Saturday, November 3, 2012

ಎಲ್ಲ ಮರೆತಿರುವಾಗ... ( ಕಥೆ ಭಾಗ-6)

(ಭಾಗ ಐದರಿಂದ ಮುಂದುವರಿದಿದ್ದು..)

ಇಷ್ಟೆಲ್ಲ ಆದರೂ ಆತನ ಹೆಸರು ನೆನಪಾಗಲಿಲ್ಲ ನೋಡಿ...
ಜೀವನ್.. ಅವನ ಹೆಸರು..
ಶಿರಸಿ ಹತ್ತಿರದ ಅಪ್ಪಟ ಮಲೆನಾಡಿನ ಹಳ್ಳಿ..
ಒಂದು ಕಡೆ ದೈತ್ಯಾಕಾರದ ಗುಡ್ಡ.. ಿನ್ನೊಂದು ಕಡೆಗೆ ಅಡಿಕೆಯ ತೋಟ...
ಮತ್ತೊಂದು ಕಡೆ ಊರನ್ನು ಮುತ್ತಿಕ್ಕಿ ಕುತ್ತಿಕ್ಕಿ ಹರಿಯುವ ನದಿ ಅಘನಾಶಿನಿ,...

ಆತ ಬೆಂಗಳೂರಿನ ಭ್ರಮಾನಗರಿಯನ್ನು ಹೊಕ್ಕು ಹಾದಿದ ಕೆಲವೇ ದಿನಗಳಲ್ಲಿ ಆ ಊರಿನ ಪಟ್ಟುಗಳನ್ನೆಲ್ಲ ಕಲಿತುಬಿಟ್ಟ.
ಾತನ ಪಾಲಿನ ಹಾಡೂ ಅಷ್ಟೇ ಕೈ ಹಿಡಿಯಿತು.
ನಿಧಾನವಾಗಿ ಹಾಡಿನ ಕಛೇರಿ ಕೊಡಲು ಪ್ರಾರಂಭಿಸಿದ..
ಾತನ ಹಾಡುಗಳಿಗೆ ಎಫ್ ಎಂ ರೇಡಿಯೋಗಳು ಧ್ವನಿಯಾದವು..
ನಿಧಾನವಾಗಿ ಆತ ಕನಾಱಟಕಾದ್ಯಂತ ವರ್ಡ್ ಫೇಮಸ್ಸಾಗಲು ಪ್ರಾರಂಭಿಸಿದ..
ಮುಂದೊಮ್ಮೆ ಆಗಿಯೂಬಿಟ್ಟ..
ಪ್ರತಿಯಾಗಿ ರಾಜ್ಯೋತ್ಸವದಂತಹ ಹಿರಿಯ ಪ್ರಶಸ್ತಿಗಳೇ ಆತನಿಗೆ ಸಿಕ್ಕವು...
ಯುವ ವಯಸ್ಸಿನಲ್ಲೇ ಆತ ಬಹುದೊಡ್ಡ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ.

---

ಾತನ ಯಶಸ್ಸನ್ನು ಕಂಡು ಹಿಗ್ಗಿದವಳು ರಚನಾ..
ಬೆಂಗಳೂರಿಗೆ ಕರೆತಂದು ಆತನನ್ನು ಸರಿಪಡಿಸಿ, ತನ್ನ ಮನೆಯಲ್ಲೇ ಆಶ್ರಯ ನೀಡಿದವಳು ಆಕೆ..
ಆಕೆಯೆಡೆಗೆ ಧನ್ಯತಾ ಭಾವ ಜೀವನ್ ಗೆ..
ಆಕೆಗೆ ಪ್ರೇಮದ ಭಾವ...

ಅದನ್ನು ಹೇಳಿಕೊಳ್ಳಲು ಆಗದ ತಳಮಳ...
ಹೇಳಿದರೆ ಅದ್ಯಾವ ರೀತಿಯ ಪ್ರತಿಕ್ರಿಯೆ ನೀಡ್ತಾನೋ ಅನ್ನುವ ಻ಳುಕು ಆಕೆಯ ಮನದೊಳಗೆ...

ಆದರೂ ಅದನ್ನು ಕೇಳುವ ನೆಪದಲ್ಲಿ ಜೀವನ್ನ ಬಳಿ ಒಂದು ದಿನ ಬಂದು ಮಾತನಾಡಲಾರಂಭಿಸಿದಳು...
ಹಾಯ್ ಜೀವನ್..
ಹೇಳು ರಚನಾ..
ಹೇಗಿದೆ ಹೊಸ ಲೈಫು..?
ಏನೋ ಬೇರೆಯ ಥರಾ ಇದ್ದು..
ನಿನ್ ಮೊದಲಿನ ಬದುಕಿಗೆ ಈಗಿನದಕ್ಕೆ ಸಂಪೂಣಱ ಬದಲಾವಣೆ ಸಿಕ್ಕಿದ್ದು...
ಹೌದು...
ಆದರೆ ನಂಗಿನ್ನೂ ನಿನ್ನ ಪೂರ್ವ ಿತಿಹಾಸ ತಿಳಿದ್ದಿಲ್ಲೆ... ಏನಾಗಿತ್ತು ನಿಂಗೆ... ಯಾಕೆ ನಿಂಗೆ ಹುಚ್ಚು ಹಿಡಿದಿತ್ತು.. ಇಂತಹ ಟ್ಯಾಲೆಂಟೆಡ್ ವ್ಯಕ್ತಿ ನೀನು.. ಯಾಕೆ ಶಿರಸಿಯಲ್ಲಿ ಆ ಪರಿಯ ಕೆಟ್ಟಾ ಕೊಳಕು ಜೀವನ ನಡಿಸ್ತಾ ಇದ್ದಿದ್ದೆ?

ಚಿಂತನೆಗೆ ಬಿದ್ದ ಜೀವನ್ ನಿಟ್ಟುಸಿರು ಬಿಟ್ಟು... ಏನ್ ಹೇಳವ್ವು... ನನ್ನ ಬದುಕಿನ ಬಗ್ಗೆ ಹೇಗೆ ಹೇಳೋದು... ಅದೊಂದು ಥರಾ ಕಹಿ ಘಟನೆಗಳ ಗೋಜಲು ಗೋಜಲು.. ಹೇಳು ಹೋದರೆ ಮನಸ್ಸಿಗೆ ಬೇಸರ... ಹೇಳೋದಾದ್ರೋ ಹ್ಯಾಂಗೆ ಅಂತ....

ರಚನಾ: ಹೇಳೋ ಮಾರಾಯ.. ಕೇಳಿ ಸ್ವಲ್ಪ ತಿಳ್ಕತ್ತಿ..
ಜೀವನ್ : ಹೌದು.. ಆದರೆ ಹೆಂಗೆ ಹೇಳೋದು..? ನಂಗೆ ತಳಮಳ...
ರಚನಾ: ಟೈಂ ತಗಂಡಾದ್ರೂ ಹೇಳು ಮಾರಾಯಾ...

ಜೀವನ್ ಆಲೋಚಿಸಿ.. ಆಲೋಚಿಸಿ ಹೇಳಲು ತೊಡಗಿದ....

(ಮುಂದಿನದು.... ಮುಂದಕ್ಕೆ....)

No comments:

Post a Comment