Sunday, January 14, 2018

ಅಂ-ಕಣ -10

ಫಲಿತಾಂಶ

ದೀಪಾವಳಿ ರಾಕೇಟ್
ಫೇಲ್ ಆಗಬಹುದು...
ಇಸ್ರೋ ರಾಕೇಟ್
ಫೇಲ್ ಆಗೋಲ್ಲ....!

ವಿಭಿನ್ನ

ಎಲ್ಲರೂ ಚೆಂಡು
ವಿರೂಪ ಅಂತಾರೆ...
ಆದರೆ ಯಾರೊಬ್ಬರೂ
ಬ್ಯಾಟು ವಿರೂಪ
ಅಂದಿದ್ದನ್ನ ಕೇಳೇ ಇಲ್ಲ..!

ಬ್ರಿಗೇಡ್ ಬಾತ್

ಇವತ್ತು ಹಲವರಿಗೆ
ಬ್ರಿಗೇ'ಡಿಯರ್'
ರೋಡ್...!
ಇನ್ನೂ ಹಲವರಿಗೆ
ಬ್ಯಾರಿಕೇಡ್ ರೋಡ್ !!

ವಿಪರ್ಯಾಸ

ಎಲ್ರೂ ಅದನ್ನ
ಎಣ್ಣೆ ಎಣ್ಣೆ ಅಂತಾರೆ...
ಆದರೆ ಯಾರೊಬ್ನೂ
ಕೂಡ ಆ ಎಣ್ಣೆಯಲ್ಲಿ
 ಒಂದೇ ಒಂದ್ ವಡಾ
ಕರಿದಿದ್ದನ್ನ ನೋಡಿಲ್ಲ...!

ರೆಕಮಂಡ್

ಬೆಂಗಳೂರಲ್ ಸನ್ನಿ ನೈಟ್ಸ್
ಮಾಡಬಾರದು ಅಂತ
'ಗುಪ್ತ'ಚರ ಇಲಾಖೆ
ಸರ್ಕಾರಕ್ಕೆ ರೆಕಮಂಡ್
ಮಾಡಿದೆಯಂತೆ...!


(ಸುಮ್ನೆ ತಮಾಷೆಗಂತ ಆಗೀಗ ಬರೆದಿದ್ದು ಇವು. ನಿಮಗೆ ಇಷ್ಟವಾಗಬಹುದು.. ಹನಿ ಚುಟುಕಗಳಂತಿವೆ.. ಓದಿ.. ಹೇಳಿ)

Tuesday, January 9, 2018

ಮಲ ಹೊರುವ ಪದ್ಧತಿ ಇನ್ನೂ ಜೀವಂತ

               ಭಾರತದಲ್ಲಿ ಮಲ ಹೊರುವ ಪದ್ಧತಿಯನ್ನು ಈಗಾಗಲೇ ನಿಷೇಸಲಾಗಿದೆ. ಮಲಹೊರುವ ಪದ್ಧತಿಯ ವಿರುದ್ಧ ಸರ್ಕಾರಗಳು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೂ ಕೂಡ ಪದೇ ಪದೆ ಇದರಿಂದ ದುರ್ಘಟನೆಗಳು ಜರುಗುತ್ತಲೇ ಇವೆ. ಕರ್ನಾಟಕದಾದ್ಯಂತ ಈ ಪದ್ಧತಿ ಸಂಪೂರ್ಣವಾಗಿ ನಿಷೇಧವಾಗಿದೆ ಎನ್ನುವುದು ಸರ್ಕಾರ ನೀಡುವ ಮಾಹಿತಿ. ಆದರೆ ಇದರಿಂದಾಗಿ ಆಗೀಗ ಕಾರ್ಮಿಕರು ಸಾಯುತ್ತಿರುವ ನಿದರ್ಶನಗಳು ನಡೆಯುತ್ತಲೇ ಇದೆ. ಶಿಕ್ಷಾರ್ಹವಾಗಿದ್ದರೂ ಮಲದ ಗುಂಡಿಯೊಳಕ್ಕೆ ಇಳಿಸುವ ಕಾರ್ಯಗಳು ನಡೆಯುತ್ತಲೇ ಇದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದ್ದ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ.
                  ಮಲ ಹೊರುವ ಪದ್ಧತಿ ಜೀವಂತ ಇರುವ ಪೈಕಿ ದೇಶದಲ್ಲಿಯೇ ಬಿಹಾರ ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ನಂತರ ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ ಇದೆ. ವಿವಿಧ ದಾಖಲೆಗಳ ಪ್ರಕಾರ ಕರ್ನಾಟಕದಲ್ಲಿ 15400 ಜನರು ಇಂದಿಗೂ ಮಲಹೊರುವ ಪದ್ಧತಿಯಿಂದಲೇ ಬದುಕು ನಡೆಸುತ್ತಿದ್ದಾರೆ. ಇದೀಗ ಮ್ಯಾನ್‌ಹೋಲ್‌ಗೆ ಇಳಿದು ಕಾರ್ಮಿಕರು ಮೃತಪಟ್ಟ ದುರಂತ ಘಟನೆ ಮರುಕಳಿಸಿದೆ. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಒಂದರ ತ್ಯಾಜ್ಯ ಶುದ್ಧೀಕರಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮೂವರು ‘ಾನುವಾರ ಮೃತಪಟ್ಟಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಸಮೀಪದ ಬಂಡೇಪಾಳ್ಯದ ಎನ್. ಡಿ. ಸೆಲ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ದುರಂತದಲ್ಲಿ ಮ್ಯಾನ್‌ಹೋಲ್‌ನಲ್ಲಿ ಇಳಿದಿದ್ದ ಸರ್ಜಾಪುರದ ನಿವಾಸಿ  ಕೋಲಾರದ ನಾರಾಯಣ ಸ್ವಾಮಿ (40), ತುಮಕೂರಿನ ನಿಟ್ಟೂರಿನ ಶ್ರೀನಿವಾಸ್ (38), ಚಿಕ್ಕಮಗಳೂರಿನ ಮಹದೇವಪ್ಪ (35) ಮೃತಪಟ್ಟಿದ್ದು ಮಲ ಹೊರುವ ಪದ್ಧತಿಯ ದುರಂತಗ್ಳ ಸಾಲಿಗೆ ಇನ್ನೊಂದು ಸೇರ್ಪಡೆಯಾದಂತಾಗಿದೆ.


ಏನಿದು ಮಲ ಹೊರುವ ಪದ್ಧತಿ?
ಕಟ್ಟಿಕೊಂಡಿರುವ ಶೌಚಾಲಯ ಗುಂಡಿಗಳನ್ನು ಕಾರ್ಮಿಕರು  ಸ್ವಚ್ಛಗೊಳಿಸುವುದು, ಸೆಪ್ಟಿಕ್ ಟ್ಯಾಂಕುಗಳ ತ್ಯಾಜ್ಯಗಳನ್ನು ಬಕೆಟ್ ಅಥವಾ ಇನ್ಯಾವುದೇ ರೀತಿಯ ವಸ್ತುಗಳ ಮೂಲಕ ತಲೆಯ ಮೇಲೆ ಹೊತ್ತು ಬೇರೆಡೆಗೆ ಸಾಗಿಸುವುದನ್ನೇ ಮಲ ಹೊರುವ ಪದ್ಧತಿ ಎನ್ನಲಾಗುತ್ತದೆ. ಹಾಳಾಗಿರುವ ಶೌಚಾಲಯದ ಗುಂಡಿಗಳನ್ನು ಸ್ವಚ್ಛಗೊಳಿಸುವುದೂ ಕೂಡ ಮಲಹೊರುವ ಪದ್ಧತಿಯ ವ್ಯಾಪ್ತಿಯಲ್ಲಿಯೇ ಬರುತ್ತದೆ. ಮಲವನ್ನು ಹೊರುವುದಕ್ಕೇ ಪ್ರತ್ಯೇಕ ವ್ಯಕ್ತಿಗಳಿದ್ದು, ಶೌಚಾಲಯದ ಟ್ಯಾಂಕ್‌ಗಳಿಗೆ ಇಳಿದು ಸ್ವಚ್ಛಗೊಳಿಸುತ್ತಾರೆ. ಮಲಹೊರುವ ಪದ್ಧತಿಯನ್ನೇ ಜೀವನಾಧಾರ ಮಾಡಿಕೊಂಡಿರುವ ವರ್ಗವೊಂದಿದ್ದುಘಿ, ಮಲ ಹೊರುವ ಮೂಲಕ ಬರುವ ಆದಾಯವನ್ನು ಜೀವನ ನಿರ್ವಹಣೆಗೆ ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ಕಾರ್ಮಿಕರನ್ನು ಮಲ ಹೊರುವ ಪದ್ಧತಿಗೆ ಬಲವಂತವಾಗಿಯೂ ತಳ್ಳಲಾಗುತ್ತಿದೆ. ಜೊತೆಗೆ ವಿವಿಧ ಆಮಿಷಗಳನ್ನು ಒಡ್ಡುವ ಮೂಲಕ ಮಲ ಹೊರುವ ಪದ್ಧತಿಯ ಕಡೆಗೆ ತಳ್ಳಲಾಗುತ್ತಿದೆ.

ಇತಿಹಾಸ
ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹರಪ್ಪ-ಮೊಹೆಂಜೋದಾರೋ ನಾಗರೀಕತೆಯ ಕಾಲದಿಂದಲೂ ಮಲ ಹೊರುವ ಪದ್ಧತಿ ಅಸ್ತಿತ್ವದಲ್ಲಿ ಇರುವುದು ಗಮನಕ್ಕೆ ಬರುತ್ತದೆ. ತದನಂತರದಲ್ಲಿ ಇದೊಂದು ಜಾತಿ ಆಧಾರಿತ ಕಸುಬಾಗಿ ಬೆಳೆದು ಬಂದಿದೆ. ಮಧ್ಯ ಕಾಲೀನ ಭಾರತದಲ್ಲಿ ಮಲ ಹೊರಲು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನೇ ಬಳಕೆ ಮಾಡಲಾಗುತ್ತಿತ್ತು. ಅಲ್ಲದೇ ವ್ಯಾಪಕವಾಗಿ ಜಾರಿಯಲ್ಲಿತ್ತು ಎನ್ನುವುದನ್ನು ಆ ಸಂದ‘ರ್ಗಳ ಸಾಹಿತ್ಯ ಕೃತಿಗಳು ಪುಷ್ಠಿ ನೀಡುತ್ತವೆ. ಬೌದ್ಧರ ಕಾಲದಲ್ಲಿ ಹಾಗೂ ವೌರ್ಯರ ಕಾಲದಲ್ಲಿಯೂ ಮಲ ಹೊರುವ ಪದ್ಧತಿ ಜಾರಿಯಲ್ಲಿತ್ತು. 1556ರಲ್ಲಿ ಜುನಾಘಡದಲ್ಲಿ 100ಕ್ಕೂ ಅಕ ಮಲಹೊರುವ ಕುಟುಂಬಗಳಿದ್ದವು ಎಂಬುದು ದಾಖಲೆಗಳಲ್ಲಿ ಉಲ್ಲೇಖಗೊಂಡಿದೆ. ಮೊಘಲರು ಹಾಗೂ ರಜಪೂತರ ಕಾಲದಲ್ಲಿ ಮಲ ಹೊರುವವರನ್ನು ಭಂಗಿಗಳು ಎಂದು ಕರೆದ ಉಲ್ಲೇಖ ಕೂಡ ಇದೆ. ಬ್ರಿಟೀಷ್ ಆಡಳಿತದ ಸಂದರ್ಭದಲ್ಲಿ ನಗರ ಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಲ ಹೊರುವ ಕಾರ್ಮಿಕರನ್ನು ನೇಮಕ ಮಾಡಿಕೊಂಡ ನಿದರ್ಶನಗಳಿವೆ.
ಭಾರತದಲ್ಲಿ ಮಾತ್ರವಲ್ಲ ಯೂರೋಪ್ ರಾಷ್ಟ್ರಗಳು ಮಲಹೊರುವ ಪದ್ಧತಿ ಇದೆ. ಮಲಹೊರುವ ಪ್ರತ್ಯೇಕ ಜಾತಿಯೂ ಕೂಡ ಯೂರೋಪ್ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದೆ. ಯೂರೋಪ್ ರಾಷ್ಟ್ರಗಳಲ್ಲಿ ಮಲ ಹೊರುವವರನ್ನು ನೈಟ್ ಸಾಯಿಲ್ ಕಲೆಕ್ಟರ್ಸ್‌ ಎಂದು ಕರೆಯಲಾಗುತ್ತದೆ. ಅಥವಾ ನೈಟ್‌ಮೆನ್ಸ್ ಹಾಗೂ ಗಾಂಗ್ ಫಾರ್ಮರ್ಸ್ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ 20ನೇ ಶತಮಾನದ ಉತ್ತರಾ‘ರ್ದ ವರೆಗೂ ಮಲಹೊರುವ ಪದ್ಧತಿ ಜೀವಂತ ಇತ್ತುಘಿ. ಆಸ್ಟ್ರೇಲಿಯಾದಲ್ಲಿ ಮಲ ಹೊರುವವರನ್ನು ಡನ್ನೀ ಮ್ಯಾನ್ಸ್ ಎಂದೂ ಮಲ ಹೊರುವ ಪದ್ಧತಿಗೆ ಡನ್ನೀಸ್ ಎಂದೂ ಕರೆಯಲಾಗುತ್ತಿತ್ತುಘಿ. ಹೈಟಿ ಗಣರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇಂದಿಗೂ ಜಾರಿಯಲ್ಲಿದ್ದು ಇವರನ್ನು ಬೈಹೋಕು ಎಂದು ಕರೆಯಲಾಗುತ್ತದೆ.

ಮಲ ಹೊರುವ ಪದ್ಧತಿ ನಿಷೇ
ಭಾರತದಲ್ಲಿ ಮಲ ಹೊರುವ ಪದ್ಧತಿಯನ್ನು ನಿಷೇಸಲಾಗಿದೆ. 1950ರ ದಶಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಜಿ. ಎಸ್. ಲಕ್ಷ್ಮಣ ಅಯ್ಯರ್ ಅವರು ಗೋಬಿಚೆಟ್ಟಿಪಾಳ್ಯಂ ಮುನ್ಸಿಪಾಲ್ಟಿಯಲ್ಲಿ ಮಲಹೊರುವ ಪದ್ಧತಿಯನ್ನು ಮೊಟ್ಟ ಮೊದಲ ಬಾರಿಗೆ ನಿಷೇ‘ ಮಾಡಿದರು. ನಂತರ ವಿವಿಧ ನಗರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಮಲ ಹೊರುವ ಪದ್ಧತಿ ನಿಷೇಸಲಾಯಿತು.

1993ರಲ್ಲಿ ಪ್ರತ್ಯೇಕ ಕಾಯ್ದೆ :
1993ರಲ್ಲಿ ಮಲ ಹೊರುವುದನ್ನು ನಿಷೇಸುವ ಸಲುವಾಗಿಯೇ ದಿ ಎಂಪ್ಲಾಯ್‌ಮೆಂಟ್ ಆ್ ಮ್ಯಾನುವಲ್ ಸ್ಕೇವೇಜಿಂಗ್ ಆ್ಯಂಡ್ ಕನ್ಸ್‌ಟ್ರಕ್ಷನ್ ಆ್ ಡ್ರೈ ಲ್ಯಾಟ್ರೀನ್ಸ್ (ನಿಷೇ‘) ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಅನ್ವಯ ಮಲ ಹೊರುವ ಪದ್ಧತಿ ಶಿಕ್ಷಾರ್ಹ ಎಂದು ಘೋಷಿಸಲಾಯಿತಲ್ಲದೇ ದೇಶಾದ್ಯಂತ ಮಲ ಹೊರುವ ಪದ್ಧತಿಯನ್ನು ನಿಷೇಸಲಾಯಿತು. ಪ್ರ‘ಾನ ಮಂತ್ರಿ ನರಸಿಂಹರಾವ್ ಸರ್ಕಾರದ ಆಡಳಿತಾವಯಲ್ಲಿ ಈ ಕಾನೂನನ್ನು ಜಾರಿಗೆ ತರಲಾಯಿತು. ಈ ಕಾನೂನಿನ ಪ್ರಕಾರ ಒಣಗಿದ ಶೌಚಾಲಯ ಟ್ಯಾಂಕ್ ಸ್ವಚ್ಛಗೊಳಿಸಲು ನೇರವಾಗಿ ಅಥವಾ ಪರೋಕ್ಷವಾಗಿ ನೇಮಕ ಮಾಡಿಕೊಂಡರೆ ಅಥವಾ ಬಳಕೆ ಮಾಡಿಕೊಂಡರೆ 1 ವರ್ಷ ಜೈಲು ಶಿಕ್ಷೆ ಹಾಗೂ 2000 ರೂಪಾಯಿ ದಂಡ ವಿಸುವುದು ಹಾಗೂ ಮಲ ಹೊರುವುದಕ್ಕೆ ಒತ್ತಾಯ ಮಾಡಿದರೆ ಅಥವಾ ಬಲವಂತವಾಗಿ ಮಲ ಹೊರಿಸಿದರೆ ಕನಿಷ್ಟ 20 ವರ್ಷ ಜೈಲುಶಿಕ್ಷೆಯ ವಿಧಿಸಲಾಗುತ್ತದೆ.

2013ರ ಎಂ. ಎಸ್ ಕಾಯ್ದೆ (ದಿ ಪ್ರಾಹಿಬಿಷನ್ ಆ್ ಎಂಪ್ಲಾಯ್‌ಮೆಂಟ್ ಆಸ್ ಮ್ಯಾನ್ಯುಯಲ್ ಸ್ಕೇವೇಜರ್ಸ್ ಆ್ಯಂಡ್ ದೇರ್ ರಿಹ್ಯಾಬಿಲಿಯೇಶನ್ ಆಕ್ಟ್ )
2013ರ ಸೆಪ್ಟೆಂಬರ್ ತಿಂಗಳಿನಲಲ್ಲಿ ಮಲ ಹೊರುವ ಪದ್ಧತಿ ನಿಷೇ‘ ಹಾಗೂ ಮಲ ಹೊರುವವರಿಗೆ ಪುನರ್ವಸತಿ ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಪ್ರಕಾರ ಮಲ ಹೊರುವುದನ್ನು ದೇಶಾದ್ಯಂತ ನಿಷೇಸುವುದಲ್ಲದೇ, ಮಲ ಹೊರುವವರಿಗೆ ವಸತಿ, ಜಮೀನು ಸೇರಿದಂತೆ ಸಕಲ ರೀತಿಯ ಸರ್ಕಾರಿ ಸೌಲ‘್ಯಗಳನ್ನು ಒದಗಿಸುವ ನಿರ್ಣಯ ಕೈಗೊಳ್ಳಲಾಯಿತು. ಸುಪ್ರಿಂ ಕೋರ್ಟ್ ಕೂಡ ಮಲ ಹೊರುವ ಪದ್ಧತಿಯನ್ನು ನಿಷೇಸಿದ್ದಲ್ಲದೇ ಶಿಕ್ಷಾರ್ಹ ಎಂದು ಘೊಷಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಲ ಹೊರುವ ಪದ್ಧತಿಯನ್ನು ತಡೆಯುವ ನಿಟ್ಟಿನಲ್ಲಿ ಕಾಯ್ದೆಯನ್ನು ರೂಪಿಸಿತು. ಪ್ರಸ್ತುತ ಈ ಕಾಯ್ದೆಯನ್ನು ಉಲ್ಲಂಘಿಸಿದರೆ 2 ಲಕ್ಷ ರೂಪಾಯಿಗಳಷ್ಟು ದಂಡ ಹಾಗೂ 6 ತಿಂಗಳ ವರೆಗೆ ಜಾಮೀನುರಹಿತ ಶಿಕ್ಷೆಯನ್ನು ವಿಸಲಾಗುತ್ತದೆ.

ಪ್ರಸ್ತುತ ಪರಿಸ್ಥಿತಿ
ವಿವಿ‘ ಖಾಸಗಿ ಸಂಸ್ಥೆಗಳು ನಡೆಸಿದ ಅ‘್ಯಯನದ ಪ್ರಕಾರ ಭಾರತದಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ. ಭಾರತದ ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತ್ರಿಪುರ, ಗುಜರಾತ್ ಈ ಮುಂತಾದ ರಾಜ್ಯಗಳಲ್ಲಿ ಮಲ ಹೊರುವ ಪದ್ಧತಿ ಹೆಚ್ಚಿನ ಸಂಖ್ಯೆಯಲ್ಲಿದೆ. ದಾಖಲೆಯೊಂದರ ಪ್ರಕಾರ ದೇಶದ 9 ರಾಜ್ಯಗಳಲ್ಲಿ ಮಲ ಹೊರುವ ಪದ್ಧತಿ ಜೀವಂತವಾಗಿದೆ. ಅದರಲ್ಲಿ ಕರ್ನಾಟಕವೂ ಒಂದು ಎನ್ನುವ ಕುಖ್ಯಾತಿಯಿದೆ. 2011ರ ಜನಗಣತಿಯ ಪ್ರಕಾರ ದೇಶದಾದ್ಯಂತ 7,94,000 ಪ್ರಕರಣಗಳು ದಾಖಲಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 13 ಸಾವಿರಕ್ಕೂ ಅಕ ಮಲಹೊರುವವರನ್ನು ಗುರುತಿಸಲಾಗಿದೆ. ಅಲ್ಲದೇ 2013ರಲ್ಲಿ ಸಾಯಿ ಕರ್ಮಚಾರಿ ಆಯೋಹವು ಮನೆ ಮನೆಗೂ ತೆರಳಿ ಮಲ ಹೊರುವ ಕಾರ್ಯದಲ್ಲಿ ತೊಡಗಿರುವವರನ್ನು ಗುರುತಿಸಿದ್ದಾರೆ. ಆ ಪ್ರಕಾರವಾಗಿ ಬೆಂಗಳೂರಿನಲ್ಲಿ ಇಂದಿಗೂ 202 ಜನರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ಗ್ರಾಮೀಣ ‘ಾಗಗಳಲ್ಲಿ 470 ಹಾಗೂ ನಗರ ಪ್ರದೇಶಗಳಲ್ಲಿ 302 ಜನರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯದ ವಿವಿ‘ ಜಿಲ್ಲೆಗಳಲ್ಲಿ ಮಲ ಹೊರುವ ಪದ್ಧತಿ ಆಗಾಗ ಬೆಳಕಿಗೆ ಬರುತ್ತಲೇ ಇದೆ. 6 ತಿಂಗಳ ಹಿಂದೆ ಮೈಸೂರಿನಲ್ಲಿ ಗ್ರಾಘಿ.ಪಂ ಅ‘್ಯಕ್ಷೆಯೋರ್ವರು ಬಲವಂತವಾಗಿ ಕಾರ್ಮಿಕನೋರ್ವನನ್ನು ಮಲದ ಗುಂಡಿಗೆ ಇಳಿಸಿದ್ದು ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತುಘಿ.

ರಾಜ್ಯದಲ್ಲಿ ಮ್ಯಾನ್‌ಹೋಲ್‌ನಲ್ಲಿ ಸತ್ತವರು
2008ರ ನವೆಂಬರ್ 14ರಂದು ಯಲಹಂಕ ನ್ಯೂಟೌನ್‌ನಲ್ಲಿ ಮೃತಪಟ್ಟವರ ಸಂಕ್ಯೆ 3
2009ರ ಮೇ 9ರಂದು ಪೀಣ್ಯ 2ನೇ ಹಂತದಲ್ಲಿ ಮೃತಪಟ್ಟವರ ಸಂಕ್ಯೆ 3
2012ರ ಜುಲೈ 14ರಂದು ಅರಕೆರೆಯಲ್ಲಿ ಮೃತಪಟ್ಟವರ ಸಂಕ್ಯೆ 2
2014ರ ಜನವರಿ 18ರಂದು ಕೆ. ಪಿ. ಅಗ್ರಹಾರದಲ್ಲಿ ಮೃತಪಟ್ಟವರ ಸಂಖ್ಯೆ 2
2014ರ ಆಗಸ್ಟ್ 30ರಂದು ಮಹದೇವಪುರದಲ್ಲಿ ಮೃತಪಟ್ಟವರ ಸಂಖ್ಯೆ 1
2014ರ ಸೆಪ್ಟೆಂಬರ್ 24ರಂದು ನಾಗವಾರದಲ್ಲಿ ಮೃತಪಟ್ಟವರ ಸಂಖ್ಯೆ 2
2015ರ ಜುಲೈ 15ರಂದು ಯಲಹಂಕದಲ್ಲಿ ಸತ್ತವರ ಸಂಕ್ಯೆ 2
2015ರ ಆಗಸ್ಟ್ 18ರಂದು ಜಯಮಹಲ್‌ನಲ್ಲಿ ಸತ್ತವರ ಸಂಕ್ಯೆ 2
2015ರ ಆಗಸ್ಟ್ 19ರಂದು ಗೋರಗುಂಟೆ ಪಾಳ್ಯದಲ್ಲಿ ಸತ್ತವರ ಸಂಕ್ಯೆ 2
2016ರ ಮಾರ್ಚ್ 7ರಂದು ಕಗ್ಗದಾಸಪುರದಲ್ಲಿ ಸತ್ತವರ ಸಂಕ್ಯೆ 3
2008ರಿಂದ 10 ವರ್ಷಗಳ ಅವಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮ್ಯಾನ್‌ಹೋಲ್ ಮತ್ತು ಎಸ್‌ಟಿಪಿ ದುರಸ್ತಿ ವೇಳೆ ಒಟ್ಟೂ 31 ಜನರು ಮೃತಪಟ್ಟಿದ್ದಾರೆ.

ನಿಯಮಗಳು
ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳ ಒಳಚರಂಡಿ ಸುರಕ್ಷತಾ ಕೈಪಿಡಿ ಕರಡು 2012ರ ನಿಯಮಗಳ ಪ್ರಕಾರ ಪರ್ಯಾಯ ಮಾರ್ಗಗಳಿಲ್ಲದ ಸಂದ‘ರ್ದಲ್ಲಿ ಅಗತ್ಯದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಅಥವಾ ಎಸ್‌ಟಿಪಿಗೆ ಇಳಿಸಬಹುದು. ಆದರೆ ಒಳಗೆ ಇಳಿದ ಸಂದ‘ರ್ಗಳಲ್ಲಿ ಅವರಿಗೆ ಆಮ್ಲಜನಕ ಪೂರೈಸುವುದು ಸೇರಿದಂತೆ ಅಗತ್ಯ ಸುರಕ್ಷತೆಗಳನ್ನು ಒದಗಿಸಬೇಕು.
ಮ್ಯಾನ್‌ಹೋಲ್‌ನಲ್ಲಿ ಹಾಗೂ ಎಸ್‌ಟಿಪಿಗಳಲ್ಲಿ ಮೀಥೇನ್, ಕಾರ್ಬನ್ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲಗಳಿರುತ್ತವೆ. ಹೀಗಾಗಿ ಇಳಿಯುವುದಕ್ಕೂ ಮೊದಲು ಕನಿಷ್ಠ ಒಂದು ತಾಸುಗಳ ಕಾಲ ಮುಚ್ಚಳವನ್ನು ತೆರೆದಿಡಬೇಕು. ಇಳಿಯುವುದಕ್ಕೂ ಮೊದಲು ಮೈಗೆ ಕೊಬ್ಬರಿ ಎಣ್ಣೆ ಸವರಿಕೊಂಡು, ಮಾಸ್ಕ್‌, ಕೈಗವಸು ಹಾಗೂ ಬೂಟು ಧರಿಸಿ ಗುಂಡಿಗೆ ಇಳಿಯಬೇಕು.
ನಂತರ ಪ್ರತಿ ಮೂರು ನಿಮಿಷಕ್ಕೊಮ್ಮೆ ಸಹಾಯಕರು ಅನಿಲ ಪರೀಕ್ಷೆ ಮಾಡುತ್ತಿರಬೇಕು. ಗುಂಡಿಯೊಳಗಿನ ವಿಷ ಅನಿಲದಿಂದ ರಕ್ಷಣೆ ನೀಡಲು ಹೊರಗಿನ ಗಾಳಿಯನ್ನು ಬ್ಲೋವರ್ಸ್ ಮೂಲಕ ಒಳಗೆ ಹಾಯಿಸಬೇಕು. ಜೊತೆಗೆ ಗುಂಡಿಯೊಳಕ್ಕೆ ಇಳಿದ ಕಾರ್ಮಿಕರ ಜೊತೆ ಸದಾ ಮಾತನಾಡುತ್ತಿರಬೇಕು.

ಮಲ ಹೊರುವ ಪದ್ಧತಿ ವಿರುದ್ಧ ಜಾಗೃತಿ
ಬೆಜವಾಡ ವಿಲ್ಸನ್‌ಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ
ಕೆಜಿಎ್ನ ಬೆಜವಾಡ ವಿಲ್ಸನ್ ಅವರು ಮಲ ಹೊರುವ ಪದ್ಧತಿಯ ವಿರುದ್ಧ ಜನಜಾಗೃತಿ ಕಾರ್ಯಗಳನ್ನು ಕೈಗೊಂಡವರು. ರಾಷ್ಟ್ರೀಯ ಸಾಯಿ ಕರ್ಮಚಾರಿ ಆಂದೋಲನದ ಸಂಚಾಲಕರು. 1986ರಿಂದ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿಯ ವಿರುದ್ಧ ಮಲ ಹೊರುವ ಕಾರ್ಮಿಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳುತ್ತ ಬಂದಿದ್ದಾರೆ. ಕೋಲಾರದ ಕೆಜಿಎ್ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಆಂದೋಲನ ಕೈಗೊಂಡರು. ಮಲ ಹೊರುವ ಪದ್ಧತಿ ನಿಷೇಸುವಂತೆ ರಾಷ್ಟ್ರಪತಿ, ಪ್ರ‘ಾನ ಮಂತ್ರಿ ಹಾಗೂ ಇತರ ಜನಪ್ರತಿನಿಗಳಿಗೆ ಪತ್ರ ಚಳುವಳಿ ಮೂಲಕ ತ್ತಡ ಹೇರಿದರು. ಇವರಿಗೆ 2017ರ ಜುಲೈ 27ರಂದು ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿದೆ.

ಆಗಬೇಕಿದೆ ಕಟ್ಟುನಿಟ್ಟಿನ ಕ್ರಮ :
ಮಲ ಹೊರುವ ಪದ್ಧತಿ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ನಿಷೇ‘ವಾಗಬೇಕಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಈ ಪದ್ಧತಿಯಿಂದಾಗಿ ಕಾರ್ಮಿಕರು ಸಾಯುತ್ತಿದ್ದರೂ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಮಲ ಹೊರುವವರಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಮಲ ಹೊರಲು ಒತ್ತಾಯಿಸುವವರ ಹಾಗೂ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಾಗ ಮಾತ್ರ ಮಲ ಹೊರುವ ಪದ್ಧತಿಯನ್ನು ಅಂತ್ಯಗೊಳಿಸಬಹುದಾಗಿದೆ.

Thursday, January 4, 2018

ಕೊನೆ ಗೌಡ ಬರ್ತ್ನೋ ಇಲ್ಯೋ


ಅಡಿಕೆಯೆಲ್ಲ ಹಣ್ಣಾತು
ಗೋಟಾಗಿ ಉದುರಿ ಹೋತು
ಇವತ್ತಾದ್ರೂ
ಕೊನೆ ಗೌಡ ಬರ್ತ್ನೋ ಇಲ್ಯೋ |

ಮುಂಗಡ ದುಡ್ ಕೊಟ್ಟಿದ್ದಿದ್ದು
ಅಡಕೆ ಹೆಕ್ಕವ್ ಬಂದದ್ದಿದ್ದು
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಕೊನೆ ಹಿಡಿಯಂವ್ ತಯಾರಿದ್ದ
ಅಡಿಗೆ ಮಾಡವ್ವೂ ಗಟ್ಯಾಗಿದ್ದ
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಎಂಟು ನೂರು ರೂಪಾಯ್ ಕೊಡಂವ್ ಇದ್ದಿ
ಮೆಹರುಬಾನಿಕೆ ಮಾಡಂವ್ ಇದ್ದಿ
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಎಲ್ಲಾ ಅಡಿಕೆ ಉದುರ್ತಾ ಇದ್ದು
ಮಂಡಗಾದಿಗೆಲ್ ತೇಲ್ತಾ ಇದ್ದು
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಅಡಿಕೆಗೆ ರೇಟು ಚೊಲೋ ಬಂಜು
ಕೆಜಿಗೆ ಸಾವಿರ ದಾಟಿ ಹೋಜು
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

-------------

(ಈ ಕವಿತೆ ಬರೆದಿದ್ದು ಜ.4, 2018ರಂದು, ಬೆಂಗಳೂರಿನಲ್ಲಿ)



Tuesday, January 2, 2018

ಕೆಚ್ಚಲು ಬಾವಿಗೆ ಇಲ್ಲಿದೆ ಮದ್ದು

       ಕೆಚ್ಚಲು ಬಾವು ಅಥವಾ ರಾಸುಗಳ ಕೆಚ್ಚಲಿನಲ್ಲಿ ಗಡ್ಡೆಗಳು ಉಂಟಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ.  ಎಲ್ಲಾ ಋತುಗಳ ಪ್ರಾರಂಭದಲ್ಲಿಯೂ ಕಾಣಿಸಿಕೊಳ್ಳುವ ಕೆಚ್ಚಲುಬಾವು ಹಸುಗಳು, ಎಮ್ಮೆಗಳನ್ನು ಬಾಧಿಸುತ್ತವೆ. ಇಂತಹ ಕೆಚ್ಚಲು ಬಾವಿಗೆ ಪರಿಣಾಮಕಾರಿಯಾಗಿ ಔಷಧಿ ನೀಡುವವರೊಬ್ಬರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿದ್ದಾರೆ. ನಾಟಿ ಔಷಧಿ ಮೂಲಕ ಕೆಚ್ಚಲು ಬಾವನ್ನು ಸಂಪೂರ್ಣವಾಗಿ ಗುಣಪಡಿಸುತ್ತಾರೆ.

ಏನಿದು ಕೆಚ್ಚಲು ಬಾವು ?
ವಾತಾವರಣದ ವೈಪರಿತ್ಯ ಹಾಗೂ ಆಹಾರದ ಬದಲಾವಣೆಯಿಂದಾಗಿ ಸಾಮಾನ್ಯವಾಗಿ ಕೆಚ್ಚಲುಬಾವು ಉಂಟಾಗುತ್ತದೆ. ಬ್ಯಾಕ್ಟೀರಿಯಾದ ಸೋಂಕಿನಿಂದಲೂ ಇದು ಉಂಟಾಗುತ್ತದೆ ಎನ್ನಲಾಗುತ್ತದೆ. ಹಾಲು ನೀಡುವ ರಾಸುಗಳ ಕೆಚ್ಚಲಿನಲ್ಲಿ ಬಾವು ಉಂಟಾಗುತ್ತದೆ. ಒಂದೆರಡು ದಿನಗಳಲ್ಲಿಯೇ ಇದು ಗಡ್ಡೆಗಟ್ಟುತ್ತದೆ. ತೀರಾ ವಿಳಂಬ ಮಾಡಿದರೆ ಕೆಲವೊಮ್ಮೆ ಕೆಚ್ಚಲುಗಳು ಕೆಂಪು ಬಣ್ಣಕ್ಕೆ ತಿರುಗುವುದೂ ಇದೆ. ಸಾಮಾನ್ಯವಾಗಿ ಕೆಚ್ಚಲುಬಾವಿಗೆ ಪರಿಣಾಮಕಾರಿಯಾಗಿ ಮದ್ದು ಮಾಡದೇ ಇದ್ದಲ್ಲಿ ರಾಸುಗಳು ಹಾಲು ಕೊಡುವುದನ್ನೇ ನಿಲ್ಲಿಸಬಹುದು.
ಇಂತಹ ಕೆಚ್ಚಲುಬಾವಿಗೆ ಆಂಗ್ಲ ವೈದ್ಯ ಪದ್ಧತಿಯಲ್ಲಿ ಕೆಲವು ಮಾತ್ರೆಗಳೂ ಇವೆ. ಪಶುವೈದ್ಯರು ಮೊಲೆಗಳ ರಂಧ್ರಕ್ಕೆ ಟ್ಯೂಬನ್ನು ಏರಿಸಿ ಕೆಚ್ಚಲು ಬಾವಿನಿಂದ ಹಾಲು ನಿಲ್ಲುವ ಸಮಸ್ಯೆಗೆ ಪರಿಹಾರ ಮಾಡುತ್ತಾರೆ. ಆದರೆ ಈ ಪದ್ಧತಿ ಕೂಡ ಪರಿಣಾಮಕಾರಿಯಲ್ಲ ಎನ್ನುವ ಭಾವನೆಗಳಿವೆ. ಅಲ್ಲದೇ ಟ್ಯೂಬ್ ಏರಿಸಿದ ನಂತರದಲ್ಲಿ ರಾಸುಗಳ ಕೆಚ್ಚಲಿನಿಂದ ಹಾಲು ಸುರಿಯುವುದು ನಿಲ್ಲುವುದೇ ಇಲ್ಲ ಎಂದೋ ಅಥವಾ ಮೊಲೆಗಳ ರಂಧ್ರ ದೊಡ್ಡದಾಗಿ ಸಮಸ್ಯೆಗಳು ಉಂಟಾದ ಸಂದರ್ಭಗಳಿವೆ.
ಹೋಮಿಯೋಪತಿ ವೈದ್ಯಪದ್ಧತಿಯಲ್ಲಿಯೂ ಕೂಡ ಕೆಚ್ಚಲುಬಾವಿಗೆ ಔಷಧ ಇದೆಯಾದರೂ ಕೆಚ್ಚಲಿನಲ್ಲಿ ಉಂಟಾಗಿರುವ ಗಡ್ಡೆಗಳು ಕರಗುವುದೇ ಇಲ್ಲ ಎನ್ನುವ ಮಾತುಗಳು ಹಲವರಿಂದ ಕೇಳಿ ಬಂದಿವೆ. ಕೆಚ್ಚಲುಬಾವಿಗೆ ಇತ್ತೀಚಿನ ದಿನಗಳಲ್ಲಿ ಔಷಧಿ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಸಂಪೂರ್ಣವಾಗಿ ಅವು ಫಲಪ್ರದವಾಗಿಲ್ಲ.

ಪರಿಣಾಮಕಾರಿ ಔಷಧಿ ನೀಡುವ ಸುಬ್ಬಣ್ಣ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ದಂಟಕಲ್ಲಿನ ಸುಬ್ರಾಯ ಹೆಗಡೆ ಅವರು ಕೆಚ್ಚಲು ಬಾವಿಗೆ ಪರಿಣಾಮಕಾರಿಯಾದ ಔಷಧಿಯನ್ನು ನೀಡುತ್ತಾರೆ. ನಾಟಿ ಪದ್ಧತಿಯ ಮೂಲಕ ಔಷಧಿಯನ್ನು ನೀಡುವ ಇವರು ಅದಕ್ಕೆ ಪ್ರತಿಯಾಗಿ ಕೇವಲ ಒಂದು ಅಥವಾ ಎರಡು ತೆಂಗಿನಕಾಯಿಗಳನ್ನು ಪ್ರತಿಫಲದ ರೂಪದಲ್ಲಿ ಪಡೆಯುತ್ತಾರೆ. ಸುಬ್ರಾಯ ಹೆಗಡೆ ಅವರು ನೀಡುವ ಔಷಧದಿಂದ ಇದುವರೆಗೂ ಕೆಚ್ಚಲು ಬಾವು ಕಡಿಮೆಯಾಗಿಲ್ಲ ಎನ್ನುವ ಆರೋಪಗಳು ಬಂದೇ ಇಲ್ಲ. ಸಹಸ್ರ ಸಹಸ್ರ ಸಂಖ್ಯೆಯ ಜನರು ಬಂದು ತಮ್ಮ ಮನೆಯ ರಾಸುಗಳಿಗೆ ಔಷಧಿ ತೆಗೆದುಕೊಂಡು ಹೋಗಿದ್ದಾರೆ. ಕೆಚ್ಚಲು ಬಾವು ಸಮಸ್ಯೆ ಪರಿಹಾರಕ್ಕಾಗಿ ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದವರೂ ಕೂಡ ದಂಟಕಲ್ಲಿಗೆ ಆಗಮಿಸಿ ಔಷಧಿ ಪಡೆದು ಹೋಗಿದ್ದಾರೆ. ಎಲ್ಲ ವೈದ್ಯ ಪದ್ಧತಿ ಪ್ರಯೋಗ ಮಾಡಿಯೂ, ಇನ್ನೇನೂ ಸಾಧ್ಯವಿಲ್ಲ ಎನ್ನುವಂತವರು ಕೂಡ ಬಂದು ಔಷಧಿ ಪಡೆದು ಹೋಗಿದ್ದಾರೆ. ಈ ಔಷಧಿಯಿಂದ ಕೆಚ್ಚಲು ಬಾವು ಸಂಪೂರ್ಣವಾಗಿ ಕಡಿಮೆಯಾದಾಗ ಮತ್ತೊಮ್ಮೆ ಬಂದು ಸಂತಸವನ್ನು ಹಂಚಿಕೊಂಡು ಹೋಗಿದ್ದಾರೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಈ ಮುಂತಾದ ತಾಲೂಕುಗಳ ಜನರು ಇಂದಿಗೂ ಸುಬ್ರಾಯ ಹೆಗಡೆಯವರ ಬಳಿ ಬರುತ್ತಾರೆ. ಶಿರಸಿ, ಸಿದ್ದಾಪುರ ಸೇರಿದಂತೆ ಕೆಲವು ಕಡೆಗಳ ಪಶು ವೈದ್ಯರೂ ಕೂಡ ಸುಬ್ರಾಯ ಹೆಗಡೆ ಅವರು ನೀಡುವ ಔಷಧಿಯ ಕುರಿತು ಪಶುಪಾಲಕರಿಗೆ ತಿಳಿ ಹೇಳಿ ಔಷಧಿಗಾಗಿ ಕಳುಹಿಸಿದ ನಿದರ್ಶನಗಳಿವೆ. ಇತ್ತೀಚೆಗಷ್ಟೇ ಹೆಸರಾಂತ ವೈದ್ಯರೋರ್ವರು ಔಷಧಿಯ ಬಗ್ಗೆ ಕೇಳಿ, ದಂಟಕಲ್ಲಿಗೆ ಆಗಮಿಸಿ, ವನಸ್ಪತಿ ಸೊಪ್ಪುಗಳನ್ನು ಪಡೆದು, ಅಧ್ಯಯನಕ್ಕಾಗಿ ತೆರಳಿದ್ದಾರೆ ಎಂಬುದು ಸುಬ್ರಾಯ ಹೆಗಡೆ ಅವರ ಮಾತು.
ಸುಬ್ರಾಯ ಹೆಗಡೆಯವರು ವನಸ್ಪತಿ ಔಷಧಿಗೆ ಯಾವುದೇ ಛಾರ್ಜು ಮಾಡುವುದಿಲ್ಲ. ಅಲ್ಲದೇ ಇದು ಯಾವುದೇ ಅಡ್ಡ ಪರಿಣಾಮಗಳನ್ನೂ ಬೀರುವುದಿಲ್ಲ. ಹಾಲೂ ಕೂಡ ಅಲ್ಪ ಪ್ರಮಾಣದಲ್ಲಿ ಹೆಚ್ಚುತ್ತದೆ. ಕೆಚ್ಚಲು ಬಾವಿನ ಗಡ್ಡೆಗಳು ಸಂಪೂರ್ಣ ಕರಗುವುದರ ಜೊತೆಗೆ ಮೊಲೆಗಳು ಹಾಳಾಗುವುದಿಲ್ಲ ಎನ್ನುವುದು ಔಷಧಿ ಬಳಕೆ ಮಾಡಿದವರ ಅಂಬೋಣ.

ಸುಬ್ರಾಯ ಹೆಗಡೆಯವರನ್ನು 08389-295430, 9901343504 ಈ ದೂರವಾಣಿಯ ಮೂಲಕ ಸಂಪರ್ಕಿಸಬಹುದಾಗಿದೆ. ಇಲ್ಲವಾದಲ್ಲಿ ಶಿರಸಿಯಿಂದ ಸಿದ್ದಾಪುರ ರಸ್ತೆಯಲ್ಲಿ 14 ಕಿಮಿ ದೂರವಿರುವ ದಂಟಕಲ್ ಗೆ ತೆರಳಿ ಖುದ್ದಾಗಿ ಭೇಟಿ ಮಾಡಬಹುದಾಗಿದೆ. ವಾರದಲ್ಲಿ ಯಾವುದೇ ದಿನ ಹಾಗೂ ದಿನದ ಯಾವುದೇ ಸಮಯದಲ್ಲಿಯೂ ವನಸ್ಪತಿಗಳನ್ನು ಪಡೆದುಕೊಳ್ಳಬಹುದು. (ಭೇಟಿ ಮಾಡುವವರು ಮೊದಲೇ ದೂರವಾಣಿಯ ಮೂಲಕ ತಿಳಿಸಿದ್ದರೆ ಉತ್ತಮ.)

ಭೇಟಿಗೆ ಹೋಗುವ ಬಗೆ : ಶಿರಸಿ-ಸಿದ್ದಾಪುರ ಮಾರ್ಗದಲ್ಲಿ 12 ಕಿಮಿ ಪ್ರಯಾಣ ಮಾಡಿ-ಅಡಕಳ್ಳಿ ಕ್ರಾಸ್ ಬಳಿ ಬಲಕ್ಕೆ ತಿರುಗಿ 2 ಕಿಮಿ ಪ್ರಯಾಣಿಸಿ ಅಡಕಳ್ಳಿ ಶಾಲೆಯಿಂದ ಎಡಕ್ಕೆ ಹೊರಳಿ ದಂಟಕಲ್ ತಲುಪಬಹುದು. ಸಿದ್ದಾಪುರದಿಂದ ಬರುವವರು ಕಾನಸೂರಿನ ನಂತರ ಅಡಕಳ್ಳಿ ಕ್ರಾಸ್ ತಲುಪಿ ಅಲ್ಲಿಂದ ಸೀದಾ ಬರಬಹುದು.

ಸಿನಿ ತಾರಾಜಕೀಯ

ಚಿತ್ರನಟರುಗಳು ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸಿದ ನಿದರ್ಶನಗಳು ಹಲವಿದೆ. ಭಾರತದಲ್ಲಿ ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಲನಚಿತ್ರ ನಟರುಗಳೇ ಹೊಸ ಪಕ್ಷವನ್ನು ನಕಟ್ಟಿ ಅಕಾರದ ಚುಕ್ಕಾಣಿ ಹಿಡಿದು, ಮುಖ್ಯಮಂತ್ರಿಯೂ ಆಗಿದ್ದಾರೆ. ಇನ್ನೂ ಹಲವು ನಟರುಗಳು ಪಕ್ಷ ಕಟ್ಟಿದರೂ ಆರಕ್ಕೇರದೇ, ಮೂರಕ್ಕಿಳಿಯದೇ ತೊಳಲಾಡಿದ ಸಂದರ್ಭಗಳೂ ಇದೆ. ಕೆಲವು ಚಿತ್ರನಟರುಗಳು, ನಟಿಯರುಗಳು ಯಾವುದಾದರೂ ಒಂದು ರಾಜಕೀಯ ಪಕ್ಷವನ್ನು ಸೇರಿ, ಶಾಸಕರಾಗಿಯೋ, ವಿಧಾನ ಪರಿಷತ್ ಸದಸ್ಯರಾಗಿಯೋ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ಕೆಲವರು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ತಮಿಳುನಾಡು, ಕರ್ನಾಟಕ, ಆಂದ್ರಪ್ರದೇಶ, ಕೇರಳ, ತೆಲಂಗಾಣಗಳಲ್ಲಿ ಚಿತ್ರನಟರು ರಾಜಕೀಯ ರಂಗಕ್ಕೆ ಕಾಲಿರಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಚಿತ್ರ ರಂಗಕ್ಕೆ ಕಾಲಿರಿಸಿದ ನಟರುಗಳ ಸಾಲಿಗೆ ತಮಿಳುನಾಡಿನ ಸೂಪರ್‌ಸ್ಟಾರ್ ರಜನೀಕಾಂತ್ ಸೇರ್ಪಡೆಯಾಗಿದ್ದಾರೆ. ಡಿ.31ರಂದು ರಜನೀಕಾಂತ್ ತಾವು ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ತಿಳಿಸಿದ್ದಾರೆ. ಇದು ತಮಿಳುನಾಡಿನಲ್ಲಿ ಸಂಚಲನಕ್ಕೂ ಕಾರಣವಾಗಿದೆ.

ಪಕ್ಷ ಕಟ್ಟಿ ಗೆದ್ದವರು
ದಕ್ಷಿಣ ಭಾರತದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಹಲವಾರು ಚಿತ್ರ ನಟರು ಪಕ್ಷವನ್ನು ಕಟ್ಟಿ ರಾಜ್ಯದ ಚುಕ್ಕಾಣಿ ಹಿಡಿದ ನಿದರ್ಶನಗಳಿವೆ. ಆಂದ್ರ ಪ್ರದೇಶದಲ್ಲಿ ಎನ್. ಟಿ. ರಾಮರಾವ್, ತಮಿಳುನಾಡಿನಲ್ಲಿ ಎಂ. ಜಿ. ರಾಮಚಂದ್ರನ್ ಇವರಲ್ಲಿ ಪ್ರಮುಖರು. ಇವರಲ್ಲದೇ ಆಂದ್ರ ಪ್ರದೇಶದಲ್ಲಿ ಚಿರಂಜೀವಿ, ಪವನ್ ಕಲ್ಯಾಣ್, ತಮಿಳುನಾಡಿನಲ್ಲಿ ವಿಜಯಕಾಂತ್ ಮತ್ತಿತರರು ಹೊಸ ಪಕ್ಷ ಕಟ್ಟಿ ಅದೃಷ್ಟ ಪರೀಕ್ಷೆ ನಡೆಸಿಕೊಂಡಿದ್ದಾರೆ. ಹಿಂದೆ  ಶಿವಾಜಿ ಗಣೇಶನ್ ಮತ್ತಿತರ ನಟರುಗಳೂ ಕೂಡ ರಾಜಕೀಯ ಪಕ್ಷ ಕಟ್ಟಿದ್ದರು. ಇದೀಗ ತಮಿಳುನಾಡಿನಲ್ಲಿ ಕಮಲ್ ಹಾಸನ್, ರಜನೀಕಾಂತ್, ಕನ್ನಡದಲ್ಲಿ ಉಪೇಂದ್ರ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಅಭಿಮಾನಿಗಳು ಈ ನಟರುಗಳ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತು ಗೆಲುವಿನ ಸವಿಯನ್ನು ಉಣಿಸುತ್ತಾರೋ ಕಾದು ನೋಡಬೇಕಿದೆ.
ಎಐಎಡಿಎಂಕೆ ಕಟ್ಟಿದ ಎಂ. ಜಿ. ರಾಮಚಂದ್ರನ್
ತಮಿಳುನಾಡಿನಲ್ಲಿ ಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳೇ ಪ್ರಾಬಲ್ಯ ಮೆರೆಯುತ್ತಿದ್ದ ಸಂದ‘ರ್ದಲ್ಲಿ ಹೊಸ ಪಕ್ಷ ಕಟ್ಟಿ ಅದೃಷ್ಟ ಪರೀಕ್ಷೆಗೆ ಮುಂದಾದವರು ತಮಿಳುನಾಡಿನ ಮೇರು ನಟ ಎಂ. ಜಿ. ರಾಮಚಂದ್ರನ್ ಅವರು. 1972ರ ಅಕ್ಟೋಬರ್ 7ರಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೆಟ್ರ ಕಳಗಂ ಎಂಬ ಪಕ್ಷವನ್ನು ರಚನೆ ಮಾಡಿದರು. ಚಿತ್ರನಟರೋರ್ವರು ಹೊಸ ಪಕ್ಷವನ್ನು ಕಟ್ಟಿದ ಮೊದಲ ನಿದರ್ಶನ ಇದಾಗಿತ್ತುಘಿ. ಎಂಜಿಆರ್ ನಿರ್ಧಾರದಿಂದ ತಮಿಳುನಾಡಿನಲ್ಲಿ ದೊಡ್ಡ ಅಚ್ಚರಿ ಉಂಟಾಗಿತ್ತುಘಿ. ಪಕ್ಷ ಘೋಷಣೆಗೂ ಮೊದಲು ಡಿಎಂಕೆ ಪಕ್ಷದಲ್ಲಿದ್ದ ಎಂಜಿಆರ್ ನಂತರದಲ್ಲಿ ಡಿಎಂಕೆ ನಾಯಕರೊಂದಿಗೆ ಉಂಟಾದ ಭಿನ್ನಮತದಿಂದ ಬೇರೆ ಪಕ್ಷ ರಚನೆಗೆ ಮುಂದಾದರು. ಅವರ ಈ ನಿರ್ಧಾರ ಫಲಕೊಟ್ಟಿತು. 1973ರ ಎಪ್ರೀಲ್ 2ರಂದು ನಡೆದ ತಮಿಳುನಾಡು ಚುನಾವಣೆಯಲ್ಲಿ ಪಕ್ಷ 11 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿ ಮೂರನೇ ಅತ್ಯಂತ ದೊಡ್ಡ ಪಕ್ಷ ಎಂದು ಹೆಸರಾಯಿತು. ಚಿತ್ರನಟನೋರ್ವನ ಹೊಸ ಪಕ್ಷ ಯಶಸ್ವಿಯಾಗಿತ್ತು. ತದನಂತರದಲ್ಲಿ ಈ ಪಕ್ಷ ತಮಿಳುನಾಡಿನಲ್ಲಿ ಅಕಾರದ ಚುಕ್ಕಾಣೀ ಹಿಡಿದಿದ್ದಲ್ಲದೇ ಎಂಜಿಆರ್ ಹಲವು ಸಾರಿ ಮುಖ್ಯಮಂತ್ರಿಯೂ ಆದರು. ಮೂರು ಸಾರಿ ಮುಖ್ಯಮಂತ್ರಿಯಾಗಿದ್ದ ಎಂಜಿಆರ್ ರಾಜಕಾರಣದಲ್ಲಿ ಯಶಸ್ವಿಯೂ ಆಗಿದ್ದರು.


ತೆಲುಗು ದೇಶಂ ಕಟ್ಟಿದ ಎನ್‌ಟಿಆರ್
ಎನ್. ಟಿ. ರಾಮರಾವ್ ಆಂಧ್ರ ಕಂಡ ಸೂಪರ್ ಸ್ಟಾರ್. ದಿಗ್ಗಜ ನಟ. ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಎಂಬ ಪಕ್ಷವನ್ನು ಕಟ್ಟಿದಾಗ ಹಲವರು ಅನುಮಾನದಿಂದ ನೋಡಿದ್ದರು. ತಮಿಳುನಾಡಿನಲ್ಲಿ ಎಂ. ಜಿ. ಆರ್ ಹಿಡಿದ ಹಾದಿಯನ್ನೇ ಇವರು ಆಯ್ಕೆ ಮಾಡಿಕೊಂಡರು. ಆ ಸಂದ‘ರ್ದಲ್ಲಿ ನಟನೆ ಬೇರೆ, ರಾಜಕಾರಣವೇ ಬೇರೆ ಎಂಬ ಮಾತುಗಳನ್ನು ಇವರ ಕುರಿತು ಆಡಲಾಗಿತ್ತುಘಿ. ಆಂಧ್ರದ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಮಾತ್ರ ಇದ್ದಾಗ ರಾಮರಾವ್ ಪಕ್ಷವನ್ನು ಘೋಷಿಸಿದರು. ಇದರಿಂದಾಗಿ ಆಂಧ್ರಪ್ರದೇಶ ಕೆಲಕಾಲ ಅಚ್ಚರಿಗೆ ಒಳಗಾಗಿತ್ತು. ಸರಣಿ ಪ್ರಚಾರ ಭಾಷಣಗಳು, ರ್ಯಾಲಿ, ಪ್ರವಾಸಗಳ ಮೂಲಕ ಆಂಧ್ರದಲ್ಲಿ ಸಂಚಲನ ಮೂಡಿಸಿದ ರಾಮರಾವ್ ವಿಧಾನ ಸಭೆ ಚುನಾವಣೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿದರು. 1982 ಮಾರ್ಚ್ 29ರಂದು ಪಕ್ಷವನ್ನು ಘೋಷಿಸಲಾಯಿತು. 1983ರಲ್ಲಿ ಪಕ್ಷ ಅಕಾರದ ಚುಕ್ಕಾಣಿ ಹಿಡಿಯಿತು. ಎನ್. ಟಿ. ರಾಮರಾವ್ ಆಂಧ್ರದ 10ನೇ ಮುಖ್ಯಮಂತ್ರಿಯಾಗಿ ಅಕಾರ ಸ್ವೀಕಾರ ಮಾಡಿದರು. ಈ ಕಾರಣದಿಂದಲೇ ಚಿತ್ರನಟರಾಗಿ ಪಕ್ಷವನ್ನು ಕಟ್ಟಿ ಯಶಸ್ವಿಯಾದವರ ಪೈಕಿ ಎನ್‌ಟಿಆರ್ ಮೊದಲ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಎನ್‌ಟಿಆರ್‌ರ ತೆಲುಗುದೇಶಂ ಪಕ್ಷವು ಆಂಧ್ರದಲ್ಲಿ ಅಕಾರಕ್ಕೇರಿದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಪಕ್ಷ ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿದೆ. ವಿಶೇಷವೆಂದರೆ ತೆಲುಗುದೇಶಂ ಪಕ್ಷ 1984ರಿಂದ 1989ರ ವರೆಗೆ 8ನೇ ಲೋಕಸಭೆ ಅವಧಿಯಲ್ಲಿ ವಿರೋಧ ಪಕ್ಷವಾಗಿಯೂ ಕಾರ್ಯನಿರ್ವಹಿಸಿತ್ತು. ವಿರೋಧ ಪಕ್ಷದ ಕಾರ್ಯ ನಿರ್ವಹಿಸಿದ ಮೊಟ್ಟ ಮೊದಲ ಪಕ್ಷ ಟಿಡಿಪಿ ಎನ್ನುವ ಖ್ಯಾತಿಯೂ ಪಕ್ಷಕ್ಕಿದೆ. ಪಕ್ಷದ ಯಶಸ್ಸಿನ ಸಿಂಹಪಾಲು ಎನ್. ಟಿ. ರಾಮರಾವ್ ಅವರದ್ದು ಎಂದರೆ ತಪ್ಪಾಗಲಿಕ್ಕಿಲ್ಲ.

ಪ್ರಜಾರಾಜ್ಯಂ ಕಟ್ಟಿ ಸೋತ ಚಿರಂಜೀವಿ
ತೆಲುಗು ಮೇರು ನಟ ಎನ್‌ಟಿಆರ್ ತೆಲುಗುದೇಶಂ ಕಟ್ಟಿ ಯಸ್ವಿಯಾಗಿದ್ದನ್ನೇ ಗಮನಿಸಿದ ಇನ್ನೋರ್ವ ನಟ, ಮೆಗಾಸ್ಟಾರ್ ಚಿರಂಜೀವಿ ಪ್ರಜಾರಾಜ್ಯಂ ಎನ್ನುವ ಹೊಸ ಪಕ್ಷವನ್ನು ಕಟ್ಟಿದರು. 2008ರ ಆಗಸ್ಟ್ 26ರಂದು ಚಿರಂಜೀವಿ ಪಕ್ಷವನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ ರಾಜಕೀಯ ಪಂಡಿತರು ಹಾಗೂ ಅಭಿಮಾನಿಗಳು ಎನ್‌ಟಿಆರ್ ಅವರಂತೆಯೇ ಚಿರಂಜೀವಿ ಕೂಡ ಮೋಡಿ ಮಾಡುತ್ತಾರೆ ಎಂದೇ ವಿಶ್ಲೇಷಿಸಿದ್ದರು. 2009ರ ಚುನಾವಣೆಯಲ್ಲಿ ಚಿರಂಜೀವಿ ಸಹಿತ 18 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತು. ಆಂಧ್ರದ ಇತಿಹಾಸದಲ್ಲಿ ಇದು ಸಾಧಾರಣ ವಿಜಯ ಎಂದೇ ಹೇಳಲಾಯಿತು. ನಂತರದ ದಿನಗಳಲ್ಲಿಯೂ ಪಕ್ಷ ಚೇತರಿಸಿಕೊಳ್ಳಲಿಲ್ಲ. ಪಕ್ಷ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಆಂಧ್ರದಲ್ಲಿ ಪಕ್ಷ ಆರಂಭದಲ್ಲಿ ಸೃಷ್ಟಿಸಿದ್ದ ಹವಾ ನಂತರದಲ್ಲಿ ಮುಂದುವರಿಯಲಿಲ್ಲ. ಇದರಿಂದಾಗಿ 2011ರ ಫೆಬ್ರವರಿ 6ರಂದು ಚಿರಂಜೀವಿ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದರು.

ಡಿಎಂಡಿಕೆ ಕಟ್ಟಿದ ವಿಜಯಕಾಂತ್
ತಮಿಳುನಾಡಿನ ಇನ್ನೋರ್ವ ನಟ ವಿಜಯಕಾಂತ್ ಅವರು ಎಂಜಿಆರ್ ಹಾದಿಯನ್ನು ಹಿಡಿದರು. 2005ರ ಸೆಪ್ಟೆಂಬರ್ 14ರಂದು ವಿಜಯಕಾಂತ್ ದೇಸೀಯ ಮುರ್ಪೋಕು ದ್ರಾವಿಡ ಕಳಗಂ ಎಂಬ ರಾಜಕೀಯ ಪಕ್ಷವನ್ನು ಘೋಷಿಸಿದಾಗ ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಡಿಎಂಕೆಗೆ ಭಾರಿ ಸವಾಲಾಗಬಲ್ಲದು ಎಂದೇ ಹೇಳಲಾಗಿತ್ತು. 2006ರಲ್ಲಿ ಮೊದಲ ಚುನಾವಣೆಯನ್ನು ಎದುರಿಸಿದ ಪಕ್ಷವು ಕೇವಲ 1 ಸ್ಥಾನದಲ್ಲಿ ಜಯ ಗಳಿಸಿತು. ನಂತರದ ಚುನಾವಣೆಗಳಲ್ಲಿ ಗೆಲುವು ಮರಿಚಿಕೆಯಾದರೂ, 2011ರಲ್ಲಿ 29 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಪಕ್ಷವು ಇಂದಿಗೂ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ. ಮತಗಳಿಕೆಯಲ್ಲಿ ಚುನಾವಣೆಯಿಂದ ಚುನಾವಣೆಗೆ ಏರಿಕೆಯಾಗುತ್ತಿದ್ದರೂ ಗೆಲುವು ಬಿಸಿಲು ಕುರೆಯಂತಾಗಿದೆ. ಸಂಸ್ಥಾಪಕ ವಿಜಯಕಾಂತ್ ಮಾತ್ರ ತನ್ನ ಛಲವನ್ನು ಬಿಡುತ್ತಿಲ್ಲ. ಪಕ್ಷ ಇದೀಗ ಎನ್‌ಡಿಎ ಜೊತೆ ಕೈಜೋಡಿಸಿದೆ.

ಜನಸೇನೆ ಮೂಲಕ ಅದೃಷ್ಟ ಪರೀಕ್ಷಿಸಿದ ಪವನ್ ಕಲ್ಯಾಣ್
ಸಹೋದರ ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿದಂತೇ ತಮ್ಮ ಪವನ್ ಕಲ್ಯಾಣ್ ಕೂಡ ಜನಸೇನೆ ಪಕ್ಷ ಕಟ್ಟುವ ಮೂಲಕ ರಾಜಕೀಯದ ಅದೃಷ್ಟ ಪರೀಕ್ಷೆ ಕೈಗೊಂಡರು. 2014ರ ಮಾರ್ಚ್ 14ರಂದು ತಮ್ಮ ಹೊಸ ಪಕ್ಷವನ್ನು ಘೋಷಿಸಿದ ಪವನ್ ಕಲ್ಯಾಣ್ ಇದೀಗ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯ ಸಂದ‘ರ್ದಲ್ಲಿ ತೆಲುಗುದೇಶಂ ಹಾಗೂ ಬಿಜೆಪಿ ಪರ ಪ್ರಚಾರ ಕಾರ್ಯ ಕೈಗೊಂಡಿದ್ದರು. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು. 2019ರ ವಿಧಾನಸಭಾ ಚುನಾವಣೆಯಗಲ್ಲಿ ಪವನ್ ಕಲ್ಯಾಣ್‌ರ ಜನಸೇನಾ ಪಕ್ಷ ಕಣಕ್ಕಿಳಿಯಲಿದೆ ಎಂದೂ ಹೇಳಲಾಗುತ್ತಿದೆ. ಚುನಾವಣೆಯ ಫಲಿತಾಂಶದ ಮೇಲೆ ಪವನ್ ಕಲ್ಯಾಣ್‌ರ ರಾಜಕೀಯ ಭವಿಷ್ಯ ನಿಂತಿದೆ.

ಟಿಎಂಎಂ ಪಕ್ಷ ಕಟ್ಟಿ ಸೋತ ಶಿವಾಜಿ ಗಣೇಶನ್ 
ತಮಿಳುನಾಡಿನಲ್ಲಿ ಮೇರು ನಟ ಎಂಜಿಆರ್ ಅವರ ಹಾದಿಯನ್ನೇ ಹಿಡಿದವರು ಇನ್ನೋರ್ವ ದಿಗ್ಗಜ ನಟ ಶಿವಾಜಿ ಗಣೇಶನ್ ಅವರು. ಡಿಎಂಕೆ ಪಕ್ಷದ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರೂ ಡಿಎಂಕೆ ನಾಯಕ ಕರುಣಾನಿ ಅವರ ಜೊತೆಗಿನ ಮುನಿಸಿನಿಂದಾಗಿ ಡಿಎಂಕೆಯನ್ನು ತೊರೆದರು. 1988ರಲ್ಲಿ ತಮ್ಮದೇ ಆದ ತಮಿಳಗ ಮುನ್ನೇಟ್ರ ಮುನ್ನಾನಿ ಎನ್ನುವ ಪಕ್ಷವನ್ನು ಕಟ್ಟಿದರು. 1989ರ ಚುನಾವಣೆಯಲ್ಲಿ ಪಕ್ಷ ರ್ಸ್ಪಸಿದ್ದ ಎಲ್ಲ ಕ್ಷೇತ್ರಗಳಲ್ಲಿಯೂ ಸೋಲನ್ನು ಅನುಭವಿಸಿತು. ಇದರಿಂದಾಗಿ ಶಿವಾಜಿ ಗಣೇಶನ್ ತಮ್ಮ ಪಕ್ಷವನ್ನು ಜನತಾ ದಳದೊಂದಿಗೆ ವಿಲೀನಗೊಳಿಸಿದರು. ಚಿತ್ರನಟನೋರ್ವ ಪಕ್ಷ ಕಟ್ಟಿ ಹೀನಾಯ ಸೋಲನ್ನು ಅನುಭವಿಸಿದ ಮೊದಲ ನಿದರ್ಶನ ಇದಾಗಿತ್ತು.

ಎಐಎಸ್‌ಎಂಕೆ ಕಟ್ಟಿದ ಶರತ್‌ಕುಮಾರ್
ಆಲ್ ಇಂಡಿಯಾ ಸಮಾಧುವಾ ಮಕ್ಕಳ್ ಕಚ್ಚಿ ಪಕ್ಷವನ್ನು ಕಟ್ಟಿ ರಾಜಕೀಯ ಪರೀಕ್ಷೆಗೆ ಮುಂದಾದವರು ಚಿತ್ರನಟ ಶರತ್‌ಕುಮಾರ್. 2007ರ ಆಗಸ್ಟ್ 31ರಂದು ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಿದರು. 2011ರಲ್ಲಿ ಎಐಎಡಿಎಂಕೆಯ ಮಿತ್ರ ಪಕ್ಷವಾಗಿ ಕಣಕ್ಕಿಳಿದಿದ್ದ ಶರತ್ ಕುಮಾರ್‌ರ ಎಎಸ್‌ಎಂಕೆ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದರು. ಈ ಪಕ್ಷವು ಪ್ರಸ್ತುತ ಕೇರಳಕ್ಕೂ ವಿಸ್ತರಣೆಯಾಗಿದೆ.

ಪ್ರಜಾಕೀಯ ಮೂಲಕ ಉಪೇಂದ್ರ ಸತ್ವಪರೀಕ್ಷೆ
ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರು ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಪ್ರಜಾಕೀಯ ಎಂಬ ಹೆಸರಿನ ಮೂಲಕ ಪಕ್ಷ ಘೋಷಣೆ ಕೈಗೊಂಡಿದ್ದ ಉಪೇಂದ್ರ ನಂತರದಲ್ಲಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಎಂದು ಅಕೃತವಾಗಿ ನಾಮಕರಣ ಮಾಡಿದರು. ತಮ್ಮ ಪಕ್ಷವನ್ನು ಕ್ಯಾಶ್‌ಲೆಸ್ ಪಕ್ಷ ಎಂದು ಕರೆದುಕೊಂಡಿರುವ ಉಪೇಂದ್ರ ಮುಂಬರುವ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ರ್ಸ್ಪಸುವುದಾಗಿ ಘೋಷಿಸಿದ್ದಾರೆ. ಪ್ರಜ್ಞಾವಂತ ಮತದಾರರೇ ಜೀವಾಳ ಎಂದು ಹೇಳುವ ಉಪೇಂದ್ರ ಕರ್ನಾಟಕದಲ್ಲಿ ಸ್ವತಂತ್ರ ಪಕ್ಷ ಕಟ್ಟಿದ ಮೊಟ್ಟ ಮೊದಲ ಚಿತ್ರ ನಟ. ಉಪೇಂದ್ರದ ಹೊಸ ಪ್ರಯೋಗ ಯಶಸ್ವಿಯಾಗುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ಪಕ್ಷ ಕಟ್ಟದೇ ಗೆದ್ದವರು
ತಾವೇ ಪಕ್ಷವನ್ನು ಕಟ್ಟದೇ ರಾಜಕಾರಣದಲ್ಲಿ ಯಶಸ್ವಿಯಾದ ಹಲವು ನಟರು ಹಗೂ ನಟಿಯರಿದ್ದಾರೆ. ಆ ಸಾಲಿನಲ್ಲಿ ಪ್ರಮುಖವಾಗಿರುವವರು ತಮಿಳುನಾಡಿನ ಜಯಲಲಿತಾ, ಕೆ. ಕರುಣಾನಿ, ಕನ್ನಡದ ಅಂಬರೀಶ್, ಅನಂತನಾಗ್, ಉಮಾಶ್ರೀಘಿ, ಕೇರಳದ ಕೆ. ಬಿ. ಗಣೇಶ ಕುಮಾರ್, ನಂದಮೂರಿ ಬಾಲಕೃಷ್ಣ, ನೆಪೋಲಿಯನ್ ಮತ್ತಿತರರು ಪ್ರಮುಖರಾಗಿದ್ದಾರೆ.
ಇವರಲ್ಲಿ  ತಮಿಳುನಾಡಿನ ಚಲನಚಿತ್ರ ಸಂ‘ಾಷಣೆಕಾರ, ಚಿತ್ರ ಸಾಹಿತಿ ಕೆ. ಕರುಣಾನಿ ಡಿಎಂಕೆ ಸೇರಿ ಹಲವು ಸಾರಿ ಮುಖ್ಯಮಂತ್ರಿಯಾದವರು. ತಮಿಳುನಾಡಿನಲ್ಲಿಯೇ ಚಿತ್ರನಟಿ ಜೆ. ಜಯಲಲಿತಾ ಎಐಎಡಿಎಂಕೆ ಪಕ್ಷ ಸೇರಿ, ಚುಕ್ಕಾಣಿ ಹಿಡಿದು, ಹಲವು ಸಾರಿ ಮುಖ್ಯಮಂತ್ರಿ ಗಾದಿಗೂ ಏರಿದ್ದಾರೆ. ಕನ್ನಡದ ನಟರಾದ ಅಂಬರೀಶ್ ಕೇಂದ್ರ ಸಚಿವರಾಗಿದ್ದರು. ಪ್ರಸ್ತುತ ಶಾಸಕರಾಗಿದ್ದಾರೆ. ಹಿರಿಯ ನಟ ಅನಂತನಾಗ್ ಜನತಾದಳ ಸರ್ಕಾರದಲ್ಲಿ ಸಚಿವರಾಗಿದ್ದರು. ಪ್ರಸ್ತುತ ಚಿತ್ರನಟಿ ಉಮಾಶ್ರೀ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿದ್ದಾರೆ. ಚಿತ್ರನಟಿಯರಾದ ತಾರಾ, ಜಯಮಾಲಾ ಅವರು ವಿ‘ಾನಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದವರು
ಪ್ರಸ್ತುತ ತಮಿಳುನಟ ರಜನೀಕಾಂತ್, ಕಮಲ್ ಹಾಸನ್, ವಿಶಾಲ್, ಕನ್ನಡದ ಉಪೇಂದ್ರ, ತೆಲುಗಿನ ಪವನ್ ಕಲ್ಯಾಣ್ ಮತ್ತಿತರರು ರಾಜಕೀಯ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ರಜನಿ, ಉಪೇಂದ್ರ, ಪವನ್ ಕಲ್ಯಾಣ್ ಹೊಸ ಪಕ್ಷಗಳನ್ನು ಘೋಷಿಸಿದ್ದರೆ ಕಮಲ್ ಹಾಸನ್ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ. ವಿಶಾಲ್ ತಮಿಳುನಾಡಿನ ಆರ್. ಕೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದರು.

ರಾಜಕಾರಣಿ-ನಟನೆಯ ದ್ವಿಪಾತ್ರ
ಕನ್ನಡದಲ್ಲಿ ಜಗ್ಗೇಶ್, ಮುಖ್ಯಮಂತ್ರಿ ಚಂದ್ರು, ಬಿ. ಸಿ. ಪಾಟೀಲ್, ಯೋಗೇಶ್ವರ್, ರಮ್ಯಾ, ರಾಮಕೃಷ್ಣ, ದೊಡ್ಡಣ್ಣ, ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಕೆ. ಶಿವರಾಮು  ಮತ್ತಿತರರು ಚುನಾವಣೆಗೆ ರ್ಸ್ಪಸಿ ಸೋಲು-ಗೆಲುವಿನ ಸಿಹಿ-ಕಹಿಯನ್ನು ಉಂಡಿದ್ದಾರೆ. ತೆಲುಗಿನಲ್ಲಿ ಕೋಟ ಶ್ರೀನಿವಾಸ ರಾವ್, ಮೋಹನ್ ಬಾಬು, ತಮಿಳಿನ ಎಸ್. ಎಸ್. ರಾಜೇಂದ್ರನ್,  ಮತ್ತಿತರರು ರಾಜಕೀಯ ರಂಗದಲ್ಲಿಯೂ ಛಾಪು ಮೂಡಿಸಿದ್ದಾರೆ.