟ್ ವ್ಯವಹಾರವನ್ನು 900 ದಶಲಕ್ಷ ಡಾಲರ್‌ಗೆ ಚೀನಾದ ಕಂಪನಿಗೆ ಮಾರಾಟ ಮಾಡಿದರು. ಮೀಡಿಯಾ.ನೆಟ್ ಪೂರ್ತಿಯಾಗಿ ಬೂಟ್ ಸ್ಟ್ರಾಪ್ ಮಾಡಲ್ಪಟ್ಟಿತು. ಇದರಿಂದಾಗಿ ಇಬ್ಬರು ಸಹೋದರರು ಶತಕೋಟ್ಯಾಪತಿಗಳಾದರು. ಪ್ರಸ್ತುತ ರೂ. 11,500 ಕೋಟಿ ಮೌಲ್ಯದ ಸಂಪತ್ತನ್ನು ಹೊಂದಿರುವ ‘ವಿನ್ ತುರಾಖಿಯ ಈಗ ‘ಾರತದ ಅತ್ಯಂತ ಶ್ರೀಮಂತ ಟೆಕ್ ಉದ್ಯಮಿ ಎನಿಸಿದ್ದಾರೆ. 2017ರಲ್ಲಿ ಇವರ ಸಂಪತ್ತು ನಾಲ್ಕು ಪಟ್ಟು ಹೆಚ್ಚಾಗಿದ್ದರಿಂದ ‘ವಿನ್ ತುರಾಖಿಯ ಮೊದಲ ಸ್ಥಾನಕ್ಕೆ ಏರಿದರು. 38 ವರ್ಷ ವಯಸ್ಸಿನ ಇವರು 2016ರಲ್ಲಿ ೆರ್ಬ್ಸ್ ಪ್ರಕಟಿಸಿದ ಶ್ರೀಮಂತರ ಯಾದಿಯಲ್ಲಿಯೂ ಸ್ಥಾನ ಗಳಿಸಿದ್ದರು.

2. ವಿಜಯ್ ಶೇಖರ್ ಶರ್ಮಾ, ಪೇಟಿಎಂ (ರೂ. 9000 ಕೋಟಿ)
2017ರಲ್ಲಿ ಪೇಟಿಎಂನ ವಿಜಯ್ ಶೇಖರ್ ಶರ್ಮಾ ಸ್ಟಾರ್ಟ್‌ಅಪ್ ಕ್ಷೇತ್ರದ ಹೊಸ ತಾರೆಯಾಗಿ ಹೊರಹೊಮ್ಮಿದ್ದಾರೆ. ಗರಿಷ್ಠ ಮೊತ್ತದ ನೋಟುಗಳ ಅಪಮೌಲ್ಯೀಕರಣದ ಸಮಯ ಅಂದರೆ 2016 ರ ಅಂತ್ಯದ ವೇಳೆಗೆ ಪೇಟಿಎಂನ ಅಲೆ ಆರಂ‘ವಾಯಿತು. ಇದು ಪೇಟಿಎಂ ಬ್ಯಾಂಕ್‌ನ್ನು ಕೂಡ ಲಾಂಚ್ ಮಾಡಿದೆ. ಅದು 2017 ರ ಆಯವ್ಯಯದಲ್ಲೂ ತನ್ನ ಸ್ಥಾನ ಬಿಡಲಿಲ್ಲ. ಕಂಪನಿಯು ಸ್ಟ್‌ಾ ಬ್ಯಾಂಕ್ ಕಡೆಯಿಂದ 1.4 ಶತಕೋಟಿ ಡಾಲರ್‌ಗೆ ಪಡೆದುಕೊಂಡಿತು. ಅಲ್ಲದೆ ತನ್ನ ಮೌಲ್ಯವನ್ನು ಎಂಟು ಬಿಲಿಯನ್ ಡಾಲರ್‌ಗೆ ಹೆಚ್ಚಿಸಿಕೊಂಡಿತು. ಶರ್ಮಾರವರು ಪ್ರಸ್ತುತ ರೂ. 9000 ಕೋಟಿ ಮೊತ್ತದ ಸಂಪತ್ತನ್ನು ಹೊಂದಿದ್ದಾರೆ. ಇವರು ಜಿಕ್ಯೂ ಇಂಡಿಯಾದ ಅತ್ಯಂತ ಪ್ರ‘ಾವಿ ಯುವಕರಲ್ಲಿ ಒಬ್ಬರು ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ.

3. ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್, ಫ್ಲ್‌ಿ ಕಾರ್ಟ್ (ರೂ. 5400 ಕೋಟಿ)
‘ಾರತದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಫ್ಲ್ಿಕಾರ್ಟ್ ಸಂಸ್ಥಾಪಕ ಜೋಡಿಯು ಮೂರನೇ ಸ್ಥಾನದಲ್ಲಿದೆ. ಬನ್ಸಾಲ್ ಸಹೋದರರು ಕಳೆದ ಕೆಲವು ವರ್ಷಗಳಿಂದ ತಮ್ಮ ನಿವ್ವಳ ಮೌಲ್ಯದಲ್ಲಿ ಇಳಿಕೆಯನ್ನು ಕಂಡಿದ್ದಾರೆ. 2015 ರಲ್ಲಿ ಕಂಪನಿಯ ಮೌಲ್ಯ 9,010 ಕೋಟಿಯಷ್ಟಿತ್ತು. ಪ್ರಸ್ತುತ ಕಂಪನಿಯ ನಿವ್ವಳ ಮೌಲ್ಯ 5,400 ಕೋಟಿ ರೂ. ನಷ್ಟಿದೆ. 2015ರಲ್ಲಿ ಇವರು ‘ಾರತದ ಶ್ರೀಮಂತ ವ್ಯಕ್ತಿಗಳ ಯಾದಿಯಲ್ಲೂ ಸ್ಥಾನ ಪಡೆದಿದ್ದರು.

4. ಗಣೇಶ್ ಕೃಷ್ಣನ್, ಪೋರ್ಟಿಯಾ ಮೆಡಿಕಲ್ (ರೂ. 5,100 ಕೋಟಿ)
ಉದ್ಯಮಿ ಗಣೇಶ್ ಕೃಷ್ಣನ್ ರೂ. 5,100 ಕೋಟಿ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಕೃಷ್ಣನ್ ಅವರು ಪೋರ್ಟಿಯಾ ಮೆಡಿಕಲ್ ಮತ್ತು ಟುಟೋರ್ ವಿಸ್ತಾದ ಸಂಸ್ಥಾಪಕರಾಗಿದ್ದಾರೆ. ಅಲ್ಲದೆ ಬಿಗ್ ಬಾಸ್ಕೆಟ್, ಬ್ಲೂಸ್ಟೋನ್.ಕಾಮ್ ಮತ್ತು ಹೋಮ್ಲೋನ್.ಕಾಮ್ ಗಳ ಪ್ರಾಯೋಜಕರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರ ಒಡೆತನದ ಬಿಗ್ ಬಾಸ್ಕೆಟ್ ‘ಾರಿ ಯಶಸ್ಸಿನತ್ತ ಮುಖ ಮಾಡಿದೆ.

5. ಸಂಜೀವ್ ಬಿಕ್ಚಂದಾನಿ, ಇನೋ ಎಡ್ಜ್ (ರೂ.4,800 ಕೋಟಿ)
ನೌಕರಿ.ಕಾಮ್, ಜೀವನ್ ಸಾಥಿ, ಮತ್ತು 99ಏಕರ್ಸ್.ಕಾಮ್ ನಂತಹ ಜನಪ್ರಿಯ ಪೋರ್ಟಲ್‌ಗಳನ್ನು ನಡೆಸುತ್ತಿರುವ ಇನೋ ಎಡ್ಜ್ ‘ಾರತದ ಅತ್ಯಂತ ಪ್ರಮುಖ ಅಂತರ್ಜಾಲ ಸಂಘಟಿತ ಸಂಸ್ಥೆಯಾಗಿದೆ. ಇದು ಝೊಮ್ಯಾಟೋದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಸ್ಥಾಪಕ ಸಂಜೀವ್ ಅವರು 1997 ರಲ್ಲಿ ನೌಕರಿ.ಕಾಮ್ ಅನ್ನು ಆರಂಭಿಸಿದರು. ಈಗ ಅವರು ರೂ. 4,800 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ‘ಾರತದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಿದ ಮೊದಲಿಗರಲ್ಲಿ ಇವರೂ ಒಬ್ಬರು ಎನ್ನುವ ಖ್ಯಾತಿ ಗಳಿಸಿಕೊಂಡಿದ್ದಾರೆ.

6. ವಿಶಾಲ್ ಮೆಹ್ತಾ, ಇನೀಬೀಮ್.ಕಾಮ್ (ರೂ. 3,500 ಕೋಟಿ)
ಅಮೆಜಾನ್ ವಿರುದ್ಧ ಹೆಚ್ಚಿನ ಂಡ್ ಇರುವ ಇ-ಕಾಮರ್ಸ್ ಕಂಪನಿಗಳು ಹೋರಾಡಿ ಮಣ್ಣು ಮುಕ್ಕುತ್ತಿದ್ದರೂ ಇನೀಬೀಮ್.ಕಾಮ್ ಬಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತಿದೆ. 2007ರಲ್ಲಿ ಆರಂ‘ಗೊಂಡ ಈ ಕಂಪನಿಯು ಈಗ ಲಾ‘ದಾಯಕವಾಗಿದೆ. ಕಳೆದ ವರ್ಷ ಸಾರ್ವಜನಿಕವಾಗಿ ಲ‘್ಯವಾಗಲು ಆರಂಭಿಸಿದ ದಿನದಿಂದ ಅದರ ಸ್ಟಾಕ್ ಗಣನೀಯವಾಗಿ ಹೆಚ್ಚಿದೆ. ಸಂಸ್ಥಾಪಕ ವಿಶಾಲ್ ಮೆಹ್ತಾರವರ ವೈಯಕ್ತಿಕವಾಗಿ ರೂ. 3,500 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಐಪಿಒದಲ್ಲಿ ಸ್ಥಾನ ಪಡೆದ ‘ಾರತದ ಮೊಟ್ಟಮೊದಲ ಇ-ಕಾಮರ್ಸ್ ಕಂಪನಿ ಎಂಬ ಹೆಮ್ಮೆಯೂ ಇನೀಬೀಮ್.ಕಾಮ್‌ಗೆ ಇದೆ.

7. ೀರಜ್ ರಾಜರಾಮ್/ಅಂಬಿಗ ಸುಬ್ರಹ್ಮಣಿಯನ್, ಮೂ ಸಿಗ್ಮಾ (ರೂ. 2,500 ಕೋಟಿ)
ೀರಜ್ ರಾಜರಾಮ್ 2015 ರಲ್ಲಿ ‘ಾರತದ ಅತ್ಯಂತ ಶ್ರೀಮಂತ ಟೆಕ್ ಉದ್ಯಮಿಯಾಗಿದ್ದು, ಕಂಪನಿಯ ಮೌಲ್ಯ ರೂ. ರೂ. 17,000 ಕೋಟಿ ಆಗಿತ್ತು. ಅವರ ಕಂಪೆನಿಯು ಅವರ ಪತ್ನಿಯ ವಿಚ್ಛೇದನ ಮತ್ತು ಸಹೋದ್ಯೋಗಿ ಅಂಬಿಗ ಸುಬ್ರಹ್ಮಣಿಯನ್ ಬಿಟ್ಟು ಹೋದ ನಂತರ ಅಲ್ಲಿಂದ ಹೆಣಗಾಡಬೇಕಾಯಿತು. ರಾಜರಾಮ್ ಈಗ ಸುಬ್ರಹ್ಮಣಿಯನ್ ಪಾಲನ್ನು ಖರೀದಿಸಿ, ಕಂಪನಿಯನ್ನು ಮೊದಲಿನ ಹಂತಕ್ಕೆ ಕರೆದೊಯ್ಯಲು ಯೋಜಿಸುತ್ತಿದ್ದಾರೆ. ಮಾಜಿ ಪತಿ-ಪತ್ನಿ ಜೋಡಿ ರೂ. 2,500 ಕೋಟಿ ನಿವ್ವಳ ಮೌಲ್ಯದೊಂದಿಗೆ 7 ನೇ ಶ್ರೀಮಂತ ‘ಾರತೀಯ ಸ್ಟಾರ್ಟ್‌ಅಪ್ ಸಂಸ್ಥಾಪಕರಾಗಿದ್ದಾರೆ. ಮು ಸಿಗ್ಮಾ ‘ಾರತದಲ್ಲಿನ ಹೆಸರಾಂತ ಡಾಟಾ ಅನಾಲಿಸ್ಟ್ ಕಂಪನಿಗಳಲ್ಲಿ ಒಂದು ಎನ್ನಿಸಿಕೊಂಡಿದೆ. ಅಮೆರಿಕದ ಚಿಕಾಗೋ ಹಾಗೂ ಬೆಂಗಳೂರಿನ ಪಟ್ಟಂದೂರು ಅಗ್ರಹಾರಗಳಲ್ಲಿ ತನ್ನ ಪ್ರ‘ಾನ ಕಚೇರಿಗಳನ್ನು ಹೊಂದಿದೆ.

8. ರಾಹುಲ್ ಶರ್ಮಾ/ಸುಮೀತ್ ಕುರ್ಮಾ/ವಿಕಾಸ್ ಜೈನ್/ ರಾಜೇಶ್ ಅಗರ್ವಾಲ್, ಮೈಕ್ರೋಮ್ಯಾಕ್ಸೃ್‌ (ರೂ. 1,400 ಕೋಟಿ)
ಇತ್ತೀಚಿನ ವರ್ಷದಲ್ಲಿ ‘ಾರತದ ಮಾರುಕಟ್ಟೆಯಲ್ಲಿ ಪ್ರವಾಹ ಎಬ್ಬಿಸಿರುವ ಓಪ್ಪೋ ಮತ್ತು ವಿವೋ ಗಳಂತಹ ಚೀನಿ ಸಂಸ್ಥೆಗಳ ಜೊತೆ ಮೈಕ್ರೋಮ್ಯಾಕ್ಸೃ್‌ ತನ್ನ ಸ್ಪರ್‘ೆಯನ್ನು ಹೆಚ್ಚಿಸಿದೆ. ಅದರ ನಾಲ್ಕು ಸಂಸ್ಥಾಪಕರು ರಾಹುಲ್ ಶರ್ಮಾ, ಸುಮೀತ್ ಕುರ್ಮಾ, ವಿಕಾಸ್ ಜೈನ್ ಮತ್ತು ರಾಜೇಶ್ ಅಗರ್ವಾಲ್ ಪ್ರತಿಯೊಬ್ಬರು 1,400 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಮೊಬೈಲ್ ಪೋನ್‌ಗಳು, ಸ್ಮಾರ್ಟ್ ೆನ್‌ಗಳು, ಲ್ಯಾಪ್‌ಟ್ಯಾಪ್, ಟ್ಯಾಬ್‌ಗಳು, ಎಲ್‌ಇಡಿ ಟಿವಿ, ಪವರ್ ಬ್ಯಾಂಕ್‌ಗಳು, ಏರ್ ಕಂಡಿಷನರ್‌ಗಳು ಈ ಮುಂತಾದವುಗಳ ಮೂಲಕ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ.

9. ವಿ. ಎಸ್. ಎಸ್ ಮಣಿ, ಜಸ್ಟ್ ಡಯಲ್ (ರೂ.1,100 ಕೋಟಿ)
ಜಸ್ಟ್ ಡಯಲ್ ತನ್ನ 21 ವರ್ಷದ ಪ್ರಯಾಣದ ಅವಯಲ್ಲಿ ಅನೇಕ ಏರುಪೇರುಗಳು ಹಾದುಹೋಗಿವೆ. ಆದರೆ ಈಗಲೂ ಮುಂದುವರಿಯುತ್ತ ಸಾಗಿದೆ. ಅದರ ಹೊಸ ರ್ಸ್ಪಗಳನ್ನು ಸ್ಪರ್‘ಾತ್ಮಕವಾಗಿ ತೆಗೆದುಕೊಳ್ಳುತ್ತಿದೆ. ಸಂಸ್ಥಾಪಕ ವಿ. ಎಸ್. ಎಸ್. ಮಣಿ ಅವರ ನಿವ್ವಳ ಮೌಲ್ಯವು ಈ ವರ್ಷ ರೂ. 1,100 ಕೋಟಿ ಆಗಿದೆ. ವೆಂಕಟಾಚಲಂ ಸ್ಥಾಣು ಸುಬ್ರಮಣಿ ಮಣಿ ಎಂಬ ಪೂರ್ಣ ಹೆಸರಿನ ವಿ. ಎಸ್. ಎಸ್. ಮಣಿ ಅವರು 1996ರಲ್ಲಿ ಆರಂಭಿಸಿದರು. ಜಸ್ಟ್ ಡಯಲ್ ಕೂಡ ‘ಾರತದ ಮೊದಲ ಸ್ಟಾರ್ಟ್ ಅಪ್‌ಗಳಲ್ಲಿ ಒಂದು ಎನ್ನಿಸಿಕೊಂಡಿದೆ.

10. ಬೈಜು ರವೀಂದ್ರನ್, ಬೈಜುಸ್ (ರೂ. 1,000 ಕೋಟಿ)
ಬೈಜುಸ್ ಈ ವರ್ಷ ತನ್ನ ಬೆಳವಣಿಗೆಯ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತಿದೆ. ಚಾನ್ ಜ್ಯೂಕರ್ ಬರ್ಗ್ ರಂತಹ ಹೂಡಿಕೆದಾರರಿಂದ ಬೃಹತ್ ಪ್ರಮಾಣದ ಹಣವನ್ನು ಸಂಗ್ರಹಿಸಿ ಅಂತಾರಾಷ್ಟ್ರೀಯವಾಗಿ ವಿಸ್ತರಿಸಲು ಯೋಜಿಸುತ್ತಿದೆ. ಕಂಪೆನಿಯು ಈ ವರ್ಷದ ಮಾರಾಟದಲ್ಲಿ ರೂ. 400 ಕೋಟಿ ಮೊತ್ತವನ್ನು ಗಳಿಸಿದೆ. ಸಂಸ್ಥಾಪಕ ಬೈಜು ರವೀಂದ್ರನ್ ರವರು 1,000 ಕೋಟಿ ರೂ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಬೈಜೂಸ್ ಎಂಬುದೊಂದು ಅಂತರ್ಜಾಲ ಶಿಕ್ಷಣ ತರಬೇತಿ ಸ್ಟಾರ್ಟ್ ಅಪ್ ಆಗಿದೆ. ಶಿಕ್ಷಣ ಸಂಬಂ ಆ್ಯಪ್‌ಗಳ ಮೂಲಕ ಎಲ್ಲರನ್ನೂಘಿ, ವಿಶೇಷವಾಗಿ ವಿದ್ಯಾರ್ಥಿ ಹಾಗೂ ಯುವ ಜನರ ಮನಸ್ಸು ಸೆಳೆಯಲು ಯತ್ನಿಸುತ್ತಿದೆ. ಬೈಜೂಸ್ ಮೂಲಕ ಅಂತರ್ಜಾಲ ಶಿಕ್ಷಣ ಪಡೆದವರು ಐಐಟಿ-ಜೆಇಇ, ನೀಟ್, ಕ್ಯಾಟ್ ಹಾಗೂ ಐಎಎಸ್‌ನಂತಹ ಹಲವಾರು ಸ್ಪರ್‘ಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಿಕೊಂಡಿದ್ದಾರೆ.

ಪ್ರತಿ ವರ್ಷ ನೂರಾರು ಸ್ಟಾರ್ಟ್ ಅಪ್ ಆರಂ‘ಗೊಂಡರೂ, ಸ್ಪರ್‘ಾತ್ಮಕ ಜಗತ್ತಿನಲ್ಲಿ ದೀರ್ಘ ಕಾಲ ಬಾಳುವ ಸ್ಟಾರ್ಟ್ ಅಪ್‌ಗಳು ಕೆಲವೇ ಕೆಲವು. ಇಂತಹ ಸ್ಟಾರ್ಟ್ ಅಪ್‌ಗಳ ಪೈಕಿ ‘ಾರೀ ಲಾ‘ ಮಾಡಿಕೊಳ್ಳುವಂತಹ ಸ್ಟಾರ್ಟ್ ಅಪ್‌ಗಳು ಇನ್ನೂ ಹಲವಾರು. ಸ್ಟಾರ್ಟ್ ಅಪ್‌ಗಳ ಮೂಲಕವೂ ಕೋಟ್ಯಂತರ ರೂಪಾಯಿಗಳ ಆದಾಯವನ್ನು ಗಳಿಸಿಕೊಳ್ಳಬಹುದು ಎನ್ನುವುದಕ್ಕೆ ‘ಾರತದ ಈ ಸಾ‘ಕರೇ ಸಾಕ್ಷಿಯಾಗಿದ್ದಾರೆ.

Tuesday, January 16, 2018

ಪಾಕಿಸ್ತಾನದ ಪುಂಡಾಟಕ್ಕೆ ಮದ್ದರೆಯುತ್ತಿದೆ ಭಾರತ

ಕಾಲು ಕೆರೆದುಕೊಂಡು ಜಗಳಕ್ಕೆ ಬದುವುದು ಪಾಕಿಸ್ತಾನದ ಜಾಯಮಾನ. ಸುಮ್ಮನೆ ಇದ್ದರೂ ಕಾರಣವಿಲ್ಲದೇ ಗಡಿಯಲ್ಲಿ ಗುಂಡಿನ ದಾಳಿ ನಡೆಸುವುದು, ಭಾರತದ ಯೋಧರನ್ನು ಹತ್ಯೆ ಮಾಡುವುದು ಪಾಕಿಸ್ತಾನಕ್ಕೆ ಆಟದಂತೆ ಆಗಿದೆ. ಇಂತಹ ಪಾಪಿ ಪಾಕಿಗೆ ಬುದ್ಧಿ ಕಲಿಸಲು ಭಾರತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಹಲವಾರು ರೀತಿಯಿಂದ ಪಾಕಿಸ್ತಾನದ ಸದ್ದು ಅಡಗಿಸುವ ಕಾರ್ಯವನ್ನು ಭಾರತ ಮಾಡುತ್ತಿದೆ. ಭಾರತದ ಕಠಿಣ ಕ್ರಮದಿಂದಾಗಿ ಪಾಕಿಸ್ತಾನ ಬಾಲ ಮುದುರಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

1947ರಲ್ಲಿ ಭಾರತದಿಂದ ಪಾಕಿಸ್ತಾನ ವಿ‘ಜನೆಯಾದಾಗಿನಿಂದಲೇ ಪಾಕ್ ಗಡಿಯಲ್ಲಿ ಪುಂಡಾಟವನ್ನು ಶುರು ಹಚ್ಚಿಕೊಂಡಿದೆ. ಕಳೆದೆರಡು ದಶಕದಲ್ಲಂತೂ ಪಾಕಿಸ್ತಾನದ ಪುಂಡಾಟ ತೀವ್ರ ಪ್ರಮಾಣದಲ್ಲಿ ಹೆಚ್ಚಿದೆ. ಭಾರತದ ಗಡಿಗುಂಟ, ಅದರಲ್ಲಿಯೂ ಪ್ರಮುಖವಾಗಿ ಜಮ್ಮು-ಕಾಶ್ಮೀರದ ಎಲ್‌ಒಸಿಯಲ್ಲಿ ಪಾಕಿಸ್ತಾನ ನಡೆಸುವ ಪುಂಡಾಟಕ್ಕೆ ಮಿತಿಯೇ ಇರಲಿಲ್ಲ ಎನ್ನುವಂತಾಗಿತ್ತುಘಿ. ಕಾರಣವಿಲ್ಲದೆಯೇ ‘ಾರತದ ಯೋಧರ ಮೇಲೆ ಗುಂಡಿನ ದಾಳಿಯನ್ನು ನಡೆಸುವುದು, ಉಗ್ರರನ್ನು ಗಡಿಯೊಳಕ್ಕೆ ನುಸುಳಲು ಅವಕಾಶ ಕಲ್ಪಿಸುವುದು, ಗಡಿ ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಾಗರಿಕರ ನಿವಾಸಗಳ ಮೇಲೆ ಶೆಲ್ ದಾಳಿ ನಡೆಸುವುದು, ಮುಗ್ಧ ನಾಗರಿಕರನ್ನು ಹತ್ಯೆ ಮಾಡುವುದು ಹೀಗೆ ಹಲವಾರು ಕೀಟಲೆಗಳನ್ನು ಕೊಡುವ ಕಾರ್ಯ ಪಾಕಿಸ್ತಾನದಿಂದ ಸದಾ ನಡೆಯುತ್ತಲೇ ಇತ್ತುಘಿ. ಪಾಕಿಸ್ತಾನದ ದಾಳಿಗೆ ‘ಾರತ ಶಾಂತಿಯ, ಮಾತುಕತೆಯ ಉತ್ತರವನ್ನು ನೀಡುತ್ತಲೇ ಇತ್ತುಘಿ. ಪಾಕಿಸ್ತಾನ ಗುಂಡಿನ ದಾಳಿಯನ್ನು ನಡೆಸಿ ‘ಾರತದ ನಾಗರಿಕರನ್ನು, ಯೋ‘ರನ್ನು ಹತ್ಯೆ ಮಾಡುವುದು, ಅದಕ್ಕೆ ಪ್ರತಿಯಾಗಿ ‘ಾರತದ ರಾಜತಾಂತ್ರಿಕರು, ಅಕಾರಿಗಳು ಶಾಂತಿ ಮಾತುಕತೆ-ಸ‘ೆಗಳನ್ನು ನಡೆಸುವುದು ನಡೆದೇ ಇತ್ತುಘಿ. ‘ಾರತ ಹಾಗೂ ಪಾಕಿಸ್ತಾನದ ನಡುವಿನ 2400 ಕಿಲೋಮೀಟರ್ ಉದ್ದದ ಗಡಿಯಲ್ಲಿ, ಪ್ರಮುಖವಾಗಿ ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನದ ಹಾರಾಟ ತೀರಾ ಹೆಚ್ಚಿತ್ತುಘಿ. ಆದರೆ ‘ಾರತದ ‘ಲಿಷ್ಠ ನಡೆ ಪಾಕಿಸ್ತಾನವನ್ನು ಕಂಗೆಡಿಸಿದೆ.
2014ರಿಂದೀಚೆಗೆ ‘ಾರತದಲ್ಲಿ ಅಕಾರದ ಚುಕ್ಕಾಣಿ ಹಿಡಿದ ಪ್ರ‘ಾನಿ ನರೇಂದ್ರ ಮೋದಿ ಅವರ ಎನ್‌ಡಿಎ ಸರ್ಕಾರದ ಆಡಳಿತದ ಅವಯಿಂದ ‘ಾರತ-ಪಾಕ್ ಗಡಿಯಲ್ಲಿನ ಪರಿಸ್ಥಿತಿ ಬದಲಾವಣೆಯಾಗಿದೆ. ಪಾಕಿಸ್ತಾನದ ಪುಂಡಾಟಕ್ಕೆ ನಿ‘ಾನವಾಗಿ ಕಡಿವಾಣ ಬೀಳುತ್ತಿದೆ. ಮೊದಲೆಲ್ಲ ತೀವ್ರಗೊಂಡಿದ್ದ ಕದನವಿರಾಮ ಉಲ್ಲಂಘನೆ ಪ್ರಕರಣಗಳು ಇದೀಗ ಬೆರಳೆಣಿಕೆಯಷ್ಟು ಸಂಖ್ಯೆಗೆ ಇಳಿಕೆಯಾಗಿದೆ. ‘ಾರತ ಕೈಗೊಂಡ ರಾಜತಾಂತ್ರಿಕ ಕ್ರಮಗಳು, ಸರ್ಕಾರದ ಮಟ್ಟದಲ್ಲಿನ ಕಾರ್ಯಗಳು ಹಾಗೂ ಸೈನಿಕ ಕಾರ್ಯಾಚರಣೆಯ ಕ್ರಮಗಳ ಮೂಲಕ ಪಾಕಿಸ್ತಾನದ ಪುಂಡಾಟಕ್ಕೆ ಹಗ್ಗ ಹಾಕಲಾಗುತ್ತಿದೆ. ಶಾಂತಿ ಮಂತ್ರದ ಜೊತೆ ಜೊತೆಯಲ್ಲಿಯೇ ಪಾಕಿಸ್ತಾನದ ನಿಜವಾದ ಬುದ್ಧಿಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕುವ ಮೂಲಕ ‘ಾರತ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನೇ ಕಲಿಸುತ್ತಿದೆ. ‘ಾರತದ ಕ್ರಮಗಳು ಪಾಕಿಸ್ತಾನದ ನಿದ್ದೆಯನ್ನು ಕೆಡಿಸುತ್ತಿವೆ. ಅಸಮ‘ಾನದ ಬೆಂಕಿಯಲ್ಲಿ ತನ್ನನ್ನೇ ತಾನು ಸುಟ್ಟುಕೊಳ್ಳುತ್ತಿರುವ ಪಾಕಿಸ್ತಾನ ಏನಾದರೂ ನೆಪವನ್ನು ಹೂಡಿ ‘ಾರತದ ಮಾನ ಹರಾಜು ಹಾಕಬೇಕೆಂಬ ವಿಲ ಯತ್ನದಲ್ಲಿ ತೊಡಗಿಕೊಂಡಿದೆ. ಪಾಕಿಸ್ತಾನದ ಸರ್ವಪ್ರಯತ್ನಗಳೂ ‘ಾರತದ ರಾಜತಾಂತ್ರಿಕರ ಬುದ್ಧಿವಂತಿಕೆಯ ಎದುರು ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.

ಸೈನಿಕ ಕಾರ್ಯಾಚರಣೆ, ಕ್ರಮಗಳು
ಉಗ್ರರನ್ನು ‘ಾರತದ ಗಡಿಯೊಳಕ್ಕೆ ನುಸುಳಲು ಪ್ರೇರೇಪಿಸುವುದು, ಜಮ್ಮು-ಕಾಶ್ಮೀರದಲ್ಲಿ ಅಶಾಂತಿಯನ್ನು ಹುಟ್ಟು ಹಾಕುವುದು, ‘ಾರತದ ಸೈನಿಕರ ಮೇಲೆ ಕಲ್ಲು ಹೊಡೆಯಲು ಕಾಶ್ಮೀರ ಕಣಿವೆಯ ಯುವಕರಿಗೆ ‘ನಸಹಾಯ ಮಾಡುವುದು, ‘ಾರತದ ಸೈನಿಕರು ಹಾಗೂ ನಾಗರಿಕರ ಮೇಲೆ ವಿನಾಕಾರಣ ಗುಂಡು ಹಾರಿಸುವುದು, ‘ಾರತದ ಸೈನಿಕ ಠಾಣೆಗಳ ಮೇಲೆ, ಗಡಿ ‘ದ್ರತಾ ಪಡೆಗಳ ಬಂಕರ್ ಮೇಲೆ, ನಾಗರಿಕರ ನಿವಾಸಗಳ ಮೇಲೆ ಪಾಕಿಸ್ತಾನ ‘ಾಳಿ ನಡೆಸುವುದು ಇಂದು ನಿನ್ನೆಯದಲ್ಲಘಿ. ಜಮ್ಮು-ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಅಥವಾ ಜಮ್ಮು-ಕಾಶ್ಮೀರವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವ ಪರಮೋದ್ಧೇಶದಿಂದ ‘ಾರತದ ವಿರುದ್ಧ ಸದಾ ಗುರ್ರೆನ್ನುವ ಪಾಕಿಸ್ತಾನ ದಿನನಿತ್ಯ ಲೈನ್ ಆ್ ಕಂಟ್ರೂಲ್ ವಲಯದಲ್ಲಿ ‘ಾರತದ ಪಾಳೆಯದ ಮೇಲೆ ಗುಂಡು ಹಾರಿಸುವ ಕೆಲಸ ಮಾಡುತ್ತದೆ. ಯಾವುದೇ ಕಾರಣವೇ ಇಲ್ಲದೆಯೇ ‘ಾರತದ ಸೈನಿಕರ ಮೇಲೆ ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡುವ ಕೆಲಸದಲ್ಲಿ ಪಾಕಿಸ್ತಾನ ನಿರತವಾಗಿದೆ.
ತೀರಾ ಇತ್ತೀಚಿನ ವರೆಗೂ, ಅಂದರೆ 2015-16ರ ವರೆಗೂ ‘ಾರತವು ಶಾಂತಿ ಮಂತ್ರವನ್ನು ಪಠಿಸುತ್ತಲೇ ಇತ್ತುಘಿ. ಪಾಕಿಸ್ತಾನ ಗುಂಡು ಹಾರಿಸುತ್ತಿದ್ದರೆ ‘ಾರತ ಮಾತುಕತೆಯ ಮೂಲಕ ಸಮಸ್ಯೆ ಪರಿಹಾರ ಮಾಡೋಣ ಎನ್ನುತ್ತಲೇ ಇತ್ತುಘಿ. ಆದರೆ ‘ಾರತದ ಮಾತುಕತೆಯ ಪ್ರಸ್ತಾಪವನ್ನೇಘಿ, ‘ಾರತದ ಅಸಾಮರ್ಥ್ಯ ಎಂದುಕೊಂಡ ಪಾಕಿಸ್ತಾನ ತನ್ನ ಪುಂಡಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತಲೇ ಸಾಗಿತು. ಪಾಕ್‌ನ ಈ ಕ್ರಮಕ್ಕೆ ‘ಾರತ ಇದೀಗ ದಿಟ್ಟ ಉತ್ತರವನ್ನೇ ನೀಡಲು ಆರಂಭಿಸಿದೆ.
ಶಾಂತಿಮಂತ್ರದ ಜಾಗದಲ್ಲಿ ಈಗ ಸೈನ್ಯಶಕ್ತಿಘಿ, ರಾಜತಾಂತ್ರಿಕ ಕ್ರಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕಣ್ಣಿಗೆ ಕಣ್ಣುಘಿ, ಹಲ್ಲಿಗೆ ಹಲ್ಲು ಎನ್ನುವ ತತ್ವವನ್ನು ಅಳವಡಿಸಿಕೊಂಡಿರುವ ‘ಾರತ ಪಾಕಿಸ್ತಾನದ ಮಗ್ಗುಲು ಮುರಿಯುತ್ತಿದೆ.
‘ಾರತದ ಓರ್ವ ಉಗ್ರನನ್ನು ಹತ್ಯೆ ಮಾಡಿದರೆ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಐವರು ಉಗ್ರರನ್ನು ಕೊಲ್ಲಲಾಗುತ್ತಿದೆ. ಜೊತೆ ಜೊತೆಯಲ್ಲಿಯೇ ಲೈನ್ ಆ್ ಕಂಟ್ರೂಲ್‌ಗುಂಟ ಸೈನಿಕ ಪಹರೆ ಹೆಚ್ಚುತ್ತಿದೆ. ಸೇನಾ ನೆಲೆಗಳು ಜಾಸ್ತಿ ಆಗುತ್ತಿವೆ. ಸರ್ಜಿಕಲ್ ಸ್ಟ್ರೈಕ್‌ಗಳ ಮೂಲಕ ಉಗ್ರರ ಮೂಲ ನೆಲೆಗೆ ತೆರಳಿ ಅವರನ್ನು ಹನನ ಮಾಡಿರುವುದು ‘ಾರತದ ಸೈನಿಕರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. 2016-17ರಲ್ಲಂತೂ ‘ಾರತದ ನಿಲುವು ಇನ್ನಷ್ಟು ಕಠಿಣವಾಗಿದೆ. ‘ಾರತದ ಓರ್ವ ಸೈನಿಕನನ್ನು ಪಾಕಿಸ್ತಾನ ಹತ್ಯೆ ಮಾಡಿದಾಗಲೂ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ನಾಲ್ವರೋ-ಐವರೋ ಸೈನಿಕರನ್ನು ಕೊಂದು ಹಾಕುತ್ತಿದೆ. ಅಲ್ಲದೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಿಸಲಾದ ಸೈನಿಕರ ಠಾಣೆಗಳು, ಉಗ್ರರ ತಾಣಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಿರ್ನಾಮ ಮಾಡಲಾಗುತ್ತಿದೆ. ಇದರಿಂದ ಪಾಕಿಸ್ತಾನ ಎಷ್ಟು ಕಂಗೆಟ್ಟಿದೆಯೆಂದರೆ ‘ಾರತವೇ ತನ್ನ ಮೇಲೆ ದಾಳಿ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಅಂಗಳದಲ್ಲಿ ನಕಲಿ ಪೋಟೋಗಳನ್ನು ಹಂಚುವ ಮೂಲಕ ಗೂಬೆ ಕೂರಿಸುವ ಯತ್ನ ಮಾಡುತ್ತಿದೆ. ಅದರಲ್ಲಿಯೂ ಸೋಲನ್ನು ಉಣ್ಣುವ ಮೂಲಕ ಜಾಗತಿಕವಾಗಿ ಪಾಕಿಸ್ತಾನ ಮಾನ ಹರಾಜು ಮಾಡಿಕೊಂಡಿದೆ.
‘ಾರತ ಹಾಗೂ ಪಾಕಿಸ್ತಾನಗಳು ಪ್ರತಿವರ್ಷ ಸಾವನ್ನಪ್ಪಿದ ಸೈನಿಕರ ಸಂಖ್ಯೆಯನ್ನು ವಿನಿಮಯ ಮಾಡಿಕೊಳ್ಳುತ್ತವೆ. ಈ ಮಾಹಿತಿಯ ಪ್ರಕಾರ 2016 ಹಾಗೂ 2017ರಲ್ಲಿ  ತಲಾ 76 ಹಾಗೂ 138ಪಾಕ್ ಸೈನಿಕರನ್ನು ಭಾರತವು ಹತ್ಯೆ ಮಾಡಿದೆ. ಇನ್ನು ‘ಾರತದ ಸೈನಿಕರ ಗುಂಡಿನ ದಾಳಿಗೆ ಬಲಿಯಾದ ಉಗ್ರರ ಸಂಖ್ಯೆ ಸೈನಿಕರ ಸಂಖ್ಯೆಗಿಂತ ದುಪ್ಪಟ್ಟಾಗಿದೆ. ಇಷ್ಟಾದರೂ ಕೂಡ, ಅಡಿಗೆ ಬಿದ್ದರೂ ಜಟ್ಟಿಯ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಪಾಕಿಸ್ತಾನದ ವರ್ತನೆ. ಭಾರತ ದಾಖಲೆಯ ಸಮೇತ ಪಾಕ್ ಸೈನಿಕರ ಹತ್ಯೆಯ ಚಿತ್ರಣವನ್ನು ಕಣ್ಣೆದುರಿಗೆ ಇಟ್ಟರೂ ಪಾಕ್ ಅದನ್ನು ಅಲ್ಲಗಳೆಯುವ ಮೂಲಕ ತನ್ನ ನರಿ ಬುದ್ದಿಯನ್ನು ಪ್ರದರ್ಶಿಸುತ್ತಿದೆ.

ರಾಜತಾಂತ್ರಿಕ ಕ್ರಮಗಳು :
ಪಾಕಿಸ್ತಾನದ ಬಾಲ ಕತ್ತರಿಸಲು ಕೇವಲ ಮಿಲಿಟರಿ ಕಾರ್ಯಾಚರಣೆ ಮಾತ್ರ ಸಹಕಾರಿಯಾಗಿಲ್ಲ. ಬದಲಾಗಿ ಭಾರತದ ರಾಜತಾಂತ್ರಿಕರು ಕೈಗೊಂಡಂತಹ ಕ್ರಮಗಳೂ ಸಹಕಾರಿಯಾಗಿದೆ. ವಾಗ್ದಾಳಿ, ಎಚ್ಚರಿಕೆ, ಒತ್ತಡ ತಂತ್ರ ಹೀಗೆ ಹಲವಾರು ರೀತಿಯಲ್ಲಿ ಪಾಕಿಸ್ತಾನವನ್ನು ಹಣಿಯುವ ಪ್ರಯತ್ನ ಭಾರತದ್ದು.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ‘ಾರತ ತೀಕ್ಷ್ಣ ಮಾತುಗಳ ಮೂಲಕ ಜಗತ್ತಿನ ಎದುರು ಬಣ್ಣ ಬಯಲು ಮಾಡಿದೆ. ಪಾಕಿಸ್ತಾನದ ದಿನನಿತ್ಯ ಗಡಿಯಲ್ಲಿ ಮಾಡುವಂತಹ ಕ್ರಮಗಳನ್ನು ದಾಖಲೆಗಳ ಸಮೇತ ಜಾಗತಿಕ ವೇದಿಕೆಯಲ್ಲಿ ಅನಾವರಣ ಮಾಡಿದೆ. ಜಗತ್ತಿನ ರಾಷ್ಟ್ರಗಳು ಪಾಕಿಸ್ತಾನವನ್ನು ಹಳಿಯಲು ಆರಂಭಿಸಿವೆ. ಅಷ್ಟೇ ಏಕೆ ಪಾಕಿಸ್ತಾನದ ಉಗ್ರ ರಕ್ಷಣೆಯ ವಿರುದ್ಧ ಜಗತ್ತಿನ ರಾಷ್ಟ್ರಗಳು ಕಿಡಿಕಾರಿವೆ. ವಿಶ್ವಸಂಸ್ಥೆಯಲ್ಲಿ ‘ಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಆಡಿದ ಮಾತುಗಳಂತೂ ಪಾಕಿಸ್ತಾನ ಜನ್ಮದಲ್ಲಿ ಮರೆಯುವುದಿಲ್ಲಘಿ. ಅಷ್ಟು ತೀಕ್ಷ್ಣವಾಗಿದ್ದವು.

ಉಗ್ರ ನಿಗ್ರಹದ ವಿರುದ್ಧ ಕಟ್ಟು ನಿಟ್ಟಿನ ಕ್ರಮ
ಪಾಕಿಸ್ತಾನವು ಉಗ್ರರನ್ನು ಪೋಷಿಸುತ್ತಿರುವುದು ಜಗತ್ತಿಗೆ ಗೊತ್ತಿದೆ. ತನ್ನ ನೆಲದಲ್ಲಿ ಉಗ್ರರಿಗೆ ತರಬೇತಿ ನೀಡಿ ಅವರನ್ನು ಕಾಶ್ಮೀರಕ್ಕೋ ಅಥವಾ ಇನ್ಯಾವುದೇ ಪ್ರದೇಶಕ್ಕೋ ರವಾನೆ ಮಾಡುವುದರಲ್ಲಿ ಪಾಕಿಸ್ತಾನದ ಸೇನೆ ಹಾಗೂ ಪಾಕ್ ಗುಪ್ತಚರ ಇಲಾಖೆ ಐಎಸ್‌ಐನದ್ದು ಎತ್ತಿದ ಕೈಘಿ. ಉಗ್ರರನ್ನು ರ್ತು ಮಾಡುವ ಮೂಲಕ ‘ಾರತದಲ್ಲಿ ಹಾಗೂ ಸುತ್ತಲಿನ ರಾಷ್ಟ್ರಗಳಲ್ಲಿ ಅಶಾಂತಿ ಸೃಷ್ಟಿಸುವ ಕಾರ್ಯದಲ್ಲಿ ನಿರತವಾಗಿರುವ ಪಾಕಿಸ್ತಾನಕ್ಕೆ ‘ಾರತ ಅಂತರಾಷ್ಟ್ರೀಯ ಮಟ್ಟದಿಂದ ಒತ್ತಡವನ್ನು ಹೇರಿದೆ. ಪಾಕಿಸ್ತಾನದ ಬೆನ್ನಿಗೆ ಆರ್ಥಿಕ ಸಜಾಯದ ಮೂಲಕ ಕೆಲವು ದಶಕಗಳಿಂದ ನಿಂತಿದ್ದ ಅಮೆರಿಕಕ್ಕೆ ಪಾಕ್‌ನ ನಿಜಬುದ್ಧಿಯನ್ನು ಪರಿಚಯಿಸಿ, ಅನುದಾನ ತಡೆಹಿಡಿಯುವಲ್ಲಿ ‘ಾರತ ಕೈಗೊಂಡ ಪಾತ್ರ ನಿಜಕ್ಕೂ ಶ್ಲಾಘನೀಯ. ಅಮೆರಿಕ ನೀಡುವ ಅನುದಾನಗಳನ್ನು ಪಾಕಿಸ್ತಾನ ಹೇಗೆ ಉಗ್ರರ ಪೋಷಣೆಗೆ ಬಳಕೆ ಮಾಡುತ್ತಿದೆ ಎನ್ನುವುದನ್ನು ದಾಖಲೆಗಳ ಪ್ರಕಾರ ಅಮೆರಿಕಕ್ಕೆ ಅರಿವು ಮಾಡಿಕೊಟ್ಟಿದೆ. ಇದರಿಂದಾಗಿ ಅಮೆರಿಕ ಅ‘್ಯಕ್ಷ ಡೋನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ನೀಡಬೇಕಿದ್ದ ಅನುದಾನಕ್ಕೆ ತಡೆಯನ್ನು ಒಡ್ಡಿದ್ದಾರೆ. ಅಷ್ಟೇ ಅಲ್ಲದೇ ಉಗ್ರರನ್ನು ಮಟ್ಟ ಹಾಕಿ. ನಂತರ ಅನುದಾನ ನೀಡುವ ನಿಟ್ಟಿನಲ್ಲಿ ಆಲೋಚಿಸೋಣ ಎಂದು ಗುಡುಗಿದ್ದಾರೆ. ಇದರಿಂದಾಗಿ ಬೆದರಿದ ಪಾಕಿಸ್ತಾನ ಅನಿವಾರ್ಯವಾಗಿ ತನ್ನ ನೆಲದಲ್ಲಿದ್ದ ಉಗ್ರರ ತಾಣಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ಇಳಿದಿದೆ.
ಭಾರತದ ಒತ್ತಡ ತಂತ್ರ ಇಷ್ಟಕ್ಕೇ ನಿಂತಿಲ್ಲಘಿ. ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಜಮಾತ್-ಉದ್-ದವಾದ ಮುಖ್ಯಸ್ಥ ಉಗ್ರ ಹಫೀಜ್ ಸಯೀದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ನಿಟ್ಟಿನಲ್ಲಿಯೂ ಭಾರತ ಕೈಗೊಂಡ ರಾಜತಾಂತ್ರಿಕ ಕ್ರಮಗಳು ಅಮೋಘವಾದುದು. ಹಫೀಜ್ ಸಯೀದ್ ಹಾಗೂ ಪಾಕಿಸ್ತಾನದ ಪರವಾಗಿ ಭಾರತದ ಇನ್ನೊಂದು ವೈರಿ ರಾಷ್ಟ್ರ ಚೀನಾ ನಿಂತಿದ್ದರೂ ಕೂಡ, ಭಾರತದ ರಾಜತಾಂತ್ರಿಕ ನಿಪುಣರು ವಿಶ್ವಸಂಸ್ಥೆ, ಆಸೀಯಾನ್ ಸೇರಿದಂತೆ ವಿವಿಧ ಒಕ್ಕೂಟಗಳ ವಲಯದಲ್ಲಿ ಕೈಗೊಂಡ ಕ್ರಮಗಳು ವಿಶಿಷ್ಟವಾದುದು.


ಗಡಿಯಲ್ಲಿ ಹೆಚ್ಚಿದ ‘ಾರತದ ಕಟ್ಟುನಿಟ್ಟು :
‘ಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಉದ್ಧಟತನವನ್ನು ತಡೆಯುವ ಸಲುವಾಗಿ ‘ಾರತವು 1400 ಸೇನಾ ಠಾಣೆಗಳನ್ನು ತೆರೆಯಲು ಮುಂದಾಗಿದೆ. ಅಲ್ಲದೇ ಗಡಿಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಗಳೂ ನಡೆಯುತ್ತಿವೆ. ತ್ವರಿತಗತಿಯಲ್ಲಿ ಸೈನಿಕರನ್ನು ರವಾನೆ ಮಾಡುವುದು, ಶಸಾಸಗಳನ್ನು ಕಳಿಸುವುದು, ಆಹಾರ ಸೇರಿದಂತೆ ಅಗತ್ಯದ ವಸ್ತುಗಳನ್ನು ರವಾನಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಇದು ಪಾಕಿಸ್ತಾನದ ಸೈನಿಕರಲ್ಲಿ ನಡುಕ ಹುಟ್ಟಿಸಿರುವುದು ಸುಳ್ಳಲ್ಲಘಿ.
ಇದರ ಜೊತೆಗೆ ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯ ಅವ್ಯಾಹತವಾಗಿ ನಡೆದಿದೆ. ಕುಖ್ಯಾತ ಉಗ್ರ ಸಂಘಟನೆಗಳಿಗೆ ಸೇರಿದ ಸದಸ್ಯರುಗಳನ್ನು ‘ಾರತೀಯ ಸೇನೆಯು ಹುಡುಕಿ ಹುಡುಕಿ ಕೊಲ್ಲುತ್ತಿದೆ. ಅಲ್ಲದೇ ಕಾಶ್ಮೀರ ಕಣಿವೆಯಲ್ಲಿ ಹೆಚ್ಚಿದ್ದ ಕಲ್ಲು ತೂರಾಟ ಪ್ರಕರಣಗಳನ್ನೂ ಕೂಡ ತಹಬಂದಿಗೆ ತಂದಿದೆ. ಇದರಿಂದಾಗಿ ಕಾಶ್ಮೀರ ಕಣಿವೆ ನಿ‘ಾನವಾಗಿ ಶಾಂತಿಯತ್ತ ಮುಖ ಮಾಡಿದೆ.

ಪ್ರಸ್ತುತ ಸ್ಥಿತಿಗತಿ
‘ಾರತ ಹಾಗೂ ಪಾಕಿಸ್ತಾನದ ನಡುವೆ ಲೈನ್ ಆ್ ಕಂಟ್ರೂಲ್ ನಲ್ಲಿ ಪ್ರಸ್ತುತ ತ್ವೇಷಮಯ ವಾತಾವರಣವಿದೆ. ಪಾಕಿಸ್ತಾನ ಪದೇ ಪದೆ ‘ಾರತದ ಮೇಲೆ ಗುಂಡಿನ ದಾಳಿಯನ್ನು ಅಪ್ರಚೋದಿತವಾಗಿ ನಡೆಸುತ್ತ ಬಂದಿದೆ. ‘ಾರತ ಇದಕ್ಕೆ ತಕ್ಕ ಉತ್ತರವನ್ನೂ ನೀಡುತ್ತಿದೆ. ಪಾಕಿಸ್ತಾನಕ್ಕೆ ತಾನು ದಾಳಿ ಮಾಡಿದರೆ ಅದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾದೀತು ಎನ್ನುವುದು ಸ್ಪಷ್ಟವಾಗಿ ಅರ್ಥವಾಗಿದೆ. ಮೊದಲಿನ ಹುಚ್ಚಾಟಗಳನ್ನು ಪಾಕ್ ಕಡಿಮೆ ಮಾಡಲು ಪ್ರಾರಂಭಿಸಿದೆ.

2016ರಿಂದೀಚೆಗೆ ಭಾರತ ನಡೆಸಿರುವ ಪ್ರಮುಖ ದಾಳಿಗಳು
2016ರ ಸೆಪ್ಟೆಂಬರ್ 28-29ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪಾಕಿಸ್ತಾನದ ಸೇನಾ ನೆಲೆಗಳು ಹಾಗೂ ಉಗ್ರರ ತರಬೇತಿ ಶಿಬಿರ, ನೆಲಗಳ ಮೇಲೆ ‘ಾರತದ ಸೇನೆ ನಿರ್ದಿಷ್ಠ ದಾಳಿ ನಡೆಸಿತು. ಇದರಿಂದಾಗಿ ಕನಿಷ್ಠ 35-40 ಪಾಕ್ ಸೈನಿಕರು-ಉಗ್ರರು ಸಾವನ್ನಪ್ಪಿದರು.
2017ರ ಸೆಪ್ಟೆಂಬರ್ 22ರಂದು ‘ಾರತದ ಸೇನೆಯು ಚರ್ವಾಹ್ ಹಾಗೂ ಹರ್ಪಾಲ್ ವಲಯಗಳ ಮೇಲೆ ದಾಳಿ ನಡೆಸಿದ ಪರಿಣಾಮ ಪಾಕಿಸ್ತಾನದ ಸೇನೆಯ 20ಕ್ಕೂ ಅಕ ಯೋ‘ರು ಸಾವನ್ನಪ್ಪಿದರು.
2018ರ ಜನವರಿ 3ರಂದು ‘ಾರತದ ಯೋ‘ನನ್ನು ಕೊಂದಿದ್ದ ಪಾಕಿಸ್ತಾನದ ಮೇಲೆ ಜ.4ರಂದು ‘ಾರತ ಪ್ರತಿದಾಳಿ ನಡೆಸಿತು. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯ 10ಕ್ಕೂ ಹೆಚ್ಚಿನ ಸೈನಿಕರು ಮೃತಪಟ್ಟರು. ತನ್ಮೂಲಕ ‘ಾರತ ತನ್ನ ಒಂದು ಸೈನಿಕನನ್ನು ಕೊಂದರೆ ಪ್ರತಿಯಾಗಿ 10 ಸೈನಿಕರನ್ನು ಹತ್ಯೆ ಮಾಡುತ್ತೇನೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿತು.