Monday, August 21, 2017

ಸಿಹಿ-ಕಹಿ ಸಾಲುಗಳು

ತಂತ್ರ-ಪ್ರತಿತಂತ್ರ

ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ..
ಇದಕ್ಕೊಂದು ಉದಾಹರಣೆ ...
ಐಟಿ ರೈಡ್ ಆದ ತಕ್ಷಣ 
ಕರೇಂಟ್ ಹೋಗುವುದು.!


ರೂವಾರಿ

ಐಟಿ ರೈಡ್ ಆದಾಗ 
ಎಲ್ರೂ ಷಾ ಕಡೆ ನೋಡ್ತಾ ಇದ್ರು...
ಸಿದ್ದಣ್ಣ ಖುಷಿಯಿಂದ 
ಒಳಗೊಳಗೆ ನಕ್ರು...


ಕಾರಣ 

ಪಪ್ಪೂ..:
ಗುಜರಾತಲ್ಲಿ ಸಿಕ್ಕಾಪಟ್ಟೆ ಮಳೆ ಬರ್ತಿದೆ..
ಇದಕ್ಕೆ ಮೋದಿ ಕಾರಣ..
ರಾಜೀನಾಮೆ ಕೊಡ್ಬೇಕು...!


ನೋಟ

ಬೆಂಗಳೂರಲ್ಲಿ ಮಳೆ 
ಬರುತ್ತಿರುವಾಗ ರೈನ್ ಕೋಟ್ ಹಾಕ್ಕೊಂಡು ಹೋಗುವವನನ್ನು 
ಅನ್ಯಗ್ರಹ ಜೀವಿಯಂತೆ ದಿಟ್ಟಿಸುತ್ತಾರೆ..!

ಜೂಜು

ಟ್ರಾಫಿಕ್ಕಿನಲ್ಲಿಸಿಗ್ನಲ್ ಬಿಟ್ಟ ತಕ್ಷಣಪ್ರತಿಯೊಬ್ಬಬೈಕ್ ಸವಾರನೂರೇಸಿಗೆ ಇಳಿದ ಕುದುರೆಯಾಗುತ್ತಾನೆ..!


ರೂಪಾಂತರ

ಜಪಾನಿಗರ ಬೋನ್ಸಾಯ್ 
ತಂತ್ರಜ್ಞಾನಕ್ಕೆ ಸಿಕ್ಕು ತಮ್ಮ 
ದೈತ್ಯ ದೇಹ ಕಳೆದುಕೊಂಡ 
ಡೈನೋಸಾರ್ ಗಳೇ 
ಈಗಿನ ಓತಿಕ್ಯಾತಗಳು..!


ಪ್ರಯೋಗ ಪಶು

ಜಪಾನಿಗರು ಮೊಟ್ಟಮೊದಲು 
ಬೋನ್ಸಾಯ್ ತಂತ್ರಜ್ಞಾನ 
ಪ್ರಯೋಗ ಮಾಡಿದ್ದು 
ಡೈನೋಸಾರ್ ಗಳ ಮೇಲಂತೆ..!


ಕಾರಣ

ಅವ್ನು ತೊಡೆ ಕಚ್ಚಿದ್ನಂತೆ..
ಇವ್ನು ಕಂಪ್ಲೇಂಟ್ ಕೊಟ್ನಂತೆ..
ಅದೆಲ್ಲ ಸರಿ.. 
ಅವ್ನು ತೊಡೆ ಕಚ್ಚೋ ತನಕ 
ಇವನೇನ್ ಮಾಡ್ತಿದ್ದ ಅಂತ..!

ಪೂಜೆ

ಹೆಂಡತಿಯಿಂದ ಗಂಡನಿಗೆ
ಭೀಮನ ಅಮಾವಾಸ್ಯೆ 
ದಿನ ಪಾದಪೂಜೆ..‌
ಉಳಿದ ದಿನಗಳಲ್ಲಿ ಮಂಗಳಾರತಿ..!!!


ಬದಲಾವಣೆ

ಹುಡುಗಿಯರು ಆಕೆಯ 
ಹುಡುಗ ಸ್ವಾಭಿಮಾನಿ ಆಗಿರಬೇಕು 
ಎಂದು ಬಯಸುತ್ತಾರೆ..!
ಅದೇ ರೀತಿ ಆ ಹುಡುಗ 
ತಾನು ಹೇಳಿದ್ದನ್ನೆಲ್ಲ 
ಕುರಿಯಂತೆ ಕೇಳಲಿ ಎಂದುಕೊಳ್ಳುತ್ತಾರೆ.!


-------------------
(ಆಗಾಗ ಬರೆಯುತ್ತಿದ್ದ ಸ್ಟೇಟಸ್ಸುಗಳಲ್ಲಿ ಆಯ್ದ... ುತ್ತಮವಾದ ಸ್ಟೇಟಸ್ಸುಯಗಳನ್ನು ಈ ರೂಪದಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.. ಓದಿ ಹೇಳಿ)


No comments:

Post a Comment