Wednesday, August 8, 2018

ನಮ್ಮೂರಲ್ಲೊಂದು ಟಾಯ್ಲೆಟ್ ಕಥೆ (ನಮ್ಮೂರ ಚಿತ್ರಗಳು -1)


ಇಬ್ಬರು ತುಂಬು ಗರ್ಭಿಣಿಯರು. ಅವರ ಜತೆಯಲ್ಲಿ ಸೇನಾಪತಿಗಳು, ಕಾಲಾಳುಗಳಂತೆ ನಾಲ್ಕೈದು ಹೆಂಗಳೆಯರು, ಹರೆಯಕ್ಕೆ ಬಂದ ಹುಡುಗಿಯರು.
ಮನೆಯ ಹಿಂಭಾಗದಿಂದಲೇ ಆರಂಭವಾಗುವ ದಟ್ಟ ಕಾಡು. ಸೂರ್ಯ ಕಷ್ಟಪಟ್ಟು ಪ್ರಯತ್ನಿಸಿದರೂ ತನ್ನ ಕಿರಣಗಳನ್ನು ಭೂಮಿಗೆ ಸೋಕಲು ಕಷ್ಟಪಡುವತಹ ಕಾಡು. ಬರಿ ಕಾಡಾದರೆ ಹೇಗೋ ಸರಿ, ದೊಡ್ಡ ಧರೆ.. ಮಧ್ಯದಲ್ಲೊಂದು ಕಚ್ಚಾ ಮಣ್ಣು ರಸ್ತೆ.
ಈ ಗರ್ಭಿಣಿಯರು ಹಾಗೂ ಹೆಂಗಳೆಯರ ಪಡೆ ಮಬ್ಬು ಬೆಳಕಿನಲ್ಲಿ ಲಾಟೀನು ಹಿಡಿದು ಈ ಮನೆಯ ಹಿಂಭಾಗದ ರಸ್ತೆಯನ್ನು ದಾಟಿ ರಸ್ತೆಯಿಂದ ಬೆಟ್ಟ ಏರಲು ಏನಿಲ್ಲವೆಂದರೂ ೧೦-೧೫ ನಿಮಿಷ ಬೇಕೇಬೇಕು. ರಸ್ತೆಯನ್ನು ಸುಲಭವಾಗಿ ದಾಟಬಹುದಿತ್ತಾದರೂ ಹಿಂದಿನ ಬೆಟ್ಟವನ್ನು ಏರುವುದು ಸುಲಭವಿರಲಿಲ್ಲ ಬಿಡಿ. ಅನಾಮತ್ತು ೩೦-೩೫ ಅಡಿಯ ದಿಬ್ಬ ಏರಲೇಬೇಕು. ಹರೆಯದ ಹೆಂಗಳೆಯರು ಸುಲಭವಾಗಿ ಏರಬಲ್ಲರು ಆದರೆ ಗರ್ಭಿಣಿಯರು, ಅದಾಗಲೆ ದಿನ ತುಂಬಿ ಮಗುವನ್ನು ಹೆರಲು ದಿನ ನೋಡುತ್ತಿದ್ದವರು ಹೇಗೆ ತಾನೇ ಆ ದಿಬ್ಬವನ್ನು ಏರಿಯಾರು?
ಕೈಯಲ್ಲೊಂದು ನೀರಿನ ಚೊಂಬು ಹಿಡಿದು, ಇನ್ನೊಂದು ಕೈಯನ್ನು ಆಗಾಗ ಸೊಂಟಕ್ಕೆ ಒತ್ತಿಕೊಂಡೋ ಅಥವಾ ಪಕ್ಕದ ದಿಬ್ಬವನ್ನು ಆಸರೆಯಾಗಿ ಹಿಡಿದುಕೊಂಡೋ ಏದುಸಿರು ಬಿಡುತ್ತ ಹತ್ತುವಷ್ಟರಲ್ಲಿ ಜೀವ ಹೈರಾಣಾಗುತ್ತಿತ್ತು. ಅಬ್ಬಾ ಬೆಟ್ಟವನ್ನು ಹತ್ತಿದೆವಲ್ಲ ಎಂದು ಸಮಾಧಾನಪಡುವಂತಿಲ್ಲ. ಅಕ್ಕ ಪಕ್ಕದಲ್ಲಿದ್ದ ಗುರಿಗೆ ಮಟ್ಟಿಯನ್ನೋ, ಅಥವಾ ಇನ್ಯಾವುದೋ ಮಟ್ಟಿಯನ್ನೋ ಹುಡುಕಬೇಕಿತ್ತು. ಇಷ್ಟೆಲ್ಲ ಸಾಹಸ ಪಡಬೇಕಿದ್ದುದು ಬೇರೇನಕ್ಕೂ ಅಲ್ಲ.. ಅನಿವಾರ್ಯ ಶೌಚಕ್ಕಾಗಿ.
ಯಾವುದೋ ಮಟ್ಟಿ ಸಿಕ್ಕು ಅಲ್ಲಿ ಸೀರೆಯನ್ನೆತ್ತಿ ಆರಾಮವಾಗಿ ಕುಳಿತುಕೊಳ್ಳುವ ಹಾಗೆ ಇರಲಿಲ್ಲ ಬಿಡಿ. ಆ ಮಟ್ಟಿಯಲ್ಲಿ ಹಸಿರು ಹಾವೋ, ಕೇರೆ ಹಾವೋ ಅಥವಾ ಹಪ್ರೆ, ಕೊಳಕುಮಂಡಲ, ಕುದುರಬೆಳ್ಳನಂತಹ ಕೆಟ್ಟ ವಿಷಕಾರಿ ಹಾವೋ ತಕ್ಷಣ ಇಣುಕಿ ಹೌಹಾರುವಂತೆ ಮಾಡುತ್ತಿದ್ದವು. ಆಗ ಮಾಡುತ್ತಿದ್ದ ಅನಿವಾರ್ಯ ಕೆಲಸವನ್ನು ಅರ್ಧಕ್ಕೆ ಬಿಟ್ಟು ಓಡಿದ್ದ ದಿನಗಳೂ ಇದ್ದವು.
ಇನ್ನು ಮಳೆಗಾಲವಾದರಂತೂ ಜೀವ ಮತ್ತಷ್ಟು ಹೈರಾಣಾಗುತ್ತಿತ್ತು. ನಮ್ಮೂರಲ್ಲಿ ಈಗಲೂ ಉಂಬಳಗಳ ಕಾಟ ಜಾಸ್ತಿ. ಇನ್ನು ಆಗ ಕೇಳಬೇಕೆ. ಯಾವುದೋ ಮಾಆಯದಲ್ಲಿ ಯಾರಿಗೂ ತಿಳಿಯದಂತೇ ನಮ್ಮ ಅಂಗಾಂಗಗಳಿಗೆ ಅಂಟಿಕೊಂಡು ರಕ್ತ ಹೀರಿ ಡೊಣೆಯನಂತಾಗುತ್ತಿದ್ದ ಉಂಬಳಗಳು ಆ ದಿನಗಳಲ್ಲಿ ಆ ಹೆಂಗಳೆಯರಿಗೆ, ಗಭಿಣಿಯರಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಕೈಕಾಲಿಗೆ ಕಚ್ಚಿದರೆ ಹೇಗೋ ತಡೆದುಕೊಳ್ಳಬಹುದು. ಆದರೆ ಬೇರೆ ಕಡೆಗಳಲ್ಲಿ ಕಚ್ಚಿದರೆ ಏನು ಗತಿ? ಆ ಹೆಂಗಳೆಯರು ಯಾವಾಗ ಎಲ್ಲಿ ಉಂಬಳಗಳು ಕಚ್ಚುತ್ತವೋ ಎನ್ನುವ ಆತಂಕದಲ್ಲಿಯೇ ತಮ್ಮ ದೈನಂದಿನ ಕಾರ್ಯಗಳನ್ನು ಮುಗಿಸುತ್ತಿದ್ದರು. ಇಷ್ಟರ ಜೊತೆ ಎಲ್ಲ ಕಾಡುಗಳಲ್ಲಿ ಇರುವಂತೆ ಆ ಕಾಡಿನಲ್ಲೂ ಅಸಂಖ್ಯಾತ ಸೊಳ್ಳೆಗಳ ಪಡೆ ರಕ್ತ ಹೀರಲು ಕಾಯುತ್ತಲೇ ಇತ್ತು ಬಿಡಿ.
ಚಳಿಗಾಲದ ಸಂದರ್ಭದಲ್ಲಿ ಇನ್ನೂ ಬಹುದೊಡ್ಡ ಆತಂಕಗಳು ಹೀಗೆ ಶೌಚಕ್ಕೆ ಹೋಗುವವರನ್ನು ಕಾಡುತ್ತಿದ್ದವು. ಚಳಿಗಾಲದ ಸಂದರ್ಭದಲ್ಲಿ, ಆಗ ತಾನೆ ಎಳೆಯ ಹುಲ್ಲುಗಳು ಎರಡೆಲೆ ಮೂಡಿಸಿ ತಮ್ಮ ಗಾತ್ರ ಹಿಗ್ಗಿಸುವ ಸಮಯದಲ್ಲಿ ಅವನ್ನು ಮೆಲ್ಲುವುದಕ್ಕಾಗಿ ಕಾಡೆಮ್ಮೆಗಳು, ಜಿಂಕೆಗಳು, ಕಡವೆಗಳ ಹಿಂಡು ದಟ್ಟ ಕಾಡಿನಿಂದಿಳಿದು ಬಯಲ ಕಡೆಗೋ, ನಮ್ಮ ಊರು ಕಾಣುವಷ್ಟು ಹತ್ತಿರಕ್ಕೋ ಆಗಮಿಸುತ್ತಿದ್ದವು. ಅವನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಈ ವನ್ಯ ಮೃಗಗಳ ಬೆನ್ನು ಬೆನ್ನಿಗೆ ಹುಲಿಗಳೋ, ಸೀಳು ನಾಯಿಗಳೋ, ಗುರ್ಕೆಗಳೋ ಆಗಮಿಸುತ್ತಿದ್ದವು. ಕಾಡಿಗೆ ಶೌಚಕ್ಕಾಗಿ ಹೋದವರು ಯಾವಾಗ ಹುಲಿ ಬರುತ್ತದೋ, ಯಾವಾಗ ಬೆನ್ನ ಹಿಂದೆ ಸೀಳು ನಾಯಿ ನಿಂತು ಊಳಿಡುತ್ತದೋ, ಮತ್ಯಾವಾಗ ಮೈಮೇಲೆ ಕಾಡೆಮ್ಮೆಗಳೋ, ಜಿಂಕೆಗಳೋ ಜಿಗಿದು ಓಡುತ್ತವೆಯೋ ಎನ್ನುವ ದುಗುಡದಲ್ಲೇ ತಮ್ಮ ನಿತ್ಯಕಾರ್ಯವನ್ನು ಮುಗಿಸಬೇಕಿತ್ತು.
ಈ ನಿತ್ಯಕರ್ಮಕ್ಕೂ ಸಮಯಮಿತಿ ಇತ್ತು. ಇನ್ನೂ ಬೆಳಕು ಮೂಡದಿದ್ದ ಹೊತ್ತು ಅಂದರೆ ನಸುಕಿನಲ್ಲೇ ಹೋಗಬೇಕು. ನಸುಕಿನಲ್ಲೇ ತಮ್ಮ ಕಾರ್ಯ ಮುಗಿಸಬೇಕು. ನಸುಕಿನಲ್ಲಿ ಕಾರ್ಯ ಮಾಡದಿದ್ದರೆ ಸಂಜೆಯಾಗುವುದನ್ನೇ ಕಾಯಬೇಕಿತ್ತು. ನಮ್ಮೂರಿನಲ್ಲಿ ಆಗೆಲ್ಲ ಸೊಪ್ಪಿನ ಹೊರೆಯನ್ನು ತರುವ ರೂಢಿ. ಮುಂಜಾನೆ ನಾಲ್ಕಕ್ಕೆಲ್ಲ ನಮ್ಮೂರಿನ ಹೈದರು ಎದ್ದು ಕಾಡಿಗೆ ಹೋಗಿ ಯಾವುದೋ ದೈತ್ಯ ಮರವನ್ನು ಕಡಿದು, ಸೊಪ್ಪನ್ನು ಹೊರೆಯಾಗಿ ಕಟ್ಟಿಕೊಂಡು ಬಂದು ಕೊಟ್ಟಿಗೆಗೆ ತಂದು ಹಾಸುತ್ತಿದ್ದರು. ಶೌಚಕ್ಕಾಗಿ ಹೋದವರು ಮೊದಲು ಮಟ್ಟಿಯನ್ನು ನೋಡುತ್ತಿದ್ದಷ್ಟೇ ಪ್ರಮುಖವಾಗಿ ಮರಗಳ ತಲೆಯನ್ನೂ ನೋಡುತ್ತಿದ್ದರು. ಯಾವ ಮರದ ಮೇಲೆ ಯಾರು ಹತ್ತಿಕೊಂಡು ಸೊಪ್ಪು ಕಡಿಯುತ್ತಿದ್ದಾರೋ ಎಂದು ನೋಡಿಕೊಂಡು, ಅವರು ಹತ್ತಿರದಲ್ಲೇ ಇದ್ದರೆ ಅವರ ಕಣ್ಣಿಗೆ ಕಾಣಿಸದಂತೆ ದೂರ ಮರೆಯಲ್ಲಿ ತಮ್ಮ ನಿತ್ಯ ಕರ್ಮಕ್ಕಾಗಿ ಕುಳಿತುಕೊಳ್ಳುತ್ತಿದ್ದರು. ಭಯ, ಆತಂಕ, ಅವಮಾನ, ನಾಚಿಕೆ, ದುಗುಡಗಳ ಮಧ್ಯ ಈ ನಿತ್ಯಕಾರ್ಯ ನಡೆಯುತ್ತಿತ್ತು. ಇನ್ನು ಯಾರಿಗಾದರೂ ಅನಾರೋಗ್ಯವಾದ ಸಂದರ್ಭದಲ್ಲಿ ಬೇಧಿ ಶುರುವಾಯಿತೋ ಅವರ ಪಾಡು ಯಾರಿಗೂ ಬೇಡ.
ಈ ಶೌಚ ಕಾರ್ಯದ ಸಂದರ್ಭದಲ್ಲಿ ದಿನ ನಿತ್ಯದ ಆಗು ಹೋಗುಗಳು, ಅತ್ತೆ-ಸೊಸೆ ಮುನಿಸು, ಚಿನ್ನದ ದರ, ಕಾಸಿನ ಸರದ ವಿಷಯಗಳು, ತಮ್ಮ-ಮಗನಿಗೋ ಮಗಳಿಗೋ ಕಾಡಿದ ಚಿಕ್ಕ ಪುಟ್ಟ ಕಾಯಿಲೆ ಹೀಗೆ ಅಸಂಖ್ಯಾತ ಹೆಂಗಳೆಯರ ಸುದ್ದಿಗಳು ವಿನಿಮಯವಾಗುತ್ತಿದ್ದವು. ನಿತ್ಯ ಕರ್ಮದ ಸಮಯ ಸುದ್ದಿ ಪ್ರಸಾರದ ಸಂದರ್ಭವಾಗಿ ಬದಲಾಗುತ್ತಿದ್ದುದೂ ಇದೆ. ಆ ದಿನಗಳಲ್ಲಿ ನಮ್ಮ ಮನೆಗಳಿಂದ ಬೆಟ್ಟದ ಕಡೆಗೆ ನೋಡಿದರೆ ಬೆಟ್ಟದ ಕಾನನದ ನಡುವೆ ಸಾಲಾಗಿ ಲಾಟೀನು ಬೆಳಗುವುದು ಕಾಣುತ್ತಿತ್ತಂತೆ.
ಹೀಗೆ ಶೌಚಾಲಯಕ್ಕಾಗಿ ಕಷ್ಟಪಟ್ಟು ಕಾಡಿನಿಂದೊಡಗೂಡಿದ ಗುಡ್ಡವನ್ನು ಏರುತ್ತಿದ್ದ ಇಬ್ಬರು ಗರ್ಭಿಣಿ ಹೆಗಸರಲ್ಲಿ ಒಬ್ಬಾಕೆ ನನ್ನ ಅಮ್ಮ. ಇನ್ನೊಬ್ಬಾಕೆ ನನ್ನ ಚಿಕ್ಕಮ್ಮ. ಇದು ೧೯೯೦ರ ದಶಕದ ಪೂವಾರ್ಧದಲ್ಲಿ ನಡೆದಿದ್ದ ಇಂತಹದ್ದೊಂದು ಸಂಗತಿಯನ್ನು ಅಮ್ಮ ಆಗೊಮ್ಮೆ ಈಗೊಮ್ಮೆ ಹೇಳುತ್ತಲೇ ಇದ್ದಳಾದರೂ ನಾನು ಈ ಕುರಿತು ಹೆಚ್ಚಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಚಿಕ್ಕಂದಿನಲ್ಲಿ ಅಂದರೆ ನನಗೆ ಮೂರೋ ನಾಲ್ಕೋ ವರ್ಷ ವಯಸ್ಸಾದ ಸಂದರ್ಭದಲ್ಲಿ ನಾನೂ ಹೀಗೆ ಶೌಚಕ್ಕಾಗಿ ಗುಡ್ಡ ಹತ್ತಿದವನೇ. ಒಂದೆರಡು ಸಾರಿ ನನಗೆ ಬೇಧಿ ಶುರುವಾದಾಗೆಲ್ಲ ಅಪ್ಪನನ್ನೋ, ಅಮ್ಮನನ್ನೋ ಕರೆದುಕೊಂಡು ಗುಡ್ಡದ ಕಡೆಗೆ ಓಡಿದ್ದೆಲ್ಲ ಅಸ್ಪಷ್ಟವಾಗಿ ನೆನಪಿದೆ. ನಡು ನಡುವೆ ಜಾರಿ ಬಿದ್ದಿದ್ದೂ ಕೂಡ ಚಿತ್ತ ಭಿತ್ತಿಯ ಮೇಲೆ ಅಚ್ಚಳಿಯದೇ ಉಳಿದಿದೆ. ಆಗೀಗ ಅವೆಲ್ಲ ನೆನಪಗೆ ಬರುತ್ತಲೇ ಇರುತ್ತವೆ.
ನಮ್ಮೂರಿನಲ್ಲಿ ಗಂಡಸರು ಆ ದಿನಗಳಲ್ಲಿ ಅಘನಾಶಿನಿ ನದಿ ತೀರವನ್ನೋ ಅಥವಾ ಇನ್ಯಾವುದೋ ನದಿಯ ಮೂಲಗಳನ್ನೋ ಹುಡುಕಿ ಹೋಗುತ್ತಿದ್ದರು. ಗಂಡಸರಿಗೆ ಶೌಚಕ್ಕೆ ಇಂತದ್ದೇ ಮಯ ಬೇಕು ಎಂಬುದು ಇರಲಿಲ್ಲವಲ್ಲ. ಹಾಗಾಗಿ ದಿನದ ಯಾವುದೇ ಸಮಯದಲ್ಲಿಯೂ ಅವರು ಎಲ್ಲಿ ಬೇಕಾದರೂ ಹೋಗಿ ತಮ್ಮ ನಿತ್ಯಕರ್ಮ ಮುಗಿಸಿ ಬರುತ್ತಿದ್ದರು. ಆದರೆ ಹೆಂಗಳೆಯರ ಪಾಡು ಯಾರಿಗೆ ಗೊತ್ತಾಗಬೇಕು ಹೇಳಿ.
ಅಮ್ಮ ಹಾಗೂ ಚಿಕ್ಕಮ್ಮ ಇಬ್ಬರೂ ದಿನ ತುಂಬಿದ ಬಸುರಿಯರು ಎಂದೆನಲ್ಲ.., ಇವರ ಪೈಕಿ ಅಮ್ಮನ ತವರಿನಲ್ಲಿ ಆಗ ಶೌಚಾಲಗಳಿರಲಿಲ್ಲ. ಅಲ್ಲಿಯೂ ಬಯಲನ್ನೇ ಆಶ್ರಯಿಸಿ ಇರಬೇಕಿತ್ತು. ಹಾಗಾಗಿ ಅಮ್ಮ ತನ್ನ ಗಂಡನ ಮನೆಯಲ್ಲಿ ಅಡ್ಜೆಸ್ಟ್ ಮಾಡಿಕೊಂಡಿರಬೇಕು ಬಿಡಿ. ಆದರೆ ಚಿಕ್ಕಮ್ಮ ಹಾಗಲ್ಲ, ಆ ದಿನಗಳಲ್ಲಿ ಮುಂದುವರಿದ ಊರುಗಳಲ್ಲೊಂದರಿಂದ ಬಂದಾಕೆ. ಆಕೆಗೆ ಹೊಂದಿಕೊಳ್ಳು ಕಷ್ಟವೇ ಆಗಿತ್ತಂತೆ. ಅದು ಬಿಡಿ. ಅಮ್ಮ ನಾಲ್ಕೈದು ವರ್ಷಗಳ ಕಾಲ ಬಯಲು ಶೌಚದ ಫಲಾನುಭವಿಯಾಗಿದ್ದರೆ, ಚಿಕ್ಕಮ್ಮನೂ ಬಹುತೇಕ ಒಂದೆರಡು ವರ್ಷ ಇದರ ಫಲಾನುಭವಿಯಾಗಿದ್ದಳು.
ಇಂತಹ ಬಯಲು ಶೌಚದ ವ್ಯವಸ್ಥೆಗೆ ಕೊನೆಗೂ ಒಂದು ದಿನ ನಮ್ಮೂರಲ್ಲಿ ಪೂರ್ಣವಿರಾಮ ಬಿದ್ದಿತ್ತು. ಅದ್ಯಾರು ಹೇಳಿದರೋ, ನನ್ನ ಪಕ್ಕದ ಮನೆಯ ಅಜ್ಜನಿಗೆ ಹೆಂಗಳೆಯರು ಪಡುತ್ತಿದ್ದ ಪಾಡು ಅರ್ಥವಾಗಿತ್ತು. ದಿನನಿತ್ಯ ಅವರು ಪಡುತ್ತಿದ್ದ ಬವಣೆ ಅರಿವಿಗೆ ಬಂದಿತ್ತು. ನನ್ನ ಪಕ್ಕದ ಮನೆಯ ಅಜ್ಜ, ನನ್ನ ಅಜ್ಜನ ಬಳಿ ಬಂದು ಶೌಚಾಲಯ ಕಟ್ಟಿಸುವ ಪ್ರಸ್ತಾಪವನ್ನು ಇಟ್ಟಿದ್ದ. ಮೊದ ಮೊದಲಿಗೆ ನನ್ನ ಅಜ್ಜ ಶೌಚಾಲಯ ನಿರ್ಮಾಣದ ಕುರಿತು ನಿರಾಸಕ್ತಿ ತೋರಿದ್ದರೂ ಕೊನೆಗೊಮ್ಮೆ ಒಪ್ಪಿಕೊಂಡಿದ್ದ. ಪಕ್ಕದ ಮನೆಯ ಅಜ್ಜ ತನ್ನದೇ ಜಾಗದಲ್ಲಿ ಎರಡು ಶೌಚಾಲಯ ನಿರ್ಮಾಣಕ್ಕೆ ಅಡಿಗಲ್ಲನ್ನೂ ಹಾಕಿದ್ದ. ಒಂದು ನಮ್ಮ ಮನೆಗೆ, ಇನ್ನೊಂದು ಆ ಅಜ್ಜನ ಮನೆಯ ಬಳಕೆಗೆ. ಕೊನೆಗೊಂದು ದಿನ ನಮ್ಮೂರಲ್ಲಿ ಶೌಚಾಲಯ ನಿರ್ಮಾಣಗೊಂಡು ಆಧುನಿಕತೆಗೆ ತೆರೆದುಕೊಂಡಿತ್ತು. ಬಯಲು ಶೌಚವೆಂಬುದು ಸಂಪೂರ್ಣವಾಗಿ ಕೊನೆಗೊಂಡಿತ್ತು. ನಮ್ಮೂರಿಗರ ಬವಣೆಗೆ ಅದರಲ್ಲೂ ಮುಖ್ಯವಾಗಿ ನಮ್ಮೂರ ಹೆಂಗಳೆಯರ ಪಡಿಪಾಟಲಿಗೆ ಪೂರ್ಣವಿರಾಮ ಬಿದ್ದಿತ್ತು.

ಇಷ್ಟೆಲ್ಲ ಆದರೂ ಆ ದಿನಗಳು ನೆನಪಾಗುತ್ತಿರುತ್ತವೆ. ಶೌಚಕ್ಕೆ ಕುಳಿತ ಹೆಂಗಳೆಯರ ಮೇಲೆ ಹುಲಿ ದಾಳಿ ಮಾಡಿದ್ದರೆ? ಚಿರತೆ ಹೊತ್ತೊಯ್ದಿದ್ದರೆ? ಕಚ್ಚಬಾರದಂತಹ ಜಾಗಗಳಲ್ಲೆಲ್ಲ ಉಂಬಳಗಳು ಕಚ್ಚಿದ್ದರೆ? ಅಸಂಖ್ಯ ಸೊಳ್ಳೆಗಳ ಹಿಂಡಿನಿಂದಾಗಿ ಮಲೆರಿಯಾ, ಡೆಂಗ್ಯೂಗಳಂತಹ ಮಾರಕ ರೋಗಗಳು ಆವರಿಸಿದ್ದರೆ? ಯಾವುದೋ ವಿಷಕಾರಿ ಹಾವುಗಳು ಕಚ್ಚಿದ್ದರೆ? ಅದು ಹೋಗಲಿ, ಏನೋ ಅಪಾಯ ಕಂಡು ಬಂದು ಹೆದರಿದ ಬಸುರಿಯರು ಓಡಿ ಹೋಗಲು ಯತ್ನಿಸಿ ಜಾರಿ ಬಿದ್ದಿದ್ದರೆ? ಬೆಚ್ಚುವ ಬಸುರಿಯರಿಗೆ ಬಾಳಂತಿ ಸನ್ನಿಯೋ ಅಥವಾ ಇನ್ಯಾವುದೋ ಮಾನಸಿಕ ಕಾಯಿಲೆಗಳು, ಕಸಾಲೆಗಳು ಆವರಿಸಿದ್ದರೆ? ಅಬ್ಬ.. ಅಂತ ದಿನಗಳು ಈಗಿಲ್ಲವಲ್ಲ... ಅಮ್ಮ ಈಗಲೂ ನಿಟ್ಟುಸಿರು ಬಿಡುತ್ತಿರುತ್ತಾರೆ. ಅಂತದ್ದೊಂದು ದಿನಗಳನ್ನು ನೆನಪಿಸಿಕೊಳ್ಳಲೂ ಹೇಸಿಗೆ ಪಟ್ಟುಕೊಳ್ಳುತ್ತಾಳೆ. ಆದರೂ ನೆನಪಾದಾಗ ಶೌಚಾಲಯದ ಅಗತ್ಯತೆಯ ಬಗ್ಗೆ ಮಾತನಾಡುತ್ತಾಳೆ. ತಮ್ಮಂತೆ ಇನ್ಯಾರೂ ಕೂಡ ಬವಣೆ ಅನುಭವಿಸುವುದು ಬೇಡ ಎನ್ನುತ್ತಿರುತ್ತಾಳೆ.

ಅಂದಹಾಗೆ ಟಾಯ್ಲೆಟ್ ಏಕ್ ಪ್ರೇಮ ಕಥಾ ಚಿತ್ರವನ್ನು ನೋಡಿದೆ. ಮತ್ತೊಮ್ಮೆ ಈ ಎಲ್ಲ ಘಟನೆಗಳೂ ನೆನಪಿಗೆ ಬಂದವು.

Friday, August 3, 2018

ಯುವಕರ ಕ್ರೀಡೆ ಕ್ರಿಕೆಟ್‌ನಲ್ಲಿ ಹಿರಿ-ಕಿರಿಯರ ಸದ್ದು

ಯುವಕರ ಕ್ರೀಡೆ ಕ್ರಿಕೆಟ್ ಎನ್ನುವ ಮಾತಿದೆ. 19-20 ವರ್ಷದ ಆಟಗಾರರಿಂದ ಹಿಡಿದು 36-37 ವರ್ಷ ವಯಸ್ಸಿನ ವರೆಗೆ ಕ್ರಿಕೆಟ್ ಆಡುವವರೇ ಹೆಚ್ಚು. 19-20 ವರ್ಷ ವಯಸ್ಸಿನ ಒಳಗಿನ ಕ್ರಿಕೆಟಿಗರ ಸಂಖ್ಯೆ ಬೆರಳೆಣಿಕೆಯಷ್ಟು. ಅದೇ ರೀತಿ 37 ವರ್ಷ ವಯಸ್ಸಿನ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.
ಕ್ರಿಕೆಟ್ ಅಂಗಣದಲ್ಲಿ 20 ವರ್ಷದೊಳಗಿನ ಆಟಗಾರರನ್ನು ಅನನುಭವಿ, ಇನ್ನೂ ಎಳಸು ಎಂದು ಕರೆದರೆ, 35 ವರ್ಷ ಆದಂತೆಲ್ಲ ವಯಸ್ಸಾಯಿತು, ಇನ್ನು ನಿವೃತ್ತಿಯ ಕಡೆಗೆ ಗಮನ ಹರಿಸಲಿ ಎಂಬ ಮಾತುಗಳು ಕೇಳಿ ಬರಲು ಆರಂಭವಾಗುತ್ತದೆ. ಉತ್ತಮ ಫಾರ್ಮಿನಲ್ಲಿದ್ದರೂ ಆಟಗಾರರ ನಿವೃತ್ತಿಯ ಕುರಿತು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಲು ಶುರುಮಾಡುತ್ತಾರೆ. ಹಾಗಾದರೆ ಕ್ರಿಕೆಟ್ ರಂಗಕ್ಕೆ ಕಾಲಿರಿಸಿದ ಅತ್ಯಂತ ಕಿರಿಯ ವ್ಯಕ್ತಿಯ ವಯಸ್ಸೆಷ್ಟಿರಬಹುದು? ಕ್ರಿಕೆಟ್ ಆಡಿ ನಿವೃತ್ತಿಯಾದ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು ಎನ್ನುವ ಕುತೂಹಲ ಹಲವರಲ್ಲಿ ಇರಬಹುದು. ಇಂತಹ ಹಿರಿಯ ಹಾಗೂ ಕಿರಿಯ ವ್ಯಕ್ತಿಗಳ ಕುರಿತು ಕಿರು ಮಾಹಿತಿ ಇಲ್ಲಿದೆ.

ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕಿರಿಯ ವ್ಯಕ್ತಿ
ಟೆಸ್‌ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಪಾಕಿಸ್ತಾನದ ಹಸನ್ ರಾಜಾ. 1996ರಲ್ಲಿ ಜಿಂಬಾಬ್ವೆಯ ವಿರುದ್ಧ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಹಸನ್ ರಾಜಾಗೆ ಕೇವಲ 14 ವರ್ಷ, 227 ದಿವಸವಾಗಿತ್ತು.
ಈ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ ಮುಷ್ತಾಕ್ ಮೊಹಮ್ಮದ್. ವಿಂಡೀಸ್ ವಿರುದ್ಧ 1959ರಲ್ಲಿ ಕ್ರಿಕೆಟ್ ಆಡಿದಾಗ ಈತನ ವಯಸ್ಸು 15 ವರ್ಷ 124 ದಿನಗಳಾಗಿತ್ತು. ಪಾಕಿಸ್ತಾನದವನೇ ಆದ ಅಕೀಬ್ ಜಾವೆದ್ ಕ್ರಿಕೆಟ್ ಜೀವನ ಆರಂಭಿಸಿದಾಗ ಆತನಿಗೆ 16 ವರ್ಷ 189 ದಿನಗಳಾಗಿತ್ತು. 1989ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆತ ತನ್ನ ಕ್ರಿಕೆಟ್ ಬದುಕು ಆರಂಭಿಸಿದ. ಇದೇ ಸಾಲಿನಲ್ಲಿ ನಾಲ್ಕನೇ ಸ್ಥಾನ ಗಳಿಸಿರುವ ಆಟಗಾರ ಭಾರತದ ಸಚಿನ್ ತೆಂಡೂಲಕ್‌ರ್‌‌. ಪಾಕಿಸ್ತಾನದ ವಿರುದ್ಧ 1989ರಲ್ಲಿ ಕ್ರಿಕೆಟ್ ಆಡಿದ ಸಚಿನ್‌ಗೆ ಆಗ 16 ವರ್ಷ 205 ದಿನವಾಗಿತ್ತಷ್ಟೇ. 1969ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಾಕಿಸ್ತಾನದ ಆಪ್ಹ್ತಾಬ್ ಬಲೂಚ್‌ಗೆ ಆಗ 16 ವರ್ಷದ 223 ದಿನಗಳಾಗಿತ್ತು.

ಹಿರಿಯ ಆಟಗಾರರು
ಕ್ರಿಕೆಟ್‌ನಲ್ಲಿ 35-36 ವರ್ಷಗಳಿಗೆಲ್ಲ ನಿವೃತ್ತಿ ಹೇಳುವ ಆಟಗಾರರೇ ಹೆಚ್ಚು. ಅಬ್ಬಬ್ಬಾ ಎಂದರೆ 40, ಅಲ್ಲೊಬ್ಬ ಇಲ್ಲೊಬ್ಬರು 41-42 ವರ್ಷಗಳ ತನಕ ಕ್ರಿಕೆಟ್ ಆಡಿದವರಿದ್ದಾರೆ. ಆದರೆ ಇಂಗ್ಲೆೆಂಡ್ ಪರ ಕ್ರಿಕೆಟ್ ಆಡಿದ ವಿಲ್ರೆಡ್ ರೋಡ್‌ಸ್‌ ತಾನು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಆತನ ವಯಸ್ಸು 52 ವರ್ಷ 165 ದಿನಗಳಾಗಿತ್ತು. ಆಸ್ಟ್ರೇಲಿಯಾದ ಬೆರ್ಟ್ ಐರನ್‌ಮ್ಯಾಾಂಗರ್ ಟೆಸ್‌ಟ್‌‌ಗೆ ವಿದಾಯ ಹೇಳಿದಾಗ ಆತನ ವಯಸ್ಸೂ ಕೂಡ ಅರ್ಧಶತಕ  ದಾಟಿತ್ತು ಬಿಡಿ. ಕ್ರಿಕೆಟ್‌ಗೆ ವಿದಾಯ ಹೇಳುವಾಗ ಆತನಿಗೆ ಆಗಿದ್ದ ವಯಸ್ಸು 50 ವರ್ಷದ 327 ದಿನ. ಕ್ರಿಕೆಟ್ ಪಿತಾಮಹ ಡಬ್ಲೂ. ಜಿ. ಗ್ರೇಸ್ ಕೂಡ ಹಿರಿಯರ ಯಾದಿಯಲ್ಲಿದ್ದಾರೆ. ಇವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಾಗ ಆಗಿದ್ದ ವಯಸ್ಸು 50 ವರ್ಷದ 320 ದಿನಗಳು. ಇಂಗ್ಲೆೆಂಡಿನ ಜಾರ್ಜ್ ಗನ್ 50 ವರ್ಷದ 303, ಜೇಮ್‌ಸ್‌ ಸದರ್ಟನ್ 49 ವರ್ಷದ 139 ದಿನಗಳಾದಾಗ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದ್ದರು.

ವಿವಿದ ದೇಶಗಳ ಹಿರಿಯ ಕ್ರಿಕೆಟ್ ಆಟಗಾರರು
ಆಸ್ಟ್ರೇಲಿಯಾ -ಬೆರ್ಟ್ ಐರನ್‌ಮ್ಯಾಾಂಗರ್ -50 ವರ್ಷದ 327 ದಿನಗಳು
ಬಾಂಗ್ಲಾದೇಶ - ಮೊಹಮ್ಮದ್ ರಫೀಕ್ -37 ವರ್ಷದ 180 ದಿನಗಳು
ಇಂಗ್ಲೆೆಂಡ್         -ವಿಲ್ರೆೆಡ್ ರೋಡ್‌ಸ್‌ -52 ವರ್ಷದ 165 ದಿನಗಳು
ಭಾರತ          - ವಿನೂ ಮಂಕಡ್ -41 ವರ್ಷ 305 ದಿನಗಳು
ನ್ಯೂಜಿಲೆಂಡ್      -ಜ್ಯಾಕ್ ಅಲಾಬಸ್ಟಾಾರ್ -41 ವರ್ಷ 247 ದಿನಗಳು
ಪಾಕಿಸ್ತಾಾನ  -ಮಿರಾನ್ ಭಕ್ಷ್     -47 ವರ್ಷ 307 ದಿನಗಳು
ದಕ್ಷಿಣ ಆಫ್ರಿಕಾ       -ಡೇವ್ ನರ್ಸ್           -45 ವರ್ಷ 207 ದಿನಗಳು
ಶ್ರೀಲಂಕಾ        -ಸೋಮಚಂದ್ರ ಡಿ. ಸಿಲ್ವಾ -42ವರ್ಷ 78 ದಿನಗಳು
ವೆಸ್‌ಟ್‌ ಇಂಡೀಸ್   - ಜಾರ್ಜ್ ಹೆಡ್ಲೀ         -44 ವರ್ಷ 236 ದಿನಗಳು
ಜಿಂಬಾಬ್ವೆೆ    -ಜಾನ್ ಟ್ರೈಕೋಸ್ -45 ವರ್ಷ 304 ದಿನಗಳು

ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಹಿರಿಯರು
ಕಿರಿಯ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದನ್ನು ಕೇಳಿರುತ್ತೀರಿ. ಅದೇ ಹಿರಿಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು ಎಷ್ಟಿರಬಹುದು ಎನ್ನುವ ಕುತೂಹಲ ಇರಬಹುದು. ಇಂಗ್ಲೆೆಂಡಿನ ಜೇಮ್‌ಸ್‌ ಸದರ್ಲೆಂಡ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು 49 ವರ್ಷದ 119 ದಿನಗಳಾಗಿದ್ದವು. ಪಾಕಿಸ್ತಾನದ ಮಿರಾನ್ಭಕ್ಷ್ ಗೆ 47 ವರ್ಷದ 284 ದಿನಗಳಾಗಿದ್ದವು. ಆಸ್ಟ್ರೇಲಿಯಾದ ಡಾನ್ ಬ್ಲೇಕ್‌ಗೆ 46 ವರ್ಷದ 253 ದಿನಗಳಾಗಿದ್ದವು. ಭಾರತದ ರುಸ್ತುಮ್‌ ಜೇಮ್ಶೆಟ್‌ಜಿಗೆ 41 ವರ್ಷದ 27 ದಿನಗಳಾಗಿದ್ದವು. ಈಗ ಹೇಳಿ ಕ್ರಿಕೆಟ್ ಕೇವಲ ಯುವಕರ ಕ್ರೀಡೆಯೇ?

Monday, July 30, 2018

ಸಾಲು ಸಾಲು ಅವಮಾನಗಳನ್ನೆದುರಿಸಲು ಆಕೆ ಮಾಡಿದ ಮಹಾಪಾಪವಾದರೂ ಏನು?

ಇತ್ತೀಚಿನ ದಿನಗಳಲ್ಲಿ ಕಾಂಗಿ ಹಿಂಬಾಲಕರಿಂದ ಸತತ ಅವಮಾನಕ್ಕೊಳಗಾಗುತ್ತಿರುವ ಮಹಿಳೆಯರಲ್ಲಿ ಜಶೋದಾ ಬೆನ್ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಕಾರಣವಿಲ್ಲದೇ, ಟೀಕಿಸಲೇಬೇಕು ಎನ್ನುವ ಕಾರಣಕ್ಕೆ ದೋಷಾರೋಪಣೆಯನ್ನು ಮಾಡುತ್ತಿರುವ ಕಾಂಗಿಗಳು ಸುಖಾಸುಮ್ಮನೆ ಜಶೋದಾ ಬೆನ್ ಹೆಸರನ್ನು ಅಲ್ಲಿ-ಇಲ್ಲಿ ಎಳೆದು ತರುವ ಮೂಲಕ ಅವರ ಮನಸ್ಸಿಗೆ ಘಾಸಿಯನ್ನು ಎಸಗುವ ಕಾರ್ಯ ಕೈಗೊಳ್ಳುತ್ತಿದ್ದಾರೆ.

ಬಾಲ್ಯದಲ್ಲಿ ಅಂದರೆ ಕೇವಲ ಮೂರೋ ಅಥವಾ ನಾಲ್ಕೋ ವರ್ಷಗಳ ಪ್ರಾಯದಲ್ಲಿದ್ದಾಾಗ ಜಶೋದಾ ಬೆನ್‌ರನ್ನು ನರೇಂದ್ರ ಮೋದಿ ವರಿಸಿದ್ದರು. ಆ ಸಂದರ್ಭದಲ್ಲಿ  ನರೇಂದ್ರ ಮೋದಿ ಅವರಿಗಾದ ವಯಸ್ಸಾದರೂ ಎಷ್ಟು ಅಂತೀರಿ? ಕೇವಲ 13. ಮದುವೆ, ಹೆಂಡತಿ, ಸಂಸಾರ ಇತ್ಯಾದಿಗಳ ಕುರಿತಂತೆ ಚಿಕ್ಕ ಭಾವನೆಯೂ ಮೊಳೆತಿರದಂತಹ ವಯಸ್ಸು ಅದು. ಬುದ್ಧಿ ಬಲಿತ ನಂತರ ಮೋದಿ ತೆಗೆದುಕೊಂಡ ನಿರ್ಧಾರವಾದರೂ ಎಂತಹುದು? ನವ ಭಾರತ ನಿರ್ಮಾಣ. ಭವ್ಯ ಭಾರತಕ್ಕಾಗಿ ರಾಷ್ಟ್ರ ಜಾಗೃತಿ ಮೂಡಿಸುವ ಮಹತ್ಕಾರ್ಯ. ರಾಷ್ಟ್ರ ನಿರ್ಮಾಣದ ಧ್ಯೇಯೋದ್ದೇಶದಿಂದ ಪತ್ನಿಯಿಂದ ದೂರ ಬಂದ ಮೋದಿ ನಡೆ ಪ್ರಜ್ಞಾವಂತರಲ್ಲಿ ವಿಶೇಷ ಆದರಣೆಗೆ ಒಳಗಾಗುತ್ತಿದೆ. ರಾಷ್ಟ್ರ ನಿರ್ಮಾಣದ ಸಂಕಲ್ಪಕ್ಕಾಗಿ ಸಾಂಸಾರಿಕ ಜಂಜಡಗಳನ್ನು ಬಿಟ್ಟು ದೇಶಕ್ಕಾಗಿ ಜೀವ- ಜೀವನವನ್ನೇ ಮುಡಿಪಾಗಿಟ್ಟ ನರೇಂದ್ರರ ಈ ನಡೆಯನ್ನೇ ಕಾಂಗಿಗಳು ಕಾರಣವಿಲ್ಲದೆಯೇ ಟೀಕಿಸುತ್ತಿದ್ದಾಾರೆ. ಅದೂ ಯಾವ ರೀತಿ? ದೇಶಕ್ಕಾಾಗಿ ಅಭಿವೃದ್ಧಿ ಮಂತ್ರವನ್ನು ಜಪಿಸುವ ಮೋದಿ  ಪತ್ನಿಯನ್ನು ತ್ಯಜಿಸಿಲ್ಲವೇ, ಹೆಂಡತಿಯನ್ನು ಬೀದಿಗೆ ತಂದಿಲ್ಲವೇ? ಎಂದು ಹೀನವಾಗಿ ಚಿತ್ರಿಸುವ ಕಾಂಗಿ ಮನಸ್ಥಿತಿ, ರೋಗಗ್ರಸ್ಥ ಮನಸ್ಸುಗಳ ಪ್ರತೀಕವಲ್ಲದೇ ಬೇರೇನೂ ಅಲ್ಲ. ಬಹುಶಃ ಈ ಮನಸ್ಥಿತಿಯನ್ನು ಗ್ಯಾಾಂಗ್ರಿನ್ ಹುಣ್ಣಿಗೆ ಹೋಲಿಕೆ ಮಾಡಬಹುದು.

ಕಾಂಗಿಗಳಿಗೆ ತಮ್ಮ ಅಧಿನಾಯಕಿಯ ಮೂಲದ ಕುರಿತು ಯಾರಾದರೂ ಪ್ರಶ್ನಿಸಿದಾಗ, ಯುವರಾಜನ ಮದುವೆಯ ಕುರಿತು ಸಂದೇಹಗಳನ್ನು ವ್ಯಕ್ತಪಡಿಸಿದಾಗಲೆಲ್ಲ ಜಶೋದಾ ಬೇನ್ ಹೆಸರು ನೆನಪಾಗುತ್ತದೆ. ಇಟಲಿಯ ರಾಣಿ ತಮ್ಮ ಯವ್ವನದಲ್ಲಿ ಮಾಡಿದ್ದು ಸರಿ ಎನ್ನುವಂತೆ ಮಾತನಾಡುತ್ತಾರೆ. ಯುವರಾಜನಿಗೆ ಮದುವೆಯಾಗಿಲ್ಲ, ಏನಿವಾಗ ಎಂಬ ಧೋರಣೆಯಲ್ಲಿ ಮಾತನಾಡುತ್ತಾರೆ. ಅಷ್ಟೆಲ್ಲ ಹೇಳಿದ ನಂತರ ಇವ್ಯಾವುದಕ್ಕೂ ಸಂಬಂಧವೇ ಇಲ್ಲದಂತಹ ಮಹಾಸಾಧ್ವಿ  ಜಶೋದಾ ಬೆನ್‌ರನ್ನು ಎಳೆದು ತರುತ್ತಾರೆ. ಆಕೆಗೆ ಅನ್ಯಾಯವಾಗಿ ಹೋಗಿದೆ ಎಂದೂ ಹುಯ್ಯಲಿಡುತ್ತಾರೆ.

ಹಾಗೆ ನೋಡಿದರೆ ಕಾಂಗಿಗಳಿಗೆ ಜಶೋದಾ ಬೇನ್‌ರ ಹೆಸರನ್ನು ಸುಮ್ಮನೆ ಎತ್ತಲೂ ನೈತಿಕತೆ ಬೇಕಾಗುತ್ತದೆ. ಕಳೆದ 66 ವರ್ಷಗಳಿಂದಲೂ ಜಶೋದಾ ಬೇನ್ ಗೌರವಯುತವಾಗಿ, ಎಲ್ಲರಿಗೂ ಮಾದರಿಯಾಗಿ ಬದುಕುತ್ತಿದ್ದಾರೆ. ನೋಡಿದ ತಕ್ಷಣ ಕಾಲಿಗೆರಗಿ ನಮಸ್ಕರಿಸಬೇಕು ಎನ್ನುವಷ್ಟು ಭಕ್ತಿ ಉಕ್ಕುತ್ತದೆ. ಸಮಾಜಕ್ಕೆ ಪಾಠ ಮಾಡುವ, ನಾಳೆಯ ಪ್ರಜೆಗಳನ್ನು ಹುಟ್ಟು ಹಾಕುವ ಶಿಕ್ಷಕ ವೃತ್ತಿಯನ್ನು ಮೂರು ದಶಕಗಳ ಕಾಲ ತಪಸ್ಸಿನಂತೆ ಕೈಗೊಂಡು ಬದುಕಿದವರು ಜಶೋದಾ ಬೆನ್. ತಮ್ಮ ಬದುಕಿನ ಅವಯಲ್ಲಿ ಜಶೋದಾ ಬೇನ್ ಯಾವತ್ತಿಗೂ ಮೋದಿಯವರ ಬಳಿ ಕೈ ಚಾಚಿಲ್ಲ. ರಾಷ್ಟ್ರ ನಾಯಕ ತನ್ನ ಸಹಾಯಕ್ಕೆ ಬರಲಿ ಎಂದು ಕನಸಿನಲ್ಲೂ ಕನವರಿಸಿಲ್ಲ. ತನ್ನ ಪತಿ ರಾಷ್ಟ್ರದ ಪ್ರಧಾನಿ ಎಂಬ ಚಿಕ್ಕ ಗರ್ವದ ಲವಲೇಶವೂ ಅವರ ನಡೆ-ನುಡಿಯಲ್ಲಿ ಇಣುಕಿಲ್ಲ.

ಯಾವಾಗ ನರೇಂದ್ರ ಮೋದಿ 1992ರ ವೇಳೆಗೆ ಗುಜರಾತಿನಲ್ಲಿ ಪಕ್ಷ ಸಂಘಟನೆಗಾಗಿ ದೊಡ್ಡ ಮಟ್ಟದ ಅಭಿಯಾನಕ್ಕೆ ಮುಂದಾದರೋ, ಆವಾಗಿಲಿಂದಲೇ ಜಶೋದಾ ಬೇನ್‌ಗೆ ಅವಮಾನಗಳ ಸರಮಾಲೆ ಆರಂಭವಾಯಿತು ಎನ್ನಬಹುದು. ನರೇಂದ್ರ ಮೋದಿ ಬಿಜೆಪಿ ಸಂಘಟನೆಯನ್ನು ದೊಡ್ಡ ಮಟ್ಟದಲ್ಲಿ ಕೈಗೊಂಡಂತೆಲ್ಲ, ರಾಷ್ಟ್ರ ನಾಯಕ ಎಂದು ಬಿಂಬಿತವಾದಂತೆಲ್ಲ, ಮಾಧ್ಯಮಗಳು , ಕಾಂಗಿ ಬಾಲಗಳು ಜಶೋದಾ ಬೇನ್‌ರ ಹೆಸರಿಗೆ ಕೆಸರು ಎರಚುವ ಕಾರ್ಯದಲ್ಲಿ ಅವ್ಯಾಹತವಾಗಿ ತಮ್ಮನ್ನು ತೊಡಗಿಸಿಕೊಂಡರು. ಗುಜರಾತಿನ ಮುಖ್ಯಮಂತ್ರಿಯಾಗಿ ಮೋದಿ ಚುನಾಯಿತರಾದ ಮೇಲಂತೂ ಕಾಂಗಿಗಳ ಒರಲಾಟ ಇನ್ನಷ್ಟು ಹೆಚ್ಚಿತು. ಅದಕ್ಕೆೆ ಪೂರಕವಾಗಿ ಮಾಧ್ಯಮಗಳೂ ಸಾಕಷ್ಟು ಒಗ್ಗರಣೆ, ಮಸಾಲೆಗಳನ್ನು ತುರುಕಿದವು. ಕಾಂಗಿಗಳ ಇಂತಹ ಹೀನ ಕಾರ್ಯ ತುತ್ತ ತುದಿಯನ್ನು ತಲುಪಿದ್ದು 2014ರ ವೇಳೆಗೆ. ಯಾವಾಗ ಕಾಂಗಿಗಳು 2014 ಚುನಾವಣೆಯಲ್ಲಿ ಮಕಾಡೆ ಮಲಗಿ, ಮೋದಿ ಪ್ರಧಾನಿಯಾಗುತ್ತಾಾರೆ ಎನ್ನುವುದು ಪ್ರಖರವಾಗತೊಡಗಿತೋ, ಕಾಂಗಿ ಬಾಲಬಡುಕರು, ಯಾವುದಕ್ಕೂ ಸಂಬಂಧವೇ ಇರದಿದ್ದ ಜಶೋದಾ ಬೇನ್‌ರ ಹೆಸರನ್ನು ಇನ್ನಷ್ಟು ಎಳೆದು ತಂದರು. ತಾವು ಹೇಳಿದಂತೆ ಯಾವುದೂ ನಡೆದಿರದೇ ಇದ್ದರೂ ಕಾಂಗಿ ಗುಲಾಮರ ಮನಸ್ಥಿತಿ ಸ್ವಲ್ಪವೂ ಬದಲಾಗಲಿಲ್ಲ.

ಜಶೋದಾ ಬೇನ್‌ರೇ ಸ್ವತಃ ತಾವು ಚನ್ನಾಗಿದ್ದೇನೆ ಎಂದೂ, ಮೋದಿಯವರು ದೂರವಾದ ನಂತರ ಯಾವುದೇ ಸಮಸ್ಯೆ ಆಗಲಿಲ್ಲ ಎಂದೂ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಹೇಳುತ್ತಲೇ ಇದ್ದಾರೆ. ಆದರೆ ಕಾಂಗಿಗಳಿಗೆ ಇದ್ಯಾವುದೂ ಬೇಕಾಗಿಲ್ಲ. ಕಾಂಗ್ರೆಸ್ ಬೆನ್ನಿಗೆ ನಿಂತಿರುವ ಆಂಗ್ಲ ಮಾಧ್ಯಮಗಳಿಗೂ ಕೂಡ ಇದು ಗೌಣವಾಗಿ ಕಾಣುತ್ತಿದೆ. ಬಹುಶಃ ಜಶೋದಾ ಬೇನ್ ಹೆಸರಿಗೆ ಕೆಸರು ಎರಚಿದರೆ ಆಂಗ್ಲ ಮಾಧ್ಯಮಗಳ ಆತ್ಮಕ್ಕೆ ಯಾವಾಗಲೋ ಆಗಿರುವ ಅತೃಪ್ತಿಗೆ ಶಾಂತಿ ಸಿಗುತ್ತಿದೆಯೇನೋ ಬಲ್ಲವರಾರು?

ಕಾಂಗಿಗಳಿಗೆ ಯಾವುದೋ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದವರ, ಅರೆನಗ್ನವಾಗಿ ನೃತ್ಯ ಮಾಡುತ್ತ, ಗ್ರಾಹಕರ ಮನಸ್ಸನ್ನು ತೃಪ್ತಿ ಪಡಿಸುತ್ತಿದ್ದವರ ತಪ್ಪನ್ನು ಮುಚ್ಚಿ ಹಾಕಲು ಅಸ್ತ್ರ ಬೇಕಾಗಿದೆ. ಮೋದಿಯವರನ್ನು ಇನ್ಯಾವುದೇ ಅಸ್ತ್ರದಿಂದಲೂ ಹಣಿಯಲು ಸಾದ್ಯವಿಲ್ಲ. ಈ ಕಾರಣದಿಂದ ಜಶೋದಾ ಬೇನ್‌ಗೆ ಅನ್ಯಾಯವಾಗಿದೆ ಎಂಬ ಹುಯಿಲನ್ನು ಎಬ್ಬಿಸಿ ಸಂಚಲನ ಉಂಟು ಮಾಡಿ, ಸುಳ್ಳನ್ನೇ ಸತ್ಯ ಮಾಡೋಣ ಎನ್ನುವುದೇ ಮುಖ್ಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯಂತೂ ವಾರ್ತಾವಾಹಿನಿಗಳಲ್ಲೋ ಅಥವಾ ಇನ್ಯಾವುದೋ ಮಾಧ್ಯಮಗಳಲ್ಲೂ ಜಶೋದಾ ಬೇನ್‌ರ ಭಾವಚಿತ್ರವನ್ನೂ ಸರಿಯಾಗಿ ನೋಡಿರದ ಕಾಂಗಿ ಕಮಂಗಿಗಳು ತಾವೇ ಜಶೋದಾ ಬೇನ್‌ರನ್ನು ಕಣ್ಣಾರೆ ಕಂಡಿದ್ದೇವೇನೋ ಎಂಬಂತೆ ಪೋಸ್ಟುಗಳ ಮೂಲಕ ತೇಜೋವಧೆಗೆ ಮುಂದಾಗುವಂತಹ ನೀಚ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಹಿಳಾ ರಕ್ಷಣೆಯೇ ನಮ್ಮ ಆದ್ಯತೆ, ಮಹಿಳೆಯರ ತೇಜೋವಧೆಗೆ ಸ್ವಲ್ಪವೂ ಅವಕಾಶ ಕೊಡುವುದಿಲ್ಲ ಎನ್ನುವುದು ಕಾಂಗಿ ಮಹಾನಾಯಕರ ಬಾಯಲ್ಲಿ ಬರುವ ದೊಡ್ಡ ದೊಡ್ಡ ಮಾತುಗಳು. ಆದರೆ ಅವರ ಕಾಲ ಕೆಳಗೆಯೇ ಅವರದೇ ಬಾಲಬಡುಕರು, ಭಟ್ಟಂಗಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಹಿಳೆಯೊರ್ವರ ತೇಜೋವಧೆಗೆ ಯತ್ನಿಸುತ್ತಿರುವುದು ವೈರುಧ್ಯವೇ ಹೌದು. ಈ ಮೂಲಕ ತಾನು ಹೇಳುವುದು ಒಂದು, ಮಾಡುವುದು ಇನ್ನೊದು, ಹೇಳಿದಂತೆ ಮಾಡಬೇಕೆಂಬ ನಿಯಮ ನನಗಿಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತಿಿದೆ.

ವಿವಾಹ, ಸಂಸಾರ, ಮಕ್ಕಳು ಇತ್ಯಾಾದಿ ಸಂಬಂಧಗಳ ಕುರಿತು ಕಾಂಗಿಗಳನ್ನು ನಿಲುವು ಅವರ ಅಗತ್ಯಗಳಿಗೆ ತಕ್ಕಂತೆ ಬದಲಾಗುತ್ತಿರುವುದು ವಿಪರ್ಯಾಸ. ಜಶೋದಾ ಬೆನ್ ಬಗ್ಗೆ ಮಾತನಾಡುವ ಕಾಂಗಿ ಬಾಲಬಡುಕರು, ಮೊದಲ ಪ್ರಧಾನಿ ನೆಹರೂಗಿದ್ದ ಎಡ್ವಿನಾಳ ಜತೆಗಿನ ಸಂಗವನ್ನೋ, ಮಹಿಳಾ ಪ್ರಧಾನಿಗಳ ಕುರಿತು ಅವರ ಆಪ್ತನೇ ಹೊರ ತಂದ ಅಕ್ರಮ ಸಂಬಂಧ ದ ಪುಸ್ತಕಗಳಲ್ಲಿನ ಅಂಶಗಳ ಬಗ್ಗೆಯೋ, ದಿಗ್ವಿಜಯರ ಮೂರನೇ ಮದುವೆಯೋ, ತರೂರರ ಪತ್ನಿಯ ಸಾವೋ, ಎನ್. ಡಿ. ತಿವಾರಿ ಎಂಬ ಹಣ್ಣು ಹಣ್ಣು ಮುದಿಜೀವದ ಮಕ್ಕಳ ಕುರಿತೋ ಮಾತನಾಡುವುದೇ ಇಲ್ಲ.

ಕಾಂಗಿಗಳ ಕುರಿತಾಗಿ ಹೇಳ ಹೊರಟರೆ ಇನ್ನೂ ಹಲವಾರು ವಿಷಯಗಳು ತೆರೆದುಕೊಳ್ಳಬಹುದು. ತಮ್ಮಲ್ಲೇ ತಪ್ಪನ್ನು ಇಟ್ಟುಕೊಂಡು ಯಾವುದಕ್ಕೂ ಸಂಬಂಧ ಇಲ್ಲದೇ ತಮ್ಮ ಪಾಡಿಗೆ ತಾವಿರುವವರ ಕುರಿತು ಅಪಪ್ರಚಾರ ಮಾಡುವ ಕಾಂಗಿ ಕಮಂಗಿಗಳ ಕಿವಿಯನ್ನು ಎಷ್ಟು ಹಿಂಡಿದರೂ ಅವರಿಗೆ ಬುದ್ಧಿ ಬರುವುದಿಲ್ಲ.

ಮುಂದಿನ ದಿನಗಳಲ್ಲಾದರೂ ಕಾಂಗಿಗಳು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳದಿದ್ದಲ್ಲಿ ಅವರವರ ಮನೆಯವರೂ ಕೂಡ ಅವರನ್ನು ತಿರಸ್ಕರಿಯಾರು. ಅದರ ಜತೆಗೆ ಜಶೋದಾಬೆನ್ ಎಂಬ ವೌನ ತಪಸ್ವಿಯ ಮೂಕರೋದನದ ಕುದಿಬಿಂದುಗಳು ಅಪಪ್ರಚಾರ ಮಾಡುವವರನ್ನು ಸುಟ್ಟೀತು. 

Sunday, July 29, 2018

ಸಂಗಮ್.. ಹಾಗೂ ಕನ್ನಡ ಹೀರೋಗಳು (ನಾನು ನೋಡಿದ ಚಿತ್ರಗಳು-೪ )


ಮೆ ಕ್ಯಾ ಕರೂ ರಾಂ ಮುಝೆ ಬುಡ್ಡಾ ಮಿಲ್ ಗಯಾ ಎನ್ನುವ ಮೂಲಕ 1964ರಲ್ಲಿ ತೆರೆಕಂಡ ಸಂಗಮ್ ಸಿನೆಮಾವನ್ನು ಮತ್ತೊಮ್ಮೆ ನೋಡಿದೆ. ಸರಳ ಪ್ರೇಮಕಥೆ. ವಿವಾಹದ ನಂತರದ ಅನುಮಾನ ಎಂಬ ಅಂಶಗಳನ್ನಿಟ್ಟುಕೊಂಡು ರಾಜ್ ಕಪೂರ್ ಈ ಸಿನೆಮಾವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಕಥಾನಾಯಕ ರಾಜ್ ಕಪೂರ್.. ನಾಯಕಿ ವೈಜಯಂತಿಮಾಲಾ .. ಜೊತೆಯಲ್ಲಿ ರಾಜೇಂದ್ರಕುಮಾರ್ ಮುಖ್ಯ ಭೂಮಿಕೆಯ ಸಿನೆಮಾದಲ್ಲಿ ಬಹು ಅಂಶಗಳಲ್ಲಿ ಈ ಮೂವರೇ ಇರುತ್ತಾರೆ. ತ್ರಿಕೋನ ಪ್ರೇಮ ಕಥೆ.
ವೈಜಯಂತಿ ಮಾಲಾಳನ್ನು ಪ್ರೀತಿಸುವ ರಾಜ್ ಕಪೂರ್, ರಾಜೇಂದ್ರ ಕುಮಾರ್ ಇಬ್ಬರದ್ದೂ ಸೂಪರ್ ಅಭಿನಯ.
ತನ್ನ ಪ್ರೀತಿಯನ್ನು ರಾಜ್ ಕಪೂರ್ ಡಂಗುರ ಸಾರಿದಂತೆ ಗೆಳೆಯನ ಬಳಿ ಹೇಳಿಕೊಂಡರೆ ತನ್ನೊಳಗೆ ಪ್ರೀತಿಯ ಮಹಲನ್ನು ಕಟ್ಟಿ `ಯೇ ಮೇರಾ ಪ್ರೇಮ ಪತ್ರ ಪಡಕರ್..' ಎಂದು ಹಾಡಿ ವೈಜಯಂತಿಯನ್ನು ಸೆಳೆಯುವ ರಾಜೇಂದ್ರಕುಮಾರ್. ವೈಜಯಂತಿ ಮಾಲಾಳಿಗೂ ರಾಜೇಂದ್ರಕುಮಾರನ ಮೇಲೆ ಪ್ರೇಮದ ಭಾವವಿದೆ. ಆದರೆ ಮೂವರೂ ಗೆಳೆಯರು. ರಾಜೇಂದ್ರಕುಮಾರ್ ಸ್ನೇಹಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ರಾಜ್ ಕಪೂರನಿಗೆ ವೈಜಯಂತಿಯನ್ನು ಮದುವೆ ಮಾಡಿಸುವಲ್ಲಿಗೆ ಸಿನೆಮಾ ಅರ್ಧ ಮುಗಿಯುತ್ತದೆ.
ಇನ್ನು ಮುಂದಿರುವುದೇ ನಿಜವಾದ ಕಥೆ. 

ಮದುವೆಗೆ ಮುನ್ನ ತನ್ನ ಹೆಂಡತಿ ಯಾರನ್ನೋ ಪ್ರೀತಿಸುತ್ತಿದ್ದಳು ಎನ್ನುವ ಅಂಶವನ್ನು ತಿಳಿದುಕೊಂಡ ರಾಜ್ ಕಪೂರ್ ಕೂತಲ್ಲಿ ನಿಂತಲ್ಲಿ `ಯಾರವನು..' ಎಂದು ಪ್ರಶ್ನೆ ಮಾಡುತ್ತಾನೆ. ರಾಜೇಂದ್ರಕುಮಾರನಿಗೂ ಗೊತ್ತಿರಬಹುದು ಎಂದು ಆತನಲ್ಲೂ ಕೇಳುತ್ತಾನೆ. ಕೊನೆಗೊಮ್ಮೆ `ದೋಸ್ತ್ ದೋಸ್ತ್ ನಾ ರಹಾ.. ಪ್ಯಾರ್ ಪ್ಯಾರ್ ನಾ ರಹಾ..' ಎಂದೂ ಹಾಡುತ್ತಾನೆ.. ಅಂತ್ಯದಲ್ಲಿ ರಾಜೇಂದ್ರಕುಮಾರ ಹಾಗೂ ವೈಜಯಂತಿಮಾಲಾ ಪ್ರೀತಿಸಿದ್ದರು. ಅವರ ನಡುವೆ ತಾನು ಬಂದು ಬದುಕನ್ನು ಹಾಳು ಮಾಡಿದೆ ಎನ್ನುವ ದುಃಖ ರಾಜ್ ಕಪೂರನನ್ನು ಕಾಡಿದರೆ ರಾಜೇಮದ್ರಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಸಿನೆಮಾ ಮುಕ್ತಾಯವಾದರೂ ನೋಡುಗನ ಮನದಲ್ಲಿ ಏನೆಲ್ಲ ಭಾವನೆಗಳನ್ನು ಉಳಿಸಿಬಿಡುತ್ತದೆ..
ಸಿನೆಮಾದಲ್ಲಿ ಇಷ್ಟೇ ಅಂಶಗಳಲ್ಲದೇ ನೋಡಲೇ ಬೇಕು ಎನ್ನಿಸುವಂತಹದ್ದು ಸಾಕಷ್ಟಿವೆ. ಬೋಲ್ ರಾಧಾ ಬೋಲ್ ಸಂಗಂ ಹೋಗಾ ಕೆ ನಹಿ ಎನ್ನುವಂತಹ ಸುಮಧುರ ಹಾಡುಗಳು ಇಲ್ಲಿವೆ. ಯುದ್ಧ ವಿಮಾನದ ಪೈಲಟ್ ಆಗುವ ರಾಜ್ ಕಪೂರ್.. ಯುದ್ಧದಲ್ಲಿ ಪಾಲ್ಗೊಳ್ಳುವ ದೃಶ್ಯ.
ಕ್ಲೈಮ್ಯಾಕ್ಸಿನಲ್ಲಿ ತ್ರಿಕೋನದಂತೆ ನಿಲ್ಲುವ ರಾಜ್ಕಪೂರ್, ರಾಜೇಂದ್ರಕುಮಾರ್, ವೈಜಯಂತಿ ಮಾಲಾ...
ರಾಜ್ ಕಪೂರ್ ನಡೆದುಕೊಂಡು ವೈಜಯಂತಿ ಮಾಲಾ ಬಳಿ ಬಂದರೆ ಆಕೆ ನಿಧಾನವಾಗಿ ನಡೆದುಕೊಂಡು ರಾಜೇಂದ್ರಕುಮಾರ್ ಬಳಿ ಹೋಗುವುದು, ರಾಜೇಂದ್ರ ಕುಮಾರ್ ಆಕೆಯಿಂದ ದೂರ ಹೋಗಿ ನಿಲ್ಲುವುದು.. ಇಂತಹ ಮನಮುಟ್ಟುವ ಪಾತ್ರಗಳು ಬಹಳಷ್ಟಿವೆ. ತುಂಟಾಟದ ಮನೋಭಾವದವರಿಗೆ ಮೇ ಕ್ಯಾ ಕರೂ ರಾಂ ಇಷ್ಟವಾಗಬಹುದು.. ಸ್ವಿಡ್ಜರ್ಲೆಂಡಿನಲ್ಲಿ ಮೊಟ್ಟ ಮೊದಲು ಚಿತ್ರೀಕರಣಗೊಂಡ ಭಾರತದ ಚಿತ್ರ ಇದು ಎನ್ನುವ ಹೆಗ್ಗಳಿಕೆ ಇದೆ. ಕನ್ನಡದಲ್ಲಿಯೂ ಸ್ವಪ್ನ ಎನ್ನುವ ಹೆಸರಿನಲ್ಲಿ ಈ ಚಿತ್ರ ರಿಮೇಕ್ ಆಗಿ ಬಂದಿದೆಯಂತೆ.


**
ಇನ್ನೊಂದು ಸಂಗತಿ ಹೇಳಲೇ ಬೇಕು. ಇದೇ ಚಿತ್ರವನ್ನು ಈಗ ಕನ್ನಡದಲ್ಲಿ ರಿಮೇಕ್ ಮಾಡಿದರೆ ಹೇಗಿರುತ್ತದೆ ಎನ್ನುವುದು ನನ್ನ ಆಲೋಚನೆ. ಹಳೆಯ ಕಥೆಯ ಅಂಶವನ್ನು ಇಟ್ಟುಕೊಂಡು ಇಂದಿನ ತಲೆಮಾರಿಗೆ ಹೊಂದಿಕೆಯಾಗುವಂತೆ ಚಿತ್ರ ಮಾಡುವುದು. ನನ್ನ ಪ್ರಕಾರ ಚಿತ್ರದಲ್ಲಿ ರಾಜ್ ಕಪೂರ್ ಪಾತ್ರಕ್ಕೆ ದರ್ಶನ್ ಹೊಂದಿಕೆಯಾಗುತ್ತಾರೆ. ರಾಜೇಂದ್ರಕುಮಾರ್ ಪಾತ್ರಕ್ಕೆ ಸುದೀಪ್ ಹೊಂದಿಕೆಯಾಗುತ್ತಾರೆ. ನೋಡುಗರಿಗೆ ಸುದೀಪ್ ಪಾತ್ರ ಸೆಕೆಂಡ್ ಹೀರೋ ಅಂತವನಿಗೆ ಸೆಕೆಂಡ್ ಹೀರೋ ಪಾತ್ರ ಕೊಟ್ಟರಲ್ಲ ಎನ್ನಿಸಬಹುದು. ಆದರೆ ಚಿತ್ರದಲ್ಲಿ ಸೆಕೆಂಡ್ ಹೀರೋ ಅನ್ನೋದೇ ಇಲ್ಲ. ಮೂರು ಪಾತ್ರಗಳೂ ಜೀವಾಳ. ದರ್ಶನ್ ತನ್ನ ತುಂಟಾಟದ ಮ್ಯಾನರಿಸಂ ಹೈಟು, ಫೈಲಟ್ಟು ಇತ್ಯಾದಿಗಳ ಮೂಲಕ ಪಾತ್ರಕ್ಕೆ ಒಗ್ಗಬಹುದು. ಅದೇ ರೀತಿ ಸೈಲಂಟಾಗಿ ಮನದೊಳಗೆ ರೋಧಿಸುವ ತನ್ನ ಪ್ರೇಮವನ್ನು ಸ್ನೇಹಕ್ಕಾಗಿ ತ್ಯಾಗ ಮಾಡಿ ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ನಾಯಕನಾಗಿ, ನಾಯಕನಿಗಿಂತ ಹೆಚ್ಚಿನ ಅಂಕ ಪಡೆಯುವ ಮೂಲಕ ರಾಜೇಂದ್ರಕುಮಾರ್ ಪಾತ್ರವನ್ನು ಸುದೀಪ್ ಮಾಡಬಹುದು ಎನ್ನಿಸುತ್ತದೆ. ವೈಜಯಂತಿ ಮಾಲಾ ನ ಪಾತ್ರಕ್ಕೆ ರಾಧಿಕಾ ಪಂಡಿತ್ ಸೂಕ್ತ ಎನ್ನಿಸುತ್ತದೆ.
ಈ ಇಬ್ಬರೂ ನಾಯಕರು ಒಂದು ಚಿತ್ರದಲ್ಲಿ ಒಂದಾಗಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಹಾರಯಿಕೆ. ಇಬ್ಬರ ಇಮೇಜಿಗೂ ಧಕ್ಕೆ ಬರಬಾರದು. ಚಿತ್ರದಲ್ಲಿ ಏನಾದರೂ ಈ ಇಬ್ಬರೂ ಫೈಟ್ ಮಾಡಿಕೊಂಡೆ ಅವರ ಅಭಿಮಾನಿಗಳಲ್ಲಿ ಅದು ಮರುಧ್ವನಿಸುತ್ತದೆ. ಫೈಟ್ ಸಿನೆಮಾದ ಬದಲು ಈ ಫೈಟಿಲ್ಲದ ಸಿನೆಮಾ ಮಾಡಿದರೆ ಇಬ್ಬರ ಇಮೇಜು ಉಳಿಯುತ್ತದೆ. ಅಭಿಮಾನಿಗಳೂ ಒಟ್ಟಾಗಿ ಇರುತ್ತಾರೆ. ದಿಗ್ಗಜರ ಸಿನೆಮಾ ಆದ ಕಾರಣ ಬಾಕ್ಸಾಫಿಸಿನಲ್ಲಿ ನಿರೀಕ್ಷೆ ಹುಟ್ಟಿಸಿ ಹಣಗಳಿಕೆಗೆ ದಾರಿಯಾಗಬಹುದು. ನೋಡೋಣ ಯಾವ ಪುಣ್ಯಾತ್ಮನಾದರೂ ಈ ಕೆಲಸಕ್ಕೆ ಮುಂದಾಗುತ್ತಾನೋ ಎಂದು.
ಒಂದೊಳ್ಳೆ ಚಿತ್ರ.. ಸಂಗಂ ಚಿತ್ರ ನೋಡುವಾಗ ಕನ್ನಡದ ಈ ಇಬ್ಬರು ನಟರನ್ನು ಮನಸ್ಸಿನಲ್ಲಿಯೇ ಕಲ್ಪನೆ ಮಾಡಿಕೊಂಡು ನೋಡಿ.. ಖುಷಿ ಕೊಡಬಲ್ಲದು.

Saturday, July 28, 2018

ಕ್ರಿಕೆಟ್ ಜನಕರ ನಾಡಿನಲ್ಲಿ ವಲಸಿಗರದ್ದೇ ದರ್ಬಾರ್


ಕ್ರಿಕೆಟ್ ಆಡುವ ಎಲ್ಲ ದೇಶಗಳಲ್ಲಿಯೂ ಒಬ್ಬಿಬ್ಬರಾದರೂ ಆಟಗಾರರು ಬೇರೆ ದೇಶಗಳಲ್ಲಿ ಜನಿಸಿದವರಾಗಿದ್ದಾಾರೆ. ಕ್ರಿಕೆಟ್ ಜನಕ ದೇಶ ಇಂಗ್ಲೆೆಂಡ್‌ನಲ್ಲಿ ಪ್ರಸ್ತುತ ಕ್ರಿಕೆಟ್ ಆಡುತ್ತಿರುವ ಆಟಗಾರರಲ್ಲಿ ಹೆಚ್ಚಿನವರು ವಲಸೆ ಬಂದವರು ಎನ್ನುವುದು ವಿಶೇಷ. ಈ ಕಾರಣದಿಂದಲೇ ಇಂಗ್ಲೆೆಂಡ್ ಕ್ರಿಕೆಟ್ ತಂಡವನ್ನು ವಲಸೆ ಕ್ರಿಕೆಟಿಗರ ತಂಡ ಎಂದು ಕರೆಯಲಾಗುತ್ತಿದೆ.
ಪ್ರಸ್ತುತ ಇಂಗ್ಲೆೆಂಡ್ ಕ್ರಿಕೆಟ್ ತಂಡದ ಆಟಗಾರರನ್ನೇ ಗಮನಿಸಿ, ತಂಡದಲ್ಲಿ ಶೆ.80ರಷ್ಟು ವಲಸಿಗರು. ಯಾವುದೋ ದೇಶದಲ್ಲಿ ಜನಿಸಿ ಇಂಗ್ಲೆೆಂಡಿಗೆ ವಲಸೆ ಬಂದು, ಅಲ್ಲಿನ ಪೌರತ್ವವನ್ನು ಪಡೆದುಕೊಂಡು ಕ್ರಿಕೆಟ್ ಆಡಿ ಹೆಸರುವಾಸಿಯಾದವರು. ಇಂಗ್ಲೆೆಂಡಿನ ಕ್ರಿಕೆಟ್ ಇತಿಹಾಸವನ್ನು ಗಮನಿಸಿದಾಗ ಅದೆಷ್ಟೋ ಖ್ಯಾಾತನಾಮ ಕ್ರಿಕೆಟಿಗರು ಬೇರೆ ದೇಶದಲ್ಲಿ ಜನಿಸಿದವರು.
ಅನೇಕ ಸಾರಿ ಇಂಗ್ಲೆೆಂಡ್ ಕ್ರಿಕೆಟ್ ಜಗತ್ತಿನ ಚಿಕ್ಕಪುಟ್ಟಘ ರಾಷ್ಟ್ರಗಳಿಂದ ಆಟಗಾರರನ್ನು ಕರೆಸಿಕೊಂಡಿದ್ದರೂ ಇದೆ. ಜಿಂಬಾಬ್ವೆ, ದಕ್ಷಿಣ ಆಫ್ರಿಕಾ, ಭಾರತ, ಆಫ್ರಿಕಾದ ಇತರ ಕ್ರಿಕೆಟ್ ಶಿಶುಗಳು, ಐರ್ಲೆಂಡ್, ಡೆನ್ಮಾರ್ಕ್ ಹೀಗೆ ವಿವಿಧ  ರಾಷ್ಟ್ರಗಳ ಆಟಗಾರರಿಗೆ ತನ್ನ ದೇಶದ ಪೌರತ್ವವನ್ನು ಒದಗಿಸಿ, ಕ್ರಿಕೆಟ್ ಆಡಲು ಅವಕಾಶ ನೀಡಿದೆ. ದಕ್ಷಿಣ ಆಫ್ರಿಕಾದ ಅತ್ಯಂತ ಹೆಚ್ಚಿನ ಕ್ರಿಕೆಟ್ ಪ್ರತಿಭೆಗಳು ಇಂಗ್ಲೆೆಂಡಿನಲ್ಲಿ ಬದುಕು ಕಟ್ಟಿಕೊಂಡಿವೆ.

ಇಂಗ್ಲೆೆಂಡಿನ ಲೆಜೆಂಡ್ಸ್  ಕೂಡ ಬೇರೆ ದೇಶದವರು
ಇಂಗ್ಲೆೆಂಡಿನ ಪರ ಆಡಿ ವಿಶ್ವ ಕ್ರಿಕೆಟ್‌ನಲ್ಲಿ ಖಾಯಂ ಹೆಸರು ಪಡೆದಿರುವ ಅದೆಷ್ಟೋ ಆಟಗಾರರು ಇಂಗ್ಲೆೆಂಡಿಗೆ ವಲಸೆ ಬಂದವರೇ. ಆಂಡ್ರ್ಯೂ ಸ್ಟ್ರಾಸ್ ಮೂಲ ದಕ್ಷಿಣ ಆಫ್ರಿಕಾದ ಜೊಹಾನ್‌ಸ್‌‌ಬರ್ಗ್, ಅಷ್ಟೇ ಏಕೆ ಕೆವಿನ್ ಪೀಟರ್ಸನ್ ಮೂಲ ದ. ಆಫ್ರಿಕಾದ ಪೀಟರ್‌ಮಾರಿಟ್‌ಸ್‌‌ಬರ್ಗ್. ಒಂದಾನೊಂದು ಕಾಲದ ಡ್ಯಾಷಿಂಗ್ ಬ್ಯಾಟ್‌ಸ್‌‌ಮನ್ ಟೆಡ್ ಡೆಕ್‌ಸ್‌‌ಟರ್ ಜನಿಸಿದ್ದು ಇಟಲಿಯ ಮಿಲಾನ್‌ನಲ್ಲಿ. ಹೆಸರಾಂತ ವೀಕ್ಷಕವಿವರಣೆಗಾರ, ಕಲಾತ್ಮಕ ಆಟಗಾರ ಟೋನಿ ಗ್ರೇಗ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಟೋನಿ ಗ್ರೇಗ್ ಮೂಲತಃ ದಕ್ಷಿಣ ಆಫ್ರಿಕಾದ ಕ್ವೀನ್‌ಸ್‌‌ಟೌನಿನವರು. ಡೊಮೆನಿಕಾದ ಸ್ಕಾಟ್‌ಹೆಡ್‌ನಲ್ಲಿ ಜನಿಸಿದ ಫಿಲ್‌ ಡಿ ಕ್ರೈಟಸ್  ಕ್ರಿಕೆಟ್‌ಗಾಗಿ ಕೆರೆಬಿಯನ್ ದ್ವೀಪದಿಂದ ವಲಸೆ ಬಂದವರು. ಸಚಿನ್ ತೆಂಡೂಲ್ಕರ್ ಕೈಲಿ 2003ರ ವಿಶ್ವಕಪ್‌ನಲ್ಲಿ ಯದ್ವಾತದ್ವಾ ರನ್ ಹೊಡೆಸಿಕೊಂಡು ನಗೆಪಾಟಲಿಗೀಡಾಗಿದ್ದ, ಇನ್ನೋರ್ವ ಬೌಲರ್ ಆಂಡಿ ಕ್ಯಾಡಿಕ್ ಜನಿಸಿದ್ದು ನ್ಯೂಜಿಲೆಂಡ್‌ನ ಕ್ರೈಸ್‌ಟ್‌ ಚರ್ಚ್‌ನಲ್ಲಿ. ಜಮೈಕಾದ ಕಿಂಗ್‌ಸ್‌‌ಟನ್‌ನಲ್ಲಿ ಜನಿಸಿದ ಡೆವಿಡ್ ಮಾಲ್ಕಮ್, ಜಿಂಬಾಬ್ವೆಯ ಹರಾರೆಯಲ್ಲಿ ಜನಿಸಿದ ಗ್ರೈಮ್ ಹಿಕ್ ಇವರೆಲ್ಲ ಒಂದಾನೊಂದು ಕಾಲದಲ್ಲಿ ಇಂಗ್ಲೆೆಂಡ್ ತಂಡದ ಆಧಾರ ಸ್ಥಂಭವೇ ಆಗಿದ್ದರು.
ಬಸೀಲ್ ಡಿ ಒಲಿವೆರಾ, ಕ್ರಿಸ್ ಸ್ಮಿತ್, ರಾಬಿನ್ ಸ್ಮಿತ್, ಹೆರಾಲ್‌ಡ್‌ ಬೌಮ್‌ಗಾರ್ಟನರ್, ರಿಚರ್ಡ್ ಡಮ್‌ಬ್ರಿಲ್, ಕ್ರಿಸ್ ಫಿನ್ಲಾಸನ್ ಮತ್ತಿತರರು ಇವರು ದಕ್ಷಿಣ ಆಫ್ರಿಕಾ ಮೂಲದವರಾದರೆ, ಡೆರೆಕ್ ಪ್ರಿಿಂಗ್‌ಲ್‌ ಕೀನ್ಯಾ, ಓವೈಸ್ ಶಾ ಪಾಕಿಸ್ತಾನ, ಕ್ರೇಗ್ ಕೀಸ್ವೆಟರ್ ದ. ಆಫ್ರಿಕಾ, ಕ್ರಿಸ್ ಲೆವಿಸ್ ವೆಸ್‌ಟ್‌ ಇಂಡೀಸ್, ಡೆರ್ಮೋಟ್ ರೀವಿ ಹಾಂಗ್ ಕಾಂಗ್, ಫಿಲ್ ಎಡ್ಮಂಡ್‌ಸ್‌ ಹಾಗೂ ನೀಲ್ ರುದರ್ ಫೋರ್ಡ್ ಝಾಂಬಿಯಾ ಕೂಡ ವಲಸಿಗರು.

ಭಾರತೀಯರೂ ವಲಸಿಗರು
ಭಾರತದಲ್ಲಿ ಜನಿಸಿದ ಕೆ. ಎಸ್. ರಣಜಿತ್ ಸಿಂಹಜಿ, ಕೆ. ಎಸ್. ದುಲೀಪ್‌ಸಿಂಗ್‌ಜಿ, ಬಾಬ್ ವೋಲ್ಮರ್ (ಕಾನ್ಪುರ), ರಾಬಿನ್ ಜಾಕ್‌ಮನ್, ಹನೀಫ್  ಮೊಹಮ್ಮದ್, ಆಸಿಫ್  ಇಕ್ಬಾಲ್, ಮಾಜಿದ್ ಖಾನ್, ರವಿ ಬೋಪಾರಾ ಇಂಗ್ಲೆೆಂಡ್‌ಗೆ ತೆರಳಿ, ಇಂಗ್ಲೆೆಂಡ್ ತಂಡದಲ್ಲಿ ಖಾಯಂ ಸ್ಥಾನ ಗಳಿಸಿಕೊಂಡಿದ್ದರು. ಇಂಗ್ಲೆೆಂಡ್‌ನ ಹೆಸರಾಂತ ನಾಯಕ ನಾಸೀರ್ ಹುಸೇನ್ ಜನಿಸಿದ್ದು ಭಾರತದ ಚೆನ್ನೈನಲ್ಲಿ. ಕಾಲಿನ್ ಕೌಡ್ರೆ ಜನಿಸಿದ್ದು ಭಾರತದ ಬೆಂಗಳೂರಿನಲ್ಲಿ.

ಇಂಗ್ಲೆೆಂಡ್ ನಾಯಕರಾದ ವಲಸಿಗರು
ಇಂಗ್ಲೆೆಂಡ್ ತಂಡದ ಇತಿಹಾಸದಲ್ಲಿ ಹಲವು ನಾಯಕರು ಬೇರೆ ದೇಶದಿಂದ ವಲಸೆ ಬಂದವರು. ಲಾರ್ಡ್ ಹ್ಯಾರಿಸ್ (ಟ್ರಿನಿಡಾಡ್), ಟಿಮ್ ಓ ಬ್ರಿಯಾನ್ (ಐರ್ಲೆಂಡ್), ಪ್ಲಮ್ ವಾರ್ನರ್ (ಟ್ರನಿಡಾಡ್), ಡಗ್ಲಾಸ್ ಜಾರ್ಡಿನ್ (ಭಾರತ), ಸಿರಿಲ್ ವಾಲ್ಟರ್ಸ್ (ಸ್ಕಾಟ್ಲೆೆಂಡ್), ಗಬ್ಬಿ ಅಲೆನ್ (ಆಸ್ಟ್ರೇಲಿಯಾ), ಫ್ರೆಡ್ಡಿ  ಬ್ರೌನ್ (ಪೆರು), ಡಾನ್ ಕ್ಯಾರ್ (ಜರ್ಮನಿ), ಟೋನಿ ಲೆವಿಸ್ (ವೇಲ್‌ಸ್‌), ಮೈಕ್ ಡೆನ್ನಿಸ್ (ಸ್ಕಾಟ್ಲೆೆಂಡ್), ಅಲ್ಲನ್ ಲ್ಯಾಾಂಬ್ (ದಕ್ಷಿಣ ಆಫ್ರಿಕಾ) ಇವರುಗಳು ಬೇರೆ ದೇಶಗಳಿಂದ ಆಂಗ್ಲರ ನಾಡಿಗೆ ಬಂದು ಕ್ರಿಕೆಟ್ ತಂಡದ ಮುಂದಾಳತ್ವ ವಹಿಸಿಕೊಂಡವರು.

ವಲಸಿಗರ ದರ್ಬಾರ್
ಪ್ರಸ್ತುತ ಇಂಗ್ಲೆೆಂಡ್ ಕ್ರಿಕೆಟ್ ತಂಡದಲ್ಲಿ ಶೇ.80ರಷ್ಟು ವಲಸಿಗರು. ಹೆಸರಾಂತ ಆಲ್‌ರೌಂಡರ್ ಬೆನ್ ಸ್ಟೋಕ್ಸ್  ಮೂಲತಃ ನ್ಯೂಜಿಲೆಂಡ್‌ಗೆ ಸೇರಿದವರು. ನ್ಯೂಝಿಲೆಂಡ್‌ನ ಕ್ರೈಸ್ಟ್ ಚರ್ಚ್  ರಗ್ಬಿ ಆಟಗಾರನ ಮಗ ಸ್ಟೋಕ್ಸ್. ಇಂಗ್ಲೆೆಂಡ್ ಟೆಸ್ಟ್ ತಂಡದ ಖಾಯಂ ಆಟಗಾರ ಮ್ಯಾಟ್ ಪ್ರಯರ್ ಮೂಲತಃ ದಕ್ಷಿಣ ಆಫ್ರಿಕಾದ ಜೋಹಾನ್‌ಸ್‌‌ಬರ್ಗ್‌ನವನು. ಜೋನಾಥನ್ ಟ್ರಾಟ್ ದಕ್ಷಿಣ ಆಫ್ರಿಕಾದವನು. ಏಕದಿನ ತಂಡದ ನಾಯಕ ಇಯಾನ್ ಮಾರ್ಗನ್ ಐರ್ಲೆಂಡಿನವನು. ಟಾಮ್ ಕ್ಯೂರನ್ (ದಕ್ಷಿಣ ಆಫ್ರಿಕಾ), ಗ್ಯಾರಿ ಬ್ಯಾಲೆನ್‌ಸ್‌ (ಜಿಂಬಾಬ್ವೆ), ಜೇಸನ್ ರಾಯ್ (ದಕ್ಷಿಣ ಆಫ್ರಿಕಾ), ನಿಕ್ ಕಾಂಪ್ಟನ್ (ದ. ಆಫ್ರಿಕಾ), ಕ್ರಿಸ್ ಜೋರ್ಡನ್ (ವೆಸ್ಟ್  ಇಂಡೀಸ್), ಮೊಯಿನ್ ಅಲಿ (ಪಾಕಿಸ್ತಾನ)