Tuesday, September 6, 2016

ಸಂಪ್ರದಾಯದ ಹಾಡುಗಳಲ್ಲಿ ಗಣೇಶ ಚತುರ್ಥಿಯ ವರ್ಣನೆ

ಮನೆ ಮನೆಗಳಲ್ಲಿ ಗಣೇಶ ಚತುರ್ಥಿಯ ಸಂಭ್ರಮ-ಸಡಗರ ಮೇರೆ ಮೇರಿದೆ. ಎಲ್ಲ ಕಡೆಗಳಲ್ಲಿಯೂ ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಯ ಹಬ್ಬಕ್ಕೆ ಸಂಪ್ರದಾಯದ ಹಾಡುಗಳಲ್ಲಿ ವಿಶೇಷ ಅರ್ಥವನ್ನೇ ನೀಡಲಾಗಿದೆ. ಮಂಗಳಮೂರ್ತಿ ವಿನಾಯಕನ ಚತುರ್ಥಿಗೆ ತನ್ನದೇ ಆದ ಹೊಸ ಅರ್ಥವನ್ನು ಹಳ್ಳಿಗಳ ಸಂಪ್ರದಾಯದ ಹಾಡುಗಳು ನೀಡುವ ಮೂಲಕ ವಿಶೇಷ ಮೆರಗಿಗೂ ಕಾರಣವಾಗಿವೆ.
ಸಂಪ್ರದಾಯದ ಹಾಡುಗಳನ್ನು ಹಬ್ಬಗಳು ನಡೆಯುವ ಸಂದರ್ಭದಲ್ಲಿ ವಿಶೇಷವಾಗಿ ಹಾಡಲಾಗುತ್ತದೆ. ಎಲ್ಲಾ ಜಾತಿಗಳವರೂ ವಿಶೇಷವಾಗಿ ಹಾಡುವ ಸಂಪ್ರದಾಯದ ಹಾಡುಗಳು ಲಯಬದ್ಧವಾಗಿಯೂ, ಕಿವಿಗೆ ಇಂಪಾಗುವ ರೀತಿಯಲ್ಲಿಯೂ ಇರುತ್ತವೆ. ಜೊತೆಜೊತೆಯಲ್ಲಿ ಗಾಂವಟಿ ಶಬ್ದಗಳನ್ನು ಒಳಗೊಂಡಿದ್ದು ಸರಳ ಭಾಷೆಯಲ್ಲಿ ಮಹತ್ತರ ಅರ್ಥಗಳನ್ನು ಜಗತ್ತಗೆ ಸಾರಿ ಹೇಳುತ್ತವೆ. ಗಣೇಶ ಹಬ್ಬದ ಕುರಿತಂತೆಯೂ ಸಾಕಷ್ಟು ಸಂಪ್ರದಾಯದ ಹಾಡುಗಳು ಚಾಲ್ತಿಯಲ್ಲಿವೆ. ವಿಭಿನ್ನ ಕಥೆಗಳೂ ಇವೆ. ನಿಮ್ಮ ಮುಂದೆ ನೀಡಲಾಗುತ್ತಿರುವ ಈ ಸಂಪ್ರದಾಯದ ಹಾಡಿನಲ್ಲಿ ಶಿವ ಹಾಗೂ ಪಾರ್ವತಿಯರ ನಡುವಿನ ಸಂವಾದ ಬೆರಗುಗೊಳಿಸುತ್ತದೆ. ಪೂರ್ವಾರ್ಧ ಹಾಗೂ ಉತ್ತರಾರ್ಧ ಎಂಬ ಎರಡು ಪ್ರಮುಖ ಭಾಗಗಳಿದ್ದು ಪಾರ್ವತಿ ತನ್ನ ತವರು ಮನೆಗೆ ಹೋಗುವುದು, ಆಕೆಯನ್ನು ಮರಳಿ ಮನೆಗೆ ಕರೆದುಕೊಂಡು ಬರಲು ಶಿವ ತನ್ನ ಪುತ್ರನಾದ ಗಣಪನನ್ನು ಕಳಿಸುವುದು ಹಾಗೂ ಮರಳಿ ಬಂದ ನಂತರ ಪಾರ್ವತಿಯ ತವರು ಮನೆಯಲ್ಲಿ ಏನೇನಾಯಿತು ಎನ್ನುವುದನ್ನು ಶಿವ ಕೇಳಿ ತಿಳಿದುಕೊಳ್ಳುವ ಸನ್ನಿವೇಶಗಳನ್ನು ಒಳಗೊಂಡಿದೆ.
ಕನಸ ಕಂಡೆನು ರಾತ್ರಿ ಬೆನಕ ತಾನಾಡುವುದ ವನಜಾಕ್ಷಿ ಗೌರಿ ಪಿಡಿದೆತ್ತಿ
ಪಿಡಿದು ಮುದ್ದಾಡುವುದ ನಿನ್ನಿರುಳು ಕಂಡೆ ಕನಸನ್ನ...
ಎಂದು ಆರಂಭವಾಗುವ ಈ ಹಾಡಿನಲ್ಲಿ ಪಾರ್ವತಿಯ ತಂದೆ ಪರ್ವತರಾಜನ ಬಳಿ ಪರ್ವತರಾಜನ ಮಡದಿ ಮಗಳು ಹಾಗೂ ಮೊಮ್ಮಗನ ನೋಡುವ ಬಯಕೆಯನ್ನು ವ್ಯಕ್ತ ಪಡಿಸುತ್ತಾಳೆ. ರಾತ್ರಿ ಕನಸಿನಲ್ಲಿ ಪಾರ್ವತಿ ತನ್ನ ಪುತ್ರ ಗಣಪನನ್ನು ಎತ್ತಿ ಮುದ್ದಾಡಿದಂತೆ ಕನಸು ಬಿತ್ತು ಎನ್ನುತ್ತಾಳೆ. ನಂತರ ಮಡದಿಯ ಕೋರಿಕೆಗೆ ಅನುಗುಣವಾಗಿ ಪರ್ವತರಾಜ ಕೈಲಾಸಕ್ಕೆ ತೆರಳಿ ಶಿವ, ಪಾರ್ವತಿ ಹಾಗೂ ಗಣಪನನ್ನು ಕರೆಯುತ್ತಾನೆ. ಅದಕ್ಕೆ ಪ್ರತಿಯಾಗಿ ಪಾರ್ವತಿ ತಾನು ತವರಿಗೆ ತೆರಳುತ್ತೇನೆ ಎಂದು ವಿನಂತಿಸಿಕೊಳ್ಳುತ್ತಾಳೆ. ಆದರೆ ಅದಕ್ಕೆ ಪ್ರತಿಯಾಗಿ ಶಿವ ಪಾರ್ವತಿಯ ಬಳಿ `ನಿನ್ನ ತವರಿನ ಜನ ಬಡವರು. ಅಲ್ಲೇಕೆ ಹೋಗುತ್ತೀಯಾ..' ಎನ್ನುತ್ತಾನೆ.
ಚಿಕ್ಕ ಬೆನವಣ್ಣನು ಚಕ್ಕುಲಿಯ ಬೇಡಿದರೆ ನೆತ್ತಿಮೇಲೋಂದ ಸೊಣೆವರೋ..
ಶ್ರೀಗೌರಿ ನೀನಲ್ಲಿಗೆ ಹೋಗಿ ಫಲವೇನೂ..?
ಎಂದು ಹೇಳುತ್ತಾನೆ. ಅಂದರೆ ಪುಟ್ಟ ಬಾಲಕನಾದ ಗಣಪ ಚಕ್ಕುಲಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಬಯಸಿ ಕೇಳಿದರೆ ಬಡವರಾದ ನಿನ್ನ ತವರಿನ ಜನ ಅದನ್ನು ಕೊಡುವ ಬದಲು ತಲೆಯ ಮೇಲೆ ಮೊಟಕಿ ಸುಮ್ಮನಿರಿಸುತ್ತಾರೆ ಎಂದು ಶಿವ ತನ್ನ ಮಡದಿಯನ್ನು ಹಂಗಿಸುತ್ತಾನೆ.
ಇಂದು ಹೋದರೆ ನೀನು ಕಂದರನು ಬಿಟ್ಟೋಗು
ಇಂದಿಗೆ ಮೂರು ದಿನದಲ್ಲಿ, ಬರದಿದ್ದರೆ ಚಂದ್ರಶೇಖರನ ಕೊರಳಾಣೆ..
ಎಂದು ಶಿವ ಹೆಂಡಿತ ಬಳಿ ಹೇಳಿ ಮೂರೇ ದಿನದಲ್ಲಿ ಮರಳಿ ಕೈಲಾಸಕ್ಕೆ ಬಾ. ತವರಿಗೆ ಕರೆಯಲು ಬಂದಿರುವ ತಂದೆಯ ಜೊತೆ ಹೋಗಲು ಬಯಸಿದರೆ ಗಣಪನನ್ನು ಕೈಲಾಸದಲ್ಲಿಯೇ ಬಿಟ್ಟುಹೋಗು ಎಂದು ಆಜ್ಞಾಪಿಸುತ್ತಾನೆ. ನಂತರ ಪಾರ್ವತಿ ಗಣಪನನ್ನು ಕೈಲಾಸದಲ್ಲಿಯೇ ಬಿಟ್ಟು ತವರಿಗೆ ಹೋಗುತ್ತಾಳೆ. ಪಾರ್ವತಿ ತವರಿಗೆ ಹೋದ ನಂತರ ಶಿವನಿಗೆ ಕೈಲಾಸದಲ್ಲಿ ಏಕಾಅಂಗಿ ಭಾವ ಕಾಡುತ್ತದೆ. ಪಾರ್ವತಿ ತವರಿಗೆ ಹೋದ ಒಂದೇ ದಿನದಲ್ಲಿಯೇ ಒಂದು ವರ್ಷವಾದಂತೆ ಅನ್ನಿಸುತ್ತದೆ. ಬೇಸರಿಸಿದ ಶಿವ ಮರುದಿನವೇ ಗಣಪನ ಬಳಿ ಆತನ ಅಜ್ಜನಮನೆಗೆ ಹೋಗಿ ತಾಯಿಯನ್ನು ಕರೆದುಕೊಂಡು ಬಾ ಎಂದು ಆಜ್ಞಾಪಿಸುತ್ತಾನೆ.
ತಾಯಿಯನ್ನು ಕರೆದುಕೊಂಡು ಬರಲು ಭೂಲೋಕಕ್ಕೆ ಬರುತ್ತಿರುವ ಗಣಪನ ಕುರಿತು ತಿಳಿದ ಭೂಲೋಕ ವಾಸಿಗಳು ಗಣಪನ್ನು ದಾರಿ ಮಧ್ಯದಲ್ಲಿಯೇ ತಡೆದು ನಿಲ್ಲಿಸಿ ಸಕಲ ಭಕ್ಷ್ಯ ಭೋಜನಗಳನ್ನೂ ನೀಡುತ್ತಾರೆ. ಅವುಗಳನ್ನು ತಿಂದು ದೊಡ್ಡ ಹೊಟ್ಟೆಯನ್ನು ಮಾಡಿಕೊಂಡು ದಾರಿಯಲ್ಲಿ ಬರುತ್ತಿರುವಾಗ ಎಡವಿ ಬೀಳುವ ಗಣಪನ ಹೊಟ್ಟೆ ಒಡೆದು ಹೋಗುತ್ತದೆ. ಕೊನೆಗೆ ಆ ಹೊಟ್ಟೆಗೆ ಹಾವನ್ನು ಸುತ್ತುತ್ತಾನೆ ಎನ್ನುವುದು ಹಾಡಿನಲ್ಲಿ ಬರುವ ವಿವರಗಳು. ಆ ನಂತರದಲ್ಲಿ ಗಣಪನನ್ನು ನೋಡಿ ಚಂದ್ರ ನಗುವುದು ಹಾಗೂ ಚಂದ್ರನಿಗೆ ಶಾಪ ಕೊಡುವ ಕತೆಗಳೆಲ್ಲ ಪ್ರತಿಯೊಬ್ಬರಿಗೂ ತಿಳಿದಿದೆ. ನಂತರದಲ್ಲಿ ಪರ್ವತರಾಜನ ಅರಮನೆಗೆ ತೆರಳುವ ಗಣಪನಿಗೆ ವಿಶೇಷ ಪೂಜೆ ಮಾಡಿ ಸಕಲ ಭಕ್ಷ್ಯ ಭೋಜನಗಳನ್ನೂ ನೀಡಲಾಗುತ್ತದೆ. ಕೊನೆಯಲ್ಲಿ ಗಣಪ ತಾಯಿ ಪಾರ್ವತಿಯನ್ನು ಕರೆದುಕೊಂಡು ಕೈಲಾಸಕ್ಕೆ ಮರಳುತ್ತಾನೆ. ಪಾರ್ವತಿ ಕೈಲಾಸಕ್ಕೆ ಮರಳಿದ ನಂತರ ಆಕೆಯ ಬಳಿ ತವರಿನ ವಿಷಯ ಕೇಳಿ ಪರ್ವತರಾಜನ್ನು ಶಿವ ವ್ಯಂಗ್ಯವಾಗಿ ಆಡಿಕೊಳ್ಳುವ ಪರಿ ಸಂಪ್ರದಾಯದ ಹಾಡುಗಳನ್ನು ಸವಿವರವಾಗಿ ವರ್ಣನೆಯಾಗಿದೆ.
ಹೋದಾಗೇನನು ಕೊಟ್ಟುರ, ಬರುವಾಗೇನನು ಕೊಟ್ಟರು
ಮರೆಯದೇ ಹೇಳೆಂದ ಹರನು ತಾನು.. ಎಂದು ಶಿವ ಕುತೂಹಲದಿಂದ ಕೇಳುತ್ತಾನೆ. ಅಷ್ಟೇ ಅಲ್ಲದೇ ತನ್ನ ಪುತ್ರ ಗಣಪನ ಕುರಿತಂತೆ ಕೆಸವಿನೋಗವ ಬಡಕಲಾಗಿಹನೋ ಬೆನವಣ್ಣ ಎಂದೂ ಹೇಳುತ್ತಾನೆ. ಅಂದರೆ ಬಡವನಾದ ಪರ್ವತರಾಜ ಮನೆಯಲ್ಲಿ ಸರಿಯಾಗಿ ಆತಿಥ್ಯವನ್ನೇ ಮಾಡಿಲ್ಲ. ಪರಿಣಾಮವಾಗಿ ಗಣಪ ಬಡಕಲಾಗಿದ್ದಾನೆ ಎಂದು ಹಂಗಿಸುತ್ತಾನೆ. ಇದರಿಂದ ಪಾರ್ವತಿ ನೊಂದುಕೊಳ್ಳುತ್ತಾಳೆ. ತವರುಮನೆಯನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆಗ ಪಾರ್ವತಿಯ ಬಳಿ ತವರಿನಲ್ಲಿ ಯಾವ ರೀತಿ ಸತ್ಕರಿಸಿದರು ಎನ್ನುವುದನ್ನು ವಿವರಿಸುವಂತೆ ಕೇಳುತ್ತಾನೆ.
ಎಂದ ಮಾತನು ಕೇಳಿ ನೊಂದು ಹೇಳ್ದಳು ಗೌರಿ ಬಂಧು ಬಾಂಧವರೆಲ್ಲ ಸುಖದೊಳಿರಲಿ,
ತಂದೆ ಗಿರಿ ರಾಯನು ಹಿಂದಿನ ಹಿರಿಯನು ನಮ್ಮವರು ಬಡವರು ಇನ್ನೇನ ಕೊಟ್ಟಾರೆ ಎಂದು ತವರಿನ ಕುರಿತು ಹೇಳುತ್ತಾಳೆ.
ಬೆನವಣ್ಣಗೆ ಉಂಗುರ, ಬೆನವಣ್ಣಗೆ ಉಡಿದಾರ, ಬೆನವಣ್ಣಗೆ ಪಟ್ಟೆ ಪೀತಾಂಬ್ರವು,
ಕನಕದ ಕುಂಭದಲಿ ಬೆನಕನಿಗೆ ಭಕ್ಷ್ಯಗಳು ನಮ್ಮವರು ಬಡವರಿನ್ನೇನ ಕೊಟ್ಟಾರೆ..
ಆಸೇರು ಸಣ್ಣಕ್ಕಿ, ಮೂಸೇರು ದೊಡ್ಡಕ್ಕಿ, ನೂರ್ಸೇರು ಬೆಲ್ಲ-ತುಪ್ಪದ ಕೊಡಗಳು..
ಎಮ್ಮೆಯು ಕರ ಹಿಂಡು ಗೋವುಗಳು... ನಮ್ಮವರು ಬಡವರು ಇನ್ನೇನ ಕೊಟ್ಟಾರೆ.. ಎಂದು ತನ್ನ ತವರನ್ನು ಸಮರ್ಥನೆ ಮಾಡಕೊಳ್ಳುತ್ತಾಳೆ. ಕೊನೆಯಲ್ಲಿ ಶಿವ ಪಾಅರ್ವತಿಯ ಮಾತಿನಿಂದ ಸಮಾಧಾನಗೊಳ್ಳುತ್ತಾನೆ. ಅಲ್ಲದೇ ತಾನು ಹಂಗಿಸಿದ ಕಾರಣಕ್ಕಾಗಿ ಬೇಸರ ಮಾಡಿಕೊಂಡ ಪಾರ್ವತಿಯನ್ನು ಸಮಾಧಾನ ಮಾಡುತ್ತಾನೆ.
ಹೀಗೆ ಶಿವ-ಪಾರ್ವತಿಯರ ನಡುವಿನ ಸಂವಾದವನ್ನು ರಸವತ್ತಾಗಿ ಚಿತ್ರಿಸಿರುವ ಸಂಪ್ರದಾಯದ, ಆಡುಮಾತಿನ ಹಾಡುಗಳು ಹೊಸ ಹೊಸ ಶಬ್ದಗಳನ್ನು ಕಟ್ಟಿಕೊಡುತ್ತವೆ. ಹಳೆಯ ಸಂಪ್ರದಾಯಗಳು, ಭಕ್ಷ್ಯ-ಭೋಜನಗಳು, ಪುರಾಣದ ಕತೆಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತವೆ. ಜೊತೆ ಜೊತೆಯಲ್ಲಿ ದೈವಭಕ್ತಿಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತವೆ. ಇಂತಹ ಅದೆಷ್ಟೋ ಸಂಪ್ರದಾಯದ ಹಾಡುಗಳು ವಿನಾಯಕನ ಚತುರ್ಥಿಯ ವೈಶಿಷ್ಟ್ಯವನ್ನು ಸಾರುತ್ತ ಇಂದಿಗೂ ಪ್ರಚಲಿತದಲ್ಲಿವೆ. ಹಬ್ಬದ ಸಡಗರಕ್ಕೆ ಇಂತಹ ಹಾಡುಗಳು ಮೆರಗು ಕೊಡುತ್ತವೆ.

-------------

(ಈ ಲೇಖನವು ವಿಶ್ವವಾಣಿ ಪತ್ರಿಕೆಯ ಉತ್ತರ ಕನ್ನಡ ಆವೃತ್ತಿಯಲ್ಲಿ ಸೆ.5ರಂದು ಪ್ರಕಟವಾಗಿದೆ)

Friday, August 19, 2016

ಅವದೂತ ಯತಿ ಶ್ರೇಷ್ಟ ಸಹಜಾನಂದರು

ಮಾರುತಿಯ ಆರಾಧಕರು, ಶ್ರೀಧರ ಸ್ವಾಮೀಜಿಗಳ ಪ್ರಿಯ ಶಿಷ್ಯರು

ವಾಯುಪುತ್ರ ಹನುಮಂತ ಅವದೂತ ಪರಂಪರೆಯಲ್ಲಿ ಕೇಳಿ ಬರುವ ಮೊಟ್ಟಮೊದಲ ಹೆಸರು. ಶ್ರೀರಾಮನ ಸೇವೆಯಲ್ಲಿಯೇ ಸರ್ವಸ್ವವನ್ನೂ ಕಂಡವನು. ಪ್ರಪಂಚದ ಕುರಿತಾಗಿ ಪೂರ್ಣ ವಿರಕ್ತನಾದ ಭಕ್ತಶ್ರೇಷ್ಟ. ಇಂತಹ ಮಾರುತಿಯ ಆರಾಧನೆಯ ಮೂಲಕ ಅವದೂತರಾಗಿ ಲೋಕಕಲ್ಯಾಣವನ್ನು ಮಾಡಿದವರೇ ಸಹಜಾನಂದ ಅವದೂತ ಸ್ವಾಮೀಜಿಗಳು.
ಶಿವನ ಅಷ್ಟ ಮೂತರ್ಿಗಳಲ್ಲಿ ಮಾರುತನಿಗೆ ಪ್ರಮುಖ ಸ್ಥಾನವಿದೆ. ಇಂತಹ ಮಾರುತನ ಅವತಾರವೇ ಮಾರುತಿ. ಮಾರುತಿ ನೆಲೆನಿಂತ ಕ್ಷೇತ್ರ ಕೊಳಗೀಬೀಸ್. ಶಿರಸಿ ತಾಲೂಕಿನ ಕೊಳಗೀಬೀಸ್ ಸಹಜಾನಂದ ಅವದೂತರ ತಪೋಭೂಮಿ. ಕೊಳಗೀಬೀಸಿನ ಮಾರುತಿ ದೇವರನ್ನು ಆರಾಧನೆ ಮಾಡಿ ಲೋಕಕಲ್ಯಾಣ ಕಾರ್ಯವನ್ನು ನೆರವೇರಿಸಿದವರು ಸಹಜಾನಂದ ಅವದೂತ ಯತಿಗಳು. 1950ರ ದಶಕದಲ್ಲಿ ಕೊಳಗೀಬೀಸಿನ ಮಾರುತಿ ದೇವಸ್ಥಾನವನ್ನು ಜೀಣೋದ್ಧಾರ ಮಾಡಿಸಿ, ಭವ್ಯವಾಗಿ ನಿಮರ್ಿಸಲು ಕಾರಣೀಭೂತರಾದವರು ಸಹಜಾನಂದ ಯತಿಗಳು.
ಸಹಜಾನಂದ ಅವದೂತರು ಮೂಲತಃ ಶಿರಸಿ ತಾಲೂಕಿನ ಜಾಗನಳ್ಳಿಯವರು. ಊರಿನಲ್ಲಿ ಮೈಲಿಬೇನೆ ಬಂದು, ತೀರಾ ಸಂಕಟ ಉಂಟಾಗಿ, ಶರೀರ ದುರ್ಬಲವಾಗಿ ಕಣ್ಣು ಕೂಡ ಕಾಣಿಸದಿರುವಂತಾದ ಹೊತ್ತಿನಲ್ಲಿ ಸಹಜಾನಂದ ಅವದೂತರು ಕೊಲ್ಲೂರು-ಕೊಡಚಾದ್ರಿಗೆ ತೆರಳಿ ಭಗವಂತನ ಧ್ಯಾನಕ್ಕೆ ಮುಂದಾದರು. ಸಹಜಾನಂದ ಅವದೂತರು ಸನ್ಯಾಸ ದೀಕ್ಷೆ ಪಡೆದಿದ್ದು ಸಿದ್ದಾಪುರ ತಾಲೂಕಿನ ನೆಲೆಮಾಂವ್ ಮಠದಲ್ಲಿ. ನೆಲೆಮಾಂವ್ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿಗಳು ಸನ್ಯಾಸ ದೀಕ್ಷೆಯನ್ನು ನೀಡಿದರು. ಆ ಸಂದರ್ಭದಲ್ಲಿ ಶ್ರೀ ಶ್ರೀಧರ ಸ್ವಾಮಿಗಳಖ ದರ್ಶನ ಭಾಗ್ಯ ಸಹಜಾನಂದ ಅವದೂತರಿಗಾಯಿತು. ಸಹಜಾನಂದ ಅವದೂತರು ಶ್ರೀಧರ ಸ್ವಾಮೀಜಿಗಳನ್ನೇ ಗುರುವಾಗಿ ಸ್ವೀಕರಿಸಿದರು. ಶ್ರೀಧರರಿಂದ ತಪಸ್ಸಿಗೆ ಪ್ರೇರಣೆ ಪಡೆದು ಉಗ್ರ ತಪಸ್ಸನ್ನು ಗೈದರು. ಕಾಶಿಯಲ್ಲಿ 12 ವರ್ಷಗಳ ಕಾಲ ನಿರಂತರವಾಗಿ ತಪಸ್ಸನ್ನು ಮಾಡಿದರು. ಈ ಸಂದರ್ಭದಲ್ಲಿ ಸಹಜಾನಂದ ಅವದೂತರಿಗೆ ಮೈಮೇಲಿನ ಪರಿವೆಯೂ ಇಲ್ಲದಂತಾಯಿತು. ಅನ್ನ-ಆಹಾರಾದಿಗಳ ಅಪೇಕ್ಷೆ ಕೂಡ ದೂರವಾಯಿತು. ಮೈಮೇಲೆ ವಿಷ ಪ್ರಾಣಿಗಳು ಸಂಚಾರ ಮಾಡಿದರೂ ಕೂಡ ಏಕಾಗ್ರತೆಗೆ ಭಂಗ ಬರಲಿಲ್ಲ.
ನಿರಂತರ ತಪಸ್ಸಿನ ಕಾರಣ ಕೆಲವೇ ಕಾಲದ ನಂತರ ಸಹಜಾನಂದ ಅವದೂತರ ಕಣ್ಣಿನ ದೃಷ್ಟಿ ಸರಿಯಾಯಿತು. ಮೈಮೇಲಿನ ಮೈಲಿ ಕಲೆಯ ಅವಶೇಷಗಳು ಕಾಣೆಯಾದವು. ಮನಸ್ಸೂ ಪ್ರಪಂಚದಿಂದ ಪರಮಾರ್ಥವನ್ನು ನಿರೀಕ್ಷಿಸುವಂತಾಗಿತ್ತು. ಆಗಲೇ ಗೃಹಸ್ಥ ಧರ್ಮವನ್ನು ಸ್ವೀಕರಿಸಿ, ಪುತ್ರನನ್ನು ಪಡೆದಿದ್ದರೂ ಗೃಹಸ್ಥ ಧರ್ಮದ ಕಡೆಗಿನ ಆಸಕ್ತಿ ಸಂಪೂರ್ಣ ಕಳೆದುಹೋಗಿತ್ತು. ರಾಗ-ದ್ವೇಷ-ಶೋಕ-ಮೋಹವಿಲ್ಲದ ಸಿದ್ಧಾಂತಃಕರಣದ ಸಂಸ್ಕಾರ ದೊರೆತಿತ್ತು. ನಂತರ ಶ್ರೀಧರ ಸ್ವಾಮೀಜಿಗಳು ತೆರಳಿದ ಕಡೆಗೆಲ್ಲ ತೆರಳಿದರು. ಶ್ರೀಧರರು ತಪಸ್ಸು ಮಾಡಿದ ಕಡೆಗಳಲ್ಲೆಲ್ಲ ಸಹಜಾನಂದರೂ ತಪಸ್ಸು ಮಾಡಿದರು. ನಂತರ ಕೊಳಗೀಬೀಸಿಗೆ ಬಂದ ಸಹಜಾನಂದ ಅವದೂತರು ತಮ್ಮ ಕರ್ಮ ಹಾಗೂ ಜ್ಞಾನ ಯೋಗಕ್ಕೆ ಅದೇ ಸಿದ್ಧಭೂಮಿ ಎಂದು ತಿಳಿದು ಅಲ್ಲಿಯೇ ನೆಲೆನಿಂತರು. ಈ ಸಂದರ್ಭದಲ್ಲಿ ಅವರ ಮೈಮೇಲೆ ವಸ್ತ್ರಗಳಿರಲಿಲ್ಲ. ಕೇವಲ ಕೌಪೀನಧಾರಿಯಾಗಿದ್ದು. ಮೇಲೊಂದು ವ್ಯಾಘ್ರಚರ್ಮವನ್ನು ಸುತ್ತುತ್ತಿದ್ದರು. ಕೈಯಲ್ಲೊಂದು ಕಮಂಡಲವಿರುತ್ತಿತ್ತು. ತದನಂತರ ಕೊಳಗೀಬೀಸಿನ ಮಾರುತಿ ದೇವಾಲಯವನ್ನು ಜೀಣರ್ೋದ್ಧಾರಗೊಳಿಸಿದರು. ತದನಂತರದಲ್ಲಿ ಕೊಳಗೀಬೀಸು ಆಂಜನೇಯ ಸ್ವಾಮಿಯ ಪುಣ್ಯಕ್ಷೇತ್ರವಾಗಿ ಪವಿತ್ರ ಯಾತ್ರಾ ಸ್ಥಳವಾಗಿ ಬದಲಾಯಿತು.
ದಿನಕಳೆದಂತೆ ಕೊಳಗೀಬೀಸಿನಲ್ಲಿ ಧಾಮರ್ಿಕ ಪಾಠಗಳನ್ನು, ವೇದ ಶಿಬಿರಗಳನ್ನು ಆರಮಭಿಸಲಾಯಿತು. ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸುವ ತಾಣವಾಗಿ ಕೊಳಗೀಬೀಸು ಮಾಪರ್ಾಡಾಯಿತು. ಅಷ್ಟೇ ಅಲ್ಲದೇ ಯಕ್ಷಗಾನ ಕಲೆಗೆ ವಿಶೇಷ ಪ್ರೋತ್ಸಾಹ ಸಿಕ್ಕಿತು. ಯಕ್ಷಗಾನದ ಮೇರು ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಅದೆಷ್ಟೋ ಮಹಾನ್ ಕಲಾವಿದರು ಶ್ರೀಕ್ಷೇತ್ರದಲ್ಲಿ ಗೆಜ್ಜೆ ಕಟ್ಟಿ ಕುಣಿದರು. ಕ್ರಮೇಣ ಸಹಜಾನಂದ ಅವದೂತರಿಗೆ ಶಿಷ್ಯ ಪರಂಪರೆಯೂ ಬೆಳೆಯಿತು. ಶ್ರೀಧರ ಸ್ವಾಮಿಗಳನ್ನು ಕೊಳಗೀಬೀಸಿಗೆ ಪದೇ ಪದೆ ಕರೆಯಿಸಿ ಧಾಮರ್ಿಕ ಕೈಂಕರ್ಯವನ್ನು ಕೈಗೊಂಡರು.
ಯಾತ್ರಾರ್ಥವಾಗಿ ಕಾಶಿಗೆ ಹೋಗಿದ್ದ ಸಂದರ್ಭದಲ್ಲಿ ಶ್ರೀಧರ ಸ್ವಾಮೀಜಿಗಳ ದರ್ಶನ ಭಾಗ್ಯ ಲಭಿಸಿತು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ತಮ್ಮ ಪೂವರ್ಾಶ್ರಮದ ಪುತ್ರನಿಗೆ ಸನ್ಯಾಸ ದೀಕ್ಷೆಯನ್ನು ಕೊಟ್ಟು ಶ್ರೀಶ್ರೀ ರಾಮಾನಂದ ಸ್ವಾಮೀಗಳೆಂದು ಕರೆದರು. ಇನ್ನೋರ್ವ ಗೃಹಸ್ಥ ಶಿಷ್ಯನಿಗೂ ಸನ್ಯಾಸ ದೀಕ್ಷೆಯನ್ನು ನೀಡಿ ಶಿವಾನಂದ ಎನ್ನುವ ಅಭಿದಾನವನ್ನು ನೀಡಿದರು. ಸಹಜಾನಂದ ಅವದೂತರ ಪರಮ ಪ್ರಿಯ ಶಿಷ್ಟಯರಾದ ರಾಮಾನಂದ ಸ್ವಾಮೀಜಿಗಳು ಈಗ ದೀವಗಿಯ ಮಠದಲ್ಲಿ ನೆಲೆನಿಂತಿದ್ದಾರೆ. ಶಿವಾನಂದ ಸ್ವಾಮೀಜಿಗಳು ಯಲ್ಲಾಪುರ ತಾಲೂಕಿನ ನಾಯ್ಕನಕೆರೆಯಲ್ಲಿ ನೆಲೆನಿಂತು ಇದೀಗ ಮುಕ್ತರಾಗಿದ್ದಾರೆ. ಇವರಷ್ಟೇ ಅಲ್ಲದೇ ಪರಮಾನಂದರು ಹಾಗೂ ಕೇಶವಾನಂದರು ಎಂಬ ಇನ್ನಿಬ್ಬರು ಪ್ರಿಯ ಶಿಷ್ಯರಿದ್ದರು. ಇವರಿಬ್ಬರೂ ಕೂಡ ಪರಿವ್ರಾಜಕ ಸನ್ಯಾಸಿಗಳಾಗಿ ಲೋಕಸಂಚಾರ ಮಾಡಿದ್ದಾರೆ.
ಅವದೂತ ಪರಂಪರೆಯ ಪ್ರಮುಖ ಯತಿವರೇಣ್ಯರು ಎನ್ನಿಸಿಕೊಂಡಿರುವ ಸಹಜಾನಂದ ಅವದೂತರು ತಮ್ಮ ಸಾಧನೆಯ ಬಲದಿಂದಲೇ ಎಲ್ಲವನ್ನೂ ಸಾಧಿಸಿದವರು. ಮಹಾತ್ವರ ಸಾಲಿನಲ್ಲಿ ನಿಂತವರು. ತಾವೂ ಬೆಳಗಿ, ಇನ್ನೊಬ್ಬರ ಜೀವನಕ್ಕೂ ಬೆಳಕಾದವರು. ಗೃಹಸ್ಥಾಶ್ರಮದ ನಂತರ ಸನ್ಯಾಸ ದೀಕ್ಷೆ ಪಡೆದವರು. ಆಂಜನೇಯನನ್ನು ಆರಾಧ್ಯದೈವವಾಗಿ ನಂಬಿ ಆರಾಧಿಸಿದವರು. ಇಂತಹ ಸಹಜಾನಂದ ಅವದೂತರು ಕೊಳಗೀಬೀಸಿನ ಮಾರುತಿ ದೇವರ ಸನ್ನಿದಾನದಲ್ಲಿಯೇ ಆ1, 1966ರ ಪರಾಭವ ಸಂವತ್ಸರದ ಅಧಿಕ ಶ್ರಾವಣ ಶುದ್ಧ ಹುಣ್ಣಿಮೆಯ ಸೋಮವಾರದಂದು ಮಹಾಸಮಾಧಿ ಹೊಂದಿದರು. ತದನಂತರ 1978ರ ಫೆ.20ರಂದು ಸ್ವರ್ಣವಲ್ಲಿ ಮಠದ ಸರ್ವಜ್ಞೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ಸಹಜಾನಂದ ಅವದೂತ ಸ್ವಾಮೀಜಿಗಳು ಮಹಾಸಮಾಧಿ ಹೊಂದಿದ ಸ್ಥಳದಲ್ಲಿ ಗುರುಲಿಂಗ ಸ್ಥಾಪನೆ ಮಾಡಿದರು. ಕಳೆದ 5 ದಶಕಗಳಲ್ಲಿ ಕೊಳಗೀಬೀಸ್ ಧಾಮರ್ಿಕ ತಾಣವಾಗಿ ಬೆಳೆದು ಬಂದಿದೆ. ಮಾರುತಿಯ ಶಕ್ತಿ ಸ್ಥಳಗಳಲ್ಲಿ ಒಂದು ಎನ್ನಿಸಿದೆ. ಮಹಾಗುರು ಆಂಜನೇಹ, ಆಂಜನೇಯನ ಆರಾಧಕ ಶಿಷ್ಯ ಸಹಜಾನಂದ ಅವದೂತರ ವಿಶಿಷ್ಟ ಕ್ಷೇತ್ರ ಎಂದು ಜನಮಾನಸದಲ್ಲಿ ನೆಲೆನಿಂತಿದೆ. ಭಕ್ತರ ಬೇಡಿಕೆಗಳನ್ನು ಈಡೇರಿಸುವ ಇಷ್ಟಾರ್ಥಗಳನ್ನು ಕರುಣಿಸುವ, ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವ ತಾಣ ಎಂದು ಪ್ರಖ್ಯಾತಿ ಪಡೆದಿದೆ.


(ವಿಶ್ವವಾಣಿಯ ಆ.18ರ ಗುರು ಪುರವಣಿಯಲ್ಲಿ ಪ್ರಕಟಗೊಂಡಿದೆ) 

Tuesday, August 9, 2016

ಅಕ್ರಮ ಚಟುವಟಿಕೆಗಳ ತಾಣವಾದ ಭೀಮನವಾರೆ ಗುಡ್ಡ

ಮಾದಕ ವಸ್ತುಗಳ ಬಳಕೆ : ಅರಣ್ಯ ಇಲಾಖೆ ಅಧಿಕಾರಿಗಳ ಶಾಮೀಲಿನ ಶಂಕೆ

.....................

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು ಎನ್ನಿಸಿಕೊಂಡಿರುವ ಸಿದ್ದಾಪುರ ತಾಲೂಕಿನ ಭೀಮನವಾರೆಗುಡ್ಡ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ. ಮಾದಕ ವ್ಯಸನಿಗಳು, ಮದ್ಯವ್ಯಸನಿಗಳು ಭೀಮನವಾರೆ ಗುಡ್ದದಲ್ಲಿ ದಿನಂಪ್ರತಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಈ ಕುರಿತು ಕಠಿಣ ಕ್ರಮ ಕೈಗೊಲ್ಳಬೇಕಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಭೀಮನವಾರೆ ಗುಡ್ಡ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಆಂಗುಬೆಯ ಸೂಯಾಸ್ತವನ್ನು ನೆನಪಿಗೆ ತರುವಂತಹ ಪ್ರಸಿದ್ಧ ತಾಣ ಇದಾಗಿದ್ದು ಸಿದ್ದಾಪುರದಿಂದ 35 ಕಿಲೋಮೀಟರ್ ಹಾಗೂ ಶಿರಸಿಯಿಂದ 30 ಕಿಲೋಮೀಟರ್ ದೂರದಲ್ಲಿದೆ. ಈ ಪ್ರವಾಸಿ ತಾಣದ ವೀಕ್ಷಣೆಗೆ ದಿನಂಪ್ರತಿ ಹಲವಾರು ಜನರು ದೂರದ ಊರುಗಳಿಂದ ಆಗಮಿಸುತ್ತಾರೆ. ವಾರಾಂತ್ಯದಲ್ಲಿ ನೂರಾರು ಜನರು ಭೀಮನವಾರೆ ಗುಡ್ಡದಲ್ಲಿ ಪ್ರಕೃತಿ ವೀಕ್ಷಣೆ ಮಾಡಿ ಮನದಣಿಯುತ್ತಿದ್ದಾರೆ.
ಭೀಮನವಾರೆಗುಡ್ಡದಲ್ಲಿ ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಭೀಮನವಾರೆ ಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ದಿನಂಪ್ರತಿ ಮದ್ಯಪಾನದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಲ್ಲದೇ ವಾರದ ಕೆಲವು ದಿನಗಳಲ್ಲಿ ಈ ತಾಣ ವೀಕ್ಷಣೆಗೆ ಆಗಮಿಸುವ ಸುತ್ತಮುತ್ತಲ ಪ್ರದೇಶದ (ಅಲ್ಪಸಂಖ್ಯಾತ ಕೋಮಿನ) ಯುವಕರು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿಕೊಂಡಿದ್ದಾರೆ. ಭೀಮನವಾರೆ ಗುಡ್ಡದ ಪ್ರದೇಶದಲ್ಲಿ ಗಾಂಜಾ ಸೇವನೆ, ಮದ್ಯಪಾನ ಮಾಡುವುದು ಸೇರಿದಂತೆ ಹಲವು ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೇ ಭೀಮನವಾರೆ ಗುಡ್ಡಕ್ಕೆ ಬರುವ ಪ್ರೇಮಿಗಳೂ ಕುಡ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ಸ್ಥಳೀಯರ ಅಂಬೋಣವಾಗಿದೆ.
ಭೀಮನವಾರೆ ಗುಡ್ಡದಲ್ಲಿ ಅಕ್ರಮ ಚಟುವಟಿಕೆ, ಮದ್ಯಪಾನ, ಮಾದಕ ವಸ್ತುಗಳ ಸೇವನೆಗೆ ಸಾಕ್ಷಿಯಾಗಿ ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿರುತ್ತವೆ. ಈ ಭಾಗದ ಯುವಕರು ನಿಗದಿತ ಸಮಯಕ್ಕೆ ಭೀಮನವಾರೆ ಗುಡ್ಡವನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳುತ್ತಾರಾದರೂ ಕೆಲ ದಿನಗಳಲ್ಲಿಯೇ ಮದ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುತ್ತಾರೆ ಎಂಬುದು ಸ್ಥಳೀಯರ ಅಂಬೋಣ. ಭೀಮನವಾರೆ ಗುಡ್ಡದಲ್ಲಿಯೇ ಇರುವ ಒಂದೆರಡು ಸ್ಥಳಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಸ್ಪೀಟ್ ಕೂಡ ಆಡಲಾಗುತ್ತಿದೆ. ಇದರಿಂದಾಗಿ ಪ್ರವಾಸಿ ತಾಣದ ಪ್ರದೇಶ ಸಂಪೂರ್ಣವಾಗಿ ಹಾಳಾಗುತ್ತಿದೆ.
ಭೀಮನವಾರೆ ಗುಡ್ಡಕ್ಕೆ ತೆರಳುವ ಮಾರ್ಗದ ನಡುವೆ ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಒಂದು ಇದೆ. ಆದರೆ ಇಲ್ಲಿ ಸಮರ್ಪಕವಾಗಿ ತನಿಖೆ ನಡೆಸಲಾಗುವುದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭೀಮನವಾರೆ ಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಕಂಡೂ ಕಾಣದಂತಿದ್ದಾರೆ. ದಿನಂಪ್ರತಿ ಅನೈತಿಕ ಚಟುವಟಿಕೆಗಳು ನಡೆದರೂ ಅರಣ್ಯ ಇಲಾಖೆ ಅಧಿಕಾರಿಗಳು ತಮಗೂ, ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವತರ್ಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಡೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಅನುಮಾನಕ್ಕೂ ಕೂಡ ಕಾರಣವಾಗಿದೆ.   ನೂರಾರು ಪ್ರವಾಸಿಗರು ಆಗಮಿಸಿ ಅತ್ಯುತ್ತಮ ಪ್ರವಾಸಿ ತಾಣವಾಗಬಹುದಾಗಿದ್ದ, ತನ್ಮೂಲಕ ಸ್ಥಳೀಯರಿಗೆ ಆದಾಯದ ಮೂಲವಾಗಿ ಮಾಪರ್ಾಡಾಗಬಹುದಾಗಿದ್ದ ಬೀಮನವಾರೆಗುಡ್ಡ ಅಕ್ರಮ ಚಟುವಟಿಕೆಗಳಿಂದಾಗಿ ಕುಖ್ಯಾತಿಗೆ ಕಾರಣವಾಗುತ್ತಿದೆ.
ಮುಂದಿನ ದಿನಗಳಲ್ಲಿ ಭೀಮನವಾರೆಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಮಾದಕವಸ್ತು ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರವಾಸಿ ತಾಣಕ್ಕೆ ಆಗಮಿಸುವವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಮಾದಕ ವಸ್ತು ಸೇವನೆ ಮಾಡುವವರ ವಿರುದ್ಧ ಹಾಗೂ ಅನೈತಿಕ ಚಟುವಟಿಕೆಗಳನ್ನು ಕೈಗೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

///////////////////

ಬೀಮನವಾರೆ ಗುಡ್ಡದ ವಾತಾವರಣ ಹದಗೆಟ್ಟಿದೆ. ಮದ್ಯವ್ಯಸನಿಗಳು ಹಾಗೂ ಮಾದಕ ವಸ್ತು ಸೇವನೆ ಮಾಡುವವರ ತಾಣವಾಗಿ ಬದಲಾಗಿದೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ರಾಜೇಶ ನಾಯ್ಕ
ಪ್ರವಾಸಿ


(ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

Monday, July 18, 2016

ನಿರ್ವಹಣೆಯಿಲ್ಲದೇ ಸೊರಗಿದ ಪ್ರವಾಸಿತಾಣ... ಪ್ಲಾಸ್ಟಿಕ್ ಮಯವಾದ ಉಂಚಳ್ಳಿ ಜಲಪಾತ

ದೇಶ-ವಿದೇಶಗಳ ಪ್ರವಾಸಿಗರನ್ನು ಆಕಷರ್ಿಸುತ್ತಿರುವ ಉಂಚಳ್ಳಿ ಜಲಪಾತ ಪ್ಲಾಸ್ಟಿಕ್ ಮಯವಾಗಿ ಬದಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿ ಬಿದ್ದಿದ್ದು ಜಲಪಾತದ ಪ್ರದೇಶ ಗಬ್ಬೆದ್ದು ನಾರುತ್ತಿದೆ.
 ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿರುವ ಉಂಚಳ್ಳಿ ಜಲಪಾತ ಮೈದುಂಬಿದೆ. ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕನರ್ಾಟಕವಲ್ಲದೇ ಮಹಾರಾಷ್ಟ್ರ, ಆಂಧ್ರ, ಗೋವಾ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸಿಗರೂ ಕೂಡ ಉಂಚಳ್ಳಿ ಜಲಪಾತದ ಕಡೆಗೆ ಮುಖ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಜಲಪಾತದ ಸೌಂದರ್ಯವನ್ನು ಇಮ್ಮಡಿಸಿದೆ. ಆದರೆ ಉಂಚಳ್ಳಿ ಜಲಪಾತದ ಪರಿಸರದಲ್ಲಿ ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯ ಜಲಪಾತದ ಸೊಬಗಿಗೆ ಕಪ್ಪು ಚುಕ್ಕೆ ಎನ್ನಿಸಿದೆ.
 ಉಂಚಳ್ಳಿ ಜಲಪಾತದ ಆವರಣದಲ್ಲಿ ಎತ್ತ ನೋಡಿದರತ್ತ ಪ್ಲಾಸ್ಟಿಕ್ ತ್ಯಾಜ್ಯಗಳು ಹೇರಳವಾಗಿ ಬಿದ್ದುಕೊಂಡಿವೆ. ಪ್ರವಾಸಿಗರು ತರುವ ತಿಂಡಿಯ ಪೊಟ್ಟಣಗಳು ಖಾದ್ಯಗಳ ಪೊಟ್ಟಣಗಳು ಬಿದ್ದುಕೊಂಡಿವೆ. ಅಷ್ಟೇ ಅಲ್ಲದೇ ಜಲಪಾತದ ಪರಿಸರದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದುಕೊಂಡಿವೆ. ಜಲಪಾತವನ್ನು ವೀಕ್ಷಣೆ ಮಾಡುವ ಒಂದು ಸ್ಥಳದಲ್ಲಂತೂ ಯಾವುದೋ ಜನ್ಮದಿನವನ್ನು ಆಚರಣೆ ಮಾಡಲಾಗಿದ್ದು, ಅದಕ್ಕಾಗಿ ಬಳಕೆ ಮಾಡಲಾಗಿರುವ ತರಹೇವಾರಿ ಪ್ಲಾಸ್ಟಿಕ್ಗಳು, ತಿಂಡಿ ತಿಂದು ಎಸೆಯಲಾಗಿರುವ ಪ್ಲೇಟ್ಗಳು, ಬೇರೆ ಬೇರೆ ಕಂಪನಿಗಳ ಮದ್ಯದ ಬಾಟಲಿಗಳು ಬಿದ್ದುಕೊಂಡಿವೆ. ಪರಿಣಾಮವಾಗಿ ಪ್ರವಾಸಿಗರು ಹೇರಳವಾಗಿ ಆಗಮಿಸಿ ಎಲ್ಲರ ಆಕರ್ಷಣೆಗೆ ಕಾರಣವಾಗಬೇಕಾಗಿದ್ದ ಜಲಪಾತ ಸೌಂದರ್ಯಕ್ಕೆ ಮಸಿ ಬಳಿಸಿಕೊಳ್ಳುವಂತಾಗಿದೆ.
 ಜಲಪಾತದ ಪ್ರದೇಶದಲ್ಲಿಯೇ ಶೌಚಾಲಯವಿದ್ದು ಹಾಳು ಸುರಿಯುತ್ತಿದೆ. ನಿರ್ವಹಣೆಯಿಲ್ಲದೇ ಈ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಮರದ ಎಲೆಗಳು, ಮುರಿದ ಮರದ ಕೊಂಬೆಗಳು ಈ ಶೌಚಾಲಯದಲ್ಲಿ ಬಿದ್ದುಕೊಂಡಿವೆ. ಶೌಚಾಲಯದ ಬಾಗಿಲು ಮುರಿದು ಬಿದ್ದಿದೆ. ಅಷ್ಟೇ ಅಲ್ಲದೇ ಈ ಶೌಚಾಲಯ ಜಲಪಾತ ವೀಕ್ಷಣೆಗೆ ಆಗಮಿಸುವ ಪಡ್ಡೆ ಹುಡುಗರ ಅನೈತಿಕ ಚಟುವಟಿಕೆಗಳಿಗೂ ತಾಣವಾಗಿ ಮಾಪರ್ಾಡಾಗಿದೆ. ಆದರೆ ಉಂಚಳ್ಳಿ ಜಲಪಾತ ಹಾಗೂ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದ್ದ ಪ್ರವಾಸೋದ್ಯಮ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಪರಿಣಾಮವಾಗಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರು ಜಲಪಾತದ ಕುರಿತು ನಕಾರಾತ್ಮಕವಾಗಿ ಮಾತನಾಡುವಂತಾಗಿದೆ.
 ಜಲಪಾತಕ್ಕಿಂತಲೂ 1 ಕಿ.ಮಿ ದೂರದಲ್ಲಿ ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಕಾವಲು ಗೋಪುರ ಮಾಡಿ, ಆಗಮಿಸುವ ಪ್ರವಾಸಿಗರ ಬಳಿ ಪ್ರವೇಶಧನವನ್ನು ಪಡೆದುಕೊಳ್ಳುತ್ತಿದೆ. ಮೊಟಾರ್ಸೈಕಲ್ ಹಾಗೂ ಕಾರುಗಳಿಗೆ ಪ್ರತ್ಯೇಕವಾಗಿ ಪ್ರವೇಶಧನವನ್ನು ವಸೂಲಿ ಮಾಡಲಾಗುತ್ತಿದೆ. ಆದರೆ ಗ್ರಾಮ ಅರಣ್ಯ ಸಮಿತಿ ಪ್ರವೇಶ ಧನವನ್ನು ವಸೂಲಿ ಮಾಡುವಲ್ಲಿ ತೋರುವ ಉತ್ಸಾಹವನ್ನು ಜಲಪಾತದ ಪ್ರದೇಶದ ನಿರ್ವಹಣೆಯ ಕಡೆಗೆ ತೋರುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ. ಜಲಪಾತದ ಪ್ರದೇಶದಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ತಡೆದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಶೌಚಾಲಯವನ್ನು ಸರಿಪಡಿಸಿ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕಾಗಿದ್ದ ಗ್ರಾಮ ಅರಣ್ಯ ಸಮಿತಿ ಪ್ರವೇಶಧನ ವಸೂಲಿಗೆ ಮಾತ್ರ ಸೀಮಿತವಾಗಿದೆ.
 ಬ್ರಿಟನ್ ಅಧಿಕಾರಿ ಜಾಜರ್್ ಲೂಷಿಂಗ್ಟನ್ ಎಂಬಾತ ಈ ಜಲಪಾತವನ್ನು ಕಂಡು ಹಿಡಿದು ಹೊರ ಜಗತ್ತಿಗೆ ಪರಿಚಯಿಸಿದ, ಜಲಪಾತದ ಸೌಂದರ್ಯವನ್ನು ಹಾಡಿ ಹೊಗಳಿದ ಎನ್ನುವ ಪ್ರತೀತಿಯಿದೆ. ತದನಂತರದಲ್ಲಿ ತನ್ನ ಸೌಂದರ್ಯದಿಂದಲೇ ಹೆಸರುವಾಸಿಯಾಗಿದ್ದ ಉಂಚಳ್ಳಿ ಜಲಪಾತ ಈಗ ಮಾತ್ರ ತ್ಯಾಜ್ಯದಿಂದಾಗಿ ಕುಖ್ಯಾತಿ ಪಡೆದುಕೊಳ್ಳುತ್ತಿದೆ. ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತಿಗಳು ಜಲಪಾತದ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಹೀಗಾದಾಗ ಮಾತ್ರ ಇನ್ನಷ್ಟು ಪ್ರವಾಸಿಗರನ್ನು ಆಕಷರ್ಿಸಿ ಆದಾಯವನ್ನು ಜಲಪಾತ ಹೆಚ್ಚಿಸಬಹುದಾಗಿದೆ.

.....
 ಉಂಚಳ್ಳಿ ಜಲಪಾತದ ಎಲ್ಲ ಕಡೆಗಳಲ್ಲಿ ಮಧ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಬಿದ್ದುಕೊಂಡಿವೆ. ನಿಸರ್ಗದ ಮಡಿಲಿನಲ್ಲಿ ಸ್ವಚ್ಛವಾಗಿ ಇರಬಹುದಾಗಿದ್ದ ಪ್ರವಾಸಿ ತಾಣ ಇದರಿಂದಾಗಿ ಮಸಿ ಬಳಿದುಕೊಳ್ಳುತ್ತಿದೆ. ಈ ತಾಣದಲ್ಲಿ ತ್ಯಾಜ್ಯ ಹೆಚ್ಚಿರುವುದರಲ್ಲಿ ಪ್ರವಾಸಿಗರ ತಪ್ಪು ಸಾಕಷ್ಟಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದಿದ್ದಾರೆ. ಈ ಪ್ರದೇಶದ ನಿರ್ವಹಣೆಯನ್ನು ಕೈಗೊಳ್ಳಬೇಕಿದ್ದವರೂ ಕೂಡ ಜವಾಬ್ದಾರಿಯನ್ನು ಮರೆತಿದ್ದಾರೆ.
ಅಬ್ದುಲ್ ಸಮದ್
ಪ್ರವಾಸಿ
ಹಾಸನ

Sunday, July 17, 2016

ಅಘನಾಶಿನಿ ತೀರದ ಜನರ ನಿದ್ದೆಗೆಡಿಸಿದ ನದಿ ತಿರುವು ಹುನ್ನಾರ

ಮತ್ತೆ ಬಂದ ನದಿ ತಿರುವು ಗುಮ್ಮ

ಇನ್ನೆಲ್ಲಿ ಈ ಸೊಬಗು??
ಜಿಲ್ಲೆಯ ಮೇಲೆ ಸದಾ ಒಂದಿಲ್ಲೊಂದು ನದಿ ಯೋಜನೆಗಳ ಗುಮ್ಮ ಕಾಡುತ್ತಲೇ ಇದೆ. ಅಂತಹ ನದಿ ಯೋಜನೆಗಳ ಯಾದಿಯಲ್ಲಿ ಹೊಸದಾಗಿ ಅಘನಾಶಿನಿ ನದಿ ತಿರುವು ಕೇಳಿ ಬರಲು ಆರಂಭಿಸಿದೆ. ಹೊಸ ಯೋಜನೆ ಜನಸಾಮಾನ್ಯರ ನೆಮ್ಮದಿಯನ್ನು ಕದಡಿದೆ.
ಜಿಲ್ಲೆ ಯೋಜನೆಗಳ ಭಾರದಲ್ಲಿ ಈಗಾಗಲೇ ನಲುಗಿದೆ. ಕೈಗಾ ಅಣುವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ, ಸೀಬರ್ಡ್, ಕೊಡಸಳ್ಳಿ ಅಣೆಕಟ್ಟು, ಸೂಪಾ ಡ್ಯಾಂ ಸೇರಿದಂತೆ ಹತ್ತು ಹಲವು ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಜನರ ನೆಮ್ಮದಿಯನ್ನು ಕದಡಿ ಹಾಕಿದೆ. ಇಷ್ಟರ ಜೊತೆಗೆ ಆಗಾಗ ಸದ್ದು ಮಾಡುವ ಕಿರು ಜಲವಿದ್ಯುತ್ ಯೋಜನೆಗಳ ಪ್ರಸ್ತಾಪ ಕೂಡ ಜಿಲ್ಲೆಯ ಜನರನ್ನು ಹಿಂಡುತ್ತಿವೆ. ವರದಾ ಹಾಗೂ ಶಾಲ್ಮಲಾ ನದಿ ಜೋಡಣೆ ಕೂಡ ಕೆಲ ಕಾಲ ಸದ್ದು ಮಾಡಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಇನ್ನೊಂದು ಪ್ರಮುಖ ನದಿ ಎನ್ನಿಸಿಕೊಂಡಿರುವ ಅಘನಾಶಿನಿ ನದಿ ತಿರುವು ಯೋಜನೆ ಸದ್ದು ಮಾಡಲು ಆರಂಭಿಸಿದೆ.
ಅಘನಾಶಿನಿ ನದಿ ತಿರುವು ಕುರಿತಂತೆ ಸರಕಾರ ನೀರಾವರಿ ತಜ್ಞರ ಹಾಗೂ ಅಧಿಕಾರಿಗನ್ನೊಳಗೊಂಡ ಸಮಿತಿಯೊಂದನ್ನು ರಚನೆ ಮಾಡಿದೆ. ತನ್ಮೂಲಕ ಉತ್ತರ ಕನ್ನಡದ ಲಕ್ಷಕ್ಕೂ ಅಧಿಕ ಜನರ ನೆಮ್ಮದಿಯನ್ನು ಕೆಡಿಸಲು ಪೀಠಿಕೆ ಆರಂಭವಾಗಿದೆ. ಅಘನಾಶಿನಿ ನದಿಗೆ ಜೀವವೈವಿಧ್ಯ ಜಗತ್ತಿನಲ್ಲಿ ಉನ್ನತ ಸ್ಥಾನವಿದೆ. ಅಪರೂಪದ ಅಪ್ಪೆಮಿಡಿಗಳು, ಸಿಂಹ ಬಾಲದ ಲಂಗೂರ್, ಅಳಿವಿನ ಅಂಚಿನಲ್ಲಿರುವ ನೀರುನಾಯಿಗಳು, ಕರಾವಳಿ ತೀರದಲ್ಲಿ ಚಿಪ್ಪುಗಳು, ಅಪರೂಪದ ಮೀನುಗಳು ಸೇರಿದಂತೆ ಸಸ್ಯ ಹಾಗೂ ಜೀವ ಸಂಕುಲಗಳಿವೆ. ಇನ್ನೂ ಅದೆಷ್ಟೋ ಪ್ರಬೇಧಗಳು ಅಘನಾಶಿನಿ ನದಿಯನ್ನು ಅವಲಂಬಿಸಿ ಜೀವನ ನಡೆಸುತ್ತಿವೆ. ಅಘನಾಶಿನಿ ನದಿ ತಿರುವು ಯೋಜನೆಯಿಂದ ಈ ಪ್ರಬೇಧಗಳು, ಸಸ್ಯ ಸಂಕುಲಗಳು ನಾಶವಾಗಬಹುದಾಗಿದೆ.
ಶಿರಸಿ ನಗರದ ಶಂಕರಹೊಂಡ ಹಾಗೂ ತಾಲೂಕಿನ ಮಂಜುಗುಣಿಯಲ್ಲಿ ಪ್ರಮುಖ ಕವಲುಗಳ ಮೂಲಕ ಜನ್ಮ ತಳೆಯುವ ಅಘನಾಶಿನಿ ನದಿ ನಂತರದಲ್ಲಿ ಸಿದ್ದಾಪುರ, ಕುಮಟಾ ತಾಲೂಕುಗಳಲ್ಲಿ ಹರಿದು ತದಡಿಯಲ್ಲಿ ಸಮುದ್ರವನ್ನು ಸೇರುತ್ತದೆ. ಹೀಗೆ ಸಮುದ್ರ ಸೇರುವ ಮೊದಲು 98 ಕಿ.ಮಿ ದೂರ ಹರಿಯುವ ಅಘನಾಶಿನಿ ನದಿಯ ನೀರು ಪ್ರಮುಖವಾಗಿ ಶಿರಸಿ, ಕುಮಟಾ ಹಾಗೂ ಹೊನ್ನಾವರಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಅಗತ್ಯಗಳಿಗೆ ಬಳಕೆಯಾಗುತ್ತಿದೆ. ಬೆಣ್ಣೆಹೊಳೆ, ಚಂಡಿಕಾ ಹೊಳೆ, ಬೀಳಗಿಹೊಳೆಗಳು ಅಘನಾಶಿನಿ ನದಿಯ ಪ್ರಮುಖ ಉಪನದಿಗಳಾಗಿದ್ದು, 2146 ಚಕಿಮಿ ಪ್ರದೇಶಗಳು ನದಿಯ ಜಲಾನಯನ ಪ್ರದೇಶವಾಗಿದೆ. ಈ ಅಘನಾಶಿನಿ ನದಿಯ ನೀರನ್ನು ಜೂಗ-ಕಾರ್ಗಲ್, ನಂತರದಲ್ಲಿ ಈ ನೀರನ್ನು ಹಾಸನದ ಮೂಲಕ ಬೆಂಗಳೂರಿಗೆ ಕೊಂಡೊಯ್ಯಬೇಕು ಎಂದು 2013ರ ಸಪ್ಟೆಂಬರ್ ತಿಂಗಳಿನಲ್ಲಿ ನೇಮಿಸಲಾಗಿದ್ದ ತ್ಯಾಗರಾಜ್ ಕಮಿಟಿ ವರದಿ ಮಾಡಿತ್ತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಅಣೆಕಟ್ಟಿಗೆ ಅಘನಾಶಿನಿ ನದಿಯಿಂದ 50 ಟಿಎಂಸಿ ನೀರನ್ನು ಒಯ್ಯಬೇಕು ಹಾಗೂ ತದನಂತರದಲ್ಲಿ ಪಂಪ್ ಮೂಲಕ ನೀರನ್ನು ಲಿಂಗನಮಕ್ಕಿ ಅಣೆಕಟ್ಟೆಯಿಂದ ಮೇಲೆತ್ತಿ ಹಾಸನ ಮಾರ್ಗವಾಗಿ ಬೆಂಗಳೂರು ಮಹಾನಗರಕ್ಕೆ ಕೊಂಡೊಯ್ಯಬೇಕು ಎನ್ನುವ ಯೋಜನೆಯನ್ನು ವರದಿಯಲ್ಲಿ ಹೇಳಲಾಗಿತ್ತು. ಇಷ್ಟೇ ಅಲ್ಲದೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ನೀರು ಒದಗಿಸಲು ಅಘನಾಶಿನಿ ನದಿ ಹಾಗೂ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಶರಾವತಿ ನದಿಯ ನೀರನ್ನು ಬಳಕೆ ಮಾಡಬೇಕು ಎನ್ನುವ ವಾದವನ್ನು ಮಂಡನೆ ಮಾಡಿತ್ತು. ಆದರೆ ಈ ನದಿ ತಿರುವಿಗೆ ಸಂಬಂಧಿಸಿದಂತೆ ಈಗಾಗಲೇ ವಿರೋಧ ಆರಂಭವಾಗಿದೆ.
ಕಳೆದ ಬೇಸಿಗೆಯಲ್ಲಿ ಅಘನಾಶಿನಿ ನದಿ ಬರದ ಬೇಗೆಗೆ ಮೊಟ್ಟ ಮೊದಲ ಬಾರಿಗೆ ಬತ್ತಿ ಹೋಗಿತ್ತು. ಈ ಕುರಿತಂತೆ `ವಿಶ್ವವಾಣಿ' ಸಮಗ್ರ ವರದಿ ಮಾಡಿತ್ತು. ತದ ನಂತರದಲ್ಲಿ ಬತ್ತಿದ ಅಘನಾಶಿನಿಯಲ್ಲಿ ಸಾವನ್ನಪ್ಪುತ್ತಿರುವ ನೀರುನಾಯಿಗಳ ಬಗೆಗೂ ಕೂಡ ಸರಣಿ ವರದಿ ಮಾಡಿತ್ತು. ಇಂತಹ ಹಲವಾರು ಸಮಸ್ಯೆಗಳು ನದಿಗೆ ಎದುರಾಗಿರುವ ಸಂದರ್ಭದಲ್ಲಿಯೇ ಅಘನಾಶಿನಿ ನದಿಯನ್ನು ತಿರುವು ಮಾಡುವ ಯೋಜನೆ ಪ್ರಸ್ತಾಪವಾಗುತ್ತಿದೆ. 420 ಕಿ.ಮಿ ದೂರದ ಬೆಂಗಳೂರು ನಗರವಾಸಿಗಳ ದಾಹವನ್ನು ತಣಿಸುವ ಸಲುವಾಗಿ ಮಲೆನಾಡಿನ, 1 ಲಕ್ಷ ಜನರ ಜೀವನಾಡಿಯಾಗಿರುವ ಅಘನಾಶಿನಿ ನದಿ ತಿರುವು ಮಾಡುವ ಹುನ್ನಾರ ನಡೆದಿದೆ. ಈ ಹುನ್ನಾರವನ್ನು ಆರಂಭದಲ್ಲಿಯೇ ತಡೆಯುವ ಸಲುವಾಗಿ ಈಗಾಗಲೇ ಜನಾಂದೋಲನಗಳು ರೂಪುಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅಘನಾಶಿನಿ ಕಣಿವೆಯ ಜನಸಾಮಾನ್ಯರು ನದಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹೆಜ್ಜೆಹಾಕಲಿದ್ದಾರೆ.

-------

(ವಿಶ್ವವಾಣಿ ಪತ್ರಿಕೆಯಲ್ಲಿ ಜು.17, 2016ರಂದು ಪ್ರಕಟವಾಗಿದೆ)

ತೂಗಾಡುವ ಸೇತುವೆಯಲ್ಲಿ ತೂಗಾಡುವ ಬದುಕು

ಸಮರ್ಪಕ ತೂಗುಸೇತುವೆ ಇಲ್ಲದೇ ಬದುಕು ಹೈರಾಣು

ಉಕ್ಕಿ ಹರಿಯುವ ಅಘನಾಶಿನಿ ನದಿ. ಅದರ ಮೇಲಿನ ತೂಗಾಡುವ ಸೇತುವೆಯನ್ನು ಭಯದಿಂದಲೇ ಸಾಗುವ ಮಕ್ಕಳು. ತಲೆ ಹೊರೆಯ ಮೇಲೆ ಭೀತಿಯಿಂದ ಅಗತ್ಯದ ವಸ್ತುಗಳನ್ನು ಸಾಗಿಸುವ ಜನಸಾಮಾನ್ಯರು. ಸಿದ್ದಾಪುರ ತಾಲೂಕಿನ ಹಸರಗೋಡ ಪಂಚಾಯತದ ಬಾಳೂರು ಹಾಗೂ ಹಂಚಳ್ಳಿಯನ್ನು ಸಂಪರ್ಕಿಸುವ ತೂಗುಸೇತುವೆ ಇಂತಹ ದುರಂತದ ಪರಿಸ್ಥಿತಿಗೆ ಕಾರಣವಾಗಿದೆ.
ಬಾಳೂರಿನಲ್ಲಿ ಹರಿಯುವ ಅಘನಾಶಿನಿ ನದಿಗೆ ಅಡ್ಡಲಾಗಿ ಸ್ಥಳೀಯರೇ ಮುತುವರ್ಜಿ ವಹಿಸಿ ತೂಗು ಸೇತುವೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಡಿಕೆಯ ದಬ್ಬೆ, ಕಬ್ಬಿಣದ ಕೇಬಲ್ ಸಹಾಯದಿಂದ ನಿರ್ಮಾಣ ಮಾಡಲಾಗಿರುವ ಈ ತೂಗುಸೇತುವೆ ಅಜಮಾಸು 100 ಮೀಟರ್ ಉದ್ದವಿದೆ. ಅಘನಾಶಿನಿ ನದಿಯ ಎರಡೂ ದಡಗಳಲ್ಲಿರುವ ಮರಗಳನ್ನು ಆಧರಿಸಿ ಈ ತೂಗುಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ತೂಗುಸೇತುವೆಯ ಉಕ್ಕಿನ ಕೇಬಲ್ಗಳು ಈಗಾಗಲೇ ತುಕ್ಕು ಹಿಡಿದಿದೆ. ನಡೆದಾಡಲು ಅನುಕೂಲವಾಗುವಂತೆ ಅಡಿಕೆಯ ದಬ್ಬೆ, ಬಿದಿರಿನ ಎಳೆಗಳನ್ನು ಹಾಕಲಾಗಿದ್ದು ಅವೂ ಕೂಡ ಲಡ್ಡಾಗಿದ್ದು, ದುರಂತಕ್ಕಾಗಿ ಬಾಯ್ತೆರೆದುಕೊಂಡಿದೆ.
ಈ ಸೇತುವೆಯ ಮೇಲೆ ದಿನಂಪ್ರತಿ ನೂರಾರು ಜನರು ಓಡಾಟ ನಡೆಸುತ್ತಾರೆ. ಬಾಳೂರು, ಹೊಸಗದ್ದೆ ಭಾಗವನ್ನು ಹಂಚಳ್ಳಿ, ಕೆಂದಿಗೆತೋಟ, ಬಣಗಿ ಈ ಮುಂತಾದ ಗ್ರಾಮಗಳಿಗೆ ಈ ತೂಗುಸೇತುವೆ ಸಂಪರ್ಕವನ್ನು ಕಲ್ಪಿಸುತ್ತವೆ. ಹಂಚಳ್ಳಿ, ಕೆಂದಿಗೆತೋಟ ಈ ಮುಂತಾದ ಗ್ರಾಮಸ್ಥರು ಕೂಗಳತೆಯಲ್ಲಿರುವ ಹೊಸಗದ್ದೆ ಹಾಗೂ ಬಾಳೂರನ್ನು ತಲುಪಲು ಇರುವ ಸನಿಹದ ದಾರಿ ಇದಾಗಿದೆ. ಹಸರಗೋಡ ಗ್ರಾಮ ಪಂಚಾಯತಿಯನ್ನು ತಲುಪಲು, ಹೊಸಗದ್ದೆ ಶಾಲೆಗೆ ತೆರಳಲು ಈ ಮಾರ್ಗವೇ ಹತ್ತಿರದ್ದು ಎನ್ನಿಸಿಕೊಂಡಿದೆ. ಬಾಳೂರಿನ ಮೂಲಕ ತೆರಳುವ ಬಾಳೇಸರ ಬಸ್ನ್ನು ಹತ್ತಬೇಕಾದರೆ ಈ ಗ್ರಾಮಸ್ಥರು ಇದೇ ತೂಗುಸೇತುವೆಯನ್ನೇ ಬಳಸಬೇಕಾದ ಅನಿವಾರ್ಯತೆಯಿದೆ. ಈ ಮಾರ್ಗವನ್ನು ಹೊರತುಪಡಿಸಿದರೆ ರಸ್ತೆ ಮಾರ್ಗವೊಂದಿದೆಯಾದರೂ ಹೊಸಗದ್ದೆ, ಬಾಳೂರನ್ನು ತಲುಪಬೇಕಾದರೆ ಅಜಮಾಸು 8 ಕಿ.ಮಿ ಸುತ್ತಿ ಬಳಸಿ ಬರಬೇಕಾಗುತ್ತದೆ.
ಈ ತೂಗುಸೇತುವೆಯ ಮೇಲೆ ಏಕಕಾಲಕ್ಕೆ ಮೂರು ಅಥವಾ ಅದಕ್ಕೂ ಹೆಚ್ಚಿನ ಜನರು ನಡೆದರೆ ಸಾಕು ತೂಗಾಡಲು ಆರಂಭವಾಗುತ್ತದೆ. ಅತ್ತಿಂದಿತ್ತ ಹೊಯ್ದಾಡುವ ಈ ಮಾರ್ಗದಲ್ಲಿ ನಡೆಯುವುದೆಂದರೆ ದುಸ್ತರ ಎನ್ನುವಂತಾಗಿದೆ. ಶಾಲಾ ಮಕ್ಕಳಂತೂ ಒಂದು ಕೈಯಲ್ಲಿ ಛತ್ರಿಯನ್ನು ಹಿಡಿದು ಪ್ರಯಾಸದಿಂದ ಸೇತುವೆ ದಾಟುತ್ತಾರೆ. ಈ ಸಂದರ್ಭದಲ್ಲಿ ಸ್ವಲ್ಪವೇ ಯಾಮಾರಿದರೂ ಕೂಡ ಕೆಳಗೆ ಉಕ್ಕಿ ಹರಿಯುವ ಅಘನಾಶಿನಿ ನದಿಯಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳು ತೀವ್ರವಾಗಿದೆ. ನಾಲ್ಕಾರು ವರ್ಷಗಳ ಹಿಂದೆ ಸ್ಥಳೀಯರು ನಿರ್ಮಿಸಿದ್ದ ತೂಗುಸೇತುವೆ ಅಘನಾಶಿನಿ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ನಂತರದಲ್ಲಿ ಈ ಸ್ಥಳೀಯರೇ ಮುಂದಾಳುಗಳಾಗಿ ಮತ್ತೊಮ್ಮೆ ತೂಗುಸೇತುವೆ ನಿರ್ಮಾಣ ಮಾಡಿದ್ದರು. ಇದೀಗ ಈ ಸೇತುವೆ ಕೂಡ ಶಿಥಿಲಾವಸ್ಥೆ ತಲುಪಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಮಾರ್ಗದಲ್ಲಿ ಸದೃಢವಾದ ತೂಗುಸೇತುವೆ ನಿರ್ಮಾಣ ಮಾಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ. ಸರಕಾರ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುವುದೂ ಕೂಡ ಈ ಮಾರ್ಗದಲ್ಲಿ ಸಂಚಾರ ಮಾಡುವವರ ಆಗ್ರಹವಾಗಿದೆ. ಶಿಥಿಲಾವಸ್ಥೆಯನ್ನು ತಲುಪಿರುವ ತೂಗುಸೇತುವೆ ಬದಲು, ವಿಶೇಷ ಅನುದಾನವನ್ನು ಮಂಜೂರು ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಿಂಧ ಶಿವಪುರಕ್ಕೆ ಸಂಚಾರ ಕಲ್ಪಿಸುವ ಪ್ರದೇಶದಲ್ಲಿ ಅಥವಾ ಶಿರಸಿ ತಾಲೂಕಿನ ಸಹಸ್ರಲಿಂಗದ ಬಳಿ ನಿರ್ಮಾಣ ಮಾಡಿದಂತೆ ಸುಸಜ್ಜಿತ ತೂಗುಸೇತುವೆ ನಿರ್ಮಾಣ ಮಾಡಬೇಕು ಎನ್ನುವುದೂ ಕೂಡ ಸ್ಥಳೀಯರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಜಿ.ಪಂ, ತಾ.ಪಂ ಸದಸ್ಯರು ಪ್ರಯತ್ನ ನಡೆಸಬೇಕಾದ ಅನಿವಾರ್ಯತೆಯಿದೆ. ಹೀಗಾದಾಗ ಮಾತ್ರ ನಾಲ್ಕೈದು ಗ್ರಾಮಗಳ ಜನರು, ಶಾಲಾ ಮಕ್ಕಳು ನಿಟ್ಟುಸಿರು ಬಿಡಲು ಸಾಧ್ಯ.

-------

ಈ ಸೇತುವೆ ಬಹಳ ಶಿಥಿಲವಾಗಿದೆ. ಮಕ್ಕಳು ಭಯದಿಂದಲೇ ತೂಗುಸೇತುವೆ ದಾಟುತ್ತಾರೆ. ಜೋರು ಮಳೆ, ಗಾಳಿ ಬಂದ ಸಂದರ್ಭದಲ್ಲಿ ಈ ತೂಗು ಸೇತುವೆ ದಾಟುವುದು ಅಪಾಯಕಾರಿ ಕೂಡ ಹೌದು. ಇದರ ಬದಲಾಗಿ ಸುಸಜ್ಜಿತ ಸೇತುವೆ ನಿರ್ಮಾಣ ಮಾಡಬೇಕಿದೆ.
ರಾಜು ನಾಯ್ಕ
ಹಾರ್ಸಿಕಟ್ಟಾ


Tuesday, July 12, 2016

ಬೆಂಗಾಲಿ ಸುಂದರಿ -42

ಮೊದಲೊಂದು ಮಾತು :
ಬ್ಲಾಗ್ ನಲ್ಲಿ ಬರೆದ ಕಾದಂಬರಿ ಬೆಂಗಾಲಿ ಸುಂದರಿ. ಈಗಾಗಲೇ 41 ಭಾಗವನ್ನು ಬರೆದು ಕಾದಂಬರಿಯನ್ನು ಮುಕ್ತಾಯ ಮಾಡಿದ್ದೆ. ಆದರೆ ಕಾದಂಬರಿಯನ್ನು ಮುಕ್ತಾಯ ಮಾಡಿದ ನಂತರ ನನಗೆ ಅನೇಕ ಜನರ ಪೋನ್ ಗಳು ಬಂದವು. ಕಾದಂಬರಿಯನ್ನು ಇನ್ನೂ ಮೂರ್ನಾಲ್ಕು ಕಂತುಗಳ ವರೆಗೆ ಮುಂದುವರೆಸಬಹುದು ಎಂದರು. ಕ್ಲೈಮ್ಯಾಕ್ಸ್ ಸರಿಯಿಲ್ಲ ಎಂದರು. ಮತ್ತೆ ಕೆಲವು ಮಿತ್ರರು ಬಾಂಗ್ಲಾ ಗಡಿಯನ್ನು ದಾಟಿ ಬಂದ ನಂತರ ಮಧುಮಿತಾ ಹಾಗೂ  ವಿನಯಚಂದ್ರ ಮರಳಿ ಉತ್ತರ ಕನ್ನಡದ ಹಳ್ಳಿಗೆ ಹೇಗೆ ಬಂದರು? ಉತ್ತರ ಕನ್ನಡದ ಹವ್ಯಕರ ಮನೆ ಪಕ್ಕದ ದೇಶದ, ಮುಸ್ಲಿಂ ಬಾಹುಳ್ಯದ ನಾಡಿನಿಂದ ಬಂದ ಹುಡುಗಿಯನ್ನು ಹೇಗೆ ಮನೆಯೊಳಕ್ಕೆ ಬಿಟ್ಟುಕೊಂಡಿತು ಎನ್ನುವುದರ ಬಗ್ಗೆ ಬರೆಯಬೇಕಿತ್ತು ಎಂದೂ ಸಲಹೆ ನೀಡಿದ್ದರು. ಕೆಲವರು ಸಾತ್ವಿಕ ಕೋಪವನ್ನೂ ತೋರ್ಪಡಿಸಿದ್ದರು. ಕಾದಂಬರಿಯ ಪುಸ್ತಕವನ್ನು ಮುದ್ರಿಸಿ ಎಂದಿದ್ದರು. ಅದಕ್ಕೆ ಸಹಾಯ ಮಾಡುವುದಾಗಿಯೂ ತಿಳಿಸಿದ್ದರು. ಎಲ್ಲರ ಪ್ರೀತಿಗೆ ಕಟ್ಟುಬಿದ್ದು ಕನಿಷ್ಟ ಮೂರು ಅಥವಾ ನಾಲ್ಕು ಕಂತುಗಳ ವರೆಗೆ ಬೆಂಗಾಲಿ ಸುಂದರಿ ಕಾದಂಬರಿಯನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿದ್ದೇನೆ. 2014ರ ನವೆಂಬರ್ ತಿಂಗಳಿನಲ್ಲಿಯೇ ಮುಕ್ತಾಯ ಎಂದು ಬರೆದಿದ್ದ ಕಾದಂಬರಿಯನ್ನು ಒಂದೂವರೆ ವರ್ಷದ ತರುವಾಯ ಮತ್ತೆ ಬರೆಯುತ್ತಿದ್ದೇನೆ. ಮುಂದುವರಿಸುತ್ತಿದ್ದೇನೆ. ಓದಿ, ಅಭಿಪ್ರಾಯಿಸಿ...

---------------

                  ವಿನಯಚಂದ್ರನ ಬಳಿ ಒಬ್ಬರಾದ ನಂತರ ಒಬ್ಬರು ಸೈನಿಕರು, ಕಮಾಂಡರುಗಳು ಬಂದು ವಿಚಾರಣೆ ನಡೆಸುತ್ತಲೇ ಇದ್ದರು. ತಕ್ಷಣ ವಿನಯಚಂದ್ರನಿಗೆ ಸೈನ್ಯದಲ್ಲೇ ಇದ್ದ ಗೆಳೆಯ ನಾಗರಾಜು ನೆನಪಾಗಿದ್ದ. ಡಿಗ್ರಿ ಓದುತ್ತಿದ್ದ ಸಮಯದಲ್ಲಿಯೇ ಸೈನ್ಯದ ಕನಸುಕಂಡು, ಸೇರಿಕೊಂಡಿದ್ದ ಗೆಳೆಯ. ಲಡಾಕ್, ಕಾಶ್ಮೀರ, ಕಛ್ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಸೇನೆಯಲ್ಲಿ ಕೆಲಸ ಮಾಡಿದ್ದ ಗೆಳೆಯ. ಸೈನ್ಯದ ಅಧಿಕಾರಿಗಳಿಗೆ ವಿನಯಚಂದ್ರ ನಾಗರಾಜುವಿನ ಹೆಸರನ್ನು ಹೇಳಿದ್ದ. ಅಧಿಕಾರಿಗಳು ನಾಗರಾಜುವಿನ ಸಂಪರ್ಕಕ್ಕೆ ಮುಂದಾಗಿದ್ದರು.
               ಸೈನ್ಯದ ಅಧಿಕಾರಿಗಳ ಕೈಗೆ ಸಿಕ್ಕು ಒಂದು ದಿನವೇ ಕಳೆದಿತ್ತು. ಆದರೂ ಮಧುಮಿತಾ ಎಲ್ಲಿದ್ದಾಳೆ ಎನ್ನುವುದು ಗೊತ್ತಾಗಿರಲ್ಲ. ಸೈನ್ಯದವರು ಕಾಲಿಗೆ ಹೊಡೆದ ಗುಂಡನ್ನು ಸೈನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಇಲಾಜು ಮಾಡಲಾಗಿತ್ತು. ಗುಂಡು ತಾಗಿದ ಜಾಗದಲ್ಲಿ ವಿಪರೀತ ನೋಯುತ್ತಿತ್ತು. ನೋವಿನ ನಡುವೆಯೂ ವಿಚಾರಣೆಗಾಗಿ ಸೈನ್ಯದ ಅಧಿಕಾರಿಗಳು ಬಂದಾಗಲೆಲ್ಲ ಅವರ ಬಳಿ ಮಧುಮಿತಾಳ ಬಗ್ಗೆ ಕೇಳುತ್ತಲೇ ಇದ್ದ. ಆದರೆ ಯಾರೊಬ್ಬರೂ ಕೂಡ ಮಧುಮಿತಾಳ ಬಗ್ಗೆ ಚಿಕ್ಕ ವಿವರವನ್ನೂ ನೀಡಿರಲಿಲ್ಲ.
             ಮಧುಮಿತಾಳನ್ನು ಕಾಣದೇ ಕಂಗಾಲಾಗಿದ್ದ ವಿನಯಚಂದ್ರ ಕೊನೆಗೊಮ್ಮೆ ಒಬ್ಬ ಅಧಿಕಾರಿಯ ಬಳಿ ಅಂಗಲಾಚಿದ್ದ. ಅದಕ್ಕೆ ಅಧಿಕಾರಿ ಮಧುಮಿತಾಳನ್ನು ಇನ್ನೊಂದು ಕಡೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆಕೆ ಬಾಂಗ್ಲಾದ ನಿವಾಸಿಯಾಗಿರುವ ಕಾರಣ ಅವಳನ್ನು ಸುಲಭವಾಗಿ ನಿನ್ನನ್ನು ಮಾತನಾಡಿಸಲು ಬಿಡುವುದಿಲ್ಲ ಎಂದು ತಿಳಿಸಿದಾಗ ವಿನಯಚಂದ್ರ ಸ್ವಲ್ಪ ನಿರಾಳನಾಗಿದ್ದ. ಎಲ್ಲಾದರೂ ಇರಲಿ, ಆಕೆ ಚನ್ನಾಗಿದ್ದಾಳಲ್ಲ, ಅಷ್ಟು ಸಾಕು ಎಂದುಕೊಂಡನಾದರೂ ಒಮ್ಮೆ ಅವಳನ್ನು ನೋಡಲೇಬೇಕು ಎಂಬ ತುಡಿತ ಹೆಚ್ಚಾಯಿತು. ನಿಂತಲ್ಲಿಯೇ ಶತಪಥ ಸುತ್ತಿದ.
             `ಸರ್ ಒಂದು ಪೋನ್ ಮಾಡಲು ಅವಕಾಶ ಸಿಗಬಹುದಾ?' ಹತ್ತಿರದಲ್ಲಿಯೇ ಇದ್ದಿದ್ದ ಮಿಲಿಟರಿ ಅಧಿಕಾರಿಗಳ ಬಳಿ ಕೇಳಿದ್ದ. `ಯಾಕೆ??' ರೇಗಿದ್ದರು ಅಧಿಕಾರಿ. `ಗೆಳೆಯನೊಬ್ಬನಿಗೆ ಪೋನ್ ಮಾಡಬೇಕಿತ್ತು.. ಬಹಳ ಅರ್ಜೆಂಟು..' ಎಂದ ವಿನಯಚಂದ್ರ.
            `ಯಾರು? ಯಾವ ದೇಶದವನು? ಯಾಕೆ ಪೋನ್ ಮಾಡುವುದು?' ಸಿಟ್ಟಿನಿಂದಲೇ ಕೇಳಿದ್ದ ಮಿಲಿಟರಿಯವನು. `ಭಾರತದವನೇ. ಸಂಜಯ ಎಂಬ ಹೆಸರು. ನನ್ನ ಪರಿಸ್ಥಿತಿಯನ್ನು ಹೇಳಿಕೊಳ್ಳಬೇಕು. ಆತ ಸಹಾಯ ಮಾಡಬಹುದು..' ಎಂದು ಅಂಗಲಾಚಿದ ವಿನಯಚಂದ್ರ. ಕೊನೆಗೆ ಮಿಲಿಟರಿ ಅಧಿಕಾರಿ ದೂರವಾಣಿಯನ್ನು ತೋರಿಸಿದ. ವಿನಯಚಂದ್ರ ಸಂಜಯನಿಗೆ ಪೋನ್ ಮಾಡಿ ವಿಷಯವನ್ನು ತಿಳಿಸಿದ.
           ವಿನಯಚಂದ್ರ ಬಾಂಗ್ಲಾದೇಶದಲ್ಲಿ ಕಾಣೆಯಾಗಿದ್ದಾನೆ ಎನ್ನುವ ವಿಷಯ ತಿಳಿದ ಕೂಡಲೇ ಸರಣಿ ಸುದ್ದಿಗಳನ್ನು ಮಾಡುವ ಮೂಲಕ ದೇಶದಾದ್ಯಂತ ಸಂಚಲನವನ್ನು ಉಂಟುಮಾಡಿದ್ದ. ಸಂಜಯ ಮಾಡಿದ್ದ ಸುದ್ದಿಗಳಿಂದಾಗಿ ಪ್ರಧಾನ ಮಂತ್ರಿಗಳು ಹಾಗೂ ಸಚಿವಾಲಯ ಕೂಡ ವಿನಯಚಂದ್ರನನ್ನು ಬಾಂಗ್ಲಾದೇಶದಿಂದ ಕರೆದುಕೊಂಡು ಬರುವ ಬಗ್ಗೆ ಕ್ರಮಗಳನ್ನು ಕೈಗೊಂಡಿದ್ದರು. ಬಾಂಗ್ಲಾದೇಶದ ಸಚಿವಾಲಯದ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುವ ಮೂಲಕ ವಿನಯಚಂದ್ರನ ರಕ್ಷಣೆಯ ಸಾಧ್ಯತೆಗಳನ್ನು ತೆರೆದಿಟ್ಟಿದ್ದರು. ಆದರೆ ಭಾರತದಲ್ಲಿ, ರಾಜಕೀಯವಾಗಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ವಿನಯಚಂದ್ರನಿಗೆ ಮಾತ್ರ ಇದಾವುದರ ಅರಿವಿರಲಿಲ್ಲ. ಬಾಂಗ್ಲಾದ ಬೀದಿಬೀದಿಗಳಲ್ಲಿ ಭಾರತವನ್ನು ತಲುಪಬೇಕೆಂಬ ಉದ್ದೇಶದಿಂದ ಮಧುಮಿತಾಳೊಂದಿಗೆ ಅಲೆಯುತ್ತಿದ್ದ. ಸಂಜಯನಿಗೆ ದೂರವಾಣಿಯ ಮೂಲಕ ಕರೆ ಮಾಡಿದ್ದು ವಿನಯಚಂದ್ರನ ಪಾಲಿಗೆ ಭಾರಿ ಉತ್ತಮ ಕೆಲಸವಾಗಿತ್ತು.
            ವಿನಯಚಂದ್ರ ಆರಾಮಾಗಿದ್ದಾನೆ ಹಾಗೂ ಆತ ಭಾರತಕ್ಕೆ ಬಂದಿದ್ದಾನೆ ಎನ್ನುವ ವಿಷಯ ಅರಿತ ಸಂಜಯ ನಿರಾಳನಾಗಿದ್ದ. ಮಿಲಿಟರಿ ಅಧಿಕಾರಿಗಳ ಕೈಲಿ ಸಿಕ್ಕಿಬಿದ್ದಿರುವ ಹಾಗೂ ಕಾಲಿಗೆ ಗುಂಡೇಟು ಬಿದ್ದಿರುವ ವಿಷಯವನ್ನು ತಿಳಿದ ತಕ್ಷಣವೇ ಸಂಜಯ ಒಮ್ಮೆ ಆಘಾತಕ್ಕೆ ಒಳಗಾಗಿದ್ದರೂ ಇನ್ನೂ ದೊಡ್ಡದಾದ ತೊಂದರೆಯೇನೂ ಆಗಿಲ್ಲ ಎಂದು ಸಮಾಧಾನಿಸಿದ. ಮಿಲಿಟರಿಯವರ ಕೈಯಲ್ಲಿರುವ ವಿನಯಚಂದ್ರನನ್ನು ಬಿಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಗಳನ್ನು ಕೈಗೊಳ್ಳಲಾರಂಭಿಸಿದ. ಪ್ರಧಾನಿ ಕಚೇರಿಯನ್ನು ಸಂಪರ್ಕಿಸಲು ಯತ್ನಿಸಿ ಯಶಸ್ವಿಯಾದ. ನಂತರದ ಬೆಳವಣಿಗೆಗಳು ತ್ವರಿತವಾಗಿ ನಡೆದಿದ್ದವು. ಮೂರ್ನಾಲ್ಕು ದಿನಗಳ ಅಂತರದಲ್ಲಿಯೇ ವಿನಯಚಂದ್ರನ ಬಿಡುಗಡೆಗೆ ಸಂಬಂಧಿಸಿದಂತೆ ಬೆಳವಣಿಗೆಗಳು ನಡೆದಿದ್ದವು. ಜೊತೆಯಲ್ಲಿಯೇ ಮಧುಮಿತಾಳನ್ನೂ ಬಿಟ್ಟುಕಳಿಸುವ ಕುರಿತಂತೆ ಕ್ರಮಗಳನ್ನು ಜರುಗಿಸಲಾಗಿತ್ತು.


(ಮುಂದುವರಿಯುತ್ತದೆ..)

              

Wednesday, July 6, 2016

ಬನವಾಸಿ ದೇವಾಲಯಕ್ಕೆ ವನವಾಸ ಯೋಗ.... ಸೋರುತಿಹುದು ಮಧುಕೇಶ್ವರನ ದೇವಾಲಯ

ಪಂಪನ ನಾಡಿನಲ್ಲಿ ಇದೇನು ದುಸ್ಥಿತಿ? ಕಣ್ಮುಚ್ಚಿ ಕುಳಿತ ಪುರಾತತ್ವ ಇಲಾಖೆ

---------------------


ಕನ್ನಡದ ಪ್ರಪ್ರಥಮ ರಾಜರು ಎನ್ನಿಸಿಕೊಂಡಿರುವ ಕದಂಬರ ಆರಾಧ್ಯದೈವ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ. ಆದಿಕವಿ ಪಂಪ ಮೆಚ್ಚಿ ಹಾಡಿಹೊಗಳಿದ ಬನವಾಸಿಯ ಮಧುಕೇಶ್ವರನ ದೇವಸ್ಥಾನಕ್ಕೆ ವನವಾಸ ಯೋಗ ಪ್ರಾಪ್ತಿಯಾಗಿದೆ.
 ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಬನವಾಸಿಯ ಮಧುಕೇಶ್ವರ ದೇವಾಲಯ ದಕ್ಷಿಣ ಭಾರತದಲ್ಲಿಯೇ ಅತೀ ಪ್ರಾಚೀನ ದೇವಾಲಯಗಳಲ್ಲಿ ಒಂದು ಎನ್ನುವ ಖ್ಯಾತಿಯನ್ನು ಹೊಂದಿದೆ. ಕದಂಬ ವಂಶಸ್ಥರು ತಮ್ಮ ರಾಜಧಾನಿಯಾದ ಬನವಾಸಿಯಲ್ಲಿ ನಿತ್ಯ ಆರಾಧನೆಗಾಗಿ ನಿಮರ್ಾಣ ಮಾಡಿರುವ ದೇವಾಲಯವೀಗ ಮಳೆ ಬಂದರೆ ಸಾಕು ಸೋರುತ್ತಿದೆ. ಆದರೆ ಈ ಬಗ್ಗೆ ಕ್ರಮ ಕೈಗೊಂಡು ದೇವಸ್ಥಾನ ಅಭಿವೃದ್ಧಿ ಮಾಡಬೇಕಾಗಿದ್ದ ಪುರಾತತ್ವ ಇಲಾಖೆ ಕಣ್ಮುಚ್ಚಿ ಕುಳಿತಿದೆ.
 ಕನ್ನಡದ ಪ್ರಪ್ರಥಮ ರಾಜಧಾನಿ ಎನ್ನುವ ಖ್ಯಾತಿ ಬನವಾಸಿಗಿದೆ. ಬನವಾಸಿಯ ಹೃದಯ ಭಾಗದಲ್ಲಿಯೇ ಇರುವ ಮಧುಕೇಶ್ವರ ದೇವಾಲದ ಬಗ್ಗೆ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವಿದೆ. ಈ ಪ್ರದೇಶದಲ್ಲಿಯೇ ಆದಿಕವಿ ಪಂಪ ಬನವಾಸಿಯ ಚೆಲುವನ್ನು ವಣರ್ಿಸಿದ್ದಾನೆ ಎನ್ನುವ ಪ್ರತೀತಿಯಿದೆ. ಅಪರೂಪದ ಶಿಲಾಮಂಚ ಈ ದೇವಸ್ಥಾನದ ಆವರಣದಲ್ಲಿಯೇ ಇದೆ. ಬೃಹತ್ ನಂದಿ, ಶಿಲಾದೇಗುಲ ಭವ್ಯವಾಗಿದೆ. ಕನರ್ಾಟಕದ ಪ್ರಾಚೀನ ಶಿಲಾ ವಿನ್ಯಾಸಗಳನ್ನು ಒಳಗೊಂಡಿರುವ ಮಧುಕೇಶ್ವರ ದೇವಾಲಯ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಶಿರಸಿಯಿಂದ 24 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನವಿದ್ದು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಪುರಾತತ್ವ ಇಲಾಖೆ ವ್ಯಾಪ್ತಿಗೆ ಈ ದೇವಾಲಯ ಸೇರ್ಪಡೆಯಾದ ನಂತರದಿಂದ ಇದುವರೆಗೂ ನಿರ್ವಹಣೆಯ ಕೊರತೆಯನ್ನು ಎದುರಿಸುತ್ತಿದೆ. ಈ ಕಾರಣದಿಂದಲೇ ದೇವಾಲಯ ಜೀರ್ಣಗೊಳ್ಳುತ್ತಿದ್ದು ಮಳೆಗಾಲದಲ್ಲಿ ಸೋರಲು ಆರಂಭಿಸಿದೆ.
 ದೇವಸ್ಥಾನ ಸೋರುತ್ತಿರುವುದರಿಂದ ಆವರಣದಲ್ಲಿರುವ ಸುಂದರ ಕೆತ್ತನೆಯ ಕಂಬಗಳು, ಕೂಡುಗಟ್ಟೆಗಳಿಂದ ಆವೃತವಾದ ಸುಖನಾಸಿನಿ, ಮುಖಮಂಟಪ, ಪ್ರದಕ್ಷಿಣಾ ಪಥ, ದೇವಾಲಯದ ಗರ್ಭಗುಡಿ, ಆವರಣದಲ್ಲಿನ ಆಸನಗಳು, 7.5 ಅಡಿ ಎತ್ತರದ ಭವ್ಯ ನಂದಿ ವಿಗ್ರಹಗಳೆಲ್ಲ ಮಳೆ ನೀರಿನಲ್ಲಿ ತೋಯುತ್ತಿದೆ. ಬಹುತೇಕ ಶಿಲಾಕೃತಿಗಳು ಒದ್ದೆಯಾಗಿ ಹಸುರು ಬಣ್ಣಕ್ಕೆ ತಿರುಗುತ್ತಿದೆ. ನಿರಂತರವಾಗಿ ಮಳೆ ನೀರು ಸೋರುವುದರಿಂದ ಶೀಲಾಮಯ ದೇವಾಲಯದ ಪದರಗಳು ಜೀರ್ಣವಾಗುತ್ತಿವೆ. ಕಳೆದೆರಡು ವರ್ಷಗಳಿಂದ ಮಳೆ ಪ್ರಾರಂಭವಾಗುತ್ತಿದ್ದಂತೆ ಇದೇ ರೀತಿ ದೇವಾಲಯ ಸಂಪೂರ್ಣ ಸೋರುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಪುರಾತತ್ವ ಇಲಾಖೆ ಮಾತ್ರ ಜಾಣ ಕುರುಡುತನ ತೋರುತ್ತಿದೆ. ಪರಿಣಾಮವಾಗಿ ಇತಿಹಾಸದ ಭವ್ಯ ಕುರುಹೊಂದು ಸದ್ದಿಲ್ಲದೇ ನಶಿಸಿಹೋಗುತ್ತಿದೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.
 ಎರಡು ಸಾವಿರ ವರ್ಷಗಳಿಂದ ಮಳೆ ಬಿಸಿಲಿನ ಘಾಸಿಗೊಳಗಾಗಿ ನವೆದಿದ್ದ ಈ ಶಿಲಾದೇಗುಲ 1970ರ ದಶಕದಲ್ಲಿ ಮೊದಲ ಬಾರಿಗೆ ಸೋರಲು ಆರಂಭವಾಗಿತ್ತು. ಆ ಸಂದರ್ಭದಲ್ಲಿ ಪುರಾತತ್ವ ಇಲಾಖೆ ದೇವಸ್ಥಾನದ ರಿಪೇರಿ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಮಧುಕೇಶ್ವರನ ದೇವಾಲಯದ ಮೇಲ್ಚಾವಣಿಯ ಗಾರೆ ಲೇಪವನ್ನು ತೆಗೆದು ರಾಸಾಯನಿಕ ಲೇಪವನ್ನು ಬಳಿದಿತ್ತೆನ್ನಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ದೇವಾಲಯ ಸೋರುವ ಪ್ರಕರಣ ಪುನರಾವತರ್ಿತವಾಗುತ್ತಿದೆ. 2010ರ ಆಸುಪಾಸಿನಲ್ಲಿ ಮತ್ತೆ ದುರಸ್ಥಿ ಕಾರ್ಯ ಕೈಗೆತ್ತಿಕೊಂಡು ಶಿಲೆಗಳಿಗೆ ಲೋಪವಾಗದಿರಲು ಬೆಲ್ಲ, ಮಣ್ಣು, ಸುಣ್ಣ, ದಾಲ್ಚಿನ್ನಿ ಎಣ್ಣೆ ಹಾಗೂ ರಾಸಾಯನಿಕಗಳನ್ನು ಸೇರಿಸಿ ಇಡೀ ದೇವಾಲಯದ ಮೇಲಿನ ಛಾವಣಿಯನ್ನು ಸ್ಥಳಿಕರನ್ನು ದೂರವೇ ಇಟ್ಟು ಪುರಾತತ್ವ ಇಲಾಖೆ ಗುಟ್ಟಾಗಿ ಮಾಡಿ ಮುಗಿಸಿತ್ತು. ಪುರಾತತ್ವ ಇಲಾಖೆಯ ಈ ಕಾರ್ಯದ ಬಗ್ಗೆ ಆ ಸಂದರ್ಭದಲ್ಲಿ ಅಸಮಧಾನವೂ ವ್ಯಕ್ತವಾಗಿತ್ತು. ಪಾರದರ್ಶಕತೆ ಇಲ್ಲದೆ ಈವರೆಗೆ ಮೂರ್ನಾಲ್ಕು ಬಾರಿ ದುರಸ್ಥಿ ಕಾರ್ಯ ಕೈಗೊಂಡರೂ ಸೋರುವುದು ಮಾತ್ರ ನಿಲ್ಲದಿರುವುದು ದುರಂತ ಎನ್ನುತ್ತಾರೆ ಬನವಾಸಿಗರು.
 ಇತಿಹಾಸ ಮರುಕುಳಿಸುತ್ತದೆ ಎನ್ನುವ ಗಾದೆಯ ಮಾತಿದ್ದರೂ ಬನವಾಸಿಯ ದೇವಾಲಯದ ಮಟ್ಟಿಗೆ ಸೋರುವ ಇತಿಹಾಸ ಮರುಕುಳಿಸುತ್ತಿರುವದು ಕನ್ನಡಿಗರಿಗೆ ಅಪಮಾನದ ಸಂಗತಿಯಾಗಿದೆ. ತಕ್ಷಣ ದೇವಾಲಯದ ಜೀಣೋದ್ಧಾರ ಕೈಗೊಂಡು ಕನ್ನಡದ ಹೆಮ್ಮೆಯ ದೇವಾಲಯವನ್ನು ರಕ್ಷಿಸಬೇಕು ಎನ್ನುವುದು ಕನ್ನಡಿಗರ ಒತ್ತಾಸೆಯಾಗಿದೆ. ಜಡ್ಡುಗಟ್ಟಿರುವ ಪುರಾತತ್ವ ಇಲಾಖೆಗೆ ಚುರುಕು ಮುಟ್ಟಿಸುವ ಕಾರ್ಯ ಆಗಬೇಕಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಹಲವಾರು ನಿಯಮಗಳನ್ನು ಮುಂದಿಡುವ ಪುರಾತತ್ವ ಇಲಾಖೆ, ಬನವಾಸಿ ದೇವಾಲಯದ ವಿಷಯದಲ್ಲಿ ತೋರುತ್ತಿರುವ ಅಸಡ್ಡೆ ಅಕ್ಷಮ್ಯವಾದುದು. ಈ ಕುರಿತಂತೆ ಜವಾಬ್ದಾರಿ ಮರೆತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕೂಡಲೇ ದೇವಸ್ಥಾನ ಸೋರುವುದನ್ನು ತಡೆಗಟ್ಟುವ ಅಗತ್ಯವೂ ಇದೆ. ಹೀಗಾದಾಗ ಮಾತ್ರ ಸಹಸ್ರ ವರ್ಷಗಳಿಂದ, ಕವಿಗಳಿಂದ ಹಾಡಿ ಹೊಗಳಿಸಿಕೊಂಡು ಬಂದಿರುವ ಬನವಾಸಿಯ ಮಧುಕೇಶ್ವರ ದೇಗುಲ ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಉಳಿಯಬಹುದಾಗಿದೆ.

********************

 ದೇವಸ್ಥಾನದ ಆವರಣದಲ್ಲಿ ಛಾಯಾಚಿತ್ರ ತೆಗೆದರೆ ದೇಗುಲ ಹಾಳಾಗುತ್ತದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಬನವಾಸಿ ದೇಗುಲ ಸೋರುತ್ತಿದ್ದರೂ ಕೂಡ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜವಾಬ್ದಾರಿ ಮರೆತ ಪುರಾತತ್ವ ಇಲಾಖೆ ಹೀಗೆ ಹಾಳುಗೆಡವುವ ಸಲುವಾಗಿ ದೇವಸ್ಥಾನವನ್ನು ವಹಿಸಿಕೊಳ್ಳಬೇಕಾಗಿತ್ತೇ? ಹುಬ್ಬಳ್ಳಿಯಲ್ಲಿ ಕುಳಿತ ಅಧಿಕಾರಿಗಳು ಮುಂದಿನ ದಿನಗಳಲ್ಲಾದರೂ ದೇಗುಲ ಸೋರುವುದನ್ನು ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಕ್ರೋಶದಿಂದದ ನುಡಿಯುತ್ತಿದ್ದಾರೆ.

Wednesday, June 29, 2016

ಈ ಬೆಕ್ಕಿಗೆ ಹಾಲು, ಅನ್ನ ಬೇಡವೇ ಬೇಡ : ಹಣ್ಣೆಂದರೆ ಪಂಚಪ್ರಾಣ

ತೆನಾಲಿರಾಮನ ಬೆಕ್ಕು ನೆನಪಿಸುವ ಮಾಜರ್ಾಲ

ವಿಕಟಕವಿ ತೆನಾಲಿ ರಾಮನ ವಿಚಿತ್ರ ಸ್ವಭಾವದ ಬೆಕ್ಕು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಹಾಲನ್ನು ಇಟ್ಟರೆ ಮಾರು ದೂರ ಓಡುವ ತೆನಾಲಿ ರಾಮನ ಬೆಕ್ಕಿನ ಕಥೆಯನ್ನು ಪ್ರತಿಯೊಬ್ಬರೂ ಕೇಳಿರುತ್ತಾರೆ. ಇಂತಹುದೇ ಒಂದು ಬೆಕ್ಕು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಂಟಕಲ್ನಲ್ಲಿದೆ. ತನ್ನ ವಿಶಿಷ್ಟ ಸ್ವಭಾವದಿಂದಾಗಿ ಮನಸೆಳೆಯುತ್ತಿದೆ.
 ಕಾನಸೂರು ಬಳಿಯ ದಂಟಕಲ್ನ ಗಂಗಾ ಹೆಗಡೆ ಎನ್ನುವವರ ಮನೆಯಲ್ಲಿ ಕಳೆದೆರಡು ವರ್ಷಗಳಿಂದ ವಾಸವಿರುವ ಬೆಕ್ಕು ತನ್ನ ವಿಶಿಷ್ಟ ಗುಣದಿಂದಾಗಿ ಅಚ್ಚರಿಯನ್ನು ಹುಟ್ಟುಹಾಕಿದೆ. ಇವರ ಮನೆಯಲ್ಲಿರುವ ಬೆಕ್ಕು ಅನ್ನವನ್ನು ತಿನ್ನುವುದಿಲ್ಲ. ಬೆಕ್ಕಿಗೆ ಹಾಲು ಎಂದರೆ ಪಂಚಪ್ರಾಣ. ಮನೆ ಮನೆಗಳಲ್ಲಿ ಇಡುವ ಹಾಲನ್ನು ಕದ್ದು ಕುಡಿಯುವ ಬೆಕ್ಕು ಸವರ್ೇ ಸಾಮಾನ್ಯ. ಆದರೆ ಇವರ ಮನೆಯಲ್ಲಿರುವ ಬೆಕ್ಕು ಹಾಲನ್ನೂ ಕೂಡ ಕುಡಿಯುವುದಿಲ್ಲ. ಹಾಲಿನ ಪಾತ್ರೆಯನ್ನು ಬೆಕ್ಕಿನ ಎದುರು ಇಟ್ಟರೂ ಕೂಡ ಅದರ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ. ಹಾಗಾದರೆ ಬೆಕ್ಕು ಏನನ್ನು ಕುಡಿಯುತ್ತದೆ, ತಿನ್ನುತ್ತದೆ ಎನ್ನುವ ಕುತೂಹಲ ಸಹಜ. ಇದರ ಆಹಾರವೂ ಕೂಡ ಅಷ್ಟೇ ವಿಶಿಷ್ಟವಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
 ಗಂಗಾ ಹೆಗಡೆಯವರು ಸಾಕಿರುವ ಈ ಬೆಕ್ಕು ಅನ್ನದ ಬದಲಾಗಿ ವಿವಿಧ ಹಣ್ಣುಗಳನ್ನು ತಿನ್ನುತ್ತದೆ. ಹಲಸಿನ ಹಣ್ಣು, ಮಾವು, ಪೇರಲೆ ಹೀಗೆ ವಿವಿಧ ಹಣ್ಣುಗಳನ್ನು ತಿನ್ನುವ ಬೆಕ್ಕಿಗೆ ಪಪ್ಪಾಯಿ ಹಣ್ಣೆಂದರೆ ಪಂಚಪ್ರಾಣ. ದೊಡ್ಡ ಗಾತ್ರದ ಪಪ್ಪಾಯಿ ಹಣ್ಣನ್ನು ಒಂದೇ ದಿನದಲ್ಲಿ ತಿಂದು ಮುಗಿಸುವ ಈ ಬೆಕ್ಕು ಒಂದೆರಡು ಸಾರಿ ಪಪ್ಪಾಯಿ ಮರವನ್ನು ಏರಿ ಹಣ್ಣನ್ನು ತಿಂದಿರುವ ನಿದರ್ಶನಗಳೂ ಇದೆ. ಇದಲ್ಲದೇ ಅವಲಕ್ಕಿ ಕೂಡ ಬೆಕ್ಕಿನ ಇಷ್ಟದ ತಿಂಡಿಗಳಲ್ಲೊಂದು ಎಂಬುದು ಗಂಗಾ ಹೆಗಡೆಯವರ ಅಭಿಪ್ರಾಯ. ಹಲಸಿನ ಹಪ್ಪಳ, ಹಲಸಿನಕಾಯಿ ಚಿಪ್ಸ್, ಕರಿದ ಪದಾರ್ಥಗಳೆಂದರೆ ಈ ಬೆಕ್ಕಿಗೆ ಅಷ್ಟೇ ಅಚ್ಚುಮೆಚ್ಚು. ಪಪ್ಪಾಯಿ ಹಣ್ಣು ಹಾಗೂ ಕರಿದ ತಿಂಡಿಗಳಿಗಾಗಿ ಎಲ್ಲರಿದ್ದರೂ ಓಡಿ ಬರುತ್ತದೆ ಎಂದು ಅವರು ಮಾಹಿತಿ ನೀಡುತ್ತಾರೆ. ಹಾಲನ್ನೇ ಕುಡಿಯದ ಈ ಬೆಕ್ಕು ನೀರನ್ನು ಮಾತ್ರ ಕುಡಿಯುತ್ತದೆ ಎಂದೂ ಅವರು ಮಾಹಿತಿ ನೀಡುತ್ತಾರೆ.
 ಎರಡು ವರ್ಷಗಳ ಹಿಂದೆ ಕಾನಸೂರಿನ ಮುಸ್ಲೀಮರ ಮನೆಯೊಂದರಿಂದ ಎರಡು ಬೆಕ್ಕಿನ ಮರಿಗಳನ್ನು ತಂದಿದ್ದೆವು. ಎರಡೂ ಬೆಕ್ಕಿನ ಮರಿಗಳಿಗೆ ಹಾಲನ್ನು ಕೊಟ್ಟರೆ ದೂರ ಹೋಗುತ್ತಿದ್ದವು. ಅನ್ನವನ್ನು ಹಾಕಿದರೂ ತಿನ್ನುತ್ತಿರಲಿಲ್ಲ. ದಿನದಿಂದ ದಿನಕ್ಕೆ ಬೆಕ್ಕಿನಮರಿಗಳು ಸೊರಗಲು ಆರಂಭಿಸಿದ್ದವು. ಅವುಗಳನ್ನು ನೋಡಲು ಆಗದೇ ಬೇರೆ ಬೇರೆ ಆಹಾರಗಳನ್ನು ಅವುಗಳ ಮುಂದೆ ಇಟ್ಟೆವು. ಕೊನೆಗೆ ಅವಲಕ್ಕಿ, ಹಣ್ಣು ಈ ಮುಂತಾದ ಆಹಾರಗಳನ್ನು ಸೇವಿಸಲು ಆರಂಭಿಸಿದವು. ಕಳೆದ ವರ್ಷ ಒಂದು ಬೆಕ್ಕು ಸಾವನ್ನಪ್ಪಿತು. ಆದರೆ ಈಗ ಇರುವ ಇನ್ನೊಂದು ಬೆಕ್ಕು ವಿಶಿಷ್ಟ ಆಹಾರಾ ಪದ್ಧತಿಯಿಂದಲೇ ಜೀವಿಸುತ್ತಿದೆ ಎಂದು ಗಂಗಾ ಹೆಗಡೆ ತಿಳಿಸುತ್ತಾರೆ.
 ಸಾಕು ಪ್ರಾಣಿಗಳು ಹಣ್ಣುಗಳನ್ನು ತಿನ್ನುವ ಬಗ್ಗೆ ಆಗೊಮ್ಮೆ ಈಗೊಮ್ಮೆ ಕೇಳಿರುತ್ತೇವೆ. ಆದರೆ ಅನ್ನವನ್ನೇ ತಿನ್ನದೇ, ಹಾಲನ್ನು ಕುಡಿಯದೇ ಹಣ್ಣನ್ನು, ಕರಿದ ತಿಂಡಿಗಳನ್ನು ಮಾತ್ರ ಮೆಲ್ಲುವ ಇಂತಹ ಬೆಕ್ಕು ಅಪರೂಪವೇ ಸರಿ. ತನ್ನಿಷ್ಟದ ಆಹಾರದ ಬದಲಾಗಿ ಫಲಾಹಾರವನ್ನೇ ಮೈಗೂಡಿಸಿಕೊಂಡ ಈ ಬೆಕ್ಕು ವಿಭಿನ್ನವಾಗಿಯೂ, ವಿಶಿಷ್ಟವಾಗಿಯೂ ನಿಲ್ಲುತ್ತದೆ. ಇಂತಹ ವಿಶಿಷ್ಟ ಗುಣದ ಬೆಕ್ಕಿನ ಕುರಿತು ಮಾಹಿತಿ ಪಡೆದವರೂ ಕೂಡ ಬೆಕ್ಕನ್ನು ವೀಕ್ಷಿಸಿ, ಅದರ ಗುಣದ ಬಗ್ಗೆ ಅಚ್ಚರಿ ಪಡಲು ಆರಂಭಿಸಿದ್ದಾರೆ.
.......
ನಾನು ಇದುವರೆಗೂ 25ಕ್ಕೂ ಹೆಚ್ಚಿನ ಬೆಕ್ಕುಗಳನ್ನು ಸಾಕಿದ್ದೇನೆ. ಆದರೆ ಇಷ್ಟು ವಿಶಿಷ್ಟ ಆಹಾರ ಪದ್ಧತಿಯ ಬೆಕ್ಕನ್ನು ನೋಡಿದ್ದು ಇದೇ ಮೊದಲು. ಮೊದ ಮೊದಲು ಇದು ವಿಚಿತ್ರವೆನ್ನಿಸಿದ್ದರೂ ಕೂಡ ಈಗ ಈ ಗುಣಗಳೇ ವಿಶಿಷ್ಟ ಎನ್ನಿಸುತ್ತಿದೆ.
ಗಂಗಾ ಹೆಗಡೆ
ದಂಟಕಲ್
ಬೆಕ್ಕಿನ ಮಾಲಕಿ


Saturday, May 28, 2016

ಅಜ್ಜ ನೆಟ್ಟ ಆಲದ ಮರ

ಅಜ್ಜ ನೆಟ್ಟ ಆಲದ ಮರಕ್ಕೆ
ನೂರಾರು ಬೀಳಲು
ಬುಡದಲ್ಲಿ ಕುಳಿತ ಗೊಲ್ಲನ ಕೈಯಲ್ಲಿ
ಒಂದೇ ಒಂದು ಕೊಳಲು |

ಆಲದ ಮರದಲಿ ಹಕ್ಕಿಯ ಕಲರವ
ಬುಡದಲಿ ದನಗಳು ಅಂಬಾ
ಒಟ್ಟಿಗಿದ್ದೂ ಬಿಟ್ಟಿರಲಾರೆ
ಕಲಿಯಬೇಕಿದೆ ತುಂಬಾ |

ಅಜ್ಜನ ಕೋಲಿದು ನನ್ನೆಯ ಕುದುರೆ
ಬಾಯಿಪಾಟದ ಏಟು
ಅಜ್ಜಿಯ ಕವಳದ ತಬಕಲಿ ಕಲ್ಲು
ಇದೇ ರೂಪಾಯಿ ನೋಟು |

ಆಲದ ತೋಳು ಮೈಲುಗಳಾಚೆ
ಹಾಸಿದೆ ಪ್ರೀತಿಯ ಚಪ್ಪರ
ಒಡಲಲಿ ನೆರಳು ಬದುಕಿಗೆ ರಕ್ಷಣೆ
ತಡೆದಿದೆ ಗಾಳಿಯ ಅಬ್ಬರ |

ಅಪ್ಪನ ಸಾಲಕ್ಕೆ ಅಮ್ಮನೇ ಜಾಮೀನು
ಬದುಕಲಿ ಬೇರೆ ಏನು
ಹಗಲಿನ ಕೋಪಕೆ ಇರುಳಲಿ ಮದ್ದು
ಉಂಡು ಮಲಗಿದ ಮೇಲೆ ಇನ್ನೇನು |

ಆಲದ ಬಿಳಲಿಗೆ ಗೆದ್ದಲು ಕಾಟ
ನಗರದ ಕಡೆಗೆ ಓಟ
ಆಲದ ಬುಡದಲಿ ನೆರಳೇ ಇಲ್ಲ
ಕಟುಕನ ಉರುಳಿನ ಕಾಟ |

ಆಲದ ಮರದಲಿ ಎಲೆಯೇ ಇಲ್ಲ
ತಂಪಿನ ನೆಳಲು ನಾಪತ್ತೆ
ಬುಡದಲ್ಲಿ ಅಂಬಾ ಹಸುಗಳೇ ಇಲ್ಲ
ಜೀವಕೆ ಬಂದ ಆಪತ್ತೇ |

ಆಲದ ಬಿಳಲು ಮಕ್ಕಳ ಪಾಲಿಗೆ
ಜೀವನ ಜೋಕಾಲಿ
ಅಂದಿಗೆ ಮುಗಿದಿದೆ ಇಂದೇನಿಲ್ಲ
ಬಿಳಲು ಖಾಲಿ ಪೀಲಿ |

-------------

(ಈ ಕವಿತೆಯನ್ನು ಬರೆದಿರುವುದು ಮೇ.26, 2016ರಂದು)

(ಈ ಕವಿತೆಯನ್ನು ಮೇ.28ರಂದು ಶಿರಸಿ ತಾಲೂಕಿನ ಯಡಳ್ಳಿಯ ವಿದ್ಯೋದಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಥಮ ಪ್ರಾಂತ ಸಮ್ಮೇಳನದಲ್ಲಿ ವಾಚಿಸಲಾಗಿದೆ. ಕೆಲವು ದಿನಗಳಿಂದ ಥ್ರೋಟ್ ಇನ್ಫೆಕ್ಷನ್ ಆಗಿದ್ದ ಕಾರಣ ನನಗೆ ಕವಿತೆ ವಾಚಿಸಲು ಸಾಧ್ಯವೇ ಆಗಲಿಲ್ಲ. ಕೊನೆಗೆ ನನ್ನ ಬದಲಾಗಿ ಮಿತ್ರ ಗಿರಿಧರ ಕಬ್ನಳ್ಳಿ ವಾಚಿಸಿದರು. ಕೊನೆಗೆ ಸಮ್ಮೇಳನದ ಸವರ್ಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡ ಅವರ ಬಳಿ ಆಶಿವರ್ಾದ ಪಡೆದುಕೊಂಡೆ. ಆ ಸಂದರ್ಭದಲ್ಲಿ ದೊಡ್ಡರಂಗೇಗೌಡರು ನಿನ್ನಲ್ಲಿ ಒಳ್ಳೊಳ್ಳೆಯ ಕವಿತೆ ಬರಲಿ. ಧ್ವನಿಯನ್ನು ಮೊದಲು ಸರಿ ಮಾಡಿಕೊ. ನಿನ್ನ ಕವಿತೆಯನ್ನು ಚನ್ನಾಗಿ ವಾಚಿಸು ಎಂದು ಹರಸಿದರು. ಧನ್ಯನಾದೆ ಗುರುವರ್ಯ

Thursday, May 26, 2016

ಶತಮಾನದಲ್ಲಿ ಇದೇ ಮೊದಲ ಬಾರಿ ಹರಿವು ನಿಲ್ಲಿಸಿದ ಅಘನಾಶಿನಿ/ ಅಳಿವಿನ ಅಂಚಿನಲ್ಲಿವೆ ನೀರುನಾಯಿಗಳು

ಬಿಸಿಲ ಬೇಗೆಗೆ ಬಸವಳಿದ ಮಲೆನಾಡು

ಮಲೆನಾಡಿನಲ್ಲಿ ಬರದ ಬೇಗೆಗೆ ಜಲಮೂಲಗಳು ಬತ್ತಲು ಆರಂಭಿಸಿದೆ. ಮಲೆನಾಡಿನ ನದಿಗಳು, ಹಳ್ಳಗಳು ಬತ್ತಿವೆ. ಶತಮಾನದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅಘನಾಶಿನಿ ನದಿ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಹರಿವು ನಿಲ್ಲಿಸಿದೆ.

 ಅಘನಾಶಿನಿ ನದಿ ಮುಖ್ಯವಾಗಿ ಶಿರಸಿಯ ಶಂಕರಹೊಂಡ ಹಾಗೂ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಹುಟ್ಟುತ್ತದೆ. ನಂತರ ಈ ಎರಡೂ ಕವಲುಗಳು ಸಿದ್ದಾಪುರ ತಾಲೂಕಿನ ಮಾನಿಹೊಳೆ ಎಂಬಲ್ಲಿ ಸಂಗಮವಾಗಿ ಉಂಚಳ್ಳಿಯಲ್ಲಿ ಜಲಪಾತದ ಮೂಲಕ ಧುಮ್ಮಿಕ್ಕಿ ಕರಾವಳಿ ಪ್ರದೇಶವನ್ನು ಸೇರುತ್ತದೆ. ನಂತರ ಕುಮಟಾ ತಾಲೂಕಿನಲ್ಲಿ ಹರಿದು ಹೋಗುವ ನದಿ ಅಘನಾಶಿನಿ ಎಂಬಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೀಗೆ ಸಮುದ್ರವನ್ನು ಸೇರುವುದಕ್ಕೂ ಮೊದಲು 98 ಕಿಲೋಮೀಟರ್ ದೂರ ಹರಿಯುತ್ತದೆ. ಈ ಅವಧಿಯಲ್ಲಿ ಸಹಸ್ರಾರು ಕುಟುಂಬಗಳು, ಸಹಸ್ರಾರು ಎಕರೆ ಪ್ರದೇಶಗಳು ಅಘನಾಶಿನಿ ನದಿಯನ್ನೇ ಅವಲಂಭಿಸಿವೆ.
 ಅಘನಾಶಿನಿ ನದಿ ಈ ವರ್ಷ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಬತ್ತಿ ಹೋಗಿದೆ. ಶತಮಾನಗಳ ಅವಧಿಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಈ ನದಿ ತನ್ನ ಹರಿವನ್ನು ನಿಲ್ಲಿಸಿದೆ. ಪರಿಣಾಮವಾಗಿ ಅಘನಾಶಿನಿ ಕಣಿಯ ರೈತರು, ಅಡಿಕೆ ಬೆಳೆಗಾರರು, ಅಘನಾಶಿನಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನಸಾಮಾನ್ಯರು ಹೈರಾಣಾಗಿದ್ದಾರೆ. ನದಿ ತೀರದದಲ್ಲಿದ್ದ ಅಡಿಕೆ ತೋಟಗಳು ಒಣಗಿ ಹೋಗಿವೆ. ಅಪ್ಪೆಮರಗಳು ನೀರಿಲ್ಲದೇ ಸೊರಗಿದೆ. ಕೆಪ್ಪ ಜೋಗ ಎನ್ನುವ ಹೆಸರನ್ನು ಪಡೆದು, ಎಲ್ಲರ ಕಿವಿ ಕಿವುಡಾಗುವಂತೆ ಅಬ್ಬರದಿಂದ ಧುಮ್ಮಿಕ್ಕುತ್ತಿದ್ದ ಉಂಚಳ್ಳಿ ಜಲತಾದ ಸದ್ದು ಅಡಗಿದೆ. ಅಘನಾಶಿನಿ ನದಿ ನೀರನ್ನೇ ಅವಲಂಬಿಸಿದ್ದ ಅಪರೂಪ ಸಿಂಗಳೀಕಗಳು, ಕಾಡೆಮ್ಮೆಗಳಿಗೂ ಕುಡಿಯಲು ನೀರಿಲ್ಲ.
 ಪ್ರತಿ ವರ್ಷ ಮೇ ತಿಂಗಳಿನಲ್ಲಿ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಆದರೆ ಈ ಸಾರಿ ಮಾತ್ರ ಎಪ್ರಿಲ್ ತಿಂಗಳಿನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿತ್ತು. ಮೇ ತಿಂಗಳ ಆರಂಭದಲ್ಲಿಯೇ ನೀರು ಹರಿಯುವುದು ನಿಂತಿದೆ. ಶಿರಸಿ ನಗರಕ್ಕೆ ಅಘನಾಶಿನಿ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ನೀರು ಹರಿಯುವುದು ನಿಂತಿರುವ ಪರಿಣಾಮ ಶಿರಸಿ ನಗರಕ್ಕೆ ನೀರಿನ ಸರಬರಾಜು ನಿಂತಿದೆ. ಇದರಿಂದಾಗಿ ಶಿರಸಿ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಇದಲ್ಲದೇ ಅಘನಾಶಿನಿ ನದಿಯ ನೀರನ್ನೇ ಅವಲಂಭಿಸಿದ್ದ ಶಿರಸಿ ತಾಲೂಕಿನ ರೇವಣಕಟ್ಟಾ, ಸರಕುಳಿ, ಸಿದ್ದಾಪುರ ತಾಲೂಕಿನ ಹಿತ್ಲಕೈ, ಬಾಳೂರು, ಬಾಳೇಸರ ಮುಂತಾದ ಗ್ರಾಮಗಳಲ್ಲಿ ನೀರಿಲ್ಲದೇ ಜನಸಾಮಾನ್ಯರು ಹೈರಾಣಾಗಿದ್ದಾರೆ.
 ಅಘನಾಶಿನಿ ನದಿಯ ಉಪನದಿಗಳಲ್ಲಿಯೂ ಕೂಡ ನೀರಿಲ್ಲ. ಅಘನಾಶಿನಿ ನದಿ ಮೂಲದಲ್ಲಿಯೂ ಕೂಡ ನೀರಿಲ್ಲ. ಪ್ರಮುಖ ಉಪನದಿಯಾದ ಭತ್ತಗುತ್ತಿಗೆ ಹೊಳೆಯಲ್ಲಿ ನೀರಿಲ್ಲ. ಭತ್ತಗುತ್ತಿಗೆ ಹೊಳೆಯ ಮೂಲ ಎನ್ನಿಸಿಕೊಂಡಿರುವ ಹನುಮಂತಿ ಕೆರೆ ಹೂಳು ತುಂಬಿದೆ. ಬೆಣ್ಣೆಹಳ್ಳ, ಬುರುಡೆ ಜಲಪಾತಕ್ಕೆ ಕಾರಣವಾದ ಬೀಳಗಿ ಹೊಳೆಯಲ್ಲಿಯೂ ಕೂಡ ನೀರಿಲ್ಲ. ಇದೆಲ್ಲದರ ಪರಿಣಾಮ ಕರಾವಳಿ ಪ್ರದೇಶದಲ್ಲಿಯೂ ಕಾಣಿಸಿಕೊಳ್ಳಲು ಆರಂಭಿಸಿದೆ. ಅರಬ್ಬಿ ಸಮುದ್ರ ನೀರು ಅಘನಾಶಿನಿ ನದಿಯ ಒಳಗೆ ನುಗ್ಗಲು ಆರಂಭಿಸಿದೆ. ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಹಲವು ಕಿಲೋಮೀಟರ್ ಒಳಭಾಗದ ವರೆಗೆ ಉಪ್ಪುನೀರು ನುಗ್ಗಿದೆ.
ದೇವರ ಅಭಿಷೇಕಕ್ಕೂ ನೀರಿಲ್ಲ :
 ಅಘನಾಶಿನಿ ನದಿ ತೀರದಲ್ಲಿದ್ದ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕಕೂ ನೀರಿಲ್ಲ. ದೇವರ ಪೂಜೆಗಾಗಿ ಕಿಲೋಮೀಟರ್ ದೂರದಿಂದ ನೀರು ಹೊತ್ತು ತರಬೇಕಾದಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಗುಡ್ಡೇತೋಟದ ಕೋಟೆ ವಿನಾಯಕ, ಬಾಳೂರಿನ ದೇವಾಲಯಗಳಲ್ಲಿ ದೇವರ ಅಭಿಷೇಕಕ್ಕೆ ದೂರದ ಸ್ಥಳಗಳಿಂದ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ. ಅಘನಾಶಿನಿ ನದಿಯಲ್ಲಿಯೇ ಆಳದ ಹೊಂಡಗಳಲ್ಲಿ ನಿಂತುಕೊಂಡಿರುವ ನೀರನ್ನು ತಂದು ದೇವಾಲಯ, ಮನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಮಲೆನಾಡಿನ ಹಳ್ಳಿಗಳಲ್ಲಿಯೂ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.
 ಕೇವಲ ಅಘನಾಶಿನಿ ಮಾತ್ರವಲ್ಲ ಮಲೆನಾಡಿನಲ್ಲಿ ಹಲವಾರು ನದಿಗಳು ಬತ್ತಲು ಆರಂಭವಾಗಿದೆ. ಯಲ್ಲಾಪುರಕ್ಕೆ ನೀರಿನ ಮೂಲವಾಗಿದ್ದ ಬೇಡ್ತಿ ನದಿ ಈಗಾಗಲೇ ಬತ್ತಿ ಹೋಗಿದೆ. ಶಾಲ್ಮಲಾ ನದಿ ಕೂಡ ಬತ್ತಲು ಆರಂಭವಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಹಳ್ಳಗಳು, ಜಲಮೂಲಗಳೆಲ್ಲ ಸಂಪೂರ್ಣವಾಗಿ ಬತ್ತಿಹೋಗಿದೆ. ಬರದ ಬೇಗೆ ಮಲೆನಾಡಿಗರನ್ನು ಹೈರಾಣಾಗಿಸಿದೆ. ಯಾವಾಗ ಮಳೆ ಬರುತ್ತದೆಯೋ ಎಂದು ಜನಸಾಮಾನ್ಯರು ಆಗಸದತ್ತ ಮುಖ ಮಾಡುತ್ತಿದ್ದಾರೆ.

--------

 ಅಘನಾಶಿನಿ ನದ ಈ ಹಿಂದೆ ಯಾವಾಗಲೂ ಬತ್ತಿರಲಿಲ್ಲ. ನನಗೆ ತಿಳಿದಂತೆ ಅಘನಾಶಿನಿ ನದಿ ಯಾವಾಗಲೂ ನೀರಿನ ಹರವನ್ನು ನಿಲ್ಲಿಸಿರಲಿಲ್ಲ. 1870ರ ದಶಕದಲ್ಲಿ ಭಾರಿ ಬರಗಾಲ ಬಂದ ಸಂದರ್ಭದಲ್ಲಿ ಉಳಿದ ಕಡೆಗಳಲ್ಲಿ ನೀರಿನ ಬವಣೆ ಆಗಿತ್ತಂತೆ. ಆದರೆ ಅಘನಾಶಿನಿ ನದಿ ಅಂತಹ ಸಂದರ್ಭದಲ್ಲಿಯೂ ಕೂಡ ಬತ್ತಿರಲಿಲ್ಲ. ಈ ಸಾರಿ ಸಂಪೂರ್ಣವಾಗಿ ಬತ್ತಿಹೋಗಿದೆ. ಗುಡ್ಡೇತೋಟದ ಕೋಟೆ ವಿನಾಯಕ ದೇವರಿಗೆ ಅಭಿಷೇಕ ಮಾಡಲು ಕಿಲೋಮೀಟರ್ ದೂರದಿಂದ ನೀರನ್ನು ಹೊತ್ತು ತರುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.ದತ್ತಾತ್ರೆಯ ಭಟ್
ಅರ್ಚಕರು

------------

 ಬರದ ಕಾರಣ ಅಘನಾಶಿನಿ ನದಿ ಶತಮಾನಗಳ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಹರಿವನ್ನು ನಿಲ್ಲಿಸಿದೆ. ಈ ಅಘನಾಶಿನಿ ನದಿಯ ಹಲವು ಕಡೆಗಳಲ್ಲಿ ಬೀಡು ಬಿಟ್ಟು, ಆವಾಸಸ್ಥಾನ ಮಾಡಿಕೊಂಡಿದ್ದ ಅಪರೂಪದ ನೀರು ನಾಯಿಗಳು ಬಿಸಿಯಾಗಿರುವ ನೀರು ಹಾಗೂ ಆಹಾರದ ಅಭಾವದಿಂದಾಗಿ ಸಾವಿನ ಅಂಚನಲ್ಲಿವೆ.
 ಉತ್ತರ ಕನ್ನಡ ಜಿಲ್ಲೆಯಲ್ಲಿ 98 ಕಿಲೋಮೀಟರ್ ದೂರದ ವರೆಗೆ ಹರಿದು ಸಮುದ್ರ ಸೇರುವ ಅಘನಾಶಿನಿ ನದಿಯಲ್ಲಿ ಅಪರೂಪದ ಜೀವಿಯಾಗಿರುವ ನೀರುನಾಯಿಗಳು ವಾಸಸ್ಥಾನ ಮಾಡಿಕೊಂಡಿವೆ. ಕುಮಟಾ ತಾಲೂಕಿನ ಉಪ್ಪಿನಪಟ್ಟಣದಿಂದ ಉಂಚಳ್ಳಿ ಜಲಪಾತದ ವರೆಗಿನ ಪ್ರದೇಶದಲ್ಲಿ, ಘಟ್ಟದ ಮೇಲಿನ ಸಿದ್ದಾಪುರ ತಾಲೂಕಿನ ಮಾನಿಹೊಳೆಯ ಸುತ್ತಮುತ್ತ, ಶಿರಸಿ-ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ ಬಾಳಗಾರ, ನಾಡಗುಳಿ ಮುಂತಾದ ಪ್ರದೇಶದಲ್ಲಿ ಅಘನಾಶಿನಿ ನದಿಯಲ್ಲಿ ನೀರುನಾಯಿಗಳು ವಾಸಿಸುತ್ತವೆ. ಅಘನಾಶಿನಿ ನದಿಯ ಆಳದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಇವು ಗುಂಪು ಗುಂಪಾಗಿ ವಾಸ ಮಾಡುತ್ತಿವೆ. ಆದರೆ ಅಘನಾಶಿನಿ ನದಿ ಬರದ ಬೇಗೆಯಿಂದಾಗಿ ಹರಿವು ನಿಲ್ಲಿಸಿರುವ ಕಾರಣ ಅಪರೂಪದ ನೀರುನಾಯಿಗಳು ಸಾವಿನ ಅಂಚಿನಲ್ಲಿವೆ.
 ಇಂಗ್ಲೀಷಿನಲ್ಲಿ ಲೂತ್ರಾ ಲೂತ್ರಾ ಎನ್ನುವ ಹೆಸರಿನಿಂದ ಕರೆಯಲ್ಪಡುವ ನೀರುನಾಯಿಗಳು ಭಾರತದಲ್ಲಿ ಕಾಶ್ಮೀರ, ಅಸ್ಸಾಂಗಳಲ್ಲಿ ಹೇರಳವಾಗಿ ಕಾಣಸಿಗುತ್ತದೆ. ದಕ್ಷಿಣ ಭಾರತದ ಹಲವು ಕಡೆಗಳಲ್ಲಿಯೂ ನೀರುನಾಯಿಗಳನ್ನು ಕಾಣಬಹುದಾಗಿದೆ. ಆದರೆ ಕನರ್ಾಟಕದಲ್ಲಿ ಈ ನೀರು ನಾಯಿಯ ಆವಾಸ ಸ್ಥಾನ ಬಹಳ ಸೀಮಿತವಾಗಿದೆ. ಶುದ್ಧ ನೀರು ಇರುವ ಆಳವಾದ ನದಿಗಳಲ್ಲಿ ಇವು ಜೀವಿಸುತ್ತವೆ. ಉತ್ತರ ಕನ್ನ ಜಿಲ್ಲೆಯಲ್ಲಿ ಅಘನಾಶಿನಿ ನದಿ ಕಣಿವೆಯಲ್ಲಿ ಮಾತ್ರ ಈ ನೀರು ನಾಯಿಗಳು ಕಾಣಸಿಗುತ್ತವೆ. ಶತಮಾನಗಳ ಹಿಂದೆ ಶರಾವತಿ ಹಾಗೂ ಕಾಳಿ ನದಿಗಳಲ್ಲಿಯೂ ನೀರುನಾಯಿಗಳು ಇದ್ದವಂತೆ. ಆದರೆ ನಂತರದ ದಿನಗಳಲ್ಲಿ ಶರಾವತಿ, ಕಾಳಿ ನದಿಗಳಲ್ಲಿ ನೀರುನಾಯಿಗಳು ನಶಿಸಿಹೋದವು. ಆದರೆ ಅಘನಾಶಿನಿ ನದಿಯಲ್ಲಿ ಮಾತ್ರ ಸಂತಾನವೃದ್ಧಿ ಮಾಡಿಕೊಂಡು ಬದುಕಿದ್ದವು. ಆಳದ ನೀರಿನಲ್ಲಿ ಇರುವ ಮೀನುಗಳು, ಏಡಿಗಳು, ಕಪ್ಪೆಗಳು, ಕೊಕ್ಕರೆ, ನೀರುಕೋಳಿ, ಬಾತುಕೋಳಿಗಳು ನೀರುನಾಯಿಗಳ ಪ್ರಮುಖ ಆಹಾರ. ನದಿ ಸಮೀಪದ ಬಂಡೆಗಳ ಪೊಟರೆಗಳಲ್ಲಿ ಇವು ವಾಸ ಮಾಡುತ್ತವೆ. ನೋಡಲು ಬಹು ಸುಂದರವಾಗಿರುವ, ಮುದ್ದುಮುದ್ದಾಗಿರುವ ನೀರುನಾಯಿಗಳು ಒಮ್ಮೆಗೆ ಗರಿಷ್ಟ 4 ಮರಿಗಳನ್ನು ಹೆರುತ್ತವೆ. 60 ದಿನಗಳ ಅವಧಿಯಲ್ಲಿ ಗರ್ಭಧರಿಸಿ ಮರಿ ಹಾಕುತ್ತವೆ.
 ಅಘನಾಶಿನಿ ನದಿಯಲ್ಲಿ ವಾಸ ಮಾಡುತ್ತಿದ್ದ ನೀರುನಾಯಿಗಳಿಗೆ ಈವರೆಗೂ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಈ ಸಾರಿ ಬರದ ಬೇಗೆಯಿಂದಾಗಿ ಅಘನಾಶಿನಿ ನದಿ ಹರಿವು ನಿಲ್ಲಿಸಿ ಸಂಪೂರ್ಣ ಬತ್ತಿದೆ. ಆಳದ ಗುಂಡಿಗಳಲ್ಲಿ ಅಲ್ಲಲ್ಲಿ ನೀರು ನಿಂತಿರುವಲ್ಲಿ ನೀರು ನಾಯಿ ಬದುಕಿದೆಯಾದರೂ ಬದಲಾದ ಪ್ರಾಕೃತಿಕ ಕಾರಣಗಳಿಂದಾಗಿ ಸಾವಿನ ಅಂಚಿನಲ್ಲಿವೆ. ಅಲ್ಲಲ್ಲಿ ನಿಂತಿರುವ ನೀರು ಬಿಸಿಲಿನ ಬೇಗೆಗೆ ಬಿಸಿಯಾಗಿದೆ. ನೀರಿನಲ್ಲಿದ್ದ ಮೀನುಗಳು ಈಗಾಗಲೇ ಸತ್ತು ತೇಲುತ್ತಿವೆ. ತಂಪು ನೀರಿನ ವಾತಾವರಣಕ್ಕೆ ಹೊಂದಿಕೊಂಡಿದ್ದ ನೀರುನಾಯಿಗಳು ಏಕಾಏಕಿ ಬಿಸಿಯಾಗಿರುವ ನೀರಿನಿಂದಾಗಿ ಚಡಪಡಿಸುತ್ತಿವೆ. ಸೂಕ್ಷ್ಮವಾಗಿರುವ ನೀರುನಾಯಿಗಳ ಚರ್ಮ ಇದಕ್ಕೆ ಹೊಂದಿಕೊಳ್ಳುತ್ತಿಲ್ಲ. ಇದಲ್ಲದೇ ಪ್ರಮುಖ ಆಹಾರವಾಗಿರುವ ಕಪ್ಪೆ, ಮೀನು, ಏಡಿಗಳೆಲ್ಲ ಬಿಸಿಲಿನ ಬೇಗೆಗೆ ಸತ್ತಿವೆ. ನೀರುಕೋಳಿ, ಬಾತುಕೋಳಿಗಳು ನೀರಿನ ಮೂಲವನ್ನು ಅರಸಿ ಬೇರೆ ಕಡೆಗೆ ವಲಸೆ ಹೋಗಿವೆ. ಇದರಿಂದಾಗಿ ಆಹಾರ ಕೂಡ ಸಿಗದಂತೆ ಆಗಿರುವ ನೀರುನಾಯಿಗಳು ಸಾವಿನ ಅಂಚನ್ನು ತಲುಪುತ್ತಿವೆ.
 ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಮೂನರ್ಾಲ್ಕು ದಿನಗಳ ಕಾಲ ಅಲ್ಪ ಮಳೆಯಾಗಿದೆ. ಮಳೆಯ ಕಾರಣದಿಂದ ವಾತಾವರಣ ತಂಪಾಗಿದ್ದರೂ ಕೂಡ ನದಿಗಳಲ್ಲಿ ನೀರು ಹರಿದಿಲ್ಲ. ಅಘನಾಶಿನಿ ನದಿಯ ಪಾತ್ರದಲ್ಲಿ ಮಳೆ ಸುರಿದಿದ್ದರೂ ಇದರಿಂದಾಗಿ ಬತ್ತಿದ ನದಿಗೆ ಜೀವ ಬಂದಿಲ್ಲ. ಪರಿಣಾಮವಾಗಿ ಸಾವಿನ ಅಂಚು ತಲುಪಿರುವ ನೀರುನಾಯಿಗಳ ಬದುಕು ಇನ್ನೂ ದುರಂತದತ್ತಲೇ ಸಾಗುತ್ತಿದೆ. ಜೂನ್ ತಿಂಗಳಿನಲ್ಲಿ ಮಳೆ ಬರುತ್ತದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಈಗಾಗಲೇ ಸಾವಿನ ಅಂಚಿನಲ್ಲಿರುವ ನೀರುನಾಯಿಗಳು ಇನ್ನೂ 15 ದಿನಗಳ ಕಾಲ ಸ್ವಲ್ಪ ನೀರಿನಲ್ಲಿ, ಆಹಾರವಿಲ್ಲದೇ ಬದುಕುವುದು ಅಸಾಧ್ಯ ಎನ್ನುವಂತಾಗಿದೆ.
 ಅಘನಾಶಿನಿ ನದಿ ಹರಿವು ನಿಲ್ಲಿಸಿದ ಪರಿಣಾಮ ಈಗಾಗಲೇ ಮೀನು, ಕಪ್ಪೆ, ಏಡಿ ಮುಂತಾದ ಜಲಚರಗಳ ಮೇಲೆ ಉಂಟಾಗಿದ್ದು ಅದರ ನಂತರದ ಹಂತ ಎಂಬಂತೆ ನೀರುನಾಯಿಗಳು ಬಲಿಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ನದಿಯ ಅಕ್ಕಪಕ್ಕದಲ್ಲಿರುವ ಅಪ್ಪೆಮರಗಳು, ಮಿಡಿಮಾವಿನ ಮರಗಳಮೇಲೂ ಉಂಟಾಗಲಿದೆ. ಈ ನದಿ ಪಾತ್ರದಲ್ಲಿ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿ, ನದಿಯನ್ನು ಪುನಶ್ಚೇತನಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಈ ಎಲ್ಲ ಜೀವ ಸಂಕುಲ ನಾಮಾವಶೇಷವಾಗುವುದರಲ್ಲಿ ಸಂದೇಹವೇ ಇಲ್ಲ

---------

 ನೀರುನಾಯಿಗಳು ಅಪರೂಪದ ಪ್ರಾಣಿಗಳು. ಅಳಿವಿನ ಅಂಚಿನಲ್ಲಿವೆ. ಇವನ್ನು ದೊಡ್ಡ ಪ್ರಮಾಣದಲ್ಲಿ ಚರ್ಮಕ್ಕಾಗಿ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು. ಇದೀಗ ನದಿ ಬತ್ತಿ ಹೋಗಿರುವಂತಹ ಅಪರೂಪದ ಕಾರಣದಿಂದಾಗಿ ಸಾಯುತ್ತಿದೆ. ಯಾವುದೇ ನದಿಯಲ್ಲಿ ಕನಿಷ್ಟ ಪಾರಿಸಾರಿಕ ಹರಿವು ಇರುವುದು ಅನಿವಾರ್ಯ. ಕನಿಷ್ಟ ಪಾರಿಸಾರಿಕ ಹರಿವು ಇದ್ದಾಗ ಮಾತ್ರ ನದಿ ನೀರನ್ನು ಅವಲಂಬಿಸಿರುವ ಜೀವಿ, ವೃಕ್ಷ, ಪಕ್ಷಿ ಸಂಕುಲಗಳು ಜೀವಂತ ಇರುತ್ತವೆ. ಅದು ನಿಂತರೆ ಏನು ದುಷ್ಪರಿಣಾಮ ಉಂಟಾಗಲಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ನದಿ ಹರಿವು ನಿಂತಾಗಲೇ ಈ ರೀತಿ ದುರಂತ ಸಂಭವಿಸುತ್ತಿದೆ. ಇನ್ನು ನದಿ ತಿರುವು ಮಾಡಿದರೆ ಎಂತಹ ದುಷ್ಪರಿಣಾಮ ಆಗಬಹುದು ಎನ್ನುವುದು ಊಹೆಗೂ ನಿಲುಕುವುದಿಲ್ಲ.ಬಾಲಚಂದ್ರ ಸಾಯಿಮನೆ
ಪರಿಸರ ವಿಜ್ಞಾನಿ


(VISHWAVANI ARTICLE)

Friday, May 20, 2016

ಹಿಂದೂ ರಥೋತ್ಸವಕ್ಕೆ ರಥ ಕಟ್ಟುವವರು ಮುಸ್ಲೀಮರು

ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಭಾವೈಕ್ಯತೆ

 ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಅನೇಕ ನಿದರ್ಶನಗಳು ಸಿಗುತ್ತಲೇ ಇರುತ್ತವೆ. ಅನೇಕ ಕಡೆಗಳಲ್ಲಿ ಹಬ್ಬದ ಸಂದರ್ಭಗಳಲ್ಲಿ ಹಿಂದೂ-ಮುಸ್ಲೀಮರು ಹಲವಾರು ಸಂದರ್ಭಗಳಲ್ಲಿ ಒಟ್ಟಾಗಿ ಪಾಲ್ಗೊಳ್ಳುತ್ತಾರೆ. ಇಂತಹದ್ದೊಂದು ಭಾವೈಕ್ಯತೆಗೆ ಸೋಂದಾ ಸ್ವರ್ಣವಲ್ಲಿ ಮಠದ ರಥೋತ್ಸವ ಕೂಡ ಸಾಕ್ಷಿಯಾಗುತ್ತ ಬಂದಿದೆ.
 ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಪ್ರತಿವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಚತುದಶರ್ಿಯ ದಿನದಂದು ಲಕ್ಷ್ಮೀನೃಸಿಂಹ ದೇವರ ರಥೋತ್ಸವ ನಡೆಯುತ್ತದೆ. ಈ ರಥೋತ್ಸವದಲ್ಲಿ ಎಳೆಯಲ್ಪಡುವ ರಥವನ್ನು ಮುಸ್ಲೀಮರೇ ಕಟ್ಟುತ್ತಾರೆ. ಹಿಂದೂಗಳ ಮಠವಾದ ಸ್ವರ್ಣವಲ್ಲಿ ಮುಸ್ಲೀಮರು ರಥ ನಿಮರ್ಾಣ ಮಾಡುತ್ತಾರೆ. ಶತ ಶತಮಾನಗಳಿಂದಲೂ ಈ ಆಚರಣೆ ನಡೆಯುತ್ತಲೇ ಬಂದಿರುವುದು ಸ್ವರ್ಣವಲ್ಲಿ ಮಠದ ಹಾಗೂ ಲಕ್ಷ್ಮೀನೃಸಿಂಹ ದೇವರ ರಥೋತ್ಸವದ ವೈಶಿಷ್ಟ್ಯವಾಗಿದೆ.
 ಪ್ರಾಚೀನ ಕಾಲದಿಂದಲೂ ಸ್ವರ್ಣವಲ್ಲಿಯಲ್ಲಿ ಸೋದೆ ಪೇಟೆಯ ಖಾಜಿ ಕುಟುಂಬವು ರಥವನ್ನು ಕಟ್ಟುವ ಕೆಲಸವನ್ನು ಶೃದ್ಧೆಯಿಂದ ಮಾಡಿಕೊಂಡು ಬರುತ್ತಿದೆ. ರಥ ಕಟ್ಟುವ ಕೆಲಸ ಮಾತ್ರವಲ್ಲದೇ ಹಬ್ಬ ಹರಿದಿನಗಳ ನಗಾರಿ ಬಾರಿಸುವ ಕೆಲಸವನ್ನೂ ಈ ಕುಟುಂಬಕ್ಕೆ ಸೇರಿದ ಮುಸ್ಲೀಮರು ಮಾಡಿಕೊಂಡು ಬರುತ್ತಿದ್ದಾರೆ. ಈ ಕುರಿತಂತೆ ಸ್ವರ್ಣವಲ್ಲಿ ಮಠದಲ್ಲಿ ವಿಚಾರಿಸಿದಾಗ ಸ್ವರ್ಣವಲ್ಲಿ ಮಠದ ಸುತ್ತಮುತ್ತಲ ಎಲ್ಲಾ ಮಠಗಳಲ್ಲಿಯೂ ಮುಸ್ಲೀಮರೇ ರಥವನ್ನು ಕಟ್ಟುತ್ತಿದ್ದರು. ಆದರೆ ಈಗ ಸ್ವರ್ಣವಲ್ಲಿ ಮಠದಲ್ಲಿ ಮಠದಲ್ಲಿ ಮಾತ್ರ ಮುಸ್ಲೀಮರು ರಥ ಕಟ್ಟುವ ಕಾರ್ಯ ನಡೆಯುತ್ತಿದೆ.
 ಹೊನ್ನಳ್ಳಿ ಎಂದು ಜನರ ಆಡುಮಾತಿನಲ್ಲಿ ಕರೆಸಿಕೊಳ್ಳುವ ಸ್ವರ್ಣವಲ್ಲಿ ಮಠದಲ್ಲಿ ನಡೆಯುವ ರಥೋತ್ಸವವು ವರ್ಷದ ಕೊಟ್ಟಕೊನೆಯ ರಥೋತ್ಸವ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದೆ. ರಥೋತ್ಸವಕ್ಕೂ 15 ದಿನ ಮೊದಲು ಅಂದರೆ ಅಕ್ಷಯ ತೃತೀಯಾದ ದಿನ ರಥವನ್ನು ತೆಗೆದು ಅದಕ್ಕೆ ಸೋದೆ ಪೇಟೆಯ ಅಬ್ದುಲ್ ಕರೀಬ್ ಖಾಸಾಬ್ (ಬಾಬು) ತಂಡವು ರಥವನ್ನು ವ್ಯವಸ್ಥಿತವಾಗಿ ಕಟ್ಟಲು ಆರಂಭಿಸುತ್ತದೆ. ಹಿಂದೆ ರಥವನ್ನು ಕಟ್ಟಲು ಅಬ್ದುಲ್ ಕರೀಂ ಖಾ ಸಾಬ್, ಅಬ್ದುಲ್ ರಜಾಕ್ ಅಬ್ದುಲ್ ರಸೀದ್, ಖಾಸೀಮ್ ಉಸ್ಮಾನ್ ಖಾನ್ ಹಾಗೂ ಇಬ್ರಾಹೀಮ್ ಉಸ್ಮಾನ್ ಖಾನ್ ಈ ನಾಲ್ಕು ಕುಟುಂಬಕ್ಕೆ ಸೇರಿದ ಸದಸ್ಯರುಗಳು ರಥ ಕಟ್ಟಲು ಶೃದ್ಧೆಯಿಂದ ಶ್ರಮಿಸುತ್ತಿದ್ದರು. ಇದಲ್ಲದೇ ಮಠದ ಇನ್ನಿತರ ಧಾಮರ್ಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈ ಕುಟುಂಬದಲ್ಲಿ ಅದೆಷ್ಟೋ ಜನರು ಉದ್ಯೋಗದ ನಿಮಿತ್ತ ಬೇರೆಡೆಗೆ ತೆರಳಿದ್ದಾರೆ. ಈಗ ಅಬ್ದುಲ್ ಕರೀಮ್ ಖಾ ಸಾಬ್ ಕುಟುಂಬ ಮಾತ್ರ ರಥ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದೆ.

 ರಥ ನಿಮರ್ಾಣಕ್ಕಾಗಿ ಪ್ರತಿ ವರ್ಷವೂ ಹೊನ್ನಾವರ ತಾಲೂಕಿನ ಹಳ್ಳಲಿಯೊಂದರಿಂ ಅಜಮಾಸು 8000 ರು. ಮೌಲ್ಯದ ವಿಶಿಷ್ಟವಾದ ಕತ್ತವನ್ನು ತರಲಾಗುತ್ತದೆ. ಹೊಸ ಕತ್ತವನ್ನು ರಥದ ಆರಂಭಿಕ ಕೆಲಸಕ್ಕೆ ಬಳಕೆ ಮಾಡಿದರೆ ಹಳೆಯದಾಗಿರುವ ಕತ್ತವನ್ನು ಮರುವರ್ಷ ಎರಡನೆಯ ಹಂತದ ರಥ ಕಟ್ಟಲು ಬಳಕೆ ಮಾಡಲಾಗುತ್ತದೆ. ಒಮ್ಮೆ ಕತ್ತವನ್ನು ತೆಗೆದುಕೊಂಡು ಬಂದರೆ ಅದನ್ನು ಐದು ವರ್ಷಗಳ ಕಾಲ ಬಳಕೆ ಮಾಡಲಾಗುತ್ತದೆ. 15 ದಿನಗಳ ಅಂತರದಲ್ಲಿ ಖಾಜಿ ಕುಟುಂಬವು ರಥದ ಸಂಪೂರ್ಣ ನಿಮರ್ಾಣದ ಕಾರ್ಯಗಳನ್ನು ನಡೆಸುತ್ತದೆ. ರಥದ ಪತಾಕೆ ಕಟ್ಟುವವರೆಗೂ ನಿರಂತರವಾಗಿ ಈ ತಂಡದ ಕೆಲಸಗಳು ನಡೆಯುತ್ತವೆ. ಇದಲ್ಲದೇ ರಥೋತ್ಸವದ ದಿನ ರಥ ಸಾಗುವ ದಾರಿಯುದ್ದಕ್ಕೂ ರಥದ ನಿಯಂತ್ರಣಕ್ಕಾಗಿ ಸನ್ನೆಯನ್ನು ಹಾಕುವುದು, ರಥೋತ್ಸವದ ನಂತರದಲ್ಲಿ ರಥಕ್ಕೆ ಕಟ್ಟಲಾದ ಪರಿಕರಗಳನ್ನು ಬಿಚ್ಚುವುದು, ಅವುಗಳನ್ನು ಸ್ವಸ್ಥಾನದಲ್ಲಿ ಇಡುವುದು ಸೇರಿದಂತೆ ಅಗತ್ಯವಿರುವ ಎಲ್ಲಾ ಜವಾಬ್ದಾರಿಗಳನ್ನೂ ಕೈಗೊಳ್ಳುತ್ತದೆ. ರಥವನ್ನು ಕಟ್ಟಿಕೊಮಡು ಬರುತ್ತಿರುವ ಖಾಜಿ ಕುಟುಂಬಕ್ಕೆ ಪ್ರತಿ ವರ್ಷ ರಥ ನಿಮರ್ಾಣ ಮಾಡಿದ್ದಕ್ಕೆ ಪ್ರತಿಯಾಗಿ ದವಸ-ಧಾನ್ಯಗಳನ್ನು ಗೌರವಧನವಾಗಿ ನೀಡಲಾಗುತ್ತದೆ.
 ಹವ್ಯಕರ ಮಠವಾಗಿರುವ ಸ್ವರ್ಣವಲ್ಲಿಯ ರಥೋತ್ಸವದ ರಥವನ್ನು ಮುಸ್ಲೀಮರೇ ಕಟ್ಟುವ ಮೂಲಕ ಭಾವೈಕ್ಯತೆ, ಧರ್ಮ ಸಾಮರಸ್ಯವನ್ನು ಜಗತ್ತಿಗೆ ಸಾರಲಾಗುತ್ತಿದೆ. ಹಿಂದೂ-ಮುಸ್ಲಿಮರ ಅಪರೂಪದ ಭಾವೈಕ್ಯ ಕಾರ್ಯಕ್ಕೆ ಇದೊಂದು ನಿದರ್ಶನವಾಗಿದೆ.

Friday, May 6, 2016

ಸಂಪ್ರದಾಯದ ಹಾಡುಗಳಲ್ಲಿ ಶಿರಸಿ ಮಾರಿಕಾಂಬೆ ಹಾಗೂ ಜಾತ್ರೆಯ ವರ್ಣನೆ

(PHOTO CLICK : VINAY DANTKAL)
ಶಿರಸಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಜನರ ಬಾಯಲ್ಲಿ ಸಂಪ್ರದಾಯದ ಹಾಡುಗಳು ಸದಾ ಕೇಳಿ ಬರುತ್ತವೆ. ಹಾಲಕ್ಕಿಗಳ ಸಂಪ್ರದಾಯದ ಹಾಡಿನಲ್ಲಿ, ಲಂಬಾಣಿಗಳ ಜನಪದ ಗೀತೆಗಳಲ್ಲಿ, ಹವ್ಯಕರ ಹಳ್ಳಿ ಹಾಡಿನಲ್ಲಿ ಶಿರಸಿ ಮಾರಿಕಾಂಬೆ ಹಾಗೂ ಜಾತ್ರೆಯ ವರ್ಣನೆಗಳು ಸಾಕಷ್ಟು ಸಾರಿ ಕಾಣಸಿಗುತ್ತವೆ. ಶಿರಸಿಯ ಸಿರಿಯಾದ ಮಾರಿಕಾಂಬಾ ದೇವಿಯ ಕುರಿತಾದ ಕಥೆಗಳೂ ಕೂಡ ಲಾವಣಿಯ ರೂಪದಲ್ಲಿ, ಜಾನಪದದ ಹಾಡುಗಳಲ್ಲಿ ಕೇಳಸಿಗುತ್ತವೆ. ಇವು ವಿಶಿಷ್ಟವೂ, ಲಯಬದ್ಧವೂ ಆಗಿದೆ.
 ಶಿರಸಿಯಲ್ಲಿ ಅಧಿದೇವತೆ ಮಾರಿಕಾಂಬೆ ನೆಲೆ ನಿಂತ ಬಗ್ಗೆ ಕೂಡ ಅನೇಕ ಕಥೆಗಳಿವೆ. ಹಾಡುಗಳ ರೂಪದಲ್ಲಿಯೂ ಕೂಡ ಈ ಕತೆ ತಲೆಮಾರಿನಿಮದ ತಲೆಮಾರಿಗೆ ಹರಿದು ಬಂದಿರುವುದು ವಿಶೇಷ. ಉತ್ತರ ಕನ್ನಡದ ವಿಶೇಷ ಜಾನಪದ ಕಲೆಯಾದ ಡೊಳ್ಳು ಕುಣಿತ, ಬೇಡರ ವೇಷ ಈ ಮುಂತಾದ ಸಂದರ್ಭದಲ್ಲಿಯೂ ಕೂಡ ಮಾರಿಕಾಂಬೆಯ ಬಗೆಗಿರುವ ಸಾಂಪ್ರದಾಯದ ಹಾಡುಗಳು ಕೇಳಿ ಬರುತ್ತವೆ. ಜಾನಪದ ನೃತ್ಯವನ್ನು ಮಾಡುವಾಗ ತಾಯಿ ಮಾರಿಕಾಂಬೆಯನ್ನು ಭಜಿಸುವುದೂ ಕೂಡ ವಾಡಿಕೆಯಾಗಿದೆ.

 ಕುಣಿತೀನ ಅಂತ ಕಾಲಗೆಜ್ಜೆ ಕಟ್ಟಿಕೊಂಡೆ
 ಕುಣಿಯಾಕ ಕಾಲು ಬರುವಲ್ವೋ ಮಾರೆವ್ವ
 ಕಾಲಿಗೆ ಮತಿಯ ಕೊಡಿಸವ್ವ, ಮಾರವ್ವ...

ಎನ್ನುವ ಹಾಡೊಂದು ಡೊಳ್ಳು ಕುಣಿತದ ಸಂದರ್ಭದಲ್ಲಿ ಕೇಳಿ ಬರುತ್ತದೆ. ದೇವಿಯ ಜಾತ್ರೆಯ ಸಂದರ್ಭದಲ್ಲಿ ಡೊಳ್ಳು ಬಾರಿಸುವವರು ಹಾಗೂ ಕಥೆ ಹೇಳುವ ಕುರುಬರು ಈ ಹಾಡುಗಳನ್ನು ಹೇಳುತ್ತಾರೆ. ಹಾಡಿನ ಮೂಲವೇ ಮಾರಿಕಾಂಬೆಯನ್ನು ಪ್ರಸನ್ನಳಾಗು ಎನ್ನುವಂತೆ ಬೇಡಿಕೊಳ್ಳುತ್ತಾರೆ. ಲಯಬದ್ಧವಾಗಿ ಹಾಡಲ್ಪಡುವ ಈ ಹಾಡಿಗೆ ತಕ್ಕಂತೆ ಡೊಳ್ಳು ಕುಣಿತಗಾರರು ಹೆಜ್ಜೆ ಹಾಕುವುದೂ ಕೂಡಡ ವಿಶೇಷ. ಇದಲ್ಲದೇ ಮಾರಿಕಾಂಬಾ ದೇವಿಯನ್ನು ಇನ್ನೂ ಅನೇಕ ರೀತಿಯಿಂದ ಸ್ತುತಿಸಲಾಗುತ್ತದೆ.

 ಆದಿ ಮಾಯಾ ರೂಪದಿ | ಪ್ರಣವದಿ ಸೇರಿ |
 ಭೇದ ಭೇದಾಕಾರದಿ ||
 ಮೇದಿನಿಯೊಳವತರಿಸಿ ಭಕ್ತರ | ನಾದರಿಸಿ
 ತ್ರೈ ಮೂತರ್ಿಯವರ |
 ವೇದಶಾಸ್ತ್ರದೊಳೊಲಿದು ನೀಗತಿ|| ಆದಿ
 ಮಂಗಳೆ ಜಯತು
 ಶ್ರೀಮಹ | ದೇವಿಗಾರತಿ ಎತ್ತಿರೆ ||

ಎಂಬಂತಹ ದೇವಿಗೆ ಪೂಜೆ ಕೈಗೊಳ್ಳುವ ಹಾಡುಗಳೂ ಕೂಡ ಜನಜನಿತದಲ್ಲಿದೆ. ಮಾರಿಕಾಂಬೆ ದೇವಿ ಭೂಮಿಗೆ ಅವತರಿಸಿ ಬಂದಿರುವುದು, ದೇವಿ ಭಕ್ತರನ್ನು ಉದ್ಧರಿಸುವುದು ಹಾಗೂ ದೇವಿಯನ್ನು ಪ್ರಸನ್ನಗೊಳಿಸುವ ಬಗ್ಗೆ ಇಂತಹ ಗೀತೆಗಳಲ್ಲಿ ವರ್ಣನೆ ಮಾಡಲಾಗಿದೆ. ಅಲ್ಲದೇ ವೇದಶಾಸ್ತ್ರ ಪುರಾಣಗಳಲ್ಲಿ ದೇವಿಯ ಬಗ್ಗೆ ವರ್ಣನೆ ಮಾಡುವುದರ ಬಗ್ಗೆ ಗೀತೆ ಹೇಳುತ್ತದೆ.

 ನಾ ಬರೋ ದಾರಿಯ ದೊರು ಮೆಟ್ಟಿ ಕುಂಕುಮ
 ಚೆಲ್ಲಿ
 ರಾಗುವೇ ಬಿದ್ದಿದೆಯೊ ರಣದಲ್ಲಿ || ಶಿರಸಿಯ
 ಭೂಮಿಯ ದೇವತೆಯ ತಳದಲ್ಲಿ ||

ಈ ಹಾಡಿನಲ್ಲಿ ಶಿರಸಿಯ ಮಾರಮ್ಮನನ್ನು ಭೂಮಿದೇವಿ ಎಂದೇ ಸ್ತುತಿ ಮಾಡಲಾಗಿದೆ. ಅಲ್ಲದೇ ಮಾರಮ್ಮನನ್ನು ಸಾಕ್ಷಾತ್ ಪಾರ್ವತಿ ದೇವಿ ಎಂದೇ ವರ್ಣನೆ ಮಾಡಿರುವುದು ವಿಶೇಷ. ಜಾತ್ರೆಯ ದಾರಿಯಲ್ಲಿ ಬರುವಾಗ ಶಿರಸಿಯ ಮಾರಮ್ಮನಿಗೆ ಕರಿಮಣಿ, ಕುಂಕುಮಗಳನ್ನು ಅಪರ್ಿಸಿದ ರಾಶಿಯನ್ನು ಭಕ್ತೆಯರ ದಂಡು ಕಂಡ ತಕ್ಷಣ ಇಂತಹ ವರ್ಣನೆಯ ಹಾಡುಗಳನ್ನು ಹಾಡುತ್ತಾರೆ ಎಂಬ ನಂಬಿಕೆಯಿದೆ.

 ಸೋದಿಗ್ಹೋದೋರಿಗೇ, ಸೂಡಿದ್ಹೂಗು ಬಾಡದೇ
 ಅಂಗಾಂಗೆ ಮುಳ್ಳೂ ಮುರಿಯದೇ || ಬಂದರೇ
 ಸಿರುಸೀ ಸೇವಮ್ಮನಾ ಹರಕೀಯೇ
 ಸಿರುಸೀ ಸೇವಮ್ಮನ್ ಹರಕೀಯೇನಂದೀರೋ
 ಕೋಣನ ಮೇನೇ ಕುರಿಕೋಳೀ ||

ಹಿಂದೆ ಮಾರಿಕೋಣನನ್ನು ಕಡಿಯು ಕಾಲದಲ್ಲಿ ಕಟ್ಟಿ ರೂಢಿಯಾಗಿದ್ದ ಹಾಡು ಇದು. ಜನಸಾಮಾನ್ಯರ ಹರಕೆ ಕುರಿ ಕೋಳಿಗಳನ್ನು ಬಲಿ ಕೊಡುವುದು. ಇಲ್ಲಿ ಸೋದೆಗೆ ಹೋದವ ಗರತಿಯ ಗಂಡ ಎಂಬ ಅರ್ಥವನ್ನು ನೀಡುತ್ತದೆ. ಈ ಕಾರಣದಿಂದ ಇಲ್ಲಿ ಒಬ್ಬನನ್ನೇ ಬಹುವಚನದಿಂದ ಕರೆಯಲಾಗುತ್ತದೆ. ಶಿರಸಿಯಲ್ಲಿ ಮಾರಮ್ಮನ ಭಕ್ತ-ಭಕ್ತೆಯರಾದ ಅಸಾದಿಗಳು ಮಾರಮ್ಮನ ಹಬ್ಬದಲ್ಲಿ ದೇವಸ್ಥಾನದ ಮುಂದೆ ದೇವಿಯನ್ನು ಹಾಡಿನ ಮೂಲಕ ಹೊಗಳುತ್ತಾರೆ. ವಿಶೇಷವೆಂದರೆ ದೇವಿಯನ್ನು ಇವರು ಹಾಡಿನ ಮೂಲಕವೇ ಬಯ್ಗುಳವನ್ನೂ ಮಾಡುತ್ತಾರೆ.
 ಶಿರಸಿಯಲ್ಲಿ ಮಾರಮ್ಮ ನೆಲೆ ನಿಂತ ಬಗ್ಗೆಯೂ ಕೂಡ ಹಲವು ಹಾಡುಗಳು ಪ್ರಚಲಿತದಲ್ಲಿದೆ. ಅಸಾದಿಗಳು ಕೈಯಲ್ಲಿ ಹಲಗೆಯನ್ನು ಹಿಡಿದು ಶಿರಸಿಯ ತುಂಬ ಹಾಡು ಹೇಳುತ್ತಾ ತಿರುಗುವುದು ವಿಶೇಷ. ತನ್ನ ಗಂಡನನ್ನೇ ಕೊಂದು, ನಂತರ ಕೆಂಡದಲ್ಲಿ ಧುಮುಕಿ ಮಹಾಸತಿಯಾಗಿ ದೇವತೆಯಾದ ಛಲಗಾತಿ ಶಿರಸಿಯ ಮಾರಮ್ಮ. ಇಂತಹ ಮಾರಮ್ಮನನ್ನು ಮಹಿಷಾಸುರ ಮಧರ್ಿನಿಯಾದ ಪಾರ್ವತಿಗೂ ಹೋಲಿಕೆ ಮಾಡಲಾಗುತ್ತದೆ. ಮಾರಮ್ಮನನ್ನು ಇಲ್ಲಿ ಸಿರುಸಿಯ ಸೇವಮ್ಮ ಎಂದು ಕರೆಯುವುದೂ ಕೂಡ ವಿಶೇಷ.

 ಬಂಡಿಗಾಲಿಯ ಮೇನೇ ಬಂದಳಾ ದುರುಗಮ್ಮಾ
 ಗೆಂಡದಾ ಕಿಡಿಯೇ ಉದುರತ್ತೆ || ದುರುಗಮ್ಮಾ
 ಬಂದಳೀ ರಾಜಿ ಬೆಳಗುತ್ತೆ ||

ಎಂಬ ಹಾಡಿನಲ್ಲಿ ಬಂಡಿ ಹಬ್ಬ ಮಾಡುವ ಕಾಲದಲ್ಲಿ ಅಮ್ಮನವರ ಮೂತರ್ಿಯನ್ನು ನಾಲ್ಕು ಗಾಲಿಗಳುಳ್ಳ ಸಣ್ಣ ಬಂಡಿಯ ಮೇಲೆ ಮೆರವಣಿಗೆ ಮಾಡುತ್ತಿದ್ದ ದೃಶ್ಯವನ್ನು ನೆನಪಿಸುತ್ತದೆ. ಇಲ್ಲಿ ಗೆಂಡದಾ ಎಂದರೆ ಕೆಂಡದ ಕಿಡಿಯೇ ಎನ್ನುವ ಅರ್ಥವಿದೆ. ಅಂದರೆ ದೇವಿಯ ಮುಂಭಾಗದಲ್ಲಿ ಕೆಂಡ ಹಾಯುವ ಸಂಪ್ರದಾಯವನ್ನು ಹಾಡಿನಲ್ಲಿ ಬಿಂಬಿಸುತ್ತದೆ. ಅಲ್ಲದೇ ಅಪರೂಪದ ಸಂಪ್ರದಾಯಗಳನ್ನೂ ಕೂಡ ಇಂತಹ ಹಾಡುಗಳು ವಿವರಿಸುತ್ತ ಹೋಗುವುದು ವಿಶೇಷ.
 ಜಾನಪದ ಹಾಡುಗಳು ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಭಕ್ತಾದಿಗಳು ಕೈಗೊಳ್ಳಲೇ ಬೇಕಾದ ಹಲವಾರು ವಿಶೇಷ ಕಾರ್ಯಗಳ ಬಗ್ಗೆಯೂ ತಿಳಿಸುತ್ತದೆ. ದೇವಿಯ ಜಾತ್ರೆಗೆ ಬಂದವರು ಕಳ್ಳತನ-ಸುಲಿಗೆ ಇತ್ಯಾದಿಗಳನ್ನು ಮಾಡಬಾರದು ಎಂದೂ ಹಾಡಿನಲ್ಲಿಯೇ ಸೂಚ್ಯವಾಗಿ ಹೇಳಲಾಗುತ್ತದೆ. ಅಲ್ಲದೇ ಕಳ್ಳತನ-ದರೋಡೆ ಮಾಡಿದರೆ ಯಾವ ರೀತಿ ದೇವಿಯ ಕೋಪಕ್ಕೆ ಒಳಗಾಗಬಹುದು ಎನ್ನುವುದನ್ನೂ ಎಚ್ಚರಿಕೆಯ ರೀತಿಯಲ್ಲಿ ಹಾಡುವುದು ವಿಶೇಷ.

 ಹಾಳ ಮಾಡಬನ್ನೀ ಹನ್ನೆರಡ ರಾಜ್ಯವಾ
 ದೂಳ ಮಾಡ ಬನ್ನಿ ಸಿರಸೀಯ || ಸೇವಮ್ಮನ
 ಬಂಡಾರ ಸಿಕ್ಕಿದರೂ ಬಿಡಬೇಡೀ
 ಆದರೆ ಅವಳ ವಾಲೆ ಸಿಕಿದರೂ ತರಬೇಡಿ ||

ಎನ್ನುವ ಮಾತಿನಲ್ಲಿಯೇ ಎಷ್ಟೆಲ್ಲ ಅರ್ಥಗಳಿವೆ ಎನ್ನುವುದುದನ್ನು ಗಮನಿಸಬೇಕು. ಇಲ್ಲಿ ಬಂಡಾರ ಸಿಕ್ಕರೂ ಕೂಡ ಅದನ್ನು ತೆಗೆದುಕೊಂಡು ಬನ್ನಿ ಎಂದು ಹೇಳಲಾಗುತ್ತದೆ. ದೇವಿಗೆ ಹೇಗೆ ಬೇಕಾದರೂ ಭಕ್ತಿಯನ್ನು ತೋರಿಸಿ ಆದರೆ ದೇವಿಯ ಚಿನ್ನ, ಒಡವೆಗಳ ಕಡೆಗೆ ಮಾತ್ರ ಕಣ್ಣು ಹಾಕಬೇಡಿ ಎನ್ನುವ ಎಚ್ಚರಿಕೆಯನ್ನೂ ಹಾಕಲಾಗುತ್ತದೆ. ಇಷ್ಟೇ ಅಲ್ಲದೇ ಶಿರಸಿಯ ಮಾರಿಕಾಂಬೆಯ ಕುರಿತು ಅನೇಕ ಕಥೆಗಳೂ ಕೂಡ ವಿವಿಧ ಬಗೆಯಲ್ಲಿ ಹಾಡಿನ ಮೂಲಕ ಹೇಳಲಾಗುವುದು ವಿಶೇಷ.
 ಹವ್ಯಕರಿರಲಿ, ಲಂಬಾಣಿಗಳಿರಲಿ, ಗೌಳಿ, ಕುಣಬಿಗಳು ಸೇರಿದಂತೆ ವಿವಿಧ ಜಾತಿಗಳಿರಲಿ ಈ ಎಲ್ಲ ಜನಾಂಗದವರೂ ಕೂಡ ಬೇರೆ ಬೇರೆ ದಾಟಿಯಲ್ಲಿ, ರಾಗದಲ್ಲಿ ಹಲವಾರು ಸಂಪ್ರದಾಯದ ಹಾಡುಗಳನ್ನು ಹಾಡುತ್ತಾರೆ. ಇವರೆಲ್ಲ ಹಾಡುವ ಕ್ರಮ ಬೇರೆ ಬೇರೆಯಾದುದು. ಅಕ್ಕಿ ಕುಟ್ಟುವಾಗ, ರಾಗಿ ಬೀಸುವಾಗ, ಮಜ್ಜಿಗೆ ಕಡೆಯುವ ಸಂದರ್ಭ ಹೀಗೆ ಹಲವಾರು ಸಂದರ್ಭದಲ್ಲಿ ಹಾಡಲಾಗುವ ಈ ಹಾಡುಗಳಲ್ಲೆಲ್ಲ ಶಿರಸಿಯ ಮಾರಿಕಾಂಬೆಯ ಬಗ್ಗೆ ವರ್ಣನೆಯೇ ತುಂಬಿದೆ. ಜಾತಿ ಜನಾಂಗದವರು ವಿಶೇಷವಾಗಿ ಬಳಕೆ ಮಾಡುವ ನುಡಿಗಟ್ಟಿನಲ್ಲಿಯೇ ಹಾಡುಗಳನ್ನು ಹಾಡುವುದು ವಿಶೇಷ. ತಮಗೆ ತಿಳಿದಿರುವ ಭಾಷೆಯಲ್ಲಿ ದೇವಿಯ ಕುರಿತು ಹಾಡಿ ದೇವಿಯನ್ನು ಒಲಿಸಿಕೊಳ್ಳವು ಜನಪದರ ರೀತಿಯೇ ವಿಶಿಷ್ಟವಾದುದು. ಗ್ರಾಮೀಣ ಭಾಗದವರ, ಜನಪದರ ಇಂತಹ ವಿದ್ಯೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ

Wednesday, April 20, 2016

ಬೇಸರ ಮರೆತು ಒಂದಾದ ಯಕ್ಷ ದಿಗ್ಗಜರು

ದಿಗ್ಗಜರ ಒಗ್ಗೂಡುವಕೆಗೆ ಸಾಕ್ಷಿಯಾದ ಸಂಪಖಂಡ


           ಐದು ದಶಕಗಳ ಬೇಸರವನ್ನು ಮರೆತು ಒಂದಾದರು ದಿಗ್ಗಜರು. ಒಬ್ಬ ಯಕ್ಷ ದಿಗ್ಗಜರ ಹಾಡಿಗೆ ಇನ್ನೊಬ್ಬ ಯಕ್ಷ ದಿಗ್ಗಜರು ಯಕ್ಷನರ್ತನ ಮಾಡಿದರು. ಅಭಿಮಾನಿಗಳು ಪುಳಕಗೊಂಡರು. ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಶಿರಸಿ ತಾಲೂಕಿನ ಸಂಪಖಂಡದ ಗಜಾನನ ಪ್ರೌಢಶಾಲೆಯ ಆವರಣ.
           ನೆಬ್ಬೂರು ನಾರಾಯಣ ಭಾಗವತರು ಯಕ್ಷಗಾನದಲ್ಲಿ ದಿಗ್ಗಜ ಭಾಗವತರು. ಅದೇ ರೀತಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೂ ಕೂಡ ಯಕ್ಷಗಾನದ ಮೇರು ನಟ. ಇಬ್ಬರಿಗೂ ಅವರದೇ ಆದ ಅಭಿಮಾನಿಗಳಿದ್ದಾರೆ. ನೆಬ್ಬೂರರ ಹಾಡಿಗೆ, ಚಿಟ್ಟಾಣಿಯವರ ನರ್ತನಕ್ಕೆ ಮೆಚ್ಚಿ ತಲೆದೂಗಿದವರು ಸಹಸ್ರ ಸಹಸ್ರ ಸಂಖ್ಯೆಯ ಅಭಿಮಾನಿಗಳು. ಆದರೆ ಅನೇಕ ಅಭಿಮಾನಿಗಳಲ್ಲಿದ್ದ ಒಂದೇ ಒಂದು ಆಸೆಯೆಂದರೆ ಅದು ನೆಬ್ಬೂರು ನಾರಾಯಣ ಭಾಗವತರ ಹಾಡಿಗೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಪಾತ್ರ ಮಾಡಬೇಕು ಎನ್ನುವುದು. ಆದರೆ ಈ ಇಬ್ಬರು ಮಹಾನ್ ಯಕ್ಷಪಟುಗಳ ನಡುವಿನ ಬೇಜಾರಿನಿಂದಾಗಿ ಅದು ಸಾಧ್ಯವೇ ಆಗಿರಲಿಲ್ಲ. ಸರಿ ಸುಮಾರು ಐದು ದಶಕಗಳಿಂದ ಯಕ್ಷಪ್ರೇಮಿಗಳು ಇಂತದ್ದೊಂದು ಸವಿಘಳಿಗೆಗೆ ಕಾಯುತ್ತಲೇ ಇದ್ದರು. ಸಂಪಖಂಡದಲ್ಲಿ ನಡೆದ ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಟಾನದ ವಾಷರ್ಿಕೋತ್ಸವ ಸಮಾರಂಭದಲ್ಲಿ ಈ ಇಬ್ಬರು ಯಕ್ಷ ದಿಗ್ಗಜರು ಬೇಸರ ಮರೆತು ಒಂದಾದರು.
                        ಕಾರ್ಯಕ್ರಮ ಉದ್ಘಾಟನೆ ಮಾಡಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಮಾತನಾಡುತ್ತಾ ಐದು ದಶಕಗಳ ಹಿಂದೆ ನೆಬ್ಬೂರು ನಾರಾಯಣ ಭಾಗವತರು ಹಾಗೂ ತಾವು ಅಮೃತೇಶ್ವರಿ ಮೇಳದಲ್ಲಿ ಒಡನಾಡಿಗಳಾಗಿದ್ದವರು. ನಂತರದ ದಿನಗಳಲ್ಲಿ ಜನರಿಂದಾಗಿ ನಮಗೆ ಬೇಸರ ಉಂಟಾಯಿತು.ಆ ಸಂದರ್ಭದಲ್ಲಿಯೇ ನಾನು ಮೇಳವನ್ನು ಬದಲಾಯಿಸಿದೆ. ಐದು ದಶಕಗಳ ವರೆಗೂ ಆ ಬೇಸರ ಮುಂದುವರಿಯಿತು. ಆದರೆ ನನಗೆ ಒಂದು ಆಸೆಯಿದೆ. ನೆಬ್ಬೂರು ನಾರಾಯಣ ಭಾಗವತರ ಹಾಡುಗಾರಿಕೆಯಲ್ಲಿ ಪಾತ್ರ ಮಾಡಬೇಕು ಎನ್ನುವುದು ನನ್ನ ದೊಡ್ಡ ಆಸೆ. ಆದರೆ ಅನಾರೋಗ್ಯದ ಕಾರಣದಿಂದಾಗಿ ನೆಬ್ಬೂರರಿಗೆ ಹಾಡಲು ಸಾಧ್ಯವಾಗುತ್ತಿಲ್ಲ. ದೇವರ ಕೃಪೆಯಿದ್ದರೆ ನನ್ನ ಆಸೆ ಪೂರೈಸುತ್ತದೆ. ದೇವರ ದಯೆಯಿಮದ ನೆಬ್ಬೂರರು ಕೂಡಲೇ ಗುಣಮುಖರಾಗಿ ಮತ್ತೆ ರಂಗದಲ್ಲಿ ಹಾಡುತ್ತಾರೆ. ಆಗ ನಾನು ಪಾತ್ರ ಮಾಡುತ್ತೇನೆ ಎಂದರು. ಅಷ್ಟೇ ಅಲ್ಲದೇ ನೆಬ್ಬೂರು ನಾರಾಯಣ ಭಾಗವತರಿಗೆ ಅನಾರೋಗ್ಯವಾಗಿ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ನಮ್ಮಲ್ಲಿನ ಬೇಜಾರು ದೂರವಾಯಿತು. ನೆಬ್ಬೂರರ ಹಾಸ್ಯಪ್ರಜ್ಞೆಯಿಂದ ನನ್ನ ಮನಸ್ಸು ನಿರಾಳವಾಯಿತು ಎಂದರು.
                    ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಮಾತನಾಡಿದ ನಂತರ ನೆಬ್ಬೂರರು ಮಾತನಾಡಲು ಆಗಮಿಸಿದರು. ನೆಬ್ಬೂರು ನಾರಾಯಣ ಭಾಗವತರು ಮಾತನಾಡಿ ಅಮೃತೇಶ್ವರಿ ಮೇಳದಲ್ಲಿ 5 ದಶಕಗಳ ಹಿಂದೆ ನಾವು ಒಡನಾಡಿದವರು. ಕಾರಣಾಂತರಗಳಿಂದ ದೂರವಾಗಿದ್ದವರು ನಾವು. ಈಗ ಒಂದಾಗಬೇಕೆಂಬ ಮನಸ್ಸಿದೆ. ವಯೋಮಾನ ಹೆಚ್ಚಾದ ಕಾರಣ ರಂಗದಲ್ಲಿ ನಾವು ಒಂದಾಗಲು ಸಾಧ್ಯವಿಲ್ಲ. ಆದರೆ ಮಾನಸಿಕವಾಗಿ ನಾವಿಬ್ಬರೂ ಒಂದೇ. ಚಿಟ್ಟಾಣಿಯವರು ಈಗಲೂ ರಂಗದಲ್ಲಿ ಪಾತ್ರವಹಿಸುತ್ತಿದ್ದಾರೆ. ಆದರೆ ನನಗೆ ವಯೋಸಹಜ, ಅನಾರೋಗ್ಯದ ಕಾರಣ ರಂಗದ ಮೇಲೆ ಬರಲಾಗುತ್ತಿಲ್ಲ. ಚಿಟ್ಟಾಣಿಯವರಿಗೆ ಚಂಡೆ, ಮದ್ದಲೆಗಳೇ ಔಷಧವಾಗಿ ಪರಿಣಮಿಸಿದೆ. ಹಿರಿಯರು ಆಗಾಗ ಪ್ರತಿಷ್ಟಾನಕ್ಕೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕು. ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದರು.
                      ನೆಬ್ಬೂರರು ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ವೇದಿಕೆಯ ಮೇಲೆ ಕುಳಿತಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಎದ್ದು ಬಂದರು. ನೆಬ್ಬೂರರ ಬಳಿ ಬಂದು `ಒಂದು ಹಾಡು ಹಾಡಾ..' ಎಂದರು. ಅದಕ್ಕೆ ಹಸನ್ಮುಖದಿಂದಲೇ ನೆಬ್ಬೂರರು ಬೇಡ ಎಂದರು. ಚಿಟ್ಟಾಣಿಯವರು ಪಟ್ಟು ಬಿಡಲಿಲ್ಲ. ಕೊನೆಗೆ ನೆಬ್ಬೂರು ನಾರಾಯಣ ಭಾಗವತರು ಹಾಡಿಯೇ ಬಿಟ್ಟರು. ನೆಬ್ಬೂರರ ಸಿರಿಕಂಠದಲ್ಲಿ `ಕಂಡನು ಭಸ್ಮಾಸುರನು ಮೋಹಿನಿಯ ರೂಪವ' ಎಂಬ ಹಾಡು ಹೊರಹೊಮ್ಮಿದಂತೆಯೇ ಚಿಟ್ಟಾಣಿಯವರು ಅಭಿನಯವನ್ನು ಆರಂಭಿಸಿದರು. ವೇದಿಕೆಯ ಮೇಲೆ ಕುಣಿದ ಚಿಟ್ಟಾಣಿ ಬಹುಕಾಲದ ತಮ್ಮ ಮನಸ್ಸಿನ ಬಯಕೆಯನ್ನು ಪೂರೈಸಿಕೊಂಡರು. ಈ ಘಟನೆಗೆ ಸಾಕ್ಷಿಯಾದ ನೂರಾರು ಜನರು ಪುಳಕಗೊಂಡರು. ಸಂಘಟಕರ ಕಣ್ಣಾಲಿಗಳು ತುಂಬಿಬಂದವು.
                 ಕಲಾವಿದರುಗಳಲ್ಲಿ ಬೆಸರಗಳು ಸಹಜ. ಆದರೆ ಇಂತಹ ಅಪರೂಪದ ಕಾರ್ಯಕ್ರಮಗಳಲ್ಲಿ, ಸಂದರ್ಭಗಳಲ್ಲಿ ದಿಗ್ಗಜರು ಒಂದಾಗುತ್ತಾರೆ. ಯಕ್ಷಗಾನದ ಇಬ್ಬರು ದಿಗ್ಗಜರು ಒಂದಾಗುವಲ್ಲಿ ಸಂಪಖಂಡದ ಗಜಾನನ ಪ್ರೌಢಶಾಲೆಯ ಆವರಣ ಸಾಕ್ಷಿಯಾಯಿತು. ತನ್ಮೂಲಕ ಸಂಪಖಂಡ ಹಾಗೂ ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಟಾನದ ವಾಷರ್ಿಕೋತ್ಸವ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಯಿಗಿ ಉಳಿದುಕೊಂಡಿತು.
 

Saturday, April 16, 2016

ಮಾಸ್ತರ್ ಮಂದಿ -10

                ಹೈಸ್ಕೂಲಿನಲ್ಲಿ ಇನ್ನೂ ಹಲವು ಶಿಕ್ಷಕರಿದ್ದರು. ಮೆಚ್ಚಿನ ಶಿಕ್ಷಕರಾಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ಅವರ ಪೈಕಿ ಥಟ್ಟನೆ ನೆನಪಾಗುವವರು ಎಂದರೆ ಲಕ್ಷಪ್ಪ ಮಾಸ್ತರ್ . ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಲಕ್ಷಪ್ಪ :
      ಕೆ. ಲಕ್ಷಪ್ಪ ೆಎನ್ನುವ ಕಿರು ನಾಮಧೇಯ  ಇವರದ್ದು. 9ನೇ ಕ್ಲಾಸಿನಲ್ಲಿ ಇರುವಾಗ ಕಾನ್ಲೆ ಹೈಸ್ಕೂಲಿಗೆ ಬಂದವರು ಲಕ್ಷಪ್ಪ ಸರ್. ನನ್ನ ಹೈಸ್ಕೂಲ್ ಜೀವನದ ಅತ್ಯಂತ ಪ್ರಿಯ ಮಾಸ್ತರುಗಳಲ್ಲಿ ಒಬ್ಬರು. ಸಮಾಜ ವಿಜ್ಞಾನವನ್ನು ಇವರು ಕಲಿಸುತ್ತಿದ್ದರು. ಲಕ್ಷಪ್ಪ ಅವರಿಗೆ ನೆತ್ತಿಯ ಮೇಲೆ ಕೂದಲು ತೆಳ್ಳಗಾಗಿತ್ತು. ಅದನ್ನು ನೋಡಿ ಹೈಸ್ಕೂಲಿನ ಹುಡುಗರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರು. ಸದಾ ಹಸನ್ಮುಖಿಯಾಗಿದ್ದ ಲಕ್ಷಪ್ಪ ಸರ್ ಆಗೊಮ್ಮೆ ಈಗೊಮ್ಮೆ ಸಿಟ್ಟಾಗುತ್ತಿದ್ದುದೂ ಇದೆ. ನಾನು ಅವರ ವಿಷಯದಲ್ಲಿ ಚನ್ನಾಗಿ ಬರೆಯುತ್ತಿದೆ. ಅಕ್ಷರಗಳೆಲ್ಲ ಚನ್ನಾಗಿ ಬರೆದು ನೀಟಾಗು ತೋರಿಸುತ್ತಿದೆ. ಶಾಲೆಗೆ ಬಂದ ಕೆಲವು ದಿನಗಳಲ್ಲಿಯೇ ಲಕ್ಷಪ್ಪ ಅವರ ಪ್ರಿಯ ಶಿಷ್ಯಂದಿರಲ್ಲಿ ನಾನೂ ಒಬ್ಬನಾಗಿಬಿಟ್ಟಿದ್ದೆ.
          ಲಕ್ಷಪ್ಪ ಸರ್ ಿತಿಹಾಸದ ಪುಟಗಳನ್ನೆಲ್ಲ ಬಹಳ ಸುಂದರವಾಗಿ ಕಲಿಸುತ್ತಿದ್ದರು. ಅದರಲ್ಲೂ ಐತಿಹಾಸಿಕ ಘಟನೆಗಳು, ಯುದ್ಧಗಳನ್ನೆಲ್ಲ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುತ್ತಿದ್ದರು. ಲಕ್ಷಪ್ಪ ಸರ್ ಅವರು ರಕ್ಕಸತಂಗಡಿ ಯುದ್ಧವನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಿನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
           ಓದಿನಲ್ಲಿ ಮುಂದಿದ್ದ ನನಗೆ ಹೈಸ್ಕೂಲಿನಲ್ಲಿ ಅಂಕಗಳು ಸಾಕಷ್ಟು ಸಿಗುತ್ತಿದ್ದವು. ನಾನು ಎಂದರೆ ಓದುಗುಳಿ ಎಂದುಕೊಂಡಿರಬೇಕು ಅವರು. ಹೈಸ್ಕೂಲು ವಾರ್ಷಿಕೋತ್ಸವದ ಸಂದರ್ಭದಲ್ಲಿ 9 ನೇ ಕ್ಲಾಸಿನಲ್ಲಿದ್ದಾಗ ನಾನು ನಾಟಕವೊಂದರಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಅದನ್ನು ಲಕ್ಷಪ್ಪ ಸರ್ ಬಹಳ ಮೆಚ್ಚಿಕೊಂಡಿದ್ದರು. ಎಸ್ಸೆಲ್ಸಿಯಲ್ಲಿದ್ದಾಗ ಸಿನೆಮಾ ಹಾಡುಗಳಿಗೆ ನಮ್ಮ ದೋಸ್ತರ ತಂಡ ಸ್ಟೆಪ್ ಹಾಕಿತ್ತು. ಅದನ್ನು ನೋಡಿ ಫುಲ್ ಫಿದಾ ಆಗಿದ್ದ ಲಕ್ಷಪ್ಪ ಸರ್ `ಏನೋ.. ನೀನು ಡ್ಯಾನ್ಸ್ ಕೂಡ ಮಾಡ್ತೀಯೇನೋ..' ಎಂದು ನಕ್ಕಿದ್ದರು. ಅವರು ಖುಷಿಯಾಗಿ ಹೇಳಿದ್ದ ಮಾತು ನನಗೆ ಮಾತ್ರ ತಮಾಷೆಯೆನ್ನಿಸಿತ್ತು.
         ಎಸ್ಸೆಲ್ಸಿಯಲ್ಲಿದ್ದಾಗ ವಿದ್ಯಾರ್ಥಿಗಳದ್ದೇ ಒಂದು ತಂಡ ಮಾಡಿ ಓದಲು ಬಿಡುತ್ತಿದ್ದರು. ನಾನು ಇದ್ದ ತಂಡವನ್ನು ಲಕ್ಷಪ್ಪ ಸರ್ ಹಾಗೂ ಭಾರತಿ ಮೇಡಮ್ ಮುಂದಾಳತ್ವ ವಹಿಸಿಕೊಂಡಿದ್ದರು. ನಮ್ಮ ತಂಡ  ಉಳಿದೆಲ್ಲರ ತಂಡಕ್ಕಿಂತ ಜಾಸ್ತಿ ಅಂಕ ಗಳಿಸಬೇಕು ಎನ್ನುವುದು ಇವರ  ಆಶಯವಾಗಿತ್ತು. ನಾನು ಹುಡುಗರ ಪಾಲಿಗೆ ಮುಂದಾಳುವಾಗಿದ್ದೆ ಎನ್ನಿ.
         ಹೈಸ್ಕೂಲು 100ಕ್ಕೆ 100 ರಷ್ಟು ಫಲಿತಾಂಶ ಸಾಧಿಸಬೇಕು ಎನ್ನುವ ಮಹತ್ವಾಕಾಂಕ್ಷೆ ನಮ್ಮೆಲ್ಲರದ್ದಾಗಿತ್ತು. ಶಿಕ್ಷಕವೃಂದ ಕೂಡ  ಈ ಕುರಿತಂತೆ ಬಹಳ ಕ್ರಮ ಕೈಗೊಂಡಿದ್ದರು. ಎಸ್ಸೆಲ್ಸಿಯ  ಆರಂಭದ 3 ತಿಂಗಳಿನಲ್ಲಿಯೇ ಎಲ್ಲ ಶಿಕ್ಷಕರೂ ತಮ್ಮ ತಮ್ಮ ವಿಷಯಗಳನ್ನು ಕಲಿಸಿ ಮುಗಿದಿತ್ತು. ನಂತರ ಶುರುವಾಯಿತು ನೋಡಿ ನಮಗೆ ನಿಜವಾದ ಶಿಕ್ಷಣ. ಅಬ್ಬಾ. ಲಕ್ಷಪ್ಪ ಅವರ ಕನಸುಗಳೆಲ್ಲ ೆಷ್ಟು ಚನ್ನಾಗಿದ್ದವು ಅಂದರೆ... ಆಹ್.. ಅವರನ್ನು ಶಿಕ್ಷಣ ಇಲಾಖೆಯಲ್ಲಿ ಹೊಸ ರೀತಿಯ ಕನಸುಗಳನ್ನು ನೇಯಲು ಕಲಿಸಬೇಕು. ಹಾಗಿದ್ದವು. ವಿದ್ಯಾರ್ಥಿಗಳಲ್ಲಿ ತಂಡವನ್ನು ಮಾಡಿದರು. ತಂಡ ತಂಡಗಳ ನಡುವೆ ವಿವಿಧ ವಿಷಯಗಳಲ್ಲಿ ಸ್ಪರ್ಧೆ. ಹೆಚ್ಚು ಅಂಕ ಪಡೆದವರಿಗೆ ತಮ್ಮ ಕೈಯಿಂದಲೇ ಬಹುಮಾನ ವಿತರಣೆ ಮಾಡುತ್ತಿದ್ದರು. ಪ್ರತಿ ದಿನ ಪ್ರತಿ ವಿಷಯಗಳ ಬಗ್ಗೆ ಚರ್ಚಾ ಸ್ಪರ್ಧೆ. ವಿಶೇಷ  ಉಪನ್ಯಾಸ ಬೇರೆ. ಕೊನೆಯ ಎರಡು ತಿಂಗಳಂತೂ.. ಅಬ್ಬಬ್ಬಾ.. ಪ್ರತಿದಿನ ಪರೀಕ್ಷೆ ಮಾಡುತ್ತಿದ್ದರು. ಎಲ್ಲ ವಿಷಯಗಳ ಪರೀಕ್ಷೆ. ಇಷ್ಟೆಲ್ಲ ಮುತುವರ್ಜಿ ವಹಿಸಿದರೂ ಕೂಡ ನಮ್ಮ ಹೈಸ್ಕೂಲು 100% ಫಲಿತಾಂಶ ದಾಖಲಿಸಲೇ ಇಲ್ಲ. ಒಬ್ಬ ಹುಡುಗಿ ನಪಾಸಾಗಿದ್ದಳು. ಫಲಿತಾಂಶ ಶೆ.99ರಷ್ಟಾಗಿತ್ತು. ಇದಕ್ಕೆ ಲಕ್ಷಪ್ಪ ಅವರು ಬಹಳ ಬೇಜಾರು ಮಾಡಿಕೊಂಡಿದ್ದರು.
          ಎಸ್ಸಲ್ಸಿಯಲ್ಲಿದ್ದಾಗ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಇಡೀ ಹೈಸ್ಕೂಲಿನಿಂದ ನಾಲ್ಕು ತಂಡಗಳನ್ನು ಮಾಡಲಾಗುತ್ತದೆ. 8, 9 ಹಾಗೂ 10 ನೇ ಕ್ಲಾಸಿನ ಹುಡುಗರದ್ದು ನಾಲ್ಕು ಹಾಗೂ ಹುಡುಗಿಯರದ್ದು ನಾಲ್ಕು ತಂಡಗಳು. ಈ ತಂಡಗಳಿಗೆ ಒಬ್ಬ ನಾಯಕ. ತಂಡಕ್ಕೊಬ್ಬರು ಶಿಕ್ಷಕರು ಮೇಲ್ವಿಚಾರಕರು. ನಾನೊಂದು ತಂಡದಲ್ಲಿದ್ದೆ. ಉಪನಾಯಕನಾಗಿದ್ದೆ. ನಮ್ಮ ತಂಡದ ಮೇಲ್ವಿಚಾರಣೆಯನ್ನು ಲಕ್ಷಪ್ಪ ಮಾಸ್ತರ್ ನೋಡಿಕೊಳ್ಳುತ್ತಿದ್ದರು. ಹೈಸ್ಕೂಲಿನಲ್ಲಿದ್ದಾಗ ನಮ್ಮ ತಂಡದಲ್ಲಿ ನಾನು ಸಾಂಸ್ಕೃತಿಕ ವಿಭಾಗ ಹಾಗೂ ಕ್ರೀಡೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದೆ. ಹಾಡು ಹೇಳುತ್ತಿದ್ದೆನಾದರೂ ಒಂದೇ ಒಂದು ಬಹುಮಾನ ಪಡೆಯಲಿಲ್ಲ ಬಿಡಿ.
            ಪ್ರತಿ ವಾರ  ಒಂದೊಂದು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತಿದ್ದವು. ನಾನು ಪ್ರತಿವಾರ ವೂ ಹಾಡುತ್ತಿದ್ದೆ. ಬಹುಮಾನ ಸಿಗಲಿಲ್ಲ ಬಿಡಿ. ಆದರೆ ನನ್ನದೇ ಆದ ಕೆಲವು ವಿಭಾಗಗಳಿದ್ದವು. ಅದರಲ್ಲಿ ನನ್ನನ್ನು ಮೀರಿಸುವವರೇ ಇರುತ್ತಿರಲಿಲ್ಲ. ಕಂಠಪಾಠ ಸ್ಪರ್ಧೆ. ಕನ್ನಡ, ಹಿಂದಿ ಹಾಗೂ ಇಂಗ್ಲೀಷಿನ ಕವಿತೆಗಳನ್ನು ಉರು ಹೊಡೆದು ರಾಗವಾಗಿ ವಾಚನ ಮಾಡುವ ಸ್ಪರ್ಧೆ. ಇದರಲ್ಲಿ ನನ್ನದೇ ಎತ್ತಿದ ಕೈ ಆಗಿತ್ತು. ಅದೇ ರೀತಿ ರಸಪ್ರಶ್ನೆಯಲ್ಲಿ ನನ್ನನ್ನು ಮೀರಿಸುವವರೇ ಇರಲಿಲ್ಲ. ಇವುಗಳಲ್ಲಿ ಸಾಕಷ್ಟು ಬಹುಮಾನಗಳು ಬಂದಿವೆ ಬಿಡಿ.
           ಕ್ರೀಡಾ ಸ್ಪರ್ಧೆಗಳಲ್ಲಿ ನಾನು ಪಾಲ್ಗೊಳ್ಳುತ್ತಿದ್ದೆ. ಸಿಕ್ಕಾಪಟ್ಟೆ ಓಡುತ್ತಿದ್ದೆ. ಆದರೆ ಮೊದಲ ಸ್ಥಾನ ಯಾವತ್ತೂ ಸಿಕ್ಕಿಲ್ಲ. ಎರಡು ಅಥವಾ ಮೂರನೇ ಸ್ಥಾನ ಸಿಕ್ಕಿದೆ. ತಂಡ ವಿಭಾಗದಲ್ಲಿ ರಿಲೇಯಲ್ಲಿ ಪಾಲ್ಗೊಂಡಿದ್ದೆ. ಬಹುಮಾನಗಳು ಬಂದಿರಲಿಲ್ಲ. ಕಬ್ಬಡ್ಡಿಯಲ್ಲಿ ತಂಡದ ಭಾಗವಾಗಿದ್ದೆ. ಕೋಕೋ ಚನ್ನಾಗಿ ಆಡುತ್ತಿದ್ದೆ. ಅದರಲ್ಲೂ ತಂಡದ ಭಾಗವಾಗಿದ್ದೆ. ಲಾಂಗ್ ಜಂಪ್ ನಲ್ಲಿ ಪಾಲ್ಗೊಳ್ಳುತ್ತಿದ್ದೆ. ಖಾಯಂ ದ್ವಿತೀಯ ಸ್ಥಾನ ನನಗೆ ಕಟ್ಟಿಟ್ಟ ಬುತ್ತಿಯಾಗಿತ್ತು. ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದೆ. ಇಲ್ಲೊಂದು ಇಂಟರೆಸ್ಟಿಂಗ್ ವಿಷಯವಿದೆ. ಅದನ್ನು ಹೇಳಲೇಬೇಕು. ಫೈನಲ್ ಮ್ಯಾಚ್. ಹಾಗೂ ಹೀಗೂ ಫೈನಲ್ ತಲುಪಿದ್ದೆವು. ನಮಗೆ ಮೊದಲ ಬ್ಯಾಟಿಂಗ್ ಸಿಕ್ಕಿತ್ತು. ನಾನು ಕ್ಯಾಪ್ಟನ್ ಲೀಗ್ ಪಂದ್ಯಗಳಲ್ಲಿ ಚನ್ನಾಗಿ ಆಡಿರಲಿಲ್ಲ. ಫೈನಲ್ ಪಂದ್ಯ ಚನ್ನಾಗಿ ಆಡಬೇಕೆಂಬ ನಿರ್ಧಾರದೊಂದಿಗೆ ಕ್ರೀಸಿಗೆ ಹೋಗಿದ್ದೆ. ಬಿಡಿ ಆವಾಗ ಅಂತಹ ಹೆಸರಾಂತ ಆಟಗಾರನೇನಲ್ಲ ನಾನು. ಕುಲ್ಡಂಬಲ್ಡಿ ಶಾಟ್ ನನ್ನದು. ತಾಗಿದರೆ ಬೌಂಡರಿ. ಇಲ್ಲದಂರೆ ಜೋರಾಗಿ ಬೀಸುವ ಗಾಳಿ ಅಷ್ಟೇ. ಮೊದಲ ಎರಡು ಬಾಲುಗಳು ಎಳೆದು ಬಾರಿಸಿದೆ. ಬೌಂಡರಿಯಾಗಿತ್ತು.
              ನಮ್ಮ ಕ್ರಿಕೆಟ್ ಗ್ರೌಂಡಿನಲ್ಲಿ ವಿಶಿಷ್ಟ ನಿಯಮ ಒಂದಿತ್ತು. ಗ್ರೌಂಡ್ ದೊಡ್ಡದಿದ್ದರೂ ಕೀಪರ್ ಹಿಂಭಾಗ  ಮಾತ್ರ ದೊಡ್ಡದಾಗಿರಲಿಲ್ಲ. ಅಲ್ಲೊಂದು ದೊಡ್ಡ ಕೊಡ್ಲು ಇತ್ತು. ಆ ಕೊಡ್ಲಿಗೆ ಬಾಲ್ ತಾಗಿದರೆ 2 ರನ್ ಡಿಕ್ಲೇರ್ ಆಗುತ್ತಿತ್ತು. ನಾನು ಕೂಡ ಮೂರನೇ ಬಾಲ್ ಗೆ ಬ್ಯಾಟ್ ಬೀಸಿದೆ. ಎಡ್ಜ್ ಆಗಿ ಕೀಪರ್ ಹಿಂದೆ ಓಡಿತು. ನಾನು ಹೆಂಗಂದರೂ 2 ರನ್ ಡಿಕ್ಲೇರ ಬಿಡು ಎಂದುಕೊಂಡು ಅರ್ಧ ಪಿಚ್ಚಿಗೆ ಓಡಿದೆ. ಬಾಲ್ ಹೋಗಲೇ ಇಲ್ಲ. ಯಾರೋ ಕೂಗಿದರು. ಓಡು ಓಡು ಅಂತ. ನಾನು ಓಡಿದೆ. 2ನೇ ರನ್ ಗೆ ಮರಳುವಾಗ ರನ್ ಔಟ್ ಆದೆ. ಆಗ ಲಕ್ಷಪ್ಪ ಅವರ ಮುಖ ನೋಡಬೇಕಿತ್ತು ಕಣ್ರೀ. ಗಲಾಟೆಗೆ ಇಳಿದಿದ್ದರು. 2 ರನ್ ಡಿಕ್ಲೇರ್ ಇದ್ದಿದ್ದಕ್ಕೆ ವಿನಯ ರನ್ ಓಡಲಿಲ್ಲ. ನೀವು ಹೇಗೆ ರನೌಟ್ ಮಾಡಿದಿರಿ. ಇದು ಸರಿಯಲ್ಲ. ನಾಟೌಟ್.. ನಾಟೌಟ್ ಎಂದು ಉಳಿದ ಶಿಕ್ಷಕರ ಜೊತೆಗೆ ಗಲಾಟೆಗೆ ನಿಂತಿದ್ದರು. ಕೊನೆಗೆ ಅವರ ಗಲಾಟೆಗೆ ಉಳಿದವರು ಸೊಪ್ಪು ಹಾಕಲಿಲ್ಲ. ಕೊನೆಗೆ ಅಲವತ್ತುಕೊಂಡ ಅವರು ನಮ್ ಮ್ಯಾಚ್ ತೆಗೆದ್ರಿ ನೀವೆಲ್ಲ ಸೇರ್ಕೊಂಡು ಎಂದರು. ನಾನು ಸುಮ್ಮನಾಗಿದ್ದೆ. ನಮ್ಮ ತಂಡ ಗೌರವಾರ್ಹ ಮೊತ್ತವನ್ನೇನೋ ಸಂಪಾದಿಸಿತ್ತು. ನಂತರ  ಎದುರಾಳಿ ತಂಡ ಬ್ಯಾಟ್ ಮಾಡಲು ಬಂದಾಗ ನಾನು ಬೌಲಿಂಗನ್ನೂ ಮಾಡಿದ್ದೆ. ಎದುರಾಳಿ ತಂಡ ಜಯಭೇರಿ ಭಾರಿಸಿತ್ತು ಬಿಡಿ.
           ರಸಪ್ರಶ್ನೆಯಲ್ಲಿ ನನ್ನದು ಎತ್ತಿದ ಕೈ ಎಂದು ಹೇಳಿದ್ದೆನಲ್ಲ. ಹೌದು ಆ ದಿನಗಳಲ್ಲಿ ರಸಪ್ರಶ್ನೆ ಕುರಿತಂತೆ ನಾನು ಮುಟ್ಟಿದ್ದೆಲ್ಲ ಚಿನ್ನದಂತೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೀಗೆ ಒಂದು ರಸಪ್ರಶ್ನೆ ಕಾರ್ಯಕ್ರಮ. ಸಾಗರ-ಶಿವಮೊಗ್ಗ ರಸ್ತೆಯ ಆನಂದಪುರದ ಬೆಕ್ಕಿನ ಕಲ್ಮಠದಲ್ಲಿ ನಡೆದಿತ್ತು. ನನ್ನನ್ನು ಹಾಗೂ ಜೊತೆಗಾರ ಕಿರಣ ನನ್ನು ಕರೆದುಕೊಂಡು ಲಕ್ಷಪ್ಪ ಸರ್ ಬೈಕಿನಲ್ಲಿ ತ್ರಿಬ್ಬಲ್ ರೈಡ್ ಮಾಡಿಕೊಂಡು ಹೋಗಿದ್ದರು. ರಸಪ್ರಶ್ನೆ ನಡೆಯಿತು. ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ತೀವ್ರ ಪೈಪೋಟಿ ಒಡ್ಡಿದ ನಾನು ಅಂತಿಮವಾಗಿ ಮೂರನೇ ಬಹುಮಾನ ಪಡೆದುಕೊಂಡೆ. ಆಗ ಲಕ್ಷಪ್ಪ ಮಾಸ್ತರ್ ಓಡಿಬಂದು ನನ್ನನ್ನು ತಬ್ಬಿಕೊಂಡು ಎತ್ತಿಬಿಟ್ಟಿದ್ದರು.
         ಪ್ರತಿಭಾ ಕಾರಂಜಿ ಎನ್ನುವುದು ನಾನು ಎಸ್ಸೆಲ್ಸಿಯಲ್ಲಿದ್ದಾಗ ಆರಂಭವಾಯಿತು. ನಮ್ಮ ಹೈಸ್ಕೂಲಿನ ತಂಡವನ್ನು ತಾಳಗುಪ್ಪಾದ ಕೇಂದ್ರ ಶಾಲೆಗೆ ಕರೆದೊಯ್ಯಲಾಯಿತು. ಚಿತ್ರಕಲೆ, ರಸಪ್ರಶ್ನೆಗಳಲ್ಲಿ ನಾನು ಭಾಗವಹಿಸಿದ್ದೆ. ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಬಂದಿತ್ತು. ಚಿತ್ರಕಲೆಯಲ್ಲಿ ನಾನು ತಾಜಮಹಲ್ ಚಿತ್ರ ಬಿಡಿಸಿದ್ದೆ. ಪ್ರಥಮ ಸ್ಥಾನ ಗಳಿಸಿದ್ದೆ. ಇದ್ದಕ್ಕಿದ್ದಂತೆ ಚರ್ಚಾ ಸ್ಪರ್ಧೆಗೆ ಸಂಬಂಧಿಸಿದಂತೆ ನನ್ನ ಹೆಸರನ್ನು ಕೂಗಿದರು. ನನಗೊಮ್ಮೆ ಅಚ್ಚರಿ. ನೋಡಿದರೆ ಲಕ್ಷಪ್ಪ ಸರ್ ನನ್ನ ಹೆಸರನ್ನು ಕೊಟ್ಟಿದ್ದರು. ಮೂರು ಜನ ಭಾಗವಹಿಸಿದ್ದ ಆ ಸ್ಪರ್ಧೆಯಲ್ಲಿ  ನಾನು ಎರಡನೇ ಸ್ಥಾನ ಪಡೆದೆ ಬಿಡಿ.
         ಇಂತಹ ಲಕ್ಷಪ್ಪ ಸರ್ ಗೆ ಇತ್ತೀಚೆಗೆ ಒಮ್ಮೆ ಪೋನ್ ಮಾಡಿದ್ದೆ. ಸಾಗರ ತಾಲೂಕಿನಲ್ಲಿಯೇ ಯಾವುದೋ ಒಂದು ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾರೆ. ನಾನು ಪರಿಚಯ ಮಾಡಿಕೊಂಡೆ. ನೆನಪಿತ್ತು ಅವರಿಗೆ. ಖುಷಿ ಪಟ್ಟರು. ನನ್ನ ಬಗ್ಗೆ ಕೇಳಿದರು. ಆ ಸಂದರ್ಬದಲ್ಲಿ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಪ್ರತಿಭಟನೆ ನಡೆಯುತ್ತಿತ್ತು. ಅದರ ಬಗ್ಗೆ ವರದಿ ಮಾಡಬೇಕಿತ್ತು ಎಂದವರೆ ಮಾಹಿತಿ ನೀಡಿದರು. ನಾನು ಮಾಡಿದ್ದೆ. ಅದಕ್ಕೆ ವ್ಯಾಪಕ ಪ್ರತಿಕ್ರಿಯೆ ಕೂಡ ಬಂದಿತ್ತು. ಇಂತಹ ಶಿಕ್ಷಕರು ಯಾವಾಗಲೂ ಚನ್ನಾಗಿರಲಿ.

(ಮುಂದುವರಿಯುತ್ತದೆ)
(ಮುಂದಿನ ಕಂತಿನಲ್ಲಿ ಪಿಬಿಎನ್ ಭಾರತಿ ಮೇಡಂ ಬಗ್ಗೆ ಬರೆಯುತ್ತೇನೆ)              

Saturday, February 27, 2016

ದ್ವೀಪ

ನದಿ ಮದ್ಯದೊಳಗಿಹೆ
ನಾನೊಂದು ದ್ವೀಪ
ಆಚೀಚೆಕಡೆಯಿಂದ ಅಲೆಗಳು
ಬಂದು ಬಡಿಯುತ್ತಿವೆ ಪಾಪ |

ಎಡ-ಬಲದ ಅಲೆಗಳು ಮುತ್ತಿ
ದಡದಲ್ಲೆಲ್ಲ ಗಾಯ
ಅತ್ತಿತ್ತ ಹುಯ್ದಾಡಿ, ಮನಸೆಲ್ಲ ಮಣ್ಣಾಗಿ
ಕಳೆದು ಹೋಗುತ್ತಿದೆ ಪ್ರಾಯ |

ಒಮ್ಮೊಮ್ಮೆ ಬಂದೂಕು
ಮತ್ತೊಮ್ಮೆ ಖಡ್ಗ
ಕುಡಿದಷ್ಟೂ ಆರದ ದಾಹ
ನಾನೊಬ್ಬ ಕುಡುಕ |

ಆಗೀಗ ಎಲ್ಲೆಲ್ಲೂ ಹರ ಹರ ಮಹಾದೇವ
ನಡು ನಡುವೆ ಕೇಳುತಿದೆ ಲಾಲ್ ಸಲಾಂ
ಗೌಜಿ ಗದ್ದಲದ ನಡುವೆ ನೆನಪಾಗಲಾರರು
ನೇತಾಜಿ, ಆಜಾದ್, ಗಾಂದಿ, ಕಲಾಂ |

ಬರಲೊಂದು ಪ್ರವಾಹ
ಹೊಸ ನೀರ ಸೆಳೆದು
ಕೊಚ್ಚಿ ಹೋಗಲಿ ಇಂದೇ
ಹಳೆ ಕೊಳೆಯು ತೊಳೆದು  |

Tuesday, February 16, 2016

ಅಂತ್ಯೋದಯ

ಕದವ ತೆರೆದು ಹಾರು ಹೊಡೆದು
ಮನವ ಬಯಲು ಮಾಡಿದೆ
ಉಸಿರನೆಳೆದುಕೊಳುವ ಮೊದಲು
ಪ್ರೀತಿ ಧೂಳು ಸೇರಿದೆ |

ಕಡ್ಡಿ ದಡ್ಡಿ ಹೆಕ್ಕಿ ತಂದು
ಪ್ರೀತಿ ಗೂಡು ಕಟ್ಟಿದೆ
ಒಳಗೆ ಹೆಜ್ಜೆ ಇಡುವ ಮೊದಲು
ಗಿಡುಗ ಕದ್ದು ಕುಳಿತಿದೆ |

ಇರುಳ ಕನಸ ಹಗಲು ನೆನೆದು
ಹಿಡಿಯ ಹೋದೆನು
ಹುಚ್ಚು ಒಲವು ಬೆನ್ನೂಳಿರಿಯೆ
ಬೆಚ್ಚಿ ಬಿದ್ದೆನು |

ಕೊಟ್ಟಿದ್ದೆಷ್ಟೋ ಪಡೆದುದೆಷ್ಟೊ
ಮರೆತೇ ಹೋಗಿದೆ
ಪ್ರೇಮದ ಜಮಾ-ಖರ್ಚು
ಸಾಲ-ದಂತಿದೆ|

****

(ಈ ಕವಿತೆಯನ್ನು ಬರೆದಿರುವುದು ಫೆ.15, 2016ರಂದು ಶಿರಸಿಯಲ್ಲಿ)

Wednesday, January 27, 2016

ಗೋಳಿ ನಾಟಕದ ಗಾರುಡಿಗ ರಾಮಚಂದ್ರ ಹೆಗಡೆ

              ಗೋಳಿ ನಾಟಕದ ಬಗ್ಗೆ ಕೇಳದವರೇ ಇಲ್ಲ. ಪೌರಾಣಿಕ ನಾಟಕವನ್ನು ಮೆಚ್ಚುವವರಿಗೆಲ್ಲ ಗೋಳಿ ನಾಟಕವೇ ಮೊಟ್ಟ ಮೊದಲು ನೆನಪಾಗುತ್ತದೆ. ಗೋಳಿ ನಾಟಕ ಎಂದಕೂಡಲೇ ನೆನಪಿಗೆ ಬರುವುದು ಮಾತ್ರ ಹಾರೂಗಾರ ರಾಮಚಂದ್ರ ಹೆಗಡೆ. ತಾಲೂಕಿನ ಹಾರೂಗಾರ ಗ್ರಾಮದ ರಾಮಚಂದ್ರ ಹೆಗಡೆ ಇಹಲೋಕ ತ್ಯಜಿಸಿದರು.
 ತಾಲೂಕಿನ ಗೋಳಿಯ ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ನಡೆಯುವ ನಾಟಕವೆಂದರೆ ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯದಲ್ಲೂ ಹೆಸರುವಾಸಿ. ಕಳೆದ ಐದು ದಶಕಗಳಿಂದ ಹೊಸ ಹೊಸ ರೀತಿಯ ರಂಗ ಪ್ರಯೋಗ, ಅದ್ಧೂರಿ ಪರದೆ, ಉತ್ತಮ ಕಥಾಹಂದರ ಇತ್ಯಾದಿ ಕಾರಣಗಳಿಂದ ನಾಡಿನ ಜನಮಾನಸದಲ್ಲಿ ನೆಲೆನಿಂತಿದ್ದ ಗೋಳಿ ನಾಟಕದ ಹಿಂದಿದ್ದ ಕತೃತ್ವ ಶಕ್ತಿ ರಾಮಚಂದ್ರ ಹೆಗಡೆಯವರು. ಗೋಳಿ ನಾಟ್ಯಕಲಾ ಸಂಘದ ಬೀಷ್ಮ ಎಂದೇ ಕರೆಸಿಕೊಂಡಿದ್ದರು. ನಿರಂತರ 54 ವರ್ಷಗಳ ಕಾಲ ರಂಗಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ರಾಮಚಂದ್ರ ಹೆಗಡೆ ಜ.11ರಂದು ಅಲ್ಪ ಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.
 1935ರ ಎಪ್ರಿಲ್ ತಿಂಗಳಿನಲ್ಲಿ ಜನಿಸಿದ ರಾಮಚಂದ್ರ ಹೆಗಡೆಯವರು ಓದಿದ್ದು ಮೂಲ್ಕಿ (ಏಳನೇ ತರಗತಿ)ಯ ವರೆಗೆ. ತಮ್ಮದೇ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡ ರಾಮಚಂದ್ರ ಹೆಗಡೆಯವರು ತಮ್ಮ ಯುವ ವಯಸ್ಸಿನಲ್ಲಿ ಗೋಳಿ ಶ್ರೀ ಸಿದ್ಧಿವಿನಾಯಕ ದೇಗುಲದ ಆವಾರದಲ್ಲಿ ನಾಟಕ ಮಾಡಲು ಮುಂದಾದರು. 1958ರಿಂದ ಗೋಳಿಯಲ್ಲಿ ನಾಟಕ ಪ್ರಾರಂಭವಾಯಿತು. ಸುತ್ತಮುತ್ತಲ ಊರುಗಳ ಸಮಾನ ಮನಸ್ಕರಾದ ಹೊಸಳ್ಳಿಯ ಗಣಪತಿ ಮತ್ತು ದತ್ತಾತ್ರೇಯ ಹೆಗಡೆ, ಹೊಸ್ಮನೆಯ ಸುಬ್ರಾಯ ಭಟ್, ಹೊಸ್ಮನೆಯ ಶ್ರೀಪತಿ ಭಟ್, ಹಾಳದಕೈ ಮಂಜುನಾಥ ಹೆಗಡೆ ಮತ್ತಿತರರ ಜೊತೆಗೂಡುವಿಕೆಯಲ್ಲಿ ಚಂದ್ರಕಾಂತ ಬಿ. ಎ. ಎನ್ನುವ ಸಾಮಾಜಿಕ ನಾಆಟಕವನ್ನು ಆಡಿ ತೋರಿಸಿ ಎಲ್ಲರಿಂದ ಸೈ ಎನ್ನಿಸಿಕೊಂಡರು. ಆ ನಂತರ ಗೋಳಿಯಲ್ಲಿ ಪ್ರತಿವರ್ಷ ರಥೋತ್ಸವದ ದಿನದಂದು ನಾಟಕ ಆಡುವ ಪರಂಪರೆಗೆ ಓಂಕಾರ ಹಾಕಿದರು. ಗೋಳಿ ನಾಟಕದ ಪ್ರಾರಂಭಿಕ ದಿನಗಳಲ್ಲಿ ಮಾಧವರಾವ್ ಅವರು ನಿದರ್ೇಶನ ಮಾಡಿದರೆ ರಾಮಚಂದ್ರ ಹೆಗಡೆ ಅವರು ಅಭಿನಯದ ಜೊತೆ ಜೊತೆಯಲ್ಲಿ ಪರದೆ ರಚನೆ, ಹಿನ್ನೆಲೆ ಸಂಗೀತ ಈ ಮುಂತಾದವುಗಳನ್ನು ನೀಡುವ ಮೂಲಕ ತಮ್ಮದೇ ಆದ ವಿಶಿಷ್ಟ ಪಾತ್ರ ವಹಿಸುತ್ತಿದ್ದರು.
 ಗೋಳಿಯಲ್ಲಿ ಪ್ರಾರಂಭದ ಕೆಲವು ವರ್ಷಗಳಲ್ಲಿ ರಥೋತ್ಸವದ ಸಂದರ್ಭದಲ್ಲಿ ವರ್ಷಕ್ಕೊಂದು ನಾಟಕ ನಡೆಯುತ್ತಿತ್ತು. ಸಾಮಾಜಿಕ ನಾಟಕಗಳಿಂದ ಆರಂಭಗೊಂಡ ನಾಟಕಪರ್ವ ನಂತರದ ದಿನಗಳಲ್ಲಿ ಪೌರಾಣಿಕ ನಾಟಕಗಳ ಕಡೆಗೆ ಹೊರಳಿತು. ನಂತರದ ದಿನಗಳಲ್ಲಿ ವೀರ ಅಭಿಮನ್ಯು, ಉತ್ತರ ಭೂಪ ನಾಟಕಗಳನ್ನು ಆಡಿ ತೋರಿಸಲಾಯಿತು. ಈ ಎರಡೂ ನಾಟಕಗಳು 1960 ಹಾಗೂ 70ರ ದಶಕದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾದವು. ಇದೇ ನಾಟಕಗಳನ್ನು ನಂತರದ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಲ್ಲಿಯೂ ಪ್ರದಶರ್ಿಸಲಾಯಿತು. ಈ ನಾಟಕ ಪ್ರದರ್ಶನಗೊಂಡ ಪ್ರತಿಯೊಂದು ಕಡೆಯಲ್ಲಿಯೂ ಅಪಾರ ಜನಮೆಚ್ಚುಗೆ ಪಡೆದುಕೊಂಡಿತು.
 ಶಿರಸಿ ತಾಲೂಕಿನ ಗೋಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮೊಟ್ಟಮೊದಲು ನಾಟಕ ಪರಂಪರೆ ಹುಟ್ಟು ಹಾಕಿದವರು ರಾಮಚಂದ್ರ ಹೆಗಡೆಯವರು ಎಂದರೆ ತಪ್ಪಾಗಲಿಕ್ಕಿಲ್ಲ. ಗೋಳಿಯಿಂದ ಸ್ಪೂತರ್ಿ ಪಡೆದು ನಂತರದ ದಿನಗಳಲ್ಲಿ ಸಂಪಖಂಡ ಮುಂತಾದ ಕಡೆಗಳಲ್ಲಿಯೂ ನಾಟಕ ನಡೆದಿದ್ದು ವಿಶೇಷ. ಸ್ಥಳೀಯರ ಬಾಯಲ್ಲಿ ರಾಮಚಂದ್ರ ಭಾವ ಎಂದೇ ಕರೆಸಿಕೊಳ್ಳುತ್ತಿದ್ದ ಇವರು ಅಭಿನಯ, ಚಿತ್ರಕಲೆ, ಸಂಗೀತ ಹೀಗೆ ಬಹುರಂಗದಲ್ಲಿ ಹೆಸರುವಾಸಿಯಾದವರು. ಶಿರಸಿಯ ಕಟ್ಟಿಗೆ ಭಟ್ಟರು ಎನ್ನುವವರಲ್ಲಿ ಸಂಗೀತಾಭ್ಯಾಸವನ್ನು ಮಾಡಿದವರು. ನಾಟಕದ ಹಿನ್ನೆಲೆ ಪರದೆ, ವೇಷಭೂಷಣ ಇತ್ಯಾದಿಗಳಿಗೆ ಗೋಳಿ ಹೆಸರುವಾಸಿ. ಆಕರ್ಷಕ ಪರದೆ ಹಾಗೂ ವೇಷಭೂಷಣಗಳಿಗೆ ಕಾರಣೀಭೂತರಾದವರು ರಾಮಚಂದ್ರ ಹೆಗಡೆಯವರು. ಇವರು ಚಿತ್ರಿಸಿದ ಅದೆಷ್ಟೋ ಪರದೆಗಳು ಹಾಗೂ ನಿಮರ್ಿಸಿದ ವೇಷಭೂಷಣಗಳು ನಾಟಕಪ್ರಿಯರ ಕಣ್ಮನ ಸೆಳೆದವು. ಅಷ್ಟೇ ಅಲ್ಲ ಗೋಳಿ ನಾಟಕವೆಂದರೆ ವಿಶೇಷ ಪರದೆಗಳು ಹಾಗೂ ವೇಷಭೂಷಣಗಳಿಗೆ ಸಾಕ್ಷಿ ಎಂಬುದನ್ನು ಬಿಂಬಿಸಿದರು.
 1982ರ ನಂತರದ ದಿನಗಳಲ್ಲಿ ರಾಮಚಮದ್ರ ಹೆಗೆಯವರೇ ನಿದರ್ೇಶನಕ್ಕೂ ಇಳಿದರು. ಉಷಾ ಸ್ವಯಂವರ ಎನ್ನುವ ವಿಶೇಷ ನಾಟಕವನ್ನು ನಿದರ್ೇಶಿಸಿದ ಅವರು 2 ವರ್ಷಗಳ ಕಾಲ ಜನಮನಸೂರೆಗೊಂಡಿತ್ತು. ಪ್ರತಿವರ್ಷ ಕನಿಷ್ಟ 6 ಪ್ರಯೋಗಗಳಾದವು. ಪ್ರತಿಯೊಂದು ಪ್ರಯೋಗಕ್ಕೂ ಪ್ರೇಕ್ಷಕರು ಮುಗಿಬಿದ್ದಿದ್ದರು. ಉಷಾ ಸ್ವಯಂವರಕ್ಕೂ ಮೊದಲು ಬಾಡಿಗೆ ಪರದೆಯನ್ನು ಗೋಳಿ ನಾಟಕಕ್ಕೆ ಬಳಕೆ ಮಾಡಲಾಗುತ್ತಿತ್ತು. 1982ರಿಂದಲೇ ವಿಶೇಷ ಸೆಟ್ಟಿಂಗ್ ನಿಮರ್ಾಣ ಆರಂಭಗೊಂಡಿತು. ರಾಮಚಂದ್ರ ಹೆಗಡೆಯವರು ತಮ್ಮ ಸಹೋದರ ಶಂಕರನಾರಾಯಣ ಹೆಗಡೆಯವರ ಸಹಯೋಗದೊಂದಿಗೆ ಪರದೆ ರಚನೆಗೆ ಮುಂದಾದರು. 1984ರಲ್ಲಿ 6 ಪ್ರಯೋಗ ಕಂಡ ಕುರುಕ್ಷೇತ್ರ, ನಂತರದ ದಿನಗಳಲ್ಲಿ ಶ್ರೀಕೃಷ್ಣ ಗಾರುಡಿ, ಚೌತಿ ಚಂದ್ರ ಜನಾಕರ್ಷಣೆ ಪಡೆದುಕೊಂಡಿತು. 1990ರ ವರೆಗೆ ಪ್ರತಿ 2 ವರ್ಷಕ್ಕೊಮ್ಮೆ ನಾಟಕ ಪ್ರಯೋಗಗಳು ನಡೆದವು. 1990ರ ದಶಕದಲ್ಲಿ ಕೆಲವು ವರ್ಷಗಳ ವರೆಗೆ ನಾಟಕದ ಹೆಚ್ಚುವರಿ ಪ್ರಯೋಗಗಳು ನಿಲುಗಡೆಯಾದವು. 2002ರ ವರೆಗೂ ವರ್ಷಕ್ಕೊಂದು ನಾಟಕ ನಡೆಯುತ್ತಿತ್ತು. 2004ರಲ್ಲಿ ಗೋಳಿ ನಾಟಕದ ವೈಭವ ಮತ್ತೊಮ್ಮೆ ಮರುಕಳಿಸಿತು.
 ಮುತ್ಮುಡರ್ು ಎಂ. ಎಸ್. ಹೆಗಡೆ ಅವರು ಬರೆದ ಕರ್ಣ ನಾಟಕ 2004ರಲ್ಲಿ ಹಾಗೂ 2006ರಲ್ಲಿ ಪಾಂಡವಾಶ್ವಮೇಧ ನಾಟಕಗಳು ಪ್ರದರ್ಶನಗೊಂಡವು. ಪೂರ್ವನಿಧರ್ಾರಿತ 6 ಪ್ರಯೋಗಗಳು ಜನಾಕರ್ಷಣೆಗೊಮಡು ನಂತರ 4 ರಿಂದ 5 ಪ್ರಯೋಗಗಳನ್ನು ಹೆಚ್ಚುವರಿಯಾಗಿ ಮಾಡಲಾಯಿತು. 2010ರಲ್ಲಿ ಸಿಂಧೂರ ವಧೆ (ಗಣೇಶ ಮಹಿಮೆ) ನಾಟಕ ಪ್ರದರ್ಶನಗೊಂಡಿತು. ಈ ನಾಟಕವನ್ನು ಬರದವರು ಹಾರೂಗಾರ ರಾಮಚಂದ್ರ ಹೆಗಡೆಯವರು ಎನ್ನುವುದು ವಿಶೇಷ. 2014ರಲ್ಲಿ ರಾಮಚಂದ್ರ ಹೆಗಡೆಯವರ ಸಹೋದರ ಶಂಕರನಾರಾಯಣ ಹೆಗಡೆಯವರ ನಿದರ್ೇಶನದಲ್ಲಿ ಭೂಕೈಲಾಸ ನಾಟಕ ರಂಗಪ್ರದರ್ಶನಗೊಂಡಿತು. ಈ ಎಲ್ಲ ನಾಟಕಗಳ ಯಶಸ್ಸಿನ ಹಿಂದಿದ್ದವರು ಹಾರೂಗಾರ ರಾಮಚಂದ್ರ ಹೆಗಡೆಯವರು.
 ರಾಮಚಂದ್ರ ಹೆಗಡೆಯವರ ಸಾಧನೆಯನ್ನು ಗಮನಿಸಿ 2011ರಲ್ಲಿ ನಾಟಕ ಅಕಾಡೆಮಿ ರಂಗ ಪ್ರಶಸ್ತಿ ಅವರನ್ನರಸಿ ಬಂದಿತು. ತಮ್ಮ 54 ವರ್ಷಗಳ ರಂಗವೃತ್ತಿಯಲ್ಲಿ ಕನಿಷ್ಟ 150 ಜನರನ್ನು ರಂಗಕ್ಕೆಳೆದು ತಂದರು. ನಾಟಕ ರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಹಿನ್ನೆಲೆ ಸಂಗೀತದ ಸಂದರ್ಭದಲ್ಲಿ ಸಿತಾರ್ ಬಳಕೆ ಮಾಡಿಸಿದ ಖ್ಯಾತಿ ರಾಮಚಂದ್ರ ಹೆಗಡೆಯವರದ್ದು. ರುದ್ರವೀಣೆಯಲ್ಲಿ ರಾಷ್ಟ್ರದಾದ್ಯಂತ ಹೆಸರು ಮಾಡಿದ ಆರ್. ವಿ. ಹೆಗಡೆಯವರ ಸಿತಾರ್ ವಾದನವನ್ನು ನಾಟಕ ರಂಗಕ್ಕೆ ತಂದರು. ಎಂ. ಪಿ. ಹೆಗಡೆ ಪಡಿಗೆರೆ, ಎಂ. ವಿ. ಹೆಗಡೆ ಬೆಕ್ಮನೆ, ಅಶೋಕ ಹುಗ್ಗಣ್ಣವರ್ ಈ ಮುಂತಾದವರಿಂದ ಹಿನ್ನೆಲೆ ಸಂಗೀತ ನೀಡಿಸಿದರು. ಗೋಳಿ ಪ್ರೌಡಶಾಲೆಗೆ ದೇಣಿಗೆ ನೀಡಿದವರ ಭಾವಚಿತ್ರವನ್ನು ಮನೋಜ್ಞವಾಗಿ ಚಿತ್ರಿಸಿದ ಖ್ಯಾತಿ ರಾಮಚಂದ್ರ ಹೆಗಡೆಯವರದ್ದು. ಇಂತಹ ಸರಳ, ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡ ನಾಟಕ ರಂಗ ಬಡವಾಗಿದೆ. ಗೋಳಿ ನಾಟ್ಯಕಲಾ ಸಂಘದ ಬೆನ್ನೆಲುಬು ಎನ್ನಿಸಿಕೊಂಡಿದ್ದ ರಾಮಚಂದ್ರ ಹೆಗಡೆಯವರು ಇನ್ನಿಲ್ಲವಾಗಿದ್ದಾರೆ. ರಂಗಭೂಮಿಗೆ ಶೂನ್ಯ ಆವರಿಸಿದೆ.

*****

ನನ್ನ ಅಣ್ಣ ರಾಮಚಂದ್ರ ಹೆಗಡೆಯವರು ಸರಳ ವ್ಯಕ್ತಿತ್ವದವರು. ಮನೆಯಲ್ಲಿಯೂ ಅವರು ತೀರಾ ಕಟ್ಟುನಿಟ್ಟನ್ನು ಹೇರುತ್ತಿರಲಿಲ್ಲ. ನಮ್ಮೆಲ್ಲರ ಪ್ರೀತಿ ಪಾತ್ರರಾಗಿ, ಕುಟುಂಬದ ಹಿರಿಯಣ್ಣರಾಗಿ ನಮ್ಮೆಲ್ಲರನ್ನು ಸಲಹಿದರು. ಅಣ್ಣ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೋಳಿ ನಾಟಕವೆಂದರೆ ರಾಮಚಂದ್ರ ಹೆಗಡೆಯವರು ಎಂದು ಹೇಳಲಾಗುತ್ತಿತ್ತು. ಆದರೆ ಅವರಿಲ್ಲದೇ ಮುಮದೆ ಯಾವ ರೀತಿ ನಾಟಕವನ್ನು ಆಡುವುದು ಎನ್ನುವುದೇ ತಿಳಿಯುತ್ತಿಲ್ಲ. ನಮ್ಮ ಮನಸ್ಸಿನಲ್ಲಿ ಶೂನ್ಯ ಆವರಿಸಿದೆ.
ಶಂಕರನಾರಾಯಣ ಸೀತಾರಾಮ ಹೆಗಡೆ
ರಾಮಚಂದ್ರ ಹೆಗಡೆಯವರ ಸಹೋದರ
ಹಾರೂಗಾರ

Tuesday, January 5, 2016

ಹವ್ಯಕ ಮಾಣಿಯ ಲವ್ ಸ್ಟೋರಿ -3

ನಮ್ಮೂರ ರಾಘಣ್ಣಂಗೆ
ಇನ್ನೂ ನಲವತ್ತೈದು
ಪದೇ ಪದೇ ಲವ್ವು
ಮನಸ್ಸು ಇಪ್ಪತ್ತೈದು ||

ರಾಘಣ್ಣನ ಲವ್ವು ಒಂದೆರಡಲ್ಲ
ಲೀಸ್ಟಂತೂ ಒಂದು ಢಜನ್ನು
ವರ್ಷಕ್ಕೆ ಒಂದೊಂದು
ಪ್ರೇಮಕ್ಕೆ ಕಣ್ಣಿಲ್ಲ ಸೀಝನ್ನು ||

ಮೊದಲನೇ ಲವ್ವು ಫೇಲಾಗಿ ಹೋದಾಗ
ಕಣ್ಣಲ್ಲಿ ಬಂದಿತ್ತು ನೀರು
ಲವ್ವು ಫೇಲ್ಯೂರೆ ರೂಟೀನಾಗ್ ಹೋದಾಗ
ಕಂಡಿತ್ತು ಇಳಿಸಂಜೆಲ್ ಬಾರು ||

ರಾಘಣ್ಣ ಸೌಂಡ್ ಪಾರ್ಟಿ
ನಾಲ್ಕೆಕರೆ ಜಮೀನು
ಆದ್ರೂನು ಪ್ರೇಮ ಗಟ್ಟೀನೆ ಇಲ್ಲೆ
ಕಾರಣ ಇದೆ ಬೇಜಾನು ||

ಲವ್ವು ಫೇಲಾದ್ರೂ ರಾಘಣ್ಣ ಸೋತಿಲ್ಲ
ಮತ್ತೆ ಮತ್ತೆ ಹುಡುಕಾಟ
ಕಾಲೇಜು, ಬಸ್ ಸ್ಟಾಪು ಎಲ್ಲೆಂದರಲ್ಲಿ
ಕೂಸುಗಳಿಗೆ ಬರಿ ಕಾಟ ||

ಮೊಬೈಲ್ ಕರೆನ್ಸಿ, ಸತ್ಕಾರದಲ್ಲಿ ಊಟ
ಮಾಡ್ತಿದ್ದ ಸಾಕಷ್ಟು ಇನ್ವೆಸ್ಟು
ಪ್ರತಿ ಸಾರಿ ಲವ್ ಫೇಲಾಗಿ ಹೋದಾಗ
ಆಗ್ತಿತ್ತು ದುಡ್ಡು ವೇಸ್ಟು ||

****

(ಕವಿತೆ ಸರಣಿ ಮುಂದುವರಿಯುತ್ತದೆ)

Monday, January 4, 2016

ಅಘನಾಶಿನಿ ಕಣಿವೆಯಲ್ಲಿ-32

         ತಪ್ಪಿಸಿಕೊಂಡು ಹೋಗುತ್ತಿದ್ದ ಬಾಬುವನ್ನು ಹಿಡಿದಾಗಿತ್ತು. ಆದರೆ ಅವನ ಬಾಯಿ ಬಿಡಿಸಬೇಕಲ್ಲ. ಪ್ರದೀಪ ಬಾಬುವನ್ನು ಹಿಡಿದು ಎಳೆದುಕೊಂಡು ಕಾರಿಗೆ ತುಂಬಿಕೊಂಡ. ಬಾಬು ಮಾತ್ರ ಕಕ್ಕಾಬಿಕ್ಕಿಯಾಗಿದ್ದ. ನನ್ನನ್ನು ಬಿಟ್ಟು ಬಿಡಿ ಎಂದು ಕೂಗಿಕೊಳ್ಳುತ್ತಿದ್ದ. ಆಗಾಗ ತನ್ನನ್ನು ಹಿಡಿದುಕೊಂಡು ಬಂದ ಬಗ್ಗೆ ಪ್ರತಿಭಟನೆಯನ್ನೂ ಮಾಡುತ್ತಿದ್ದ. ಆದರೆ ಪ್ರದೀಪ ಮಾತ್ರ ಬಾಬು ತಪ್ಪಿಸಿಕೊಂಡು ಹೋಗದಂತೆ ಪಟ್ಟಾಗಿ ಹಿಡಿದುಬಿಟ್ಟಿದ್ದ.
          ಗಾಡಿಯಲ್ಲಿ ಬಾಬುನನ್ನು ಬಹುದೂರ ಹಾಕಿಕೊಂಡು ಹೋದವರು ಅಲ್ಲೊಂದು ಕಡೆ ನಿರ್ಜನ ಪ್ರದೇಶದಲ್ಲಿ ಗಾಡಿ ನಿಲ್ಲಿಸಿದರು. ನಿಲ್ಲಿಸಿದವರೇ ಬಾಬುವನ್ನು ಗಾಡಿಯಿಂದ ಹೊರಕ್ಕೆ ಎಳೆದು ನಾಲ್ಕೇಟು ಬಿಡಿದರು. ಆದರೆ ಬಾಬು ಇದನ್ನು ತಡೆದುಕೊಂಡ. ಮತ್ತಷ್ಟು ಹೊಡೆದು ಬಾಬುವಿನ ಕೆಲಸದ ಬಗ್ಗೆ ಕೇಳಲು ಆರಂಭಿಸಿದರು. ಆದರೆ ಬಾಬು ಬಾಯಿ ಬಿಡಲು ಸುತಾರಾಂ ತಯಾರಿರಲಿಲ್ಲ. ಪ್ರದೀಪ ಮಾತ್ರ ಕ್ಷಣಕ್ಷಣಕ್ಕೂ ಸಿಟ್ಟಾಗುತ್ತಿದ್ದ. ಬಾಬುವಿನ ಕೈಕಾಲು ಮುರಿದು ಬಿಡೋಣ ಎಂದುಕೊಂಡ. ಹೇಗಾದರೂ ಬಾಯಿಬಿಡಿಸೋಣ ಎಂದುಕೊಂಡ.
          ತಕ್ಷಣವೇ ವಿಜೇತಾ ವಿಕ್ರಮನ ಬಳಿ ಏನೋ ಹೇಳಿದಳು. ವಿಕ್ರಮ ಕೂಡಲೇ ಕಾರ್ಯಪ್ರವೃತ್ತನಾದ. ಗಾಡಿಯೊಳಗಿದ್ದ ಸಕ್ಕರ ಪ್ಯಾಕನ್ನು ತಂದ. ತಂದವನೇ ಬಾಬುವಿನ ಮೇಮೇಲೆ ಚೆಲ್ಲಿಬಿಟ್ಟ. ನಂತರ ಬಾಬುವನ್ನು ಹಿಡಿದುಕೊಂಡು ಹೋಗಿ ಪಕ್ಕದ ಮರವೊಂದಕ್ಕೆ ಕಟ್ಟಿ ಹಾಕಿದ. ಅಷ್ಟಕ್ಕೆ ಸುಮ್ಮನಿರದ ವಿಕ್ರಮ ಸಕ್ಕರೆಯ ನೀರನ್ನು ಮಾಡಿ ಚೆಲ್ಲಿಬಿಟ್ಟ. ಪ್ರತಿಯೊಬ್ಬರಿಗೂ ಕೂಡ ಇವನೇಕೆ ಹೀಗೆ ಮಾಡುತ್ತಿದ್ದಾನೆ ಎನ್ನುವ ಕುತೂಹಲ ಕಾಡದೇ ಇರಲಿಲ್ಲ. ಬಾಬು ಮಾತ್ರ ಮನಸ್ಸಿನೊಳಗೆ ನಗಲು ಆರಂಭಿಸಿದ್ದ. ತನ್ನನ್ನು ಬಾಯಿ ಬಿಡಿಸಲು ಸಾಧ್ಯವೇ ಇಲ್ಲ. ತಾನು ಗೆದ್ದಿದ್ದೇನೆ ಎಂದುಕೊಂಡ. ಆದರೆ ವಿಕ್ರಮ ತನ್ನ ಮೈಮೇಲೆ ಸಕ್ಕರೆ ಹಾಗೂ ಸಕ್ಕರೆ ನೀರನ್ನು ಯಾಕೆ ಚೆಲ್ಲಿದ ಎನ್ನುವುದು ಗೊತ್ತಾಗಲಿಲ್ಲ.
        ಅರೆಘಳಿಗೆ ಕಳೆದಿರಬಹುದು. ಬಾಬುವಿನ ಕಾಲಿನ ಬಳಿಯಲ್ಲಿ ಯಾಕೋ ಗುಳುಗುಳು ಆಗಲಾರಂಭಿಸಿತು. ನಂತರ ಸೂಜಿಯಿಂದ ಚುಚ್ಚಿದಂತಹ ಅನುಭವವಾಯಿತು. ಕಾಲನ್ನು ನೋಡಿಕೊಂಡ ಬಾಬು. ದೊಡ್ಡ ಗಾತ್ರದ ಕಪ್ಪಿರುವೆಯೊಂದು ಬಂದು ಕಾಲನ್ನು ಕಚ್ಚಲು ಆರಂಭಿಸಿತ್ತು. `ಹಾಳಾದ ಇರುವೆ.. ತಥ್.. ಹಾಳ್ ಬೀಳಲಿ..' ಎಂದು ಬೈದುಕೊಂಡು ತನ್ನ ಇನ್ನೊಂದು ಕಾಲಿನಿಂದ ಠಪ್ಪನೆ ಹೊಡೆದು ಇರುವೆಯನ್ನು ಕೊಂದು ಹಾಕಿದ.
         ಇಷ್ಟಾಗಿ ಕೆಲವೇ ಕ್ಷಣಗಳು ಕಳೆದಿರಬಹುದು ಕಾಲಿಗೆ ಮತ್ತೆ ಹಲವಾರು ಸೂಜಿಗಳಿಂದ ಚುಚ್ಚಿದಂತಹ ಅನುಭವ ಆಗತೊಡಗಿತ್ತು. ಒಮ್ಮೆ ನೋಡಿಕೊಂಡವನಿಗೆ ಮನಸ್ಸಿನ ಆಳದಲ್ಲಿ ಭಯದ ಛಾಯೆ ಮೂಡಿತು. ಸಾವಿರ ಸಾವಿರ ಸಂಖ್ಯೆಯ ಇರುವೆಗಳು ಬಾಬುವಿನ ಕಾಲನ್ನು ಮುತ್ತಲು ಆರಂಭಿಸಿದ್ದವು. ಕಾಲಿಗೆ ಸೀಮಿತವಾಗದೇ ಮತ್ತೂ ಮೇಲ ಮೇಲಕ್ಕೆ ಏರಲು ಆರಂಭಿಸಿದ್ದವು. ನೋಡ ನೋಡುತ್ತಿದ್ದಂತೆ ದೇಹದ ತುಂಬೆಲ್ಲ ಇರುವೆಗಳು ಮುತ್ತಿಕೊಂಡು ಕಚ್ಚಲು ಆರಂಭಿಸಿದ್ದವು. ವಿಜೇತಾ ಹೇಳಿದ ಸಲಹೆಯನ್ನು ಕೇಳಿ ಯಥಾವತ್ತಾಗಿ ಕಾರ್ಯರೂಪಕ್ಕಿಳಿಸಿದ್ದ ವಿಕ್ರಮ. ಆತ ಬಾಬುವಿನ ಮೈಮೇಲೆ ಸಕ್ಕರೆ ಹಾಗೂ ಸಕ್ಕರೆ ನೀರನ್ನು ಚಲ್ಲಿದ್ದು ಫಲ ನೀಡಲಾರಂಭಿಸಿತ್ತು. ಸಕ್ಕರೆಯ ವಾಸನೆಗೆ ಇರುವೆಗಳು ಮುತ್ತಿಕೊಂಡು ಬಂದಿದ್ದವು. ಬಾಬುವಿನ ಮೈಯನ್ನು ಏರಿ ಕಚ್ಚಲು ಆರಂಭಿಸಿದ್ದವು. ಬಾಬು ಮೊದ ಮೊದಲಿಗೆ ಇವರೇನೋ ತಮಾಷೆ ಮಾಡಲು ಆರಂಭಿಸಿದ್ದಾರೆ ಎಂದುಕೊಂಡಿದ್ದ. ಆದರೆ ಈಗ ಮಾತ್ರ ಅವರು ಮಾಡಿದ ಕೆಲಸದ ಪರಿಣಾಮ ಗೋಚರವಾಗತೊಡಗಿತ್ತು.
           ಇರುವೆಗಳು ಕಚ್ಚುವುದು ಜಾಸ್ತಿಯಾದಂತೆ ಬಾಬು ಅರಚಿಕೊಳ್ಳಲು ಆರಂಭಿಸಿದ. ಈ ನಡು ನಡುವೆ ಪ್ರದೀಪ ಬಾಬುವಿನ ದಂಧೆಯ ಬಗ್ಗೆ ಬಾಯಿ ಬಿಡುವಂತೆ ಹೇಳುತ್ತಲೇ ಇದ್ದ. ಅಷ್ಟರಲ್ಲಿ ವಿನಾಯಕ ಓಡಿ ಹೋಗಿ ಅದ್ಯಾವುದೋ ಸಳ್ಳೆ ಮರಕ್ಕೆ ಗೂಡು ಕಟ್ಟಿಕೊಂಡಿದ್ದ ಚೌಳಿ ಕೊಟ್ಟೆಯನ್ನು ತಂದು ಬಾಬುವಿನ ಮೈಮೇಲೆ ಎರಚಿಬಿಟ್ಟಿದ್ದ. ಬಾಬುವಿಗೆ ಕಪ್ಪಿರುವೆಗಳ ದಾಳಿಗೆ ಹೈರಾಣಾಗಿದ್ದವನು ಇದೀಗ ಸೌಳಿಗಳು ಕಚ್ಚುವುದನ್ನು ತಾಳಲಾರದೇ ಹುಯ್ಯಲಿಡಲು ಆರಂಭಿಸಿದ್ದ. ಕೊನೆಗೊಮ್ಮೆ ಹತಾಶನಾದ ಬಾಬು ತನ್ನನ್ನು ಬಿಟ್ಟು ಬಿಡಿ ಎಂದು ಬೇಡಿಕೊಳ್ಳಲು ಆರಂಭಿಸಿದ. ಇಷ್ಟೆಲ್ಲ ಆದರೂ ಪ್ರದೀಪನ ಪ್ರಶ್ನೆಗಳಿಗೆ ಮಾತ್ರ ಬಾಬು ಬಾಯಿ ಬಿಡಲು ಮುಂದಾಗಲಿಲ್ಲ.
          ಪ್ರದೀಪ ತನ್ನ ಕೆಲಸವನ್ನು ಬಿಡಲಿಲ್ಲ. ಹರಿತವಾದ ಚಾಕುವೊಂದನ್ನು ತಂದು ಬಾಬುವಿನ ಕಾಲನ್ನು ಚಕ್ಕನ್ನೆ ಗೀರಿದ. ಇರುವೆಗಳ ದಾಳಿಗೆ ಬಸವಳಿದಿದ್ದ ಬಾಬು ಈಗ ಮಾತ್ರ ಬೆಚ್ಚಿ ಬಿದ್ದಿದ್ದ. ಇರುವೆಗಳು ಪ್ರದೀಪ ಚಾಕಿವಿನಿಂದ ಗೀರಿದ್ದ ಜಾಗಕ್ಕೆ ದಾಳಿ ಮಾಡಿ ರಕ್ತ ಹೀರಲು ಆರಂಭಿಸಿದ್ದವು. ಪ್ರದೀಪ ಚಾಕಿವಿನಿಂದ ಇನ್ನೊಂದೆರಡು ಗೀರುಗಳನ್ನು ಮಾಡಿದ. ಗಾಯಕ್ಕೆ ಇರುವೆಗಳು ದಾಳಿ ಮಾಡುವುದೂ ಜಾಸ್ತಿಯಾದವು. ಕೊನೆಗೊಮ್ಮೆ ಬಾಬು `ಸಾಕು ನನ್ನುನ್ನು ಬಿಟ್ಟು ಬಿಡಿ.. ನಿಜ ಹೇಳ್ತೇನೆ..' ಎಂದು ಕೂಗಿಕೊಂಡ. ವಿಕ್ರಮ ಮರದ ಹಿಂದೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ್ದ. ಬಾಬು ಒಮ್ಮೆ ಥಕಥೈ ಎಂದು ಕುಣಿದು ಕುಪ್ಪಳಿಸಿ ಮೈಮೇಲೆ ಮುತ್ತಿಕೊಂಡಿದ್ದ ಇರುವೆಗಳನ್ನು ಕೊಡವಿಕೊಳ್ಳಲು ಆರಂಭಿಸಿದ್ದ.
            `ಈಗ್ಲಾದರೂ ಹೇಳು. ಇಲ್ಲವಾದರೆ ಮತ್ತೆ ಈ ಶಿಕ್ಷೆಯನ್ನು ಪುನರಾವರ್ತನೆ ಮಾಡಲಾಗುತ್ತದೆ..' ಕಂಚಿನ ಕಂಠದಲ್ಲಿ ಪ್ರದೀಪ ಹೇಳಿದ್ದ. ಬಾಬುವಿಗೆ ಮತ್ತೆ ನರಕ ದರ್ಶನ ಮಾಡುವುದು ಬೇಕಿರಲಿಲ್ಲ. ಹೇಳ್ತೇನೆ ಎಂದವನೇ ಪ್ರವರವನ್ನು ಹೇಳಿಕೊಳ್ಳಲು ಮುಂದಾಗಿದ್ದ. ಬಾಬು ಹೇಳುತ್ತಿದ್ದ ವಿವರಗಳನ್ನು ಕೇಳುತ್ತಿದ್ದಂತೆ ಮಲೆನಾಡಿನಲ್ಲಿ ಹಬ್ಬಿದ್ದ ಕತ್ತಲ ಲೋಕದ ಬೇರುಗಳು ನಿಧಾನವಾಗಿ ಬಿಚ್ಚಿಕೊಳ್ಳಲು ಆರಂಭವಾಗಿದ್ದವು. ಕಾಡಿನ ಉತ್ಪನ್ನಗಳನ್ನು ಕದ್ದು ಮಾರಾಟ ಮಾಡುವ ದಂಧೆ, ಮರಗಳ್ಳತನ, ಸ್ಮಗ್ಲಿಂಗ್, ಕಾಡಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಯುವುದು ಇತ್ಯಾದಿ ಕರಾಳ ಕಥೆಗಳೆಲ್ಲ ಹೊರಬೇಳಲು ಆರಂಭವಾಗಿದ್ದವು. ಕೇಳುತ್ತಿದ್ದ ಪ್ರದೀಪ, ವಿಕ್ರಮ, ವಿಜೇತಾ, ವಿನಾಯಕ ಹಾಗೂ ಉಳಿದವರ ಮೈಮನಗಳೆಲ್ಲ ರೋಮಾಂಚನಗೊಳ್ಳು ಆರಂಭಗೊಂಡಿದ್ದವು.

(ಮುಂದುವರಿಯುತ್ತದೆ)