Saturday, September 26, 2009

ಎಲ್ಲ ಮರೆತಿರುವಾಗ (ಕಥೆ-ಭಾಗ 1)

ಎಲ್ಲ ಮರೆತಿರುವಾಗ
ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ..
ಎಂಬ ಹಾಡು ಸನಿಹದಲ್ಲಿ ಎಲ್ಲೋ ರಚನಾ ಗೆ ಕೇಳಿದಂತೆ ಆಗಿ ಎಚ್ಚೆತ್ತಳು.
ತನ್ನ ಕಂಪನಿಯ ಪ್ರಾಜೆಕ್ಟ್ ಕೆಲಸಕ್ಕಾಗಿ ಶಿರಸಿಗೆ ಹೊರಟವಳಿಗೆ ಅದ್ಯಾವಗಲೋ ನಿದ್ದೆ ಆವರಿಸಿ ಬಿಟ್ಟಿತ್ತು.
ಹಾಡಿನಿಂದ ಎಚ್ಹ್ಚ್ರದಾಗಲೇ ಆಕೆಗೆ ತಿಳಿದದ್ದು ತಾನು ಶಿರಸಿಯಲ್ಲಿ ಇದ್ದೇನೆ ಎಂಬುದು.
ಹಾಡು ಕೇಳಿದ ಕಡೆಗೆ ತಿರುಗಿದರೆ ಅಲ್ಲೊಬ್ಬ ಹುಚ್ಚ. ನೋಡಿದರೆ ಭಯಂಕರ ರೂಪ. ಆದರೆ ಧ್ವನಿ ಮಾತ್ರ ಇಂಪು..
ಚಿಂದಿ ಅಂಗಿ.. ಹರಿದ ಪ್ಯಾಂಟು .. ಸ್ನಾನ ಕಾಣದ ದೇಹ.. ಗಬ್ಬು ವಾಸನೆ.. ಇನ್ನು ಆತ ಊಟ ಮಾಡಿ ಅದೆಸ್ತು
ದಿನಗಳದವೋ.. ಬೆನ್ನಿನ ಒಳಗೆ ಹುತು ಹೋದಂತಿದ್ದ ಹೊಟ್ಟೆ. ಮೇಲ್ನೋಟಕ್ಕೆ ರಚನಾ ಳಿಗೆ ಕಂಡದ್ದು ಇದಿಷ್ಟು.
ಆತನ ರೂಪದಲ್ಲಿ ಅಂಥ ವಿಶೇಷ ಏನು ಇರ್ಲಿಲ್ಲ. ಆದರೆ ಆತನ ಧ್ವನಿ ಇತ್ತಲ್ಲ ಅದರಲ್ಲಿ ಏನೋ ಆಕರ್ಷಣೆ ..
ಹಾಡಿದ ಹಾಡಿನಲ್ಲಿ ಏನೋ ಒಂದು ಭಾವ. ಅದನ್ನು ಹಾಡಿದ ರೀತಿಯಮ್ತು ಪಕ್ಕ ಕ್ಲಾಸಿಕಲ್ .. ಒಮ್ಮೆ ಕೇಳಿದರೆ
ಮತ್ತೊಮ್ಮೆ ಕೇಳಬೇಕು ಅನ್ನಿಸುವಂಥದ್ದು..
ಅವ ಬಹುಶಃ ಹೊಟ್ಟೆಪಾಡಿಗಾಗಿ ಹಾಡುತ್ತಿರಬೇಕು.. ಎನ್ನಿಸಿತು ಅವಳಿಗೆ.. ಪಾಪದ ವ್ಯಕ್ತಿ ಎಂಬ ಭಾವ.. ವ್ಯಸ್ಸಿನ್ನು ೨೫ ಅಷ್ಟೆ.
ಅರೆ ಇಷ್ಟು ಚೆನ್ನಾಗಿ ಹಾಡುವ ಈತನಿಗೆ ಹುಚ್ಚೆ? ವಯಸ್ಸಿನ್ನೂ ಚಿಕ್ಕದು .. ಯಾಕೆ ಈತನಿಗೆ ಹುಚ್ಚು? ಅವಳಿಗೆ ಕುತೂಹಲವಾಯಿತು....

(ಮುಂದುವರಿಯುವುದು..)

Friday, September 25, 2009

ಕನಸು

ಮೂಲತಃ ಸಂಭಂಧಿಯಾದರು ಸ್ವಭಾವದಲ್ಲಿ ಮಿತ್ರನಾದ ಪ್ರಶಾಂತ್ ಪಿ ಪಿ ಹರಾಹುರಿ ಅಪರೂಪಕ್ಕೆ ಒಂದು ಹನಿ ಕವನ ಬರೆದಿದ್ದೀನಿ ಅಂದಾಗ ನನಗೆ ಅಚ್ಚರಿ.. ಕೊನೆಗೆ ಮೆಸೇಜ್ ಮಡಿದ ನಂತರವೇ ನಾನು ನಂಬಿದ್ದು.. ಆ ಕವನ ಇದೋ ನಿಮ್ಮ ಮುಂದೆ.. ಓದಿ..
ಕನಸು
ಜಂಗಮವಾಣಿಯ ಉಲಿಯನ್ನು ಕೇಳಿ
ನಮ್ಮದೇ ಎಂದು ಸರಸರನೆ ತೆಗೆದು ,
ನಲ್ಲೆ ಕರೆದಲೆಂದು ತಿಳಿದು,
ಮೆಲ್ಲನೆತ್ತಿ ಹಲೋ ಎಂದಿರಲು,
ಪಕ್ಕದವನು ಚಿನ್ನ ಎನ್ನ ಬೇಕೆ?
-- ಪ್ರಶಾಂತ್ ಪಿ ಪಿ .. ಹರಾಹುರಿ..

Wednesday, September 23, 2009

ಒಂದು ಕವನ

ಗೆಳತಿ ಒಬ್ಬಳು ಕಳಿಸಿದ ಕವನವ ನೀವೂ ಓದಲೆಂದು ನಿಮ್ಮ ಮುಂದೆ ಇಡುತ್ತಿದ್ದೇನೆ .. ಓದಿ.. ಅನಿಸಿಕೆ ತಿಳಿಸಿ.

ಭಾವನಾ..
ಗೆಳೆಯ,..
ಏಕೆಂದು ತಿಳಿಯೆ ನಾನು..!!
ದಿನವೂ ಭಾವನೆಗಳ ಮೂಡಿಸುತ್ತಿದ್ದ
ಕವನಗಳೇ ಕಾಣುತ್ತಿಲ್ಲ..
ಕಣ್ಣಂಚಲಿ . . . . . . . . . . .

ನಿತ್ಯ, ನನ್ನ
ನಡು ರಾತ್ರಿಯಲ್ಲಿ ಕೂಡ ಕಾಡುತ್ತಿದ್ದ
ನಿನ್ನ ನೆನಪೇ ಇಲ್ಲ...
ಕನಸಲಿ . . . . . . . . . . . .

ಪ್ರತಿಕ್ಷಣ
ನನ್ನೊಳಗೆ ನಾನಾಗಿದ್ದ ನಿನ್ನ ನೆನಪೇ
ಬರುತ್ತಿಲ್ಲ.. ನನ್ನ ಈ
ಮನದಲಿ. . . . . . . . . . . . . . .

ಅನುದಿನ,
ನನ್ನ ಜೀವವೆನ್ದುಕೊಂಡಿದ್ದ
ನಿನ್ನ ಹೆಸರೆ ಸಿಗುತ್ತಿಲ್ಲ
ನನ್ನುಸಿರಿನಲಿ . . . . . . . . . .

ಅದಕ್ಕೆ,,
ನೀ ನನ್ನಿಂದ ದೂರವಾಗುವ
ಭಯ ಆವರಿಸಿದೆ, ಪ್ರತಿಕ್ಷನ
ನನ್ನಲಿ.. . . . . . . . . . . . . .

ಇದನ್ನು ಬರೆದಿದ್ದು... : ಜಾನು ಮಗೆಗಾರ್

ಕವಯಿತ್ರಿಯ ಚಿಕ್ಕ ಪರಿಚಯ : ಈಕೆ ಓರ್ವ ಯುವ ಬರಹಗಾರ್ತಿ.. ಉತ್ತರ ಕನ್ನಡದ ಹಳ್ಳಿಯೊಂದರ ಹುಡುಗಿ.. ಬರೆದು ಮುಚಿಡುವ ಚಟ. ಆಗಾಗ ಬರೆದರೂ ಭಾವನೆಗಳ ಸ್ಪಂದನ ತುಂಬ...ಹೆಚ್ಚು... ತುಂಬ ಒತ್ತಾಯದ ನಂತರ ನಾ ಪಡೆದ ಕವನ ಇದು.. ನೀವೂ ಓದಲೆಂದು ಇಲ್ಲಿ ಇಟ್ಟಿದ್ದೇನೆ.. ಅನಿಸಿದ್ದು ಬರೆಯಿರಿ..
ನಿಮ್ಮವ : ವಿನಯ..

Wednesday, September 16, 2009

ನನ ಊರು

ನನ್ನ ಊರು ದಂಟಕಲ್
ದಂಟಕಲ್ ಬಗ್ಗೆ ವೀಕಿಪೀಡಿಯಾದಲ್ಲಿ ಬರೆದಿರುವ ಸಾಲುಗಳು
Dantkal

Dantkal is a village near Sirsi, North Kanara , State of Karnataka, India. All people staying there are Havyaka Brahmins, and the village is only connected with roads from Sirsi and Siddapur. This place is famous for "SHEDI" So this place is known as SHEDI Dantkal. The place is on the shore of river "Aghanashini". "Agha" means "sin" and "Nashini" means "remover".

This article related to a location in Karnataka is a stub. You can help Wikipedia by expanding it.
Places to visit near by: Temples: "marikamba temple" Sirsi, "Ganesha temple" Heroor, "mallikarjuna temple Balur", "Sangameshwara in Balur sangama", "Ganesha temple Balur", "Kalika bhavani temple Kansur"... Other places: "Teppesavalu kallu","kote gudde","sarkallu","Haklu"(where people leave their cattles in "Deepavali"),etc...

Water Falls " Unchalli Falls", " Ilimane Falls", " Bennehole Falls", ...ETC. YANA is one of the famous place...
For More Details Please contect MRIGHASHIRA TRAVEL AGENCES. Contect NO. KRISHNAMOORTI DIXIT - 9164626299.

Retrieved from "http://en.wikipedia.org/wiki/Dantkal"

Friday, September 11, 2009

ನೀವು ಕಂಡಿರ? ನೀವು ಕಂಡಿರಾ?

ಚಿವ್ ಚಿವ್ ಗುಬ್ಬಿ ನಿ ಎತ್ತ ಹೋದೆ?

ದಿನದಿನ ನಿನ್ನ ನ ಕಾಣದಾದೆ.

ನಮ್ಮ ಮೊಬೈಲ್ ಹಾವಳಿ ನಿನ್ನ ಜೀವಕ್ಕೆ

ಕುತ್ತಾಯಿತ? ಇಲ್ಲ ನಾವು ನಿನ್ನ ಕತ್ತು ಕೊಯ್ದೇವ?

ಎತ್ತ ಹೋದೆ? ಚಿಕ್ಕಂದಿನಲ್ಲಿ ಹಳೆಯ ದೊಡ್ಡ

ಕೊಟ್ಟಿಗೆಯ ಮೇಲೆ ಅಲ್ಲೆಲ್ಲೋ ಗುಡು ಕತ್ತೂತ್ತೀದ್ದೆ

ಈಗ ನಿನ ಚಿವ್ ಚಿವ್ ದನಿ ಇಲ್ಲ..

ಮಕ್ಕಳ ಬಾಯಲ್ಲಿ ತ ತಾ ಗುಬ್ಬಿ ತವನ್ ಗುಬ್ಬಿ

ಎಂಬೋ ಹಾಡು ಇಲ್ಲ..

ಈಗಿನ ಮಕ್ಕಳಿಗೆ ಗುಬ್ಬಿ ಅಂದರೇನು ಅಂತ ಗೊತ್ತಿಲ್ಲ.

ಹೌದು ನೀನು ಹೋಗಿದ್ದದ್ರು ಎಲ್ಲಿಗೆ?

ಬಾ ಮತ್ತೆ ಮೆಲ್ಲಗೆ. ನಮ್ಮ ಮನೆಯ ಮಹಡಿಯಲ್ಲೋಮ್ದು

ಮರದ ಮೆತ್ತನೆಯ ಗುಡು ಇದೆ.. ಅದು ಖಾಲಿ ಇದೆ.

ಯಾವಾಗ ಬರ್ತೀಯ? ಯಾಕೋ... ಚಿಕ್ಕಂದಿನಲ್ಲಿ ಪೆರ್ಲ ಹಣ್ಣು

ತಿನ್ನುವಾಗ ಇದು ಗುಬ್ಬಿ ತಿಮ್ದಿದ್ಇದೆ ಅನ್ನುತ್ತಿದ್ದಿವಿ. ಈಗ ಮಕ್ಕಳಿಗೆ ಆ ಮಾತೆ ಗೊತ್ತಿಲ್ಲ.

ಯಾಕೋ ಇತ್ತೀಚಿಗೆ ಗುಬ್ಬಿ ತಿಂದ ಹಣ್ಣು ತಿನ್ನುವ ಆಸೆ..

ನಾವು ಗುಬ್ಬಿ ಎಂಜಲು ಅನ್ತ ಮಾಡ್ತಿವಿ.. ಈಗಿನ ಹುಡುಗರು ಕೇಳಿದ್ರೆ ಅದೇನು ಅಂತ ಕೇಳ್ತಾರೆ.

ಗುಬ್ಬಿಯೇ ಕಾಣುತ್ತಿಲ್ಲ.. ಈ ಮುನ್ದೆವು ಗಳಿಗೆ ಗುಬ್ಬಿ ಎಂಜಲು ಏನ್ ಗೊತ್ತು?

ಮತ್ತೆ ಬಾ ... ನಾನು ಪೇಪರ್ ಮೂಲಕ ಹುದುಕಿಕೊವಿ ಅಂತ ಜಾಹಿರಾತು ಹಾಕುವ ಮುನ್ನ..

ಬರ್ತೀಯ? ಕಾಯುತ್ತಿದ್ದೀನಿ..