Tuesday, September 29, 2009

ಎಲ್ಲ ಮರೆತಿರುವಾಗ (ಕಥೆ -ಭಾಗ 2)


( ಮೊದಲ ಭಾಗದಿಂದ)
...... ಯಾಕೋ ಆಕೆಗೆ ತುಂಬ ಕುತೂಹಲವಾಯಿತು..
ಆತ ಇನ್ನೂ ಹಾಡುತ್ತಲೇ ಇದ್ದ.. ಧ್ವನಿ ಮಧುರವಾಗಿತ್ತು..
ಏನೋ ಗುಂಗು.. ಈಕೆ ಬಸಿನಲ್ಲಿ ಕುಳಿತೆ ಆತ ಹಾಡುವುದನ್ನು ನೋಡುತ್ತಿದ್ದಳು..
ಆತ ಹಾಡುತ್ತಿದ್ದ, ಅಸ್ಟೇ ಅಲ್ಲ ಬೇಡುತ್ತಿದ್ದ..
ಹಲವು ಯುವಕರು ಅವನನ್ನು ಗೋಳು ಹೊಯ್ದುಕೊಳ್ಳುತ್ತಿದ್ದರು ..
ಈಕೆಗೆ ಪಾಪ ಅನ್ನಿಸಿತು. ಒಂದೆ ವಯಸ್ಸು ಮನಸ್ಸು ಮಾತ್ರ ಸರಿ ಇಲ್ಲ.
ಸರಿ ಇದ್ದಿದ್ದರೆ ಈತನೂ ಹಗೆ ಇತರರನ್ನು ಚುದಯಿಸುತ್ತಿದ್ದನೇನೋ..
ಬಲವಿಲ್ಲದವನು ಬದುಕಲಾರ ಎಂಬ ಚಿಂತಕನ ವಾಕ್ಯದಂತೆ.. ಈಗ ಈತ
ಪೆಟ್ಟು ಅನುಭವಿಸುವ ಸಂಗತಿ ಬಂದಿತ್ತು.
ಆಗಲೇ ರಚನಾ ಗೆ ಒಂದು ಸಂಗತಿ ತಲೆಯಲ್ಲಿ ಹೊಕ್ಕಿದ್ದು.
ಇವನನ್ನು ಯಾಕೆ ತಾನು ಸರಿ ಮಾಡಬಾರದು ಅಂತ..
ತನಗೆ ಉಂಟಾದ ಭಾವನೆಯನ್ನು ಕಂಡು ತಾನೆ ಒಮ್ಮೆ ನಕ್ಕಳು..
ತಕ್ಷಣವೇ ಇದು ಆಗು ಹೋಗದ ಕೆಲಸ ಅಂದು ಕೊಮ್ದ್ದು ಮನೆಯೆಡೆಗೆ ಹೊರಟಳು..
ಆದರು, ಮನದೊಳಗೆ ಆ ಭಾವ ಕೊರೆಯುತ್ತಲೇ ಇತ್ತು..
ಈಕೆಯಿದ್ದ ಬಸ್ಸು ಹೊರಟರು ಆತ ಹಾಡುತ್ತಲೇ ಇದ್ದ...

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹುಉಡಿ ಬರದಿರು ಮತ್ತೆ ಹಳೆಯ ನೆನಪೇ...

(ಮುಂದುವರಿಯುವುದು.....)

ಜಾನು ವಿನ ಮತ್ತೊಂದು ಕವಿತೆ

ಗೆಳತಿ, ಜಾನುವಿನ ಇನ್ನೊಂದು ಕವಿತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.. ಓದಿ ಅಭಿಪ್ರಾಯ ತಿಳಿಸಿ . .,

ಮಿನುಗುತಾರೆ

ನೀನಾಗಿರುವೆ ನನ್ನ ಹೃದಯದಾಗಸದಲ್ಲಿ
ಸದಾ ಮಿನುಗುತಿರುವ
ನಕ್ಷತ್ರ .....,
ನಾ ಉಳಿಯುವೇನೆ ನಿನ್ನ ನೆನಪಿನಂಗಳದಲ್ಲಿ
ಸದಾ ನೆನಪಾಗಿ
ನಿನ್ಹತ್ರ .. .. .?

ಜಾನು ಹೆಗಡೆ ಮಗೆಗಾರ್

Saturday, September 26, 2009

ಎಲ್ಲ ಮರೆತಿರುವಾಗ (ಕಥೆ-ಭಾಗ 1)

ಎಲ್ಲ ಮರೆತಿರುವಾಗ
ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ..
ಎಂಬ ಹಾಡು ಸನಿಹದಲ್ಲಿ ಎಲ್ಲೋ ರಚನಾ ಗೆ ಕೇಳಿದಂತೆ ಆಗಿ ಎಚ್ಚೆತ್ತಳು.
ತನ್ನ ಕಂಪನಿಯ ಪ್ರಾಜೆಕ್ಟ್ ಕೆಲಸಕ್ಕಾಗಿ ಶಿರಸಿಗೆ ಹೊರಟವಳಿಗೆ ಅದ್ಯಾವಗಲೋ ನಿದ್ದೆ ಆವರಿಸಿ ಬಿಟ್ಟಿತ್ತು.
ಹಾಡಿನಿಂದ ಎಚ್ಹ್ಚ್ರದಾಗಲೇ ಆಕೆಗೆ ತಿಳಿದದ್ದು ತಾನು ಶಿರಸಿಯಲ್ಲಿ ಇದ್ದೇನೆ ಎಂಬುದು.
ಹಾಡು ಕೇಳಿದ ಕಡೆಗೆ ತಿರುಗಿದರೆ ಅಲ್ಲೊಬ್ಬ ಹುಚ್ಚ. ನೋಡಿದರೆ ಭಯಂಕರ ರೂಪ. ಆದರೆ ಧ್ವನಿ ಮಾತ್ರ ಇಂಪು..
ಚಿಂದಿ ಅಂಗಿ.. ಹರಿದ ಪ್ಯಾಂಟು .. ಸ್ನಾನ ಕಾಣದ ದೇಹ.. ಗಬ್ಬು ವಾಸನೆ.. ಇನ್ನು ಆತ ಊಟ ಮಾಡಿ ಅದೆಸ್ತು
ದಿನಗಳದವೋ.. ಬೆನ್ನಿನ ಒಳಗೆ ಹುತು ಹೋದಂತಿದ್ದ ಹೊಟ್ಟೆ. ಮೇಲ್ನೋಟಕ್ಕೆ ರಚನಾ ಳಿಗೆ ಕಂಡದ್ದು ಇದಿಷ್ಟು.
ಆತನ ರೂಪದಲ್ಲಿ ಅಂಥ ವಿಶೇಷ ಏನು ಇರ್ಲಿಲ್ಲ. ಆದರೆ ಆತನ ಧ್ವನಿ ಇತ್ತಲ್ಲ ಅದರಲ್ಲಿ ಏನೋ ಆಕರ್ಷಣೆ ..
ಹಾಡಿದ ಹಾಡಿನಲ್ಲಿ ಏನೋ ಒಂದು ಭಾವ. ಅದನ್ನು ಹಾಡಿದ ರೀತಿಯಮ್ತು ಪಕ್ಕ ಕ್ಲಾಸಿಕಲ್ .. ಒಮ್ಮೆ ಕೇಳಿದರೆ
ಮತ್ತೊಮ್ಮೆ ಕೇಳಬೇಕು ಅನ್ನಿಸುವಂಥದ್ದು..
ಅವ ಬಹುಶಃ ಹೊಟ್ಟೆಪಾಡಿಗಾಗಿ ಹಾಡುತ್ತಿರಬೇಕು.. ಎನ್ನಿಸಿತು ಅವಳಿಗೆ.. ಪಾಪದ ವ್ಯಕ್ತಿ ಎಂಬ ಭಾವ.. ವ್ಯಸ್ಸಿನ್ನು ೨೫ ಅಷ್ಟೆ.
ಅರೆ ಇಷ್ಟು ಚೆನ್ನಾಗಿ ಹಾಡುವ ಈತನಿಗೆ ಹುಚ್ಚೆ? ವಯಸ್ಸಿನ್ನೂ ಚಿಕ್ಕದು .. ಯಾಕೆ ಈತನಿಗೆ ಹುಚ್ಚು? ಅವಳಿಗೆ ಕುತೂಹಲವಾಯಿತು....

(ಮುಂದುವರಿಯುವುದು..)

Friday, September 25, 2009

ಕನಸು

ಮೂಲತಃ ಸಂಭಂಧಿಯಾದರು ಸ್ವಭಾವದಲ್ಲಿ ಮಿತ್ರನಾದ ಪ್ರಶಾಂತ್ ಪಿ ಪಿ ಹರಾಹುರಿ ಅಪರೂಪಕ್ಕೆ ಒಂದು ಹನಿ ಕವನ ಬರೆದಿದ್ದೀನಿ ಅಂದಾಗ ನನಗೆ ಅಚ್ಚರಿ.. ಕೊನೆಗೆ ಮೆಸೇಜ್ ಮಡಿದ ನಂತರವೇ ನಾನು ನಂಬಿದ್ದು.. ಆ ಕವನ ಇದೋ ನಿಮ್ಮ ಮುಂದೆ.. ಓದಿ..
ಕನಸು
ಜಂಗಮವಾಣಿಯ ಉಲಿಯನ್ನು ಕೇಳಿ
ನಮ್ಮದೇ ಎಂದು ಸರಸರನೆ ತೆಗೆದು ,
ನಲ್ಲೆ ಕರೆದಲೆಂದು ತಿಳಿದು,
ಮೆಲ್ಲನೆತ್ತಿ ಹಲೋ ಎಂದಿರಲು,
ಪಕ್ಕದವನು ಚಿನ್ನ ಎನ್ನ ಬೇಕೆ?
-- ಪ್ರಶಾಂತ್ ಪಿ ಪಿ .. ಹರಾಹುರಿ..

Wednesday, September 23, 2009

ಒಂದು ಕವನ

ಗೆಳತಿ ಒಬ್ಬಳು ಕಳಿಸಿದ ಕವನವ ನೀವೂ ಓದಲೆಂದು ನಿಮ್ಮ ಮುಂದೆ ಇಡುತ್ತಿದ್ದೇನೆ .. ಓದಿ.. ಅನಿಸಿಕೆ ತಿಳಿಸಿ.

ಭಾವನಾ..
ಗೆಳೆಯ,..
ಏಕೆಂದು ತಿಳಿಯೆ ನಾನು..!!
ದಿನವೂ ಭಾವನೆಗಳ ಮೂಡಿಸುತ್ತಿದ್ದ
ಕವನಗಳೇ ಕಾಣುತ್ತಿಲ್ಲ..
ಕಣ್ಣಂಚಲಿ . . . . . . . . . . .

ನಿತ್ಯ, ನನ್ನ
ನಡು ರಾತ್ರಿಯಲ್ಲಿ ಕೂಡ ಕಾಡುತ್ತಿದ್ದ
ನಿನ್ನ ನೆನಪೇ ಇಲ್ಲ...
ಕನಸಲಿ . . . . . . . . . . . .

ಪ್ರತಿಕ್ಷಣ
ನನ್ನೊಳಗೆ ನಾನಾಗಿದ್ದ ನಿನ್ನ ನೆನಪೇ
ಬರುತ್ತಿಲ್ಲ.. ನನ್ನ ಈ
ಮನದಲಿ. . . . . . . . . . . . . . .

ಅನುದಿನ,
ನನ್ನ ಜೀವವೆನ್ದುಕೊಂಡಿದ್ದ
ನಿನ್ನ ಹೆಸರೆ ಸಿಗುತ್ತಿಲ್ಲ
ನನ್ನುಸಿರಿನಲಿ . . . . . . . . . .

ಅದಕ್ಕೆ,,
ನೀ ನನ್ನಿಂದ ದೂರವಾಗುವ
ಭಯ ಆವರಿಸಿದೆ, ಪ್ರತಿಕ್ಷನ
ನನ್ನಲಿ.. . . . . . . . . . . . . .

ಇದನ್ನು ಬರೆದಿದ್ದು... : ಜಾನು ಮಗೆಗಾರ್

ಕವಯಿತ್ರಿಯ ಚಿಕ್ಕ ಪರಿಚಯ : ಈಕೆ ಓರ್ವ ಯುವ ಬರಹಗಾರ್ತಿ.. ಉತ್ತರ ಕನ್ನಡದ ಹಳ್ಳಿಯೊಂದರ ಹುಡುಗಿ.. ಬರೆದು ಮುಚಿಡುವ ಚಟ. ಆಗಾಗ ಬರೆದರೂ ಭಾವನೆಗಳ ಸ್ಪಂದನ ತುಂಬ...ಹೆಚ್ಚು... ತುಂಬ ಒತ್ತಾಯದ ನಂತರ ನಾ ಪಡೆದ ಕವನ ಇದು.. ನೀವೂ ಓದಲೆಂದು ಇಲ್ಲಿ ಇಟ್ಟಿದ್ದೇನೆ.. ಅನಿಸಿದ್ದು ಬರೆಯಿರಿ..
ನಿಮ್ಮವ : ವಿನಯ..