Monday, February 27, 2017

ಅಕ್ಷರಸ್ಥರ ವಿಕೃತಿಗೆ ಜಲ್ಲೆಯ ಪ್ರವಾಸಿ ತಾಣಗಳು ಬಲಿ

ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಪ್ರವಾಸಿಗರಿಂದ ಚಿತ್ತಾರ

ಶೀರ್ಷಿಕೆ ಸೇರಿಸಿ
 ಅಕ್ಷರಸ್ಥರ ವಿಕೃತಿಗೆ ಜಿಲ್ಲೆಯ ಪ್ರವಾಸಿತಾಣಗಳು ಬಲಿಯಾಗುತ್ತಿವೆ. ಪ್ರವಾಸಕ್ಕಾಗಿ ಆಗಮಿಸುತ್ತಿರುವವರ ``ಕೈ ಚಳಕ'ಕಕ್ಕೆ ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣಗಳು ಅಂದ ಕಳೆದುಕೊಳ್ಳುತ್ತಿವೆ.
 ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿವಗಂಗಾ ಜಲಪಾತ, ಗಣೇಶ ಪಾಲ, ಯಲ್ಲಾಪುರ ತಾಲೂಕಿನ ಮಾಗೋಡ ಜಲಪಾತ, ಸಿದ್ದಾಪುರ ತಾಲೂಕಿನ ಉಂಚಳ್ಳಿ ಜಲಪಾತ, ಜೋಯಿಡಾ ತಾಲೂಕಿನ ಆಕಳಗವಿ, ಪಂಚಲಿಂಗ ಗವಿ, ಮಹಾಮನೆ ಗವಿ, ಅಂಕೋಲಾ, ಕುಮಟಾ, ಹೊನ್ನಾವರ ತಾಲೂಕಿನ ಪ್ರವಾಸಿ ತಾಣಗಳು ಅತ್ಯಂತ ಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತವೆ. ದಿನಂಪ್ರತಿ ಸಾವಿರಾರು ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ನಿದರ್ಶನಗಳೂ ಇದೆ. ಜಿಲ್ಲೆಯ ಆದಾಯಕ್ಕೆ ಇಂತಹ ಪ್ರವಾಸಿ ತಾಣಗಳ ಕೊಡುಗೆಯೂ ಹೇರಳವಾಗಿದೆ. ಆದರೆ ಹೀಗೆ ಆಗಮಿಸುವ ಪ್ರವಾಸಿಗರ ಕಿತಾಪತಿಯಿಂದಾಗಿ ಪ್ರವಾಸಿ ಸ್ಥಳಗಳು ತಮ್ಮ ಅಂದವನ್ನು ಕಳೆದುಕೊಳ್ಳುತ್ತಿವೆ.
 ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಪ್ರವಾಸಿಗರು ಬರೆದ ವಿವಿಧ ಬರಹಗಳು ಕಣ್ಣಿಗೆ ಬೀಳುತ್ತಿವೆ. ಹೆಸರುಗಳನ್ನು ಕೆತ್ತುವ, ತಮ್ಮ ಹೆಸರುಗಳ ಜೊತೆಗೆ ತಾವು ಪ್ರೇಮಿಸುತ್ತಿರುವವರ ಹೆಸರನ್ನು ಬರೆಯುವ, ತಮ್ಮ ಊರುಗಳ ಹೆಸರುಗಳನ್ನು ಬರೆದಿಡುವ, ದೂರವಾಣೀ ಸಂಕ್ಯೆಗಳನ್ನು ನಮೂದು ಮಾಡುವ ಬರಹಗಳೂ ಹೆಚ್ಚಾಗಿವೆ. ವಿಕಾರ ಚಿತ್ರಗಳು ಹಾಗೂ ಅಶ್ಲೀಲ ಬರಹಗಳೂ ಕೂಡ ಪ್ರವಾಸಿ ತಾಣಗಳ ಗೋಡೆಗಳಲ್ಲಿ ರಾರಾಜಿಸುತ್ತಿವೆ. ಇದರಿಂದ ಪ್ರವಾಸಿ ತಾಣಗಳಿಗೆ ಆಗಮಿಸುವ ಸಭ್ಯ ಪ್ರವಾಸಿಗರು ಮೂಗು ಮುರಿಯುವವಂತಾಗಿದೆ.
 ಉಂಚಳ್ಳಿ ಜಲಪಾತದ ವೀಕ್ಷಣಾ ಗೋಪುರಗಳಿರಲಿ, ಮಾಗೋಡು ಜಲಪಾತದ ವೀಕ್ಷಣಾ ಮಂದಿರಗಳಿರಲಿ, ಅರಣ್ಯದ ನಡುವೆಯೇ ಇರುವ ಶಿವಪುರದಂತಹ ಊರುಗಳ ತೂಗುಸೇತುವೆಗಳ ಕಂಬಗಳ ಮೇಲೂ ಪ್ರವಾಸಿಗರ ಇಂತಹ ಬರಹಗಳು ಕಾಣಸಿಗುತ್ತಿವೆ. ಉತ್ತರ ಕನರ್ಾಟಕದ ಪ್ರವಾಸಿಗರು ಆಗಮಿಸುವ ಪ್ರದೇಶಗಳಲ್ಲಿ ಇಂತಹ ಬರಹಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಿದೆ. ಅಲ್ಲದೇ ಉತ್ತರ ಕನರ್ಾಟಕದ ಊರುಗಳ ಹೆಸರುಗಳೇ ಗೋಡೆಗಳ ಮೇಲೆ ವಿಕಾರರೂಪದಲ್ಲಿ, ಸುಣ್ಣದಲ್ಲಿಯೋ, ಆಯಿಲ್ ಪೇಂಟ್ಗಳಲ್ಲಿಯೋ, ಕಲ್ಲಿನ ಮೂಲಕ ಕೆತ್ತಿಯೋ ಬರೆಯಲಾಗುತ್ತಿದೆ.
 ಜೋಯಿಡಾ ತಾಲೂಕಿನ ದಟ್ಟ ಅಅರಣ್ಯದ ನಡುವೆ ಆಕಳಗವಿ, ಮಹಾಮನೆ ಗವಿ, ಪಂಚಲಿಂಗ ಗವಿಗಳಿದೆ. ಈ ಪ್ರದೇಶಗಳಲ್ಲಿ ದೈತ್ಯ ಗುಹೆಗಳು, ಅವುಗಳ ನಡುವೆ ಶಿವಲಿಂಗಗಳಿದೆ. ಈ ತಾಣಗಳಿಗೆ ಉತ್ತರ ಕನರ್ಾಟಕದ ಪ್ರವಾಸಿಗರು ಪ್ರತಿದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಐತಿಹಾಸಿಕ ಸ್ಥಳವಾದ ಯಾಣದಂತೆಯೇ ಭವ್ಯ ಶಿಲಾ ಪರ್ವತದ ಸಾಲುಗಳು ಇಲ್ಲಿದೆ. ಆದರೆ ಈ ಶಿಲಾ ಸಾಲುಗಳ ಮೇಲೆ ಬಿಳಿಯ ಅಕ್ಷರಗಳಲ್ಲಿ ಸಾವಿರ ಸಾವಿರ ಹೆಸರುಗಳು, ಊರುಗಳು ಬರೆಯಲ್ಪಟ್ಟು ಅಸಹ್ಯವನ್ನು ಮೂಡಿಸುತ್ತಿದೆ. ಪ್ರವಾಸಿಗರ ವಿಕ್ರತ ಮನಸ್ಸುಗಳಿಗೆ ಇವು ಸಾಕ್ಷಿಯಾಗಿ ನಿಂತಿವೆ. ಆಕಳ ಗವಿಯಲ್ಲಿನ ಹಾಲು ಬಣ್ಣದ ಶಿವಲಿಂಗದ ರಚನೆಯ ಮೇಲೂ ಕೂಡ ಯಾವುದೋ ಪ್ರವಾಸಿ ತನ್ನ ಹೆಸರನ್ನು ಕೆತ್ತಿರುವುದು ಕೂಡ ಪ್ರವಾಸಿಗರ ದುಬರ್ುದ್ಧಿಯನ್ನು ಎತ್ತಿ ತೋರಿಸುತ್ತಿದೆ. ಅಲ್ಲದೇ ಪ್ರವಾಸಿಗರು ಕಷ್ಟಪಟ್ಟು ಹೋಗುವಂತಹ ಸ್ಥಳ ಎನ್ನಿಸಿಕೊಂಡಿರುವ ಶಿವಪುರದ ತೂಗುಸೇತುವೆಯ ಕಮಾನಿನ ಮೂಲೂ ಕೈಚಳಕವನ್ನು ಪ್ರವಾಸಿಗರು ಮೂಡಿಸಿದ್ದಾರೆ. ಅಷ್ಟೇ ಅಲ್ಲ ಪ್ರವಾಸಿ ತಾಣಗಳಲ್ಲಿನ ಮರಗಳ ಮೇಲೂ ಕೂಡ ಹೆಸರುಗಳನ್ನು ಕೆತ್ತಲಾಗಿದೆ. ಚಿತ್ರ ವಿಚಿತ್ರ ಚಿನ್ಹೆಗಳು ರಾರಾಜಿಸುತ್ತಿವೆ.
 ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಬರೆದಿರುವ ಇಂತಹ ಬರಹಗಳ ಬಗ್ಗೆ ಪ್ರವಾಸಿಗರೇ ಮೂಗು ಮುರಿಯುತ್ತಾರೆ. ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಬರೆದು ಅದರ ಅಂದವನ್ನು ಹಾಳುಗೆಡವುವ ಬದಲು ಪರೀಕ್ಷಾ ಸಂದರ್ಭದಲ್ಲಿ ಉತ್ತರ ಪತ್ರಕೆಗಳಲ್ಲಿ ಇಷ್ಟು ಚನ್ನಾಗಿ ಬರೆದಿದ್ದರೆ ಒಳ್ಳೆಯ ಅಂಕಗಳನ್ನು ಗಳಿಸಿಕೊಳ್ಳಬಹುದಿತ್ತು ಎನ್ನುವುದು ಜೋಯಿಡಾ ತಾಲೂಕಿನ ಆಕಳಗವಿಗೆ ಆಗಮಿಸಿದ್ದ ಪ್ರವಾಸಿಯೊಬ್ಬರ ಅಭಿಪ್ರಾಯವಾಗಿದೆ. ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಬರೆಯುವುದನ್ನು ತಡೆಯುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುವ ಅಭಿಪ್ರಾಯ ಕೂಡ ಪ್ರವಾಸಿಗರಿಂದಲೇ ಕೇಳಿ ಬಂದಿದೆ.
 ಪ್ರವಾಸಿಗರ ದಾಂಧಲೆಯಿಂದ ಹೈರಾಣಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತಾರಗಾರ ಗ್ರಾಮದ ಜನರು ತಮ್ಮೂರಿನ ಫಾಸಲೆಯಲ್ಲಿರುವ ಅಜ್ಜಿಗುಂಡಿ ಜಲಪಾತಕ್ಕೆ ಪ್ರವಾಸಿಗರ ಆಗಮನವನ್ನು ನಿಷೇಧಿಸಿದ್ದಾರೆ. ಇಂತಹ ಕ್ರಮಗಳು ಇನ್ನಷ್ಟು ಪ್ರವಾಸಿ ತಾಣಗಳಲ್ಲಿ ನಡೆದರೂ ಅಚ್ಚರಿ ಪಡಬೇಕಿಲ್ಲ. ಈ ನಿಟ್ಟಿನಲ್ಲಿ ಪ್ರವಾಸಿಗರೂ ಕೂಡ ತಮ್ಮದೇ ಆದ ಹೊಣೆಗಾರಿಕೆಯನ್ನು ಮೆರೆಯಬೇಕಿದೆ. ಪ್ರವಾಸಿ ತಾಣಗಳ ಅಂದವನ್ನು ಕಾಪಾಡುವ ಅಗತ್ಯವಿದೆ. ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳಲ್ಲಿ ಅಭಿವೃದ್ಧಿ ಕಾಅರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಇಂತಹವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜರೂರತ್ತಿದೆ. ಪ್ರವಾಸಿ ತಾಣಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕೆಂಬ ಆಆಶಯ ಎಲ್ಲರದ್ದಾಗಿದೆ.


--------
 ಪ್ರವಾಸಿ ತಾಣಗಳ ಗೋಡೆಗಳ ಮೇಲೆ ವಿಕಾರವಾಗಿ ಬರೆಯುವುದು ಸರಿಯಲ್ಲ. ಇದು ಸಹಿಸಲು ಅಸಾಧ್ಯ. ಪ್ರತಿ ಪ್ರವಾಸಿ ತಾಣದಲ್ಲಿಯೂ ಕೂಡ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ಜಂಟಿಯಾಗಿ ಯಾರಾದರೂ ಒಬ್ಬರನ್ನು ನೇಮಿಸಬೇಕು. ಪ್ರವಾಸಿ ಸ್ಥಳಕ್ಕೆ ಆಗಮಿಸಿ ತಾಣಗಳ ಗೋಡೆಗಳ ಮೇಲೆ ಬರೆಯುವವರನ್ನು ಗುರುತಿಸಿ, ಹಿಡಿದು ಅಂತಹ ವ್ಯಕ್ತಿಗಳ ಮೇಲೆ ದಂಡವನ್ನು ಹಾಕುವ ಕೆಲಸವನ್ನು ನೇಮಿಸಲ್ಪಟ್ಟ ವ್ಯಕ್ತಿಯು ಮಾಡುವ ಅಗತ್ಯವಿದೆ. ಜೊತೆಯಲ್ಲಿ ಯಾರು ಬರೆಯುತ್ತಾರೋ ಅಅಂತವರಿಂದಲೇ ಅದನ್ನು ಅಳಿಸುವ ಕೆಲಸವನ್ನೂ ಮಾಡಬೇಕು. ಹೀಗಾದಾಗ ಮಾತ್ರ ಪ್ರವಾಸಿ ತಾಣಗಳ ಗೋಡೆಗಳನ್ನು ಅಂದಗೆಡಿಸುವವರನ್ನು ತಡೆಯಬಹುದಾಗಿದೆ. ಪ್ರವಾಸಿ ತಾಣಗಳನ್ನು ಉಳಿಸಬಹುದಾಗಿದೆ.
ವಿಜಯ ರಾಥೋಡ
ಬೆಳಗಾವಿ
ಪ್ರವಾಸಿ