Saturday, April 16, 2016

ಮಾಸ್ತರ್ ಮಂದಿ -10

                ಹೈಸ್ಕೂಲಿನಲ್ಲಿ ಇನ್ನೂ ಹಲವು ಶಿಕ್ಷಕರಿದ್ದರು. ಮೆಚ್ಚಿನ ಶಿಕ್ಷಕರಾಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ಅವರ ಪೈಕಿ ಥಟ್ಟನೆ ನೆನಪಾಗುವವರು ಎಂದರೆ ಲಕ್ಷಪ್ಪ ಮಾಸ್ತರ್ . ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಲಕ್ಷಪ್ಪ :
      ಕೆ. ಲಕ್ಷಪ್ಪ ೆಎನ್ನುವ ಕಿರು ನಾಮಧೇಯ  ಇವರದ್ದು. 9ನೇ ಕ್ಲಾಸಿನಲ್ಲಿ ಇರುವಾಗ ಕಾನ್ಲೆ ಹೈಸ್ಕೂಲಿಗೆ ಬಂದವರು ಲಕ್ಷಪ್ಪ ಸರ್. ನನ್ನ ಹೈಸ್ಕೂಲ್ ಜೀವನದ ಅತ್ಯಂತ ಪ್ರಿಯ ಮಾಸ್ತರುಗಳಲ್ಲಿ ಒಬ್ಬರು. ಸಮಾಜ ವಿಜ್ಞಾನವನ್ನು ಇವರು ಕಲಿಸುತ್ತಿದ್ದರು. ಲಕ್ಷಪ್ಪ ಅವರಿಗೆ ನೆತ್ತಿಯ ಮೇಲೆ ಕೂದಲು ತೆಳ್ಳಗಾಗಿತ್ತು. ಅದನ್ನು ನೋಡಿ ಹೈಸ್ಕೂಲಿನ ಹುಡುಗರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರು. ಸದಾ ಹಸನ್ಮುಖಿಯಾಗಿದ್ದ ಲಕ್ಷಪ್ಪ ಸರ್ ಆಗೊಮ್ಮೆ ಈಗೊಮ್ಮೆ ಸಿಟ್ಟಾಗುತ್ತಿದ್ದುದೂ ಇದೆ. ನಾನು ಅವರ ವಿಷಯದಲ್ಲಿ ಚನ್ನಾಗಿ ಬರೆಯುತ್ತಿದೆ. ಅಕ್ಷರಗಳೆಲ್ಲ ಚನ್ನಾಗಿ ಬರೆದು ನೀಟಾಗು ತೋರಿಸುತ್ತಿದೆ. ಶಾಲೆಗೆ ಬಂದ ಕೆಲವು ದಿನಗಳಲ್ಲಿಯೇ ಲಕ್ಷಪ್ಪ ಅವರ ಪ್ರಿಯ ಶಿಷ್ಯಂದಿರಲ್ಲಿ ನಾನೂ ಒಬ್ಬನಾಗಿಬಿಟ್ಟಿದ್ದೆ.
          ಲಕ್ಷಪ್ಪ ಸರ್ ಿತಿಹಾಸದ ಪುಟಗಳನ್ನೆಲ್ಲ ಬಹಳ ಸುಂದರವಾಗಿ ಕಲಿಸುತ್ತಿದ್ದರು. ಅದರಲ್ಲೂ ಐತಿಹಾಸಿಕ ಘಟನೆಗಳು, ಯುದ್ಧಗಳನ್ನೆಲ್ಲ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುತ್ತಿದ್ದರು. ಲಕ್ಷಪ್ಪ ಸರ್ ಅವರು ರಕ್ಕಸತಂಗಡಿ ಯುದ್ಧವನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಿನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
           ಓದಿನಲ್ಲಿ ಮುಂದಿದ್ದ ನನಗೆ ಹೈಸ್ಕೂಲಿನಲ್ಲಿ ಅಂಕಗಳು ಸಾಕಷ್ಟು ಸಿಗುತ್ತಿದ್ದವು. ನಾನು ಎಂದರೆ ಓದುಗುಳಿ ಎಂದುಕೊಂಡಿರಬೇಕು ಅವರು. ಹೈಸ್ಕೂಲು ವಾರ್ಷಿಕೋತ್ಸವದ ಸಂದರ್ಭದಲ್ಲಿ 9 ನೇ ಕ್ಲಾಸಿನಲ್ಲಿದ್ದಾಗ ನಾನು ನಾಟಕವೊಂದರಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಅದನ್ನು ಲಕ್ಷಪ್ಪ ಸರ್ ಬಹಳ ಮೆಚ್ಚಿಕೊಂಡಿದ್ದರು. ಎಸ್ಸೆಲ್ಸಿಯಲ್ಲಿದ್ದಾಗ ಸಿನೆಮಾ ಹಾಡುಗಳಿಗೆ ನಮ್ಮ ದೋಸ್ತರ ತಂಡ ಸ್ಟೆಪ್ ಹಾಕಿತ್ತು. ಅದನ್ನು ನೋಡಿ ಫುಲ್ ಫಿದಾ ಆಗಿದ್ದ ಲಕ್ಷಪ್ಪ ಸರ್ `ಏನೋ.. ನೀನು ಡ್ಯಾನ್ಸ್ ಕೂಡ ಮಾಡ್ತೀಯೇನೋ..' ಎಂದು ನಕ್ಕಿದ್ದರು. ಅವರು ಖುಷಿಯಾಗಿ ಹೇಳಿದ್ದ ಮಾತು ನನಗೆ ಮಾತ್ರ ತಮಾಷೆಯೆನ್ನಿಸಿತ್ತು.
         ಎಸ್ಸೆಲ್ಸಿಯಲ್ಲಿದ್ದಾಗ ವಿದ್ಯಾರ್ಥಿಗಳದ್ದೇ ಒಂದು ತಂಡ ಮಾಡಿ ಓದಲು ಬಿಡುತ್ತಿದ್ದರು. ನಾನು ಇದ್ದ ತಂಡವನ್ನು ಲಕ್ಷಪ್ಪ ಸರ್ ಹಾಗೂ ಭಾರತಿ ಮೇಡಮ್ ಮುಂದಾಳತ್ವ ವಹಿಸಿಕೊಂಡಿದ್ದರು. ನಮ್ಮ ತಂಡ  ಉಳಿದೆಲ್ಲರ ತಂಡಕ್ಕಿಂತ ಜಾಸ್ತಿ ಅಂಕ ಗಳಿಸಬೇಕು ಎನ್ನುವುದು ಇವರ  ಆಶಯವಾಗಿತ್ತು. ನಾನು ಹುಡುಗರ ಪಾಲಿಗೆ ಮುಂದಾಳುವಾಗಿದ್ದೆ ಎನ್ನಿ.
         ಹೈಸ್ಕೂಲು 100ಕ್ಕೆ 100 ರಷ್ಟು ಫಲಿತಾಂಶ ಸಾಧಿಸಬೇಕು ಎನ್ನುವ ಮಹತ್ವಾಕಾಂಕ್ಷೆ ನಮ್ಮೆಲ್ಲರದ್ದಾಗಿತ್ತು. ಶಿಕ್ಷಕವೃಂದ ಕೂಡ  ಈ ಕುರಿತಂತೆ ಬಹಳ ಕ್ರಮ ಕೈಗೊಂಡಿದ್ದರು. ಎಸ್ಸೆಲ್ಸಿಯ  ಆರಂಭದ 3 ತಿಂಗಳಿನಲ್ಲಿಯೇ ಎಲ್ಲ ಶಿಕ್ಷಕರೂ ತಮ್ಮ ತಮ್ಮ ವಿಷಯಗಳನ್ನು ಕಲಿಸಿ ಮುಗಿದಿತ್ತು. ನಂತರ ಶುರುವಾಯಿತು ನೋಡಿ ನಮಗೆ ನಿಜವಾದ ಶಿಕ್ಷಣ. ಅಬ್ಬಾ. ಲಕ್ಷಪ್ಪ ಅವರ ಕನಸುಗಳೆಲ್ಲ ೆಷ್ಟು ಚನ್ನಾಗಿದ್ದವು ಅಂದರೆ... ಆಹ್.. ಅವರನ್ನು ಶಿಕ್ಷಣ ಇಲಾಖೆಯಲ್ಲಿ ಹೊಸ ರೀತಿಯ ಕನಸುಗಳನ್ನು ನೇಯಲು ಕಲಿಸಬೇಕು. ಹಾಗಿದ್ದವು. ವಿದ್ಯಾರ್ಥಿಗಳಲ್ಲಿ ತಂಡವನ್ನು ಮಾಡಿದರು. ತಂಡ ತಂಡಗಳ ನಡುವೆ ವಿವಿಧ ವಿಷಯಗಳಲ್ಲಿ ಸ್ಪರ್ಧೆ. ಹೆಚ್ಚು ಅಂಕ ಪಡೆದವರಿಗೆ ತಮ್ಮ ಕೈಯಿಂದಲೇ ಬಹುಮಾನ ವಿತರಣೆ ಮಾಡುತ್ತಿದ್ದರು. ಪ್ರತಿ ದಿನ ಪ್ರತಿ ವಿಷಯಗಳ ಬಗ್ಗೆ ಚರ್ಚಾ ಸ್ಪರ್ಧೆ. ವಿಶೇಷ  ಉಪನ್ಯಾಸ ಬೇರೆ. ಕೊನೆಯ ಎರಡು ತಿಂಗಳಂತೂ.. ಅಬ್ಬಬ್ಬಾ.. ಪ್ರತಿದಿನ ಪರೀಕ್ಷೆ ಮಾಡುತ್ತಿದ್ದರು. ಎಲ್ಲ ವಿಷಯಗಳ ಪರೀಕ್ಷೆ. ಇಷ್ಟೆಲ್ಲ ಮುತುವರ್ಜಿ ವಹಿಸಿದರೂ ಕೂಡ ನಮ್ಮ ಹೈಸ್ಕೂಲು 100% ಫಲಿತಾಂಶ ದಾಖಲಿಸಲೇ ಇಲ್ಲ. ಒಬ್ಬ ಹುಡುಗಿ ನಪಾಸಾಗಿದ್ದಳು. ಫಲಿತಾಂಶ ಶೆ.99ರಷ್ಟಾಗಿತ್ತು. ಇದಕ್ಕೆ ಲಕ್ಷಪ್ಪ ಅವರು ಬಹಳ ಬೇಜಾರು ಮಾಡಿಕೊಂಡಿದ್ದರು.
          ಎಸ್ಸಲ್ಸಿಯಲ್ಲಿದ್ದಾಗ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಇಡೀ ಹೈಸ್ಕೂಲಿನಿಂದ ನಾಲ್ಕು ತಂಡಗಳನ್ನು ಮಾಡಲಾಗುತ್ತದೆ. 8, 9 ಹಾಗೂ 10 ನೇ ಕ್ಲಾಸಿನ ಹುಡುಗರದ್ದು ನಾಲ್ಕು ಹಾಗೂ ಹುಡುಗಿಯರದ್ದು ನಾಲ್ಕು ತಂಡಗಳು. ಈ ತಂಡಗಳಿಗೆ ಒಬ್ಬ ನಾಯಕ. ತಂಡಕ್ಕೊಬ್ಬರು ಶಿಕ್ಷಕರು ಮೇಲ್ವಿಚಾರಕರು. ನಾನೊಂದು ತಂಡದಲ್ಲಿದ್ದೆ. ಉಪನಾಯಕನಾಗಿದ್ದೆ. ನಮ್ಮ ತಂಡದ ಮೇಲ್ವಿಚಾರಣೆಯನ್ನು ಲಕ್ಷಪ್ಪ ಮಾಸ್ತರ್ ನೋಡಿಕೊಳ್ಳುತ್ತಿದ್ದರು. ಹೈಸ್ಕೂಲಿನಲ್ಲಿದ್ದಾಗ ನಮ್ಮ ತಂಡದಲ್ಲಿ ನಾನು ಸಾಂಸ್ಕೃತಿಕ ವಿಭಾಗ ಹಾಗೂ ಕ್ರೀಡೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದೆ. ಹಾಡು ಹೇಳುತ್ತಿದ್ದೆನಾದರೂ ಒಂದೇ ಒಂದು ಬಹುಮಾನ ಪಡೆಯಲಿಲ್ಲ ಬಿಡಿ.
            ಪ್ರತಿ ವಾರ  ಒಂದೊಂದು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತಿದ್ದವು. ನಾನು ಪ್ರತಿವಾರ ವೂ ಹಾಡುತ್ತಿದ್ದೆ. ಬಹುಮಾನ ಸಿಗಲಿಲ್ಲ ಬಿಡಿ. ಆದರೆ ನನ್ನದೇ ಆದ ಕೆಲವು ವಿಭಾಗಗಳಿದ್ದವು. ಅದರಲ್ಲಿ ನನ್ನನ್ನು ಮೀರಿಸುವವರೇ ಇರುತ್ತಿರಲಿಲ್ಲ. ಕಂಠಪಾಠ ಸ್ಪರ್ಧೆ. ಕನ್ನಡ, ಹಿಂದಿ ಹಾಗೂ ಇಂಗ್ಲೀಷಿನ ಕವಿತೆಗಳನ್ನು ಉರು ಹೊಡೆದು ರಾಗವಾಗಿ ವಾಚನ ಮಾಡುವ ಸ್ಪರ್ಧೆ. ಇದರಲ್ಲಿ ನನ್ನದೇ ಎತ್ತಿದ ಕೈ ಆಗಿತ್ತು. ಅದೇ ರೀತಿ ರಸಪ್ರಶ್ನೆಯಲ್ಲಿ ನನ್ನನ್ನು ಮೀರಿಸುವವರೇ ಇರಲಿಲ್ಲ. ಇವುಗಳಲ್ಲಿ ಸಾಕಷ್ಟು ಬಹುಮಾನಗಳು ಬಂದಿವೆ ಬಿಡಿ.
           ಕ್ರೀಡಾ ಸ್ಪರ್ಧೆಗಳಲ್ಲಿ ನಾನು ಪಾಲ್ಗೊಳ್ಳುತ್ತಿದ್ದೆ. ಸಿಕ್ಕಾಪಟ್ಟೆ ಓಡುತ್ತಿದ್ದೆ. ಆದರೆ ಮೊದಲ ಸ್ಥಾನ ಯಾವತ್ತೂ ಸಿಕ್ಕಿಲ್ಲ. ಎರಡು ಅಥವಾ ಮೂರನೇ ಸ್ಥಾನ ಸಿಕ್ಕಿದೆ. ತಂಡ ವಿಭಾಗದಲ್ಲಿ ರಿಲೇಯಲ್ಲಿ ಪಾಲ್ಗೊಂಡಿದ್ದೆ. ಬಹುಮಾನಗಳು ಬಂದಿರಲಿಲ್ಲ. ಕಬ್ಬಡ್ಡಿಯಲ್ಲಿ ತಂಡದ ಭಾಗವಾಗಿದ್ದೆ. ಕೋಕೋ ಚನ್ನಾಗಿ ಆಡುತ್ತಿದ್ದೆ. ಅದರಲ್ಲೂ ತಂಡದ ಭಾಗವಾಗಿದ್ದೆ. ಲಾಂಗ್ ಜಂಪ್ ನಲ್ಲಿ ಪಾಲ್ಗೊಳ್ಳುತ್ತಿದ್ದೆ. ಖಾಯಂ ದ್ವಿತೀಯ ಸ್ಥಾನ ನನಗೆ ಕಟ್ಟಿಟ್ಟ ಬುತ್ತಿಯಾಗಿತ್ತು. ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದೆ. ಇಲ್ಲೊಂದು ಇಂಟರೆಸ್ಟಿಂಗ್ ವಿಷಯವಿದೆ. ಅದನ್ನು ಹೇಳಲೇಬೇಕು. ಫೈನಲ್ ಮ್ಯಾಚ್. ಹಾಗೂ ಹೀಗೂ ಫೈನಲ್ ತಲುಪಿದ್ದೆವು. ನಮಗೆ ಮೊದಲ ಬ್ಯಾಟಿಂಗ್ ಸಿಕ್ಕಿತ್ತು. ನಾನು ಕ್ಯಾಪ್ಟನ್ ಲೀಗ್ ಪಂದ್ಯಗಳಲ್ಲಿ ಚನ್ನಾಗಿ ಆಡಿರಲಿಲ್ಲ. ಫೈನಲ್ ಪಂದ್ಯ ಚನ್ನಾಗಿ ಆಡಬೇಕೆಂಬ ನಿರ್ಧಾರದೊಂದಿಗೆ ಕ್ರೀಸಿಗೆ ಹೋಗಿದ್ದೆ. ಬಿಡಿ ಆವಾಗ ಅಂತಹ ಹೆಸರಾಂತ ಆಟಗಾರನೇನಲ್ಲ ನಾನು. ಕುಲ್ಡಂಬಲ್ಡಿ ಶಾಟ್ ನನ್ನದು. ತಾಗಿದರೆ ಬೌಂಡರಿ. ಇಲ್ಲದಂರೆ ಜೋರಾಗಿ ಬೀಸುವ ಗಾಳಿ ಅಷ್ಟೇ. ಮೊದಲ ಎರಡು ಬಾಲುಗಳು ಎಳೆದು ಬಾರಿಸಿದೆ. ಬೌಂಡರಿಯಾಗಿತ್ತು.
              ನಮ್ಮ ಕ್ರಿಕೆಟ್ ಗ್ರೌಂಡಿನಲ್ಲಿ ವಿಶಿಷ್ಟ ನಿಯಮ ಒಂದಿತ್ತು. ಗ್ರೌಂಡ್ ದೊಡ್ಡದಿದ್ದರೂ ಕೀಪರ್ ಹಿಂಭಾಗ  ಮಾತ್ರ ದೊಡ್ಡದಾಗಿರಲಿಲ್ಲ. ಅಲ್ಲೊಂದು ದೊಡ್ಡ ಕೊಡ್ಲು ಇತ್ತು. ಆ ಕೊಡ್ಲಿಗೆ ಬಾಲ್ ತಾಗಿದರೆ 2 ರನ್ ಡಿಕ್ಲೇರ್ ಆಗುತ್ತಿತ್ತು. ನಾನು ಕೂಡ ಮೂರನೇ ಬಾಲ್ ಗೆ ಬ್ಯಾಟ್ ಬೀಸಿದೆ. ಎಡ್ಜ್ ಆಗಿ ಕೀಪರ್ ಹಿಂದೆ ಓಡಿತು. ನಾನು ಹೆಂಗಂದರೂ 2 ರನ್ ಡಿಕ್ಲೇರ ಬಿಡು ಎಂದುಕೊಂಡು ಅರ್ಧ ಪಿಚ್ಚಿಗೆ ಓಡಿದೆ. ಬಾಲ್ ಹೋಗಲೇ ಇಲ್ಲ. ಯಾರೋ ಕೂಗಿದರು. ಓಡು ಓಡು ಅಂತ. ನಾನು ಓಡಿದೆ. 2ನೇ ರನ್ ಗೆ ಮರಳುವಾಗ ರನ್ ಔಟ್ ಆದೆ. ಆಗ ಲಕ್ಷಪ್ಪ ಅವರ ಮುಖ ನೋಡಬೇಕಿತ್ತು ಕಣ್ರೀ. ಗಲಾಟೆಗೆ ಇಳಿದಿದ್ದರು. 2 ರನ್ ಡಿಕ್ಲೇರ್ ಇದ್ದಿದ್ದಕ್ಕೆ ವಿನಯ ರನ್ ಓಡಲಿಲ್ಲ. ನೀವು ಹೇಗೆ ರನೌಟ್ ಮಾಡಿದಿರಿ. ಇದು ಸರಿಯಲ್ಲ. ನಾಟೌಟ್.. ನಾಟೌಟ್ ಎಂದು ಉಳಿದ ಶಿಕ್ಷಕರ ಜೊತೆಗೆ ಗಲಾಟೆಗೆ ನಿಂತಿದ್ದರು. ಕೊನೆಗೆ ಅವರ ಗಲಾಟೆಗೆ ಉಳಿದವರು ಸೊಪ್ಪು ಹಾಕಲಿಲ್ಲ. ಕೊನೆಗೆ ಅಲವತ್ತುಕೊಂಡ ಅವರು ನಮ್ ಮ್ಯಾಚ್ ತೆಗೆದ್ರಿ ನೀವೆಲ್ಲ ಸೇರ್ಕೊಂಡು ಎಂದರು. ನಾನು ಸುಮ್ಮನಾಗಿದ್ದೆ. ನಮ್ಮ ತಂಡ ಗೌರವಾರ್ಹ ಮೊತ್ತವನ್ನೇನೋ ಸಂಪಾದಿಸಿತ್ತು. ನಂತರ  ಎದುರಾಳಿ ತಂಡ ಬ್ಯಾಟ್ ಮಾಡಲು ಬಂದಾಗ ನಾನು ಬೌಲಿಂಗನ್ನೂ ಮಾಡಿದ್ದೆ. ಎದುರಾಳಿ ತಂಡ ಜಯಭೇರಿ ಭಾರಿಸಿತ್ತು ಬಿಡಿ.
           ರಸಪ್ರಶ್ನೆಯಲ್ಲಿ ನನ್ನದು ಎತ್ತಿದ ಕೈ ಎಂದು ಹೇಳಿದ್ದೆನಲ್ಲ. ಹೌದು ಆ ದಿನಗಳಲ್ಲಿ ರಸಪ್ರಶ್ನೆ ಕುರಿತಂತೆ ನಾನು ಮುಟ್ಟಿದ್ದೆಲ್ಲ ಚಿನ್ನದಂತೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೀಗೆ ಒಂದು ರಸಪ್ರಶ್ನೆ ಕಾರ್ಯಕ್ರಮ. ಸಾಗರ-ಶಿವಮೊಗ್ಗ ರಸ್ತೆಯ ಆನಂದಪುರದ ಬೆಕ್ಕಿನ ಕಲ್ಮಠದಲ್ಲಿ ನಡೆದಿತ್ತು. ನನ್ನನ್ನು ಹಾಗೂ ಜೊತೆಗಾರ ಕಿರಣ ನನ್ನು ಕರೆದುಕೊಂಡು ಲಕ್ಷಪ್ಪ ಸರ್ ಬೈಕಿನಲ್ಲಿ ತ್ರಿಬ್ಬಲ್ ರೈಡ್ ಮಾಡಿಕೊಂಡು ಹೋಗಿದ್ದರು. ರಸಪ್ರಶ್ನೆ ನಡೆಯಿತು. ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ತೀವ್ರ ಪೈಪೋಟಿ ಒಡ್ಡಿದ ನಾನು ಅಂತಿಮವಾಗಿ ಮೂರನೇ ಬಹುಮಾನ ಪಡೆದುಕೊಂಡೆ. ಆಗ ಲಕ್ಷಪ್ಪ ಮಾಸ್ತರ್ ಓಡಿಬಂದು ನನ್ನನ್ನು ತಬ್ಬಿಕೊಂಡು ಎತ್ತಿಬಿಟ್ಟಿದ್ದರು.
         ಪ್ರತಿಭಾ ಕಾರಂಜಿ ಎನ್ನುವುದು ನಾನು ಎಸ್ಸೆಲ್ಸಿಯಲ್ಲಿದ್ದಾಗ ಆರಂಭವಾಯಿತು. ನಮ್ಮ ಹೈಸ್ಕೂಲಿನ ತಂಡವನ್ನು ತಾಳಗುಪ್ಪಾದ ಕೇಂದ್ರ ಶಾಲೆಗೆ ಕರೆದೊಯ್ಯಲಾಯಿತು. ಚಿತ್ರಕಲೆ, ರಸಪ್ರಶ್ನೆಗಳಲ್ಲಿ ನಾನು ಭಾಗವಹಿಸಿದ್ದೆ. ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಬಂದಿತ್ತು. ಚಿತ್ರಕಲೆಯಲ್ಲಿ ನಾನು ತಾಜಮಹಲ್ ಚಿತ್ರ ಬಿಡಿಸಿದ್ದೆ. ಪ್ರಥಮ ಸ್ಥಾನ ಗಳಿಸಿದ್ದೆ. ಇದ್ದಕ್ಕಿದ್ದಂತೆ ಚರ್ಚಾ ಸ್ಪರ್ಧೆಗೆ ಸಂಬಂಧಿಸಿದಂತೆ ನನ್ನ ಹೆಸರನ್ನು ಕೂಗಿದರು. ನನಗೊಮ್ಮೆ ಅಚ್ಚರಿ. ನೋಡಿದರೆ ಲಕ್ಷಪ್ಪ ಸರ್ ನನ್ನ ಹೆಸರನ್ನು ಕೊಟ್ಟಿದ್ದರು. ಮೂರು ಜನ ಭಾಗವಹಿಸಿದ್ದ ಆ ಸ್ಪರ್ಧೆಯಲ್ಲಿ  ನಾನು ಎರಡನೇ ಸ್ಥಾನ ಪಡೆದೆ ಬಿಡಿ.
         ಇಂತಹ ಲಕ್ಷಪ್ಪ ಸರ್ ಗೆ ಇತ್ತೀಚೆಗೆ ಒಮ್ಮೆ ಪೋನ್ ಮಾಡಿದ್ದೆ. ಸಾಗರ ತಾಲೂಕಿನಲ್ಲಿಯೇ ಯಾವುದೋ ಒಂದು ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾರೆ. ನಾನು ಪರಿಚಯ ಮಾಡಿಕೊಂಡೆ. ನೆನಪಿತ್ತು ಅವರಿಗೆ. ಖುಷಿ ಪಟ್ಟರು. ನನ್ನ ಬಗ್ಗೆ ಕೇಳಿದರು. ಆ ಸಂದರ್ಬದಲ್ಲಿ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಪ್ರತಿಭಟನೆ ನಡೆಯುತ್ತಿತ್ತು. ಅದರ ಬಗ್ಗೆ ವರದಿ ಮಾಡಬೇಕಿತ್ತು ಎಂದವರೆ ಮಾಹಿತಿ ನೀಡಿದರು. ನಾನು ಮಾಡಿದ್ದೆ. ಅದಕ್ಕೆ ವ್ಯಾಪಕ ಪ್ರತಿಕ್ರಿಯೆ ಕೂಡ ಬಂದಿತ್ತು. ಇಂತಹ ಶಿಕ್ಷಕರು ಯಾವಾಗಲೂ ಚನ್ನಾಗಿರಲಿ.

(ಮುಂದುವರಿಯುತ್ತದೆ)
(ಮುಂದಿನ ಕಂತಿನಲ್ಲಿ ಪಿಬಿಎನ್ ಭಾರತಿ ಮೇಡಂ ಬಗ್ಗೆ ಬರೆಯುತ್ತೇನೆ)              

Saturday, February 27, 2016

ದ್ವೀಪ

ನದಿ ಮದ್ಯದೊಳಗಿಹೆ
ನಾನೊಂದು ದ್ವೀಪ
ಆಚೀಚೆಕಡೆಯಿಂದ ಅಲೆಗಳು
ಬಂದು ಬಡಿಯುತ್ತಿವೆ ಪಾಪ |

ಎಡ-ಬಲದ ಅಲೆಗಳು ಮುತ್ತಿ
ದಡದಲ್ಲೆಲ್ಲ ಗಾಯ
ಅತ್ತಿತ್ತ ಹುಯ್ದಾಡಿ, ಮನಸೆಲ್ಲ ಮಣ್ಣಾಗಿ
ಕಳೆದು ಹೋಗುತ್ತಿದೆ ಪ್ರಾಯ |

ಒಮ್ಮೊಮ್ಮೆ ಬಂದೂಕು
ಮತ್ತೊಮ್ಮೆ ಖಡ್ಗ
ಕುಡಿದಷ್ಟೂ ಆರದ ದಾಹ
ನಾನೊಬ್ಬ ಕುಡುಕ |

ಆಗೀಗ ಎಲ್ಲೆಲ್ಲೂ ಹರ ಹರ ಮಹಾದೇವ
ನಡು ನಡುವೆ ಕೇಳುತಿದೆ ಲಾಲ್ ಸಲಾಂ
ಗೌಜಿ ಗದ್ದಲದ ನಡುವೆ ನೆನಪಾಗಲಾರರು
ನೇತಾಜಿ, ಆಜಾದ್, ಗಾಂದಿ, ಕಲಾಂ |

ಬರಲೊಂದು ಪ್ರವಾಹ
ಹೊಸ ನೀರ ಸೆಳೆದು
ಕೊಚ್ಚಿ ಹೋಗಲಿ ಇಂದೇ
ಹಳೆ ಕೊಳೆಯು ತೊಳೆದು  |

Tuesday, February 16, 2016

ಅಂತ್ಯೋದಯ

ಕದವ ತೆರೆದು ಹಾರು ಹೊಡೆದು
ಮನವ ಬಯಲು ಮಾಡಿದೆ
ಉಸಿರನೆಳೆದುಕೊಳುವ ಮೊದಲು
ಪ್ರೀತಿ ಧೂಳು ಸೇರಿದೆ |

ಕಡ್ಡಿ ದಡ್ಡಿ ಹೆಕ್ಕಿ ತಂದು
ಪ್ರೀತಿ ಗೂಡು ಕಟ್ಟಿದೆ
ಒಳಗೆ ಹೆಜ್ಜೆ ಇಡುವ ಮೊದಲು
ಗಿಡುಗ ಕದ್ದು ಕುಳಿತಿದೆ |

ಇರುಳ ಕನಸ ಹಗಲು ನೆನೆದು
ಹಿಡಿಯ ಹೋದೆನು
ಹುಚ್ಚು ಒಲವು ಬೆನ್ನೂಳಿರಿಯೆ
ಬೆಚ್ಚಿ ಬಿದ್ದೆನು |

ಕೊಟ್ಟಿದ್ದೆಷ್ಟೋ ಪಡೆದುದೆಷ್ಟೊ
ಮರೆತೇ ಹೋಗಿದೆ
ಪ್ರೇಮದ ಜಮಾ-ಖರ್ಚು
ಸಾಲ-ದಂತಿದೆ|

****

(ಈ ಕವಿತೆಯನ್ನು ಬರೆದಿರುವುದು ಫೆ.15, 2016ರಂದು ಶಿರಸಿಯಲ್ಲಿ)

Wednesday, January 27, 2016

ಗೋಳಿ ನಾಟಕದ ಗಾರುಡಿಗ ರಾಮಚಂದ್ರ ಹೆಗಡೆ

              ಗೋಳಿ ನಾಟಕದ ಬಗ್ಗೆ ಕೇಳದವರೇ ಇಲ್ಲ. ಪೌರಾಣಿಕ ನಾಟಕವನ್ನು ಮೆಚ್ಚುವವರಿಗೆಲ್ಲ ಗೋಳಿ ನಾಟಕವೇ ಮೊಟ್ಟ ಮೊದಲು ನೆನಪಾಗುತ್ತದೆ. ಗೋಳಿ ನಾಟಕ ಎಂದಕೂಡಲೇ ನೆನಪಿಗೆ ಬರುವುದು ಮಾತ್ರ ಹಾರೂಗಾರ ರಾಮಚಂದ್ರ ಹೆಗಡೆ. ತಾಲೂಕಿನ ಹಾರೂಗಾರ ಗ್ರಾಮದ ರಾಮಚಂದ್ರ ಹೆಗಡೆ ಇಹಲೋಕ ತ್ಯಜಿಸಿದರು.
 ತಾಲೂಕಿನ ಗೋಳಿಯ ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ನಡೆಯುವ ನಾಟಕವೆಂದರೆ ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯದಲ್ಲೂ ಹೆಸರುವಾಸಿ. ಕಳೆದ ಐದು ದಶಕಗಳಿಂದ ಹೊಸ ಹೊಸ ರೀತಿಯ ರಂಗ ಪ್ರಯೋಗ, ಅದ್ಧೂರಿ ಪರದೆ, ಉತ್ತಮ ಕಥಾಹಂದರ ಇತ್ಯಾದಿ ಕಾರಣಗಳಿಂದ ನಾಡಿನ ಜನಮಾನಸದಲ್ಲಿ ನೆಲೆನಿಂತಿದ್ದ ಗೋಳಿ ನಾಟಕದ ಹಿಂದಿದ್ದ ಕತೃತ್ವ ಶಕ್ತಿ ರಾಮಚಂದ್ರ ಹೆಗಡೆಯವರು. ಗೋಳಿ ನಾಟ್ಯಕಲಾ ಸಂಘದ ಬೀಷ್ಮ ಎಂದೇ ಕರೆಸಿಕೊಂಡಿದ್ದರು. ನಿರಂತರ 54 ವರ್ಷಗಳ ಕಾಲ ರಂಗಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ರಾಮಚಂದ್ರ ಹೆಗಡೆ ಜ.11ರಂದು ಅಲ್ಪ ಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.
 1935ರ ಎಪ್ರಿಲ್ ತಿಂಗಳಿನಲ್ಲಿ ಜನಿಸಿದ ರಾಮಚಂದ್ರ ಹೆಗಡೆಯವರು ಓದಿದ್ದು ಮೂಲ್ಕಿ (ಏಳನೇ ತರಗತಿ)ಯ ವರೆಗೆ. ತಮ್ಮದೇ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡ ರಾಮಚಂದ್ರ ಹೆಗಡೆಯವರು ತಮ್ಮ ಯುವ ವಯಸ್ಸಿನಲ್ಲಿ ಗೋಳಿ ಶ್ರೀ ಸಿದ್ಧಿವಿನಾಯಕ ದೇಗುಲದ ಆವಾರದಲ್ಲಿ ನಾಟಕ ಮಾಡಲು ಮುಂದಾದರು. 1958ರಿಂದ ಗೋಳಿಯಲ್ಲಿ ನಾಟಕ ಪ್ರಾರಂಭವಾಯಿತು. ಸುತ್ತಮುತ್ತಲ ಊರುಗಳ ಸಮಾನ ಮನಸ್ಕರಾದ ಹೊಸಳ್ಳಿಯ ಗಣಪತಿ ಮತ್ತು ದತ್ತಾತ್ರೇಯ ಹೆಗಡೆ, ಹೊಸ್ಮನೆಯ ಸುಬ್ರಾಯ ಭಟ್, ಹೊಸ್ಮನೆಯ ಶ್ರೀಪತಿ ಭಟ್, ಹಾಳದಕೈ ಮಂಜುನಾಥ ಹೆಗಡೆ ಮತ್ತಿತರರ ಜೊತೆಗೂಡುವಿಕೆಯಲ್ಲಿ ಚಂದ್ರಕಾಂತ ಬಿ. ಎ. ಎನ್ನುವ ಸಾಮಾಜಿಕ ನಾಆಟಕವನ್ನು ಆಡಿ ತೋರಿಸಿ ಎಲ್ಲರಿಂದ ಸೈ ಎನ್ನಿಸಿಕೊಂಡರು. ಆ ನಂತರ ಗೋಳಿಯಲ್ಲಿ ಪ್ರತಿವರ್ಷ ರಥೋತ್ಸವದ ದಿನದಂದು ನಾಟಕ ಆಡುವ ಪರಂಪರೆಗೆ ಓಂಕಾರ ಹಾಕಿದರು. ಗೋಳಿ ನಾಟಕದ ಪ್ರಾರಂಭಿಕ ದಿನಗಳಲ್ಲಿ ಮಾಧವರಾವ್ ಅವರು ನಿದರ್ೇಶನ ಮಾಡಿದರೆ ರಾಮಚಂದ್ರ ಹೆಗಡೆ ಅವರು ಅಭಿನಯದ ಜೊತೆ ಜೊತೆಯಲ್ಲಿ ಪರದೆ ರಚನೆ, ಹಿನ್ನೆಲೆ ಸಂಗೀತ ಈ ಮುಂತಾದವುಗಳನ್ನು ನೀಡುವ ಮೂಲಕ ತಮ್ಮದೇ ಆದ ವಿಶಿಷ್ಟ ಪಾತ್ರ ವಹಿಸುತ್ತಿದ್ದರು.
 ಗೋಳಿಯಲ್ಲಿ ಪ್ರಾರಂಭದ ಕೆಲವು ವರ್ಷಗಳಲ್ಲಿ ರಥೋತ್ಸವದ ಸಂದರ್ಭದಲ್ಲಿ ವರ್ಷಕ್ಕೊಂದು ನಾಟಕ ನಡೆಯುತ್ತಿತ್ತು. ಸಾಮಾಜಿಕ ನಾಟಕಗಳಿಂದ ಆರಂಭಗೊಂಡ ನಾಟಕಪರ್ವ ನಂತರದ ದಿನಗಳಲ್ಲಿ ಪೌರಾಣಿಕ ನಾಟಕಗಳ ಕಡೆಗೆ ಹೊರಳಿತು. ನಂತರದ ದಿನಗಳಲ್ಲಿ ವೀರ ಅಭಿಮನ್ಯು, ಉತ್ತರ ಭೂಪ ನಾಟಕಗಳನ್ನು ಆಡಿ ತೋರಿಸಲಾಯಿತು. ಈ ಎರಡೂ ನಾಟಕಗಳು 1960 ಹಾಗೂ 70ರ ದಶಕದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾದವು. ಇದೇ ನಾಟಕಗಳನ್ನು ನಂತರದ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಲ್ಲಿಯೂ ಪ್ರದಶರ್ಿಸಲಾಯಿತು. ಈ ನಾಟಕ ಪ್ರದರ್ಶನಗೊಂಡ ಪ್ರತಿಯೊಂದು ಕಡೆಯಲ್ಲಿಯೂ ಅಪಾರ ಜನಮೆಚ್ಚುಗೆ ಪಡೆದುಕೊಂಡಿತು.
 ಶಿರಸಿ ತಾಲೂಕಿನ ಗೋಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮೊಟ್ಟಮೊದಲು ನಾಟಕ ಪರಂಪರೆ ಹುಟ್ಟು ಹಾಕಿದವರು ರಾಮಚಂದ್ರ ಹೆಗಡೆಯವರು ಎಂದರೆ ತಪ್ಪಾಗಲಿಕ್ಕಿಲ್ಲ. ಗೋಳಿಯಿಂದ ಸ್ಪೂತರ್ಿ ಪಡೆದು ನಂತರದ ದಿನಗಳಲ್ಲಿ ಸಂಪಖಂಡ ಮುಂತಾದ ಕಡೆಗಳಲ್ಲಿಯೂ ನಾಟಕ ನಡೆದಿದ್ದು ವಿಶೇಷ. ಸ್ಥಳೀಯರ ಬಾಯಲ್ಲಿ ರಾಮಚಂದ್ರ ಭಾವ ಎಂದೇ ಕರೆಸಿಕೊಳ್ಳುತ್ತಿದ್ದ ಇವರು ಅಭಿನಯ, ಚಿತ್ರಕಲೆ, ಸಂಗೀತ ಹೀಗೆ ಬಹುರಂಗದಲ್ಲಿ ಹೆಸರುವಾಸಿಯಾದವರು. ಶಿರಸಿಯ ಕಟ್ಟಿಗೆ ಭಟ್ಟರು ಎನ್ನುವವರಲ್ಲಿ ಸಂಗೀತಾಭ್ಯಾಸವನ್ನು ಮಾಡಿದವರು. ನಾಟಕದ ಹಿನ್ನೆಲೆ ಪರದೆ, ವೇಷಭೂಷಣ ಇತ್ಯಾದಿಗಳಿಗೆ ಗೋಳಿ ಹೆಸರುವಾಸಿ. ಆಕರ್ಷಕ ಪರದೆ ಹಾಗೂ ವೇಷಭೂಷಣಗಳಿಗೆ ಕಾರಣೀಭೂತರಾದವರು ರಾಮಚಂದ್ರ ಹೆಗಡೆಯವರು. ಇವರು ಚಿತ್ರಿಸಿದ ಅದೆಷ್ಟೋ ಪರದೆಗಳು ಹಾಗೂ ನಿಮರ್ಿಸಿದ ವೇಷಭೂಷಣಗಳು ನಾಟಕಪ್ರಿಯರ ಕಣ್ಮನ ಸೆಳೆದವು. ಅಷ್ಟೇ ಅಲ್ಲ ಗೋಳಿ ನಾಟಕವೆಂದರೆ ವಿಶೇಷ ಪರದೆಗಳು ಹಾಗೂ ವೇಷಭೂಷಣಗಳಿಗೆ ಸಾಕ್ಷಿ ಎಂಬುದನ್ನು ಬಿಂಬಿಸಿದರು.
 1982ರ ನಂತರದ ದಿನಗಳಲ್ಲಿ ರಾಮಚಮದ್ರ ಹೆಗೆಯವರೇ ನಿದರ್ೇಶನಕ್ಕೂ ಇಳಿದರು. ಉಷಾ ಸ್ವಯಂವರ ಎನ್ನುವ ವಿಶೇಷ ನಾಟಕವನ್ನು ನಿದರ್ೇಶಿಸಿದ ಅವರು 2 ವರ್ಷಗಳ ಕಾಲ ಜನಮನಸೂರೆಗೊಂಡಿತ್ತು. ಪ್ರತಿವರ್ಷ ಕನಿಷ್ಟ 6 ಪ್ರಯೋಗಗಳಾದವು. ಪ್ರತಿಯೊಂದು ಪ್ರಯೋಗಕ್ಕೂ ಪ್ರೇಕ್ಷಕರು ಮುಗಿಬಿದ್ದಿದ್ದರು. ಉಷಾ ಸ್ವಯಂವರಕ್ಕೂ ಮೊದಲು ಬಾಡಿಗೆ ಪರದೆಯನ್ನು ಗೋಳಿ ನಾಟಕಕ್ಕೆ ಬಳಕೆ ಮಾಡಲಾಗುತ್ತಿತ್ತು. 1982ರಿಂದಲೇ ವಿಶೇಷ ಸೆಟ್ಟಿಂಗ್ ನಿಮರ್ಾಣ ಆರಂಭಗೊಂಡಿತು. ರಾಮಚಂದ್ರ ಹೆಗಡೆಯವರು ತಮ್ಮ ಸಹೋದರ ಶಂಕರನಾರಾಯಣ ಹೆಗಡೆಯವರ ಸಹಯೋಗದೊಂದಿಗೆ ಪರದೆ ರಚನೆಗೆ ಮುಂದಾದರು. 1984ರಲ್ಲಿ 6 ಪ್ರಯೋಗ ಕಂಡ ಕುರುಕ್ಷೇತ್ರ, ನಂತರದ ದಿನಗಳಲ್ಲಿ ಶ್ರೀಕೃಷ್ಣ ಗಾರುಡಿ, ಚೌತಿ ಚಂದ್ರ ಜನಾಕರ್ಷಣೆ ಪಡೆದುಕೊಂಡಿತು. 1990ರ ವರೆಗೆ ಪ್ರತಿ 2 ವರ್ಷಕ್ಕೊಮ್ಮೆ ನಾಟಕ ಪ್ರಯೋಗಗಳು ನಡೆದವು. 1990ರ ದಶಕದಲ್ಲಿ ಕೆಲವು ವರ್ಷಗಳ ವರೆಗೆ ನಾಟಕದ ಹೆಚ್ಚುವರಿ ಪ್ರಯೋಗಗಳು ನಿಲುಗಡೆಯಾದವು. 2002ರ ವರೆಗೂ ವರ್ಷಕ್ಕೊಂದು ನಾಟಕ ನಡೆಯುತ್ತಿತ್ತು. 2004ರಲ್ಲಿ ಗೋಳಿ ನಾಟಕದ ವೈಭವ ಮತ್ತೊಮ್ಮೆ ಮರುಕಳಿಸಿತು.
 ಮುತ್ಮುಡರ್ು ಎಂ. ಎಸ್. ಹೆಗಡೆ ಅವರು ಬರೆದ ಕರ್ಣ ನಾಟಕ 2004ರಲ್ಲಿ ಹಾಗೂ 2006ರಲ್ಲಿ ಪಾಂಡವಾಶ್ವಮೇಧ ನಾಟಕಗಳು ಪ್ರದರ್ಶನಗೊಂಡವು. ಪೂರ್ವನಿಧರ್ಾರಿತ 6 ಪ್ರಯೋಗಗಳು ಜನಾಕರ್ಷಣೆಗೊಮಡು ನಂತರ 4 ರಿಂದ 5 ಪ್ರಯೋಗಗಳನ್ನು ಹೆಚ್ಚುವರಿಯಾಗಿ ಮಾಡಲಾಯಿತು. 2010ರಲ್ಲಿ ಸಿಂಧೂರ ವಧೆ (ಗಣೇಶ ಮಹಿಮೆ) ನಾಟಕ ಪ್ರದರ್ಶನಗೊಂಡಿತು. ಈ ನಾಟಕವನ್ನು ಬರದವರು ಹಾರೂಗಾರ ರಾಮಚಂದ್ರ ಹೆಗಡೆಯವರು ಎನ್ನುವುದು ವಿಶೇಷ. 2014ರಲ್ಲಿ ರಾಮಚಂದ್ರ ಹೆಗಡೆಯವರ ಸಹೋದರ ಶಂಕರನಾರಾಯಣ ಹೆಗಡೆಯವರ ನಿದರ್ೇಶನದಲ್ಲಿ ಭೂಕೈಲಾಸ ನಾಟಕ ರಂಗಪ್ರದರ್ಶನಗೊಂಡಿತು. ಈ ಎಲ್ಲ ನಾಟಕಗಳ ಯಶಸ್ಸಿನ ಹಿಂದಿದ್ದವರು ಹಾರೂಗಾರ ರಾಮಚಂದ್ರ ಹೆಗಡೆಯವರು.
 ರಾಮಚಂದ್ರ ಹೆಗಡೆಯವರ ಸಾಧನೆಯನ್ನು ಗಮನಿಸಿ 2011ರಲ್ಲಿ ನಾಟಕ ಅಕಾಡೆಮಿ ರಂಗ ಪ್ರಶಸ್ತಿ ಅವರನ್ನರಸಿ ಬಂದಿತು. ತಮ್ಮ 54 ವರ್ಷಗಳ ರಂಗವೃತ್ತಿಯಲ್ಲಿ ಕನಿಷ್ಟ 150 ಜನರನ್ನು ರಂಗಕ್ಕೆಳೆದು ತಂದರು. ನಾಟಕ ರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಹಿನ್ನೆಲೆ ಸಂಗೀತದ ಸಂದರ್ಭದಲ್ಲಿ ಸಿತಾರ್ ಬಳಕೆ ಮಾಡಿಸಿದ ಖ್ಯಾತಿ ರಾಮಚಂದ್ರ ಹೆಗಡೆಯವರದ್ದು. ರುದ್ರವೀಣೆಯಲ್ಲಿ ರಾಷ್ಟ್ರದಾದ್ಯಂತ ಹೆಸರು ಮಾಡಿದ ಆರ್. ವಿ. ಹೆಗಡೆಯವರ ಸಿತಾರ್ ವಾದನವನ್ನು ನಾಟಕ ರಂಗಕ್ಕೆ ತಂದರು. ಎಂ. ಪಿ. ಹೆಗಡೆ ಪಡಿಗೆರೆ, ಎಂ. ವಿ. ಹೆಗಡೆ ಬೆಕ್ಮನೆ, ಅಶೋಕ ಹುಗ್ಗಣ್ಣವರ್ ಈ ಮುಂತಾದವರಿಂದ ಹಿನ್ನೆಲೆ ಸಂಗೀತ ನೀಡಿಸಿದರು. ಗೋಳಿ ಪ್ರೌಡಶಾಲೆಗೆ ದೇಣಿಗೆ ನೀಡಿದವರ ಭಾವಚಿತ್ರವನ್ನು ಮನೋಜ್ಞವಾಗಿ ಚಿತ್ರಿಸಿದ ಖ್ಯಾತಿ ರಾಮಚಂದ್ರ ಹೆಗಡೆಯವರದ್ದು. ಇಂತಹ ಸರಳ, ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡ ನಾಟಕ ರಂಗ ಬಡವಾಗಿದೆ. ಗೋಳಿ ನಾಟ್ಯಕಲಾ ಸಂಘದ ಬೆನ್ನೆಲುಬು ಎನ್ನಿಸಿಕೊಂಡಿದ್ದ ರಾಮಚಂದ್ರ ಹೆಗಡೆಯವರು ಇನ್ನಿಲ್ಲವಾಗಿದ್ದಾರೆ. ರಂಗಭೂಮಿಗೆ ಶೂನ್ಯ ಆವರಿಸಿದೆ.

*****

ನನ್ನ ಅಣ್ಣ ರಾಮಚಂದ್ರ ಹೆಗಡೆಯವರು ಸರಳ ವ್ಯಕ್ತಿತ್ವದವರು. ಮನೆಯಲ್ಲಿಯೂ ಅವರು ತೀರಾ ಕಟ್ಟುನಿಟ್ಟನ್ನು ಹೇರುತ್ತಿರಲಿಲ್ಲ. ನಮ್ಮೆಲ್ಲರ ಪ್ರೀತಿ ಪಾತ್ರರಾಗಿ, ಕುಟುಂಬದ ಹಿರಿಯಣ್ಣರಾಗಿ ನಮ್ಮೆಲ್ಲರನ್ನು ಸಲಹಿದರು. ಅಣ್ಣ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೋಳಿ ನಾಟಕವೆಂದರೆ ರಾಮಚಂದ್ರ ಹೆಗಡೆಯವರು ಎಂದು ಹೇಳಲಾಗುತ್ತಿತ್ತು. ಆದರೆ ಅವರಿಲ್ಲದೇ ಮುಮದೆ ಯಾವ ರೀತಿ ನಾಟಕವನ್ನು ಆಡುವುದು ಎನ್ನುವುದೇ ತಿಳಿಯುತ್ತಿಲ್ಲ. ನಮ್ಮ ಮನಸ್ಸಿನಲ್ಲಿ ಶೂನ್ಯ ಆವರಿಸಿದೆ.
ಶಂಕರನಾರಾಯಣ ಸೀತಾರಾಮ ಹೆಗಡೆ
ರಾಮಚಂದ್ರ ಹೆಗಡೆಯವರ ಸಹೋದರ
ಹಾರೂಗಾರ

Tuesday, January 5, 2016

ಹವ್ಯಕ ಮಾಣಿಯ ಲವ್ ಸ್ಟೋರಿ -3

ನಮ್ಮೂರ ರಾಘಣ್ಣಂಗೆ
ಇನ್ನೂ ನಲವತ್ತೈದು
ಪದೇ ಪದೇ ಲವ್ವು
ಮನಸ್ಸು ಇಪ್ಪತ್ತೈದು ||

ರಾಘಣ್ಣನ ಲವ್ವು ಒಂದೆರಡಲ್ಲ
ಲೀಸ್ಟಂತೂ ಒಂದು ಢಜನ್ನು
ವರ್ಷಕ್ಕೆ ಒಂದೊಂದು
ಪ್ರೇಮಕ್ಕೆ ಕಣ್ಣಿಲ್ಲ ಸೀಝನ್ನು ||

ಮೊದಲನೇ ಲವ್ವು ಫೇಲಾಗಿ ಹೋದಾಗ
ಕಣ್ಣಲ್ಲಿ ಬಂದಿತ್ತು ನೀರು
ಲವ್ವು ಫೇಲ್ಯೂರೆ ರೂಟೀನಾಗ್ ಹೋದಾಗ
ಕಂಡಿತ್ತು ಇಳಿಸಂಜೆಲ್ ಬಾರು ||

ರಾಘಣ್ಣ ಸೌಂಡ್ ಪಾರ್ಟಿ
ನಾಲ್ಕೆಕರೆ ಜಮೀನು
ಆದ್ರೂನು ಪ್ರೇಮ ಗಟ್ಟೀನೆ ಇಲ್ಲೆ
ಕಾರಣ ಇದೆ ಬೇಜಾನು ||

ಲವ್ವು ಫೇಲಾದ್ರೂ ರಾಘಣ್ಣ ಸೋತಿಲ್ಲ
ಮತ್ತೆ ಮತ್ತೆ ಹುಡುಕಾಟ
ಕಾಲೇಜು, ಬಸ್ ಸ್ಟಾಪು ಎಲ್ಲೆಂದರಲ್ಲಿ
ಕೂಸುಗಳಿಗೆ ಬರಿ ಕಾಟ ||

ಮೊಬೈಲ್ ಕರೆನ್ಸಿ, ಸತ್ಕಾರದಲ್ಲಿ ಊಟ
ಮಾಡ್ತಿದ್ದ ಸಾಕಷ್ಟು ಇನ್ವೆಸ್ಟು
ಪ್ರತಿ ಸಾರಿ ಲವ್ ಫೇಲಾಗಿ ಹೋದಾಗ
ಆಗ್ತಿತ್ತು ದುಡ್ಡು ವೇಸ್ಟು ||

****

(ಕವಿತೆ ಸರಣಿ ಮುಂದುವರಿಯುತ್ತದೆ)