Saturday, August 29, 2009

ಅಘನಾಶಿನಿ

ಅಘನಾಶಿನಿಯ ಕುರಿತು ನಾನು ಚಿಕ್ಕಂದಿನಲ್ಲಿ ಒಂದು ಕವನ ಬರೆದಿದ್ದೆ. ಯಾಕೋ ನಿಮ್ಮ ಮುಂದೆ ಹೇಳಿಕೋ ಬೇಕು ಅನ್ನಿಸ್ತಿದೆ. ಓದಿ ...

ಅಘನಾಶಿನಿ
ಅಘನಾಶಿನಿ ಅಘನಾಶಿನಿ ಪಾಪಗಳ ನಾಶಿನಿ
ಸರ್ವ ಜನರ ಪಾಪಗಳನು ತೊಳೆಯುವ ವಾಹಿನಿ..|

 ದಟ್ಟ ಕಾನನದಲ್ಲಿ ಜನಿಸಿ ಅರಬ್ಬಿ ಜಲದಿ ಸೇರಲು
ದಿಟ್ಟತನದಿ ಹರಿಯುವ ಜೀವದ ವಾಹಿನಿ ..|

ತೆಂಗು ಅಡಿಕೆ ಬಾಳೆಗಳಿಗೆ ಮಾವು ಅಪ್ಪೆ ಮರಗಳಿಗೆ

ತಂಪುನೀರು ನೀಡುವ  ಅಮರ ಅಮರ ವಾಹಿನಿ|

ಬರಡನ್ನು ಹಸಿರು ಮಾಡಿ ಸಾವಿಗೆ ಅಮೃತವ ನೀಡಿ
ಜನರ ಬದುಕು ಹಸನು ಮಾಡುವ ಜೀವ ಜನದ ವಾಹಿನಿ..||

ಉಂಚಳ್ಳಿಯ ಘಟ್ಟದಲಿ ಹೆಮ್ಮೆಯಿಂದ ಇಳಿದುಬಂದು
ಜಲಪಾತವ ಸೃಷ್ಟಿಸಿರುವ ಸಕಲ ಸಮ್ಮೋಹಿನಿ..||

ಋಷಿಗಳಿಗೆ ನೆರಳಾಗಿ ಕವಿಗಳಿಗೆ ಸ್ಪೂರ್ತಿಯಾಗಿ
ರೈತರಿಗೆ ಉಸಿರಾಗುವ ಎಲ್ಲರ ಅಘನಾಶಿನಿ..||

ತನ್ನ ಒಡಲು ಬರಿದು ಮಾಡಿ  ಜೀವ ಜಲವ ಖಾಲಿ ಮಾಡಿ
ಶಿರಸಿಗೆ ನೀರು ಕೊಡುವ ಮಹಾತ್ಯಾಗದಾಯಿನಿ..||

ಅಘನಾಶಿನಿ ಅಘನಾಶಿನಿ ನಿನಗಿದೋ ವಂದನೆ

ಲೋಕೋತ್ತಮ ಕಾರ್ಯಗಳಿಂದ ವಿಶ್ವದ ಅಭಿನಂದನೆ..||


+ ಚಿಕ್ಕಂದಿನ ಹುರುಪಲ್ವ ಹಾಗಾಗಿ ಬಹಳ ಮಜಾ ಅನುಭವಿಸಿ ಬರೆದಿದ್ದೆ.. ಬಹಳ ದಿನಗಳ ನಂತರ ಈ ಕವನ ಅದೆಲ್ಲೋ ಮೂಲೆಯಲ್ಲಿ ಬಿದ್ದುಕೊಂಡಿತ್ತು.. ಸಿಕ್ಕಿತು.. ನಿಮ್ಮ ಮುಂದೆ ಇಡೋಣ ಅಂತ.. ಬಹುತೇಕ ದಶಕಗಳ ಹಿಂದೆ  ನನ್ನಲ್ಲಿನ್ನೂ ಕವನ ಹುಟ್ಟುವ ಸಮಯ.. ಆಗ ಬರೆದಿದ್ದ ಈ ಕವನ ನಿಮಗೆ ಬಾಲಿಶ  ಅನ್ನಿಸಬಹುದು..ಆದರೂ ಓದಿ.. ಹೇಗಿದೆ ಹೇಳಿ..

1 comment: