Tuesday, May 15, 2018

ಟುಸ್ ಪಟಾಕಿ ಆಟಗಾರರು

ಈ ಸಾಲಿನ ಐಪಿಎಲ್‌ನಲ್ಲಿ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ಇನ್ನೂ ಹಲವು ಪ್ರತಿಭೆಗಳು ಅತ್ಯುತ್ತಮ ಆಟದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿವೆ. ಇನ್ನೂ 20 ವರ್ಷವೂ ಆಗದ ಆಟಗಾರರು ದಿಗ್ಗಜರೇ ಮೆಚ್ಚುವಂತೆ ಆಟವನ್ನಾಡಿ ಚಿತ್ತ ಸೂರೆಗೊಂಡಿದ್ದಾಾರೆ. ಇದರ ನಡುವೆಯೇ ಐಪಿಎಲ್‌ಗೂ ಮೊದಲು ಸಾಕಷ್ಟು ಸದ್ದು ಮಾಡಿದ್ದ ಆಟಗಾರರು ಟುಸ್ ಪಟಾಕಿಗಳಾಗಿದ್ದಾಾರೆ. ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ವಿಲರಾಗಿದ್ದಾರೆ.

ಯುವರಾಜ್ ಸಿಂಗ್
ಈ ಐಪಿಎಲ್‌ನಲ್ಲಿ ಸದ್ದು ಮಾಡಲು ವಿಲರಾದ ಆಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರೇ ಯುವರಾಜ್ ಸಿಂಗ್. 2011ರ ವಿಶ್ವಕಪ್ ಹೀರೋ ಎಂದೇ ಬಣ್ಣಿಸಲ್ಪಡುವ ಟಿ20 ಸ್ಪೆಷಲಿಸ್‌ಟ್‌‌, ಸಿಕ್ಸರ್‌ಗಳ ಸರದಾರ ಈ ಐಪಿಎಲ್‌ನಲ್ಲಿ ಪ್ರಭಾವಿ ಎನ್ನಿಸಲೇ ಇಲ್ಲ. ಕಿಂಗ್‌ಸ್‌ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಯುವಿ ತಾನಾಡಿದ ಏಳು ಪಂದ್ಯಗಳ ಐದು ಇನ್ನಿಂಗ್ಸ್ಗಳಲ್ಲಿ  ಭಾರಿಸಿದ ರನ್ ಕೇವಲ 64. ಗರಿಷ್ಠ ಮೊತ್ತ 20. ಸರಾಸರಿ 12.80.

ಆರೋನ್ ಫಿಂಚ್.
ಪಂಜಾಬ್ ತಂಡದ ಇನ್ನೋರ್ವ ಆಟಗಾರ ಆರೋನ್ ಫಿಂಚ್ ಕೂಡ ಈ ಸಾರಿ ಟುಸ್ ಪಟಾಕಿಯಾಗಿದ್ದಾಾರೆ. ಮದುವೆ ಮುಗಿಸಿ ಸೀದಾ ಐಪಿಎಲ್ ಅಂಗಳಕ್ಕೆ ಕಾಲಿರಿಸಿದ್ದ ಫಿಂಚ್ ಒಂದೇ ಒಂದು ಪಂದ್ಯದಲ್ಲೂ ಮಿಂಚಿಲ್ಲ. ಫಿಂಚ್ ಗಳಿಗೆ 7 ಪಂದ್ಯಗಳ 6 ಇನ್ನಿಂಗ್ಸ್ಗಳಲ್ಲಿ  58ರನ್. ಗರಿಷ್ಠ 34. ಸರಾಸರಿ 11.60.

ಗೌತಮ್ ಗಂಭೀರ್
ಒಂದಾನೊಂದು ಕಾಲದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ಆಗಿದ್ದ ಗೌತಮ್ ಗಂಭೀರ್‌ಗೆ ಈ ಐಪಿಎಲ್‌ನಲ್ಲಿ ದುರದೃಷ್ಟ ವಕ್ಕರಿಸಿದಂತಿದೆ. ಮೊದಲು ಬ್ಯಾಟಿಂಗ್‌ನಲ್ಲಿ ವಿಫಲ, ಆಮೇಲೆ ತಂಡಕ್ಕೆ ಸಾಲುಸಾಲು ಸೋಲು. ಬೆನ್ನಲ್ಲೇ ನಾಯಕತ್ವಕ್ಕೆ ರಾಜೀನಾಮೆ. ಅಷ್ಟಲ್ಲದೇ ಪಂದ್ಯಗಳಿಂದಲೂ ಹೊರಗುಳಿಯುವಂತಹ ಪರಿಸ್ಥಿತಿ. ಗಂಭೀರ್ ಈ ಋತುವಿನಲ್ಲಿ ಆಡಿದ್ದು 6 ಪಂದ್ಯಗಳು. ಅದರಲ್ಲಿ 5 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಮಾಡಿದ ಗಂಭೀರ್ ಭಾರಿಸಿದ್ದು 85 ರನ್. ಗರಿಷ್ಠ 55. ಸರಾಸರಿ 17.

ಕೀರನ್ ಪೊಲಾರ್ಡ್
ಟಿ20 ಸ್ಪೆಷಲಿಸ್ಟ್ , ವಿಂಡೀಸ್ ದೈತ್ಯ ಈ ಋತುವಿನಲ್ಲಿ ಆಡಿದ್ದು 7 ಪಂದ್ಯ. ಅದರಲ್ಲಿ 6 ಇನ್ನಿಂಗ್ಸ್ಗಳಲ್ಲಿ  ಭಾರಿಸಿದ ರನ್ 76. ಗರಿಷ್ಠ 28. ಸರಾಸರಿ 15.20. ಮುಂಬಯಿ ತಂಡದ ಖಾಯಂ ಆಟಗಾರರಲ್ಲಿ ಒಬ್ಬ ಎಂದೇ ಬಿಂಬಿಸಲ್ಪಟ್ಟಿದ್ದ ಪೊಲಾರ್ಡ್ ಈ ಸಾರಿ ಬೌಲಿಂಗ್‌ನಲ್ಲೂ ವಿಫಲ. ಈ ಕಾರಣದಿಂದಲೇ ತಂಡದ ಮ್ಯಾನೇಜ್‌ಮೆಂಟ್ ಪೊಲಾರ್ಡ್‌ರನ್ನು ಹೊರಕ್ಕೆ ಕೂರಿಸಿದೆ.

ಸರ್ರಾಜ್ ಖಾನ್
ಆರ್‌ಸಿಬಿ ಈ ಋತುವಿನಲ್ಲಿ ರೀಟೇನ್ ಮಾಡಿಕೊಂಡ ಆಟಗಾರ ಸರ್ರಾಜ್ ಖಾನ್. ಆದರೆ ರೀಟೇನ್‌ಗೆ ತಕ್ಕಂತೆ ಆಟವಾಡಲು ವಿಲನಾಗಿರುವ ಸರ್ರಾಜ್ ಖಾನ್ ಫೈಲ್ಯೂರ್  ಸ್ಟಾರ್ ಎಂದೇ ಕುಖ್ಯಾತಿ ಪಡೆದಿದ್ದಾನೆ. ಆಡಿದ 4 ಪಂದ್ಯಗಳಲ್ಲಿ ಭಾರಿಸಿದ್ದು 22 ರನ್. ಗರಿಷ್ಠ 11. ಸರಾಸರಿ 5.50. ವಿಚಿತ್ರ ಎಂದರೆ ಆರ್‌ಸಿಬಿಯ ಎಷ್ಟೋ ಬೌಲರ್‌ಗಳು ಸರ್ರಾಜ್ ಖಾನ್‌ಗಿಂತ ಹೆಚ್ಚಿನ ರನ್ ಹೊಡೆದಿದ್ದಾರೆ. ಆದರೆ ಆರ್‌ಸಿಬಿ ಮಾತ್ರ ಈತನ ಮೇಲೆ ಇನ್ನೂ ನಂಬಿಕೆ ಇಟ್ಟಂತಿದೆ.

ವೃದ್ದಿಮಾನ್ ಸಾಹ
ಭಾರತದ ಟೆಸ್ಟ್  ತಂಡದ ಖಾಯಂ ಆಟಗಾರ. ಅತ್ಯಂತ ವೇಗದ ಶತಕ ಭಾರಿಸಿ ದಾಖಲೆ ನಿರ್ಮಿಸಿದಾತ. ಹೈದರಾಬಾದ್ ತಂಡದ ಈ ಆಟಗಾರ ಐಪಿಎಲ್‌ನ ಈ ಋತುವಿನಲ್ಲಿ ಸಂಪೂರ್ಣ ಟುಸ್ ಪಟಾಕಿ. ಆಡಿದ್ದು 10 ಪಂದ್ಯಘಿ. ಬ್ಯಾಟಿಂಗ್ ಸಿಕ್ಕಿದ್ದು 9 ಪಂದ್ಯದಲ್ಲಿ. ಗಳಿಸಿದ ರನ್ 87. ಗರಿಷ್ಠ 24. ಸರಾಸರಿ 12.42. ಕೀಪಿಂಗ್ ಮಾಡುತ್ತಾಾರೆ ಎನ್ನುವುದಷ್ಟೇ ಸಾಹಾ ಪಾಲಿಗೆ ಸ‘್ಯಕ್ಕಿಿರುವ ಪ್ಲಸ್ ಪಾಯಿಂಟ್

Monday, May 14, 2018

ಗುಂಡು, ಬಾಂಬುಗಳ ನಾಡಿನ ಕ್ರಿಕೆಟ್ ಪ್ರೀತಿ

ಕಳೆದ ವರ್ಷ ಟೆಸ್ಟ್ ಮಾನ್ಯತೆ ಪಡೆದ ಎರಡು ರಾಷ್ಟ್ರಗಳಲ್ಲೊಂದು ಅಫಘಾನಿಸ್ತಾನ.  ಸದಾ ಬಾಂಬು ಸಿಡಿಯುವ, ಬಂದೂಕಿನ ಮೊರೆತ ಗೇಳುವ, ಗುಂಡಿನ ಸದ್ದು ಅನುರಣಿಸುವ ನಾಡಿಗೆ ಟೆಸ್ಟ್  ಮಾನ್ಯತೆ ಸಿಕ್ಕಿದೆ. ಅಫ್ಘಾನ್ ನಾಡಿನ ಕ್ರಿಕೆಟ್ ಪ್ರೀತಿಗೆ ಟೆಸ್ಟ್  ಮಾನ್ಯತೆ ಸಿಕ್ಕಿದ್ದು, ಮುಂದಿನ ತಿಂಗಳು ಭಾರತ ವಿರುದ್ಧ ತಮ್ಮ ಮೊಟ್ಟ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ.
ರಷ್ಯಾ ಅತಿಕ್ರಮಣ, ಮುಜಾಹಿದಿನ್‌ಗಳ ಅಟ್ಟಹಾಸ, ತಾಲೀಬಾನಿಗಳ ಅಬ್ಬರ, ಲಾಡೆನ್, ಓಮರ್‌ಗಳ ಉಗ್ರವಾದ, ಅಮೆರಿಕಾದ ಸತತ ದಾಳಿ ಹೀಗೆ ಅಫಘಾನಿಸ್ತಾನದ  ಮೇಲೆ ನಡೆಯದ ಸಾಲು ಸಾಲು ಹಿಂಸಾಕೃತ್ಯಗಳಿಗೆ ಕೊನೆಯೇ ಇಲ್ಲ. ಯಾವ ಕ್ಷಣದಲ್ಲಿ ಏನಾಗುತ್ತದೆಯೋ, ಯಾವ ಜಾಗದಲ್ಲಿ ಬಾಂಬುಗಳು ಸಿಡಿದು ಯಾರನ್ನು ಬಲಿತೆಗೆದುಕೊಳ್ಳುತ್ತದೆಯೋ? ಮತಾಂಧ  ಉಗ್ರರು ಯಾವ ಸಂದರ್ಭದಲ್ಲಿ  ದಾಳಿ ಮಾಡಿ ಹತ್ಯೆ ಮಾಡುವರೋ, ಹೀಗೆ ಕ್ಷಣ ಕ್ಷಣವೂ ಆತಂಕ ತುಂಬಿದ ನಾಡಲ್ಲಿ ಕ್ರಿಕೆಟ್ ಅರಳಿ ನಿಂತಿದೆ. ನೆರೆಯ ಭಾರತ, ಪಾಕಿಸ್ತಾನಗಳಂತೆ ಅಫ್ಘಾನಿಗಳು  ಕ್ರಿಕೆಟನ್ನು ವಿಶೇಷವಾಗಿ ಪ್ರೀತಿಸಿದ್ದು, ದಿನದಿಂದ ದಿನಕ್ಕೆ ಮಾಗುತ್ತಿದ್ದಾರೆ. ಅವರ ಸತತ ಪರಿಶ್ರಮಕ್ಕೆ ಟೆಸ್ಟ್  ಮಾನ್ಯತೆ ಸಿಕ್ಕಿದೆ.
ಇತಿಹಾಸ :
19ನೇ ಶತಮಾನದಲ್ಲಿ ಆಂಗ್ಲೋ  ಆಫ್ರಿಕನ್ ಯುದ್ಧದಲ್ಲಿ  ಅಫ್ಘಾನ್ ಯೋದರು ಬಳಕೆಯಾದರು. ಆ ಯೋಧರಿಗೆ ಕ್ರಿಕೆಟ್ ಕಲಿಸಿದ್ದು ಬ್ರಿಟೀಷರು. ಈ ಬ್ರಿಟೀಷರೇ 1839ರಲ್ಲಿ ಕಾಬೂಲಿನಲ್ಲಿ ಮೊದಲು ಕ್ರಿಕೆಟ್ ಆಡಿದರು ಎನ್ನುವ ದಾಖಲೆಗಳೂ ಇವೆ. ಆದರೆ ನಂತರದ ದಿನಗಳಲ್ಲಿ ಆ ದೇಶಕ್ಕೆ ಕ್ರಿಕೆಟ್ ಮರಳಲು 160 ವರ್ಷಗಳೇ ಬೇಕಾದವು.
1990ರ ದಶಕದ ಸಂದರ್ಭರ್ದಲ್ಲಿ ಯುದ್ಧಪೀಡಿತ ನಾಡಿನಲ್ಲಿ ಎಲ್ಲೆಡೆ ಬಯಲೇ ಇದ್ದರೂ, ಕ್ರಿಕೆಟ್ ಮುಂತಾದ ಆಟಕ್ಕೆ ಅವಕಾಶವೇ ಇರಲಿಲ್ಲ. ದೇಶದಲ್ಲಿ ಕ್ರಿಕೆಟ್‌ಗೆ ಬ್ಯಾನ್ ಮಾಡಿದ್ದ ತಾಲೀಬಾನಿಗಳು ಸ್ಥಳೀಯರು ಕ್ರಿಕೆಟ್ ಆಡಲು ಮುಂದಾದರೆ ಗುಂಡಿಕ್ಕುತ್ತಿದ್ದ ಕಾಲವೂ ಇತ್ತು. ಜೀವ ಉಳಿಸಿಕೊಳ್ಳುವ ಸಲುವಾಗಿ ಪಾಕಿಸ್ತಾಾನಕ್ಕೆ ವಲಸೆ ಬಂದವರು, ಪಾಕಿಸ್ತಾನಿಯರ ಜೊತೆ ಕ್ರಿಕೆಟ್ ಆಡುತ್ತ ಆಡುತ್ತ ತಮ್ಮದೇ ತಂಡವನ್ನು ಕಟ್ಟಿಕೊಂಡರು. ಸಮಯ ಸಿಕ್ಕಾಗಲೆಲ್ಲ ತಮ್ಮೊಳಗಿನ ಕ್ರಿಕೆಟ್‌ಗೆ ಪೋಷಣೆ ನೀಡಿದರು. ಪಾಕಿಸ್ತಾನದ ನೆಲದಲ್ಲಿಯೇ ತಮ್ಮ ತಂಡವನ್ನೂ ಕಟ್ಟಿಕೊಂಡ  ಅಫ್ಘಾನ್ರು ತಂಡಕ್ಕೆ ಒಳ್ಳೆಯ ಕೋಚನ್ನು ನೇಮಿಸಿ ಶಸೋಕ್ತವಾಗಿ ಕ್ರಿಕೆಟ್ ಕಲಿತರು. ಯುದ್ಧ ಮುಗಿದ ಮೇಲೆ  ಅಫ್ಘಾನ್ಗೆ ಮರಳಿದ ಇವರು ಅಲ್ಲಿ ಕ್ರಿಕೆಟ್ ಬೇರುಗಳನ್ನು ಬಿತ್ತಿದರು. ನಂತರ ನಡೆದಿದ್ದು ಇತಿಹಾಸ.
1995ರಲ್ಲಿ ಅ್ಘಾನಿಸ್ತಾನ ಕ್ರಿಕೆಟ್ ೆಡರೇಶನ್ ಅಸ್ತಿಿತ್ವಕ್ಕೆೆ ಬಂದಿತು. ವರ್ಷದಿಂದ ವರ್ಷಕ್ಕೆೆ ಗುಣಮಟ್ಟದ ಕ್ರಿಿಕೆಟ್ ಆಡಿದ ಪರಿಣಾಮ 2009ರಲ್ಲಿ ಅ್ಘಾನಿಸ್ತಾಾನಕ್ಕೆೆ ಏಕದಿನ ಪಂದ್ಯಗಳನ್ನು ಆಡಲು ಮಾನ್ಯತೆ ಸಿಕ್ಕಿಿತು. 2012ರಲ್ಲಿ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಆಡಲು ಅರ್ಹತೆ ಪಡೆಯಿತು. ಪ್ರಸ್ತುತ ಅ್ಘಾನಿಸ್ತಾಾನದಲ್ಲಿ ಕ್ರಿಿಕೆಟ್ ಜನಪ್ರಿಿಯ ಕ್ರೀಡೆಯಾಗಿದೆ. ಯುದ್ಧಘಿ, ಬಾಂಬು, ಗುಂಡಿನ ಮೊರೆತದ ನಡುವೆಯೂ ಕ್ರಿಕೆಟ್ ಅರಳಿದೆ. ಅ್ಘಾನಿಗಳು ಎಲ್ಲವನ್ನೂ ಮರೆತು ಕ್ರಿಿಕೆಟ್ ಆಡಲು ಮುಂದಾಗುತ್ತಿಿರುವುದು ವಿಶೇಷ. ಅಷ್ಟೇ ಏಕೆ ಬಲಾಢ್ಯ ತಂಡಗಳನ್ನು ಹೆಡೆಮುರಿ ಕಟ್ಟಿಿ 2019ರ ವಿಶ್ವಕಪ್‌ಗೂ ಅರ್ಹತೆ ಪಡೆದುಕೊಂಡಿದೆ.
ಅ್ಘಾನಿಸ್ತಾಾನ ಕ್ರಿಿಕೆಟ್ ಮಂಡಳಿ
ಕಾಬೂಲ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಅ್ಘಾನಿಸ್ತಾಾನ ಕ್ರಿಿಕೆಟ್ ಮಂಡಳಿ 2013ರಿಂದ 2017ರ ವರೆಗೆ ಐಸಿಸಿಯ ಸಹ ಸದಸ್ಯ ರಾಷ್ಟ್ರ ಸ್ಥಾಾನಮಾನ ಹೊಂದಿತ್ತು. 2017ರಲ್ಲಿ ಟೆಸ್‌ಟ್‌ ಮಾನ್ಯತೆ ಪಡೆದ ನಂತರ ಪೂರ್ಣಾವ ಸದಸ್ಯ ರಾಷ್ಟ್ರ ಸ್ಥಾನಮಾನ ಹೊಂದಿದೆ.
ಕ್ರಿಕೆಟ್ ಮೈದಾನ
ಟೆಸ್‌ಟ್‌ ಮಾನ್ಯತೆ ಪಡೆದಿರುವ ರಾಷ್ಟ್ರವಾಗಿದ್ದರೂ ಅ್ಘಾನಿಸ್ತಾಾನದ ನೆಲದಲ್ಲಿ ಇದುವರೆಗೂ ಒಂದೇ ಒಂದು ಅಂತಾರಾಷ್ಟ್ರೀಯ ಕ್ರಿಿಕೆಟ್ ಪಂದ್ಯಗಳು ನಡೆದಿಲ್ಲ. ಗುಣಮಟ್ಟದ ಮೈದಾನದ ಕೊರತೆ ಹಾಗೂ ಸದಾಕಾಲ ಉಗ್ರರ ‘ಾಳಿಯ ‘ಯವೇ ಇದಕ್ಕೆ ಕಾರಣ. ತಾಲೀಬಾನ್ ಸೇರಿದಂತೆ ಹಲವು ಉಗ್ರರ ಪ್ರಾಾಬಲ್ಯ ಜಾಸ್ತಿ ಇರುವ ಕಾರಣ ಯಾವುದೇ ತಂಡಗಳೂ ಅ್ಘಾನಿಸ್ತಾಾನದಲ್ಲಿ ಕ್ರಿಿಕೆಟ್ ಆಡಲು ಮುಂದಾಗಿಲ್ಲಘಿ.
ಅ್ಘಾನಿಸ್ತಾಾನ ಕೆಲಕಾಲ ಶ್ರೀಲಂಕಾದ ರಣಗಿರಿ ದಂಬುಲಾ ಮೈದಾನವನ್ನು ತನ್ನ ಹೋಂ ಪಿಚ್ ಮಾಡಿಕೊಂಡಿತ್ತುಘಿ. ಟಿ20 ಪಂದ್ಯಗಳಿಗಾಗಿ ಯುಎಇಯ ಶಾರ್ಜಾ ಕ್ರಿಿಕೆಟ್ ಅಸೋಸಿಯೇಶನ್‌ನ ಮೈದಾನವನ್ನು ಹೋಂ ಗ್ರೌೌಂಡ್ ಮಾಡಿಕೊಂಡಿತ್ತುಘಿ. ಪ್ರಸ್ತುತ ‘ಾರತದ ಗ್ರೇಟರ್ ನೋಯ್ಡಾಾದ ಶಹೀದ್ ವಿಜಯ್ ಸಿಂಗ್ ಪಥೀಕ್ ಕ್ರೀಡಾ ಸಂಕೀರ್ಣದ ಮೈದಾನವನ್ನು ಹೋಂ ಗ್ರೌೌಂಡ್ ಮಾಡಿಕೊಂಡಿದೆ.
ಅ್ಘಾನಿಸ್ತಾಾನದ ಜಲಾಲಾಬಾದ್, ಕಂದಾಹಾರ್ ಹಾಗೂ ಕಾಬೂಲ್‌ಗಳಲ್ಲಿ ಹೊಸ ಮೈದಾನಗಳನ್ನು ನಿರ್ಮಾಣ ಮಾಡಲಾಗುತ್ತಿಿದೆ. ‘ಾರತ ಈ ಮೈದಾನಗಳ ನಿರ್ಮಾಣ ಕಾರ್ಯ ಕೈಗೆತ್ತಿಿಕೊಂಡಿರುವುದು ವಿಶೇಷ.
ಪ್ರತಿ‘ಾವಂತ ಆಟಗಾರರು
ಅ್ಘಾನ್ ತಂಡ ಪ್ರತಿ‘ಾವಂತ ಆಟಗಾರರ ಖನಿ ಎಂದರೆ ತಪ್ಪಾಾಗಲಿಕ್ಕಿಿಲ್ಲಘಿ. ಮೊತ್ತಮೊದ ನಾಯಕ ನವ್ರೋೋಜ್ ಮಂಗಲ್, ಹೊಡೆ ಬಡಿ ದಾಂಡಿಗ ಮೊಹಮ್ಮದ್ ಶೆಹಜಾದ್, ಆಲ್‌ರೌಂಡರ್ ಮೊಹಮ್ಮದ್ ನಬಿ, ವಿಶ್ವ ಟಿ20 ನಂ.1 ಬೌಲರ್ ರಶೀದ್ ಖಾನ್, ಉದಯೋನ್ಮುಖ ಪ್ರತಿ‘ೆ ಮುಜೀಬ್ ಉರ್ ರೆಹಮಾನ್, ಜದ್ರಾಾನ್ ಸಹೋದರರು ಹೀಗೆ ಹಲವು ಪ್ರತಿ‘ೆಗಳು ತಂಡದಲ್ಲಿದ್ದು ದಿನದಿಂದ ದಿನಕ್ಕೆೆ ಅ್ಘಾನ್ ತಂಡವನ್ನು ಯಶಸ್ಸಿಿನ ಕಡೆಗೆ ಕರೆದೊಯ್ಯುತ್ತಿಿವೆ.  ಇದೀಗ ಅ್ಘಾನ್ ‘ಾರತದ ವಿರುದ್ಧ ಟೆಸ್‌ಟ್‌ ಪಂದ್ಯಕ್ಕೆೆ ಸಜ್ಜಾಗಿದೆ. ಅ್ಘಾನಿಸ್ತಾಾನದ ತಂಡಕ್ಕೆೆಘಿ, ಶ್ರಮಕ್ಕೆೆ, ಹ್ಯಾಾಟ್ಸಾ್ಾ.

Sunday, May 13, 2018

ಇವರು ಜೀವಮಾನದಲ್ಲೇ ನೋ ಬಾಲ್ ಹಾಕಿಲ್ಲ

(Lans Gibbs)
ಪ್ರಸ್ತುತ ಕ್ರಿಕೆಟ್‌ನಲ್ಲಿ ಇತರೆ ರೂಪದಲ್ಲಿ ತಂಡಕ್ಕೆ ಮಾರಕವಾಗುವಂತಹ ನೋಬಾಲ್‌ನ್ನು ಆಗೀಗ ಕಾಣುತ್ತೇವೆ. ನೋ ಬಾಲ್ ಕಾರಣದಿಂದ ಪಂದ್ಯವನ್ನೇ ಕಳೆದುಕೊಂಡಂತಹ ನಿದರ್ಶನಗಳೂ ಹಲವಿದೆ. ಪ್ರಸ್ತುತ ಒಂದಲ್ಲ ಒಂದು ಆಟಗಾರ ಕನಿಷ್ಠ ಒಂದಾದರೂ ನೋಬಾಲ್ ಹಾಕಿಯೇ ಇರುತ್ತಾನೆ. ನೋಬಾಲ್ ನಂತರದ ಎಸೆತ ಫ್ರೀ ಹಿಟ್ ಆಗುವ ಕಾರಣ ನೋಬಾಲ್ ಹಾಕಿದ ಆಟಗಾರರನ್ನು ಶಪಿಸುತ್ತೇವೆ. ಇದು ಬಿಡಿ ತಮ್ಮ ಕ್ರಿಕೆಟ್ ಜೀವನದಲ್ಲಿ ನೋಬಾಲ್ ಹಾಕದೇ ಇರುವ ಆಟಗಾರರೂ ಇದ್ದಾರೆ.
ಹೌದು. ಕ್ರಿಕೆಟ್ ಕಂಡ ಸಹಸ್ರ ಸಹಸ್ರ ಆಟಗಾರರಲ್ಲಿ ಕೆಲವೇ ಕೆಲವರು ತಮ್ಮ ಬದುಕಿನಲ್ಲಿ ಒಂದೇ ಒಂದು ನೋಬಾಲ್ ಕೂಡ ಹಾಕಿಲ್ಲ. ಹೀಗೆ ನೋಬಾಲ್ ಹಾಕದೇ ಇರುವ ಐವರು ಆಟಗಾರರ ಕಿರುನೋಟ ಇಲ್ಲಿದೆ.

(dennis lilly)
ಲ್ಯಾನ್ಸ್  ಗಿಬ್ಸ್
ವೆಸ್ಟ್  ಇಂಡೀಸ್ ಕಂಡ ಹೆಸರಾಂತ ಸ್ಪಿನ್ ಬೌಲರ್ ಲ್ಯಾನ್ಸ್  ಗಿಬ್ಸ್ . ಇಂಗ್ಲೆೆಂಡಿನ ಟ್ರೆಡ್ ಟ್ರೂಮನ್‌ರ ನಂತರ ಟೆಸ್ಟ್  ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಖ್ಯಾಾತಿ ಇವರಿಗಿದೆ. ಅಷ್ಟೇ ಅಲ್ಲ ಲ್ಯಾನ್ಸ್  ಗಿಬ್ಸ್  300 ವಿಕೆಟ್ ಪಡೆದ ಮೊಟ್ಟ ಮೊದಲ ಸ್ಪಿನ್ನರ್ ಎನ್ನುವ ಗರಿಮೆಯನ್ನೂ ಹೊಂದಿದ್ದಾಾರೆ. 79 ಟೆಸ್‌ಟ್‌ ಆಡಿರುವ ಇವರು ಒಟ್ಟೂ 311 ವಿಕೆಟ್ ಪಡೆದಿದ್ದಾಾರೆ. ಜೊತೆಗೆ 3 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಇಷ್ಟು ಪಂದ್ಯಗಳನ್ನಾಡಿದ್ದರೂ ಇವರು
ಒಂದೇ ಒಂದು ನೋ ಬಾಲ್ ಹಾಕಿಲ್ಲ. ನೋ ಬಾಲ್ ಎಸೆಯದ ಏಕೈಕ ಸ್ಪಿನ್ನರ್ ಇದ್ದರೆ ಅದು ಲ್ಯಾನ್ಸ್  ಗಿಬ್ಸ್  ಮಾತ್ರ.

(Ioan BOTHAM)
ಡೆನ್ನಿಸ್ ಲಿಲ್ಲಿ
ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆಸ್ಟ್ರೇಲಿಯಾದ ಲೆಜೆಂಡ್ ವೇಗದ ಬೌಲರ್‌ಗಳ ಯಾದಿಯಲ್ಲಿ ಸ್ಥಾನ ಪಡೆದಿರುವವರಲ್ಲೊಬ್ಬರು ಲಿಲ್ಲಿ. 1971ರಿಂದ 1984ರ ಅವಯಲ್ಲಿ ಕ್ರಿಕೆಟ್ ಆಟದಲ್ಲಿ ಮಿನುಗಿದ ಲಿಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು. ತಮ್ಮ 13 ವರ್ಷದ ಕ್ರಿಕೆಟ್ ಬದುಕಿನಲ್ಲಿ ಲಿಲ್ಲಿ 70 ಟೆಸ್ಟ್ ಆಡಿ 355 ವಿಕೆಟ್ ಕಿತ್ತಿದ್ದಾಾರೆ. 23 ಬಾರಿ ಐದು ವಿಕೆಟ್ ಗೊಂಚಲು ಹಾಗೂ 7 ಬಾರಿ 10 ವಿಕೆಟ್ ಗೊಂಚಲು ಉರುಳಿಸಿದ್ದಾಾರೆ. ಅಲ್ಲದೇ 63 ಏಕದಿನ ಪಂದ್ಯಗಳನ್ನಾಾಡಿರುವ ಲಿಲ್ಲಿ 20.83ರ ಸರಾಸರಿಯಲ್ಲಿ 103 ವಿಕೆಟ್ ಕಿತ್ತಿದ್ದಾಾರೆ. ಇವರೂ ಕೂಡ ಒಂದೇ ಒಂದು ನೋ ಬಾಲ್ ಹಾಕಿಲ್ಲ.

(Imraan KHAN)
ಇಯಾನ್ ಬಾಥಮ್
ಇಂಗ್ಲೆೆಂಡಿನ ಹೆಸರಾಂತ ಆಟಗಾರ ಇಯಾನ್ ಬಾಥಮ್. ಸಾರ್ವಕಾಲಿಕ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಟೆಸ್ಟ್  ಹಾಗೂ ಏಕದಿನ ಪಂದ್ಯಗಳಲ್ಲಿ ವಿಶೇಷ ಸಾಧನೆ ಮೆರೆದವರು ಇವರು. ತಮ್ಮ 15 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ 116 ಏಕದಿನ ಪಂದ್ಯಗಳಲ್ಲಿ 145 ವಿಕೆಟ್ ಹಾಗೂ 102 ಟೆಸ್‌ಟ್‌ ಪಂದ್ಯಗಳಲ್ಲಿ 383 ವಿಕೆಟ್ ಕಬಳಿಸಿದ್ದಾರೆ. ಇವರೂ ಕೂಡ ಒಂದೇ ಒಂದು ನೋಬಾಲ್ ಹಾಕಿಲ್ಲ. ಅಷ್ಟೇ ಏಕೆ ಒಂದೇ ಒಂದು ವೈಡ್ ಕೂಡ ಹಾಕಿಲ್ಲ.

ಇಮ್ರಾನ್ ಖಾನ್
ಪಾಕಿಸ್ತಾನದ ಲೆಜೆಂಡ್ ಆಟಗಾರ ಇಮ್ರಾನ್ ಖಾನ್. ಪಾಕ್‌ಗೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ. ಭಾರತದ ವಿರುದ್ಧ ಭಾರತದಲ್ಲಿ ಪಾಕಿಸ್ತಾಾನವನ್ನು ಗೆಲ್ಲಿಸಿದ ಮೊದಲ ನಾಯಕ ಎನ್ನುವ ಹೆಸರು ಇವರಿಗಿದೆ.  ತಮ್ಮ ಕ್ರಿಕೆಟ್ ಬದುಕಿನಲ್ಲಿ ಇಮ್ರಾನ್ ಖಾನ್ ಆಡಿದ್ದು 88 ಟೆಸ್ಟ್ . ಕಬಳಿಸಿದ್ದು 362 ವಿಕೆಟ್. ಅಲ್ಲದೇ 175 ಏಕದಿನ ಪಂದ್ಯಗಳನ್ನಾಾಡಿ 182 ವಿಕೆಟ್‌ಗಳನ್ನೂ ಕಿತ್ತಿದ್ದಾಾರೆ. ಕ್ರಿಕೆಟ್ ಜೀವನದಲ್ಲಿ ನೋಬಾಲ್ ಎಸೆಯದ ಐದೇ ಐದು ಬೌಲರ್‌ಗಳಲ್ಲಿ ಇವರೂ ಒಬ್ಬರು.

ಕಪಿಲ್ ದೇವ್
ಭಾರತಕ್ಕೆ ಮೊಟ್ಟಮೊದಲು ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಕಪಿಲ್ ದೇವ್. ಭಾರತ ಕ್ರಿಕೆಟ್‌ನ ಮಹಾನ್ ಆಟಗಾರರಲ್ಲಿ ಒಬ್ಬ. ಹರ್ಯಾಣದ ಹರಿಕೇನ್ ಎನ್ನುವ ಖ್ಯಾತಿಯನ್ನು ಹೊಂದಿರುವ ಕಪಿಲ್ ದೇವ್ 131 ಟೆಸ್‌ಟ್‌ ಹಾಗೂ 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 434 ಹಾಗೂ ಏಕದಿನ ಪಂದ್ಯಗಳಲ್ಲಿ 253 ವಿಕೆಟ್‌ಗಳನ್ನು ಕಿತ್ತಿದ್ದಾಾರೆ. ತಮ್ಮ 16 ವರ್ಷದ ಕ್ರಿಕೆಟ್ ಜೀವನದಲ್ಲಿ ಒಂದೇ ಒಂದು ನೋಬಾಲ್ ಕೂಡ ಎಸೆದಿಲ್ಲ.

ಈ ಐವರು ಬೌಲರ್‌ಗಳು ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ನೋಬಾಲ್ ಹಾಕಿಲ್ಲ. ಇತ್ತೀಚೆಗೆ ನೋಬಾಲ್, ವೈಡ್ ಹಾಕುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇವರು ನೀಡುವ ಅತಿರಿಕ್ತ ರನ್ನುಗಳು ಪಂದ್ಯದ ಗತಿಯನ್ನೇ ಬದಲಿಸುತ್ತಿವೆ. ಹೀಗಿದ್ದಾಗ ಈ ಐವರು ಬೌಲರ್‌ಗಳು ಎಲ್ಲರಿಗೂ ಮಾದರಿ ಎನ್ನಿಸುತ್ತಾಾರೆ.

Sunday, April 29, 2018

ಐಪಿಎಲ್‌ಗೆ ಆಯ್ಕೆಯಾದ ಅಚ್ಚರಿಯ ಆಟಗಾರರು

ಐಪಿಎಲ್ ಎನ್ನುವುದು ಹಲವು ಪ್ರತಿಭಾವಂತರ ಪಾಲಿಗೆ ಹೆಜ್ಜೆ ಮೂಡಲು ಇರುವ ವೇದಿಕೆ. ಪ್ರತಿಭಾ ಪ್ರದರ್ಶನಕ್ಕೆ ಇರುವ ಸ್ಥಳ. ಇಲ್ಲಿ ಹೆಸರಾಂತ ಆಟಗಾರರಿಗೆ ಇರುವಷ್ಟೇ ಬೇಡಿಕೆ ಪ್ರತಿಭಾವಂತರ ಕುರಿತೂ ಇದೆ. ಯಾವುದೇ ರಾಷ್ಟ್ರಗಳಿರಲಿ ಅಂತಹ ರಾಷ್ಟ್ರದ ಪ್ರತಿಭಾವಂತ ಆಟಗಾರರಿಗೆ ಐಪಿಎಲ್ ಮಣೆ ಹಾಕುತ್ತದೆ.
ಐಪಿಎಲ್ ಇತಿಹಾಸವನ್ನು ಗಮನಿಸಿದರೆ ಹಲವಾರು ಅಚ್ಚರಿಯ ಆಯ್ಕೆಯನ್ನು ಕಾಣಲು ಸಾಧ್ಯವಿದೆ. ಕಮ್ರಾನ್ ಖಾನ್ ಎಂಬ ಕೂಲಿ ಕಾರ್ಮಿಕ, ಕ್ರಿಕೆಟ್ ಜಗತ್ತಿಗೆ ಗೊತ್ತೇ ಇರದಿದ್ದ ಪೌಲ್ ವಾಲ್ತಾಟಿ ಎಂಬ ಆಟಗಾರ ಹೀಗೆ ಹಲವರನ್ನು ಬೆಳಕಿಗೆ ತಂದಿದೆ. ವೆಸ್‌ಟ್‌ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮುಂತಾದ ಹೆಸರಾಂತ ರಾಷ್ಟ್ರಗಳ ಆಟಗಾರರಿಗೆ ಮಾತ್ರವಲ್ಲ ಅ್ಘಾನಿಸ್ತಾಾನ, ನೇಪಾಳ, ಕೀನ್ಯಾಾಗಳಂತಹ ರಾಷ್ಟ್ರಗಳಲ್ಲಿನ ಆಟಗಾರರಿಗೂ ಐಪಿಎಲ್ ವೇದಿಕೆಯಾಗಿರುವುದು ವಿಶೇಷ.
2018ರ ಐಪಿಎಲ್‌ನಲ್ಲಿ ನೇಪಾಳ ಹಾಗೂ ಅ್ಘಾನಿಸ್ತಾನದ ಆಟಗಾರರನ್ನು ಪ್ರಾಾಂಚಾಯ್ಸಿಗಳು ಕೊಂಡುಕೊಂಡಿವೆ. ತನ್ಮೂಲಕ ಕ್ರಿಕೆಟ್ ಲೋಕದ ಪ್ರತಿಭಾವಂತರಿಗೆ ವಿಶ್ವ ಮಟ್ಟದಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಿವೆ. ಈ ಹಿಂದೆ ಕೀನ್ಯಾದ ತನ್ಮಯ್ ಮಿಶ್ರಾ ಎಂಬ ಆಟಗಾರನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊಂಡುಕೊಂಡಿತ್ತು. ಆದರೆ ತನ್ಮಯ್ ಮಿಶ್ರಾ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿರಲಿಲ್ಲ.
ಐದು ಆವೃತ್ತಿಗಳಲ್ಲಿ ಕೋಲ್ಕತ್ತಾಾ ನೈಟ್ ರೈಡರ್ಸ್ ತಂಡ ಪರ ಆಟವಾಡಿದ್ದ ರ್ಯಾಾನ್ ಟೆನ್ ಡೆಶ್ಕಾಟೆ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಕ್ರಿಕೆಟ್ ಲೋಕದಲ್ಲಿ ಇನ್ನೂ ಆರಂಭಿಕ ಹೆಜ್ಜೆಗಳನ್ನಿಡುತ್ತಿರುವ ನೆದರ್ಲೆಂಡ್ ತಂಡದ ಈ ಆಟಗಾರನ ಪ್ರತಿಭೆಯನ್ನು ಗುರುತಿಸಿದ್ದ ಕೋಲ್ಕತ್ತಾಾ ತಂಡ ಉತ್ತಮ ಅವಕಾಶ ನೀಡಿತ್ತು. ಈ ಅವಕಾಶ ಸದುಪಯೋಗ ಪಡಿಸಿಕೊಂಡಿದ್ದ ಡೆಶ್ಕಾಟೆ ಉತ್ತಮ ಪ್ರದರ್ಶನದ ಮೂಲಕ ತಂಡದ ಖಾಯಂ ಆಟಗಾರನಾಗಿದ್ದರು.

ರಶೀದ್ ಖಾನ್
ವಿಶ್ವ ಟಿ20 ಕ್ರಿಿಕೆಟ್‌ನಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿಿರುವ ಹೆಸರು ರಶೀದ್ ಖಾನ್. ಅ್ಘಾನಿಸ್ತಾಾನದ ಈ ಆಟಗಾರ ಟಿ20ಯ ನಂ.1 ಬೌಲರ್. ಸನ್ ರೈಸರ್ಸ್ ಹೈದರಾಬಾದ್ ತಂಡವು 2017ರ ಆವೃತ್ತಿಿಯಲ್ಲೇ ರಶೀದ್ ಖಾನ್‌ರನ್ನು ಕೊಂಡುಕೊಂಡಿದ್ದುಘಿ, ಈ ಆವೃತ್ತಿಿಯಲ್ಲಿ  ರೀಟೇನ್ ಮಾಡಿಕೊಂಡಿದೆ. ಅವರು ಅತ್ಯುತ್ತಮ ಪ್ರದರ್ಶನ ತೋರುತ್ತಿಿದ್ದಾಾರೆ. ತಮ್ಮ ವಿಶಿಷ್ಟ ಬೌಲಿಂಗ್ ಮೂಲಕ ಸಾಧನೆ ಮಾಡುತ್ತಿಿರುವ ರಶೀದ್ ಖಾನ್ ಐಪಿಎಲ್‌ನಲ್ಲಿ ಆಡಿದ ಮೊದಲ ಅ್ಘಾನಿಸ್ತಾಾನದ ಆಟಗಾರ ಎನ್ನುವ ಖ್ಯಾಾತಿಗೂ ಪಾತ್ರರಾಗಿದ್ದಾಾರೆ. ಇನ್ನೂ 18 ವರ್ಷ ವಯಸ್ಸಿಿನ ರಶೀದ್ ಖಾನ್ ಸತತ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಆಗಿದ್ದಾಾರೆ.

ಜಹೀರ್ ಖಾನ್ ಪಖ್ತೀನ್
ಅ್ಘಾನ್‌ನ ಇನ್ನೋೋರ್ವ ಸ್ಪಿಿನ್ನರ್ ಜಹೀರ್ ಖಾನ್ ಪಖ್ತೀನ್‌ರನ್ನು ರಾಜಸ್ತಾಾನ ರಾಯಲ್‌ಸ್‌ ತಂಡವು 60 ಲಕ್ಷ ರೂ.ಗಳನ್ನು ನೀಡಿ ಕೊಂಡುಕೊಂಡಿದೆ. ಆಸ್ಟ್ರೇಲಿಯಾದ ಸ್ಪಿಿನ್ ದಂತಕತೆ ಶೇನ್ ವಾರ್ನ್ ಅವರು ವಿಶೇಷ ಆದ್ಯತೆಯ ಮೇರೆಗೆ ಆ್ಘಾನ್‌ನ ಈ ಚೈನಾಮನ್ ಬೌಲರ್‌ನನ್ನು ಕೊಂಡುಕೊಂಡಿದೆ. ಪಖ್ತೀನ್ ತಮ್ಮ ತಂಡದ ಇನ್ನೋೋರ್ವ ಆಟಗಾರ ರಶೀದ್ ಖಾನ್‌ರಂತೆಯೇ ಐಪಿಎಲ್‌ನಲ್ಲಿ ಉತ್ತಮ ಸಾಧನೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾಾರೆ. ಪಖ್ತೀನ್‌ಗೆ ಇದುವರೆಗೂ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿಿಲ್ಲಘಿ.

ಮೊಹಮ್ಮದ್ ನಬಿ
ಅ್ಘಾನ್‌ನ ಇನ್ನೋೋರ್ವ ಆಟಗಾರ ಮೊಹಮದ್ ನಬಿಯನ್ನೂ 1 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೊಂಡುಕೊಂಡಿದೆ. ಉತ್ತಮ ಆಲ್‌ರೌಂಡರ್ ಆಗಿರುವ ನಬಿ ಐಪಿಎಲ್‌ನಲ್ಲಿ ಇನ್ನೂ ಛಾಪು ಮೂಡಿಸಬೇಕಿದೆ. ಉತ್ತಮ ಬೌಲಿಂಗ್ ಹಾಗೂ ಅಗತ್ಯದ ಸಂದರ್ಭದಲ್ಲಿ ಬ್ಯಾಾಟಿಂಗ್ ಮಾಡುವ ಸಾಮರ್ಥ್ಯ ನಬಿಯ ಪ್ಲಸ್ ಪಾಯಿಂಟ್

ಮುಜೀಬ್-ಉರ್-ರೆಹಮಾನ್
17 ವರ್ಷದ ಅ್ಘಾನ್ ಆಟಗಾರನನ್ನು ಕಿಂಗ್‌ಸ್‌ ಇಲೆವೆನ್ ಪಂಜಾಬ್ 4 ಕೋಟಿ ರೂಪಾಯಿಗೆ ಕೊಂಡುಕೊಂಡಿದೆ. ಉತ್ತಮ ಸ್ಪಿಿನ್ನರ್ ಆಗಿರುವ ಮುಜೀಬ್-ಉರ್ ರೆಹಮಾನ್ ಅ್ಘಾನ್‌ನ ಇನ್ನೋೋರ್ವ ಆಟಗಾರ ರಶೀದ್ ಖಾನ್‌ರಂತೆಯೇ ಪ್ರತಿಭಾವಂತ. ಈಗಾಗಲೇ ಐಪಿಎಲ್‌ನಲ್ಲಿ ಆಡಿರುವ ಮುಜೀಬ್ ಪಂಜಾಬ್ ತಂಡದ ಪಾಲಿಗೆ ಉತ್ತಮ ಆಟಗಾರ.

ಸಂದೀಪ್ ಲಮಿಚ್ಚನೆ
ಇನ್ನೂ ಕ್ರಿಿಕೆಟ್ ಲೋಕದಲ್ಲಿ ಕಣ್ಣುಬಿಡುತ್ತಿಿರುವ ರಾಷ್ಟ್ರ ನೇಪಾಳ. ಈ ನೇಪಾಳದ ಸ್ಪಿಿನ್ನರ್ 17 ವರ್ಷದ ಸಂದೀಪ್ ಲಮಿಚ್ಚನೆಯನ್ನು ದಿಲ್ಲಿ ಡೇರ್ ಡೆವಿಲ್‌ಸ್‌ ತಂಡವು 20 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಕೊಂಡುಕೊಂಡಿದೆ. ನೇಪಾಳದ ಈ ಆಟಗಾರ ಐಪಿಎಲ್‌ಗೆ ಆಯ್ಕೆೆಯಾಗಿರುವುದು ನೇಪಾಳದ ಕ್ರಿಿಕೆಟ್ ಬೆಳವಣಿಗೆಗೆ ಇನ್ನಷ್ಟು ಪೂರಕವಾಗಬಹುದಾಗಿದೆ. ಸಂದೀಪ್ ಇನ್ನೂ ಐಪಿಎಲ್‌ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿಲ್ಲಘಿ. ಸಾಕಷ್ಟು ನಿರೀಕ್ಷೆೆಗಳು ಈತನ ಮೇಲಿದ್ದುಘಿ, ಮುಂದಿನ ದಿನಗಳಲ್ಲಿ ದಿಲ್ಲಿ ತಂಡ ಸಂದೀಪ್ ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಳ್ಳುವ ನಿರೀಕ್ಷೆೆಯಿದೆ.


Thursday, March 8, 2018

ನಾನೆಂಬ ಭಾಷಣಕಾರ...!

ಡಿಗ್ರಿ ಫೈನಲ್ ನಲ್ ಇದ್ದಾಗ ನಡೆದ ಘಟನೆ...

ಒಂದಿನ ಯಾವ್ದೋ ಎನ್ಜಿಒ ದವರು ಕಾಲೇಜಿಗೆ ಬಂದಿದ್ದರು. ಡಿ.1ರ ಎಡವೋ ಬಲವೋ...
ಏಡ್ಸ್ ದಿನಾಚರಣೆ ಕುರಿತಂತೆ ಕಾರ್ಯಕ್ರಮ ಹಮ್ಮಿಕೊಳ್ಳಲು ಬಂದಿದ್ದರು. ಏಡ್ಸ್ ದಿನಾಚರಣೆ ಪ್ರಯುಕ್ತ ಒಂದು ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು. ಏಡ್ಸ್ ನಿಯಂತ್ರಣದ ಕುರಿತು ಭಾಷಣ ಮಾಡಬೇಕು.
ನಾವ್ ಫೈನಲ್ ಇಯರ್ ನವ್ರಿಗೆ ಒಂದು ಕ್ಲಾಸು ಆಫ್ ಇತ್ತು. ಹಾಗಾಗಿ ಆ ಕಾರ್ಯಕ್ರಮಕ್ಕೆ ಹೋದೆವು. ನಮ್ಮ ಗ್ಯಾಂಗಿನ ಖಾಯಂ ಸದಸ್ಯರಾದ ರಾಘವ, ನಾನು, ವಂದನಾ ಜೋಶಿ, ಶ್ರದ್ಧಾ ಹೀಗೆ ಹಲವರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಹೋದ್ವಿ.
ಹೋದರೆ ಆ ಕಾರ್ಯಕ್ರಮದಲ್ಲಿ ನಾವೇ ಮೊದಲ ಆಡಿಯನ್ಸು. ವೇದಿಕೆಯ ಮೇಲೆ ನಾಲ್ಕೋ ಐದೋ ಜನರು ಕುಳಿತಿದ್ದರು. ಯಾರಾದ್ರೂ ಬರ್ತಾರೇನೋ ಅಂತ ಗೆಸ್ಟುಗಳು ಕಾಯ್ತಿದ್ದರು. ಬಲಿ ಕಾ ಬಕ್ರಾ ಎಂಬಂತೆ ನಾವು ಸಿಕ್ಕೆವು. ಆರೋ-ಏಳೋ ಜನರಷ್ಟೇ ನಾವು ಹೋಗಿ ಸಂಪೂರ್ಣ ಖಾಲಿಯಿದ್ದ ಖುರ್ಚಿಗಳಲ್ಲಿ ಕುಳಿತೆವು.
ಭಾಷಣ ಸ್ಪರ್ಧೆಗೆ ಹೆಸರು ಯಾರ್ಯಾರು ಕೊಡ್ತೀರಿ ಎಂದು ಕೇಳಿದಾಗ ನಮ್ ಬಳಗದ ಘಟಾನುಘಟಿ ಮಾತುಗಾರರಾದ ರಾಘವ, ವಂದನಾ ಅವರೆಲ್ಲ ಹೆಸರು ಕೊಟ್ಟರು. ರಾಘವ, ಗಣೇಶ ಎಲ್ಲರೂ ಕೊಟ್ಟರು. ರಾಘವ ಸೀದಾ ನನ್ನ ಬಳಿ ಬಂದವನೇ ನೀನೂ ಹೆಸರು ಕೊಡಲೆ ಅಂದ... ನಾನೆಂತ ಹೆಸರು ಕೊಡೋದು ಮಾರಾಯಾ.. ಸುಮ್ನಿರು ಅಂದೆ. ನನ್ನ ಬಳಿ ನೀನು ಮಾಡ್ತೆ... ಹಾಂಗೆ ಹೀಂಗೆ ಅಂತೆಲ್ಲ ಸವಾಲು ಹಾಕಿದ... ಆತು ಕೊಡು ಮಾರಾಯಾ ಅಂದೆ...
ನನಗೆ ಆ ದಿನಗಳಲ್ಲಿ ವಿಪರೀತ ಸ್ಟೇಜ್ ಫಿಯರ್ ಇತ್ತು. ಸ್ಟೇಜ್ ಫಿಯರ್ ವಿಚಿತ್ರ ರೀತಿ. ಸ್ಟೇಜ್ ಮೇಲೆ ಹೋದ ಎರಡು ನಿಮಿಷ ಕಕ್ಕಾಬಿಕ್ಕಿಯಾಗಿ ಬ್ಬೆಬ್ಬೆಬ್ಬೆ ಅನ್ನುವಷ್ಟು.. ಅದಲ್ಲದೇ ಭಾಷಣಗಳನ್ನೆಲ್ಲ ಮಾಡಿದವನೇ ಅಲ್ಲ ನಾನು. ಎಲ್ಲೋ ಟೈಮಿಂಗ್ಸ್ ಪಂಚ್ ಗಳನ್ನು ಹೊಡೆದು ಹಾಸ್ಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ನನ್ನನ್ನು ಭಾಷಣಕ್ಕೆ ಹೆಸರು ಕೊಡುವಂತೆ ಮಾಡಿದ್ದ ರಾಘವ.
ಭಾಷಣ ಸ್ಪರ್ಧೆಗೆ ಹೆಸರು ಕೊಟ್ಟವರು ಆರು ಜನ.ಸಂಘಟಕರ ಬಳಿ ಹೋಗಿ, ನಿಮಗೆ ಜನ ಕಡ್ಮೆ ಇದ್ದಾರಲ್ಲ ಹಂಗಾಗಿ ಹೆಸ್ರು ಕೊಡ್ತಾ ಇದ್ದೇನೆ.. ಅಂತ ಹೇಳಿದೆ. ಖರ್ಮ ಕಾಂಡ ಎನ್ನುವಂತೆ ಮೊದಲ ಭಾಷಣಕ್ಕೆ ನನ್ನನ್ನೇ ಕರೆದುಬಿಡಬೇಕೆ... ನಾನು ಸೀದಾ ಸಂಘಟಕರ ಬಳಿ ನನಗೆ ಪ್ರಿಪೇರ್ ಆಗೋಕೆ ಟೈಂ ಬೇಕು ಎಂದೆ. ಆತು.. ಲಾಸ್ಟ್ ನೀನೇ ಭಾಷಣ ಮಾಡು ಎಂದರು.
ಸಂಘಟಕರು ಅಷ್ಟ್ ಹೇಳಿದ್ದೇ ತಡ ನಾನು ಸ್ಟೈಲಾಗಿ ಪ್ರಿಪೇರ್ ಆಗೋಕೆ ಹೋದೆ. ನೋಡ ನೋಡುತ್ತಿದ್ದಂತೆ ಎಲ್ಲರ ಭಾಷಣ ದಿಢೀರನೆ ಮುಗಿಯಿತೇ ಅನ್ನಿಸಿತು. ಒಬ್ಬೊಬ್ಬರದೇ ಭಾಷಣ ಮುಗಿಯುತ್ತ ಬಂದಾಗಲೂ ನನ್ನೊಳಗಿನ ಸ್ಟೇಜ್ ಫಿಯರ್ ಭೂತ ದೊಡ್ಡದಾಗುತ್ತಿದ್ದ. ಸುದೀರ್ಘ ಭಾಷಣ ಮಾಡುವ ರಾಘವ, ವಂದನಾ, ಗಣೇಶರೆಲ್ಲ ಯಾವ ಮಾಯದಲ್ಲಿ ಭಾಷಣ ಮುಗಿಸಿಬಿಟ್ಟಿದ್ದರೋ ಏನೋ...
ಕೊನೆಗೂ ನನ್ನ ಹೆಸರು ಕರೆದರು. ಸೀದಾ ಹೋದೆ. `ಏಡ್ಸ್ ಮಾರಿ.. ಮಾರಿ...' ಅಂತೇನೋ ಶುರು ಹಚ್ಚಿಕೊಂಡೆ. ಮೂರು... ನಾಲ್ಕು.. ಐದು ವಾಕ್ಯಗಳು ಸರಸರನೆ ಬಂದವು.. ಅಷ್ಟಾದ ಮೇಲೆ ಇನ್ನೇನು ಮಾತನಾಡುವುದು? ನಾನು ಪ್ರಿಪೇರ್ ಮಾಡಿಕೊಂಡಿದ್ದೆಲ್ಲ ಖಾಲಿಯಾದಂತಾಯಿತು. ಒಂದ್ ಕಥೆ ಹೇಳ್ತೇನೆ ಅಂತೆಲ್ಲ ಶುರು ಹಚ್ಚಿಕೊಂಡೆ. ಒಂದ್ ಅಜ್ಜಿಗೆ ಏಡ್ಸ್ ಅಂದರೆ ಏನು ಅನ್ನೋದೆ ಗೊತ್ತಿಲ್ಲ.. ಅಂತೇನೋ ಸುಳ್ಳೆ ಪಿಳ್ಳೆ ಕಥೆ ಹೇಳಿದೆ.. ರಾಘವ ನನ್ನ ಹೆಸರು ಕೊಟ್ಟಿದ್ದ.. ಎಂತ ಹೊಲ್ಸು ಭಾಷಣ ಮಾಡ್ತ ಅಂತ ಮನಸಲ್ಲೇ ಬೈದುಕೊಂಡಿರಬೇಕು.
ನನ್ ಭಾಷಣ ಮುಗಿದಾಗ ಹೆಂಗ್ ಚಪ್ಪಾಳೆ ಬಿತ್ತು ಅಂತೀರಿ.. ನಾನು ಫುಲ್ ಖುಷಿ ಆಗಿದ್ದೆ.. ಆದರೆ ನನ್ನ ಭಾಷಣ ಚನ್ನಾಗಿತ್ತು ಅಂತಲ್ಲ.. ಕಾರ್ಯಕ್ರಮದ ಕೊಟ್ಟ ಕೊನೆಯ ಸ್ಪರ್ಧಿ ಮುಗಿಸಿದ.. ಇನ್ಯಾರೂ ಬಾಕಿ ಇಲ್ಲ ಅಂತ ನನ್ನ ಸಹಪಾಟಿಗಳು ಚಪ್ಪಾಳೆಯನ್ನು ದೊಡ್ಡದಾಗಿ ತಟ್ಟಿದ್ದರು.
ಅಂತೂ ಎರಡೋ ಮೂರೋ ನಿಮಿಷ ಮುಗಿಸಿ ವಾಪಾಸ್ ಬಂದು ಖಾಲಿ ಚೇರಲ್ಲಿ ಕುಳಿತಾಗ ಮೈಯಲ್ಲಿ ಸಿಕ್ಕಾಪಟ್ಟೆ ಬೆವರು.. ಹಾರ್ಟ್ ಬೀಟು ಫುಲ್ ರೈಸು...
ಅದೇನೋ ಆಯ್ತು.. ಆಮೇಲೆ ಮುಖ್ಯ ಕಾರ್ಯಕ್ರಮ.. ಸಂಘಟಕರು ಯಾರೋ ಒಂದೆರಡು ಜನ ಮಾತನಾಡಲು ಬಂದರು. ಒಬ್ಬಾತ ನನ್ನ ಭಾಷಣ ಉಲ್ಲೇಖ ಮಾಡಿದ.. ನನ್ನ ತಲೆ ಗಿರ್ರೆನ್ನುತ್ತಲೇ ಇತ್ತು. ಆ ಸಂಘಟಕ `ಒಬ್ಬರು ಅಜ್ಜಿ ಕಥೆ ಹೇಳಿದರು... ಏಡ್ಸ್ ಕುರಿತು ಅಜ್ಜಿಗೆ ಜಾಸ್ತಿ ತಿಳಿದಿರುತ್ತೆ. ಮೊಮ್ಮಗಳಿಗೆ ಅಲ್ಲ' ಎಂದರು. ನಾನಂತೂ ಮುಖ ಮುಚ್ಚಿಕೊಳ್ಳುವುದೊಂದು ಬಾಕಿ.
ಅಂತೂ ಇಂತೂ ಕೊನೆಗೆ ಬಹುಮಾನ ನೀಡುವ ಸಮಯ ಬಂದಿತು. ಮೊದಲ ಬಹುಮಾನ `ವಿನಯ್ ಹೆಗಡೆ..' ಅಂದರು.. ನಾನು ಬೆಚ್ಚಿ ಬಿದ್ದಿದ್ದೆ. ನನಗೆ ಮೊದಲ ಬಹುಮಾನವಾ?
ಪಕ್ಕದಲ್ಲಿದ್ದ ರಾಘವ `ಹೋಗಲೆ ವಿನಯಾ..' ಅಂದ...
`ಸುಮ್ನಿರಲೇ ತಮಾಷೆ ಮಾಡಡ..' ಅಂದೆ.
`ನಿನ್ ಹೆಸರೆ ಕರಿತಾ ಇದ್ವಲೇ..' ಅಂದ..
`ಹೆಂಗ್ ಸಾಧ್ಯ ಅಂದೆ..'
ಸಂಘಟಕರು ಭಾಷಣದಲ್ಲಿ ನಿನ್ ಕಥೆ ಉಲ್ಲೇಖ ಮಾಡಿದ್ವಲಾ.. ಅದಕ್ಕಾಗಿ ಅವರಿಗೆ ತಪ್ಪಿನ ಅರಿವಾಗಿ ಬಹುಮಾನ ಕೊಡ್ತಾ ಇದ್ವಲೇ..' ರಾಘವ ರೈಲು ಬಿಟ್ಟಿದ್ದ. ಆದರೂ ನಾನು ಎದ್ದು ಹೋಗಲಿಲ್ಲ.
ಕೊನೆಗೆ ಸಂಘಟಕರು ಉಳಿದೆಲ್ಲ ಪ್ರೈಜ್ ಕೊಟ್ಟರು. ಮೊದಲ ಬಹುಮಾನ ಎಂದವರೇ... ಇರ್ರೀ.. ಸ್ವಲ್ಪ ಗೊಂದಲ ಇದೆ ಎಂದರು..
ರಾಘವ ಮತ್ತೆ `ನಿಂಗೇಯಲೆ ಪ್ರೈಜ್ ಬಂದಿದ್ದು..' ಎಂದಿದ್ದ.
ನನಗೆ ಎಷ್ಟು ಕಾನ್ಫಿಡೆನ್ಸ್ ಇತ್ತು ಅಂದ್ರೆ ಖಂಡಿತವಾಗಿಯೂ ನನಗೆ ಬಹುಮಾನ ಬರೋದಿಲ್ಲ.. ಎಂದುಕೊಂಡಿದ್ದೆ.
ಕೊನೆಗೂ ಸಂಘಟಕರ ಗೊಂದಲ ಪರಿಹಾರವಾಯಿತು. `ನನ್ನ ಹೆಸರನ್ನೇ ಕರೆದರು.!! ನನಗೆ ಶಾಕ್ ಮೇಲೆ ಶಾಕ್..
ವಿಧಿ ಇಲ್ಲದೇ ಎದ್ದು ಹೋದೆ. `ವಿನಯ್ ಹೆಗಡೆ.. ಹಾಗೂ ವಂದನಾ ಜೋಶಿ...' ಬನ್ನಿ ಇಲ್ಲಿ ಅಂದರು..
ಇಬ್ರೂ ಹೋದ್ವಿ...
ಇಬ್ಬರೂ ಭಾಷಣ ಮಾಡಿದ ನಂಬರ್ ಅದಲು ಬದಲಾಗಿದೆ.. ಹಂಗಾಗಿ ಗೊಂದಲ ಆಗಿತ್ತು... ಎಂದರು.
ವಂದನಾ ಜೋಶಿ ಅವರನ್ನು ಪ್ರಥಮ ಎಂದು ಘೋಷಿಸುತ್ತಿದ್ದೇನೆ... ಎಂದರು... ಅಲ್ಲಿಗೆ ನನ್ನ ಕಾನ್ಫಿಡೆನ್ಸ್ ಪಕ್ಕಾ ಆಗಿತ್ತು.. ಆದರೂ ನನ್ನನ್ನೇಕೆ ಕರೆದರು.. ಅನ್ನೋ ಕುತೂಹಲ ಇತ್ತಲ್ಲ...
ಕೊನೆಗೂ ನನಗೊಂದು ಸರ್ಟಿಫಿಕೆಟ್ ಸಿಕ್ಕಿತು. ತಗೊಂಡು ನೋಡಿದರೆ ನನಗೆ 6ನೇ ಪ್ರೈಜ್ ಬಂದಿತ್ತು.
ಆಗಿದ್ದಿಷ್ಟೇ...
ಹೆಸರು ಕೊಟ್ಟಿದ್ದ ಆರು ಜನರಲ್ಲಿ ನನಗೆ ಆರನೇ ಬಹುಮಾನ ಬಂದಿತ್ತು ಅಷ್ಟೇ...
ಆದರೆ ಹಲವು ಅನುಭವ.. ಪಾಠಗಳನ್ನು ಅದು ಕಲಿಸಿತ್ತು... ಪ್ರಮುಖವಾಗಿ ಸ್ಟೇಜ್ ಫಿಯರನ್ನು ಓಡಿಸಿತ್ತು...