Tuesday, February 16, 2016

ಅಂತ್ಯೋದಯ

ಕದವ ತೆರೆದು ಹಾರು ಹೊಡೆದು
ಮನವ ಬಯಲು ಮಾಡಿದೆ
ಉಸಿರನೆಳೆದುಕೊಳುವ ಮೊದಲು
ಪ್ರೀತಿ ಧೂಳು ಸೇರಿದೆ |

ಕಡ್ಡಿ ದಡ್ಡಿ ಹೆಕ್ಕಿ ತಂದು
ಪ್ರೀತಿ ಗೂಡು ಕಟ್ಟಿದೆ
ಒಳಗೆ ಹೆಜ್ಜೆ ಇಡುವ ಮೊದಲು
ಗಿಡುಗ ಕದ್ದು ಕುಳಿತಿದೆ |

ಇರುಳ ಕನಸ ಹಗಲು ನೆನೆದು
ಹಿಡಿಯ ಹೋದೆನು
ಹುಚ್ಚು ಒಲವು ಬೆನ್ನೂಳಿರಿಯೆ
ಬೆಚ್ಚಿ ಬಿದ್ದೆನು |

ಕೊಟ್ಟಿದ್ದೆಷ್ಟೋ ಪಡೆದುದೆಷ್ಟೊ
ಮರೆತೇ ಹೋಗಿದೆ
ಪ್ರೇಮದ ಜಮಾ-ಖರ್ಚು
ಸಾಲ-ದಂತಿದೆ|

****

(ಈ ಕವಿತೆಯನ್ನು ಬರೆದಿರುವುದು ಫೆ.15, 2016ರಂದು ಶಿರಸಿಯಲ್ಲಿ)

No comments:

Post a Comment