Friday, August 22, 2014

ಕಹಿ ಕಹಿ ಹನಿಗಳು

ಇಬ್ಬಗೆ

ಇಸ್ರೇಲಿ ಯೋಧರು
ಭಯೋತ್ಪಾದಕರನ್ನು ಕೊಂದರೆ
ಭಾರತದ ಬುದ್ಧಿ ಜೀವಿಗಳು
ಕೂಗ್ಯಾಡಿದರು. ಹುಯ್ಯಲಿಟ್ಟರು.
ಅತ್ತು ಕರೆದರು..|
ಮಾನವ ಹಕ್ಕುಗಳ ಉಲ್ಲಂಘನೆಯೆಂದರು. |
ಉಗ್ರರು
ಪತ್ರಕರ್ತರ ತಲೆ ಕಡಿದರು |
ಭಾರತದ ಬುದ್ಧಿ ಜೀವಿಗಳು
ನಿದ್ದೆಹೋದರು,
ಸುಮ್ಮನುಳಿದರು ||

ಎರಡು ಮುಖ

ಮದನಿಗೆ ಹಿಂದೂಗಳ ಮೆಲೆ ಸಿಟ್ಟು
ಭಾರತೀಯರನ್ನು ಕೊಲ್ಲಲು
ಸದಾ ಹವಣಿಸುವ ಪಟ್ಟು|
ಆದರೆ ಆರೋಗ್ಯ ಉಳಿಸಿಕೊಳ್ಳಲು
ಬೇಕಾಗಿದ್ದು ಮಾತ್ರ
ಆಯುರ್ವೇದ ಎಂಬುದು
ಬಚ್ಚಿಟ್ಟ ಗುಟ್ಟು ||

ವಾಟಾಳ ಪ್ರತಾಪ

ಕನ್ನಡದ ಕುರಿತು
ಯಾವಾಗಲೂ ಎದ್ದರು
ವಾಟಾಳರು |
ಉಳಿದ ಸಮಯದಲ್ಲಿ ಮಾತ್ರ
ಯಾವಾಗಲೂ ಕಾಣರು |

ಬುದ್ದಿಜೀವಿಯೆಂದರೆ

ಬುದ್ಧಿ ಜೀವಿಗಳೆಂದರೆ
ಬುದ್ದಿ ಹೆಚ್ಚಾಗಿ
ಲದ್ದಿಗಳಂತಾಗಿರುವ
ಜೀವಿಗಳು |

Thursday, August 21, 2014

ಬೆತ್ತಲೆ ಮರ ಬಿತ್ತಲೆ

ಮರವೊಂದರ ಗಾತ್ರ ಎಷ್ಟು ದೊಡ್ಡದಿರಬಹುದು? 10 ಅಡಿ, 15 ಅಡಿ? ಶಿರಸಿ ತಾಲೂಕಿನ ಕೆಂಗ್ರೆಹೊಳೆಯ ಕಾನಿನಲ್ಲಿ ಒಂದು ಮರವಿತ್ತು. ಆ ಮರದ ಸುತ್ತಳತೆಯನ್ನು ಅರಿಯಬೇಕಾದರೆ 15-20 ಮಂದಿ ಅಕ್ಕಪಕ್ಕ ಕೈ ಅಗಲಿಸಿ ನಿಂತು ಮರವನ್ನು ತಬ್ಬಿ ಹಿಡಿಯಬೇಕಿತ್ತು. ಅಂತಹ ಹೆಮ್ಮರ ಇದೀಗ ಮುರಿದು ಬಿದ್ದಿದೆ.
ಸ್ಥಳೀಯರ ಬಾಯಲ್ಲಿ ಮಲೆಯಾಳಿಮರ ಎಂದು ಕರೆಯಲ್ಪಡುತ್ತಿದ್ದ ಹೆಮ್ಮರದ ನೈಜ ಹೆಸರು ಬೊಂಡಾಲೆ ಎಂದು. ಈ ಮರದ ವೈಜ್ಞಾನಿಕ ನಾಮಧೇಯ ಟೈಟ್ರಾಮೆಲಸ್ ನ್ಯೂಡಿಫ್ಲೋರಾ. ಈ ಮರದ ಬುಡದಲ್ಲಿ ಅರಣ್ಯ ಇಲಾಖೆ ಹಾಕಿರುವ ಫಲಕದ ಮೇಲೆ ಮರದ ಸುತ್ತಳತೆ 7 ಮೀಟರ್ (22 ಅಡಿ 9 ಇಂಚು) ಹಾಗೂ ಎತ್ತರ 52 ಮೀಟರ್ (169 ಅಡಿ) ಎಂದು ನಮೂದು ಮಾಡಲಾಗಿದೆ. ಅಗಾಧ ಗಾತ್ರವನ್ನು ಹೊಂದಿದ್ದ ಈ ಮರ ನೂರಾರು ಜೇನು ಕುಟುಂಬಗಳಿಗೆ ಗೂಡು ಕಟ್ಟಲು ಆಶ್ರಯ ನೀಡಿತ್ತು. ಈ ಕಾರಣದಿಂದಾಗಿ ಈ ಮರವನ್ನು ಜೇನುಮರ ಎಂದೂ ಕರೆಯಲಾಗುತ್ತಿತ್ತು.
ಶಿರಸಿ ನಗರದಿಂದ 8 ಕಿ.ಮಿ ದೂರದ ಕೆಂಗ್ರೆಹೊಳೆಯ ಅರವಿಂದ ನರ್ಸರಿ ಬಳಿಯ ಕಾಡಿನಲ್ಲಿದ್ದ ಈ ಮರದ ಆಯಸ್ಸು 350 ರಿಂದ 400 ವರ್ಷಗಳಿಗಿಂತಲೂ ಅಧಿಕ. ಅಂದರೆ ಭಾರತಕ್ಕೆ ಬ್ರಿಟೀಷರು ಆಗಮಿಸಿದ್ದ ಸಂದರ್ಭ. ಬ್ರಿಟೀಷರು ಭಾರತಕ್ಕೆ ಬಂದಿದ್ದು, ವ್ಯಾಪಾರವನ್ನು ಮಾಡಿದ್ದು, ಭಾರತವನ್ನು ವಸಾಹತುವನ್ನಾಗಿ ಮಾಡಿಕೊಂಡಿದ್ದು, ಭಾರತೀಯರ ಸ್ವಾತಂತ್ರ್ಯಹೋರಾಟ, ಸ್ವತಂತ್ರವಾಗಿದ್ದು ಇವೆಲ್ಲವನ್ನೂ ಈ ಮರ ಕಂಡಿತ್ತು. ನಾಲ್ಕು ಶತಮಾನಗಳ ಕಾಲ ಮರಗಳ್ಳರ ಕೊಡಲಿಯೇಟಿಗೆ ಬಲಿಯಾಗದೇ ಅಗಾಧವಾಗಿ ನಿಂತಿತ್ತು. ದೈತ್ಯವಾಗಿ ಕಂಡಿತ್ತು. ಹುಲೇಕಲ್, ಸಾಲಕಣಿ, ಕೆಂಗ್ರೆಹೊಳೆ, ಓಣಿಕೇರಿ, ವಾನಳ್ಳಿ ಈ ಭಾಗದ ಸಾರ್ವಜನಿಕರಂತೂ ಈ ದೈತ್ಯಮರವನ್ನು ತಮ್ಮ ಭಾಗದ ಹೆಮ್ಮೆ ಎಂದೇ ಆರಾಧಿಸುತ್ತ ಬಂದಿದ್ದರು.
ಈ ಮರದ ಅಗಲವಾದ ಬೇರುಗಳ ಗಾತ್ರವನ್ನು ಗಮನಿಸಿದರೆ ನೋಡುಗರು ವಿಸ್ಮಯ ಪಡುವಂತಿತ್ತು. ಮರದ ಸುತ್ತಲೂ ಚಾಚಿರುವ ಬೇರುಗಳಲ್ಲಿ ಒಂದು ಬೇರಿನಿಂದ ಇನ್ನೊಂದು ಬೇರಿನ ನಡುವೆ ಆರಡಿಯ ಆಜಾನುಬಾಹು ನಿಂತಿದ್ದರೂ ಬೇರಿನ ಇನ್ನೊಂದು ಪಕ್ಕದಲ್ಲಿ ನಿಂತಿದ್ದವರಿಗೆ ಕಾಣುತ್ತಿರಲಿಲ್ಲ. ಅಷ್ಟೇ ಏಕೆ ಈ ಬೇರುಗಳ ನಡುವೆ ಆರೆಂಟು ಅಡಿಯ ಕೋಣೆಗಳನ್ನೂ ಮಾಡಿ ಬದುಕಬಹುದಿತ್ತು. ಈ ಕೆಲವೇ ಕೆಲವು ಅಂಶಗಳೇ ಮರದ ಬೃಹತ್ ಗಾತ್ರವನ್ನು ಕಣ್ಣಮುಂದೆ ಕಟ್ಟಿಕೊಡುತ್ತವೆ.
ಪರಿಸರ ಹೋರಾಟಗಾರ, ಬರಹಗಾರ ಶಿವಾನಂದ ಕಳವೆಯವರ ಪರಿಸರ ಕಾಳಜಿಯಿಂದಾಗಿ ಈ ಮರದ ರಕ್ಷಣೆ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿತ್ತು. ಈ ಮರವನ್ನು ಅರಣ್ಯಗಳ್ಳರು ಕಡಿಯದಂತೆ ವಿಶೇಷ ಮುತುವರ್ಜಿಯನ್ನೂ ವಹಿಸಲಾಗಿತ್ತು. ಮರದ ಮೇಲೆ ನೂರಾರು ಜೇನು ಕುಟುಂಬಗಳು ಸದಾಕಾಲ ಗೂಡು ಕಟ್ಟಿಕೊಂಡು ಇರುತ್ತಿದ್ದವು. ಈ ಕಾರಣದಿಂದಲೇ ಮರ ವಿಶೇಷತೆಯನ್ನು ಪಡೆದುಕೊಂಡಿತ್ತು. ಸ್ಥಳೀಯರು ಈ ಮರದಿಂದ ಜೇನುತುಪ್ಪವನ್ನು ಸಂಗ್ರಹ ಮಾಡುತ್ತಿದ್ದರು. ಜೇನುತುಪ್ಪ ಸಂಗ್ರಹಿಸುವಾಗ ಮರಕ್ಕೆ ಪೂಜೆ ಮಾಡಿ ನಂತರ ಜೇನುತುಪ್ಪ ಸಂಗ್ರಹಿಸುತ್ತಿದ್ದುದು ಮರ-ಜೇನು ಹಾಗೂ ಮನುಷ್ಯರ ನಡುವಿನ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ.
ತನ್ನ ಬೃಹತ್ ಗಾತ್ರದಿಂದಲೇ ಪರಿಸರ ಪ್ರಿಯರನ್ನೂ ಪ್ರವಾಸಿಗರನ್ನೂ ಈ ಮರ ತನ್ನತ್ತ ಸೆಳೆದುಕೊಂಡಿತ್ತು. ಪ್ರತಿ ವಾರ ಈ ಮರವನ್ನು ನೋಡಲೆಂದೇ ನೂರಾರು ಜನ ಕೆಂಗ್ರೆ ಹೊಳೆಯ ಈ ಕಾಡಿಗೆ ಪಿಕ್ ನಿಕ್ ಬರುತ್ತಿದ್ದರು. ಈ ಮರವನ್ನು ನೋಡಿ ವಿಸ್ಮಯರಾಗುತ್ತಿದ್ದರು. ಮರದ ಬುಡದಲ್ಲಿ ಕುಳಿತು ಪೋಟೋ ಕ್ಲಿಕ್ಕಿಸುತ್ತಿದ್ದರು. ಮರದ ದೈತ್ಯತೆ, ದೊಡ್ಡ ದೊಡ್ಡ ಬೇರುಗಳನ್ನು ನೋಡಿ ಖುಷಿಪಡುತ್ತಿದ್ದರು. ಮರದ ಬುಡದಲ್ಲಿ ಆಡುತ್ತಿದ್ದರು.
ಪಶ್ಚಿಮ ಘಟ್ಟದಲ್ಲಿ ಇಂತಹ ಮರಗಳು ಸಾಕಷ್ಟಿವೆ. ಪ್ರತಿ ಐದು ಕಿ.ಮಿ ಗೆ ಒಂದು ದೈತ್ಯ ಮರವಿದ್ದು ಇಂತಹ ದೈತ್ಯ ಮರಕ್ಕೆ ಜೇನುಗಳು ಗೂಡು ಕಟ್ಟಲು ಆಗಮಿಸುತ್ತವೆ. ಆದ್ದರಿಂದ ಇಂತಹ ಮರಗಳನ್ನು ಜೇನುಮರ ಎಂದು ಕರೆಯುತ್ತಾರೆ. ಮೃದು ಜಾತಿಯ ಈ ಮರ ಬೇಸಿಗೆಯಲ್ಲಿ ತನ್ನ ಸಂಪೂರ್ಣ ಎಲೆಗಳನ್ನು ಉದುರಿಸುತ್ತವೆ. ಆದ್ದರಿಂದಲೇ ಈ ಮರವನ್ನು ಬೆತ್ತಲೆ ಮರ ಎಂದೂ ಕರೆಯಲಾಗುತ್ತದೆ. ಹುಲೇಕಲ್, ಸಾಲಕಣಿ, ವಾನಳ್ಳಿ ಭಾಗದ ಈ ದೈತ್ಯ ಮರ ಮಳೆಗಾಲದಲ್ಲಿ ಮುರಿದು ಬಿದ್ದಿದೆ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುತ್ತಾರೆ.
ಇಂತಹ ದೈತ್ಯ ಮರ ಈ ಮಳೆಗಾಲದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮುರಿದುಬಿದ್ದಿದೆ. ಮರದ ರೆಂಬೆ ಕೊಂಬೆಗಳೆಲ್ಲ ಭೂಮಿಪಾಲಾಗಿದೆ. ಜೇನು ಗೂಡು, ಹಕ್ಕಿಗಳು, ಕೀಟ, ಪತಂಗಗಳಿಂದ ತುಂಬಿ ತುಳುಕುತ್ತಿದ್ದ ಮರದ ರೆಂಬೆ, ಕೊಂಬೆಗಳೆಲ್ಲ ಭೂಮಿಗೊರಗಿವೆ. ಮೃದು ಜಾತಿಯ ಮರ ಮುರಿದು ಬಿದ್ದಿರುವುದು ಸ್ಥಳೀಯರ ಮನಸ್ಸಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ. ತಮ್ಮ ಪ್ರದೇಶದ ಹೆಮ್ಮೆಯಾಗಿದ್ದ ಜೇನುಮರದ ಅವಸಾನದಿಂದ ಸ್ಥಳೀಯರು, ಪರಿಸರ ಪ್ರೇಮಿಗಳು ಕಣ್ಣೀರುಗರೆಯುತ್ತಿದ್ದಾರೆ. ಮರವೊಂದು ಕಟ್ಟಿಕೊಟ್ಟಿದ್ದ ಕಲರವ ಸ್ಥಬ್ಧವಾಗಿದೆ. ಮರವೂ ಕೂಡ ಪ್ರವಾಸಿಗರನ್ನು ಸೆಳೆಯಬಲ್ಲದನ್ನು ತೋರಿಸಿಕೊಟ್ಟಿದ್ದ ಮರ ಇನ್ನಿಲ್ಲವಾಗಿದೆ. ಶತಮಾನಗಳ ಕಥೆ ಹೇಳುತ್ತಿದ್ದ ಮಹಾಮರ ಕಣ್ಮುಚ್ಚಿದೆ. ತನ್ಮೂಲಕ ಮರ ನೆನಪಾಗಿ ಉಳಿದಿದೆ.

***
(ಇದು ಆ.21,2014ರ ಬೈ2ಕಾಫಿಯ ಟೂರು ಕೇರಿಯಲ್ಲಿ ಪ್ರಕಟಗೊಂಡಿದೆ)

Monday, August 18, 2014

ಮೈಸೂರು ಹುಸೇನಿಯ ಕೈಚಳಕ ಸಾಂಜಿ ಕಲೆಯಲ್ಲಿ ಅರಳಿದ ಶ್ರೀಕೃಷ್ಣ

        ಸಾಂಝಿ ಎಂಬ ಚಿತ್ರಕಲೆ ನಮ್ಮ ದೇಶದ ಪುರಾತನ ಕಲಾ ಪ್ರಕಾರಗಳಲ್ಲೊಂದು. ಹಲವಾರು ಶತಮಾನಗಳ ಹಿಂದಿನಿಂದಲೂ ಈ ಕಲೆ ಸಂಪ್ರದಾಯದ ರೂಪದಲ್ಲಿ ಬಳಕೆಯಾಗುತ್ತಿದೆ. ಕಾಗದ ಕತ್ತರಿಯಲ್ಲಿ ಸಾಂಝಿ ಕಲೆಯನ್ನು ಮೂಡಿಸಿದವರೂ ಹಲವು ಮಂದಿ. ಅಂತವರಲ್ಲೊಬ್ಬರು ಮೈಸೂರಿನ ಎಸ್. ಎಫ್. ಹುಸೇನಿಯವರು.
ನಮ್ಮ ಪುರಾತನ ಅಪರೂಪದ ಜನಪದ ಕಲಾಪ್ರಕಾರಗಳಲ್ಲಿ ಸಾಂಝಿ(ಕಾಗದಕತ್ತರಿ) ಕಲೆಯೂ ಒಂದು. ಸಾಂಝಿಕಲಾವಿದ ಎಸ್.ಎಫ್.ಹುಸೇನಿ ಮೈಸೂರು ಇವರು ಶ್ರೀಕೃಷ್ಣ ವಿಭಿನ್ನ, ವಿಶೇಷ ಚಿತ್ರಗಳನ್ನು ಬಹುಕಲಾತ್ಮಕವಾಗಿ ಕಾಗದದಲ್ಲಿ ಕತ್ತರಿ ಹಾಗು ಕಟರ್ ಸಹಾಯದಿಂದ ಸೂಕ್ಷ ್ಮವಾಗಿ ರಚಿಸಿದ್ದಾರೆ. ಹಿಂದೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸಾಂಝಿ ಕಲೆ ಇದೀಗ ದೇಶ ವಿದೇಶಗಳಿಗೆ ವ್ಯಾಪಿಸಿದೆ. ಮೈಸೂರು ಹುಸೇನಿ ತಮ್ಮ ಕೈಚಳಕದಿಂದ ಸಾಂಝಿ ಕಲೆಯಲ್ಲಿ ಶ್ರೀಕೃಷ್ಣನನ್ನು ಮೂಡಿಸಿದ್ದಾರೆ.
ಆಧುನಿಕ ಜನರ ಜೀವನಶೈಲಿಬದಲಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಈ ವಿಶೇಷಕಲೆ ಇತ್ತೀಚೆಗೆ ಬಳಕೆಯಾಗದೆ ನಿಧಾನಗತಿಯಲ್ಲಿ ಜನಮಾನಸದಿಂದ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅನೇಕ ಕಲಾವಿದರು ಸಾಂಝಿಕಲೆಯನ್ನು ಉಳಿಸುವ, ಜನಪ್ರಿಯಗೊಳಿಸುವ ಕೆಲಸವನ್ನು ದೇಶದಹಲವೆಡೆ ನೆಡೆಸುತ್ತಿದ್ದಾರೆ. ಅಂತಹವರಲ್ಲಿ ಎಸ್.ಎಫ್.ಹುಸೇನಿ ಮೈಸೂರು ಸಹ ಒಬ್ಬರು.
ಮೈಸೂರು ಹುಸೇನಿ ಎಂದೇ ಪರಿಚಿತರಾಗಿರುವ ಎಸ್.ಎಫ್. ಹುಸೇನಿ ಈ ಕಲೆಯ ಪ್ರಚಾರಕ್ಕೆ ರಾಜ್ಯಾದ್ಯಂತ ಸಂಚರಿಸುತ್ತಾ 22 ಜಿಲ್ಲೆಗಳಲ್ಲಿ ಆಸಕ್ತ ಮಕ್ಕಳಿಗೆ, ಮಹಿಳೆಯರಿಗೆ, ಮತ್ತು ಆಸಕ್ತರಿಗೆ ಸಾಂಝಿ ಕಲೆ ಕಾಯರ್ಾಗಾರ ತರಬೇತಿ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ತಾವೇ ತಯಾರಿಸಿದ ವಿಶೇಷ ಸರಣಿ ಚಿತ್ರಗಳಾದ ಸಾಂಝಿಗಣಪ, ಸಾಂಝಿರಂಗೋಲಿ, ಸಾಂಝಿಮಾಸ್ಕ್, ಸಾಂಝಿಶಿವ, ಸಂಪ್ರಾದಾಯಕ, ಆಧುನಿಕ, ಜನಪದರೀತಿಯಲ್ಲಿ ಅನೇಕ ಕಲಾಕೃತಿಗಳನ್ನು ರಚಿಸಿ ಆಸಕ್ತರಿಗೆ ಈ ಕಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ.
ಹುಸೇನಿಯವರು ಸದಾ ಪ್ರಯೋಗಶೀಲ ಪ್ರಯತ್ನಗಳಿಗೆ, ನಿರಂತರ ಹೊಸತನಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರು ಕೇವಲ ಒಂದೇ ಬಗೆಯ ಕಲಾಕೃತಿಗಳಿಗೆ ಸೀಮಿತವಾಗದೆ ಹಲವಾರು ಪ್ರಯೋಗಾತ್ಮಕ ಕೆಲಸಗಳಲ್ಲಿ ತೊಡಗಿದ್ದಾರೆ. ಅವರ ವಿಶಿಷ್ಟ ಬಗೆಯ ಏಕರೇಖಾಚಿತ್ರಗಳು, ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರಗಳು, ಕಾಗದ ಭಿತ್ತಿಶಿಲ್ಪಗಳು, ಮತ್ತು ಸಾಂಝಿಜನಪದ ಕಾಗದ ಕತ್ತರಿಕಲೆ ಕಲಾಕೃತಿಗಳು ಹುಸೇನಿ ಅವರ ಕಲಾಪ್ರತಿಭೆಗೆ ಕೈಗನ್ನಡಿಯಾಗಿವೆ. ಸಿಡಿಯನ್ನು ಬಳಸಿ ತೆಗೆದಿರುವ ಅಮೂರ್ತಛಾಯಾಚಿತ್ರಗಳು ಸುಮಾರು ಐದುಸಾವಿರಕ್ಕೂ ಹೆಚ್ಚು. ಇದು ಅವರ ಸೃಜನಶೀಲತೆ ಮತ್ತು ಕಲಾತ್ಮಕ ಪ್ರಯೋಗಗಳಿಗೆ ಒಂದುಉದಾಹರಣೆ.
ತಂದೆ ಸಯ್ಯದ್ ಫೀರ್, ತಾಯಿ ಜೀನಾತ್ವುನ್ನಿಸಾ ಬೀ ರವರ ಮಗನಾಗಿ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ (ಬ್ಲಫ್) ನಲ್ಲಿ ಜನಿಸಿದ ಇವರು ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸುವಂತಾಯಿತು. ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಪೈನ್ ಆಟರ್್ ಡಿಪ್ಲೊಮ ಮತ್ತು ಆಟರ್್ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕನರ್ಾಟಕ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ಇವರು ಪಡೆದಿದ್ದಾರೆ.
ಹುಸೇನಿ ಚಿತ್ರಕಲೆಯನ್ನು ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ 11 ಏಕವ್ಯಕ್ತಿ ಚಿತ್ರಕಲಾಪ್ರದರ್ಶನಗಳು, ಸುಮಾರು 80ಕ್ಕೂ ಹೆಚ್ಚು ಸಮೂಹಕಲಾಪ್ರದರ್ಶನ ಕಾರ್ಯಗಾರಗಳಲ್ಲಿ ಭಾಗವಹಿಸಿ ಕನರ್ಾಟಕ ಮಾತ್ರವಲ್ಲದೆ ಹೊರರಾಜ್ಯಗಳಾದ ಮುಂಬೈ, ದೆಹಲಿ, ಚೆನ್ನೈ ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಹುಸೇನಿಯವರ ವಿಶೇಷತೆ ಎಂದರೆ ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪುವ ಉದ್ದೇಶದಿಂದ ತಮ್ಮದೇ ಸಾಂಝಿ ಕಲಾಲೋಕ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತುವರ್ಷಗಳಿಂದ ಚಿತ್ರಕಲಾಪ್ರದರ್ಶನ, ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರ ಅನೇಕ ಕಲಾಕೃತಿಗಳು ದೇಶ ಮತ್ತು ವಿದೇಶಗಳ (ಆಸ್ಟ್ರೇಲಿಯ, ಫಿನ್ಲ್ಯಾಂಡ್, ಜರ್ಮನ್, ಸೌತ್ ಆಫ್ರಿಕ, ದೋಹ) ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹಗೊಂಡಿವೆ.
ಎಸ್.ಎಫ್.ಹುಸೇನಿಯವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ ಅವುಗಳಲ್ಲಿ ಮುಖ್ಯವಾಗಿ 1999 ರಲ್ಲಿ ಮೈಸೂರು ದಸರಕಲಾಪ್ರದರ್ಶನಪ್ರಶಸ್ತಿ, 2001-ರಲ್ಲಿ ಮೈಸೂರಿನ ಕನ್ನಡಸಂಸ್ಕೃತಿ ಇಲಾಖೆಯಿಂದ ಯುವಸಂಭ್ರಮ ಪ್ರಶಸ್ತಿ, ಧಮಸ್ಥಳದ ಶಾಂತಿವನಟ್ರಸ್ಟ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಅಂಚೆಕುಂಚ ಸ್ಪಧರ್ೆಯಲ್ಲಿ 2001ರಿಂದ ಸತತ ನಾಲ್ಕು ಹಾಗು 2007ರಲ್ಲಿ ಪ್ರಶಸ್ತಿ ಒಟ್ಟು ಐದು ಬಾರಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಜಪಾನ್ಹಬ್ಬದಲ್ಲಿ 2009 ರಿಂದ ನಾಲ್ಕು ಬಾರಿ, ಕಿರಿಗಾಮಿ ಪೇಪರ್ ಕಟ್ಟಿಂಗ್ಸ್ ಕಾಗದ ಕಲೆಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, 1999ರಲ್ಲಿ ಮೈಸೂರಿನ ರಾಮನ್ಸ್ ಕಂಪ್ಯೂಟರ್ಸ್ರವರ ರಾಕೊಫೇಸ್ಟ್ ಪ್ರಶಸ್ತಿ, ಕನರ್ಾಟಕಲಲಿತ ಕಲಾ ಅಕಾಡೆಮಿಯಿಂದ ಎರಡು ಬಾರಿ ಸ್ಕಾಲರ್ಶಿಪ್ 1999 ಮತ್ತು 2000. ವೈಜಯಂತಿಚಿತ್ರಕಲಾಶಾಲೆಯಿಂದ ಬೆಸ್ಟ್ ಮ್ಯೂರಲ್ ಪ್ರಶಸ್ತಿ, 2001-ರಲ್ಲಿ ಮೈಸೂರಿನ ಮಾನಸಗಂಗ್ರೋತಿಯ ಮಹಿಳಾ ಅಧ್ಯಯನ ಕೇಂದ್ರದಿಂದ ಪೋಸ್ಟರ್ ರಚನಗೆ ಪ್ರಶಸ್ತಿ, ಇವುಗಳ ಜೊತೆಗೆ ಅನೇಕ ಸಂಘಸಂಸ್ಥೆಗಳಿಂದ ಸನ್ಮಾನಗಳು ಸಾಂಝಿಕಲಾಸಾಮ್ರಾಟ್, ಚಿತ್ರರತ್ನ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ.
ಹುಸೇನಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯ ಬೇಕಾಗಿದ್ದಲ್ಲಿ 9845153277ಕ್ಕೆ ಕರೆ ಮಾಡಬಹುದು ಇಲ್ಲವೆ ಇವರ ಬ್ಲಾಗ್: ಟಥಿಠಡಿಜಣಜಟಿ.ಛಟಠರಠಿಠಣ.ಟಿ  ನಲ್ಲಿ ಸಾಂಝಿ ಕಾಗದ ಕಲೆಯ ಚಿತ್ರಗಳನ್ನು ನೋಡಬಹುದಾಗಿದೆ. ನಮ್ಮ ನಡುವೆ ಇದ್ದು ನಮ್ಮ ಸಾಂಪ್ರದಾಯಿಕ ಕಲಾ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ ಹುಸೇನಿಯಂತವರು ಹಲವರಿಗೆ ಮಾದರಿಯಾಗಿತ್ತಾರೆ.
**
ಸಾಂಝಿ ಕಲೆಯ ಕುರಿತು ಮಾಹಿತಿ :
ಸಾಂಝಿ ಎನ್ನುವುದರ ಮೂಲ ಅರ್ಥ ಅಲಂಕಾರ, ಸಿಂಗಾರ. ಉತ್ತರಪ್ರದೇಶದಲ್ಲಿ ರಂಗೋಲಿಯನ್ನು ಸಾಂಝಿ ಎನ್ನುತ್ತಾರೆ.  ಮಥುರಾ ಸಾಂಝಿಕಲೆಯ ತವರು. ಶ್ರೀ ಕೃಷ್ಣನ ಜನ್ಮಸ್ಥಳವೆಂದು ಭಾರತೀಯರು ಪೂಜಿಸುವ ಸ್ಥಳದಲ್ಲಿ ಸಾಂಝಿಕಲೆಯನ್ನು ಕೃಷ್ಣಪರಮಾತ್ಮನ ಲೀಲೆ, ಪವಾಡ, ಗೀತೋಪದೇಶ, ಹೆಚ್ಚಾಗಿ ರಾಧಾಕೃಷ್ಣರ ರಾಸಲೀಲೆ ಮುಂತಾದವುಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಗಳನ್ನು ರೂಪಿಸಿ ಅವುಗಳನ್ನು ವಿನ್ಯಾಸ ರಚನೆಗೆ, ರಂಗೋಲಿ ವಿನ್ಯಾಸಗಳಿಗಾಗಿ ಒತ್ತುಕಲೆಯಾಗಿ ಸಾಂಝಿಕಲೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಕಾಲ ಕ್ರಮೇಣ ಆನೇಕ ಕಲಾ ಪ್ರವೀಣರು ವಿವಿಧ ದೇವಾನುದೇವತೆಗಳು, ಹೂಬಳ್ಳಿ, ಪ್ರಕೃತಿಯಂತಹ ಚಿತ್ರಗಳನ್ನು ರಚಿಸಿ ದೇವಸ್ಥಾನ, ರಥ, ರಥಬೀದಿ, ಪಲ್ಲಕ್ಕಿಅಲಂಕಾರ, ದೇವರಉತ್ಸವಕ್ಕೆ ಬಳಸುತ್ತಿದ್ದರಿಂದ ಇದನ್ನು ದೇವಸ್ಥಾನ ಕಲಾಸಾಂಝಿ ಎಂದು ಕರೆಯಲಾಗುತಿತ್ತು. ಕಾಗದದಲ್ಲಿ ಒಳ್ಳೆಯ ಚಿತ್ರಗಳನ್ನು ಕತ್ತರಿಸಿ ನೆಲದ ಮೇಲೆ ಹರಡಿ ಅವುಗಳ ಮೇಲೆ ರಂಗೋಲಿ ಪುಡಿ, ಹೂಗಳನ್ನು ತುಂಬಿ ಕಾಗದತೆಗೆದಾಗ ಬಗೆಬಗೆಯ ಅಲಂಕಾರಿಕ ಚಿತ್ರಗಳು ಮೂಡುತ್ತಿದ್ದದ್ದು ಗೊತ್ತಾಯಿತು. ನಂತರ ತಮಗೆ ಬೇಕಾದ ಹಾಗೆ ಕಾಗದದ ಅಚ್ಚುಗಳನ್ನು ತಯಾರಿಸಿ ಅದನ್ನು ಒಂದು ಪರಿಪೂರ್ಣವಾದ ಕಲೆಯಾಗಿಸುವಷ್ಟು ಪರಿಣಿತಿಯನ್ನು ನಮ್ಮ ಹಿಂದಿನವರು ಪಡೆದಿದ್ದರು. ಹೀಗಾಗಿ ಇಂದೊದು ಪ್ರತ್ಯೇಕ ಕಲೆಯಾಗಿ ಬೆಳೆಯಿತು.

Sunday, August 17, 2014

ಹಿರಿಯರಿಗೆ ಜೈ ಎನ್ನಿ

          ಹಿರಿಯರು ನಮ್ಮ ಎದುರು ಓಡಾಡುವಂತ ವಿಶ್ವಕೋಶಗಳು. ಅವರ ಅನುಭವಗಳು ನಮಗೆ ದಾರಿದೀಪಗಳು. ಹಿರಿಯರಿಂದ ನಾವು ಕಲಿತಷ್ಟು ಮತ್ಯಾರಿಂದಲೂ ಕಲಿಯಲು ಸಾಧ್ಯವಿಲ್ಲ. ನಮ್ಮ ಬದುಕಿನ ದೀವಿಗೆ ಅವರು ಎಂದರೂ ತಪ್ಪಾಗಲಿಕ್ಕಿಲ್ಲ. ಅತ್ಯಂತ ವಯಸ್ಸಾದವರು ಅಪರೂಪದ ಕೆಲವು ಅಂಶಗಳನ್ನು ನನಗೆ ತಿಳಿಸಿದ್ದರು. ಅದನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತೇನೆ. ತೀರಾ ಇತ್ತೀಚಿನವರೆಗೂ ನಾನು ರಾತ್ರಿಯ ಊಟಕ್ಕೆ ಮೊಸರು ಹಾಕಿಕೊಳ್ಳುವವನು ಅದಕ್ಕೆ ಹಾಲನ್ನು ಹಾಕಿಕೊಳ್ಳುತ್ತಿರಲಿಲ್ಲ. ಒಂದು ದಿನ ಗಣಪಜ್ಜಿ ಮನೆಗೆ ಹೋಗಿದ್ದೆ. (ಗಣಪಜ್ಜಿಯ ಹಾಡುಗಳಲ್ಲಿ ಬಂದಿರುವ ಗಣಪಜ್ಜಿ ಕೋಡ್ಸರ) ಆಕೆಯ ಬಳಿಯಲ್ಲಿ ಮಾತನಾಡುತ್ತ ರಾತ್ರಿಯಾಯಿತು. ಅಜ್ಜಿಯ ಮನೆಯಲ್ಲಿ ಊಟಕ್ಕೆ ಒತ್ತಾಯಿಸಿದರು. ನಾನು ಹಾಗೂ ದೋಸ್ತ ಸಂಜಯ ಇದ್ದೆವಲ್ಲ. ಬೇಡ ಬೇಡ ಎನ್ನುತ್ತಲೇ ಊಟಕ್ಕೆ ಕುಳಿತೆವು. ಊಟದ ಕೊನೆಯಲ್ಲಿ ನನಗೆ ಮನೆಯವರು ಮೊಸರು ಬಡಿಸಿದರು. ಹಾಲು ಬೇಕಾ ಕೇಳಿದರು. ನಾನು ಬೇಡ ಎಂದೆ. ತಕ್ಷಣ ಅಜ್ಜಿ `ತಮಾ ಹಾಲು ಹಾಕ್ಯಳ..' ಎಂದು ಒತ್ತಾಯಿಸಿದರು. ನಾನು `ಬೇಡ.. ನನಗೆ ರೂಢಿಯಿಲ್ಲ..' ಎಂದೆ.. ಕೊನೆಗೆ ಅಜ್ಜಿ ಹೇಳಿದ್ದೆಂದರೆ `ತಮಾ.. ರಾತ್ರಿ ಊಟಕ್ಕೆ ಮೊಸರಿಗೆ ಯಾವಾಗಲೂ ಹಾಲು ಹಾಕಿಕೊಳ್ಳವು. ಇದರಿಂದಾಗಿ ಆಹಾರ ಬೇಗ್ನೆ ಜೀರ್ಣ ಆಗ್ತು. ಆಮೇಲೆ ಹುಳಿತೇಗು ಬರ್ತಿಲ್ಲೆ. ತಿನ್ನುವ ಆಹಾರ ದೇಹಕ್ಕೆ ಒಗ್ತು..' ಎಂದಳು. ನನ್ನ ಮನೆಯಲ್ಲಿಯೂ ರಾತ್ರಿ ಊಟಕ್ಕೆ ಮಜ್ಜಿಗೆಗೆ ಹಾಲು ಹಾಕಿಕೊಳ್ಳು ಎನ್ನುತ್ತಿದ್ದರು. ಆದರೆ ನಾನು ಕಾರಣ ಕೇಳಿದರೆ ಗೊತ್ತಿಲ್ಲವೆಂದೋ, ಹಾರಿಕೆಯದ್ದೋ ಉತ್ತರ ನೀಡಿದ್ದರು. ಆದರೆ ಈ ಅಜ್ಜಿ ಕೊಟ್ಟ ಉತ್ತರ ನನ್ನನ್ನು ನಿಬ್ಬೆರಗಾಗಿಸಿತು. ಅಂದಿನಿಂದ ರಾತ್ರಿ ಮೊಸರನ್ನಕ್ಕೆ ಹಾಲು ಬೆರೆಸಿ ಊಟ ಮಾಡುತ್ತಿದ್ದನೆ. ನಮ್ಮ ಹಿರಿಯರು ಯಾವುದಾದರೂ ಸಂಪ್ರದಾಯ ಹೇಳಿದರೆ ಖಂಡಿತ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇರುತ್ತದೆ ಎನ್ನುವುದು ಅರ್ಥವಾಯಿತು.
***
           ಇಂತಹ ಹಲವಾರು ಅನುಭವಗಳು ಆಗಿವೆ. ಇತ್ತೀಚೆಗೆ ಒಬ್ಬರನ್ನು ಭೇಟಿಯಾಗಿದ್ದೆ. ಅವರ ಬಳಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಎಸಿಡಿಟಿ ಕುರಿತು ಚರ್ಚೆ ಆರಂಭವಾಯಿತು. ಕೊನೆಗೆ ಅವರು ಹೇಳಿದ್ದು `ತಮಾ.. ನಮ್ಮಲ್ಲಿ ಹಿರಿಯರು ಊಟದ ಸಂದರ್ಭದಲ್ಲಿ ಸಾರು ಅಥವಾ ಸಾಂಬರ್ ಹಾಕ್ಯತ್ವಲಾ.. ಅದಕ್ಕೆಂತಕ್ಕೆ ತುಪ್ಪ ಎಣ್ಣೆ ಹಾಕ್ತ ಹೇಳು..' ಎಂದು ಕೇಳಿದರು. ನಾನು ಸುಮ್ಮನುಳಿದೆ. ಕೊನೆಗೆ ಅವರೇ ಮುಂದುವರಿದು `ಸಾಂಬಾರು ಅಥವಾ ಸಾರಿಗೆ ಎಣ್ಣೆ ಅಥವಾ ತುಪ್ಪ ಹಾಕಿಕೊಂಡರೆ ಎಸಿಡಿಟಿ ಆಗುವುದಿಲ್ಲ. ಅದೇ ಕಾರಣಕ್ಕೆ ಹಲಸಿನ ಹಣ್ಣಿನ ಕಡುಬು, ಉದ್ದಿನ ಇಡ್ಲಿಗಳಿಗೆಲ್ಲ ಎಣ್ಣೆ, ತುಪ್ಪ ಹಾಕುತ್ತಾರೆ.. ನೀ ಹಾಕ್ಯತ್ಯನಾ..?' ಎಂದು ಕೇಳಿದರು. ಇಲ್ಲವಲ್ಲ ಎಂದು ಉತ್ತರಿಸಿದೆ. ನಾಳಿಂದ ಹಾಂಗೆ ಮಾಡು.. ನಿಂಗೆ ಎಸಿಡಿಟಿ ಆಗ್ತಿಲ್ಲೆ.. ಎಸಿಡಿಟಿ ಸಮಸ್ಯೆಗಳಿದ್ದರೂ ಬಾಧಿಸ್ತಿಲ್ಲೆ.. ಎಂದರು. ನಾನು ಅಬ್ಬಾ ಹಿರಿಯರೆ ಎಂದುಕೊಂಡೆ. ಅವರ ಜ್ಞಾನಕ್ಕೆ ತಲೆದೋಗಿದೆ. ಈಗ ಸಾಂಬಾರು ಊಟದ ಸಂದರ್ಭದಲ್ಲಿ ಸಾಂಬಾರಿಗೆ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಾಕಿಸಿಕೊಳ್ಳುತ್ತಿದ್ದೇನೆ.
***
         ಸಿಕ್ಕಾಪಟ್ಟೆ ತಲೆನೋವು. ಶೀತವಾಗಿರಲಿಲ್ಲ. ಆದರೆ ತಲೆ ಸಿಡಿತ ಮಾತ್ರ ಬಿಡುತ್ತಲೇ ಇರಲಿಲ್ಲ. ಬಿದ್ದು ಹೊಳ್ಳಾಡುವಷ್ಟು ತಲೆನೋವು. ಅಮ್ಮ ನೋಡಿದವಳೇ ಅದೇನೋ ಕಷಾಯ ಕೊಟ್ಟಳು, ಕೈಯಲ್ಲಿ ಆರ್ಕ್ಯೂಪ್ರೆಶರ್ ಮಾಡಿದಳು. ಅಷ್ಟೇ ಅಲ್ಲದೇ ತನಗೆ ಗೊತ್ತಿದ್ದ ಹಲವು ಔಷಧಿಗಳನ್ನು ಮಾಡಿದರೂ ತಲೆನೋವು ಕಡಿಮೆಯೇ ಆಗುತ್ತಿರಲಿಲ್ಲ. ತಲೆಯೇ ಸಿಡಿದುಹೋಗುತ್ತದೆಯೇನೋ ಎನ್ನುವಂತಾಗಿತ್ತು ನನಗೆ. ಗಂಟೆಗಳ ಕಾಲ ನಾನು ನೋವಿನಿಂದ ನರಳಾಡಿದೆ. ಕೊನೆಗೆ ಅದೆಲ್ಲಿ ಓದಿದ್ದಳೋ ಅಮ್ಮ, ದೊಡ್ಡದೊಂದು ನಿಂಬೆ ಕಾಯಿಯನ್ನು ಕೊಯ್ದು ಕಟ್ ಮಾಡಿ ಅದರ ರಸವನ್ನು ತೆಗೆದು ಕೊಬ್ಬರಿ ಎಣ್ಣೆಯ ಜೊತೆಗೆ ಸೇರಿಸಿ ತಲೆಗೆ ಹಾಕಿದಳು. ಅರೇ ಎರಡೇ ನಿಮಿಷದಲ್ಲಿ ತಲೆನೋವು ಮಾಯ..! ಏನಾಶ್ಚರ್ಯ. ಇದೆಂತಹ ಔಷಧಿ ಎಂದುಕೊಂಡು ಕೇಳಿದೆ. ತಲೆನೋವು ಅತಿಯಾಗಿ ಬಂದರೆ ಹೀಗೆ ಮಾಡಬೇಕು ಎಂದು ಹಿರಿಯರಿಂದ ಕೇಳಿದ್ದೆ. ಆದರೆ ನಾನು ಮಾಡಿರಲಿಲ್ಲ. ಈಗ ನಿನ್ನ ಮೇಲೆ ಪ್ರಯೋಗಿಸಿದೆ. ನೋಡು ತಕ್ಷಣಕ್ಕೆ ಕಡಿಮೆಯಾಯಿತು. ಎಂದಳು ಅಮ್ಮ. ಮತ್ತೊಮ್ಮೆ ಹಿರಿಯರಿಗೆ ಜಯವೆಂದೆ.
***
        ದೊಡ್ಡ ಹಬ್ಬ ದೀಪಾವಳಿಯಲ್ಲಿ ನಮ್ಮ ಕಡೆಯಲ್ಲಿ ಕೊನೆಯ ದಿನ ಹಬ್ಬ ಕಳಿಸುವುದು ಎನ್ನುವ ಸಂಪ್ರದಾಯ ಆಚರಣೆ ಮಾಡುತ್ತಾರೆ. ಹಬ್ಬ ಕಳಿಸುವುದು ಎನ್ನುವ ಸಂಪ್ರದಾಯದ ಜೊತೆಗೆ ಉದ್ದನೆಯ ದಿಪ್ಪಳಿಗೆ ಕೋಲನ್ನು ಕಡಿದು ಅದಕ್ಕೆ ದೊಂದಿ ಮಾಡಿ ಬೆಂಕಿ ಕತ್ತಿಸಿ ನಮ್ಮ ನಮ್ಮ ಜಮೀನಿನ ಬಳಿ ಅದನ್ನು ಹುಗಿದು ದೊಡ್ಡದಾಗಿ ಜಾಗಟೆ ಬಡಿದು ಕೂಗಾಡಲಾಗುತ್ತದೆ. ತೀರಾ ಇತ್ತೀಚಿನ ದಿನಗಳ ವರೆಗೂ ನಾನು ಹಬ್ಬ ಕಳಿಸುವುದರ ಮಹತ್ವ ಅಥವಾ ಯಾಕೆ ಹೀಗೆ ಮಾಡುತ್ತಾರೆ ಎನ್ನುವುದನ್ನು ಅರಿತಿರಲಿಲ್ಲ. ಒಬ್ಬರು ಹೇಳಿದ್ದೆಂದರೆ ಹೀಗೆ ಮಾಡುವುದರಿಂದ ಬೆಂಕಿಯನ್ನು ಕಂಡು ನಮ್ಮ ಗದ್ದೆ, ತೋಟಗಳಿಗೆ ದಾಳಿ ಮಾಡುವ ಕಾಡುಪ್ರಾಣಿಗಳನ್ನು ಹೆದರಿಸುತ್ತದೆ. ಬೆಳೆ ರಕ್ಷಣೆಯಾಗುತ್ತದೆ ಅಂತ. ಆಹಾ ಹಿರಿಯರೇ ನಿಮ್ಮ ಸಂಪ್ರದಾಯಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಬಿಡಿ.

(ಮುಂದುವರಿಯುತ್ತದೆ)

Friday, August 15, 2014

ಮತ್ತಷ್ಟು ಹನಿಗಳು

ಭಿನ್ನತೆ

ನೀವು ಹದಿನಾಲ್ಕು ಗಂಟೆ ಕೆಲಸ ಮಾಡಿದರೆ
ನಾನು ಹದಿನೈದು ಗಂಟೆ ಕೆಲಸ ಮಾಡುತ್ತೇನೆ
ಎಂದರು ನರೇಂದ್ರ ಮೋದಿ |
ಅಯ್ಯೋ ಸುಮ್ಕಿರಿ ಸಾರ್.. ಆವಯ್ಯ ಏನೋ ಹೇಳ್ತಾನೆ..
ಹಾಗಂತ ನಾನು ಆರೋಗ್ಯ ಹಾಳ್ಮಾಡ್ಕಳಕಾಗಾಕಿಲ್ಲ ಆಆಆಆಆಆ...
ಎಂದು ಆಕಳಿಕೆ ತೆಗೆದರು ಸಿದ್ಧರಾಮಯ್ಯ..||

ವ್ಯತ್ಯಾಸ

ಮೋದಿ ಮಾಡಿದರೆ ಭಾಷಣ
ಮತ್ತೆ ಮತ್ತೆ ಅನ್ನಿಸುತ್ತದೆ ಕೇಳೋಣ
ಸಿದ್ದು ಮಾಡಿದರೆ ಭಾಷಣ
ಸಾಕ್ ಸುಮ್ನೆ ಹೋಗಣ್ಣ..!!

ವಾಟಾಳ್

ಕನ್ನಡ  ಕನ್ನಡ ಎಂದ ಕೂಡಲೇ
ನೆನಪಾಗುವ ಕಟ್ಟಾಳು
ಹೋರಾಟದ ವಾಟಾಳು |

ಎಂತ ವಿಪರ್ಯಾಸ?

ನಾವು ಇತ್ತ ಆಂಗ್ಲರ ವಿರುದ್ಧ
ಭಾರತ ಗೆದ್ದ ಸಂತಸ ಆಚರಿಸುತ್ತಿದ್ದರೆ
ಅತ್ತ ಇಂಗ್ಲೆಂಡಿನಲ್ಲಿ ಭಾರತ
ಆಂಗ್ಲರ ಎದುರು ಮಂಡಿಯೂರುತ್ತಿದೆ |

ವಾಲು-ಡೋಲು

ಭಾರತದಲ್ಲಿ
ಡಬ್ಬಲ್ ಸೆಂಚೂರಿ ಹೊಡೆದ
ಚೆತೇಶ್ವರ ಪೂಜಾರನಿಗೆಂದರು
ಮತ್ತೊಬ್ಬ ದಿ. ವಾಲು|
ಇಂಗ್ಲೆಂಡಿಗೆ ಹೋದ ನಂತರ
ಆತ ಆಗಿದ್ದಾನೆ
ತೂತಾದ ಡೋಲು ||