Thursday, August 23, 2018

ಒಂದು ತಿಂಗಳಲ್ಲಿ ಸದ್ದು ಮಾಡಿದ ಎರಡು ತಬ್ಬುಗೆ

ದೇಶದ, ಸಂಸತ್ತಿನ ಗೌರವಕ್ಕೆ ಧಕ್ಕೆ ತಂದ ಸಿಧು, ರಾಹುಲ್ ಆಲಿಂಗನ

ಕಳೆದ ಒಂದು ತಿಂಗಳಿನಿಂದೀಚೆಗೆ ಇಬ್ಬರು ನಾಯಕರು ಮಾಡಿದ ತಬ್ಬುಗೆಗಳು ಸಾಕಷ್ಟು ವಿವಾದಗಳಿಗೆ, ಚರ್ಚೆಗಳಿಗೆ ಕಾರಣವಾಗಿದೆ. ಇಬ್ಬರೂ ನಾಯಕರುಗಳು ಅನಗತ್ಯ ತಬ್ಬುಗೆಯಿಂದ ಸದ್ದು ಮಾಡಿದ್ದಾಾರೆ. ಹೀಗೆ ತಬ್ಬುಗೆ ಮೂಲಕ ಸುದ್ದಿಯಾದವರಲ್ಲೊಬ್ಬರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ಇನ್ನೋರ್ವ ನವಜೋತ್ ಸಿಂಗ್ ಸಿಧು. ಒಬ್ಬರ ತಬ್ಬುಗೆ ಲೋಕಸಭೆಯ ಗೌರವಕ್ಕೆ ಕುಂದು ಉಂಟು ಮಾಡಿದರೆ, ಇನ್ನೊಬ್ಬರ ತಬ್ಬುಗೆ ದೇಶದ ಗೌರವಕ್ಕೇ ಕುಂದನ್ನು ತಂದಿತು.
ಮೊಟ್ಟ ಮೊದಲ ತಬ್ಬುಗೆಯನ್ನು ಕೈಗೊಂಡಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ಲೋಕಸಭಾ ಕಲಾಪದ ಸಂದರ್ಭದಲ್ಲಿ ಭಾಷಣ ಮಾಡಿ ನಂತರ ಇದ್ದಕ್ಕಿದ್ದಂತೆ ಸದನದಲ್ಲಿಯೇ ಪ್ರಧಾನಿ ಮೋದಿ ಅವರ ಬಳಿ ತೆರಳಿ ಅವರನ್ನು ತಬ್ಬಿಕೊಳ್ಳುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದರು.
ಚುನಾವಣೆಯ ಸಂದರ್ಭದಲ್ಲೆಲ್ಲ ಮೋದಿಯವರ ಮೇಲೆ ಆರೋಪಗಳನ್ನು ಮಾಡುವ, ವೀರಾವೇಶದ ಭಾಷಣ ಮಾಡುವಂತೆ ಪೋಸು ಕೊಡುವ ರಾಹುಲ್ ಗಾಂಧಿ, ಲೋಕಸಭಾ ಕಲಾಪದ ಸಂದರ್ಭದಲ್ಲಿಯೂ ಕೂಡ ಇದೇ ರೀತಿ ಮಾಡಲು ಮುಂದಾದರು. ಕೆಲ ನಿಮಿಷಗಳ ಕಾಲ ಭಾಷಣವನ್ನೂ ಮಾಡಿದರು. ನಗೆಪಾಟಲಿಗೂ ಇಡಾದರು. ಅಷ್ಟಾದ ಮೇಲೆ ಸುಮ್ಮನೇ ಇರಬೇಕೆ ಬೇಡ್ವೆ. ಅದು ಬಿಟ್ಟು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಎದುರಿನಲ್ಲಿಯೇ ಸಾಗಿ ಪ್ರಧಾನಿ ಮೋದಿ ಅವರ ಖುರ್ಚಿ ಬಳಿ ತೆರಳಿ ಅವರನ್ನು ಎದ್ದೇಳಿ ಎಂದು ಹೇಳಿದರು. ಮೋದಿ ಏಳದಿದ್ದರೂ ಇವರೇ ಹೋಗಿ ಇದ್ದಕ್ಕಿದ್ದಂತೆ ತಬ್ಬಿಕೊಂಡು ಎಲ್ಲರನ್ನೂ ಅವಾಕ್ಕಾಗಿಸಿದರು. ಇವರ ಈ ನಡೆ ಸಾಕಷ್ಟು ಚರ್ಚೆಗೂ ಕಾರಣವಾಯಿತು.
ಅನಗತ್ಯ ತಬ್ಬುಗೆಯನ್ನು ನಂತರದಲ್ಲಿ ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳುವ ಯತ್ನವನ್ನೂ ನಡೆಸಿತು. ರಾಹುಲ್ ತನ್ನನ್ನು ಟೀಕಿಸುವವರನ್ನೂ ತಬ್ಬಿಕೊಳ್ಳುತ್ತಾರೆ ಎನ್ನುವ ಪಟ್ಟ ಕೊಡಲು ಕಾಂಗ್ರೆಸ್ ಮುಂದಾಯಿತು. ಆದರೆ ಅದರ ಬೆನ್ನಲ್ಲೇ ಕಣ್ಣು ಮಿಟುಕಿಸುವ ಮೂಲಕ ರಾಹುಲ್ ಗಾಂಧಿ ಮತ್ತೊಮ್ಮೆ ದೇಶವಾಸಿಗಳ ಮುಂದೆ ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಂಡುಬಿಟ್ಟರು. ಈ ಘಟನೆಯ ನಂತರ ರಾಹುಲ್ ತಬ್ಬುಗೆ ಹಲವು ರೀತಿಯಲ್ಲಿ ಬಣ್ಣಿಸಲ್ಪಟ್ಟಿದ್ದು ಎಲ್ಲರ ನೆನಪಿನಲ್ಲಿದೆ. ಗಂಭೀರವಾಗಿ ವರ್ತಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಬೇಕಿದ್ದ ವ್ಯಕ್ತಿ ಈ ರೀತಿ ವರ್ತಿಸುವುದು ಸರಿಯಲ್ಲ ಎನ್ನಿಸಿಕೊಂಡಿತು. ಭವಿಷ್ಯದ ಪ್ರಧಾನಿ ಎಂದೆಲ್ಲ ಬಿಂಬಿಸಿಕೊಳ್ಳುವ ನಾಯಕ ತಾನು ಈ ರೀತಿ ನಡೆದುಕೊಂಡರೆ ಮುಂದೆ ದೇಶದ ಗತಿಯೇನು ಎಂದು ಜನಸಾಮಾನ್ಯರು ಆಡಿಕೊಂಡಿದ್ದು ಇನ್ನೂ ಹಸಿಯಾಗಿಯೇ ಇದೆ.
ಭಾರತದ ಕಾಂಗ್ರೆಸ್ ಗೆ ಶತಮಾನಗಳ ಇತಿಹಾಸವೇ ಇದೆ. ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಭೋಸ್ ಅವರಿಂದ ಹಿಡಿದು ಅದೆಷ್ಟೋ ಮಹಾನ್ ಚೇತನಗಳು ಅಧ್ಯಕ್ಷ ಸ್ಥಾನ ವಹಿಸಿಕೊಂಡು ದೇಶವನ್ನು ಮುನ್ನಡೆಸಿದ್ದಾರೆ. ಅಂತಹ ನಾಯಕರು ಮುನ್ನಡೆಸಿದ್ದ ಪಕ್ಷವನ್ನು ಇದೀಗ ರಾಹುಲ್ ಗಾಂಧಿ ಮುನ್ನಡೆಸುತ್ತಿದ್ದಾರೆ. ಆದರೆ ಆ ನಾಯಕರು ಯಾವತ್ತಿಗೂ ರಾಹುಲ್ ರಂತೆ ಬಾಲಿಶತನವನ್ನು ಮೆರೆದಿರಲಿಲ್ಲ. ಲೋಕಸಭೆಯ ಗೌರವಕ್ಕೆ ಚ್ಯುತಿ ತಂದಿರಲಿಲ್ಲ. ಆದರೆ ರಾಹುಲ್ ಗಾಂಧಿಯವರ ಆಲಿಂಗನ ಲೋಕಸಭೆಗೂ, ಕಲಾಪಕ್ಕೂ ಚ್ಯುತಿ ತಂದುಬಿಟ್ಟಿತು. ತಬ್ಬುಗೆ ಹಾಗೂ ಕಣ್ಣುಮಿಟುಕಿಸುವಿಕೆಯ ಮೂಲಕ ರಾಹುಲ್ ಲೋಕಸಭೆ ಎಂದರೆ ಮಕ್ಕಳಾಟ ಎನ್ನುವಂತೆ ನಡೆದುಕೊಂಡುಬಿಟ್ಟರು. ಇದು ಸದನಕ್ಕೆ ಕುಂದು ತಂದಿತು.
ಇದೀಗ ಮಾಜಿ ಕ್ರಿಕೆಟಿಗ, ಪಂಜಾಬ್ ನ ಸಚಿವ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ತಬ್ಬಿಕೊಳ್ಳುವ ಮೂಲಕ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ. ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ತೆರಳಿದ್ದೂ ಅಲ್ಲದೆ ಭಾರತದ ವಿರುದ್ಧ ಭಯೋತ್ಪಾದಕರ ಬೆನ್ನು ತಟ್ಟಿ ಅವರನ್ನು ಕಾಶ್ಮೀರದ ಗಡಿಯೊಳಕ್ಕೆ ನುಸುಳಲು ಕುಮ್ಮಕ್ಕು ನೀಡುವ ಪಾಕ್ ಸೇನಾ ಮುಖ್ಯಸ್ಥರನ್ನು ತಬ್ಬಿಕೊಳ್ಳುವ ಮೂಲಕ ದೇಶವಾಸಿಗಳ ಕೆಂಗಣ್ಣಿಗೆ ಕಾರಣರಾಗಿದ್ದಾರೆ.
ಶತ್ರು ರಾಷ್ಟ್ರ ಪಾಕಿಸ್ಥಾನಕ್ಕೆ ತೆರಳಿದ್ದರೂ ಅಲ್ಲದೇ ಭಾರತದ ವಿರುದ್ಧ ಭಯೋತ್ಪಾದಕರನ್ನು ಅಟ್ಟುವ ಮೂಲಕ ಭಾರತದ ಯೋಧರ ಮಾರಣಹೋಮಕ್ಕೆ ಟೊಂಕ ಕಟ್ಟಿ ನಿಂತವರನ್ನು ತಬ್ಬಿಕೊಳ್ಳುವ ಮೂಲಕ ಸಿಧು ಭಾರತಕ್ಕೆ, ಯೋಧರಿಗೆ ದ್ರೋಹವನ್ನೇ ಎಸಗಿಬಿಟ್ಟರು. ಇಷ್ಟಾದ ಮೇಲೂ ಪಾಕಿಸ್ಥಾನದ ಸೇನಾ ಮುಖ್ಯಸ್ಥರು ತಮ್ಮ ಕಿವಿಯಲ್ಲಿ ಶಾಂತಿ ಮಂತ್ರವನ್ನು ಜಪಿಸಿದರು ಎಂದು ಹೇಳಿ ಉರಿಯುತ್ತಿದ್ದ ದೇಶದ ಮನಸ್ಸುಗಳಿಗೆ ಇನ್ನಷ್ಟು ಕಿಡಿ ಹೊತ್ತಿಕೊಳ್ಳುವಂತೆ ಮಾಡಿದರು.
ಇಮ್ರಾನ್ ಖಾನ್ ತಾವು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರ ಆದಿಯಾಗಿ ಹಲವು ನಾಯಕರನ್ನು ಕರೆದಿದ್ದರು. ಆದರೆ ಆ ನಾಯಕರುಗಳೆಲ್ಲ ಪಾಕಿಸ್ಥಾನದ ಕರೆಯನ್ನು ಕಣ್ಣೆತ್ತಿಯೂ ನೋಡಿರಲಿಲ್ಲ. ಆದರೆ ಧಿಮಾಕು ತೋರಿದ ನವಜೋತ್ ಸಿಂಗ್ ಸಿಧು ಮಾತ್ರ ತಾವು ಹೋಗುತ್ತೇವೆ ಎಂದಿದ್ದಲ್ಲದೇ, ಅಲ್ಲಿಗೆ ಹೋಗುವ ಮೂಲಕ ಭಾರತೀಯರ ಮನಸ್ಸುಗಳಿಗೆ ಆಘಾತ ಉಂಟಾಗುವಂತೆ ಮಾಡಿದರು.
ಇದೇ ಸಿಧು ಪಾಕಿಸ್ಥಾನದ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡಿದ್ದ ಸಂದರ್ಭದಲ್ಲೇ, ಕಾಶ್ಮೀರದಲ್ಲಿ ಪಾಕ್ ಸೇನೆ ಭಾರತದ ಯೋಧರ ಮೇಲೆ ವಿನಾಕಾರಣ ಗುಂಡಿನ ದಾಳಿ ನಡೆಸುತ್ತಿತ್ತು. ಇಷ್ಟಾದರೂ ಸಿಧು ತಮ್ಮ ಕಿವಿಯಲ್ಲಿ ಸೇನಾ ಮುಖ್ಯಸ್ಥರು ಶಾಂತಿ ಮಂತ್ರ ಜಪಿಸಿದರು ಎಂದು ರೈಲು ಬಿಟ್ಟರು. ಇಷ್ಟರ ಜತೆ ಮೋದಿ ಆಲಿಂಗನ ಮಾಡಿಲ್ಲವೇ? ಅವರನ್ನೇಕೆ ಕೇಳುವುದಿಲ್ಲ ಎನ್ನುವ ಉದ್ಧಟತನವೂ ಬೇರೆ.
ಒಂದಾನೊಂದು ಕಾಲದಲ್ಲಿ ಪಾಕಿಸ್ಥಾನದ ವಿರುದ್ಧವೇ ಕ್ರಿಕೆಟ್ ಪಂದ್ಯಗಳಲ್ಲಿ ಗುಡುಗುತ್ತಿದ್ದ, ಅಬ್ಬರಿಸುತ್ತಿದ್ದ, ರನ್ ಮಳೆ ಸುರಿಸಿ, ಪಾಕಿಸ್ಥಾನ ಎಂದರೆ ಆಜನ್ಮ ವೈರಿ ಎಂಬಂತೆ ನಡೆದುಕೊಳ್ಳುತ್ತಿದ್ದ ಸಿಧು ನಡೆ ಇದೀಗ ಬಹುತೇಕರ ಮನಸ್ಸಿನಲ್ಲಿ ಬೇರೆಯದೇ ಭಾವನೆಗಳಿಗೆ ಕಾರಣವಾಗಿದ್ದಾರೆ. ಕ್ರಿಕೆಟ್ ನಲ್ಲಿನ ವೀರಾವೇಶವೆಲ್ಲವೂ ನಾಟಕವಾ ಎನ್ನುವಂತಾಗಿದೆ. ತಮ್ಮ ನಡೆಯಿಂದಾಗಿ ಭಾರತೀಯರ ಮನಸ್ಸಿನಲ್ಲಿ ಆಳವಾದ ಗಾಯವನ್ನೂ ಮಾಡಿಬಿಟ್ಟಿದ್ದಾರೆ. ಭಾರತೀಯರು ಸಿಧುವನ್ನು ಇನ್ನು ಕ್ಷಮಿಸಲಾರರು ಬಿಡಿ.
ಪಾಕಿಸ್ಥಾನ ಭಾರತಕ್ಕೆ ಎಸಗಿದ ದ್ರೋಹ ಒಂದೆರಡಲ್ಲ ಬಿಡಿ. ಸಾಲು ಸಾಲು ಯುದ್ಧಗಳು, ಕ್ಯಾತೆಗಳನ್ನು ಪಾಕಿಸ್ಥಾನ ಮಾಡುತ್ತಲೇ ಇದೆ. ಕಾಶ್ಮೀರದಲ್ಲಿ ಉಗ್ರರನ್ನು ನುಗ್ಗಿಸುವುದು, ಭಾರತದ ಮೇಲೆ ಉಗ್ರರ ದಾಳಿ ಕೈಗೊಳ್ಳುವ ಮೂಲಕ ಭಾರತವನ್ನು ಅಧೀರವನ್ನಾಗಿ ಮಾಡಲು ಯತ್ನಿಸುತ್ತಿರುವುದು ಪದೇ ಪದೆ ನಡೆಯುತ್ತಲೇ ಇದೆ. ವಿಶ್ವಸಂಸ್ಥೆಯ ಅಂಗಳದಲ್ಲಿ ಪದೇ ಪದೆ ಕಾಶ್ಮೀರ ವಿಷಯವನ್ನು ಪ್ರಸ್ಥಾಪಿಸುತ್ತಲೇ ಇದೆ.
ಇಂತಹ ಪಾಕಿಸ್ಥಾನವೇ ಭಾರತದಲ್ಲಿ ಒಂದಾನೊಂದು ಕಾಲದಲ್ಲಿ ನೌಕಾಧಿಕಾರಿಯಾಗಿದ್ದ ಕುಲಭೂಷಣ್ ಜಾಧವ ರಿಗೆ ಚಿತ್ರಹಿಂಸೆ ನೀಡುತ್ತಿದೆ. ಅಷ್ಟೇ ಅಲ್ಲದೇ ಜಾಧವ್ ಕುಟುಂಬಸ್ಥರು ಪಾಕಿಸ್ಥಾನದ ಜೈಲಿನಲ್ಲಿರುವ ಜಾಧವ್ ಭೇಟಿಗೆ ಹೋದಾಗ ಅವರ ಜತೆ ನಡೆದುಕೊಂಡ ರೀತಿ ಯಾರಿಗೂ ಮರೆತಿಲ್ಲ. ಜಾಧವ್ ತಾಯಿ ಹಾಗೂ ಪತ್ನಿಯನ್ನು ಅವಮಾನಿಸಿದ್ದು, ಕುಂಕುಮ, ಬಳೆ, ತಾಳಿಗಳನ್ನೆಲ್ಲ ತೆಗೆಸಿ ಇಟ್ಟಿದ್ದು, ಜಾಧವ್ ಪತ್ನಿಯ ಚಪ್ಪಲಿ ಕದ್ದಿದ್ದು ಇವೆಲ್ಲ ಇನ್ನೂ ನೆನಪಿನಲ್ಲಿದೆ.
ಭಾರತಕ್ಕೆ ಹೀಗೆ ಸಾಲು ಸಾಲು ಅವಮಾನ ಮಾಡಿದ, ಸಮಯ ಸಿಕ್ಕಾಗಲೆಲ್ಲ ಅವಮಾನ ಮಾಡಲು ಕಾಯುತ್ತಿರುವ ಪಾಕಿಸ್ಥಾನದ ಸೈನ್ಯದ ಮುಖ್ಯಸ್ಥರನ್ನೇ ಆಲಿಂಗನ ಮಾಡುವ ಮೂಲಕ ಸಿಧು ಭಾರತಕ್ಕೆ ದ್ರೋಹ ಎಸಗಿದಂತಾಗಲಿಲ್ಲವೇ? ಕ್ರಿಕೆಟ್ ಆಡುವಾಗಿನ ರೋಷ, ಆವೇಷ ಜಿದ್ದು ಎಲ್ಲ ಈಗೆಲ್ಲಿ ಹೋಯಿತು? ತಪ್ಪು ಮಾಡಿಯೂ ಅದನ್ನು ಸಮರ್ಥನೆ ಮಾಡಿಕೊಳ್ಳುವ ಸಿಧುಗೆ ನಾಚಿಕೆಯಾಗುವುದಿಲ್ಲವೇ?
ಒಂದು ತಿಂಗಳ ಅವಧಿಯಲ್ಲಿ ಈ ಎರಡು ಆಲಿಂಗನಗಳು ದೇಶದಾದ್ಯಂತ ಸಾಕಷ್ಟು ಸದ್ದು ಮಾಡಿತು. ಒಂದು ಆಲಿಂಗನ ದೇಶಕ್ಕೆ ಮನರಂಜನೆಯನ್ನು ನೀಡಿದರೆ ಇನ್ನೊದು ದೇಶದ ಜನರ ಮನಸ್ಸು ಕುದಿಯುವಂತೆ ಮಾಡಿತು.
ದೇಶದ ಜನರ ಹಾಗೂ ಸಂಸತ್ತಿನ ಗೌರವಗಳಿಗೆ ಕುಂದು ಉಂಟು ಮಾಡುವಂತಹ ಇಂತಹ ಆಲಿಂಗನಗಳ ಅಗತ್ಯವಾದರೂ ಏನಿದೆ? ಯಾರನ್ನೋ ಅನುಕರಿಸಲು ಹೋದರೆ ಇದಕ್ಕಿಿಂತ ಭಿನ್ನವಾದದ್ದು ಏನು ಆಗಲು ಸಾಧ್ಯ? ವಯಕ್ತಿಕ ಲಾಭಕ್ಕಾಾಗಿ, ಹೆಸರಿಗಾಗಿ ದೇಶದ ಗೌರವವನ್ನು, ಸಂಸತ್ತಿನ ಗೌರವವನ್ನು ಕಳೆಯಲು ಹಿಂದೇಟು ಹಾಕದವರು ದೇಶಕ್ಕಾಗಿ ಇನ್ನೇನು ತಾನೇ ಮಾಡಿಯಾರು?

19 comments:

  1. This comment has been removed by a blog administrator.

    ReplyDelete
  2. https://cracksmad.com/windows-10-crack/
    Many of life’s failures are people who did not realize how close they were to success when they gave up.

    ReplyDelete
  3. https://chproductkey.com/hitman-pro-crack/
    We learn wisdom from failure much more than from success. We often discover what will do, by finding out what will not do; and probably he who never made a mistake never made a discovery.

    ReplyDelete
  4. https://zsactivationkey.com/revo-uninstaller-pro-crack/
    My mother said to me, “If you become a soldier, you’ll be a general; if you become a monk, you’ll end up as the Pope.” Instead, I became a painter and wound up as Picasso.

    ReplyDelete
  5. Download Best Free Games · Adam Wolfe · Goodgame Big Farm · Goodgame Empire · Alien Shooter 2 · World of Warships · Rail Nation · World of Tanks · Totem Tribe
    gta vice city compressed for pc

    ReplyDelete
  6. I guess I am the only one who came here to share my very own experience. Guess what!? I am using my laptop for almost the past 2 years, but I had no idea of solving some basic issues. I do not know how to Crack But Thankfully, I recently visited a website named Cracked Fine
    iExplorer Crack
    Pdf Annotator Crack

    ReplyDelete
  7. I am very thankful for the effort put on by you, to help us, Thank you so much for the post it is very helpful, keep posting such type of Article.
    Autodesk Maya Crack
    Age of Empires 4 Pc Game
    FonePaw iPhone Data Recovery Crack

    ReplyDelete
  8. This software is easy to use.I appreciate this article. It solves our problems in a better way.Cinema 4D

    ReplyDelete
  9. I am very impressed with your post because this post is very beneficial for me and provide a new knowledge to me. Download now. Aida64 Extreme

    ReplyDelete
  10. Here at Karanpccrack, you will get all your favourite software. Our site has a collection of useful software. That will help for your, Visite here and get all your favourite and useful software free.
    <a href="https://karanpccrack.com/internet-explorer-crack/>Internet Explorer 11 Crack</a>

    ReplyDelete
  11. Waterfox Classic Crack For PC is an amazing software for 64-bit of Mozilla Firefox that provides high-performance browsing. It is compatible with Windows 64bit computer systems, the Firefox source code was taken.

    ReplyDelete
  12. Your writing skills, as well as the ingenuity with which you've organised your site as a whole, have wowed me.Click here

    ReplyDelete
  13. This comment has been removed by a blog administrator.

    ReplyDelete