Sunday, March 5, 2017

ಈಕೆಗೆ ಅಮಿತಾಬ್ ಬಚ್ಚನ್ರ ಭಾಗಬನ್ ಪ್ರೇರಣೆ/ವಿಕಲ ಚೇತನರಿಗಾಗಿ ಮಿಡಿದ ಅಂಗವಿಕಲೆ

ಈಕೆಗೆ ಅಮಿತಾಬ್ ಬಚ್ಚನ್ರ ಭಾಗಬನ್ ಪ್ರೇರಣೆ
ವಿಕಲ ಚೇತನರಿಗಾಗಿ ಮಿಡಿದ ಅಂಗವಿಕಲೆ



 ಈಕೆಗೆ ನಡೆದಾಡಲು ಬರುವುದಿಲ್ಲ. ಗಾಲಿಖುಚರ್ಿಯ ಮೇಲೆ ಸದಾಕಾಲ ಓಡಾಡಿ ಬದುಕು ನಡೆಸುತ್ತಿರುವಾಕೆ. ಇಂತಹ ವಿಕಲಚೇತನ ಮಹಿಳೆ ತನ್ನಂತೆಯೇ ಬದುಕು ನಡೆಸುತ್ತಿರುವವರ ನೆರವಿಗೆ ನಿಲ್ಲುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾಳೆ. ಕಾಲಿಲ್ಲದವರಿಗೆ ಊರುಗೋಲಾಗುವ ಕನಸನ್ನು ಹೊತ್ತಿದ್ದಾಳೆ. ಅವಳೇ ಶಿರಸಿಯ ಮುಸ್ಲಿಂ ಗಲ್ಲಿಯ ನಿವಾಸಿ ಸೀಮಾ ಶುಂಟಿ.
 38 ವರ್ಷ ವಯಸ್ಸಿನ ಸೀಮಾ ಶುಂಟಿ ಬಡತನದಲ್ಲಿಯೇ ಬೆಳೆದವಳು. ಶಿರಸಿಯ ಅಬ್ದುಲ್ ಸತ್ತಾರ್ ಹಾಗೂ ಖೈರುನ್ನಿಸಾ ದಂಪತಿಗಳ ಐವರು ಹೆಣ್ಣುಮಕ್ಕಳ ಪೈಕಿ ಮೂರನೆಯವಳು. ಮದುವೆಯಾಗುವ ವರೆಗೂ ಎಲ್ಲರಂತೆಯೇ ಆರಾಮವಾಗಿ ಇದ್ದ ಸೀಮಾ ಶುಂಟಿ ವಿವಾಹವಾದ ಬಳಿಕ ಕಾಲಿನ ಸ್ವಾಧೀನ ಕಳೆದುಕೊಂಡರು. ಈಕೆಗೆ ಎದುರಾದ ಅಂಗವೈಕಲ್ಯವನ್ನೇ ಮುಂದಿಟ್ಟುಕೊಂಡು, ಮದುವೆಯಾದ ವ್ಯಕ್ತಿ ಸೀಮಾಳಿಗೆ ಡೈವಸರ್್ ನೀಡಿದ. ಎದ್ದು ಓಡಾಡಲು ಆಗದಂತಹ ಪರಿಸ್ಥಿತಿ, ಕಾಡುವ ಬಡತನ, ಬೆನ್ನಲ್ಲಿ ಜನಿಸಿದ ಇಬ್ಬರು ತಂಗಿಯರಿಗೂ ಕಾಡಿದ ಅಂಗವೈಕಲ್ಯ, ಎದ್ದು ಓಡಾಡಲಾಗದಂತಹ ತಂದೆ. ಹೀಗೆ ಹಲವು ರೀತಿಯಲ್ಲಿ ನೋವನ್ನು ಉಂಡ ಸೀಮಾ ಇದೀಗ ಎನ್ಜಿಒ ಆರಂಭಿಸಿ ಅಂಗವೈಕಲ್ಯಕ್ಕೆ ಒಳಗಾದವರ ಬದುಕನ್ನು ಹಸನು ಮಾಡುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.



ನಿಖಾ, ಡೈವೋಸರ್್, ಅಧಿಕಾರಿಗಳ ಕಿರುಕುಳ :
 ಸೀಮಾಅ ಶುಂಟಿಯನ್ನು ರೇವಣಕಟ್ಟಾದ ವ್ಯಕ್ತಿಯೋರ್ವರು 2000ದಲ್ಲಿ ಮದುವೆಯಾದರು. ಮದುವೆಯಾದ ಒಂದೇ ತಿಂಗಳಿಗೆ ಸೀಮಾ ಅವರ ಕಾಲುಗಳು ಶಕ್ತಿ ಕಳೆದುಕೊಂಡವು. ಹೀಗಿದ್ದಾಗಲೇ ಸೀಮಾಅ ಅವರನ್ನು ಮದುವೆಯಾದ ವ್ಯಕ್ತಿ ತಲಾಖ್ ನೀಡಿದ. ಇದರಿಂದ ತನ್ನ ಬದುಕು ಬೀದಿಗೆ ಬಿದ್ದಿತು ಎಂದುಕೊಂಡಾಕೆಗೆ ಆಕೆಯ ಛಲವೇ ಕೈಹಿಡಿದಿದೆ. ಮದುವೆಗೂ ಮೊದಲು ಎಸ್ಎಸ್ಎಲ್ಸಿ ಓದಿದಾಕೆ ನಂತರದಲ್ಲಿ ಪೋಸ್ಟಲ್ ಸವರ್ೀಸ್ ಮೂಲಕ ಪಿಯುಸಿ ಹಾಗೂ ಪದವಿಯನ್ನೂ ಮುಗಿಸಿದ್ದಾಳೆ. ಅಷ್ಟೇ ಅಲ್ಲದೇ ಎಂಬ್ರಾಯ್ಡರಿ, ಹೊಲಿಗೆ, ಕಂಪ್ಯೂಟರ್ ತರಬೇತಿಯನ್ನೂ ಮಾಡಿಕೊಂಡಳು. ತರಬೇತಿಯನ್ನು ಪಡೆದುಕೊಂಡ ಸೀಮಾ ಶುಂಠಿ ಅದೆಷ್ಟೋ ವಿದ್ಯಾಥರ್ಿಗಳಿಗೆ ತರಬೇತಿಯನ್ನೂ ನೀಡುವ ಮೂಲಕ ವಿದ್ಯಾಥರ್ಿಗಳ ಬದುಕಿಗೆ ಬೆಳಕಾಗುವ ಕಾರ್ಯ ಕೈಗೊಂಡರು.
 ಬಡತನವಿದ್ದರೂ ಹೊಲಿಗೆ ಹಾಗೂ ಇತ್ಯಾದಿ ಕಾರ್ಯಗಳ ಮೂಲಕ ಮನೆಯನ್ನು ನೋಡಿಕೊಳ್ಳುತ್ತಿದ್ದ ತನಗೆ ಕಾರವಾರದ ಮಹಿಳಾ ಮತ್ತು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಯೋರ್ವರು ಕೊಟ್ಟ ಕಿರುಕುಳವೇ ಛಲ ಹುಟ್ಟಲು ಕಾರಣ ಎನ್ನುವ ಸೀಮಾ ಶುಂಠಿ ಅವರು ತನಗೆ ಕಿರುಕುಳ ನೀಡದೇ ಇದ್ದಲ್ಲಿ ತನ್ನಲ್ಲಿ ಛಲವೇ ಹುಟ್ಟುತ್ತಿರಲಿಲ್ಲ. ತನ್ನಂತೆಯೇ ಇರುವ ವಿಕಲಚೇತನರಿಗೆ ಸಹಾಯ ಮಾಡುವ ಕನಸು ಕಾಣಲು ಸಾಧ್ಯವಾಗುತ್ತಲೇ ಇರಲಿಲ್ಲ ಎನ್ನುತ್ತಾರೆ.


ಗುರುಕುಲ ಆರಂಭಕ್ಕೆ ಭಾಗಬನ್ ಪ್ರೇರಣೆ :
 ವಿಕಲಚೇತನರಿಗೆ ಸಹಾಯ ಮಾಡುವ ಸಲುವಾಗಿ ಸೀಮಾ ಶುಂಠಿ ಅವರು ಇದೀಗ ಗುರುಕುಲ ಎನ್ನುವ ಎನ್ಜಿಓ ಆರಂಭಸಿದ್ದಾರೆ. ತಮ್ಮ ಸ್ವಯಂಸೇವಾ ಸಂಸ್ಥೆಯ ಮೂಲಕ ಕಾಲಿಲ್ಲದವರಿಗೆ, ಅಪಘಾತದಲ್ಲಿ ಕಾಲು ಕಳೆದುಕೊಂಡವರಿಗೆ ಗಾಲಿಖುಚರ್ಿ, ಊರುಗೋಲು, ತ್ರಿಚಕ್ರ ಬೈಕ್/ಸೈಕಲ್, ಕೃತಕ ಕಾಲು ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಿಕೊಡುವ ಕನಸನ್ನು ಹೊತ್ತಿದ್ದಾರೆ. ಅದಲ್ಲದೇ ಅಧಿಕಾರಿಗಳಿಂದ ಆಗುವ ಕಿರುಕುಳಗಳನ್ನು ತಪ್ಪಿಸುವ ನಿಟ್ಟಿನಲ್ಲಿಯೂ ಪ್ರಯತ್ನ ಮಾಡಲಿದ್ದಾರೆ. ಗುರುಕುಲ ಎಂಬ ಸ್ವಯಂಸೇವಾ ಸಂಸ್ಥೆಯ ಕನಸು ಹುಟ್ಟಿಕೊಳ್ಳುವುದಕ್ಕೂ ಒಂದು ವಿಶಿಷ್ಟ ಕನಸು ಇದೆ ಎನ್ನುವುದನ್ನು ಸೀಮಾ ಶುಂಠಿ ಹೇಳಲು ಮರೆಯುವುದಿಲ್ಲ.
 ಬದುಕಿನಲ್ಲಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಟಿವಿಯಲ್ಲಿ ಒಮ್ಮೆ ಅಮಿತಾಬ್ ಭಚ್ಚನ್ ಅವರ ಭಾಗಬನ್ ಸಿನೆಮಾವನ್ನು ನೋಡಿದೆ. ಆ ಸಿನೆಮಾದಲ್ಲಿ ಅಮಿತಾಬ್ ಬಚ್ಚನ್ ವಿಕಲಚೇತನರಿಗಾಗಿ ಸ್ವಯಂಸೇವಾ ಸಂಸ್ಥೆಯನ್ನು ಆರಂಭಿಸಿ ಸೇವೆ ಮಾಡುತ್ತಾರೆ. ನನಗೂ ಕೂಡ ಹಾಗೆಯೇ ಸ್ವಯಂ ಸೇವಾ ಸಂಸ್ಥೆಯನ್ನು ಆರಂಬಿಸಬೇಕು ಎನ್ನಿಸಿತು. ಹೀಗಾಗಿ ಗುರುಕುಲ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಆರಂಭಿಸಿದ್ದೇನೆ. ಈ ಸ್ವಯಂ ಸೇವಾ ಸಂಸ್ಥೆಯು ಫೆ.24ರಂದು ಉದ್ಘಾಟನೆಯಾಗಲಿದೆ ಎಂದು ಸೀಮಾ ಶುಂಠಿ ಹೇಳಿದ್ದಾರೆ.
 ಸ್ವತಃ ವಿಕಲಚೇತನ ವ್ಯಕ್ತಿಯಾಗಿದ್ದರೂ ಕೂಡ ತನ್ನಂತೆಯೇ ವಿಕಲಾಂಗರಾದವರಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ವಯಂಸೇವಾ ಸಂಸ್ಥೆ ಆರಂಭಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ತಾನು ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದರೂ ಕೂಡ ಉಳಿದ ವಿಕಲ ಚೇತನರು ತನ್ನಂತೆ ಸಮಸ್ಯೆ ಎದುರಿಸಬಾರದು ಎನ್ನುವ ಕಾರಣದಿಂದ ಸ್ವಯಂಸೇವಾ ಸಂಸ್ಥೆ ಆರಂಭಿಸಿ ಕಾಲಿಲ್ಲದವರಿಗೆ ಆಸರೆಯಾಗುವ ಪ್ರಯತ್ನ ಮಾಡಿರುವುದು ಪ್ರತಿಯೊಬ್ಬರಿಗೂ ಸ್ಪೂತರ್ಿದಾಯಕರಾಗಿದ್ದಾರೆ.




-------

 ಸ್ವಯಂಸೇವಾ ಸಂಸ್ಥೆ ಆರಂಭದ ಕನಸನ್ನು ಇಟ್ಟುಕೊಂಡ ಸೀಮಾ ಶುಂಠಿಗೆ ಪ್ರಾರಂಭದಲ್ಲಿ ಯಾರಿಂದಲೂ ಸಹಕಾರ ದೊರೆಯಲೇ ಇಲ್ಲ. ಐವರು ಸದಸ್ಯರನ್ನು ಪ್ರಾರಂಭದಲ್ಲಿ ಸೇರಿಸಿಕೊಂಡಿದ್ದರೂ ದಿನಕಳೆದಂತೆ ಒಬ್ಬೊಬ್ಬರಾಗಿ ದೂರ ಸರಿದರು. ಆದರೂ ಫಲ ಬಿಡದೇ ಒಬ್ಬಂಟಿಯಾಗಿಯೇ ಕೆಲಸ ಮಾಡಿದವರು ಸೀಮಾ ಶುಂಠಿ. ಸರಕಾರದ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳದೇ ಇತರರಿಗೆ ಮಾದರಿಯಾಗುವಂತಹ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಈಕೆಯ ಕಾರ್ಯ ಉಳಿದವರಿಗೆ ಅನುಕರಣೀಯ.



No comments:

Post a Comment