Thursday, June 7, 2018

ಸಪ್ತಸಾಗರಾಚೆ ಇದ್ದರೂ ಭಾರತದ ಖ್ಯಾತಿ ಹೆಚ್ಚಿಸಿದ ಕನ್ನಡಿಗ ವಿಕಾಸ

ವಿಕಾಸ್ ಗೆದ್ದ ಚಿನ್ನದ ಪದಕಗಳು 3
ಬೆಳ್ಳಿಿ ಪದಕಗಳು 4
ಕಂಚಿನ ಪದಕಗಳು 3
ಡಿಸ್ಕಸ್ ಎಸೆತದಲ್ಲಿ ರಾಷ್ಟ್ರೀಯ ದಾಖಲೆ : ದೂರ - 66.28 ಮೀಟರ್


56 ವರ್ಷಗಳ ನಂತರ ಭಾರತಕ್ಕೆ ಕಾಮನ್ವೆಲ್ತ್  ಗೇಮ್‌ಸ್‌‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದ ಡಿಸ್ಕಸ್ ಥ್ರೋ, ಗುಂಡು ಎಸೆತಗಾರ ವಿಕಾಸ್ ಗೌಡ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾಾರೆ. ಮಿಲ್ಖಾ ಸಿಂಗ್‌ರ ನಂತರ ಭಾರತಕ್ಕೆ  ಅಥ್ಲೆಟಿಕ್ಸ್ ವಿಭಾಗದಲ್ಲಿ ವಿಕಾಸ್ ಗೌಡ ಚಿನ್ನವನ್ನು ಗೆದ್ದುಕೊಟ್ಟಿದ್ದರು.
ಅಮೆರಿಕ, ಚೀನಾ, ಆಸ್ಟ್ರೇಲಿಯಾ, ಇಂಗ್ಲೆಂಡ್  ಮುಂತಾದ ದೇಶಗಳ ಭಲಾಢ್ಯ ದೇಶಗಳ ಕ್ರೀಡಾಪಟುಗಳೇ ಅಥ್ಲೆಟಿಕ್ಸ್ ನ  ಡಿಸ್ಕಸ್ ಥ್ರೋ ಹಾಗೂ ಶಾಟ್‌ಪುಟ್ ಎಸೆತ ವಿಭಾಗಗಳಲ್ಲಿ ಗೆಲುವು ಸಾಧಿಸಿ ಏಕಸ್ವಾಮ್ಯ ಹೊಂದಿದ್ದ ಸಂದರ್ಭದಲ್ಲಿ ಭಾರತದ ವಿಕಾಸ್ ಗೌಡ ಅವರ್ಯಾರಿಗಿಂತಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟವರು.
34 ವರ್ಷದ ವಿಕಾಸ್ ಜನಿಸಿದ್ದು ಮೈಸೂರಿನಲ್ಲಿ. ಬರೋಬ್ಬರಿ 6 ಅಡಿ 9 ಇಂಚು ಎತ್ತರವಿದ್ದ ವಿಕಾಸ್ ಗೌಡ ಭಾರತದ ಪಾಲಿಗೆ ಭಲಭೀಮರೇ ಆಗಿದ್ದರು. ಅಮೆರಿಕದ ಮೆರಿಲ್ಯಾಂಡ್  ಫ್ರೆಡ್ರಿಕ್ಸ್ ನಲ್ಲಿ  ಬೆಳೆದವರು ವಿಕಾಸ್.  ಎಂಬಿಎ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ವಿಕಾಸ್ ಕ್ರೀಡಾಪಟುವಾಗಿ ಭಾರತವನ್ನು ಪ್ರತಿನಿಸುವ ನಿರ್ಧರಕ್ಕೆ ಬಂದರು. ಅಂದಹಾಗೇ ಇವರ ತೂಕ ಬರೋಬ್ಬರಿ 140 ಕೆಜಿ.
ವಿದೇಶದಲ್ಲಿ ವಾಸ ಮಾಡುತ್ತಿದ್ದರೂ ಭಾರತದ ಕಡೆಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದ ವಿಕಾಸ್ ಜಗತ್ತಿನ ವಿವಿಧ  ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಸುತ್ತಿದ್ದರು. ಇವರ ತಂದೆ ಶಿವೇ ಗೌಡರೇ ವಿಕಾಸ್‌ರ ಮೊದಲ ಗುರು. ಶಿವೇ ಗೌಡ ಅವರೂ ಕೂಡ ಮಾಜಿ ಅಥ್ಲಿಟ್ ಎನ್ನುವುದು ವಿಶೇಷ. ಏಷ್ಯನ್ ಗೇಮ್ಸ್ , ಕಾಮನ್ವೆಲ್‌ತ್‌ ಗೇಮ್‌ಸ್‌‌, ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದುಕೊಟ್ಟವರು ಇವರು.
ಸಾಧನೆ-ಪ್ರಶಸ್ತಿಗರಿ
ಡಿಸ್ಕಸ್ ಎಸೆತದಲ್ಲಿ ರಾಷ್ಟ್ರೀಯ ದಾಖಲೆಯನ್ನು ಸೃಷ್ಟಿಸಿರುವ ವಿಕಾಸ್ ಗೌಡ 66.28 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ವಯಕ್ತಿಕ ದಾಖಲೆಯನ್ನೂ ಮಾಡಿದ್ದಾರೆ. 2004ರಲ್ಲಿ ಅಥೆನ್‌ಸ್‌‌ನಲ್ಲಿ ನಡೆದಿದ್ದ ಓಲಿಂಪಿಕ್‌ನಲ್ಲಿ ಇವರು ಮೊಟ್ಟಮೊದಲು ಪಾಲ್ಗೊೊಂಡಿದ್ದರು. ತದನಂತರದಲ್ಲಿ 2008, 2012 ಹಾಗೂ 2016ರಲ್ಲಿ ಭಾರತವನ್ನು ಪ್ರತಿನಿಸಿದ್ದರು.
2014ರ ಗ್ಲಾಾಸ್ಗೋ ಕಾಮನ್ವೆೆಲ್‌ತ್‌ ಕ್ರೀಡಾಕೂಟದ ಡಿಸ್ಕಸ್ ಎಸೆತದಲ್ಲಿ 63.64 ಮೀಟರ್ ದೂರ ಎಸೆಯುವ ಮೂಲಕ 5 ದಶಕಗಳ ನಂತರ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟರು. ಅಲ್ಲದೇ ಚಿನ್ನ ಗೆದ್ದ ಭಾರತದ ಎರಡನೇ ಅಥ್ಲಿಟ್ ಎನ್ನುವ ಖ್ಯಾತಿಗೂ ಪಾತ್ರರಾದರು.
2005ರ ಏಷ್ಯನ್ ಚಾಂಪಿಯನ್‌ಷಿಪ್ ಡಿಸ್ಕಸ್ ಎಸೆತದಲ್ಲಿ ಬೆಳ್ಳಿಿಘಿ, 2010ರ ಗುವಾಂಗ್‌ಜೂ ಏಷ್ಯನ್ ಗೇಮ್‌ಸ್‌‌ನಲ್ಲಿ ಬೆಳ್ಳಿಿಘಿ, ಅದೇ ವರ್ಷ ಹೊಸದಿಲ್ಲಿಯಲ್ಲಿ ನಡೆದ ಕಾಮನ್ವೆೆಲ್‌ತ್‌ ಕ್ರೀಡಾಕೂಟದಲ್ಲಿ ಬೆಳ್ಳಿಿಘಿ, ಜಪಾನ್‌ನ ಕೋಬೆಯಲ್ಲಿ 2011ರಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್ ಡಿಸ್ಕಸ್ ಥ್ರೋೋದಲ್ಲಿ ಬೆಳ್ಳಿಿ, 2013ರಲ್ಲಿ ಪುಣೆಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ 2015ರಲ್ಲಿ ವೂಹಾನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಗೆದ್ದುಕೊಂಡರು. 2014ರಲ್ಲಿ ದ. ಕೋರಿಯಾದ ಇಂಚೋನ್‌ನಲ್ಲಿ ನಡೆದ ಏಶ್ಯನ್ ಗೇಮ್‌ಸ್‌‌ನಲ್ಲಿ ಬೆಳ್ಳಿಿಘಿ, 2017ರಲ್ಲಿ ‘ುವನೇಶ್ವರದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದು ವಿಕಾಸ್ ಸಾ‘ನೆ ಮಾಡಿದ್ದಾಾರೆ.
ವಿಕಾಸ್ ಸಾ‘ನೆಗೆ ‘ಾರತ ಸರ್ಕಾರ 2017ರಲ್ಲಿ ಪದ್ಮಶ್ರೀ ಪ್ರಶಸ್ತಿಿಯನ್ನು ನೀಡಿ ಗೌರವಿಸಿದೆ. ವಿಕಾಸ್ ಗೌಡರ ನಿವೃತ್ತಿಿಯನ್ನು ‘ಾರತೀಯ ಅಥ್ಲೆೆಟಿಕ್‌ಸ್‌ ೆಡರೇಶನ್ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದೆ. ನಿವೃತ್ತಿಿಯ ನಂತರದಲ್ಲಿ ವಿಕಾಸ್ ಎಂಬಿಎಯನ್ನು ಪೂರ್ಣಗೊಳೀಸಿ, ಉದ್ದಿಮೆಯಲ್ಲಿ ತೊಡಗಿಕೊಳ್ಳುವ ನಿರ್‘ಾರಕ್ಕೆೆ ಬಂದಿದ್ದಾಾರೆ ಎನ್ನುವುದು ಕುಟುಂಬದ ಸದಸ್ಯರ ಮಾಹಿತಿ. ಸಪ್ತ ಸಾಗರದ ಆಚೆ ವಾಸವಿದ್ದರೂ ‘ಾರತವನ್ನು ಪ್ರತಿನಿಸಿ, ಜನ್ಮ‘ೂಮಿಯ ಖ್ಯಾಾತಿಯನ್ನು ಎಲ್ಲೆೆಡೆ ಪಸರಿಸಿದ ವಿಕಾಸ್ ಸಾ‘ನೆಗೆ ಹ್ಯಾಾಟ್ಸಾ್ಾ.

Wednesday, June 6, 2018

ಇದೇ ಅಲ್ಲವೇ ಅಚ್ಛೇದಿನ್ ?


(ಸಹ ಬರಹಗಾರ : ಗುರುಪ್ರಸಾದ ಕಲ್ಲಾರೆ)

ಆ ಊರಿನಲ್ಲಿ ಇದುವರೆಗೂ ಜನಸಾಮಾನ್ಯರ ಪಾಲಿಗೆ ಬೆಳಕಾಗಿದ್ದುದು ಲಾಟಿನು, ಸೀಮೆ ಎಣ್ಣೆಯ ಬುಡ್ಡಿ ದೀಪಗಳು ಮಾತ್ರ. ಆಧುನಿಕ ಸಲಕರಣೆಗಳಾದ ಮಿಕ್ಸರ್, ಗ್ರೈಂಡರ್, ಇಸ್ತ್ರಿ, ಟಿವಿ ಇವ್ಯಾವುವೂ ಆ ಊರಿನಲ್ಲಿರಲಿಲ್ಲ. ಅಷ್ಟೇ ಏಕೆ ಮೊಬೈಲುಗಳು ಒಂದಿಬ್ಬರ ಬಳಿ ಇದ್ದರೂ ಅದಕ್ಕೆ ಚಾರ್ಜೇ ಇರುತ್ತಿರಲಿಲ್ಲ. ಈ ಎಲ್ಲ ಆಧುನಿಕ ಯಂತ್ರಗಳಿಗೆ ಅಗತ್ಯವಾದ ವಿದ್ಯುತ್ ಎಂಬುದೇ ಈ ಊರಿನಲ್ಲಿರಲಿಲ್ಲ. ವಿದ್ಯುತ್ ಗಾಗಿ ಈ ಊರಿನ ಗ್ರಾಮಸ್ಥರು ಏಳು ದಶಕಗಳಿಂದ ಕಾದು ಕುಳಿತಿದ್ದರು. ಕೊನೆಗೂ ಅವರ ಕಾಯುವಿಕೆಗೆ ಫಲ ಸಿಕ್ಕಿದೆ. ಹೆಬ್ಬಾರಗುಡ್ಡದ ಪಾಲಿಗೆ ಅಚ್ಛೇದಿನ್ ವಿದ್ಯುತ್ತಿನ ರೂಪದಲ್ಲಿ ಬಂದು ತಲುಪಿದೆ. ಮನೆ ಮನೆಯನ್ನು ಬೆಳಗಿಸಿದೆ.

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಂಕೋಲಾ ನೀಡಿದ ಕೊಡುಗೆ ಅವಿಸ್ಮರಣೀಯ. ಮಹಾತ್ಮಾ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಕಹಳೆ ಕರ್ನಾಟಕದಲ್ಲಿ ಪ್ರತಿಧ್ವನಿಸಿದ್ದು ಅಂಕೋಲಾದಲ್ಲಿ. ಇಂತಹ ಅಂಕೋಲಾ ತಾಲೂಕನ ಡೋಂಗ್ರಿ ಗ್ರಾಮ ಪಂಚಾಯತದ ವ್ಯಾಪ್ತಿಯಲ್ಲೇ ಇರುವ ಕುಗ್ರಾಮ ಹೆಬ್ಬಾರ ಗುಡ್ಡ. ಹೆಬ್ಬಾರಗುಡ್ಡ ಗ್ರಾಮ ಎಲ್ಲ ಇಲ್ಲಗಳ ನಡುವೆ ಕಳೆದು ಹೋಗಿರುವ ಊರು. ಈ ಊರು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣವಾದರೂ, ಊರಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಎನ್ನುವುದು ಮರೀಚಿಕೆಯೇ ಆಗಿತ್ತು. ವಿದ್ಯುತ್, ಸರ್ವ ಋತು ರಸ್ತೆ, ಶಾಲೆ, ಆಸ್ಪತ್ರೆ ಇವ್ಯಾವುದೂ ಇರಲಿಲ್ಲ. ಬಸ್ಸಿಗೋ, ರೇಷನ್ ಗೋ ಹೋಗೋಣ ಎಂದರೆ ಕಡಿದಾದ ಬೆಟ್ಟವನ್ನು ಇಳಿದು ಅಜಮಾಸು ೧೦ ಕಿಲೋಮೀಟರ್ ನಡೆದು ಹೋಗಬೇಕಾದ ದಾರುಣ ಸ್ಥಿತಿ. ಇಂತಹ ಊರಿಗೆ ವಿದ್ಯುತ್ ಕೊಡಿ ಎನ್ನುವುದು ಆ ಗ್ರಾಮದ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿತ್ತು. ಅದೀಗ ನನಸಾಗಿದೆ.

ವಿದ್ಯುತ್ತಿಗಾಗಿ ನಡೆದ ಹೋರಾಟ

ಅಂಕೋಲಾ ಮತ್ತು ಶಿರಸಿ ತಾಲೂಕಿನ ಗಡಿ ಭಾಗದ ಗ್ರಾಮದಲ್ಲಿರುವ ಈ ಹೆಬ್ಬಾರಗುಡ್ಡ ಸಮುದ್ರಮಟ್ಟದಿಂದ ಸುಮಾರು 2000 ಅಡಿ ಎತ್ತರದಲ್ಲಿದೆ. ತಾಲೂಕಾ ಕೇಂದ್ರದಿಂದ ಸುಮಾರು 58 ಕಿಲೋಮೀಟರ್ ದೂರದಲ್ಲಿದೆ ಇರುವ ಈ ಗ್ರಾಮದಲ್ಲಿ21 ಮನೆಗಳಿದ್ದು 125 ಜನರು ವಾಸಿಸುತ್ತಾರೆ. ಸಿದ್ದಿಗಳು ಹಾಗೂ ಹವ್ಯಕರು ಈ ಗ್ರಾಮದ ನಿವಾಸಿಗಳು. ದಟ್ಟ ಕಾಡಿನ ನಡುವೆ, ಕೊರಕಲು-ಮುರುಕಲು ರಸ್ತೆಯಲ್ಲಿ ಏರಿಳಿಯುತ್ತ ಹೋದರೆ ಈ ಗ್ರಾಮದ ದರ್ಶನ ಸಾಧ್ಯ. ವಿದ್ಯುತ್ತಿಗಾಗಿ ನಡೆಸಿದ ಹೋರಾಟಕ್ಕೆ ಮಿತಿಯೇ ಇಲ್ಲ. ಎರಡು ದಶಕಗಳಿಂದ ಜನಪ್ರತಿನಿಧಿಗಳಿಗೆ ಅರ್ಜಿಗಳ ಮೇಲೆ ಅರ್ಜಿ, ಮನವಿಗಳ ಮೇಲೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರದ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಗ್ರಾಮದ ದುಸ್ಥಿತಿಯನ್ನೂ ವಿವರಿಸಲಾಗಿತ್ತು. ತದ ನಂತರದಲ್ಲಿ ಕೆಲವು ಯುವಕರು ಹೆಬ್ಬಾರಗುಡ್ಡದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಬರಹಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನೂ ಕೈಗೊಂಡರು. ವಾಟ್ಸಾಪ್, ಟ್ವೀಟರ್, ಫೇಸ್ಬುಕ್ ಗಳ ಮೂಲಕ ದೇಶದ ಮೂಲೆ ಮೂಲೆಗೆ ಹೆಬ್ಬಾರಗುಡ್ಡದ ದುಸ್ಥಿತಿ ತಿಳಿಯುವಂತೆ ಮಾಡಿದರು. ಆದರೆ ಅವರ ಹೋರಾಟಕ್ಕೂ ಈಗ ಬೆಲೆ ಸಿಕ್ಕಿದೆ.

ರಾಜ್ಯ ಸರ್ಕಾರದ ನಿರಾಸಕ್ತಿ

ಊರಿಗೆ ವಿದ್ಯುತ್ ಕೊಡಿ ಎಂದು ಹೇಳುತ್ತಿದ್ದರೂ, ರಾಜ್ಯ ಸರ್ಕಾರ ವಿದ್ಯುತ್ ಸಂಪರ್ಕಕ್ಕಾಗಿ ರಾಜೀವ ಗಾಂಧಿ ಯೋಜನೆ, ಭಾಗ್ಯಜ್ಯೋತಿ ಯೋಜನೆಯನ್ನು ಘೋಷಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂದು ಕೊಡುತ್ತೇವೆ, ನಾಳೆ ವಿದ್ಯುತ್ ಕೊಡುತ್ತೇವೆ ಎನ್ನುವ ಭರವಸೆಗಳಲ್ಲಿಯೆ ಹೆಬ್ಬಾರ ಗುಡ್ಡದ ಜನರನ್ನು ಸಾಗಹಾಕಲಾಗುತ್ತಿತ್ತು. ವಿವಿಧ ಪತ್ರಿಕೆಗಳು ಹೆಬ್ಬಾರಗುಡ್ಡದ ದುಸ್ಥಿತಿಯ ಕುರಿತು, ಬುದ್ಧಿವಂತರ ಜಿಲ್ಲೆಯಲ್ಲಿರುವ ಕತ್ತಲ ಗ್ರಾಮದ ಕುರಿತು ಪದೇ ಪದೆ ಎಚ್ಚರಿಸುತ್ತಿದ್ದರೂ, ಈ ವರದಿಗಳಿಂದ ಪ್ರೇರೇಪಿತವಾದ ರಾಜ್ಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದ್ದರೂ ಹಿಂದಿನ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ. ಸದಾ ನಿದ್ದೆಯಲ್ಲಿದ್ದ ಸರ್ಕಾರದ ಪ್ರತಿನಿಧಿಗಳು ಭರವಸೆಯಲ್ಲಿಯೇ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಕಳೆದ ವಿಧಾನಸಭಾ ಚುನಾವಣೆಯನ್ನು ಭಹಿಷ್ಕಾರ ಮಾಡುವ ನಿರ್ಧಾರವನ್ನೂ ಮಾಡಿದ್ದರು.

ಹದಿನೈದೇ ದಿನದಲ್ಲಿ ಕಾರ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೀನದಯಾಳ ಉಪಾಧ್ಯಾಯ ಕುಟೀರಜ್ಯೋತಿ ಯೋಜನೆಯಡಿಯಲ್ಲಿ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಕಾರ್ಯದಲ್ಲಿ ಫಲಾನುಭವಿಯಾದದ್ದು ಹೆಬ್ಬಾರಗುಡ್ಡ. ದೇಶದ ಕೊಟ್ಟಕೊನೆಯ ಗ್ರಾಮ, ಕಟ್ಟ ಕಡೆಯ ಮನೆಯಲ್ಲಿಯೂ ವಿದ್ಯುತ್ ಬೆಳಕು ಮಿನುಗಬೇಕೆಂಬುದು ಪ್ರಧಾನಿ ಮೋದಿಯವರ ಕನಸು. ಹೆಬ್ಬಾರಗುಡ್ಡದಲ್ಲಿ ಈ ಕನಸು ನನಸಾಗಿದೆ. ರಾಜ್ಯದ ವಿಧಾನಸಭಾ ಚುನಾವಣೆ ಮುಗಿದು ೧೫ ದಿನಗಳು ಕಳೆಯುವಷ್ಟರಲ್ಲಿಯೇ ಹೆಬ್ಬಾರ ಗುಡ್ಡಕ್ಕೆ ವಿದ್ಯುತ್ ತಂತಿ ಎಳೆಯುವ, ಟಿಸಿ ಕೂರಿಸುವ ಸೇರಿದಂತೆ ವಿದ್ಯುತ್ ಸಂಪರ್ಕ ನೀಡುವ ಎಲ್ಲ ಕಾರ್ಯಗಳೂ ನಡೆದಿರುವುದು ವಿಶೇಷ.

ಪರಿಸರ ದಿನಾಚರಣೆಗೂ ಒಂದು ದಿನ ಮೊದಲು ಅಂದರೆ ಜೂ.೪ರಂದು ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರು ಉದ್ಘಾಟಿಸುವುದರೊಂದಿಗೆ ಹೆಬ್ಬಾರಗುಡ್ಡದ ಏಳು ದಶಕಗಳ ಕತ್ತಲಿಗೆ ಪೂರ್ಣವಿರಾಮ ಬಿದ್ದಿದೆ. ಆ ಗ್ರಾಮದಲ್ಲಿ ಇನ್ನು ಬೆಳಕು ರಾರಾಜಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ನೀಡಿದ್ದೇವೆ, ನೀಡುತ್ತೇವೆ ಎಂದು ಹೇಳಿದಾಗ ಅದನ್ನು ಆಡಿಕೊಂಡವರು, ನಕ್ಕವರು ಅದೆಷ್ಟೋ ಜನ. ಎಲ್ಲಿದೆ ಅಚ್ಛೇದಿನ್ ಎಂದು ಕೇಳಿದವರಿಗಂತೂ ಲೆಕ್ಖವೇ ಇಲ್ಲ ಬಿಡಿ. ಹೀಗೆ ಕೇಳಿದವರಿಗೆಲ್ಲ ಇದೀಗ ಹೆಬ್ಬಾರಗುಡ್ಡದ ಜನರು ಇಲ್ಲಿದೆ ಅಚ್ಛೇದಿನ್ ಎಂದು ಹೇಳುತ್ತಿರುವುದು ಮೋದಿ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಿಕ್ಕಿಲ್ಲ. ಅಚ್ಛೇದಿನ್ ಕುರಿತು ಕ್ಯಾತೆ ತೆಗೆಯುವವರಿಗೆ ನಮ್ಮೂರಿಗೆ ಬರುವಂತೆ ಹೇಳುತ್ತೇವೆ ಎನ್ನುತ್ತಾರೆ ಹೆಬ್ಬಾರಗುಡ್ಡದ ಗ್ರಾಮಸ್ಥರು. ಇದೇ ಅಲ್ಲವೇ ಪುಣ್ಯಕಾರ್ಯ. ಇದೇ ಅಲ್ಲವೇ ಸರ್ಕಾರದ ಯಶಸ್ಸು?


ಪತ್ರಕರ್ತರ ಗ್ರಾಮವಾಸ್ತವ್ಯದ ಪ್ರತಿಫಲ

ಜನಪ್ರತಿನಿಧಿಗಳಿಗೆ ಮನವಿ ನೀಡಿ ಬೇಸತ್ತ ಗ್ರಾಮಸ್ಥರು ಕೊನೆಗೊಮ್ಮೆ ಪತ್ರಕರ್ತರಿಗೆ ಗ್ರಾಮ ವಾಸ್ತವ್ಯ ಮಾಡಿಸುವ ನಿರ್ಧಾರವನ್ನು ಕೈಗೊಂಡರು. ಶಿರಸಿ, ಯಲ್ಲಾಪುರ, ಅಂಕೋಲಾ ಹಾಗೂ ಕಾರವಾರಗಳ ಕೆಲವು ಪತ್ರಕರ್ತರನ್ನು ಹೆಬ್ಬಾರಗುಡ್ಡಕ್ಕೆ ಕರೆದೊಯ್ದು, ಅಲ್ಲಿ ಒಂದು ರಾತ್ರಿ ಕಳೆಯುವಂತೆ ಮಾಡಿದರು. ಅಲ್ಲಿಗೆ ತೆರಳಿದ ಪತ್ರಕರ್ತರು ಆ ಊರಿನ ದುಸ್ಥಿತಿಯನ್ನು ಅರಿತು ರಾಜ್ಯಮಟ್ಟದಲ್ಲಿ ವರದಿ ಮಾಡಿದರು. ಈ ವರದಿಗಳಿಗೆ ತ್ವರಿತವಾಗಿ ಸ್ಪಂದಿಸಿದ ಜನಪ್ರತಿನಿಧಿಗಳು ಕ್ರಮ ಕೈಗೊಂಡಿದ್ದು ಉಲ್ಲೇಖನೀಯ.


Thursday, May 17, 2018

*ಗೋಕರ್ಣ ಮಹಾತ್ಮೆ*




ಗಜಮುಖ ಗಣಪನ ಭಜಿಸಿ ಶಾರದೆಯನು ಸ್ತುತಿಸಿ
ಒರೆವೆನು ಗೋಕರ್ಣದ ಮಹಿಮೆಯ ವಿಸ್ತರಿಸಿ
ನರಲೋಕದೊಳು ಪಾಪ ಅಧಿಕವೆಂದೆನಿಸಿ
ಸುರಮುನಿ ಗೋಕರ್ಣದ ಮಹಿಮೆಯ ವಿಸ್ತರಿಸಿ
ಜಯದೇವ ಜಯದೇವ ||ಪ||



ಜಯಜಯ ವಿಘ್ನೇಶ್ವರಗೆ ಜಯಗೌರಿ ಪ್ರಿಯಗೆ
ಜಯಜಯ ಸಾಗರರಾಯ ಕೋಟೀತೀರ್ಥನಿಗೆ
ಜಯಜಯ ವೇಂಕಟರಮಣಗೆ ಮಂಕಾಳೇಶ್ವರಿಗೆ
ಜಯಜಯ ಗೋಕರ್ಣಾದ ಸರ್ವದೇವರಿಗೂ
ಜಯದೇವ ಜಯದೇವ ||೧||



ಒಂದು ದಿನ ಕೈಕಸೆಯು ಲಿಂಗವ ಪೂಜಿಸಲು
ಬಂದಾ ರಾವಣನಾ ಕಾಲಿಂದ ಛೇದಿಸಲು
ತಂದು ಕೊಡುವೆನು ಪ್ರಾಣಲಿಂಗವೆಂದೆನುತಾ
ಬಂದನೆ ಕೈಲಾಸಕ್ಕೆ ಹರಗೆ ವಂದಿಸುತಾ
ಜಯದೇವ ಜಯದೇವ ||೨||



ಬಂದಾ ರಾವಣನಾತ ಕಂಡೂ ಉಪಚರಿಸಿ
ಪ್ರಾಣಲಿಂಗವ ಕೊಡಲು ಸುರರೂ ಚಿಂತಿಸಿ
ಕಂದಾ ಗಣಪತಿಯಾ ಭಕ್ತಿಂದಾ ಪೂಜಿಸಿ
ವಂದಿಸಿ ಕಳಿಸಿದರಾಗ ಸುರರು ಸಂಸ್ತುತಿಸಿ
ಜಯದೇವ ಜಯದೇವ ||೩||



ಕಂಜಾಸಖಗರ್ಘ್ಯವನು ಕೊಡುವೆನೆಂದೆನುತಾ
ಹಂಬಲಿಸಿ ಬರುತಿರಲು ಕಂಡೂ ಬಾಲಕನಾ
ಕಂದಾ ಹಿಡಿ ಲಿಂಗವನು ಎಂದೂ ಘರ್ಜಿಸುತಾ
ಲಿಂಗವ ಕೊಟ್ಟು ನಡೆದಾನೆ ಅರ್ಘ್ಯಕೆಂದೆನುತಾ
ಜಯದೇವ ಜಯದೇವ ||೪||



ಆಡಿದ ಮಾತಿಗೆ ತಪ್ಪದೆ ಬಾಲಕ ಗಣಪ
ಮೂರು ಬಾರಿ ಕರೆದು ಲಿಂಗವ ಸ್ಥಾಪಿಸಿದ
ಆ ಮೇಳ್ಯಕೆ ಸುರರೆಲ್ಲ ಜಯಜಯ ಶಬ್ದ
ಬಂಗಾರದ ಮಳೆಗಳನೆ ಸುರಿಸಲಾಶ್ಚರ್ಯ
ಜಯದೇವ ಜಯದೇವ ||೫||



ಕೆಟ್ಟೆನೆಂದ್ ಬಾಲಕನಾ ಸಿಟ್ಟಿಲಿ ರಾವಣನು
ಮುಷ್ಟಿಲಿ ತ್ರಾಣಿಸಿ ತೆಗೆದನು ಸಜ್ಜಯಲಿಂಗವನು
ಪಂಚದಿಕ್ಕಿಗು ಒಗೆಯಲು ಪಂಚಕ್ಷೇತ್ರೆನುತಾ
ವಂಚಿಸಿ ತೆಗೆಯಲು ಬಾರದು ಶ್ರೀ ಮಹಾಬಲ ಲಿಂಗೇಶ
ಜಯದೇವ ಜಯದೇವ ||೬||



ಕಡುನಾಚಿ ರಾವಣನು ಓಡಿದನಾಕ್ಷಣದಿ
ಸುರರು ಭೂಸುರರೆಲ್ಲ ನೆರೆದರಥ್ಯದಲಿ
ನಿರ್ವಿಘ್ನದಾಯಕನೆಂದು ಪೂಜಿಸಲು
ಮೊದಲಾರಾಧನೆ ಈತನು ವಿಘ್ನೇಶ್ವರನೆಂದು
ಜಯದೇವ ಜಯದೇವ ||೭||



ಅಷ್ಟದಿಕ್ಪಾಲಕರೊಳ್ ಮಧ್ಯದಿ ಮಹಾಬಲನು
ಅರ್ಧಾಂಗಿ ಸಹಿತ ಸಾಗರನೂ ಷಣ್ಮುಖನು
ಅಷ್ಟಾಮಾವದ್ಯ ಜೋಗುಳದ ಮಧ್ಯದಲಿ
ನಿತ್ಯವು ರುದ್ರಾಭಿಷೇಕವು ಕೋಟೀತೀರ್ಥದಲಿ
ಜಯದೇವ ಜಯದೇವ ||೮||



ವರುಷಕ್ಕೆ ಬರುವದು ಮಹಾಯೋಗ ಶಿವರಾತ್ರೆ
ದರುಶನಕೆಂದ್ ಬರುವರು ಜನರ ಗಲಾಟೆ
ಪರಮಪುರುಷನ ತೇರ ಎಳೆವ ಭರಾಟೆ
ವೈಕುಂಠನಾಭ ಶ್ರೀ ವೇಂಕಟನಾ ಭೇಟಿ
ಜಯದೇವ ಜಯದೇವ ||೯||



ಸ್ತ್ರೀಹತ್ಯಾ ಶಿಶುಹತ್ಯಾ ಗೋಳತ್ಯಾಗಳನು
ನಿರ್ಮಿಸಿದನು ಬ್ರಹ್ಮನು ಮಹಾಪಾತಕಗಳನು
ದುಷ್ಕರ್ಣಿ ಚಾಂಡಾಳಿ ರಜಸ್ವಲೆ ದೋಷಂಗಳನು
ಶಿವಸ್ಮರಣೆಯೊಳ್ ಮಾತ್ರ ಸುಡುವದು ಸತ್ಯ ಪೇಳಿದರೆ
ಜಯದೇವ ಜಯದೇವ ||೧೦||



ಗೋಕರ್ಣದಲ್ಲಿರುವ ತಾಂಬರಗೌರಿ ತ್ರಾಸಿಡಿದು
ತೂಗಿದರೆ ಗೋಕರ್ಣವೇ ಮೇಲು
ಯಾತ್ರೆ ಮಾಡಿದ ವಾರ ಪಾಪ ಪರಿಹಾರ
ಕಾಶಿಯಿಂದಧಿಕ ಶ್ರೀ ಮಹಾಬಲ ಲಿಂಗೇಶ
ಜಯದೇವ ಜಯದೇವ ||೧೧||



ನಿತ್ಯ ಗೋಕರ್ಣದ ಮಹಿಮೆಯ ಪೇಳ್ವವರಿಗ್
ಸಪ್ತಜನ್ಮದ ಪಾಪವು ಕಳೆದು ಹೋಗುವುದು
ಭಕ್ತಿಮುಕ್ತಿಯು ಸಂತಾನ ಸೌಭಾಗ್ಯ
ತಪ್ಪದೆ ಕೊಡುವನು ಶ್ರೀ ಮಹಾಬಲ ಲಿಂಗೇಶ
ಜಯದೇವ ಜಯದೇವ ||೧೨||

* ಹರಹರ ಮಹಾದೇವ *



(ಹವ್ಯಕ ಬಾಂಧವರ ಪಾಲಿನ ಮಹಾನ್ ಗೀತೆ.  ನಿಮಗೆಲ್ಲ ಓದಲು ಸಿಗಲಿ ಅಂತ ಪೂರ್ತಿ ಹಾಕಿದ್ದೇನೆ. ಇದನ್ನು ಬರೆದವರು ಯಾರು ಅಂತಾ ಗೊತ್ತಿಲ್ಲ. ಆದರೆ ನಮ್ಮ ಮನೆ ಮನೆಗಳಲ್ಲಿ ಆಗಾಗ ಹಾಡ್ತಾ ಇರುತ್ತಾರೆ. ಓದಿ. )

Tuesday, May 15, 2018

ಟುಸ್ ಪಟಾಕಿ ಆಟಗಾರರು

ಈ ಸಾಲಿನ ಐಪಿಎಲ್‌ನಲ್ಲಿ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ಇನ್ನೂ ಹಲವು ಪ್ರತಿಭೆಗಳು ಅತ್ಯುತ್ತಮ ಆಟದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿವೆ. ಇನ್ನೂ 20 ವರ್ಷವೂ ಆಗದ ಆಟಗಾರರು ದಿಗ್ಗಜರೇ ಮೆಚ್ಚುವಂತೆ ಆಟವನ್ನಾಡಿ ಚಿತ್ತ ಸೂರೆಗೊಂಡಿದ್ದಾಾರೆ. ಇದರ ನಡುವೆಯೇ ಐಪಿಎಲ್‌ಗೂ ಮೊದಲು ಸಾಕಷ್ಟು ಸದ್ದು ಮಾಡಿದ್ದ ಆಟಗಾರರು ಟುಸ್ ಪಟಾಕಿಗಳಾಗಿದ್ದಾಾರೆ. ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ವಿಲರಾಗಿದ್ದಾರೆ.

ಯುವರಾಜ್ ಸಿಂಗ್
ಈ ಐಪಿಎಲ್‌ನಲ್ಲಿ ಸದ್ದು ಮಾಡಲು ವಿಲರಾದ ಆಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರೇ ಯುವರಾಜ್ ಸಿಂಗ್. 2011ರ ವಿಶ್ವಕಪ್ ಹೀರೋ ಎಂದೇ ಬಣ್ಣಿಸಲ್ಪಡುವ ಟಿ20 ಸ್ಪೆಷಲಿಸ್‌ಟ್‌‌, ಸಿಕ್ಸರ್‌ಗಳ ಸರದಾರ ಈ ಐಪಿಎಲ್‌ನಲ್ಲಿ ಪ್ರಭಾವಿ ಎನ್ನಿಸಲೇ ಇಲ್ಲ. ಕಿಂಗ್‌ಸ್‌ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಯುವಿ ತಾನಾಡಿದ ಏಳು ಪಂದ್ಯಗಳ ಐದು ಇನ್ನಿಂಗ್ಸ್ಗಳಲ್ಲಿ  ಭಾರಿಸಿದ ರನ್ ಕೇವಲ 64. ಗರಿಷ್ಠ ಮೊತ್ತ 20. ಸರಾಸರಿ 12.80.

ಆರೋನ್ ಫಿಂಚ್.
ಪಂಜಾಬ್ ತಂಡದ ಇನ್ನೋರ್ವ ಆಟಗಾರ ಆರೋನ್ ಫಿಂಚ್ ಕೂಡ ಈ ಸಾರಿ ಟುಸ್ ಪಟಾಕಿಯಾಗಿದ್ದಾಾರೆ. ಮದುವೆ ಮುಗಿಸಿ ಸೀದಾ ಐಪಿಎಲ್ ಅಂಗಳಕ್ಕೆ ಕಾಲಿರಿಸಿದ್ದ ಫಿಂಚ್ ಒಂದೇ ಒಂದು ಪಂದ್ಯದಲ್ಲೂ ಮಿಂಚಿಲ್ಲ. ಫಿಂಚ್ ಗಳಿಗೆ 7 ಪಂದ್ಯಗಳ 6 ಇನ್ನಿಂಗ್ಸ್ಗಳಲ್ಲಿ  58ರನ್. ಗರಿಷ್ಠ 34. ಸರಾಸರಿ 11.60.

ಗೌತಮ್ ಗಂಭೀರ್
ಒಂದಾನೊಂದು ಕಾಲದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ಆಗಿದ್ದ ಗೌತಮ್ ಗಂಭೀರ್‌ಗೆ ಈ ಐಪಿಎಲ್‌ನಲ್ಲಿ ದುರದೃಷ್ಟ ವಕ್ಕರಿಸಿದಂತಿದೆ. ಮೊದಲು ಬ್ಯಾಟಿಂಗ್‌ನಲ್ಲಿ ವಿಫಲ, ಆಮೇಲೆ ತಂಡಕ್ಕೆ ಸಾಲುಸಾಲು ಸೋಲು. ಬೆನ್ನಲ್ಲೇ ನಾಯಕತ್ವಕ್ಕೆ ರಾಜೀನಾಮೆ. ಅಷ್ಟಲ್ಲದೇ ಪಂದ್ಯಗಳಿಂದಲೂ ಹೊರಗುಳಿಯುವಂತಹ ಪರಿಸ್ಥಿತಿ. ಗಂಭೀರ್ ಈ ಋತುವಿನಲ್ಲಿ ಆಡಿದ್ದು 6 ಪಂದ್ಯಗಳು. ಅದರಲ್ಲಿ 5 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಮಾಡಿದ ಗಂಭೀರ್ ಭಾರಿಸಿದ್ದು 85 ರನ್. ಗರಿಷ್ಠ 55. ಸರಾಸರಿ 17.

ಕೀರನ್ ಪೊಲಾರ್ಡ್
ಟಿ20 ಸ್ಪೆಷಲಿಸ್ಟ್ , ವಿಂಡೀಸ್ ದೈತ್ಯ ಈ ಋತುವಿನಲ್ಲಿ ಆಡಿದ್ದು 7 ಪಂದ್ಯ. ಅದರಲ್ಲಿ 6 ಇನ್ನಿಂಗ್ಸ್ಗಳಲ್ಲಿ  ಭಾರಿಸಿದ ರನ್ 76. ಗರಿಷ್ಠ 28. ಸರಾಸರಿ 15.20. ಮುಂಬಯಿ ತಂಡದ ಖಾಯಂ ಆಟಗಾರರಲ್ಲಿ ಒಬ್ಬ ಎಂದೇ ಬಿಂಬಿಸಲ್ಪಟ್ಟಿದ್ದ ಪೊಲಾರ್ಡ್ ಈ ಸಾರಿ ಬೌಲಿಂಗ್‌ನಲ್ಲೂ ವಿಫಲ. ಈ ಕಾರಣದಿಂದಲೇ ತಂಡದ ಮ್ಯಾನೇಜ್‌ಮೆಂಟ್ ಪೊಲಾರ್ಡ್‌ರನ್ನು ಹೊರಕ್ಕೆ ಕೂರಿಸಿದೆ.

ಸರ್ರಾಜ್ ಖಾನ್
ಆರ್‌ಸಿಬಿ ಈ ಋತುವಿನಲ್ಲಿ ರೀಟೇನ್ ಮಾಡಿಕೊಂಡ ಆಟಗಾರ ಸರ್ರಾಜ್ ಖಾನ್. ಆದರೆ ರೀಟೇನ್‌ಗೆ ತಕ್ಕಂತೆ ಆಟವಾಡಲು ವಿಲನಾಗಿರುವ ಸರ್ರಾಜ್ ಖಾನ್ ಫೈಲ್ಯೂರ್  ಸ್ಟಾರ್ ಎಂದೇ ಕುಖ್ಯಾತಿ ಪಡೆದಿದ್ದಾನೆ. ಆಡಿದ 4 ಪಂದ್ಯಗಳಲ್ಲಿ ಭಾರಿಸಿದ್ದು 22 ರನ್. ಗರಿಷ್ಠ 11. ಸರಾಸರಿ 5.50. ವಿಚಿತ್ರ ಎಂದರೆ ಆರ್‌ಸಿಬಿಯ ಎಷ್ಟೋ ಬೌಲರ್‌ಗಳು ಸರ್ರಾಜ್ ಖಾನ್‌ಗಿಂತ ಹೆಚ್ಚಿನ ರನ್ ಹೊಡೆದಿದ್ದಾರೆ. ಆದರೆ ಆರ್‌ಸಿಬಿ ಮಾತ್ರ ಈತನ ಮೇಲೆ ಇನ್ನೂ ನಂಬಿಕೆ ಇಟ್ಟಂತಿದೆ.

ವೃದ್ದಿಮಾನ್ ಸಾಹ
ಭಾರತದ ಟೆಸ್ಟ್  ತಂಡದ ಖಾಯಂ ಆಟಗಾರ. ಅತ್ಯಂತ ವೇಗದ ಶತಕ ಭಾರಿಸಿ ದಾಖಲೆ ನಿರ್ಮಿಸಿದಾತ. ಹೈದರಾಬಾದ್ ತಂಡದ ಈ ಆಟಗಾರ ಐಪಿಎಲ್‌ನ ಈ ಋತುವಿನಲ್ಲಿ ಸಂಪೂರ್ಣ ಟುಸ್ ಪಟಾಕಿ. ಆಡಿದ್ದು 10 ಪಂದ್ಯಘಿ. ಬ್ಯಾಟಿಂಗ್ ಸಿಕ್ಕಿದ್ದು 9 ಪಂದ್ಯದಲ್ಲಿ. ಗಳಿಸಿದ ರನ್ 87. ಗರಿಷ್ಠ 24. ಸರಾಸರಿ 12.42. ಕೀಪಿಂಗ್ ಮಾಡುತ್ತಾಾರೆ ಎನ್ನುವುದಷ್ಟೇ ಸಾಹಾ ಪಾಲಿಗೆ ಸ‘್ಯಕ್ಕಿಿರುವ ಪ್ಲಸ್ ಪಾಯಿಂಟ್

Monday, May 14, 2018

ಗುಂಡು, ಬಾಂಬುಗಳ ನಾಡಿನ ಕ್ರಿಕೆಟ್ ಪ್ರೀತಿ

ಕಳೆದ ವರ್ಷ ಟೆಸ್ಟ್ ಮಾನ್ಯತೆ ಪಡೆದ ಎರಡು ರಾಷ್ಟ್ರಗಳಲ್ಲೊಂದು ಅಫಘಾನಿಸ್ತಾನ.  ಸದಾ ಬಾಂಬು ಸಿಡಿಯುವ, ಬಂದೂಕಿನ ಮೊರೆತ ಗೇಳುವ, ಗುಂಡಿನ ಸದ್ದು ಅನುರಣಿಸುವ ನಾಡಿಗೆ ಟೆಸ್ಟ್  ಮಾನ್ಯತೆ ಸಿಕ್ಕಿದೆ. ಅಫ್ಘಾನ್ ನಾಡಿನ ಕ್ರಿಕೆಟ್ ಪ್ರೀತಿಗೆ ಟೆಸ್ಟ್  ಮಾನ್ಯತೆ ಸಿಕ್ಕಿದ್ದು, ಮುಂದಿನ ತಿಂಗಳು ಭಾರತ ವಿರುದ್ಧ ತಮ್ಮ ಮೊಟ್ಟ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ.
ರಷ್ಯಾ ಅತಿಕ್ರಮಣ, ಮುಜಾಹಿದಿನ್‌ಗಳ ಅಟ್ಟಹಾಸ, ತಾಲೀಬಾನಿಗಳ ಅಬ್ಬರ, ಲಾಡೆನ್, ಓಮರ್‌ಗಳ ಉಗ್ರವಾದ, ಅಮೆರಿಕಾದ ಸತತ ದಾಳಿ ಹೀಗೆ ಅಫಘಾನಿಸ್ತಾನದ  ಮೇಲೆ ನಡೆಯದ ಸಾಲು ಸಾಲು ಹಿಂಸಾಕೃತ್ಯಗಳಿಗೆ ಕೊನೆಯೇ ಇಲ್ಲ. ಯಾವ ಕ್ಷಣದಲ್ಲಿ ಏನಾಗುತ್ತದೆಯೋ, ಯಾವ ಜಾಗದಲ್ಲಿ ಬಾಂಬುಗಳು ಸಿಡಿದು ಯಾರನ್ನು ಬಲಿತೆಗೆದುಕೊಳ್ಳುತ್ತದೆಯೋ? ಮತಾಂಧ  ಉಗ್ರರು ಯಾವ ಸಂದರ್ಭದಲ್ಲಿ  ದಾಳಿ ಮಾಡಿ ಹತ್ಯೆ ಮಾಡುವರೋ, ಹೀಗೆ ಕ್ಷಣ ಕ್ಷಣವೂ ಆತಂಕ ತುಂಬಿದ ನಾಡಲ್ಲಿ ಕ್ರಿಕೆಟ್ ಅರಳಿ ನಿಂತಿದೆ. ನೆರೆಯ ಭಾರತ, ಪಾಕಿಸ್ತಾನಗಳಂತೆ ಅಫ್ಘಾನಿಗಳು  ಕ್ರಿಕೆಟನ್ನು ವಿಶೇಷವಾಗಿ ಪ್ರೀತಿಸಿದ್ದು, ದಿನದಿಂದ ದಿನಕ್ಕೆ ಮಾಗುತ್ತಿದ್ದಾರೆ. ಅವರ ಸತತ ಪರಿಶ್ರಮಕ್ಕೆ ಟೆಸ್ಟ್  ಮಾನ್ಯತೆ ಸಿಕ್ಕಿದೆ.
ಇತಿಹಾಸ :
19ನೇ ಶತಮಾನದಲ್ಲಿ ಆಂಗ್ಲೋ  ಆಫ್ರಿಕನ್ ಯುದ್ಧದಲ್ಲಿ  ಅಫ್ಘಾನ್ ಯೋದರು ಬಳಕೆಯಾದರು. ಆ ಯೋಧರಿಗೆ ಕ್ರಿಕೆಟ್ ಕಲಿಸಿದ್ದು ಬ್ರಿಟೀಷರು. ಈ ಬ್ರಿಟೀಷರೇ 1839ರಲ್ಲಿ ಕಾಬೂಲಿನಲ್ಲಿ ಮೊದಲು ಕ್ರಿಕೆಟ್ ಆಡಿದರು ಎನ್ನುವ ದಾಖಲೆಗಳೂ ಇವೆ. ಆದರೆ ನಂತರದ ದಿನಗಳಲ್ಲಿ ಆ ದೇಶಕ್ಕೆ ಕ್ರಿಕೆಟ್ ಮರಳಲು 160 ವರ್ಷಗಳೇ ಬೇಕಾದವು.
1990ರ ದಶಕದ ಸಂದರ್ಭರ್ದಲ್ಲಿ ಯುದ್ಧಪೀಡಿತ ನಾಡಿನಲ್ಲಿ ಎಲ್ಲೆಡೆ ಬಯಲೇ ಇದ್ದರೂ, ಕ್ರಿಕೆಟ್ ಮುಂತಾದ ಆಟಕ್ಕೆ ಅವಕಾಶವೇ ಇರಲಿಲ್ಲ. ದೇಶದಲ್ಲಿ ಕ್ರಿಕೆಟ್‌ಗೆ ಬ್ಯಾನ್ ಮಾಡಿದ್ದ ತಾಲೀಬಾನಿಗಳು ಸ್ಥಳೀಯರು ಕ್ರಿಕೆಟ್ ಆಡಲು ಮುಂದಾದರೆ ಗುಂಡಿಕ್ಕುತ್ತಿದ್ದ ಕಾಲವೂ ಇತ್ತು. ಜೀವ ಉಳಿಸಿಕೊಳ್ಳುವ ಸಲುವಾಗಿ ಪಾಕಿಸ್ತಾಾನಕ್ಕೆ ವಲಸೆ ಬಂದವರು, ಪಾಕಿಸ್ತಾನಿಯರ ಜೊತೆ ಕ್ರಿಕೆಟ್ ಆಡುತ್ತ ಆಡುತ್ತ ತಮ್ಮದೇ ತಂಡವನ್ನು ಕಟ್ಟಿಕೊಂಡರು. ಸಮಯ ಸಿಕ್ಕಾಗಲೆಲ್ಲ ತಮ್ಮೊಳಗಿನ ಕ್ರಿಕೆಟ್‌ಗೆ ಪೋಷಣೆ ನೀಡಿದರು. ಪಾಕಿಸ್ತಾನದ ನೆಲದಲ್ಲಿಯೇ ತಮ್ಮ ತಂಡವನ್ನೂ ಕಟ್ಟಿಕೊಂಡ  ಅಫ್ಘಾನ್ರು ತಂಡಕ್ಕೆ ಒಳ್ಳೆಯ ಕೋಚನ್ನು ನೇಮಿಸಿ ಶಸೋಕ್ತವಾಗಿ ಕ್ರಿಕೆಟ್ ಕಲಿತರು. ಯುದ್ಧ ಮುಗಿದ ಮೇಲೆ  ಅಫ್ಘಾನ್ಗೆ ಮರಳಿದ ಇವರು ಅಲ್ಲಿ ಕ್ರಿಕೆಟ್ ಬೇರುಗಳನ್ನು ಬಿತ್ತಿದರು. ನಂತರ ನಡೆದಿದ್ದು ಇತಿಹಾಸ.
1995ರಲ್ಲಿ ಅ್ಘಾನಿಸ್ತಾನ ಕ್ರಿಕೆಟ್ ೆಡರೇಶನ್ ಅಸ್ತಿಿತ್ವಕ್ಕೆೆ ಬಂದಿತು. ವರ್ಷದಿಂದ ವರ್ಷಕ್ಕೆೆ ಗುಣಮಟ್ಟದ ಕ್ರಿಿಕೆಟ್ ಆಡಿದ ಪರಿಣಾಮ 2009ರಲ್ಲಿ ಅ್ಘಾನಿಸ್ತಾಾನಕ್ಕೆೆ ಏಕದಿನ ಪಂದ್ಯಗಳನ್ನು ಆಡಲು ಮಾನ್ಯತೆ ಸಿಕ್ಕಿಿತು. 2012ರಲ್ಲಿ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಆಡಲು ಅರ್ಹತೆ ಪಡೆಯಿತು. ಪ್ರಸ್ತುತ ಅ್ಘಾನಿಸ್ತಾಾನದಲ್ಲಿ ಕ್ರಿಿಕೆಟ್ ಜನಪ್ರಿಿಯ ಕ್ರೀಡೆಯಾಗಿದೆ. ಯುದ್ಧಘಿ, ಬಾಂಬು, ಗುಂಡಿನ ಮೊರೆತದ ನಡುವೆಯೂ ಕ್ರಿಕೆಟ್ ಅರಳಿದೆ. ಅ್ಘಾನಿಗಳು ಎಲ್ಲವನ್ನೂ ಮರೆತು ಕ್ರಿಿಕೆಟ್ ಆಡಲು ಮುಂದಾಗುತ್ತಿಿರುವುದು ವಿಶೇಷ. ಅಷ್ಟೇ ಏಕೆ ಬಲಾಢ್ಯ ತಂಡಗಳನ್ನು ಹೆಡೆಮುರಿ ಕಟ್ಟಿಿ 2019ರ ವಿಶ್ವಕಪ್‌ಗೂ ಅರ್ಹತೆ ಪಡೆದುಕೊಂಡಿದೆ.
ಅ್ಘಾನಿಸ್ತಾಾನ ಕ್ರಿಿಕೆಟ್ ಮಂಡಳಿ
ಕಾಬೂಲ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಅ್ಘಾನಿಸ್ತಾಾನ ಕ್ರಿಿಕೆಟ್ ಮಂಡಳಿ 2013ರಿಂದ 2017ರ ವರೆಗೆ ಐಸಿಸಿಯ ಸಹ ಸದಸ್ಯ ರಾಷ್ಟ್ರ ಸ್ಥಾಾನಮಾನ ಹೊಂದಿತ್ತು. 2017ರಲ್ಲಿ ಟೆಸ್‌ಟ್‌ ಮಾನ್ಯತೆ ಪಡೆದ ನಂತರ ಪೂರ್ಣಾವ ಸದಸ್ಯ ರಾಷ್ಟ್ರ ಸ್ಥಾನಮಾನ ಹೊಂದಿದೆ.
ಕ್ರಿಕೆಟ್ ಮೈದಾನ
ಟೆಸ್‌ಟ್‌ ಮಾನ್ಯತೆ ಪಡೆದಿರುವ ರಾಷ್ಟ್ರವಾಗಿದ್ದರೂ ಅ್ಘಾನಿಸ್ತಾಾನದ ನೆಲದಲ್ಲಿ ಇದುವರೆಗೂ ಒಂದೇ ಒಂದು ಅಂತಾರಾಷ್ಟ್ರೀಯ ಕ್ರಿಿಕೆಟ್ ಪಂದ್ಯಗಳು ನಡೆದಿಲ್ಲ. ಗುಣಮಟ್ಟದ ಮೈದಾನದ ಕೊರತೆ ಹಾಗೂ ಸದಾಕಾಲ ಉಗ್ರರ ‘ಾಳಿಯ ‘ಯವೇ ಇದಕ್ಕೆ ಕಾರಣ. ತಾಲೀಬಾನ್ ಸೇರಿದಂತೆ ಹಲವು ಉಗ್ರರ ಪ್ರಾಾಬಲ್ಯ ಜಾಸ್ತಿ ಇರುವ ಕಾರಣ ಯಾವುದೇ ತಂಡಗಳೂ ಅ್ಘಾನಿಸ್ತಾಾನದಲ್ಲಿ ಕ್ರಿಿಕೆಟ್ ಆಡಲು ಮುಂದಾಗಿಲ್ಲಘಿ.
ಅ್ಘಾನಿಸ್ತಾಾನ ಕೆಲಕಾಲ ಶ್ರೀಲಂಕಾದ ರಣಗಿರಿ ದಂಬುಲಾ ಮೈದಾನವನ್ನು ತನ್ನ ಹೋಂ ಪಿಚ್ ಮಾಡಿಕೊಂಡಿತ್ತುಘಿ. ಟಿ20 ಪಂದ್ಯಗಳಿಗಾಗಿ ಯುಎಇಯ ಶಾರ್ಜಾ ಕ್ರಿಿಕೆಟ್ ಅಸೋಸಿಯೇಶನ್‌ನ ಮೈದಾನವನ್ನು ಹೋಂ ಗ್ರೌೌಂಡ್ ಮಾಡಿಕೊಂಡಿತ್ತುಘಿ. ಪ್ರಸ್ತುತ ‘ಾರತದ ಗ್ರೇಟರ್ ನೋಯ್ಡಾಾದ ಶಹೀದ್ ವಿಜಯ್ ಸಿಂಗ್ ಪಥೀಕ್ ಕ್ರೀಡಾ ಸಂಕೀರ್ಣದ ಮೈದಾನವನ್ನು ಹೋಂ ಗ್ರೌೌಂಡ್ ಮಾಡಿಕೊಂಡಿದೆ.
ಅ್ಘಾನಿಸ್ತಾಾನದ ಜಲಾಲಾಬಾದ್, ಕಂದಾಹಾರ್ ಹಾಗೂ ಕಾಬೂಲ್‌ಗಳಲ್ಲಿ ಹೊಸ ಮೈದಾನಗಳನ್ನು ನಿರ್ಮಾಣ ಮಾಡಲಾಗುತ್ತಿಿದೆ. ‘ಾರತ ಈ ಮೈದಾನಗಳ ನಿರ್ಮಾಣ ಕಾರ್ಯ ಕೈಗೆತ್ತಿಿಕೊಂಡಿರುವುದು ವಿಶೇಷ.
ಪ್ರತಿ‘ಾವಂತ ಆಟಗಾರರು
ಅ್ಘಾನ್ ತಂಡ ಪ್ರತಿ‘ಾವಂತ ಆಟಗಾರರ ಖನಿ ಎಂದರೆ ತಪ್ಪಾಾಗಲಿಕ್ಕಿಿಲ್ಲಘಿ. ಮೊತ್ತಮೊದ ನಾಯಕ ನವ್ರೋೋಜ್ ಮಂಗಲ್, ಹೊಡೆ ಬಡಿ ದಾಂಡಿಗ ಮೊಹಮ್ಮದ್ ಶೆಹಜಾದ್, ಆಲ್‌ರೌಂಡರ್ ಮೊಹಮ್ಮದ್ ನಬಿ, ವಿಶ್ವ ಟಿ20 ನಂ.1 ಬೌಲರ್ ರಶೀದ್ ಖಾನ್, ಉದಯೋನ್ಮುಖ ಪ್ರತಿ‘ೆ ಮುಜೀಬ್ ಉರ್ ರೆಹಮಾನ್, ಜದ್ರಾಾನ್ ಸಹೋದರರು ಹೀಗೆ ಹಲವು ಪ್ರತಿ‘ೆಗಳು ತಂಡದಲ್ಲಿದ್ದು ದಿನದಿಂದ ದಿನಕ್ಕೆೆ ಅ್ಘಾನ್ ತಂಡವನ್ನು ಯಶಸ್ಸಿಿನ ಕಡೆಗೆ ಕರೆದೊಯ್ಯುತ್ತಿಿವೆ.  ಇದೀಗ ಅ್ಘಾನ್ ‘ಾರತದ ವಿರುದ್ಧ ಟೆಸ್‌ಟ್‌ ಪಂದ್ಯಕ್ಕೆೆ ಸಜ್ಜಾಗಿದೆ. ಅ್ಘಾನಿಸ್ತಾಾನದ ತಂಡಕ್ಕೆೆಘಿ, ಶ್ರಮಕ್ಕೆೆ, ಹ್ಯಾಾಟ್ಸಾ್ಾ.