Wednesday, October 10, 2018

ಬಾಕ್ಸಿಂಗ್ ರಿಂಗ್ ಗೆ ಇಳಿದ ಚಾಯ್‌ವಾಲಾ

ಭಾರತ ಪ್ರತಿಭಾವಂತ ಕ್ರೀಡಾಪಟುಗಳ ದೇಶ. ಭಾರತದಲ್ಲಿ ಎಲ್ಲಿ ಯಾವ ಪ್ರತಿಭೆಯನ್ನು ಹೊಂದಿರುವ ಕ್ರೀಡಾಪಟುಗಳಿದ್ದಾರೆ ಎನ್ನುವುದು ಕಷ್ಟ. ಕೂಲಿ ಕಾರ್ಮಿಕನ ಮಗಳು, ಪಿಡಬ್ಲುಡಿ ಕೆಲಸಗಾರನ ಮಗ, ದನ ಕಾಯುವವ, ಮಾರುಕಟ್ಟೆಯಲ್ಲಿ ಮೂಟೆ ಎಸೆಯುವವ ಹೀಗೆ ಹಲವರು ತಮ್ಮ ಛಲ, ಶ್ರಮದಿಂದಾಗಿ ವಿವಿಧ  ಕ್ರೀಡೆಗಳಲ್ಲಿ ಪಾಲ್ಗೊೊಂಡು ದೇಶಕ್ಕೆ ಪದಕಗಳನ್ನೇ ಗೆದ್ದುಕೊಡುತ್ತಿದ್ದಾರೆ. ಅಂತಹ ಸಾಲಿಗೆ ಇನ್ನೋರ್ವ ಸೇರ್ಪಡೆಯಾಗಿದ್ದಾನೆ. ಅವನೇ ರಾಜೇಶಕುಮಾರ್ ಕಸಾನಾ.
ರಾಜೇಶ ಕುಮಾರ್ ಕಸಾನಾ ಪ್ರಸ್ತುತ ಬಾಕ್ಸಿಂಗ್ ರಿಂಗ್‌ನಲ್ಲಿ ಸದ್ದು ಮಾಡುತ್ತಿರುವ ಕ್ರೀಡಾಪಟು. ದೇಶದ ನಂಬರ್ 1ವೃತ್ತಿಪರ ಬಾಕ್ಸರ್ ಎಂದು ಕರೆಸಿಕೊಂಡಿರುವಾತ. ಇಂತಹ ಕ್ರೀಡಾಪಟು ಚಹಾ ಮಾರಾಟ ಮಾಡಿ, ಬಾಕ್ಸಿಂಗ್ ರಿಂಗ್‌ನಲ್ಲಿ ಪ್ರತಿಭೆ  ಪ್ರದರ್ಶನ ಮಾಡುತ್ತಿದ್ದ ಎನ್ನುವುದು ಅಚ್ಚರಿಯಾದರೂ ಸತ್ಯ.
ಹರಿಯಾಣದ ಬಿವಾನಿಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಚಹಾ ಮಾರುವ ರಾಜೇಶ್, ವೃತ್ತಿಪರ ಬಾಕ್ಸಿಂಗ್ನಲ್ಲಿ ಮಿಂಚು ಹಡಿಸಿದ್ದಾರೆ. ಓಲಿಂಪಿಕ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಅವರನ್ನು ಮಾದರಿಯಾಗಿ ಇರಿಸಿಕೊಂಡು ಅವರ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.
ತಮ್ಮ ಊರಿನಲ್ಲಿ ಎಲ್ಲರ ಪಾಲಿಗೆ ಅಕ್ಕರೆಯಿಂದ ಲುಕಾ ಎಂದು ಕರೆಸಿಕೊಳ್ಳುವ ರಾಜೇಶ್ ಸಹೋದರನ ಜೊತೆಗೆ ಟೀ ಅಂಗಡಿಯನ್ನು ನಡೆಸಿಕೊಳ್ಳುತ್ತಿದ್ದಾರೆ. ಮುಂಜಾನೆ ಐದು ಎಂಟೆಗೆ ಎದ್ದು ಚಹಾ ಮಾರಾಟ ಆರಂಭಿಸುವ ರಾಜೇಶ್ ಮದ್ಯಾಹ್ನ 1ರ ವರೆಗೂ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಾರೆ. ಮದ್ಯಾಹ್ನ ಊಟ-ವಿಶ್ರಾಾಂತಿಯ ಬಳಿಕ ಸಂಜೆ 6ರ ಹೊತ್ತಿಗೆ ಬಾಕ್ಸಿಂಗ್ ಅಭ್ಯಾಸ ಕ್ಕೆ  ತೆರಳುತ್ತಾರೆ.
10 ರೂಪಾಯಿಗೆ ಚಹಾ ಮಾರಾಟ ಮಾಡುವ ಕಸಾನಾ, ಈ ಮೂಲಕವೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಬಾಕ್ಸರ್ ಆಗಬೇಕು ಎನ್ನುವುದು ಅಪ್ಪನ ಕನಸು. ಈ ಕನಸ್ನು ನನಸಾಗಿಸಲು ಹೊರಟಿದ್ದಾಾರೆ ಕಸಾನಾ. ಎಷ್ಟೇ ಕಷ್ಟ ಬಂದರೂ ಅಪ್ಪನ ಕನಸು ನನಸು ಮಾಡುವ ಛಲ ರಾಜೇಶ್ ಕಸಾನಾದು.
 2015ರಲ್ಲಿ ಮೊದಲ ಬಾರಿಗೆ ವೃತ್ತಿಪರ ಬಾಕ್ಸಿಂಗ್ ರಿಂಗಿಗೆ ಇಳಿದ ರಾಜೇಶ್, ಮನ್‌ಪ್ರೀತ್ ಸಿಂಗ್‌ರನ್ನು ಮಣಿಸಿದ್ದರು. ಆ ಬಳಿಕ 10 ಸ್ಪರ್ಧೆಗಳಲ್ಲಿ 9 ಬಾರಿ ಗೆಲುವು ದಾಖಲಿಸಿದ್ದಾರೆ. ಇನ್ನೊೊಂದು ಪಂದ್ಯ ಡ್ರಾ ಆಗಿದೆ.
ಲೈಟ್‌ವೇಟ್ ವೃತ್ತಿಪರ ಬಾಕ್ಸಿಂಗ್ನಲ್ಲಿ ದೇಶದಲ್ಲೇ ನಂ.1 ಪಟ್ಟ ಎನಿಸಿಕೊಂಡಿದ್ದು, ವಿಶ್ವ ವೃತ್ತಿಪರ ಬಾಕ್ಸಿಂಗ್ ಲೈಟ್‌ವೇಟ್ ಶ್ರೇಯಾಂಕದಲ್ಲಿ 221ನೇ ಸ್ಥಾನದಲ್ಲಿದ್ದಾರೆ. 24ರ ಹರೆಯದ ರಾಜೇಶ್‌ರ ಅಪ್ಪ ಚಾಲಕರಾಗಿದ್ದರು. ಆದರೆ ಕ್ಯಾನ್ಸರ್‌ಗೆ ಬಲಿಯಾದರು. ಸೋದರಿಗೂ ಕ್ಯಾನ್ಸರ್ ತಗುಲಿದ್ದರಿಂದ 2011ರಲ್ಲಿ ಆಸ್ತಿಯನ್ನು ಮಾರಾಟ ಮಾಡಬೇಕಾಯಿತು. 2013ರಲ್ಲಿ ಸೋದರಿ ಕೂಡಾ ಇಹಲೋಕ ತ್ಯಜಿಸಿದರು.
ಶಾಲಾ ಕಲಿಕೆ ಸಂದರ್ಭದಲ್ಲಿ  ಅಪ್ಪನನ್ನು ಕಳೆದುಕೊಂಡೆ. ಅವರ ಮರಣಾನಂತರ ನಾನು ಶಾಲೆ ಬಿಟ್ಟು ಡ್ರೈವರ್ ಆಗಿ ದುಡಿದೆ. ಆದರೆ ನಾನು ಅಂದುಕೊಂಡಂತೆ ನಡೆಯದ ಕಾರಣ ಇದೀಗ ಟೀ ಶಾಪ್ ನಡೆಸುತ್ತಿದ್ದೇನೆ ಎನ್ನುವುದು ರಾಜೇಶ್ ಮನದಾಳದ ಮಾತು.
ಇಂತಹ ರಾಜೇಶ್ ಬೆನ್ನಿಗೆ ರಾಯಲ್ ಸ್ಪೋರ್ಟ್‌ಸ್‌ ಪ್ರೊಮೊಕ್ಷ್ಸ್ ನಿಂತಿದೆ.
2016ರಲ್ಲಿ ದಿಲ್ಲಿಯ ಜ್ಯಾಗರಾಜ್ ಸ್ಟೇಡಿಯಂನಲ್ಲಿ ವಿಜೆಂದರ್ ಎಂಟನೇ ಬಾರಿಗೆ ವೃತ್ತಿಪರ ಸ್ಪರ್ಧೆ  ಗೆದ್ದಾಗ ಅವರ ಹೋರಾಟವನ್ನು ನಾನು ನಿಕಟವಾಗಿ ವೀಕ್ಷಿಸಿದ್ದೆ. ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ನನಗೂ ಸಿಕ್ಕಿತು. ಆದರೆ ಅವರ ಜತೆ ಮಾರ್ಗದರ್ಶನ ಪಡೆಯುವ ಅವಕಾಶ ಸಿಕ್ಕಿಲ್ಲ ಎಂದು ರಾಜೇಶ್ ಹೇಳಿದ್ದಾಾರೆ.
ಭಾರತದಲ್ಲಿ ಇಂತಹ ಪ್ರತಿಭೆಗಳು ಸಾಕಷ್ಟಿವೆ. ಆದರೆ ಇಂತಹ ಪ್ರತಿಭೆಗಳಿಗೆ ನೀರೆರೆದು ಪೋಷಿಸುವವರ ಸಂಕ್ಯೆ ಹೆಚ್ಚಳವಾಗಬೇಕಿದೆ. ಸ್ವಲ್ಪ ಸಹಾಯ ಮಾಡಿ, ಬೆನ್ನಿಿಗೆ ನಿಂತರೆ ವಿಶ್ವವೇ ಬೆರಗಾಗುವಂತಹ ಲಿತಾಂಶ ನೀಡಲು ಭಾರತದ ರ್ಸ್ಪಗಳು ಸಿದ್ಧರಿದ್ದಾಾರೆ. ಪ್ರತಿಭೆಗಳ ಖನಿಯಾಗಿರುವ ಆಟಗಾರರ ಬೆನ್ನುತಟ್ಟುವ ಕೆಲಸ ಎಲ್ಲೆಡೆ ಆಗಬೇಕಾಗಿದೆ.

Monday, October 8, 2018

ಅನುರಕ್ತ (ಕಥೆ ಭಾಗ-೧)

`ಸಂಜಯ ನಿಂಗೆ ನಾನು ನಮ್ಮ ಕಾಲೇಜು ಬದುಕು ಮುಗಿದ ನಂತರ ಹೈದರಾಬಾದ್ ನಲ್ ಇದ್ದಿದ್ದು ಗೊತ್ತಿದ್ದು ಅಲ್ದಾ?' ಎಂದು ನಾನು ಕೇಳಿದ್ದೆ. `ಹೌದೋ ಮಾರಾಯಾ.. ಅದ್ಯಾವ್ದೋ ಎಂಎನ್ಸಿಲಿ ಕೆಲಸ ಸಿಕ್ಕಿದ್ದು ಹೇಳಿ ಒಂದೋ ಎರಡೋ ವರ್ಷ ಇದ್ದಿದ್ದೆ ಅಲ್ದನಾ..' ಸಂಜಯ ಹೇಳಿದ್ದ.
`ಹೌದು.. ಎರಡು ವರ್ಷ ಇದ್ದೆ. ಅದಾಗಿ ಹತ್ತು ವರ್ಷವೇ ಕಳೆದು ಹೋಯ್ತು ನೋಡು..' ಅಂದೆ. ಸಂಜಯ ತಲೆ ಅಲ್ಲಾಡಿಸಿದ್ದ.
ನಮ್ಮ ಕಾಲೇಜು ಬದುಕು ಮುಗಿಸಿ ಅನಾಮತ್ತು 13-14 ವರ್ಷಗಳು ಕಳೆದ ಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಸಂಜಯನಿಗೆ ನಾನು ಪೋನಾಯಿಸಿದ್ದೆ. ಆಗೀಗ ಪೋನ್ ಮುಖಾಂತರ ನಮ್ಮ ನಿರಂತರ ಸಂಭಾಷಣೆ ಇತ್ತಾದರೂ, ಈಗಿತ್ತಲಾಗಿ ಅದು ಕಡಿಮೆಯೇ ಆಗಿ ಹೋಗಿತ್ತು. ಅಪರೂಪದಲ್ಲಿ ಅಪರೂಪ ಎನ್ನುವಂತೆ ನಾನು ಪೋನ್ ಮಾಡಿದ್ದ ಸಂದರ್ಭದಲ್ಲಿ ಖಾಸಾ ಮಿತ್ರ ಸಂಜಯ ಖುಷಿ ಪಟ್ಟುಕೊಂಡೇ ಪೋನ್ ಎತ್ತಿದ್ದ.
ಆತನ ಬಳಿ ನಾನು `ಕೂಡಲೇ ಹೊರಟು ಬೆಂಗಳೂರಿಗೆ ಬಾ.. ಅಸ್ಸಾಂಗೆ ಹೋಗೋದಿದೆ. ಕನಿಷ್ಟ 15 ದಿನದ ಪಯಣ. ನಿನಗೆ ಸೀಟ್ ಬುಕ್ ಮಾಡಿದ್ದೇನೆ ಎಂದಿದ್ದೆ. ಇದ್ದಕ್ಕಿದ್ದಂತೆ ಅಸ್ಸಾಂಗೆ ಹೋಗೋಣ ಬಾ ಎಂದು ನಾನು ಹೇಳಿದ್ದನ್ನು ಕೇಳಿ ಹೌಹಾರಿದ ಮಿತ್ರ ಮೊದಲಿಗೆ ಆಗೋದಿಲ್ಲ ಎಂದನಾದರೂ ಕೊನೆಗೆ ನನ್ನ ಬೇಡಿಕೆಗೆ, ಒತ್ತಾಯಕ್ಕೆ ಒಪ್ಪಿಕೊಂಡು ಬಂದಿದ್ದ.
ಯಶವಂತಪುರದಿಂದ ಅಸ್ಸಾಂನ ದಿಬ್ರುಘಡ ನಿಲ್ದಾಣ ತಲುಪುವ ಕಾಮಾಖ್ಯಾ ಎಕ್ಸ್ ಪ್ರೆಸ್ ರೈಲು ಮೂರನೇ ಸಾರಿ ಕೂಗುವ ವೇಳೆಗಾಗಲೇ ನಾನು ಸಂಜಯ ನಮ್ಮ ಸೀಟಿನಲ್ಲಿ ಕುಳಿತು ಹರಟೆಯನ್ನು ಕೊಚ್ಚಲು ಆರಂಭಿಸಿದ್ದೆವು. ಅಜಮಾಸು ಮೂರೂವರೆ ಸಹಸ್ರ ಕಿಲೋಮೀಟರುಗಳ ದೂರದ ಪ್ರಯಾಣ ಆರಂಭವಾಗುವ ವೇಳೆಗಾಗಲೇ ನಾನು ಅಸ್ಸಾಂನಲ್ಲಿ ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ಹೋಗಬೇಕು ಎಂದು ಆಲೋಚಿಸ ಹತ್ತಿದ್ದೆ. ಕರ್ನಾಟಕವನ್ನು ದಾಟಿ, ಆಂಧ್ರದಲ್ಲಿ ಹಾದು, ಒಡಿಶಾವನ್ನು ತಲುಪಿ ಅಲ್ಲಿಂದಾಚೆಗೆ ಪಶ್ಚಿಮ ಬಂಗಾಳದಲ್ಲೆಲ್ಲ ಸುತ್ತಾಡಿದ ರೈಲು ಸೀದಾ ಸಿಲಿಗುರಿಯ ಮೂಲಕ ಅಸ್ಸಾಂ ಕಡೆಗೆ ಚುಕು ಬುಕು ಎನ್ನುತ್ತಿತ್ತು. ಸುದೀರ್ಘ ಪಯಣ ಅದು. ಮೂರು ದಿನಗಳ ಕಾಲ ಸಹನೆಯಿಂದ ಸಹಿಸಿಕೊಳ್ಳಬೇಕೆಂಬಂತಹ ಪಯಣ.
`ಅಲ್ದೋ ಮಾರಾಯಾ... ಯಾವ್ದೋ ಫ್ಲೈಟ್ ಬುಕ್ ಮಾಡ್ಕಂಡು ಹೋಗಿದ್ರೆ ಮೂರ್ನಾಲ್ಕು ತಾಸಲ್ಲಿ ಅಸ್ಸಾಂಗೆ ಹೋಗ್ಲಕ್ಕಾಗಿತ್ತಲಾ...' ಎಂದು ಸಂಜಯ ಹೇಳಿದ್ದ.
`ನಿಂಗೊತ್ತಿದ್ದಲಾ.. ಬೇರೆ ಬೇರೆ ಪ್ರದೇಶಗಳನ್ನ ನೋಡೋದು ಅಂದ್ರೆ ನಂಗಿಷ್ಟ ಅಂತ.. ರೈಲಲ್ಲು ಹೋದ್ರೆ ಸಮಯ ಹೆಚ್ಚಾದ್ರೂ ಅಡ್ಡಿಲ್ಲೆ, ಬೇರೆ ಬೇರೆ ರಾಜ್ಯ, ಅಲ್ಲಿನ ಜನರನ್ನು ನೋಡ್ಲಕ್ಕು ಅಂತ ಈ ಥರ ಮಾಡಿದ್ದಿ ನೋಡು.. ಈ ಭಾರತೀಯ ರೈಲು ಅನ್ನೋದು ಸಾವಿರ ಸಂಸ್ಕೃತಿಗಳ ಸಂಗಮ. ಇದರಲ್ಲಿ ಸಿಗೋ ಮಜಾ ವಿಮಾನದಲ್ಲಿ ಸಿಕ್ತಿಲ್ಲೆ..' ಎಂದಿದ್ದಕ್ಕೆ ಸಂಜಯ ತಲೆಯಾಡಿಸಿ ಕಿರುನಗೆ ಸೂಸಿದ್ದ.
`ನೀ ಏನೋ ಇದ್ದಕ್ಕಿದ್ದಂತೆ ಪೋನ್ ಮಾಡ್ಕಂಡ ಬಾ ಅಂದೆ.. ಆನು ಹೇಳಿದ್ನಿಲ್ಲೆ ಕೇಳಿದ್ನಿಲ್ಲೆ ಬಂದ್ ಬಿಟ್ಟಿ... ಅಸ್ಸಾಂಗೆ ಹೋಪದು ಹೇಳಿ ಅಷ್ಟೇ ನೀ ಹೇಳಿದ್ದು... ಆನಂತೂ ಎಲ್ಲಿಗ್ ಹೋಪದು, ಎಂತಕ್ಕೆ ಏನೂ ಕೇಳದ್ದೇ ಹೊಂಟಿದ್ದಿ ನೋಡು... ಕೊನೆಕೊಯ್ಲು ಮುಗದ್ದು, ಅಡಕೆ ಸೊಲಿಯಲೆ ಜನ ಬಂಜ.. ದನ ಬೇರೆ ಕರಾ ಹಾಕಿದ್ದು. ಆದರೂ ನಾನು ನೀ ಹೇಳಿದ್ದೆ ಹೇಳಿ ಸಿಕ್ಕಿದ್ ಬಸ್ ಹತ್ಕಂಡು ಬಂಜಿ ನೋಡು.. ಏನ್ ನಿನ್ ಕಥೆ.. ಎಂತಕ್ ಅಸ್ಸಾಂಗೆ ಹೊಮಟಾಜು ಎಂತತದೂ ಅಂತ್-ಪಾರ್ ಹರಿತಾ ಇಲ್ಲೆ ನಂಗೆ.. ಈಗಾದ್ರೂ ಹೇಳು ಮಾರಾಯಾ.. ನಾವ್ ಎಂತಕ್ ಅಲ್ಲಿಗೆ ಹೊಂಟಾಜು? ನೀ ಬೇರೆ ಒಬ್ನೆ ಹೊಂಟಿದ್ದೆ. ನಿನ್ ಹೆಂಡ್ತಿನ ಮನೆಲ್ ಬಿಟ್ಟಿಕ್ ಬಂಜ್ಯಾ?' ಎಂದು ಸಂಜಯ ಒಂದೇ ಉಸುರಿಗೆ ಮಾತನಾಡುತ್ತಿದ್ದ. ಅವನ ಪ್ರಶ್ನೆಗಳ ಸುರಿಮಳೆಗೆ ಎದುರಾಗಿ ನಾನು, ಯಾವುದಕ್ಕೆ ಮೊದಲು ಉತ್ತರ ಹೇಳಲಿ ಎಂದು ಆಲೋಚಿಸುತ್ತಿದ್ದ ವೇಳೆಗಾಗೇ ನಮ್ಮನ್ನು ಹೊತ್ತಿದ್ದ ಕಾಮಾಕ್ಯ ಎಕ್ಸ್ ಪ್ರೆಸ್ ರೈಲು ದಿಬ್ರುಘಡತ್ತ ಮುಖ ಮಾಡಲು ಧಡ ಧಡ ಎನ್ನುತ್ತಿತ್ತು. ಸಂಜಯ ತನ್ನ ಕಾರ್ಯ ಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ಬಂದಿದ್ದ. ನನ್ನ ಮನಸ್ಸು ಹಸಿಯಾಗಿತ್ತು.
`ನೋಡು ಸಂಜು... ನಾವ್ ಅಸ್ಸಾಂಗೆ ಹೋಗವು ಅಂತಾದ್ರೆ ಮೂರು ದಿನ ಪ್ರಯಾಣ ಮಾಡವು.. ಅಷ್ಟರಲ್ಲಿ ನಿಂಗೆ ಹೇಳದ್ದೇ ಇರ್ತ್ನನಾ...' ಎಂದೆ..
`ಹು.. ಮೂರು ದಿನದ ವರೆಗೆ ಹೇಳುವಂತಹ ಕಥೆಯನೋ ನಿಂದು...ಅಷ್ಟೆಲ್ಲ ಉದ್ದ ಹೇಳಡ ಮಾರಾಯಾ. ಕಥೆ ಸಣ್ಣ ಇರ್ಲಿ ಮಾರಾಯಾ.. ಉದ್ದ ಆದ್ರೆ ಬ್ಯಾಸರ ಬಂದೋಗ್ಲಕ್ಕು ನೋಡು..' ಸಂಜಯ ಹೌಹಾರಿದಂತೆ ಕೇಳಿದ್ದ. ಕಣ್ಣು ಮಿಟುಕಿಸಿ ಹೇಳಿದ್ದ. ಅವನ ಮಾತಿನಲ್ಲಿ ತಮಾಷೆ ಎದ್ದು ಕಾಣಿಸಿತ್ತು. ನಾನು ಹಿತವಾಗಿ ನಕ್ಕಿದ್ದೆ.
`ಹಂಗೆಂತದ್ದೂ ಇಲ್ಲೆ ಮಾರಾಯಾ.. ಸರಿಯಾಗ್ ಹೇಳಿದ್ರೆ ಅರ್ಧಗಂಟೆಲ್ ಯನ್ ಕಥೆ ಮುಗಿದು ಹೋಗ್ತು.. ಇನ್ನು ಕಥೆ ಎಳಿಯವು ಹೇಳಾದ್ರೆ ಮೂರು ದಿನದವರೆಗೂ ಮಾಡ್ತಿ ನೋಡು..' ಎಂದೆ ನಾನೂ ಅಷ್ಟೇ ತಮಾಷೆಯಿಂದ.
ತಲೆ ಅಲ್ಲಾಡಿಸಿ ಹೌದೆಂದು ಒಪ್ಪಿಕೊಂಡಿದ್ದ ಸಂಜಯ `ಮೂರ್ ದಿನ ಎಲ್ಲ ಬ್ಯಾಡ ಮಾರಾಯಾ.. ಚಿಕ್ಕದಾಗಿ ಹೇಳು... ಎಂತಕ್ ಹೋಗ್ತಾ ಇದ್ದಾಜು ಹೇಳಿ... ' ಅಂದಿದ್ದ. ಧಾರಾವಾಹಿಯಂತೆ ನಾನು ಕಥೆ ಎಳೆಯುವಲ್ಲಿ ಶೂರ ಎನ್ನುವುದು ಅವನಿಗೆ ಗೊತ್ತಿತ್ತಾದ್ದರಿಂದ ಮೊದಲೇ ಆತ ಅದಕ್ಕೆ ತಡೆ ಒಡ್ಡಿಬಿಟ್ಟಿದ್ದ.
ನಾನು ಹುಂ ಅಂದವನೇ ಹೋಗುವ ಕಾರಣ ಶುರು ಹಚ್ಚಿಕೊಂಡಿದ್ದೆ. ನಮ್ಮ ಪಯಣ ಶುರುವಾಗಿತ್ತು.
ಬದುಕಲ್ಲಿ ನೂರಾರು ತಿರುವುಗಳು ಸದಾ ಇರುತ್ತವೆ. ಇಂತಹ ತಿರುವು ನನ್ನ ಬದುಕಲ್ಲೂ ಇತ್ತು. ಅದಕ್ಕೆ ತಕ್ಕಂತೆ ಹಲವಾರು ಘಟನೆಗೂ ಜರುಗಿದ್ದವು. ಇದೀಗ ನಾನು ಅಂತಹದೇ ಒಂದು ತಿರುವಿನಿಂದ ಸುದೀರ್ಘ ಪಯಣ ಶುರುಹಚ್ಚಿಕೊಂಡಿದ್ದೆ.
ಎಲ್ಲಿಯ ಅಸ್ಸಾಮು? ಎಲ್ಲಿಯ ನಮ್ಮೂರು.. ಒಂದಕ್ಕೊಂದು ಉತ್ತರ ದಕ್ಷಿಣದಂತೆ..

***

`ಸಂಜಯ.. ನಾನೂ ನೀನೂ ಡಿಗ್ರಿ ಮುಗ್ಸಿದ್ದರ ತನಕ ನಿಂಗೆ ನನ್ನ ಅಂತರಂಗ ಸಂಪೂರ್ಣ ಗೊತ್ತಿದ್ದು. ಆ ದಿನಗಳ ನಮ್ಮ ಬದುಕು, ಬವಣೆ, ಒದ್ದಾಟ ಇತ್ಯಾದಿಗಳಿಗೆಲ್ಲ ನೀನು ಪ್ರತ್ಯಕ್ಷದರ್ಶಿ. ನಮ್ಮ ಡಿಗ್ರಿ ಬದುಕು ಮುಗಿದ ತಕ್ಷಣ ನೀ ಏನೋ ಕೃಷಿ ಮಾಡ್ತಿ ಅಂತ ಊರಲ್ಲೇ ಉಳಕಂಡೆ. ಜೊತೆಗೆ ಲಾ ಓದವು ಅಂತ ಹೇಳಿ ಶಿರಸಿ ಕಾಲೇಜಲ್ಲಿ ಸೇರಿದ್ದೂ ತಿಳದಿತ್ತು. ನಂಗೆ ಮುಂದೆಂತ ಮಾಡವು ಅಂತ ಗೊತ್ತಾಗಿತ್ತಿಲ್ಲೆ. ಅದೇ ಟೈಮಲ್ಲಿ ನಂಗೆ ಎಂಬಿಎ ಸೀಟು ಸಿಕ್ಕಿತ್ತು. ಬೆಂಗಳೂರಿನ ಕಾಲೇಜೊಂದರಲ್ಲಿ ಓದಲು ಅವಕಾಶ ಸಿಕ್ಕಿತ್ತು. ಹಂಗಾಗಿ ನಾನು ಬೆಂಗಳೂರಿಗೆ ಬರೋದು ಅನಿವಾರ್ಯವೂ ಆಗಿತ್ತು..ಡಿಗ್ರಿ ಮುಗಿದ ತಕ್ಷಣವೇ ನಾನು ಬೆಂಗಳೂರಿಗೆ ಬಸ್ಸು ಹತ್ತಿದ್ದೆ..'
`ವಿನಿ... ಇದೆಲ್ಲ ಗೊತ್ತಿದ್ದದ್ದೇಯಾ ಮಾರಾಯಾ... ಆದರೆ ಆಮೇಲಿನ ಸಂಗತಿಗಳು ನಂಗೆ ಅಷ್ಟಾಗಿ ಗೊತ್ತಿಲ್ಲೆ ನೋಡು... ನೀನೂ ಹೇಳ್ಕಂಜಿಲ್ಲೆ.. ನಾನೂ ಕೇಳಿದ್ನಿಲ್ಲೆ..' ಎಂದ ಸಂಜಯ.
`ಹುಂ..'ಎಂದ ನಾನು ನಿಧಾನವಾಗಿ ನನ್ನ ಕಥೆಯನ್ನು ಹೇಳಲು ಶುರುಹಚ್ಚಿಕೊಂಡಿದ್ದೆ.
`ಎಂಬಿಎಗಾಗಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಓದಲು ಬಂದೆ. ಓದಿಗಾಗಿ ಬಂದವನು ಬೆಂಗಳೂರಿನ ಥಳುಕಿಗೆ, ಬಳುಕಿಗೆ ಹೊಂದಿಕೊಳ್ಳಲಾಗದೇ ತತ್ತರಿಸಿದೆ. ವೇಗ, ಧಾವಂತ, ಓಟಕ್ಕೆ ಸರಿಸಮನಾಗಿ ಓಡಲು, ಮುನ್ನುಗ್ಗಲು ಸಾಧ್ಯವಾಗದೇ ಎಡವುವ ಹಂತವೂ ಬಂದು ತಲುಪಿತು. ಎಕ್ಸಾಮುಗಳಲ್ಲಂತೂ ಪಾಸಾಗುವ ವರೆಗೆ ಸಾಕೋಬೇಕೋ ಆಗಿಹೋಗುವ ಹಂತವೂ ತಲುಪಿತು ಬಿಡು. ಇಂಗ್ಲೀಷು ನನ್ನ ಪಾಲಿಗೆ ಕಬ್ಬಿಣದ ಕಡಲೆಯೇ ಆಗಿತ್ತು. ಆದರೆ ಕಾಲೇಜುಗಳಲ್ಲಿ ಮಾಡುತ್ತಿದ್ದ ಕನ್ನಡ ಮಾತಾಡುವ ಸ್ಪರ್ಧೆಗಳಲ್ಲಿ ನಾನೇ ಮುಂದಿರುತ್ತಿದ್ದೆ. ಎಂತ ಚಂದ ಕನ್ನಡ ಮಾತಾಡ್ತಾನೆ ಮಾರಾಯಾ ಇವ್ನು ಅನ್ನುವಷ್ಟರ ವರೆಗೆ...'
`ಆಮೇಲೆ..'
`ಇದೇನೋ ಸಾಗುತ್ತಿತ್ತು. ಆದರೆ ಓದಿನಲ್ಲಿ ಹಿಂದೆ ಬಿದ್ದಿದ್ದೆ. ಆ ದಿನಗಳಲ್ಲೇ ನನಗೆ ಪರಿಚಯ ಆದವಳು ವಿದ್ಯುಲ್ಲತಾ. ಅಸ್ಸಾಮಿನವಳು.. ಇದೋ.. ಇದೀಗ ಅವಳನ್ನೇ ಹುಡುಕಿ ಹೊರಟಿದ್ದೇನೆ.. ನಿನ್ನನ್ನೂ ಕರ್ಕೊಂಡು...' ಎಂದೆ.
`ಒಹೋ... ' ಎಂದ ಸಂಜಯ ಒಮ್ಮೆ ಅಚ್ಚರಿ ಪಟ್ಟುಕೊಂಡ. `ನಿನ್ನ ಹೆಂಡತಿಗೆ ಗೊತ್ತಾ...' ಕೀಟಲೆಯ ಧ್ವನಿಯಲ್ಲಿ ಕೇಳಿದ ಸಂಜಯ. ಇದಕ್ಕೆ ನಾನು ಉತ್ತರಿಸಲಿಲ್ಲ.
`ವಿದ್ಯುಲ್ಲತಾ ಎಂಬ ಹೆರಿನಲ್ಲೇ ಕ್ರಿಯಾಶೀಲತೆ ಇತ್ತು. ಚೈತನ್ಯವಿತ್ತು. ಆಕೆ ತೀರಾ ಸುಂದರಿಯಾಗಿರಲಿಲ್ಲ. ಹಾಗಂತ ಆಕೆ ತೀರಾ ಕಳಪೆಯೇನೂ ಆಗಿರಲಿಲ್ಲ. ಅಸ್ಸಾಮಿ ಹುಡುಗಿಯರಲ್ಲಿನ ವಿಶೇಷ ಆಕರ್ಷಣೆ ಅವಳಲ್ಲಿತ್ತು. ಬೆಳ್ಳಗಿನ ಅವಳ ಮುಖ.. ಹಣೆಯಲ್ಲಿ ಬೊಟ್ಟು ಇಲ್ಲದಿದ್ದರೂ, ಖಾಲಿ ಖಾಲಿಯಾಗಿದ್ದರೂ ಒಮ್ಮೆಗೆ ಸೆಳೆಯಬಲ್ಲ ಆಕೆಯ ಹಣೆ, ವಿಶಿಷ್ಟವಾದ ಕಪ್ಪು ಕಣ್ಣುಗಳು, ತುರುಬನ್ನು ಎತ್ತಿ ಕಟ್ಟುತ್ತಿದ್ದ ಆಕೆಯ ರೂಪ ಈಗಲೂ ನನ್ನ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಒಂದೇ ರೀತಿಯ ಆಸಕ್ತಿಯನ್ನು ಹೊಂದಿರುವವರು ಹತ್ತಿರಕ್ಕೆ ಬರುತ್ತಾರೆ ಎನ್ನುವುದು ಪುರಾಣ ಕಾಲದಿಂದಲೂ ನಿಜವಾದದ್ದೇ. ವಿದ್ಯುಲ್ಲತಾಳಿಗೂ ಅಷ್ಟೇ. ನನ್ನಂತೆಯೇ ಇಂಗ್ಲೀಷು ಕಬ್ಬಿಣದ ಕಡಲೆಯಾಗಿತ್ತು. ಅಸ್ಸಾಮಿ ಭಾಷೆಯಲ್ಲಿ, ಹಿಂದಿಯಲ್ಲಿ ಆಕೆಯದ್ದು ಎತ್ತಿದ ಕೈ. ಆದರೆ ಇಂಗ್ಲೀಷು ಅಂದ ಕೂಡಲೇ ಆಕೆ ಹಿಂದೇಟು ಹಾಕುತ್ತಿದ್ದಳು. ಇಂತದ್ದೇ ಗುಣವನ್ನು ಹೊಂದಿದ್ದ ನನಗೂ , ಆಕೆಗೂ ಪರಿಚಯ ಆಗಲು ಬೇರೆಯ ಕಾರಣಗಳಿರಲಿಲ್ಲ ಬಿಡು. ನನ್ನಂತೆಯೇ ಆಕೆ, ಆಕೆಯಂತೆಯೇ ನಾನು. ಯಾವಾಗಲೋ ಸ್ನೇಹ ಬೆಳೆದಿತ್ತು..'
`ಆಮೇಲೆ..' ಎಂದು ಹೇಳುವ ವೇಳೆಗಾಗಲೇ ರೈಲು ಕರ್ನಾಟಕ ಗಡಿಯನ್ನು ದಾಟಿ ಆಂಧ್ರವನ್ನು ಹಾದು ಮುನ್ನುಗ್ಗುತ್ತಿತ್ತು. ಒಂದಿಬ್ಬರು ಚಾಯ್ ವಾಲಾಗಳು ಚಾಯ್ ಚಾಯ್ ಎನ್ನುತ್ತಲೂ, ಕಾಫಿ ಟಿ ಎನ್ನುತ್ತಲೂ ಸಾಗಿದ್ದರು. ನಾನು ಒಬ್ಬನನ್ನು ಕರೆದು ಇಬ್ಬರಿಗೂ ಚಾಯ್ ತಗೊಂಡು ಕುಳಿತೆ. ಒಂದು ಸಿಪ್ ಸೊರ್... ಎನ್ನುತ್ತಾ ಕುಡಿಯುತ್ತಿರುವಂತೆಯೇ ಸಂಜಯ `ಮುಂದೇನಾಯ್ತು ಹೇಳು ಮಾರಾಯಾ...'ಎಂದ. ಮುಂದುವರಿದ ಆತನೇ `ಪ್ರೀತಿ ಹುಟ್ಟಿತು.. ಅವಳನ್ನು ಹುಡುಕಿ ಹೊರಟಿದ್ದೀಯಾ.. ಇಷ್ಟೇ ಅಲ್ವಾ ನಿನ್ನ ಕಥೆ...' ಎಂದ.
ತಲೆ ಕೊಡವಿದ ನಾನು `ನನ್ನ ಕಥೆಯಲ್ಲಿ ಈ ಅಂಶಗಳೂ ಇದೆ. ಆದರೆ. ಇಷ್ಟೇ ಅಲ್ಲ ನನ್ನ ಕಥೆ. ಇನ್ನೂ ಇದೆ. ಸುಮ್ನೇ ಕೇಳು ಮಾರಾಯಾ..' ಎಂದೆ. ಸಂಜಯ ಸುಮ್ಮನೆ ಚಹಾ ಕುಡಿಯುತ್ತ ನನ್ನ ಮಾತಿಗೆ ಕಿವಿಯಾದ.
`ವಿದ್ಯುಲ್ಲತಾಳ ಸಾನ್ನಿಧ್ಯದಿಂದಲೇ ನನ್ನಲ್ಲಿ ಚೈತನ್ಯ ಸಂಚಾರವಾಗಿತ್ತು. ಹೊಸ ಹುರುಪು ನನ್ನಲ್ಲಿ ಮೂಡಿತ್ತು. ಇಂಗ್ಲೀಷಿನ ಕಡೆಗಿದ್ದ ಕೀಳರಿಮೆ ನನ್ನಲ್ಲಿ ಇದ್ದಕ್ಕಿದ್ದಂತೆ ಮಾಯವಾಗಿದದ್ದವು. ಆಕೆ ಅದೆಷ್ಟು ಕಲಿತಳೋ ಬಿಟ್ಟಳೋ ಗೊತ್ತಾಗಲಿಲ್ಲ. ನಾನಂತೂ ಆಕೆಯ ಜತೆಯಲ್ಲಿಯೇ ನನ್ನೊಳಗಿನ ಕೀಳರಿಮೆಯನ್ನು, ಹಿಂದೇಟು ಹಾಕುವಿಕೆಯನ್ನು ಮರೆತು ಹೊಸ ಚೈತನ್ಯವನ್ನು ಪಡೆದುಕೊಂಡಿದ್ದೆ.'
`ನನ್ನ ಬಗ್ಗೆ ಆಕೆ ಅದೆಷ್ಟು ತಿಳಿದುಕೊಂಡಳೋ ಗೊತ್ತಿಲ್ಲ. ಆದರೆ ಆಕೆಯ ಬಗ್ಗೆ ನಾನು ಬಹಳ ತಿಳಿದುಕೊಂಡೆ. ಅವಳು, ಅವಳ ಸಂಸ್ಕೃತಿ, ಆಹಾರ, ಆಚಾರ, ವಿಚಾರ.. ಅಹೋಮರು.. ಬೃಹ್ಮಪುತ್ರಾ ನದಿಯ ಅಘಾದತೆ, ತುಂಬಿ ಹರಿಯುವಾಗಿನ ಬ್ರಹ್ಮಪುತ್ರಾ ನದಿಯ ರುದ್ರ ನರ್ತನ.. ಬಿಹೂ ನೃತ್ಯ.. ಅಸ್ಸಾಮಿ ವಾದ್ಯಗಳು, ಅಸ್ಸಾಮಿನ ವಿಶಿಷ್ಟ ಖಾದ್ಯಗಳ ರುಚಿ ಹತ್ತಿಸಿದ್ದೂ ಇವಳೇ. ಅಸ್ಸಾಮಿನ ಖಾರ್ ಎಂಬ ಸಾಂಪ್ರದಾಯಿಕ ಖಾದ್ಯ, ಜೋಲ್ಪಾನ್, ಪಿಥಾ, ಲಾರು ಮುಂತಾದ ಸ್ನ್ಯಾಕ್ಸ್ ಗಳು, ನರಸಿಂಗ್ ಮೊಸರು ಜೋಲ್, ಮೊಸರ್ ತೆಂಗಾ, ಪುರಾ ಮುಂತಾದ ಹತ್ತಾರು ಆಹಾರಗಳ ರುಚಿ ತೋರಿಸಿದ್ದಲ್ಲದೇ ಕೆಲವನ್ನು ಮಾಡುವ ರೀತಿಯನ್ನು ನನಗೆ ಕಲಿಸಿದ್ದಳು...'
`ಬ್ರಹ್ಮಪುತ್ರಾ ನದಿಯ ಎಡಕ್ಕೆ ಬಹು ದೂರದ ಗುಡ್ಡದ ಗಡಿಯಲ್ಲಿ, ಭೂತಾನಿಗೆ ಹತ್ತಿರದಲ್ಲೆಲ್ಲೋ ಅವಳ ಮನೆ ಇದೆಯಂತೆ. ಎಂದೋ ಒಮ್ಮೆ ಅವಳು ಹೇಳಿದ್ದ ನೆನಪು. ತುಂಬು ಕುಟುಂಬದ ಮನೆ. ಹೊರ ಜಗತ್ತಿನ ಹೆಚ್ಚಿನ ಸೌಲಭ್ಯಗಳು, ಸೌಕರ್ಯಗಳನ್ನು ಕಾಣದ ಮನೆ. ಹಳೆಯ ಸಂಸ್ಕೃತಿಗಳನ್ನು ಉಳಿಸಿಕೊಂಡಂತಹ ಮನೆ ಅವಳದ್ದು. ಅಪ್ಪ, ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು, ಅಮ್ಮ, ಹಿರಿಯಜ್ಜಿ ಹೀಗೆ ಮನೆ ತುಂಬ ಜನವೋ ಜನರು. ಸುಲಭವಾಗಿ ಹೇಳಬೇಕಂದರೆ, ತೆಲುಗು ಸಿನಿಮಾಗಳಲ್ಲಿ ಬರುವ ಅವಿಭಕ್ತ ಕುಟುಂಬಗಳಂತೇ ಅನ್ನಬಹುದು. ಆದರೆ ಇಡೀಯ ಕುಟುಂಬದಲ್ಲಿ ಎಂಬಿಎ ಓದುತ್ತಿರುವವಳು ಅಂದರೆ ವಿದ್ಯುಲ್ಲತಾ ಒಬ್ಬಳೆ ಆಗಿದ್ದಳಂತೆ. ಅವಳ ಕುಟುಂಬದಲ್ಲಿ ಪಿಯುಸಿ, ಡಿಗ್ರಿ ತನಕ ಓದಿದವರು ಹಲವರಿದ್ದರೂ, ಯಾರೊಬ್ಬರೂ ಇನ್ನೂ ಜಾಸ್ತಿ ಓದಿರಲಿಲ್ಲ ಎನ್ನುವುದು ಆಕೆಯಿಂದಲೇ ತಿಳಿದು ಬಂದ ಸಂಗತಿಯಾಗಿತ್ತು.'
'ಆಕೆಯ ಅಪ್ಪ ಮನೆಯ ಯಜಮಾನನಾಗಿದದ್ದ ಕಾರಣವೋ ಏನೋ, ಆಕೆ ಕುಟುಂಬದಲ್ಲಿ ಮುದ್ದಿನಿಂದಲೇ ಬೆಳೆದವಳು. ಅಸ್ಸಾಮಿನಲ್ಲಿ, ಹಿಂದಿಯಲ್ಲಿ.. ಆಕೆಯನ್ನು ಮೀರಿಸುವವರೇ ಇರಲಿಲ್ಲ. ಆದರೆ ಆಕೆಗೆ ಇಂಗ್ಲೀಷು ಮಾತ್ರ ಕಷ್ಟ ಕಷ್ಟ ಎಂಬಂತಾಗಿತ್ತು. ಅದ್ಹೇಗೇಗೋ ಇಂಗ್ಲೀಷಿನಲ್ಲಿ ಬರೆದು, ಪಾಸಾಗಿ ಬೆಂಗಳೂರಿಗೆ ಬರುವಂತಾಗಿದ್ದಳು. ಆಕೆಯ ಮನೆಯಲ್ಲಂತೂ ವಿದ್ಯುಲ್ಲತಾ ಬೆಂಗಳೂರಿಗೆ ಬರುವುದು ಸುತಾರಾಂ ಇಷ್ಟವಿರಲಿಲ್ಲವಂತೆ. ಆದರೂ ಅದ್ಹೇಗೋ ಒತ್ತಾಯ ಮಾಡಿ, ಹರಪೆ ಬಿದ್ದು, ಒಂದೆರಡು ದಿನಗಳ ಕಾಲ ಉಪವಾಸವನ್ನೇ ಕೈಗೊಂಡು ಬಂದಿದ್ದಳಂತೆ. ಬೆಂಗಳೂರಿಗೆ ಬಂದವಳು ಥೇಟು ನನ್ನಂತೆಯೇ.. ಇಲ್ಲಿನ ಧಾವಂತದಲ್ಲಿ ಕಳೆದೇ ಹೋಗುತ್ತೇನೆ, ಹೋಗುತ್ತಿದ್ದೇನೆ ಎನ್ನುವ ಸಂದರ್ಭದಲ್ಲಿ ಆಕೆಗೆ ನಾನು ಜತೆಯಾಗಿದ್ದೆ..'
'ನನಗೆ ಗೊತ್ತೆ ಇಲ್ಲದಂತೆಯೇ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು. ಆಕೆಯ ಮನಸ್ಸಿನಲ್ಲಿಯೂ ಹುಟ್ಟಿತ್ತೇನೋ ಗೊತ್ತಿಲ್ಲ. ಶುಭ ಸಂದರ್ಭದಲ್ಲಿ ಆಕೆ ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಳು. ನನಗೆ ಸ್ವರ್ಗ ಮೂರೇ ಗೇಣಿಗೆ ಕೈಗೆ ಸಿಗುತ್ತದೆ ಎನ್ನುವಷ್ಟು ಸಂಭ್ರಮ..'
'ಆ ದಿನಗಳಲ್ಲಿ ನಾವು ಬೆಂಗಳೂರಿನಲ್ಲಿ ಅಡ್ಡಾಡಿದ ಜಾಗಗಳಿಲ್ಲ ಬಿಡು. ಕಾಲೇಜಿಗೆ ಹೋಗುತ್ತಿದ್ದೆವಾದರೂ ಅದರ ಜತೆ ಜತೆಯಲ್ಲಿಯೇ ನಮ್ಮ ಸುತ್ತಾಟ ಸಾಕಷ್ಟು ನಡೆದಿತ್ತು. ಬೆಂಗಳೂರಿನ ಜ್ಞಾನಭಾರತಿಯ ಅಂಗಣಗಳು, ವಾರಕ್ಕೊಮ್ಮೆ ದೂರದ ಬೆಟ್ಟ ಗುಡ್ಡಗಳಿಗೆ ನಡೆಸುವ ಟ್ರೆಕ್ಕಿಂಗುಗಳು, ಸ್ವಲ್ಪವ ಸಮಯ ಸಿಕ್ಕರೂ, ಕಾಡು, ನದಿ, ನೀರು, ಬೆಟ್ಟ ಎಂದುಕೊಂಡು ಹೊರಟುಬಿಡುತ್ತಿದ್ದೆವು.'
`ನನಗೀಗಲೂ ನೆನಪಿದೆ. ಒಂದು ದಿನ ಆಕೆಯನ್ನು ಮೊಟ್ಟ ಮೊದಲ ಬಾರಿಗೆ ನನ್ನ ರೂಮಿಗೆ ಕರೆತಂದಿದ್ದೆ. ಏನೇ ಪ್ರೀತಿ ಇದ್ದರೂ ಆಕೆ ಅಳುಕಿನಿಂದಲೇ ನನ್ನ ರೂಮಿಗೆ ಬಂದಿದ್ದಳು...'ಎಂದವನೇ ಸುಮ್ಮನಾದೆ. ನನ್ನ ತಲೆಯಲ್ಲಿ ಆ ದಿನಗಳ ನೆನಪು ಹಾಗೆಯೇ ಓಡಲಾರಂಭಿಸಿತ್ತು. ಸಂಜಯ ಗಂಭೀರವಾಗಿ ಕೇಳುತ್ತಿದದ್ದವನು ನನ್ನ ಕಡೆಗೆ ನೋಡಲಾರಂಭಿಸಿದ್ದ.
ಸುದೀರ್ಘ ಮೌನದ ನಂತರ ನಾನೇ ಮಾತು ಮುಂದುವರಿಸಿದೆ. `ಆ ದಿನ ಏನೆಲ್ಲ ಆಗೋಯ್ತು. ಆಕೆಗೆ ಇಷ್ಟವಿರಲಿಲ್ಲ. ನಾನೇ ಬಲವಂತ ಮಾಡಿಬಿಟ್ಟೆ. ಪ್ರೀತಿ ಮಧುರವಾಗಿರಲಿ, ಶುಭ್ರವಾಗಿರಲಿ ಎಂದೆಲ್ಲ ಹೇಳಿದ್ದಳು ಆಕೆ. ಆದರೆ ನಾನೇ ಒತ್ತಾಯ ಮಾಡಿಬಿಟ್ಟೆ. ನನ್ನ ಒತ್ತಾಯಕ್ಕೆ ಆಕೆ ಸಹಕರಿಸಿದ್ದಳು. ನನ್ನದೇ ರೂಮಿನಲ್ಲಿ ನಾನು ಆಕೆಯನ್ನು ಆವರಿಸಿಕೊಂಡಿದ್ದೆ. ಅಲ್ಲೇ ನಮ್ಮ ಮಿಲನವಾಗಿತ್ತು. ಆದರೆ ಅಮೇಲೆ ನಡೆದಿದ್ದೆಲ್ಲ ದುರಂತ ಎಂಬಂತಾಗಿಬಿಟ್ಟತು. ಅಷ್ಟೆಲ್ಲ ಆದ ಮೇಲೆ ನನ್ನ ಬಳಿ ಆಕೆ ಕೇಳಿದ್ದೊಂದೇ ಮಾತು.. ನಿನ್ನನ್ನು ನಂಬಿದ್ದೆ. ಆದರೆ ಈ ರೀತಿ ಮಾಡುತ್ತೀಯಾ ಅಂತ ಗೊತ್ತಿರಲಿಲ್ಲ. ಈಗಲೂ ನಿನ್ನನ್ನು ನಂಬಿದ್ದೇನೆ. ಮುಂದೆಯೂ ಕೂಡ ನಿನ್ನನ್ನು ನಂಬಿರುತ್ತೇನೆ.. ನನ್ನ ನಂಬಿಕೆಯನ್ನು ಕೊಂದು ಬಿಡಬೇಡ.. ಎಂದಿದ್ದಳು. ನಾನು ಮೌನವಾಗಿದ್ದೆ. ಆದರೆ ಆ ದಿನದ ನಂತರ ನನ್ನ ಬದುಕಿನಲ್ಲೂ, ಆಕೆಯ ಬದುಕಿನಲ್ಲೂ ಸಿಕ್ಕ ತಿರುವುಗಳು ಮಾತ್ರ ಉಫ್.. ಹೇಗೆ ಹೇಳಲಿ..?'

(ಮುಂದುವರಿಯುತ್ತದೆ...)

Sunday, October 7, 2018

ಕ್ರಿಕೆಟ್ ಆಯ್ಕೆ ಸಮಿತಿ ಸದಸ್ಯರಿಗೂ ಬೇಕು ನಿರ್ದಿಷ್ಠ ಮಾನದಂಡ

ಮಾಯಾಂಕ್ ಅಗರ್ವಾಲ್, ಕರುಣ್ ನಾಯಕರ್ ಹಾಗೂ ಮುರಳಿ ವಿಜಯ್ ಅವರುಗಳ ಪ್ರಕರಣವನ್ನು ಗಮನಿಸಿದರೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಅಂಶ ಬೆಳಕಿಗೆ ಬರುತ್ತದೆ. ಆಯ್ಕೆ ಮಂಡಳಿಯು ಪ್ರತಿಭಾವಂತ ಆಟಗಾರರನ್ನು ಪದೇ ಪದೆ ಕಡೆಗಣಿಸುತ್ತಿರುವುದನ್ನು ಗಮನಿಸಿದರೆ  ಆಯ್ಕೆ ಸಮಿತಿಯಲ್ಲಿ ರಾಜಕೀಯ ತೀವ್ರವಾಗಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ದಟ್ಟವಾಗಿದೆ.
ಕಳೆದ ನಾಲ್ಕೈದು ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಭಾರತದ ಆಯ್ಕೆ ಸಮಿತಿ ನಡೆದುಕೊಂಡ ರೀತಿ ಹಾಗೂ ತೆಗೆದುಕೊಂಡ ನಿರ್ಧಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರತಿಭಾವಂತ ಆಟಗಾರರು ದೇಸೀಯ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದರೂ, ಅವರನ್ನು ಪದೇ ಪದೆ ಕಡೆಗಣನೆ ಮಾಡುವ ಮೂಲಕ ಸಾಕಷ್ಟು ಟೀಕೆಗೂ ಕಾರಣರಾಗಿದ್ದಾರೆ.
ಕರ್ನಾಟಕದ ಪ್ರತಿಭಾವಂತ ಆಟಗಾರ ಮಾಯಾಂಕ ಅಗರ್ವಾಲ್. ದೇಸೀಯ ಕ್ರಿಕೆಟ್ ಕೂಟಗಳಲ್ಲಿ ಮಾಯಾಂಕ್ ಕಳೆದೆರಡು ವರ್ಷಗಳ ಅವಧಿಯಲ್ಲಿ ರನ್ ಗುಡ್ಡೆಯನ್ನೇ ನಿರ್ಮಿಸಿದ್ದಾರೆ. ಆದರೆ ಈಗಿನ ವಿಂಡೀಸ್ ವಿರುದ್ಧದ ಪಂದ್ಯಾವಳಿ ವರೆಗೂ ಮಾಯಾಂಕ್‌ರನ್ನು ಆಯ್ಕೆ ಸಮಿತಿ ತಂಡಕ್ಕೆ ಸೇರಿಸಿರಲೇ ಇಲ್ಲ. ಹಿರಿಯ ಆಟಗಾರರು, ಅಭಿಮಾನಿಗಳು ಒತ್ತಾಯ ಮಾಡಿ, ಟೀಕೆ ಮಾಡಿದ ಮೇಲೆಯೇ ಮಾಯಾಂಕ್ ತಂಡಕ್ಕೆ ಆಯ್ಕೆಯಾಗುವಂತಾಯಿತು.
ಕರುಣ್ ನಾಯರ್, ಭಾರತ ತಂಡದಲ್ಲಿ ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕವನ್ನು ಸಿಡಿಸಿದ ಖ್ಯಾತಿ ಹೊಂದಿದ್ದಾರೆ. ಇಂಗ್ಲೆೆಂಡ್ ವಿರುದ್ಧದ ಟೆಸ್‌ಟ್‌ ಸರಣಿಗಾಗಿ ಕರುಣ್ ನಾಯರ್‌ರನ್ನು ಆಯ್ಕೆ ಮಾಡಲಾಗಿತ್ತು. ಐದಕ್ಕೆ ಐದು ಪಂದ್ಯಗಳಲ್ಲಿ ಕರುಣ್‌ಗೆ ಅವಕಾಶ ನೀಡದೇ ಅವಮಾನ ಮಾಡಲಾಯಿತು. ಐದೂ ಪಂದ್ಯಗಳಲ್ಲಿ ಬೇಂಚ್ ಕಾಯಿಸಿದ ಕರುಣ್ ನಾಯರ್ ನಿರಾಶರಾಗಬೇಕಾಯಿತು. ಅದೇ ಕಾರಣಕ್ಕಾಗಿ ಕರುಣ್ ನಾಯರ್, ಈ ಸರಣಿಯ ವೇಳೆ ಆಯ್ಕೆ ಮಂಡಳಿ ಹಾಗೂ ಮ್ಯಾನೇಜ್‌ಮೆಂಟ್ ತಮ್ಮನ್ನು ಸಂಪರ್ಕಿಸಿಲ್ಲ ಎಂದೂ ಹೇಳಿದರು. ಹೀಗೆ ಅವಕಾಶ ನೀಡದ ಆಯ್ಕೆ ಮಂಡಳಿ, ವಿಂಡೀಸ್ ಸರಣಿಗೆ ಕಾರಣವಿಲ್ಲದೇ ಕರುಣ್‌ರನ್ನು ಆಯ್ಕೆ ಮಾಡದೇ ಇದ್ದುದು ಸಾಕಷ್ಟು ಅನುಮಾನಗಳಿಗೂ, ಟೀಕೆಗಳಿಗೂ ಕಾರಣವಾಯಿತು.
ಇದೇ ವೇಳೆ ಭಾರತ ತಂಡದ ಮುರಳಿ ವಿಜಯ್ ಕೂಡ ತಮ್ಮ ಬಳಿ ಆಯ್ಕೆ ಮಂಡಳಿ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇಂಗ್ಲೆೆಂಡ್ ಸರಣಿಯ 4ನೇ ಪಂದ್ಯದ ಬಳಿಕ ಹಾಗೂ ವಿಂಡೀಸ್ ಸರಣಿಗೆ ತಂಡದ ಆಯ್ಕೆ ಸಂದರ್ಭದಲ್ಲಿ ಆಯ್ಕೆ ಸಮಿತಿ ತಮ್ಮ ಬಳಿ ಮಾತನ್ನಾಡಿಲ್ಲ ಎಂದು ಅಸಮಧಾನ ತೋಡಿಕೊಂಡಿದ್ದಾಾರೆ. ಇದನ್ನೆಲ್ಲ ಗಮನಿಸಿದಾಗ ಆಯ್ಕೆ ಮಂಡಳಿಯಲ್ಲಿ ಎಲ್ಲವೂ ಸರಿಯಿಲ್ಲ ಹಾಗೂ ರಾಜಕೀಯದ ದಾಳವಾಗಿ ಆಯ್ಕೆ ಸಮಿತಿ ಬಳಕೆಯಾಗುತ್ತಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬಂದಿದೆ.

ಆಯ್ಕೆ ಸಮಿತಿ ಹಾಗೂ ಅನುಭವ
ಆಯ್ಕೆ ಸಮಿತಿಯು 5 ಸದಸ್ಯರನ್ನು ಮತ್ತು ಸಂಚಾಲಕರನ್ನು ಹೊಂದಿರುತ್ತದೆ. ಆಯ್ಕೆ ಸಮಿತಿಯ 5 ಸದಸ್ಯರು ಮಾತ್ರ ತಂಡದ ಆಯ್ಕೆಗೆ ಮತ ಚಲಾಯಿಸುವ ಹಕ್ಕುಗಳನ್ನು ಹೊಂದಿದ್ದಾರೆ. ಸಂಚಾಲಕನು ಕಾರ್ಯದರ್ಶಿಯಾಗಿದ್ದು, ಹಿರಿಯ ಆಯ್ಕೆ ತಂಡಕ್ಕೆ ಬಿಸಿಸಿಐ ಮತ್ತು ಜೂನಿಯರ್ ಆಯ್ಕೆ ತಂಡದ ಜೂನಿಯರ್ ಕಾರ್ಯದರ್ಶಿ ಹುದ್ದೆಗಳಿರುತ್ತವೆ.
ಆಯ್ಕೆ ಸಮಿತಿಯಲ್ಲಿರುವ 5 ಸದಸ್ಯರನ್ನು ಸಾಂಪ್ರದಾಯಿಕವಾಗಿ 5 ಕ್ರಿಕೆಟ್ ವಲಯಗಳಿಂದ ಆಯ್ಕೆ ಮಾಡಲಾಗುತ್ತದೆ. ಉತ್ತರ ವಲಯ, ಕೇಂದ್ರ ವಲಯ, ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯಗಳಿವೆ. 5 ಸದಸ್ಯರಲ್ಲಿ ಒಬ್ಬರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಬಿಸಿಸಿಐ ಆಯ್ಕೆ ಮಾಡುತ್ತದೆ. ಲೋಧಾ ಸಮಿತಿಯ ಶಿಫಾರಸಿನ ಒತ್ತಡದಿಂದಾಗಿ, ಬಿಸಿಸಿಐ 2016 ರಲ್ಲಿ ವಲಯ ವ್ಯವಸ್ಥೆಯನ್ನು ರದ್ದುಗೊಳಿಸಿತು.
ತಂಡದ ನಾಯಕ ಮತ್ತು ತರಬೇತುದಾರ ತಂಡದ ಆಯ್ಕೆ ಸಮಿತಿ ಸಭೆಗಳಿಗೆ ಆಹ್ವಾನ ನೀಡಲಾಗುತ್ತದೆ, ಆದರೆ ತಂಡ ಆಯ್ಕೆಗಳಲ್ಲಿ ನಾಯಕ ಮತ್ತು ತರಬೇತುದಾರರಿಗೆ ಮತದಾನದ ಹಕ್ಕು ಇರುವುದಿಲ್ಲ.
ಪ್ರಸ್ತುತ ಭಾರತ ತಂಡದ ಆಯ್ಕೆ ಸಮಿತಿಯಲ್ಲಿ ಮೂವರು ಸದಸ್ಯರಿದ್ದಾರೆ. ಮುಖ್ಯಸ್ಥರಾಗಿ ಮಾಜಿ ವಿಕೆಟ್ ಕೀಪರ್ ಎಂ. ಎಸ್. ಕೆ. ಪ್ರಸಾದ್  ಇದ್ದರೆ, ಉಳಿದ ಸದಸ್ಯರಾಗಿ ದೇವಾಂಗ್ ಗಾಂಧಿ ಹಾಗೂ ಶರಣದೀಪ್ ಸಿಂಗ್ ಇದ್ದಾರೆ.
ಈ ಆಟಗಾರರಲ್ಲಿ ಎಂ. ಎಸ್. ಕೆ. ಪ್ರಸಾದ್ ಆಡಿದ್ದು 6 ಟೆಸ್‌ಟ್‌ ಹಾಗೂ 17 ಏಕದಿನ ಪಂದ್ಯಗಳನ್ನು ಮಾತ್ರ. ದೇವಾಂಗ್ ಗಾಂಧಿ ಆಡಿದ್ದು 4 ಟೆಸ್‌ಟ್‌ ಹಾಗೂ 3 ಏಕದಿನ ಪಂದ್ಯಗಳು. ಶರಣದೀಪ್ ಸಿಂಗ್ ಆಡಿದ್ದು 3 ಟೆಸ್‌ಟ್‌ ಹಾಗೂ 5 ಏಕದಿನ ಪಂದ್ಯಗಳನ್ನು ಮಾತ್ರ. ವಿಚಿತ್ರವೆಂದರೆ ಇಷ್ಟು ಅಲ್ಪ ಕ್ರಿಕೆಟ್ ಆಡಿದವರು ಭಾರತ ತಂಡವನ್ನು ಆಯ್ಕೆ ಮಾಡುತ್ತಾರೆ. ಇನ್ನೂ ವಿಚಿತ್ರ ಎಂದರೆ, ಈ ಎಲ್ಲಾ ಆಟಗಾರರು ಸೇರಿ ಭಾರಿಸಿದ ರನ್‌ಗಳನ್ನು ಕರುಣ್ ನಾಯರ್ ತಮ್ಮ ಒಂದೇ ಇನ್ನಿಿಂಗ್‌ಸ್‌ (303 ನಾಟೌಟ್)ನಲ್ಲಿ ಭಾರಿಸಿದ್ದಾರೆ.

ಮಾನದಂಡಗಳು
ಈ ವೈರುದೈ ಗಮನಿಸಿದಾಗ ಭಾರತದ ಆಯ್ಕೆ ಸಮಿತಿ ಸದಸ್ಯರಾಗುವವರು ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವಿಗಳಾಗಿರುವುದು ಅಗತ್ಯ ಎನ್ನುವುದು ಅಭಿಮಾನಗಳ ಅಭಿಮತವಾಗಿದೆ. ಕನಿಷ್ಟ 25 ಟೆಸ್‌ಟ್‌‌ಗಳು ಹಾಗೂ 25 ಏಕದಿನ ಪಂದ್ಯಗಳನ್ನಾದರೂ ಆಡಿರಬೇಕು ಎನ್ನುವ ಅಭಿಪ್ರಾಯ ದಟ್ಟವಾಗಿ ಕೇಳಿ ಬರುತ್ತಿದೆ. ಏಕದಿನ ಹಾಗೂ ಟೆಸ್‌ಟ್‌‌ಗಳಲ್ಲಿ ಕನಿಷ್ಟ 1000 ರನ್ ಭಾರಿಸಿರಬೇಕು ಅಥವಾ 50 ವಿಕೆಟ್ ಕಬಳಿಸಿರಬೇಕು. ಇಂತವರನ್ನು ಮಾತ್ರ ಆಯ್ಕೆ ಸಮಿತಿಗೆ ಸದಸ್ಯರನ್ನಾಗಿ ಮಾಡಬೇಕೆಂಬ ಆಗ್ರಹಗಳು ಕೇಳಿ ಬಂದಿವೆ. ಇಲ್ಲವಾದಲ್ಲಿ ಈಗ ನಡೆಯುತ್ತಿರುವಂತಹ ಅಧ್ವಾಾನಗಳು ಮತ್ತೂ ಮುಂದುವರಿಯುವುದು ಸಹಜ ಎಂಬಂತಾಗಿದೆ.

Saturday, October 6, 2018

ರ್ಯಾಂಕ್ ತೆಗೆದುಕೊಳ್ಳಿ ಆದರೆ ಫಸ್ಟ್ ರ್ಯಾಂಕ್ ರಾಜು ಆಗಬೇಡಿ

ಕಾಲೇಜು ಎನ್ನುವುದೊಂದು ನಾಲೇಜಿನ ಜಗತ್ತು. ಎಲ್ಲ ವಿಷಯಗಳನ್ನು ಅರಿತುಕೊಳ್ಳುವ ಪ್ರಪಂಚ. ಇಂತಹ ಕಾಲೇಜು ಕೇವಲ ಓದಿಗೆ ಮಾತ್ರ ಸೀಮಿತವಾಗದಿರಲಿ. ರಚನಾತ್ಮಕ ಕಾರ್ಯಗಳು, ಸೃಜನಶೀಲತೆಯನ್ನು ಪ್ರಚುರಪಡಿಸಿಕೊಳ್ಳುವಲ್ಲಿ ಕಾಲೇಜು ವೇದಿಕೆಯಾಗಲಿ.
ಕಾಲೇಜು ಎಂದ ಮೇಲೆ ಓದು ಎಷ್ಟು ಮುಖ್ಯವೋ, ಅದರ ಜತೆ ಜತೆಯಲ್ಲಿಯೇ ನಾವು ಕೈಗೊಳ್ಳುವ ವಿವಿಧ  ಕಾರ್ಯಗಳು, ರಚನಾತ್ಮಕ ಕೆಲಸಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ಬರೀ ಓದು, ಮಾರ್ಕ್ಸ್, ರ್ಯಾಂಕ್  ಎಂದು ಬದುಕಿದವರಿಗಿಂತ, ಆವರೇಜ್ ಮಾರ್ಕ್ಸ್  ತೆಗೆದವರು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗಬಲ್ಲರು.
ಬರೀ ಓದಿ ಓದಿ ಪುಸ್ತಕದ ಹುಳುವಾಗಿ, ಸಮಾಜದ ನಡುವೆ ಫಸ್ಟ್ ರ್ಯಾಂಕ್ ರಾಜು ಆಗುವುದರ ಬದಲು, ಲಾಸ್ಟ  ಬೇಂಚ್ ಹುಡುಗನಾಗಿ, ಕಾಲೇಜಿನ ರಸ ನಿಮಿಷಗಳನ್ನು, ಆ ದಿನಗಳ ಎಲ್ಲ ಸಂತಸಗಳನ್ನು ಸವಿಯುವವನು ಖುಷ್ ಖುಷಿಯಾಗಿ ಬದುಕುತ್ತಾನೆ. ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾನೆ.
ಹಾಗಾದರೆ ಓದು ಹೊರತು ಪಡಿಸಿ ಕಾಲೇಜು ಟೈಮಲ್ಲಿ ಏನೇನು ಮಾಡಬಹುದು? ಆಟೋಟವೋ, ಸಾಂಸ್ಕೃತಿಕ ಕಾರ್ಯಕ್ರಮಗಳೋ ಅಥವಾ ಇನ್ಯಾವುದೋ ಅಂಶಗಳು ಥಟ್ಟನೆ ನಿಮ್ಮ ಮನಸ್ಸಿನಲ್ಲಿ ಹಾದು ಹೋಗಬಹುದು. ಅವು ಮಾತ್ರವಲ್ಲ ಇನ್ನೂ ಹಲವು ಅಂಶಗಳಲ್ಲಿ ಕಾಲೇಜು ಹುಡುಗರು ತಮ್ಮನ್ನು ತಾವು ತೊಡಗಿಸಿಕೊಂಡು, ಪ್ರತಿಭೆಯನ್ನು, ವ್ಯಕ್ತಿತ್ವವನ್ನು ಪ್ರದರ್ಶಿಸಬಹುದು. ರೂಪಿಸಿಕೊಳ್ಳಬಹುದು. ಅಂತಹ ಕೆಲವು ಸಂಗತಿಗಳ ಬಗ್ಗೆ ಕಣ್ಣು ಹಾಯಿಸೋಣ ಬನ್ನಿ.

ಪಠ್ಯಕ್ಕೆ  ಅಂಟಿಕೊಳ್ಳುವುದರಿಂದ ಆಗುವ ಅಪಾಯಗಳು
ಕೇವಲ ಪಠ್ಯಕ್ಕೆ, ಓದಿಗೆ ಅಂಟಿಕೊಂಡರೆ ಬದುಕಿನಲ್ಲಿ ಪಾಯ ಉಂಟಾಗುವುದೇ ಅಧಿಕ. ಕೇವಲ ಪಠ್ಯಕ್ಕೆ ಅಂಟಿಕೊಂಡವರಲ್ಲಿ ಹೆಚ್ಚಿನ ಜನರು ನಂತರ ಬದುಕಿನಲ್ಲಿ ಕಳೆದೇ ಹೋಗಿದ್ದಾರೆ. ಜೀವನವನ್ನು ಸಮರ್ಪಕವಾಗಿ ಕಟ್ಟಿಕೊಳ್ಳಲು ಎಡವಿದ್ದಾರೆ. ಸಮಾಜದ ನಡುವೆ ಬಾಳಿ ಬದುಕಲು ಒದ್ದಾಡಿ, ಬದುಕನ್ನು ಅಂತ್ಯಗೊಳಿಸಿಕೊಂಡವರೂ ಇದ್ದಾರೆ. ಕೇವಲ ಪಠ್ಯಕ್ಕೆ ಅಂಟಿಕೊಂಡವರು ಫಸ್ಟ್  ರ್ಯಾಂಕ್  ರಾಜುಗಳಾಗಿ ಬದುಕನ್ನು ಕಾಮೆಡಿ ಮಾಡಿಕೊಂಡವರೂ ಅನೇಕರು ನಮ್ಮ ಮುಂದೆಯೇ ನಿದರ್ಶನಗಳಾಗಿದ್ದಾರೆ. ಪಠ್ಯದ ಹುಳುಗಳು ನಾಲ್ಕು ಜನರ ನಡುವೆ ಬೆರೆಯುವುದಕ್ಕೆ ಸಾಧ್ಯ ವಾಗದೇ ಬವಣೆ ಪಡುವುದನ್ನು ನೋಡಿದ್ದೇವೆ. ಅಷ್ಟೇ ಅಲ್ಲದೇ ಬದುಕಿನಲ್ಲಿ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ಅದಕ್ಕೆ ಇತರರ ನೆರವಿಲ್ಲದೆಯೇ, ಸ್ವತಂತ್ರವಾಗಿ ತೆಗೆದುಕೊಂಡಿದ್ದಂತೂ ಇಲ್ಲವೇ ಇಲ್ಲ ಬಿಡಿ. ಬರೀ ಪಠ್ಯದ ಹುಳುವಾಗುವುದು ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಹೀಗಾಗಿ ಪಠ್ಯದಿಂದ ಆಚೆಗೂ ಇಣುಕುವ ಪ್ರಯತ್ನ ಮಾಡಿದಾಗ ಬದುಕು ಸುಂದರವಾಗಬಲ್ಲದರು.

ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ
ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಪ್ರತಿಯೊಬ್ಬರ ಬದುಕಿನಲ್ಲಿ ಪಠ್ಯದಷ್ಟೇ ಬಹಳ ಮುಖ್ಯ. ಆಟೋಟ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮೈಮನಗಳನ್ನು ತಿಳಿಯಾಗಿಸಬಲ್ಲದು. ಆಟೋಟಗಳು ದೇಹಕ್ಕೆ ಹಿತಕಾರಿ, ಆರೋಗ್ಯಕಾರಿ. ಆಟೋಟಗಳಲ್ಲಿ ಪಾಲ್ಗೊಳ್ಳದೇ ಇರುವುದು, ದೇಹಕ್ಕೆ ವ್ಯಾಾಯಾಮಗಳನ್ನು ನೀಡದೇ ಇರುವುದು ಅನಾರೋಗ್ಯಗಳಿಗೆ ಅವಕಾಶ ನೀಡದಂತೆ. ಕ್ರಿಕೆಟ್, ಓಟ, ಷಟಲ್ ಬ್ಯಾಡ್ಮಿಿಂಟನ್ ಹೀಗೆ ಹಲವು ಕ್ರೀಡೆಗಳಲ್ಲಿ ಭಾಗವಹಿಸಿದರೆ ದೇಹಗಳಿಗೆ ರೀಲ್ಯಾಕ್ಸ್  ಸಿಗುತ್ತದೆ. ಇನ್ನು ಚದುರಂಗ (ಚೆಸ್) ನಂತರ ಮೈಂಡ್ ಗೇಮುಗಳು ನಮ್ಮ ಮನಸ್ಸನ್ನು ಚುರುಕಾಗಿಸುತ್ತದೆ. ಕಾಲೇಜು ದಿನಗಳಲ್ಲಿ ಓದು ಎಷ್ಟು ಅಗತ್ಯವೋ, ಇಂತಹ ಆಟೋಟಗಳಲ್ಲಿ ಭಾಗವಹಿಸುವುದೂ ಕೂಡ ಅಷ್ಟೇ ಮುಖ್ಯ.
ಇನ್ನು ವಿವಿಧ  ಆಟಗಳಲ್ಲಿ, ಓಟದಂತಹ ಸ್ಪರ್ಧೆಗಳಲ್ಲಿ  ಕಾಲೇಜುಗಳನ್ನು ಪ್ರತಿನಿಸುವುದೂ ಕೂಡ ಬಹಳ ಹೆಮ್ಮೆಯ ಸಂಗತಿಯೇ ಸರಿ. ಯಾವ್ಯಾವುದೋ ಕಾಲೇಜುಗಳಿಗೆ  ಸ್ಪರ್ಧೆಗಳಿಗಾಗಿ ತೆರಳಿ, ಆ ಕಾಲೇಜಿನ ಅಂಗಳದಲ್ಲಿ ನಮ್ಮ ಕಾಲೇಜನ್ನು ಪ್ರತಿನಿಸಿ ಗೆಲುವು ಸಾಸುವ ಸಂದರ್ಭದಲ್ಲಿ  ನೀಡುವಂತಹ ಖುಷಿ ಓದಿ ರ್ಯಾಂಕ್ ಪಡೆದಾಗ ನೀಡುವ ಖುಷಿಗಿಂತ ಹೆಚ್ಚು. ಇನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಬ್ಲೂ ಆಗಿ ಹೊರಹೊಮ್ಮಿದಾಗಲಂತೂ ಆಗುವ ಸಂತಸ, ಸಂಭ್ರಮಕ್ಕೆ ಪಾರವೇ ಇಲ್ಲ ಬಿಡಿ.

ಸಾಂಸ್ಕೃತಿಕ ರಂಗದಲ್ಲಿ ತೊಡಗಿಸಿಕೊಳ್ಳುವಿಕೆ
ಕ್ರೀಡೆಗಳಷ್ಟೇ ಕಾಲೇಜು ದಿನಗಳಲ್ಲಿ ಬಹು ಮುಖ್ಯವಾಗುದು ಸಾಂಸ್ಕೃತಿಕ ರಂಗ. ಕಾಲೇಜಿನ ಮಟ್ಟದಲ್ಲಿ ಯಾವುದೋ ನಾಟಕವೋ, ಹಾಡೋ, ನೃತ್ಯದಲ್ಲೋ ಪಾಲ್ಗೊಳ್ಳುವ ಮೂಲಕ ನಮ್ಮೊಳಗಿನ ಸಾಂಸ್ಕೃತಿಕ ಪ್ರತಿಭೆಯನ್ನು ಒರೆಗೆ ಹಚ್ಚುವುದೂ ಕೂಡ ಬಹುಮುಖ್ಯ. ಕಾಲೇಜು ದಿನಗಳಲ್ಲಿಯೇ ತಮ್ಮ ಸಾಂಸ್ಕೃತಿಕ ಶಕ್ತಿಯನ್ನು ನಾಲ್ಕು ಜನರ ಮುಂದೆ ಪ್ರದರ್ಶನ ಮಾಡುವ ಮೂಲಕ, ಬದುಕನ್ನು ಬದಲಿಸಿಕೊಂಡವರು ಹಲವರು. ಸಾಂಸ್ಕೃತಿಕ ರಂಗದಲ್ಲಿ ಕಣ್ಮಣಿಯಾಗಿ ಮೆರೆದವರೂ ಅನೇಕ ಜನರಿದ್ದಾರೆ. ಇಂತಹ ಸಾಂಸ್ಕೃತಿಕ ವಲಯದಲ್ಲಿ ಕಾಲೇಜು ವಿದ್ಯಾಾರ್ಥಿಗಳು ಮಿಂಚುವ ಮೂಲಕ ಕಾಲೇಜನ್ನು, ವಿಶ್ವವಿದ್ಯಾಲಯವನ್ನು ಪ್ರತಿನಿಸಿದಾಗಲೂ  ಸಿಗುವ ಸಂತಸ, ಸಂಭ್ರಮ  ಅನಿರ್ವಚನೀಯವಾದುದು.

ಸಾಮಾಜಿಕ ಕಾರ್ಯಗಳು
ಓದು, ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಪಾಲ್ಗೊಳ್ಳುವುದರ ನಡುವೆ ಸಾಮಾಜಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಅವಕಾಶ ಬಹಳ ಇದೆ. ಇಂತಹ ಸಾಮಾಜಿಕ ಕಾರ್ಯಗಳು, ಮುಂದಿನ ಬದುಕಿನಲ್ಲಿ ಬಹುದೊಡ್ಡ ತಿರುವನ್ನು ನೀಡುತ್ತವೆ. ಜತೆಗೆ ವ್ಯಕ್ತಿತ್ವವನ್ನು ನಿರೂಪಿಸುತ್ತವೆ. ಎನ್‌ಸಿಸಿ, ಎನ್‌ಎಸ್‌ಎಸ್‌ನಂತಹ ಕಾರ್ಯಗಳು ಕಾಲೇಜು ದಿನಗಳಲ್ಲಿ ಇಂತಹ ಸಾಮಾಜಿಕ ಕಾರ್ಯಗಳಿಗಾಗಿಯೇ ಮೀಸಲಾಗಿದೆ. ಎನ್‌ಸಿಸಿಯು ಮುಂದಿನ ಬದುಕಿನಲ್ಲಿ ದೇಶಸೇವೆ, ಸೈನ್ಯ ಸೇರುವಿಕೆಯಂತಹ ಹಲವು ಅವಕಾಶಗಳನ್ನು ತೆರೆದಿಡುತ್ತದೆ. ಅಲ್ಲದೇ ನಾಯಕತ್ವ ಗುಣವನ್ನೂ ಕೂಡ ಬೆಳೆಸುತ್ತದೆ. ಎನ್‌ಎಸ್‌ಎಸ್ ಕೂಡ ಬದುಕನ್ನು ವಿಭಿನ್ನ ರೀತಿಯಲ್ಲಿ, ವಿಶಿಷ್ಟವಾಗಿ ಕಟ್ಟಿಕೊಡುತ್ತದೆ. ಸಮಾಜವನ್ನು ಬದಲಾಯಿಸುವ ಅವಕಾಶವನ್ನು ನೀಡುತ್ತದೆ. ಎನ್‌ಸಿಸಿ ಕ್ಯಾಾಂಪುಗಳಂತೂ ನಾಯಕತ್ವ ಗುಣವನ್ನು ಬೆಳೆಸುವುದರ ಜತೆಗೆ ಸಮಾಜದ ನಡುವೆ ನಮ್ಮ ಬೆಲೆಯನ್ನು ಹೆಚ್ಚಿಸುತ್ತವೆ. ಗ್ರಾಮಾಭ್ಯುದಯ , ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ಹೀಗೆ ವಿವಿಧ  ರಂಗದಲ್ಲಿ ಬೆಳವಣಿಗೆಗೂ ಎನ್‌ಎಸ್‌ಎಸ್ ಕಾರಣವಾಗುತ್ತದೆ.

ಕಾಲೇಜು ದಿನಗಳಲ್ಲಿ ಓದುವುದರ ಜತೆ ಜತೆಯಲ್ಲಿಯೇ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡಬಹುದು. ಕಿರುಚಿತ್ರಗಳನ್ನು ನಿರ್ಮಿಸಬಹುದು, ಪತ್ರಿಕೆಗಳಿಗೆ ಬರಹಗಳನ್ನು ಬರೆಯಬಹುದು. ಸದೃಢ ಆರೋಗ್ಯಕ್ಕಾಗಿ ಯೋಗದಂತಹ ತರಗತಿಗಳನ್ನು ನಡೆಸಬಹುದು. ಸ್ವತಃ ನಾವೂ ಕೂಡ ಯೋಗಾಸನಗಳನ್ನು ನಡೆಸಿ ನಮ್ಮ ಮೈಮನಗಳನ್ನು ತಿಳಿಯಾಗಿರಿಸಿಕೊಳ್ಳಬಹುದು. ಯಾವುದೋ ವಾಹಿನಿಗಳಲ್ಲಿ ಆಂಕರ್ ಆಗಬಹುದು. ಅಷ್ಟೇ ಏಕೆ ಕಾಲೇಜು ಕಾರ್ಯಕ್ರಮಗಳಲ್ಲಿಯೂ ಉತ್ತಮ ನಿರೂಪಕರಾಗಿ ಎಲ್ಲರ ಮನವನ್ನು ಗೆಲ್ಲಬಹುದು.

ಪಾರ್ಟ್ ಟೈಂ ಕಾರ್ಯಗಳು
ಕಾಲೇಜು ಓದಿನ ಜತೆ ಜತೆಯಲ್ಲಿಯೇ ಪಾರ್ಟ್ ಟೈಂ ಕೆಲಸ ಮಾಡಿಕೊಂಡು ಬದುಕು ನಡೆಸಿದವರು ಹಲವರಿದ್ದಾರೆ. ತಮ್ಮ ಬದುಕಿನ ಅನ್ನವನ್ನು ತಾವೇ ಕಂಡುಕೊಂಡವರೂ ಇದ್ದಾರೆ. ಬಿಡುವಿನ ವೇಳೆಯಲ್ಲಿ ಯಾವುದೋ ಕಾರ್ಯಗಳನ್ನು ನಡೆಸಿ ಪಾಕೆಟ್ ಮನಿಯನ್ನು ಮಾಡಿಕೊಂಡವರಿದ್ದಾರೆ. ಇಂತಹ ವ್ಯಕ್ತಿಗಳು ಮನಿ ಮ್ಯಾನೇಜ್‌ಮೆಂಟನ್ನು ಹೆಚ್ಚು ತಿಳಿದುಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳು ಬದುಕಿನಲ್ಲಿ ಸಾಕಷ್ಟು ಯಶಸ್ವಿಯಾಗಬಲ್ಲರು.

ಲವ್ ಮಾಡಿ ನೋಡು..
ಕಾಲೇಜು ಬದುಕಿನಲ್ಲಿ ಪ್ರೀತಿ-ಪ್ರೇಮ-ಪ್ರಣಯ ಸಹಜ. ಪ್ರತಿಯೊಬ್ಬನಿಗೂ, ಪ್ರತಿಯೊಬ್ಬಳಿಗೂ ಕೂಡ ಪ್ರೀತಿ ಎಂಬುದು ಚಿಗುರೊಡೆದೇ ಇರುತ್ತದೆ. ಯಾರೋ ಒಬ್ಬರು ಅವನ/ಳ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡೇ ಇರುತ್ತಾಾರೆ. ಅವರವರಿಗೆ ಅರಿವಿಲ್ಲದಂತೆಯೇ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡು ಭದ್ರವಾಗಿ ನೆಲೆಯೂರಿ ನಿಂತಿರುತ್ತಾರೆ. ಕೆಲವರು ತಮ್ಮೊಳಗಿನ ಸುಪ್ತ ಪ್ರೀತಿಯನ್ನು ಅವನ/ಳ ಬಳಿ ಹೇಳಿಕೊಂಡರೆ ಇನ್ನೂ ಹಲವರು ಹೇಳಿಕೊಳ್ಳದೇ ತೊಳಲಾಡುತ್ತಿರುತ್ತಾರೆ. ಹಲವರಿಗೆ ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮ ಎನ್ನುವುದು ತಪ್ಪು. ಆದರೆ ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮದಲ್ಲಿ ಇದ್ದೂ ಬದುಕನ್ನು ಸುಂದರವಾಗಿ ಕಟ್ಟಿಕೊಂಡವರು ನಮ್ಮ ನಡುವೆಯೇ ಉದಾಹರಣೆಯಾಗಿ ನಿಂತಿದ್ದಾರೆ.

ಲಾಸ್ಟ ಲೈನ್ಸ್
ಕಾಲೇಜು ಹುಡುಗ್ರಾ. . .  ಹುಡುಗೀರ್ರಾ . . . ಬರೀ ಓದು ಓದು ಎಂದು ಓದುಗುಳಿಯಾಗಬೇಡಿ. ಓದಿನ ಜತೆಗೆ ಇತರ ಹಲವು ಸಂಗತಿಗಳು ಜಗತ್ತಿನಲ್ಲಿ ಸುಂದರವಾಗಿದೆ. ಅದರ ಕಡೆಗೂ ಗಮನ ಹರಿಸಿ. ಕಾಲೇಜು ದಿನಗಳಲ್ಲಿ ಓದಿನ ಜತೆ ಜತೆಯಲ್ಲಿಯೇ ಪಡೆದುಕೊಳ್ಳುವ ಇತರ ಖುಷಿಗಳು ಬದುಕಿನಾದ್ಯಂತ ನೆನಪಿನಲ್ಲಿ ಇರುತ್ತವೆ. ಇವನ್ನು ಒಮ್ಮೆ ತಪ್ಪಿಸಿಕೊಂಡರೆ ಮತ್ತೆ ಎಷ್ಟು ಪರಿತಪಿಸಿದರೂ ಸಿಗಲಾರದು. ಹೀಗಾಗಿ ಹೇಳೋದಿಷ್ಟೆ.. . ಜಸ್ಟ್  ಹ್ಯಾಪಿಯಾಗಿರಿ..



Tuesday, October 2, 2018

ಕಥೆಯ ಕಾಯಿಲೆ

ಅರಳರಳಿ ಮರುಮರಳಿ
ಸುಳಿದು ಬರುತಿದೆ ಕಥೆಯ ಕಾಯಿಲೆ
ನೋವುಂಟು ನಲಿವುಂಟು
ಸುರುಳಿ ಸೊಳ್ಳೆಯ ಬತ್ತಿ ಕಥೆಯ ಕಾಯಿಲೆ

ಅಕ್ಕರೆಯ ಪ್ರೀತಿ ಸಕ್ಕರೆಯ ರೀತಿ
ಸೋಲನ್ನೂ ಮರೆಸುತಿದೆ ಖ್ಯಾತಿ
ಅತ್ತಿತ್ತ ಹುಯ್ದಾಡಿ ಸುತ್ತೆಲ್ಲ ಸುಳಿದಾಡಿ
ಮರಳಿ ಬರುತಿದೆ ಕಥೆಯ ಕಾಯಿಲೆ

ಮನಸು ಅಂತರಗಂಗೆ
ಹರಿಸಿ ಪ್ರೀತಿಯ ಗಂಗೆ
ತೆರೆ ತೆರೆಯ ನೆರಳಲ್ಲಿ
ಮತ್ತೆ ನೆನಪಾಗುತಿದೆ ಕಥೆಯ ಕಾಯಿಲೆ

ಜನನ ಮರಣದ ನಡುವೆ
ನೋವು ನಲಿವಿನ ಗೊಡವೆ
ಪ್ರೀತಿ ಸ್ನೇಹದ ಒಡವೆ
ಹೊತ್ತು ತರುತಿದೆ ಕಥೆಯ ಕಾಯಿಲೆ

ನಗುವು ಅಳುವಿನ ಬದುಕು
ಒಲವು ಸೇಡಿನ ಇಣುಕು
ನೆನಪು ನಲಿವಿನ ಪಲಕು
ಕರೆಯ ಕೊಟ್ಟಿದೆ ಕಥೆಯ ಕಾಯಿಲೆ


******



(ಕನ್ನಡದ ಇನ್ನೊಂದು ಚಿತ್ರಕ್ಕೆ ಈ ಹಾಡನ್ನು ಬರೆದುಕೊಟ್ಟಿದ್ದೆ. ಖಂಡಿತವಾಗಿಯೂ ಇದನ್ನು ಬಳಸಿಕೊಳ್ಳುತ್ತೇವೆ.. ಶೀಘ್ರದಲ್ಲಿಯೇ ನಿಮಗೆ ವಿತ್ ಮ್ಯೂಸಿಕ್ ಹಾಡನ್ನು ಕಳಿಸುತ್ತೇವೆ ಎಂದು ನಿರ್ದೇಶಕರು ಹೇಳಿದ್ದರು.
ಹಾಡನ್ನು ಬರೆಯುವ ಮೊದಲು ಸುರುಳಿ ಸೊಳ್ಳೆಯ ಬತ್ತಿ ಹಾಗೂ ಕಥೆಯ ಕಾಯಿಲೆ ಎನ್ನುವ ಎರಡು ಶಬ್ದಗಳನ್ನು ಕೊಟ್ಟು ಇವೆರಡೂ ಹಾಡಿನ ಮೊದಲ ಪ್ಯಾರಾದಲ್ಲಿ ಇರಲೇಬೇಕು ಎಂದಿದ್ದರು. ಇದೇ ಏಕೆ ಎಂದರೆ, ಅದನ್ನೇ ಸಿನಿಮಾ ಟೈಟಲ್ ಮಾಡುವುದಾಗಿ ಹೇಳಿದ್ದರು. ಆಮೇಲೆ ಈ ಹೆಸರು ಬಳಕೆಯಾಗಲಿಲ್ಲ. ಚಿತ್ರ ಬಿಡುಗಡೆಯೂ ಆಯ್ತುಘಿ. ಅದರಲ್ಲಿ ನನ್ನ ಹಾಡೂ ಕೂಡ ಬಳಕೆ ಆಗಿರಲಿಲ್ಲ. ಎನಿವೇ.. ಆ ಹಾಡು ಇಲ್ಲಿದೆ ನೋಡಿ)