Thursday, November 8, 2012

ಪರಿತಾಪಿಯ ಪ್ರೇಮಪತ್ರ

ಪರಿತಾಪಿಯ ಪ್ರೇಮಪತ್ರ

ಮನದ ಮೂಸೆಯಿಂದರಳಿದ ಪ್ರೇಮಕಾವ್ಯ


ಒಲವಿನ ಗೆಳತಿ,
    ನೀನು ಇಷ್ಟು ಬೇಗ ಹೀಗೆ ರಿಯಾಕ್ಟ್ ಆಗ್ತೀಯಾ ಅಂತ ನಾನು ತಿಳಿದಿರಲಿಲ್ಲ. ನೀನು ಒಪ್ಪದೇ ಇರಬಹುದು, ನನ್ನ ಲೈಕ್ ಮಾಡದೇ ಇರಬಹುದು ಅಂದ್ಕೊಂಡಿದ್ದೆ. ನಿನ್ನ ನಿರ್ಧಾರ ಕೇಳಿನ ನನ್ನೊಡಲಿನಲ್ಲಿ ಅದೆಷ್ಟೋ ಹರ್ಷಗಳು ಚಿಲುಮೆ ಉಕ್ಕಿ ಒಡೆದು ಎಂತಹ ಮಧುರ ಯಾತನೆಯಾಯ್ತು ಅಂತೀಯಾ...
    ನೀನು ನನ್ನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟ ಕ್ಷಣವೇ ನನ್ನ ಮನದ ಮರುಭೂಮಿಯೊಳಗೆ ವರ್ಷಧಾರೆ ಸುರಿದಂತಾಗಿಬಿಟ್ಟಿತು. ಅಂತೂ ಜೀವನದಲ್ಲಿ ಮೊದಲಬಾರಿಯೋ ಎಂಬಂತೆ ನಾನು ಆಸೆ ಪಟ್ಟಿದ್ದು, ಇಷ್ಟಪಟ್ಟಿದ್ದು ನನ್ನ ಕೈ ಹಿಡಿದಿದೆ. ಇಂಥಾ ಹೊತ್ನಲ್ಲೇ ನನ್ನ ಮನಸ್ಸು ಅದೆಷ್ಟು ಕವನಗಳನ್ನು ದೊಡ್ಡ ಹಬ್ಬದಲ್ಲಿ ಪುಂಡಿ ನಾರಿನ ಹಗ್ಗ ಹೊಸೆದಂತೆ ಹೊಸೆಯಲಾರಂಭಿಸಿದೆ ಗೊತ್ತಾ...
    ಅದು ಹಾಗಿರಲಿ ಬಿಡು, ನನಗೆ ನೀನು ಯಾಕಿಷ್ಟವಾದೆ ಅನ್ನುವುದನ್ನು ಮೊದಲು ಹೇಳಿಬಿಡುತ್ತೇನೆ ಕೇಳು. ಆ ನಿನ್ನ ನಗು, ನಕ್ಕಾಗ ಗುಳಿ ಬೀಳುವ ಕೆನ್ನೆ, ಇಂಪಾದ ಧ್ವನಿ ಇವೆಲ್ಲವೂ ನನ್ನನ್ನು ಮೊದಲು ಇಂಪ್ರೆಸ್ ಮಾಡಿದ್ದು. ಆ ನಂತರ ನೀನು ಮೊದಲು ನನ್ನ ಕವನಗಳ ಅಭಿಮಾನಿಯಾಗಿ `ನೀನು ಚೊಲೋ ಕವನ ಬರೀತೆ ಹಾ.. ಐ ಲೈಕ್ ಇಟ್..' ಎಂದಾಗ ಹೊಸ ಗೆಳತಿಯೊಬ್ಬಳು ಸಿಕ್ಕಳು ಅಂದ್ಕೊಂಡಿದ್ದೆ. ಆ ನಂತರವೇ ಅಲ್ಲವೇ ನಾನು ನಿನ್ನನ್ನು ಸಂಪೂರ್ಣವಾಗಿ ಅರಿತಿದ್ದು.
    ನಿನ್ನ ಗುಣಗಳು, ನಿನ್ನ ಗುರಿಗಳು, ಮನದಾಳದ ತುಮುಲಗಳು, ಭಾವನೆಗಳು, ಜೊತೆಗೆ ಬದುಕೂ ಕೂಡ.. ಇವೆಲ್ಲ ನನ್ನದರಂತೆಯೇ ಇವೆ ಎಂದು ಅರಿತಿದ್ದು ಆ ನಂತರವೇ ಅಲ್ಲವೇ. ಹೀಗೆಲ್ಲಾ ಇಷ್ಟಪಟ್ಟರೂ ನಿನ್ನ ಬಳಿ ನನ್ನ ಮನದಾಳದ ಬಯಕೆಯನ್ನು ತಿಳಿಸಲು ಅದೆಷ್ಟು ಕಷ್ಟಪಟ್ಟುಬಿಟ್ಟಿದ್ದೆನಲ್ಲಾ... ಎಲ್ಲರಿಗೂ ಹಾಗೆಯೇ ಆಗ್ತದಾ ಎಂಬ ತಳಮಳ.. ಮನದೊಳಗೆ ಅದೇನೋ ದುಗುಡ. ಹೇಳಿಕೊಳ್ಳಲಾಗದ ಚಡಪಡಿಕೆ. ನೀನು ಒಪ್ಕೋತೀಯೋ, ಇಲ್ವೋ.. ಸಿಟ್ಟಾಗಿಬಿಡ್ತೀಯೋ.. ನಿನ್ನೆಡೆಗೆ ಹುಟ್ಟಿದ ಪ್ರೀತಿ ನಮ್ಮಿಬ್ಬರ ನಡುವಣ ಸ್ನೇಹವನ್ನು ಕೊಂದುಹಾಕಿದರೆ... ಎಂಬ ಆತಂಕ.. ನೀನು ಎಲ್ಲಿ ನನ್ನನ್ನು ತಿರಸ್ಕರಿಸಿ, ನನ್ನನ್ನು ಅವಮಾನದ ಕೋಟೆಯೊಳಗೆ ಮುಳುಗುವಂತೆ ಮಾಡುತ್ತೀಯೋ ಎಂಬ ಭಯ.. ಇಂತಹ ಭಾವನೆಗಳ ತೊಳಲಾಟದ ನಡುವೆ ಅನೇಕ ದಿನಗಳನ್ನು ದೂಡಿದೆ.
    ಇನ್ನಾಗೋದೇ ಇಲ್ಲ.. ಅಂತ ಕೊನೆಗೊಂದು ದಿನ ನೀನು ಕೇಳಿದ್ದ ಒಂದು ಪುಸ್ತಕದ ನಡುವಣ ಯಾವುದೋ ಪುಟದ ಮಧ್ಯ ನನ್ನ ಭಾವನೆಗಳನ್ನೆಲ್ಲ ಅಕ್ಷರ ರೂಪಕ್ಕೆ ಇಳಿಸಿ, ನನ್ನ ಪ್ರೀತಿಸ್ತೀಯಾ ಅಂತ ಕೇಳಿ ಬರೆದಿಟ್ಟುಬಿಟ್ಟಿದ್ದು ಇನ್ನೂ ನೆನಪಿದೆ ಅಲ್ವಾ.. ಕೊನೆಗೊಮ್ಮೆ ನೀನು ತಿರುಗಿ ಬಂದು ಸಿಟ್ಟಾಗದೇ ನನಗೆ ಪುಸ್ತಕ ಮರಳಿಸಿ ಹೂ ನಗು ನಕ್ಕು ಹೋದೆಯಲ್ಲಾ ಆಗಲೇ ನನಗೆ ಮೂರನೇ ಸಾರಿ ಜೀವ ಬಂದಿದ್ದು. ನಾನು ಕೊಟ್ಟ ಪತ್ರಕ್ಕೆ ಉತ್ತರವೋ ಎಂಬಂತೆ ನೀನು ಕೊಟ್ಟ ನವಿಲುಗರಿಯನ್ನು ಜೋಪಾನವಾಗಿ ಇಟ್ಟಿದ್ದೇನೆ. ಈ ವಿಷಯ ಯಾರಿಗೂ ಗೊತ್ತಿಲ್ಲ ಹಾಂ ಮತ್ತೆ...ನಾನು ಪ್ರೇಮ ಪತ್ರ ಕೊಟ್ಟು, ನೀನು ಮರಳಿ ಉತ್ತರ ಹೇಳುವ ನಡುವೆ ನಾನು ಎದುರಿಸಿದ ಭಾವನೆಗಳು ಶಬ್ದಕ್ಕೆ ನಿಲುಕೋದಿಲ್ಲ..ಮುಂದೊಂದು ದಿನ ಎಂದಾದರೂ ಕವಿತೆಯಾಗಿ ಹೊರ ಬೀಳಬಹುದು ಬಿಡು..
    ಆದರೂ.. ನೀನು ಒಪ್ಪಿಬಿಟ್ಟೆಯಲ್ಲಾ.. ಇನ್ನೇನು ಬಿಡು.. ಒಂದು ಟೆನ್ಶನ್ ತಪ್ಪಿದ ಹಾಗಾಯಿತು. ಹಾಗೇ ನನ್ನ ಬದುಕಿನಲ್ಲಿ ಬಂದಿದ್ದೀಯಾ.. ನನ್ನ ಮನಸ್ಸಿನ ಮೂಟೆಗೆ ನಿನ್ನ ಬದುಕೆಂಬ ಮೊಬೈಲಿನಿಂದ ಆಗಾಗ ಮೆಸೇಜ್ ಮಾಡ್ತಾ ಇರು ಮಾರಾಯ್ತಿ,,, ನನ್ನ ಇನ್ ಬಾಕ್ಸ್ ಖಾಲಿ ಹೊಡಿತಾ ಇದೆ. ಅದಕ್ಕಾಗಿಯೇ ಕಾಯ್ತಾ ಇದ್ದೇನೆ.. ಈಗಷ್ಟೇ ನೀನು ನನ್ನಿಂದ ಬೀಳ್ಕೊಟ್ಟು, ನಾಳೆ ಬರ್ತೀನಿ ಅಂತ ಹೇಳಿ ಹೋಗಿದ್ದೀಯಾ,.. ಹುಚ್ಚು ಖೋಡಿ ಮನಸ್ಸು ಕೇಳ್ತಾನೇ ಇಲ್ಲ ನೋಡು... ಬರಹಕ್ಕೆ ಹಚ್ಚಿಬಿಟ್ಟಿದೆ..
    ಮತ್ತೆ ನಾಳೆ ಸಿಗ್ತೀನಿ.. ಬದುಕಿನ ಭಾವನೆಗಳ ವಿನಿಮಯ ಮಾಡಿಕೊಳ್ಳೋಣ.. ಸರಿ ಮಾರಾಯ್ತಿ.. ಈಗ ಇನ್ನು ಹೆಚ್ಚು ಹೇಳಲಾರೆ.. ಭಾವದಾಟ ಮೇರೆ ಮೀರ್ತಾಇದೆ.. ಬರಹಕ್ಕೊಂದು ಕೊನೆ ಬಿಂದು ಇಡ್ತೀನಿ..

ಇಂತಿ ನಿನ್ನವ
ತೇಜಸ್ವಿ.

(ಪ್ರೇಮದ ಕಾಣಿಕೆ.. ಪ್ರೀತಿಯಲ್ಲಿ ಬಿದ್ದವನ ಮೊದಲ ಪ್ರೇಮಪತ್ರ ಹೀಗಿರಬಹುದಾ... ಸುಮ್ಮನೇ ಬರೆದಿದ್ದು.. ಹೆಂಗಿದೇ ಅನ್ನೋದನ್ನು ಕಮೆಂಟಿಸಿ..)

Wednesday, November 7, 2012

ಒಂದಷ್ಟು ಹನಿ ಚುಟುಕಗಳು...

28) ಪಾಣಿಗ್ರಹಣ
ಮದುವೆಯ ಸಂಪ್ರದಾಯ
ಪಾಣಿಗ್ರಹಣ...!
ಹೆಣ್ಣಿಗೋ ಒಂದು
ಪ್ರಾಣಿ ಗ್ರಹಣ..!!
ಆದರೆ ಗಂಡಿಗೆ ಮಾತ್ರ
ಬಾಳಿನ ತುಂಬಾ
ಖಗ್ರಾಸ ಗ್ರಹಣ...!!

29)ರಾಧಾ

ಜಗತ್ತಿನ ರಕ್ಷಕ
ಭಕುತರ ಪ್ರೇಮಿ
ಕೃಷ್ಣನನ್ನು love
ಮಾಡಿದರೂ ಈಕೆ
ಭಗ್ನ ಪ್ರೇಮಿ!!

30) ರಾಜಕಾರಣ

 ರಾ- ರಾಜ್ಯವನ್ನು
 -ಜಗಿದು ತಿಂದು
ಕಾ- ಕಾಲಿ ಮಾಡಿ
ರಣ-ರಣವನ್ನಾಗಿಸುವುದು
ರಾಜಕಾರಣ

31)ಭಾರತವೆಂದರೆ...

ಭಾರತವೆಂದರೆ
ಒಂದು ವಿಶ್ವ ಚೇತನ..!
ಭವ್ಯ ಸಮ್ಮೇಳನ...!!
ಹುಟ್ಟಿಬೆಳೆದಿದೆ ಮಹಾ ಚೇತನ..!!!
ಜೊತೆಗೆ ತುಂಬಿ ತುಳುಕಿದೆ
ಬಡತನ!

32) ತೋರಿಕೆಗಳು

ಭಾರತ ದೇಶದ 
ಮೂರು ಜಗತ್ಪ್ರಸಿದ್ಧ 
ತೋರಿಕೆಗಳೆಂದರೆ
ಗೊರಕೆ,
ತುರಿಕೆ ಹಾಗೂ
ಕಲಬೆರಕೆ...

Monday, November 5, 2012

ಹಾಯ್ಕುಗಳು


ನಾನು ವೀಕ್ ಆಗಿ ಆಗಿ...
ವೀಕಿಪೀಡಿಯಾ ಆಗಿಬಿಟ್ಟೆ...

--

ಆಕೆ ನೈಟ್ ಡ್ಯೂಟಿ ಮಾಡಿ ಮಾಡಿ..
ನೈಟಿಂಗೇಲ್ ಆಗಿಬಿಟ್ಟಳು..
--

ಆತ ಕನ್ನಡದಲ್ಲಿ ಓದಿ ಓದಿ
ಕನ್ನಡಕ ತಂದುಕೊಂಡುಬಿಟ್ಟ...

--

ನಾನು ಸ್ಟಾಂಡ್ ಹಾಕಿ ಹಾಕಿ
ಸ್ಟಾಂಡರ್ಡ್ ಮೆಂಟೇನ್ ಮಾಡಿಬಿಟ್ಟೆ..

ನನ್ನ ಚುನಾವಣಾ ಪರಿಣಯ

    ಯಾರ್ಯಾರಿಗೋ ಚುನಾವಣೆಯಲ್ಲಿ ನಿಲ್ಲಬೇಕು, ಗೆಲ್ಲಬೇಕು, ಖುಚರ್ಿ ಪಡೆಯಬೇಕು ಎನ್ನುವ ಆಸೆ ಆಕಾಂಕ್ಷೆಗಳು ಬೃಹದಾಕಾರವಾಗಿರುತ್ತದೆ. ನನಗೂ ಅಂತಹ ಒಂದಷ್ಟು ಆಸೆಗಳು ಇದ್ದವು. ಈಗಲೂ ಗೆಲ್ಲಿಸುತ್ತಾರೆ ಅಂತಾದರೆ ಆ ಖಯಾಲಿ ಮತ್ತೆ ಚಿಗುರು ಒಡೆಯುತ್ತದೆ.
    ಹಿಂದೆ ಅನೇಕ ಸಾರಿ ನಾನು ಚುನಾವಣೆಗೆ ನಿಂತಿದ್ದೆ. ಬಹುತೇಕ.. ಅಲ್ಲ ಹೆಚ್ಚಿನವು.. ಊಹೂ.. 100ಕ್ಕೆ 99 ಚುನಾವಣೆಯಲ್ಲಿ ನಾನು ಹೊಟ್ಟೆ ಪಕ್ಷದ ರಂಗಸ್ವಾಮಿಗೆ ಸಮ. ಗೆಲುವೆಂಬೋ ಕನಸ ಕುದುರೆಯನ್ನೇರಿ ಎಂಬುದು ನನ್ನ ಚುನಾವಣಾ ಪ್ರಣಾಳಿಕೆಯ ಮೂಲ ಮಂತ್ರವಾಗಿತ್ತು ಎಂದರೂ ತಪ್ಪಿಲ್ಲ. ಅಷ್ಟು ಕನಸಾರ್ಹ ಅದು.
    ನಾನು ನಿಂತಿದ್ದು ಅಂತ ದೊಡ್ಡ ಚುನಾವಣೆಗಳಿಗೇನೂ ಅಲ್ಲ ಬಿಡಿ. ಸೀದಾ ಸಾದಾ.. ಚುನಾವಣೆ ಯಾವುದಾದರೇನು..? ಚುನಾವಣೆ ಚುನಾವಣೆಯೇ ಅಲ್ಲವೇ.. ಅಲ್ಲೊಂಚೂರು ಒಣ ಪ್ರತಿಷ್ಠೆ ಪ್ರದರ್ಶನ ಮಾಡಬೇಕು. ಯಾರಾದ್ರೂ ಬಂದರೆ ಹಿಂದಕ್ಕೆ ಒಂದಷ್ಟು ಮಂದಿಯನ್ನು ಕಟ್ಟಿಕೊಂಡು ಓಡಾಡಬೇಕು. ಅವರು ಆಗಾಗ ಬೋಪರಾಕ್ ಹೇಳ್ತಾ ಇರಬೇಕು. ಹಲ್ಲು ಗಿಂಜುವವರೂ ಜೊತೆಗೆ ಇರಬೇಕು. ಭಾಷಣ ಕೊಚ್ಚಬೇಕು. ಹಾಗೆ ಮಾಡ್ತೇನೆ, ಹೀಗೆ ಮಾಡ್ತೇನೆ ಅನ್ನೋ ಭರವಸೆಗಳ ಸುರಿಮಳೆಯನ್ನೇ ಹರಿಸಬೇಕು. ಅವನ್ನು ಮಾಡದಿದ್ದರೂ ಲಾಲಾರಸವನ್ನಾದರೂ ಸುರಿಸಬೇಕು. ಇದು ಎಲ್ಲ ಚುನಾವಣೆಗಳಲ್ಲಿನ ರೂಟೀನ್ ಡ್ರಾಮಾ.
ಕಾಲೇಜು ಚುನಾವಣೆ, ಪ್ರಾಥಮಿಕ ಶಾಲೆಗೆ ಮುಖ್ಯಮಂತ್ರಿ, ವಿಧಾನಸಭಾ ಚುನಾವಣೆ ಹೀಗೆ ಎಲ್ಲಕಡೆಯೂ ಸ್ಫಧರ್ೆಯೇ ಬಹುಮುಖ್ಯ. ಕಾಲೇಜು ಚುನಾವಣೆ ಎಂದರೆ ಅದಕ್ಕೆ ಅದರದೇ ಆದ ರಂಗಿರುತ್ತದೆ. ರೀತಿ ರಿವಾಜು ಇರುತ್ತದೆ. ಕೆಲವರಿಗೆ ಕಾಲೇಜು ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾದರೆ ಮತ್ತೆ ಕೆಲವರಿಗೆ ತಮ್ಮ ಸಾಮಥ್ರ್ಯ ಟೆಸ್ಟ್ ಮಾಡುವ ತಾಣ. ಇಂತಹ ಕಾಲೇಜು ಚುನಾವಣೆಗಳಲ್ಲಿ ಬಹಳ ಸಾರಿ ಮಾರಾ ಮಾರಿಗಳು ನಡೆಯುವುದು ಸಹಜ. ರಕ್ತ ಸುರಿಯುವುದೂ ಉಂಟು. ಪ್ರೈಮರಿಯಲ್ಲಿ ಹಾಗೆಲ್ಲಾ ಆಗೋದಿಲ್ಲ ಬಿಡಿ. ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಗಳೆಲ್ಲ ದೊಡ್ಡವರಿಗೆ, ದಡ್ಡವರಿಗೆ ಬಿಟ್ಟದ್ದು. ಅದು ನಮಗೆ ಬೇಡ ಬಿಡಿ.
    ನಾನು ಚುನಾವಣೆಗೆ ನಿಂತಿದ್ದ ವಿಷಯ ಹೇಳದೇ ಹೋದರೆ ಏನನ್ನೋ ಕಳೆದುಕೊಂಡ ಫೀಲಿಂಗು ಕಾಡ್ತದೆ. ಕನ್ನಡ ಶಾಲೆಯ ಪ್ರಾರಂಭದಿಂದಲೂ ನಾನು ಹಲವಾರು ಚುನಾವಣೆಗಳಲ್ಲಿ ನಿಂತಿದ್ದಿದೆ. ಆದರೆ ಗೆದ್ದ ದಾಖಲೆಗಳು ಇಲ್ಲವೇ ಇಲ್ಲ ಬಿಡಿ. ಇಂದೊಂಥರಾ ನೆಟ್ ಪ್ರಾಕ್ಟೀಸ್ ಮಾಡಿದ ಹಾಂಗೆ.. ಆದರೆ ಕೊನೆಯ ತನಕ ಬ್ಯಾಟಿಂಗ್ ಅವಕಾಶ ಸಿಗಲೇ ಇಲ್ಲ.
    ನಾನು ಮೊದಲು ಚುನಾವಣೆಗೆ ಸ್ಪರ್ಧಿಸಿದ್ದು 4 ನೇ ಕ್ಲಾಸಿನಲ್ಲಿ. ನಮ್ಮೂರ ಶಾಲೆಯಲ್ಲಿ ಸ್ವಚ್ಛತಾ ಮಂತ್ರಿ ಎಂಬ ಪೋಷ್ಟಿಗೆ ನಾನು ನಿಂತಿದ್ದೆ. ಆದರೆ ಅದೇನು ದುರಂತವೋ ಕಾಣೆ.. ಆಗ ಆ ಚುನಾವಣೆಗೆ ನನ್ನ ಕಾಖಿ ಚೆಡ್ಡಿ ದೋಸ್ತ ವಿಜಯ ನಿಂತುಬಿಡಬೇಕೆ.. ವಿಜಯ ಅಂತೂ ಅದೇ ಊರತಿನ ದೊಡ್ಡವರ ಮನೆಯ ಹುಡುಗ. ಎಲ್ಲರೂ ಕೈ ಎತ್ತಿ ಅಂದ್ರ. ನನ್ನ ಪಾಲಿಗೆ ನನ್ನ ಕೈ ಒಂದೆ ಎದ್ದು ನಿಂತಿದ್ದು. ಮೊದಲ ಚುಂಬನವೇ ಸಾಕು ಸಾಕೆಂಬ ರೀತಿಯಲ್ಲಿ ಹೊಡೆತ ಕೊಟ್ಟಿತು. ವಿಜಯ ಸ್ವಚ್ಛತಾ ಮಂತ್ರಿ ಆದ. ಆತ ಆಗಿದ್ರಿಂದ ಲಾಭ ಆಗಿದ್ದು ಬೇರೆ ಯಾರಿಗಲ್ಲದಿದ್ರೂ ನನಗೆ. ಯಾಕಂದ್ರೆ ಉಗುರು ಉದ್ದ ಬೆಳೆಯಬಾರದು, ಕೂದಲು ಬಾಚಿರಬೇಕು. ಟೈ ಇರಬೇಕು ಇಂತಹ ಫರ್ಮಾನುಗಳಲ್ಲೆಲ್ಲ ವಿಜಯ ಇದ್ದಿದ್ದಕ್ಕೆ ನನಗೆ ಮಾಫಿಯಾಗಿದ್ದವು. ಅಘೋಷಿತ ಒಪ್ಪಂದದ ಹಾಗೆಯೇ ನನಗೆ ಅವುಗಳಲ್ಲಿ ರಿಯಾಯಿತಿ ಸಿಕ್ಕಿತ್ತು.
    ಆ ನಂತರ ಆರು-ಏಳನೇ ಕ್ಲಾಸಿನಲ್ಲಿ ಚುನಾವಣೆಗಳು ನಡೆದು ನಾನು ಸ್ಪರ್ಧಿಸಿದ್ದರೂ ಗೆಲುವು ನನ್ನ ಬಳಿ ಸುಳಿಯಲಿಲ್ಲ ಬಿಡಿ. ಆದರೂ ಬುದ್ದಿ ಬರಬೇಕಲ್ಲ. ಹೈಸ್ಕೂಲಿಗೆ ಹೋದರೆ ಮತ್ತೆ ಪುನಃ ಇದರ ಪುನರಾವರ್ತನೆಯೇ. ಎಂಟರಲ್ಲಿ ಸೋತೆ. ಒಂಭತ್ತರಲ್ಲಿ ಸೋತೆ. ಹತ್ತನೇ ಕ್ಲಾಸಿನಲ್ಲಿ ನಡೆದ ಚುನಾವಣೆಯ ಕುರಿತು ಸ್ಪಲ್ಪ ಹೇಳುವುದು ಒಳಿತು. ಅದೊಂತರಾ ಗೆಲುವನ್ನು ಕೊಡ್ತೀನಿ ಕೊಡ್ತೀನಿ ಅಂತ ಹೇಳಿ ಹೇಳಿ ಮಸ್ಕಾ ಹೊಡೆದು ಸೋತ ಕಥೆ.
    ನಾನು ಆ ಹೈಸ್ಕೂಲಿಗೆ ಬುದ್ಧಿವಂತ ವಿದ್ಯಾರ್ಥಿ ಎಂಬ ಖ್ಯಾತಿಯ ಜೊತೆಗೆ ಕಣಕ್ಕಿಳಿದಿದ್ದೆ. ಶಿಕ್ಷಕರ ಮನಸ್ಸು ನಾನಾಗಲಿ ಎಂದಿತ್ತು. 10 ನೇಕ್ಲಾಸಿನಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ನಿಂತಿದ್ದ ನನ್ನ ವಿರುದ್ಧ ನಿಂತಿದ್ದು ನಂಜುಂಡ ಎಂಬಾತ. 8, 9, 10 ಈ ಮೂರು ಕ್ಲಾಸಿನ ವಿದ್ಯಾರ್ಥಿಗಳು ಮತ ಹಾಕಬೇಕು. ಚುನಾವಣೆ ರಂಗೇರಿತು. ನನ್ನ ಕ್ಲಾಸಿನ ಕುರಿತು ಅಪಾರ ಆತ್ಮವಿಶ್ವಾಸ ಇದ್ದ ನಾನು ಒಳ್ಳೆಯ ಭಾಷಣ ಬಿಗಿದೆ. ಪ್ರತಿಯಾಗಿ ನಂಜುಂಡನಿಗಿಂತ 5 ಮತ ಜಾಸ್ತಿ ಬಿತ್ತು. 9ನೇ ಕ್ಲಾಸಿಗೆ ಹೋಗಿ ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಅಂತೆಲ್ಲ ಹೇಳಿ ಭಾಷಣ ಕೊಚ್ಚಿದ ಪರಿಣಾಮ ನಂಜುಂಡನಿಗಿಂತ 2 ಮತ ಜಾಸ್ತಿ ಆಯ್ತು. ಅಲ್ಲಿಗೆ ನನ್ನ ಲೀಡ್ 7. ಇನ್ನುಳಿದಿದ್ದು 8ನೇ ಕ್ಲಾಸು. ಬಿಡಿ ಅವರು ಬಚ್ಚಾಗಳು. ಹೇಗೆಂದರೂ ನನಗೆ ಮತ ಹಾಕ್ತಾರೆ ಅಲ್ಲಿಗೆ ನಾನು ಗೆದ್ದಂತೆಯೇ ಅಂದ್ಕೊಂಡು ಭಾಷಣ ಮಾಡಿದೆ. ಆದರೆ ಚುನಾವಣೆಯಲ್ಲಿ ಎಲ್ಲಾ ಉಲ್ಟಾ. ನನಗಿಂತ 10 ಮತಗಳನ್ನು ಜಾಸ್ತಿ ಪಡೆದ ನಂಜುಂಡ 3 ಮತಗಳ ಲೀಡ್ ಆಧಾರದ ಮೇಲೆ ಗೆಲುವಿನ ಕೇಕೆ ಹಾಕಿ ನಕ್ಕಿದ್ದ.
    ಅರೇ ಯಾಕ್ ಹಿಂಗಾಯ್ತು ಅಂತ ಮಥನ ಮಾಡಿದಾಗ ಕೊನೆಗೆ ತಿಳಿದಿದ್ದು, ನಂಜುಂಡನ ಊರಿನ ಹುಡುಗರೇ ಆ ಕ್ಲಾಸಿನಲ್ಲಿ ಮೆಜಾರಿಟಿ ಅಂತ. ಸೋಲೆಂಬ ಸೋಲು ಸೋಲಾಗಿಬಂದ ಪರಿಣಾಮ ನಾನು ಸೋತೆ. ವಿಚಿತ್ರ ನೋಡಿ ಆ ನಂಜುಂಡ  ಕಾರ್ಯದರ್ಶಿ ಆಗಿದ್ದೇನೋ ನಿಜ. ಆದರೆ ನಂತರ ಆ ವರ್ಷದಲ್ಲಿ ಆತ ಅರ್ಧದಲ್ಲಿಯೇ ಕಾಲೇಜು ಬಿಟ್ಟ ಪರಿಣಾಮ  ಕಾರ್ಯದರ್ಶಿ ಇದ್ದೂ ಇಲ್ಲದೇ ಅನಾಥವಾಗಿತು ನಮ್ಮ ಹೈಸ್ಕೂಲು.
    ಇನ್ನು ಕಾಲೇಜು ವಿಷಯ. ಕಾಲೇಜು ಚುನಾವಣೆಗಳಲ್ಲಿ ಜೆನರಲ್ ಸೆಕ್ರೆಟರಿಯ ಆಯ್ಕೆ ವಿಧಾನವಿದೆಯಲ್ಲ ಅದರ ಕುರಿತು ಹೇಳಲೇಬೇಕು. ಮೊದಲು ಕಾಲೇಜಿನ ಕ್ಲಾಸಿಗೆ ಚುನಾವಣೆಗೆ ನಿಲ್ಲಬೇಕು. ಆಮೇಲೆ ಗೆದ್ದವರಲ್ಲೇ ಮೇಲಿನ ಸ್ಥಾನಕ್ಕೆ ಆಯ್ಕೆ ನಡೆಯುತ್ತದೆ. ಇದೊಂತರಾ ಬಿಜೆಪಿಯಲ್ಲಿ ಗೆದ್ದರೂ ಮೇಲೆ ಮುಖ್ಯಮಂತ್ರಿ ಆಗಲು ಚುನಾವಣೆ ಮಾಡ್ಕೋತಾರಲ್ಲ ಹಾಗೆ. ಅದೊಂದೆ ಅಲ್ಲಾ ಎಲ್ಲ ಪಕ್ಷಗಳಲ್ಲೂ ಹೀಗೆಯೇ ಇದೆ. ಪ್ರಜಾಪ್ರಭುತ್ವದ ಮೂಲ ಬೇರೂ ಹೀಗೆಯೇ ಇದೆ ಅಲ್ವೇ.
    ಪಿಯು ಕಾಲೇಜಿನ ಚುನಾವಣೆಯಲ್ಲೂ ಒಂದು ಕೈ ನೋಡಿದ್ದೆ ನಾನು ಎಂಬುದು ಎಷ್ಟು ಮಜಬೂತು ವಿಷಯ ಅಂದ್ರೆ ಆಕುರಿತು ನೀವು ಬೇಡ ಎಂದರೂ ಕೇಳಲೇ ಬೇಕು. ಪಿಯು ಎರಡನೇ ವರ್ಷ. ನಾವೆಲ್ಲ ರಾಘವೇಂದ್ರ ಎನ್ನುವವನನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಬೇಕು ಎಂದು ಕೊಂಡಿದ್ವಿ. ಆದರೆ ಚುನಾವಣೆಯ ದಿನವೇ ಆದ ಕಾಣೆಯಾದವರ ಪಟ್ಟಿಯಲ್ಲಿ. ಮುಂದೇನು ಮಾಡೋದು. ಅಂತ ಚಿಂತಿಸ್ತಾ ಇದ್ದಾಗ ದೋಸ್ತ ಕಮಲಾಕರ ಚುನಾವಣೆಗೆ ನಿಲೀನಿ ಅಂತ ಘೋಷಿಸಿಬಿಟ್ಟ. ಅವನ ವಿರುದ್ಧ ನಿಲ್ಲೋರು ಯಾರೂ ಇಲ್ಲ. ಅವಿರೋಧವೇ ಆಯ್ತೇ ಅನ್ನೋ ಆಲೋಚನೆ. ಮಿತ್ರ ಕಮಲಾಕರ ಅವಿರೋಧ ಆಯ್ಕೆ ಆಗ್ತಾನೆ ಅಂದರೆ ಖುಷಿಯೇ. ಆದರೆ ಚುನಾವಣೆ ನಡೆದರೆ ಒಂದು ದಿನದ ಕ್ಲಾಸು ಹಾಳಾಗಿ ಸ್ವಲ್ಪ ಮನರಂಜನೆ ಸಿಗುತ್ತದಲ್ಲಾ. ಅದಕ್ಕೆ ಏನು ಮಾಡೋದು ಅಂತ ಆಲೋಚಿಸುತ್ತಿದ್ದಾಗ ಗೆಳೆಯ ಹೇಮರಾಜ ಬಂದು ನೀನು ನಿಂತ್ಕೋ ವಿನು ಅಂದ. ನಾನು ತಮಾಷೆ ಮಾಡ್ತಿರಬೌದು ಅಂದುಕೊಂಡೆ. ಏಕೆಂದರೆ ಬಹಿರಂಗವಾಗಿ ಹೇಮು ಕಮಲಾಕರನನ್ನು ಸಪೋಟರ್್ ಮಾಡ್ತಿದ್ದ. ಆದರೆ ಅವನೇ ಹೀಗೆ ಹೇಳ್ತಿದ್ದಾನಲ್ಲ ಅಂತ. ಸರಿ ಸೋಲಿನ ಸರಪಳಿಗೆ ಇನ್ನೊಂದು ಸೇರಿಸೋಣ ಅಂದ್ಕೊಂಡು ಚುನಾವಣೆಗೆ ನಿಂತೆ.
    ಚುನಾವಣೆಯ ಭಾಷಣದ ವೇಳೆ ಕಮಲಾಕರ `ನೀವು ಯಾರಿಗೆ ಬೇಕಾದ್ರೂ ಮತ ಹಾಕಿ. ಆದರೆ ಒಳ್ಳೆಯವರಿಗೆ ಹಾಕಿ. ದೋಸ್ತ ವಿನಯ್ ನನಗಿಂತ ಒಳ್ಳೆಯವ. ಆತನಿಗೆ ಮತ ಹಾಕಿದ್ರೂ ನನಗೆ ಬೇಜಾರಿಲ್ಲ' ಎಂದು ಭಾಷಣ ಮಾಡಿ ದೊಡ್ಡೋನಾಗಿಬಿಟ್ಟ. ನಾನಂತೂ ಹಾಗೆ ಮಾಡ್ತೇನೆ ಹೀಗೆ ಮಾಡ್ತೇನೆ ಅಂತ ಪಕ್ಕಾ ರಾಜಕಾರಣಿ ಥರಾ ಭರವಸೆಗಳ ಸುರಿಮಳೆ ಸುರಿಸಿದೆ. ಆದರೂ ನಾನು ಗೆಲ್ಲೋದು ಡೌಟು. ಇನ್ನೇನು ಮಾಡೋದು ಅಂತ ಆಲೋಚಿಸಿ, ಮಹಿಳಾ ಮಣಿಯರ ಬಳಿ ಹೋಗಿ ನನಗೆ ಮತ ಹಾಕಬೇಕು ಎಂದು ಮಾತನಾಡಿಸಿದೆ. ಕಮಲಾಕರನಿಗೆ ಅದೇನು ಆಗಿತ್ತೋ. ಒಬ್ಬೇ ಒಬ್ಬ ಹುಡುಗಿಯರ ಬಳಿಯೂ ಮತ ಯಾಚಿಸಲಿಲ್ಲ. ಇಷ್ಟ ಇದ್ದರೆ ಹಾಕ್ತಾರೆ ಬಿಡು ಅನ್ನೋ ಮೆಂಟಾಲಿಟಿಯ ಆತ ಸುಮ್ಮನಾಗಿ ಬಿಟ್ಟ. ಪರಿಣಾಮವಾಗಿ ಷುನಾವಣೆಯಲ್ಲಿ ಭೀಕರವಾಗಿ ಅಂದರೆ 27-9 ಮತಗಳ ಅಂತರದಲ್ಲಿ ಗೆದ್ದು ಬಿಟ್ಟೆ.
    ಸೋಲಿನ ಸರಪಳಿ ತುಂಡರಿಸಿದಂತಹ ಸಂಭ್ರಮ. ಸಾಲು ಸಾಲು ಮ್ಯಾಚುಗಳನ್ನು ಸೋತನಂತರ ಅಪರೂಪಕ್ಕೆ ಗೆಲ್ಲುವ ಭಾರತ ತಂಡವೂ ಇಷ್ಟು ಖುಷಿ ಪಟ್ಟಿಲ್ಲ ಅನ್ಸುತ್ತೆ. ಸರಿ ಹುಡುಗರ ಪ್ರತಿನಿಧಿಯಾದೆ. ಕಮಲಾಕರನನ್ನೇ ನನ್ನ ಆಪ್ತ ಸಲಹೆಗಾರನನ್ನಾಗಿ ನೇಮಕ ಮಾಡಿಕೊಂಡೆ. ಅಂವ ಹೇಳಿದ್ದು, ಇನ್ನೇನು ಕಾಲೇಜು ಜಿ.ಎಸ್. ಗೂ ನೀನೇ ನಿಲ್ಗಲು ಅಂತ. ಬೇಡ ಬೇಡ ಎನ್ನುವ ಮನಸ್ಥಿತಿಯಲ್ಲೇ ನಿಂತೆ. ನಮ್ಮದು ಹೈಸ್ಕೂಲು ಸೇರಿಕೊಂಡಿದ್ದ ಪಿಯು ಕಾಲೇಜಾದ್ದರಿಂದ ಹೈಸ್ಕೂಲು ಪ್ರತಿನಿಧಿಗಳ ಓಟಿಗೂ ಮಹತ್ವ ಇರುತ್ತದೆ. ಅವರೆಲ್ಲ ಮತ ಹಾಕಿದರು ಗೆದ್ದೆ.
    ಗೆದ್ದು ಜಿ.ಎಸ್. ಆದ ಮೇಲೆ ಶುರು ಆಯ್ತು ನೋಡಿ ಪಡಿಪಾಟಲು. ಒಂದೇ ಒಂದು ಕೆಲಸವನ್ನು ನೆಟ್ಟಗೆ ಮಾಡಲಿಕ್ಕೆ ಆಗಲೇ ಇಲ್ಲ. ವೋಟು ಹಾಕಿದ್ದ ಮಿತ್ರರು ಅದೆಷ್ಟು ಬೇಜಾರು ಮಾಡ್ಕೊಂಡ್ರೋ. ಸಾಂಸ್ಕೃತಿಕ ಕಾರ್ಯಕ್ರಮಗಳು ಸುಮಾರಾಗಿ ನಡೆದರೂ ಕ್ರೀಡಾ ಕಾರ್ಯಕ್ರಮ ಸೇರಿದಂತೆ ಇತರ ಎಲ್ಲವುಗಳೂ ಟುಸ್ಸಾಗಿದ್ದವು. ಅಷ್ಟೇ ಅಲ್ಲದೇ ಉಪನ್ಯಾಸಕರ ಜೊತೆ ಮುನಿಸು ಮಾಡ್ಕೊಂಡು ಮಾತು ಬಿಟ್ಟಿದ್ದೆ. ಕೆಲವು ಮಿತ್ರರ ಪರವಾಗಿದ್ದರಿಂದ ನಮ್ಮ ಹಾಗೂ ನಮ್ಮ ಪ್ರಾಧ್ಯಾಪಕರ ನಡುವೆ ಅಂತರ ಬೆಳೆದು ಆ ವರ್ಷ ಬೀಳ್ಕೊಡುಗೆ ಸಮಾರಂಭವನ್ನೂ ಮಾಡಲಾಗಲಿಲ್ಲ. ಅಂತೂ ಆ ವರ್ಷ ಮುಗಿದರೆ ಸಾಕು ಅನ್ನಿಸಿತು.
    ಕೊನೆಗೊಮ್ಮೆ ಗೆಲುವು ಪಡೆದೆ. ದೊಡ್ಡದಾಗಿ ಪಡೆದರೂ ಅದು ನನ್ನನ್ನು ಸಾಕು ಬೇಕು ಎನ್ನಿಸಿದ್ದು ಮಾತ್ರ ಸುಳ್ಳಲ್ಲ. ಅಷ್ಟರ ನಂತರ ಮತ್ಯಾವುದೇ ಚುನಾವಣೆಗೂ ನಿಲ್ಲಲಿಲ್ಲ ಬಿಡಿ. ಡಿಗ್ರಿಯಲ್ಲಿ ನಾನು ಸವರ್ೇ ಸಾಮಾನ್ಯ ಆಮ್ ಆದ್ಮಿಯಾಗಿದ್ದೆ. ಯಾರೋ ಬಂದು ನಂಗೆ ಮತ ಹಾಕು ಅನ್ನೋರು. ಹುಂ ಅನ್ನೋದು, ಇನ್ನೊಬ್ರು ಬಂದು ನಿಂದು ನನಗೆ ಅನ್ನೋರು.. ಅದಕ್ಕೂ ಹುಂ ಅಂತಿದ್ದೆ. ಯಾರು ಗೆದ್ರೋ ಯಾರು ಬಿಟ್ರೋ .. ಆದರೆ ಮತ ಎಣಿಕೆಗೆ ಮಾತ್ರ ಬಹಳ ಕುತೂಹಲದಿಂದ ಕುಳಿತ್ಕೊಳ್ತಿದ್ದೆ. ಯಾಕಂದ್ರೆ ಅದೊಂತರಾ ಪ್ಲೇವಿನ್ ಹಾಂಗೆ.. ಸಂಖತ್ ಖುಷಿ, ಟೆನ್ಶನ್ ಕೊಡೋವಂತದ್ದು.
    ಬಿಡಿ.. ಚುನಾವಣೆ ಅಂದ್ರೇ ಹಾಗೆ ಅಲ್ವಾ.. ಅಲ್ಲಿ ಸೋಲು ಗೆಲುವು ಇದ್ದದ್ದೇ. ಇಂತಹ ನನ್ನ ಬದುಕಿನ ಚುನಾವಣೆಗಳು ವಿಜಯ್, ಕಮಲಾಕರ, ಪ್ರದೀಪ್, ಸುರೇಂದ್ರ ಈ ಮುಂತಾದ ಕೆಲವು ಮಿತ್ರರನ್ನು ನನಗೆ ನೀಡಿದೆ ಎನ್ನುವುದಂತೂ ಸುಳ್ಳಲ್ಲ.

Saturday, November 3, 2012

ಒಂದು ಕವಿತೆ

ವಿಷಜಂತು

ಬಹು ದಿನಗಳಿಂದ
ವಿಷ ಸಂಗ್ರಹಿಸಿ
ಸೇಡಿಟ್ಟು ಕಾದ
ಹಾವು ಕೊನೆಗೊಂದು ದಿನ
ಅವನಿಗೆ ಕಚ್ಚಿತು...
ಬಿಡದೇ ವಿಷ ಕಕ್ಕಿತು.. ಕಾರಿತು...
ನಂಜೂ ಏರಿತು..
ಆದರೆ.,
ಹಾವು ಸತ್ತು ಹೋಯಿತು...!!!