Sunday, March 24, 2019

ಅಘನಾಶಿನಿಯ ಸ್ವಗತ. . .



(ಅಶ್ವಿನಿಕುಮಾರ್ ಭಟ್ ಹಾಗೂ ಸಹನಾ ಬಾಳಕಲ್ ಅವರು ಚಿತ್ರಿಸಿದ ಅಘನಾಶಿನಿ ಎಂಬ ಸಾಕ್ಷ್ಯಚಿತ್ರದ ಪ್ರಮುಖ ಅಂಶಗಳೇ ಈ ಲೇಖನಕ್ಕೆ ಮೂಲ. ಈ ಸಾಕ್ಷ್ಯಚಿತ್ರಕ್ಕೆ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ. ಲಕ್ಷಾಂತರ ವ್ಯೂವರ್ಸ್  ಪಡೆದಿದೆ)


ನಾನು ಅಘನಾಶಿನಿ....
ಮಲೆನಾಡಿನ ನಟ್ಟ ನಡುವೆ, ಪಶ್ಚಿಮ ಘಟ್ಟ ಸಾಲಿನ ಒಡಲಿನಲ್ಲಿ ಹರಿದು ಅರಬ್ಬಿ ಸಮುದ್ರದೊಡಲನ್ನು ಸೇರುವ ಪುಟ್ಟ ನದಿ, ಶುದ್ಧ ನದಿ. ನನ್ನಲ್ಲಿ ಕಲ್ಮಶಗಳಿಲ್ಲ. ನನ್ನ ಹರಿವಿಗೆ ತಡೆಯಿಲ್ಲ. ನನ್ನೊಡಲು ಕುತೂಹಲಗಳ ಆಗರ. ನನ್ನ ಇಕ್ಕೆಲಗಳು ಹಲವು ವಿಶಿಷ್ಟತೆಗಳ ಸಾಗರ. ನನ್ನ ಬಗ್ಗೆ ಸುಮ್ಮನೇ ಹೇಳಿಕೊಳ್ಳೋಣ ಎನ್ನಿಸುತ್ತಿದೆ. ನನ್ನ ಬದುಕನ್ನು ಅನಾವರಣಗೊಳಿಸಿಕೊಳ್ಳೋಣ ಎನ್ನಿಸುತ್ತಿದೆ. ನನ್ನ ಕಥೆಯನ್ನು ಕೇಳ್ತೀರಲ್ಲ?
ನಾನು ಉತ್ತರ ಕನ್ನಡದ ಪಂಚ ನದಿಗಳಲ್ಲಿ ಒಂದು ಎನ್ನಿಸಿಕೊಂಡಿದ್ದೇನೆ. ಶಿರಸಿಯ ಶಂಕರಹೊಂಡದ ಬಳಿ ನಾನು ಹುಟ್ಟುತ್ತೇನೆ. ಕುಮಟಾ ತಾಲೂಕಿನ ಅಘನಾಶಿನಿ ಎಂಬ ಗ್ರಾಮದ ಬಳಿ ಸಮುದ್ರವನ್ನು ಸೇರುವ ಮುನ್ನ ನಾನು ಸೃಜಿಸುವ ಬೆರಗಿನ ಲೋಕವಿದೆಯಲ್ಲ. ಅದು ಬಣ್ಣನೆಗೆ ನಿಲುಕದ್ದು. ಅದೆಷ್ಟೋ ಜನರಿಗೆ ಜೀವನಾಧಾರವಾಗಿ, ಪಶು-ಪಕ್ಷಿ- ಕೀಟ- ವನ್ಯ- ವೃಕ್ಷ ಸಮೂಹಗಳಿಗೆಲ್ಲ ಜೀವನಾಧಾರವಾಗಿ ನಾನು ಹರಿಯುತ್ತೇನೆ. ಉಸಿರಾಗುತ್ತೇನೆ.
ಕರ್ನಾಟಕದ ತಿರುಪತಿ ಎಂದೇ ಖ್ಯಾತಿ  ಪಡೆದಿರುವ, ವೆಂಕಟರಮಣನ ಸನ್ನಿಧಿಯಾದ ಶಿರಸಿ ತಾಲೂಕಿನ ಮಂಜುಗುಣಿಯಲ್ಲಿ ನನ್ನ ಇನ್ನೊಂದು ಜೀವಸೆಲೆಯಿದೆ. ಇದನ್ನೂ ನನ್ನ ಜನ್ಮಸ್ಥಾನ ಎಂದೇ ಕರೆಯುತ್ತಾರೆ. ಶಂಕರಹೊಂಡದಿಂದ ಹರಿಯುವ ನಾನು ಹಾಗೂ ಮಂಜುಗುಣಿಯಿಂದ ಹರಿಯುವ ನಾನು ಸಿದ್ದಾಪುರ ತಾಲೂಕಿನ ಮಾನಿಹೊಳೆ ಎಂಬಲ್ಲಿ ಒಂದಾಗುತ್ತೇವೆ. ಅಲ್ಲಿಂದ ನನಗೊಂದು ಭವ್ಯ ರೂಪ ದೊರೆಯುತ್ತದೆ. ಇಲ್ಲೇ ನನ್ನ ಅಸ್ತಿತ್ವಕ್ಕೆ ಮಹತ್ವದ ಸ್ಥಾನ ದೊರೆಯುತ್ತದೆ. ನನ್ನ ಹರಿವಿನ 98 ಕಿಲೋಮೀಟರ್ ಅವಧಿಯಲ್ಲಿ ನಾನು ಸೃಷ್ಟಿಸುವ ಕಲಾಲೋಕ ಅದ್ಭುತವಾದುದು. ಬಣ್ಣನೆಗೆ ನಿಲುಕದ್ದು.
ಪಶ್ಚಿಮ ಘಟ್ಟದ ದಟ್ಟ ಕಾನನದ ನಡುವೆ ಹುಟ್ಟುವ ನಾನು ಬಳುಕುತ್ತ, ಅಂಕುಡೊಂಕಾಗಿ ಹರಿಯುವ ಪರಿಯಂತೂ ರಮ್ಯವಾದುದು. ಗಗನದಿಂದ ನೋಡಿದರೆ ನಾನು ಬಳುಕುವ ಕನ್ಯೆಯಂತೆ, ನಿಧಾನವಾಗಿ ಸರಿದು ಹೋಗುವ ಹಾವಿನಂತೆ ಕಾಣುತ್ತೇನೆ. ಕವಿಗಳ ಪಾಲಿಗಂತೂ ಅದೆಷ್ಟೋ ಕವಿತೆಗಳಿಗೆ ಕಾರಣವಾಗಿದ್ದೇನೆ.
ಅಣೆಕಟ್ಟುಗಳಿಲ್ಲದ, ಮಲಿನಗೊಳ್ಳದ ಅಪರೂಪದ ನದಿಗಳಲ್ಲಿ ಒಂದು ಎಂಬ ಹೆಗ್ಗಳಿಕೆ ನನ್ನ ಪಾಲಿಗಿದೆ. ನನ್ನ ಸಹೋದರ-ಸಹೋದರಿ ನದಿಗಳಾದ ಪಕ್ಕದ ಕಾಳಿ, ಗಂಗಾವಳಿ, ಶರಾವತಿ ನದಿಗಳು ಈಗಾಗಲೇ ಆಧುನೀಕತೆಯ ರಕ್ಕಸ ಕೈಗೆ ಸಿಲುಕಿ ನಲುಗುತ್ತಿವೆ. ಕಾಳಿ ಹಾಗೂ ಶರಾವತಿ ನದಿಗಳು ಅಣೆಕಟ್ಟುಗಳ ಕೂಪಕ್ಕೆ ಸಿಲುಕಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದರೆ, ಗಂಗಾವಳಿ ಹಾಗೂ ಕಾಳಿಯ ಒಡಲು ಆಗಲೇ ಮಲಿನಗೊಂಡು ಹುಣ್ಣುಗಳಾಗಿದೆ. ನನ್ನ ಅದೃಷ್ಟ, ನನಗೆ ಇನ್ನೂ ಇಂತಹ ದೌರ್ಭಾಗ್ಯ ಬಂದಿಲ್ಲ.
ನನಗೆ ಉಪನದಿಗಳೂ ಕೆಲವಿದೆ. ಪಶ್ಚಿಮ ಘಟ್ಟದಲ್ಲೇ ಹುಟ್ಟುವ ಬೆಣ್ಣೆ ಹೊಳೆ, ಚಂಡಿಕಾ ಹೊಳೆ, ಬೀಳಗಿ ಹೊಳೆಗಳು ನನ್ನ ಉಪನದಿಗಳು. ನಾನು ನೀರಿಲ್ಲದೇ ಸೊರಗುವ ಹಂತ ತಲುಪಿದ ಸಂದರ್ಭಗಳಲ್ಲಿ ಇವುಗಳೇ ನನ್ನೊಡಲಿಗೆ ಜೀವಜಲವನ್ನು ನೀಡಿ ಚಿರಂಜೀವಿಯಾಗುವಂತೆ ಮಾಡಿದ್ದು. ಇವುಗಳಲ್ಲಿ ಕೆಲವು ನನ್ನನ್ನು ಘಟ್ಟದ ಮೇಲೆ ಜತೆಗೂಡಿದರೆ ಇನ್ನೂ ಕೆಲವುಗಳು ಘಟ್ಟದ ಕೆಳಗಿನ ಭಾಗದಲ್ಲಿ ನನ್ನೊಡಲನ್ನು ಸೇರಿಕೊಳ್ಳುತ್ತವೆ. ಗಂಭೀರವಾಗಿ ಹರಿಯುವ ನನಗೆ ಇವುಗಳೇ ಇನ್ನಷ್ಟು ಗಂಭೀರತೆಯನ್ನು ಒದಗಿಸುತ್ತವೆ.
ಋತುಮಾನಗಳಿಗೆ ತಕ್ಕಂತೆ ನನ್ನ ನಿಲುವು ಬದಲಾಗುತ್ತದೆ. ಬೇಸಿಗೆಯ ಬಿರು ಬಿಸಿಲಿನಲ್ಲಿ ಕಾವಿಗೆ ಸೊರಗುವ ನಾನು ಮಳೆಗಾಲ ಬಂತೆಂದರೆ ಭವ್ಯವಾಗುತ್ತೇನೆ. ರೌದ್ರ ರಮಣೀಯ ರೂಪವನ್ನು ತಾಳುತ್ತೇನೆ. ಬೇಸಿಗೆಯಲ್ಲಿ ಶುದ್ಧ ರೂಪದ ನಾನು ಮಳೆಗಾಲದಲ್ಲಿ ಕೆಂಪಾಗಿ ಕಿಡಿಕಾರುತ್ತೇನೆ. ಬೇಸಿಗೆಯಲ್ಲಿ ಕಿಲ-ಕಿಲ ಕಲರವ ಮಾಡುವ ನಾನು ಮಳೆಗಾಲದಲ್ಲಂತೂ ಕಿವಿ ಗಡಚಾಗುವಂತೆ ಸದ್ದು ಮಾಡುತ್ತೇನೆ. ಮಳೆಗಾಲದ ನನ್ನ ಆರ್ಭಟಕ್ಕೆ ಇಕ್ಕೆಲದ ದಡಗಳ ಅನೇಕ ಸ್ಥಳಗಳು ಮುಳುಗುತ್ತವೆ. ಅದೆಷ್ಟೋ ಮರಗಳು ಕೊಚ್ಚಿ ಹೋಗುತ್ತವೆ. ಮಳೆಗಾಲದ ಆರ್ಭಟದ ಸಂದರ್ಭದಲ್ಲೆಲ್ಲ ದಡದಲ್ಲಿನ ನಿವಾಸಿಗಳು ನನ್ನ ರೌದ್ರಾವತಾರ ಇಳಿಯಲಿ ಎನ್ನುವ ಕಾರಣಕ್ಕೆ ನನ್ನೊಡಲಿಗೆ ಅರಶಿಣ-ಕುಂಕುಮವನ್ನು ಹಾಕಿ ಭಾಗಿನವನ್ನು ನೀಡಿ ಸೌಮ್ಯಳಾಗು ಎಂದು ಬೇಡಿಕೊಳ್ಳುವ ಸಂದರ್ಭಗಳೂ ಇದೆ.
ನಾನು ಜಲಪಾತಗಳ ಆಗರ. ನಾನು ಹಾಗೂ ನನ್ನ ಉಪನದಿಗಳು ಸೃಷ್ಟಿಸಿದ ಜಲಪಾತಗಳ ಸರಣಿ ಬೆರಗಿನ ಇನ್ನೊಂದು ಲೋಕ ಎಂದರೆ ತಪ್ಪಾಗಲಿಕ್ಕಿಲ್ಲಘಿ. ಜಾರ್ಜ್ ಲೂಷಿಂಗ್‌ಟನ್ ಎಂಬ ಬ್ರಿಟೀಷ್ ಸರ್ವೇಯರ್ ಅಧಿಕಾರಿಯನ್ನು ಸೆಳೆದ ಉಂಚಳ್ಳಿ ಜಲಪಾತ, ಬೆಣ್ಣೆಹೊಳೆ ಜಲಪಾತ, ವಾಟೆಹೊಳೆ ಜಲಪಾತ, ಮಜ್ಜಿಗೆಹೊಳೆ ಜಲಪಾತ, ಬುರುಡೆ ಜಲಪಾತ ಹೀಗೆ ಹಲವು ಜಲಪಾತಗಳು ಸೃಷ್ಟಿಯಾಗಿದೆ. ನನ್ನ ಸಹೋದರಿಯರು ನನಗಿಂತ ದೊಡ್ಡ ದೊಡ್ಡ ಜಲಪಾತಗಳನ್ನು ಸೃಷ್ಟಿಸಿದ್ದರೂ ನನ್ನಷ್ಟು ಸಂಖ್ಯೆಯಲ್ಲಿ ಜಲಪಾತಗಳನ್ನು ಸೃಷ್ಟಿಸಿಲ್ಲ ಎನ್ನುವ ಹೆಗ್ಗಳಿಕೆ ನನ್ನದು. ನನ್ನ ಸೃಷ್ಟಿಯಾದ ಜಲಪಾತಗಳನ್ನು ವೀಕ್ಷಿಸಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರುತ್ತಾರೆ. ಮನದಣಿಯೆ ಜಲಪಾತಗಳನ್ನು ವೀಕ್ಷಿಸಿ ಸಂಥಸ ಸಂಭ್ರಮವನ್ನು ಹೊಂದುತ್ತಾರೆ.
ಸಹಸ್ರ ಸಹಸ್ರ ವರ್ಷಗಳಿಂದ ಹರಿಯುತ್ತ ಬಂದಿರುವ ನಾನು ನನ್ನ ವಲಯದಲ್ಲಿ ವಿಶೇಷ ಸಸ್ಯ ಸಂಕುಲಕ್ಕೆ ಜೀವದಾಯಿಯಾಗಿದ್ದೇನೆ. ಅಪರೂಪದ ರಾಮಪತ್ರೆ ಜಡ್ಡಿಗಳು, ದೇವರಕಾಡುಗಳಿಗೆ ನೀರುಣಿಸಿ ಭೂಮಾತೆಯನ್ನು ಸಸ್ಯಶಾಮಲೆಯನ್ನಾಗಿ ಮಾಡಿದ್ದೇನೆ. ನಾನು ಸಮುದ್ರವನ್ನು ಸೇರುವ ಸ್ಥಳದಲ್ಲಿ ತಲೆ ಎತ್ತಿ ನಿಂತಿರುವ ಕಾಂಡ್ಲಾ ಸಸ್ಯ ಸಂಕುಲವಂತೂ ತನ್ನದೇ ವನ್ಯ ಸಂಕುಲವನ್ನು ಸೃಷ್ಟಿಸಿದೆ. ತನ್ನ ಬೆರಗಿನ ಲೋಕವನ್ನು ನಿರ್ಮಾಣ ಮಾಡಿದೆ. ಅದೆಷ್ಟೋ ಅಸಂಖ್ಯಾತ ದೈವಗಳು, ದೇವರುಗಳು ನನ್ನ ಹರಿವಿನ ಪಕ್ಕದಲ್ಲಿವೆ. ಮಾಸ್ತಿಘಿ, ಬೀರಲು, ಚೌಡಿ, ಜಟಕ ಹೀಗೆ ಜನಪದರ ದೇವರುಗಳೆಲ್ಲ ನನ್ನ ಹರಿವಿನ ಸಾಲಿನ ಪಕ್ಕದಲ್ಲಿ ನೆಲೆ ನಿಂತಿವೆ. ಪ್ರತಿದಿನ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಹೀಗೆ ವಿವಿಧ ರೂಪದಲ್ಲಿ ಪೂಜೆಯನ್ನು ಸ್ವೀಕರಿಸುತ್ತ, ಹಬ್ಬ-ಹರಿದಿನಗಳಿಗೆ ಕಾರಣವಾಗುತ್ತ ಜನಪದರನ್ನು ಹರಸುತ್ತಿವೆ.

ಇಂತಹ ದೈವಗಳ ತಾಣಕ್ಕೆ ಹೋಗುವ ಸಂದರ್ಭದಲ್ಲಿ ಕೆಲವೊಮ್ಮೆ ದೋಣಿ ಬಳಕೆಯೂ ಆಗಬೇಕು ಎನ್ನುವುದು ವಿಶೇಷ. ಕಷ್ಟ ಪಟ್ಟಾದರೂ ಸರಿ ಜನಪದರು ತಮ್ಮ ದೈವಗಳಿಗೆ ನಡೆದುಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ಇದು ಅವರ ನಂಬಿಕೆ.
ನನ್ನೊಡಲ ಪರೀಧಿಯಲ್ಲಿ ಅದೆಷ್ಟೋ ಅಪರೂಪದ ಪ್ರಾಣಿ ಸಂಕುಲವಿದೆ. ಪಕ್ಷಿ ಸಮೂಹವಿದೆ. ಸಿಂಹ ಬಾಲದ ಮಂಗ ಎಂಬ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ವಾನರ ಸಮೂಹಕ್ಕೆ ನಾನು ಆಶ್ರಯ ನೀಡಿದ್ದೇನೆ. ಏಷ್ಯಾದ ಕಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ವಾಸಸ್ಥಾನ ಮಾಡಿಕೊಂಡ ವಾನರ ಬಳಗ ಎಂಬ ಖ್ಯಾತಿಗೆ ಸಿಂಹ ಬಾಲದ ಲಂಗೂರ್‌ಗಳು ಹೆಸರಾಗಿವೆ.
ವಿಶ್ವದಲ್ಲಿ ಕೇವಲ 400ರಷ್ಟು ಸಂಖ್ಯೆಯಲ್ಲಿ ಮಾತ್ರ ಬದುಕಿರುವ ಈ ಸಿಂಹಬಾಲದ ಲಂಗೂರ್‌ಗಳು ನನ್ನ ಬಿಟ್ಟರೆ ಸಹೋದರಿ ಶರಾವತಿಯ ಪಕ್ಕದ ಕಾಡಿನಲ್ಲಿ ಮಾತ್ರ ನೋಡಲು ಸಾಧ್ಯಘಿ. ಈ ಕಾರಣದಿಂದಲೇ ವಿಜ್ಞಾನಿಗಳ ಹಾಗೂ ಪರಿಸರ ಪ್ರೇಮಿಗಳ ಒತ್ತಾಸೆ, ಒತ್ತಾಯದಿಂದ ನನ್ನ ಹಾಗೂ ಶರಾವತಿಯ ನಡುವಿನ ಕಾಡನ್ನು ಸಿಂಹಬಾಲದ ಲಂಗೂರ್‌ಗಳ ಸಂರಕ್ಷಿತ ಅರಣ್ಯ ಎಂದು ಮಾರ್ಪಾಡು ಮಾಡಲಾಗಿದೆ. ಹೀಗೆ ಘೋಷಣೆಯಾದ ನಂತರವೇ ಈ ವಾನರಗಳ ಸಂಖ್ಯೆ ನಿಧಾನವಾಗಿ ವೃದ್ಧಿಯಾಗುತ್ತಿದೆ.
ಲೈನ್ ಟೇಲ್ ಲಂಗೂರ್‌ಗಳಂತೆಯೇ ಅಳಿವಿನ ಅಂಚಿನಲ್ಲಿರುವ ಪ್ರಾಣೀಗಳು ನೀರು ನಾಯಿಗಳು. ಗುಂಪು ಗುಂಪಾಗಿ, ಶುದ್ಧ ನೀರಿನಲ್ಲಿ ವಾಸ ಮಾಡುವ ನೀರುನಾಯಿಗಳು ಕರ್ನಾಟಕದಲ್ಲಿಯೇ ಕೆಲವೇ ಕೆಲವು ನದಿಗಳಲ್ಲಿ ವಾಸ ಮಾಡುತ್ತವೆ. ಅಂತಹ ಕೆಲವು ನದಿಗಳಲ್ಲಿ ಒಂದು ನಾನು. ಅತ್ಯಂತ ನಾಚಿಕೆಯ, ಸೂಕ್ಷ್ಮ ಜೀವಿ ನೀರುನಾಯಿ ನನ್ನೊಡಲಲ್ಲಿ ಈಜುತ್ತಘಿ, ಆಡುತ್ತಮ ಬದುಕು ನಡೆಸುತ್ತಘಿ, ಸಂಸಾರ ಕಟ್ಟಿಕೊಂಡಿವೆ. ಬೇಟೆಯಾಡುವವರ ಕಣ್ಣು ತಪ್ಪಿಸಿ ಗೂಡು ನಿರ್ಮಿಸಿಕೊಂಡಿವೆ.
ಪಕ್ಷಿ ಲೋಕದ ಅಪರೂಪದ ಹಕ್ಕಿ ಎನ್ನುವ ಖ್ಯಾತಿಯನ್ನು ಪಡೆದಿರುವ ಹಾರ್ನಬಿಲ್‌ಗೂ ನಾನು ಆಶ್ರಯ ನೀಡಿದ್ದೇನೆ. ನನ್ನ ಹರಿವಿನ ಇಕ್ಕೆಲಗಳಲ್ಲಿ ಬಾನನ್ನು ಚುಂಬಿಸುವಂತೆ ಬೆಳೆದು ನಿಂತ ಮರಗಳಲ್ಲಿ ಹಾರ್ನಬಿಲ್ (ಮಂಗಟ್ಟೆ) ಹಕ್ಕಿಗಳು ಜೀವನ ನಡೆಸುತ್ತಿವೆ. ಇಂತಹ ಮಂಗಟ್ಟೆಗಳಿಗೆ ಅತ್ಯಾವಶ್ಯಕವಾದ ರಾಮಪತ್ರೆ ಮುಂತಾದ ಕಾಡು ಹಣ್ಣುಗಳು ಬೆಳೆಯಲು ನಾನು ಕಾರಣನಾಗಿದ್ದೇನೆ.
ನನ್ನ ಎರಡೂ ದಡಗಳಲ್ಲಿ ವಿಶಾಲವಾದ ಭತ್ತದ ಗದ್ದೆಗಳಿವೆ. ಹಸಿರಿನ ಗಿರಿಗಳಿವೆ. ಸಮೃದ್ಧ ಕಾಡುಗಳಿವೆ. ಸುದೀರ್ಘವಾದ ಅಡಿಕೆಯ ತೋಟಗಳ ಸಾಲಿದೆ. ಇನ್ನೂ ಹಲವು ಕಡೆಗಳಲ್ಲಿ ಮತ್ತಷ್ಟು ಬೆಳೆಗಳಿಗೆ ನೀರುಣಿವ ಕಾರ್ಯದಲ್ಲಿ ನಾನು ತೊಡಗಿದ್ದೇನೆ. ನನ್ನದೇ ತೀರದಲ್ಲಿ ಅಪರೂಪದ ಅಪ್ಪೆಯ ಮಿಡಿಗಳಿವೆ. ಅನಂತಭಟ್ಟನ ಅಪ್ಪೆಯಂತಹ ಅಪರೂಪದ ತಳಿಯ ಅಪ್ಪೆ ಮಿಡಿಗಳು ನನ್ನ ತೀರದಲ್ಲಿ ಮಾತ್ರ ಬೆಳೆಯುತ್ತವೆ ಎನ್ನುವುದು ಇಲ್ಲಿನ ಜೈವಿಕ ಸಮೃದ್ಧತೆಗೆ ಸಾಕ್ಷಿಘಿ. ಮಲೆನಾಡಿನಲ್ಲಿ ನನ್ನ ತೀರದಲ್ಲಿ ಬೆಳೆಯುವ ಬೆಳೆಗಳದ್ದು ಒಂದು ತೂಕವಾದರೆ ಕರಾವಳಿ ತೀರದಲ್ಲಿ ಬೆಳೆಯುವ ಬೆಳೆಗಳು ಇನ್ನೊಂದು ತೂಕದವು.
ಬದಲಾಗುವ ವಾತಾವರಣ, ಹವೆ, ಉಪ್ಪಿನ ಅಂಶಗಳನ್ನು ಒಳಗೊಂಡಿದ್ದರೂ ಕರಾವಳಿ ತೀರದಲ್ಲಿ ವಿಶೇಷ ಬೆಳೆಗಳನ್ನು ಬೆಳೆಯುತ್ತಾರೆ. ಗಜನಿಗಳು ಎಂದು ಕರೆಯಲ್ಪಡುವ ಭತ್ತದ ಗದ್ದೆಗಳಲ್ಲಿ 3000 ವರ್ಷಗಳಿಂದ ಕಗ್ಗ ಎನ್ನುವ ತಳಿಯ ಭತ್ತವನ್ನು ಜನಪದರು ಬೆಳೆಯುತ್ತ ಬಂದಿದ್ದಾರೆ. ಅತ್ಯುತ್ಕೃಷ್ಟ ತಳಿಗಳಲ್ಲಿ ಒಂದಾದ ಕಗ್ಗ ಭತ್ತವನ್ನು ಬೆಳೆಯಲು ಹಾಗೂ ಕೊಯ್ಲು ಮಾಡಲು ದೋಣಿಯ ಮೂಲಕವೇ ತೆರಳುವುದು ವಿಶೇಷ. ಕಗ್ಗ ಭತ್ತದ ಬೆಳೆಗಾಗಿ ನನ್ನೊಡಲ ಮೇಲೆ ದೋಣಿಯನ್ನು ಹಾಕಿ, ನನ್ನ ಸೆಳವನ್ನು ಹರಿವನ್ನು ಸೀಳುತ್ತ ಹೋಗುತ್ತಿದ್ದರೆ ನನಗಾಗುವ ಕಚಗುಳಿ, ಸಂಭ್ರಮ ಅನಿರ್ವಚನೀಯವಾದುದು.
ಘಟ್ಟವನ್ನು ಇಳಿಯುವ ನಾನು ಕರಾವಳಿ ಪ್ರದೇಶದಲ್ಲಿ ಮಂದಗಮನೆಯಾಗಿ ಹರಿಯುತ್ತೇನೆ. ಕರಾವಳಿಗರ ಮನಸ್ಸನ್ನು ಗೆಲ್ಲುವ ನಾನು ಅವರ ಪ್ರಮುಖ ಉದ್ಯಮಕ್ಕೆ ಜೀವ ನೀಡುತ್ತೇನೆ. ನನ್ನ ಒಡಲಿನಲ್ಲಿ ಕರಾವಳಿಗರು ಚಿಪ್ಪು ಉದ್ಯಮವನ್ನು ಕೈಗೊಳ್ಳುತ್ತಾರೆ. ಚಿಪ್ಪನ್ನು ಬೆಳೆದು ದುಡ್ಡು ಮಾಡಿಕೊಳ್ಳುತ್ತಾರೆ. ಅಲ್ಲದೇ ನನ್ನ ಎರಡೂ ತೀರಗಳಲ್ಲಿ ಗಜನಿ ಭೂಮಿಯಲ್ಲಿ ರೈತಾಪಿ ವರ್ಗದವರು ಸಿಗಡಿಯನ್ನು ಬೆಳೆಯುತ್ತಾರೆ. ಸಿಗಡಿಯನ್ನು ಮಾರಾಟ ಮಾಡಿ ತದನಂತರದಲ್ಲಿ ಲಾಭವನ್ನು ಮಾಡಿಕೊಂಡು ಹಸನ್ಮುಖರಾಗಿದ್ದನ್ನು ನಾನು ನೋಡಿದ್ದೇನೆ. ಕರಾವಳಿಯ ತೀರದಲ್ಲಿ ಆಗಾಗ ಸಮುದ್ರದ ನೀರು ನನ್ನೊಡಲಿನ ಒಳಕ್ಕೆ ನುಗ್ಗುತ್ತದೆ. ಹಲವಾರು ಕಿಲೋಮೀಟರುಗಳಷ್ಟು ಒಳಕ್ಕೆ ನುಗ್ಗುವ ಉಪ್ಪು ನೀರು ಹಲವಾರು ರೀತಿಯ ಜೈವಿಕ ಬದಲಾವಣೆಗಳಿಗೂ ಕಾರಣವಾಗುತ್ತದೆ. ದಿನಕ್ಕೆ ಎರಡು ಸಾರಿ ಅಂದರೆ ಉಬ್ಬರ ಹಾಗೂ ಇಳಿತದ ಸಂದರ್ಭದಲ್ಲಿ ಉಪ್ಪು ನೀರು ನನ್ನೊಳಕ್ಕೆ ನುಗ್ಗುವುದು ವಿಶೇಷ.
ಇಂಧ್ರಧನುಷ್ ಅಥವಾ ಕಾಮನಬಿಲ್ಲು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸೂರ್ಯ, ಮಳೆ ಹಾಗೂ ಮೋಡಗಳು ಮಾಡುವ ಬಾನಂಚಿನಲ್ಲಿನ ಬಣ್ಣದ ಚಿತ್ತಾರ ಇದು. ಅನೇಕ ಜಲಪಾತಗಳ ಒಡಲಿನಲ್ಲಿ ಧುಮ್ಮಿಕ್ಕುವ ನೀರು ಕೂಡ ಕಾಮನಬಿಲ್ಲನ್ನು ಸೃಷ್ಟಿಸುತ್ತದೆ. ಆದರೆ ನನ್ನೊಡಲಿನಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತಹ ಚಂದ್ರಧನುಷ್ ಕಾಣಿಸುತ್ತದೆ. ವಿಶ್ವದಲ್ಲಿ ಚಂದ್ರಧನುಷ್ ಕಾಣಿಸಿಕೊಳ್ಳುವ ಸ್ಥಳಗಳಿರುವುದು ಒಂದೋ ಎರಡೋ ಅಷ್ಟೇಘಿ. ಅಂತಹ ಸ್ಥಳಗಳಲ್ಲಿ ಒಂದು ನನ್ನೊಡಲು. ನನ್ನ ಸೃಷ್ಟಿಯಾದ ಉಂಚಳ್ಳಿ ಜಲಪಾತದಲ್ಲಿ ನಿರ್ದಿಷ್ಠ ಸಮಯದಲ್ಲಿ ಚಂದ್ರಧನುಷ್ ಕಾಣಿಸಿಕೊಳ್ಳುತ್ತದೆ. ಅಂದರೆ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಧುಮ್ಮಿಕ್ಕುವ ನೀರಿನಿಂದ ಬಣ್ಣಗಳ ಪರದೆ ಸೃಷ್ಟಿಯಾಗುತ್ತದೆ. ಇದು ವಿಶ್ವವಿಸ್ಮಯ. ಇತ್ತೀಚೆಗಷ್ಟೇ ಇದರ ಛಾಯಾಚಿತ್ರಗ್ರಹಣ ಕೂಡ ನಡೆದಿದೆ. ಈ ಕಾರಣಕ್ಕಾಗಿಯೇ ನಾನು ಇನ್ನೊಮ್ಮೆ ವಿಶ್ವವಲಯದಲ್ಲಿ ಖ್ಯಾತಿ ಪಡೆಯುತ್ತಿದ್ದೇನೆ.
ನನ್ನ ತೀರದ ಇಕ್ಕೆಲಗಳಲ್ಲಿ ಹವ್ಯಕರು, ನಾಯಕರು, ನಾಡವರು, ಕುಣಬಿಗಳು, ಹಾಲಕ್ಕಿಗಳು ಹೀಗೆ ಹಲವು ಜಾತಿ-ಜನಾಂಗಗಳವರು ಬದುಕು ಕಟ್ಟಿಕೊಂಡಿದ್ದಾರೆ. ತಮ್ಮದೇ ಆದ ವಿಶಿಷ್ಟ ಪದ್ಧತಿಯನ್ನು ಅವರು ಅನುಸರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅಡಿಕೆ, ಕಾಳುಮೆಣಸು, ಯಾಲಕ್ಕಿಘಿ, ವೆನಿಲ್ಲಾಘಿ, ಭತ್ತಘಿ, ಕಬ್ಬುಘಿ ಹೀಗೆ ಬೆಳೆಗಳನ್ನು ಬೆಳೆಯುತ್ತ ಬದುಕುತ್ತಿದ್ದಾರೆ. ಅವರ ಮನಸ್ಸನ್ನು ಸೆಳೆಯುವಂತಹ ಯಕ್ಷಗಾನ ನನ್ನ ತೀರದಲ್ಲಿ ಬಹು ಕಾಲದಿಂದ ಬೇರೂರಿದೆ. ಚಂಡೆ ಮದ್ದಲೆಗಳ ಸದ್ದಿನೊಂದಿಗೆ ಭಾಗವತರುಗಳ ರಾಗಬದ್ಧ ಹಾಡುಗಾರಿಕೆಗೆ ಯಕ್ಷಗಾನ ಪಟುಗಳ ಧಿತ್ತೋಂ ನರ್ತನಕ್ಕೆ ಲ್ಲ ಮೆಚ್ಚಿ ತಲೆದೂಗುತ್ತಿದ್ದರೆ ನನಗೆ ಎಲ್ಲಿಲ್ಲದ ಸಂತೋಷ ಸಂಭ್ರಮ. ಯಕ್ಷಗಾನದ ಚಂಡೆಯ ಸದ್ದು ನನ್ನ ಅಲೆಗಳ ಮೇಲ್ಪದರಕ್ಕೆ ತಾಗಿ ಮೈಮನಗಳನ್ನು ನರ್ತಿಸುವಂತೆ ಮಾಡುತ್ತಿದ್ದರೆ ಆಹಾ... ಅಂತಹ ವಿಶಿಷ್ಟ ಭಾವವೊಂದನ್ನು ವಿವರಿಸಲು ಪದಗಳು ಸಾಲುವುದಿಲ್ಲಘಿ.
ಅಘನಾಶಿನಿ ಎಂದರೆ ಪಾಪವನ್ನು ತೊಳೆಯುವವಳು ಎನ್ನುವ ಅರ್ಥವಿದೆಯಂತೆ. ಅದೆಷ್ಟೋ ಜನರ ಪಾಪಗಳನ್ನುಘಿ ತೊಳೆದು ಪರಿಶುದ್ಧರನ್ನಾಗಿ ಮಾಡಿದ್ದೇನೆ. ಬದುಕು ಕಟ್ಟಿಕೊಟ್ಟಿದ್ದೇನೆ. ಹೊಸ ಹುಟ್ಟನ್ನು ನೀಡಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಮಾರಿ ನನ್ನನ್ನೂ ಬಿಡುತ್ತಿಲ್ಲಘಿ. ಶಿರಸಿಯ ಶಂಕರಹೊಂಡ ಈಗಾಗಲೇ ಮಲಿನಗೊಂಡಿದೆ. ಶಿರಸಿಯಿಂದ ಕೆಲವು ಕಿಲೋಮೀಟರುಗಳ ವರೆಗೆ ನಾನು ಹರಿದು ಬಂದರೂ ನನ್ನಲ್ಲಿನ ಕೊಳೆ ಹಾಗೂ ಮಲಿನತೆ ಕರಗದೇ ಇರುತ್ತದೆ. ಶಿರಸಿಯ ನಾಗರಿಕ ಜಗತ್ತು ಬಳಸಿ ಬಿಸಾಡಿದ ತ್ಯಾಜ್ಯಗಳು, ಪ್ಲಾಸ್ಟಿಕ್ ಮುಂತಾದ ಕಸಗಳು ನನ್ನನ್ನು ಇನ್ನಷ್ಟು ಹಾಳು ಮಾಡುತ್ತಿದೆ. ನನ್ನೊಳಗಿನ ಜಲಚರ ಸಂಕುಲಗಳು ನರಳುವಂತೆ ಮಾಡುತ್ತಿದೆ.
ನಾಗರಿಕ ಜಗತ್ತಿನ ಸದಸ್ಯರು ನನ್ನೊಡನ್ನು ಮಲಿನ ಮಾಡುವುದನ್ನು ನಾನು ಮೌನವಾಗಿ ಗಮನಿಸುತ್ತಿದ್ದೇನೆ. ಮಾನವನದ್ದೇ ಕಾರಣದಿಂದ ನಾನು ನೀರಿಲ್ಲದೇ ಸೊರಗುವ ಹಂತಕ್ಕೂ ಬಂದಿದ್ದೇನೆ. ಇದರಿಂದಾಗಿ ನನ್ನೊಡಲಿನಲ್ಲಿರುವ ಜಲಚರಗಳು ಈಗಾಗಲೇ ಜೀವಬಿಡುತ್ತಿದ್ದರೆ ಅಪರೂಪದ ಪ್ರಾಣೀ, ಪಕ್ಷಿ ಸಂಕುಲಗಳು, ವೃಕ್ಷ ಸಮೂಹಗಳು ನನ್ನಿಂದ ದೂರವಾಗುತ್ತಿವೆ. ಹೀಓಗಾಗಿ ನಾನು ಮೂಕವಾಗಿ ರೋದಿಸುತ್ತಿದ್ದೇನೆ. ನನ್ನನ್ನು ಅದೆಷ್ಟೋ ವರ್ಷಗಳಿಂದ ಗಮನಿಸಿಕೊಂಡು ಬರುತ್ತಿರುವ ಹಿರಿಯ ಜೀವಗಳು ನಾನು ಮೊದಲಿನಂತಿಲ್ಲಘಿ, ಸೊರಗಿದ್ದೇನೆ ಎಂಬುದನ್ನು ಆಗಾಗ ಮಾತನಾಡಿಕೊಳ್ಳುತ್ತಿರುವುದು ನನ್ನ ಕಿವಿಗೆ ಬೀಳುತ್ತದೆ. ಕೃಷಕಾಯಳಾದ ನನ್ನೆದುರು ಹಿರಿಯರ ನಿಟ್ಟುಸಿರು ನನ್ನ ಪಾಲಿಗೆ ಅದೇನೋ ಆತಂಕವನ್ನೂ ಹುಟ್ಟು ಹಾಕುತ್ತದೆ. ತಿಳಿದೂ ತಿಳಿದೂ ಮಾಡುವ ದ್ರೋಹಗಳು ನನ್ನನ್ನು ಕೊಲ್ಲುತ್ತಿವೆ. ಓ ಮಾನವ ನೀನು ನನ್ನನ್ನು ಮುಂದಿನ ಜನಾಂಗಕ್ಕೆ ಉಳಿಸಲಾರೆಯಾ ಎಂದು ಬೇಡುವಂತೆ ಅನ್ನಿಸುತ್ತದೆ. ನನ್ನನ್ನು ಉಳಿಸಲಾರೆಯಾ?



No comments:

Post a Comment